ಡಿಜಿಟೈಜ್ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ ಸಂಬಂಧಿಸಿದಂತೆ ಗುರುವಾರ ಮಧ್ಯಾಹ್ನದವರೆಗೆ ೨,೯೦,೧೮೪ ಗಣತಿ ನಮೂನೆ ವಿತರಿಸಲಾಗಿದ್ದು, ೨,೦೦,೧೦೯ ನಮೂನೆಗಳನ್ನು ಡಿಜಿಟೈಜ್ ಮಾಡಲಾಗಿದೆ ಎಂದು ಮತದಾರರ ನೋಂದಣಾಧಿಕಾರಿಯೂ ಆಗಿರುವ ಪಾಲಿಕೆ ಆಯುಕ್ತರಾದ ವಿಜಯ ಮೆಕ್ಕಳಕಿ ಹೇಳಿದರು.
ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಆನ್ಲೈನ್ನಲ್ಲಿ ೨,೪೬೦ ನಮೂನೆಗಳು ಸಲ್ಲಿಕೆಯಾಗಿವೆ.
೩೨,೮೫೧ ಗೈರು ಹಾಜರಾದ ಮತದಾರರು, ೨೧,೧೫೮ ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ ಎಂದವರು ವಿವರಿಸಿದರು.
೭,೫೨೩ ಮತದಾರರು: ಮರಣ ಹೊಂದಿದ್ದಾರೆ. ಈಗಾಗಲೇ ೭,೨೬೪ ಮತದಾರರು ಹಾಗೂ ೩೧೫ ನೋಂದಾಯಿಸಿಕೊಂಡಿದ್ದಾರೆ ಎಂದವರು ತಿಳಿಸಿದರು.
ಈ ಪ್ರಕ್ರಿಯೆಗೆ ಆಗಸ್ಟ್ ೦೮ ಅರ್ಜಿ ಸಲ್ಲಿಕೆಗೆ ಅಂತಿಮ ಗಡುವು. ಬಿಎಲ್ಒಗಳು ಮತದಾರರ ಮನೆ ಮನೆಗೆ ತೆರಳಿ ೨-೩ ಬಾರಿ ಭೇಟಿ ನೀಡಿದರೂ ಸಹ ಇನ್ನು ಸುಮಾರು ೨೧,೨೫೯ ಮತದಾರರ ಗಣತಿ ನಮೂನೆಗಳು ಮರಳಿ ಸಿಗದೆ ಬಾಕಿ ಉಳಿದಿವೆ ಎಂದರು.
ಸಾರ್ವಜನಿಕರು ಹಾಗೂ ಮತದಾರರು ಭರ್ತಿ ಮಾಡಿದ ಗಣತಿ ನಮೂನೆಗಳನ್ನು ಆ. ೮ ರೊಳಗಾಗಿ ಸಂಬಂಧಿಸಿದ ಬಿಎಲ್ಒಗಳಿಗೆ ಕಡ್ಡಾಯವಾಗಿ ಸಲ್ಲಿಸಬೇಕು ಎಂದರು.
ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಅಂತಹ ಮತದಾರರ ಹೆಸರುಗಳನ್ನು ಮತದಾರರ ಕರಡು ಪಟ್ಟಿಯಿಂದ ಹೊರಗಿಡಲಾಗುವುದು ಎಂದು ಆಯುಕ್ತರು ತಿಳಿಸಿದರು.

