Author: editor.udayarashmi@gmail.com

– ಜಯಶ್ರೀ .ಜೆ. ಅಬ್ಬಿಗೇರಿ,ಇಂಗ್ಲೀಷ ಉಪನ್ಯಾಸಕರು, ಬೆಳಗಾವಿ, ಮೊ.೯೪೪೯೨೩೪೧೪೨ ಸಮಯಪಾಲನೆಕೆಲವರಿಗೆ ಬಾಗಿಲಿನಿಂದ ಹೊರಬರಲು ಕಷ್ಟವಾಗುತ್ತದೆ. ಕೆಲವು ನಿಮಿಷಗಳಲ್ಲಿ ಗಡಿಯಾರವನ್ನು ಮುಂದಕ್ಕೆ ಹೊಂದಿಸುವುದು ಬೇಗನೆ ಹೊರಡಲು ಸಹಾಯ ಮಾಡಬಹುದು. ಕೆಲಸಕ್ಕೆ ತಡವಾಗಿ ಹೋಗುವುದು ನೀವು ಕೆಲಸಕ್ಕೆ ಮೀಸಲಾಗಿಲ್ಲ ಎಂಬುದನ್ನು ಸೂಚಿಸುತ್ತದೆ. ಸಮಯಕ್ಕೆ ಸರಿಯಾಗಿ ಅಥವಾ ಮುಂಚಿತವಾಗಿ ಇರುವ ಅಭ್ಯಾಸವನ್ನು ಬೆಳಸಿಕೊಳ್ಳಿ ಇದು ನಿಮಗೆ ಕೆಲಸಕ್ಕೆ ಮಾನಸಿಕವಾಗಿ ಸಿದ್ಧರಾಗಲು ಅವಕಾಶ ನೀಡುತ್ತದೆ. ಅಂದಿನ ಕೆಲಸದ ಸಂಕ್ಷಿಪ್ತ ಟಿಪ್ಪಣಿ ಪರಿಶೀಲಿಸಲು ಸಾಧ್ಯವಾಗುವುದು. ಸಮಯ ಅಮೂಲ್ಯ ಮೌಲ್ಯ. ಅದನ್ನು ಬುದ್ಧಿವಂತಿಕೆಯಿಂದ ಬಳಸಿ. ’ನೀವು ಇಂದು ಮಾಡಬಹುದಾದ ಕೆಲಸವನ್ನು ನಾಳೆಯವರೆಗೂ ಬಿಡಬೇಡಿ.’ ಎಂಬುದು ಬೆಂಜಮಿನ್ ಫ್ರಾಂಕ್ಲಿನ್ ಹೇಳಿದ ಮಾತು. ಸಮಯವು ಹಣವೆಂಬುದನ್ನು ಗಮನದಲ್ಲಿರಿಸಿ ಫ್ರಾಂಕ್ಲಿನ್ ಇದನ್ನು ನುಡಿದಿರಬಹುದು. ಕಾರ್ಯಗಳನ್ನು ಸಮಯೋಚಿತವಾಗಿ ಮತ್ತು ಪರಿಣಾಮಕಾರಿಯಾಗಿ ನಿರ್ವಹಿಸಿ. ಬಲವಾದ ಕೆಲಸದ ನೀತಿಯನ್ನು ಹೊಂದಿದ ಜನರು ತಮ್ಮ ಕೆಲಸವನ್ನು ಮುಂದೂಡುವುದಿಲ್ಲ.ವೃತ್ತಿಪರತೆವೃತ್ತಿಪರತೆಯೆಂದರೆ ನೀವು ಧರಿಸುವ ಗರಿ ಗರಿಯಾದ ಬಿಳಿ ಶರ್ಟ್ ಹಾಗೂ ಟೈ ಅಲ್ಲ. ಅದನ್ನು ಮೀರಿದ ನಿಮ್ಮ ವರ್ತನೆ ಮೌಲ್ಯಗಳು ಮತ್ತು ನಡವಳಿಕೆಯನ್ನು…

Read More

ವಿಜಯಪುರ: ಭವದ ಭಾವೈಕತೆಯ ಭಗವಂತ ಸಿದ್ದಿಪುರುಷ ವಿಶ್ವಾರಾಧ್ಯರ ಉತ್ತಮ ತತ್ವ ಚಿಂತನೆಗಳು ಜೀವನದಲ್ಲಿ ಅಳವಡಿಕೆಯಾಗಲಿ ಎಂದು ಸಾರಂಗಮಠ-ಗಚ್ಚಿನಮಠ ಗುರುಕುಲ ಭಾಸ್ಕರ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು.ಜಿಲ್ಲೆಯ ಸಿಂದಗಿ ತಾಲೂಕಿನ ಬಂದಾಳ ಗ್ರಾಮದ ಶ್ರೀ ಬಸಯ್ಯ ಮುತ್ಯಾನ ಹಿರೇಮಠದ ಜಾತ್ರೆ ಹಾಗೂ ಜಗನ್ಮಾತೆ ಶ್ರೀದೇವಿ ಜಾತ್ರಾ ಮಹೋತ್ಸವ ಅಂಗವಾಗಿಸಿದ್ದಕುಲ ಚಕ್ರವರ್ತಿ ಶ್ರೀ ವಿಶ್ವಾರಾಧ್ಯರ ಪುರಾಣ ಪ್ರವಚನ ಕಾರ್ಯಕ್ರಮ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಧರ್ಮದ ತಳಹದಿಯ ಮೇಲೆ ಸುಂದರ ಬದುಕು ಕಟ್ಟಿಕೊಂಡು ಮಕ್ಕಳಿಗೆ ಬಾಲ್ಯದಲ್ಲಿಯೇ ಆಚಾರ – ವಿಚಾರ ಸಂಸ್ಕಾರಗಳು ಅವರಿಗೆ ಪಾಲಕರು ಕಲಿಸಬೇಕು ಎಂದರು.ಕನ್ನೊಳ್ಳಿ ಹಿರೇಮಠದ ಸಿದ್ದಲಿಂಗ ಶಿವಾಚಾರ್ಯರು ಕಾರ್ಯಕ್ರಮದ ನೇತೃತ್ವವಹಿಸಿ ಆಶೀರ್ವಚನ ನೀಡಿ ಅವರು ಮಾತನಾಡಿ ನಮ್ಮ ಸುಂದರ ಬದುಕನ್ನು ಹಸನುಗೊಳಿಸಲು ಸಿದ್ದಕುಲ ಚಕ್ರವರ್ತಿ ಶ್ರೀ ವಿಶ್ವಾರಾಧ್ಯರ ಪುರಾಣ ಪ್ರವಚನಗಳಲ್ಲಿ ಬರುವ ಸಾರವಂಶಗಳು ಜೀವನದಲ್ಲಿ ಅವಳವಡಿಸಿಕೊಳ್ಳಬೇಕು ಎಂದರು.ತಾಲೂಕು ಜಂಗಮ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ಶಂಕರಲಿಂಗಯ್ಯ ಹಿರೇಮಠ ಹಾಗೂ ಅಳ್ಳಗಿ ಗ್ರಾಮದ ಪ್ರವಚನಕಾರ ಶರಣಯ್ಯ ಶಾಸ್ತ್ರಿ ಮಾತನಾಡಿ, ಶ್ರೀ ಬಸಯ್ಯ…

Read More

ಸಿಂದಗಿ: ಕಾರ್ಮಿಕ ವರ್ಗದ ಶ್ರಮ ಮತ್ತು ಸಮರ್ಪಣೆಯನ್ನು ಗುರುತಿಸುವುದು, ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು ಕಾರ್ಮಿಕ ದಿನದ ಉದ್ದೇಶ ಎಂದು ಡಿವಾಯ್‌ಎಫ್‌ಐ ತಾಲೂಕ ಅಧ್ಯಕ್ಷ ರಮೇಶ ಸಾಸಾಬಾಳ ಹೇಳಿದರು.ತಾಲೂಕಿನ ಬೋರಗಿ ಗ್ರಾಮದ ನರೇಗಾ ಕೂಲಿ ಕಾರ್ಮಿಕರ ಮಧ್ಯದಲ್ಲಿ ಸಿಐಟಿಯು ತಾಲೂಕು ಸಮಿತಿ ವತಿಯಿಂದ ಹಮ್ಮಿಕೊಂಡ ಕಾರ್ಮಿಕ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾರ್ಮಿಕ ವರ್ಗದ ಕೊಡುಗೆಯನ್ನು ಸ್ಮರಿಸಲು ಮತ್ತು ತೀವ್ರ ಹಾಗೂ ಅಸುರಕ್ಷಿತ ಪರಿಸರದಲ್ಲಿ ಕಾರ್ಯನಿರ್ವಹಿಸುವವರ ಕಷ್ಟಗಳನ್ನು ಆಲಿಸಲು ಪ್ರಪಂಚದಾದ್ಯಂತ ಈ ದಿನವನ್ನು ಆಚರಣೆ ಮಾಡಲಾಗುತ್ತದೆ ಎಂದರು.ಇದೇ ಸಂದರ್ಭದಲ್ಲಿ ಸಿಐಟಿಯು ತಾಲೂಕಾಧ್ಯಕ್ಷೆ ಪ್ರತಿಭಾ ಕೂರಡಿ. ಸರಸ್ವತಿ ಮಠ, ಬಿಸಿ ಊಟದ ತಾಲೂಧ್ಯಕ್ಷೆ ಬಿಸ್ಮಿಲ್ಲಾ, ಬೋರಗಿ ಗ್ರಾಮದ ಶಾಂಭವಿ, ಗುರುಬಾಯಿ, ಬಸವರಾಜ, ಸಾವಿತ್ರಿ ಬಡಿಗೇರ ಸೇರಿದಂತೆ ನರೇಗಾ ಕೂಲಿ ಕಾರ್ಮಿಕರು, ಸಿಯುಟಿಐ ಮತ್ತು ಡಿವಾಯ್‌ಎಫ್‌ಐನ್ ಪದಾಧಿಕಾರಿಗಳು ಇದ್ದರು.

Read More

ವಿಜಯಪುರ: ೨೦೨೪ರ ಲೋಕಸಭಾ ಚುನಾವಣೆಯ ಪ್ರಯುಕ್ತ ವಿಜಯಪುರ ಜಿಲ್ಲೆಯ ಲೋಕಸಭಾ ಅಭ್ಯರ್ಥಿ ರಮೇಶ ಜಿಗಜಿಣಗಿಯವರಿಗೆ ಬೆಂಬಲ ಸೂಚಿಸಲು ವಿಜಯಪುರ ತಾಲೂಕಿನ ಗುಣಕಿ ಗ್ರಾಮದಲ್ಲಿ ಬಂಜಾರಾ ಸಮುದಾಯದ ಸಭೆ ಜರುಗಿತು.ಸಭೆಯನ್ನು ಉದ್ದೇಶಿಸಿ ಅಭ್ಯರ್ಥಿ ರಮೇಶ ಜಿಗಜಿಣಗಿ ಮಾತನಾಡಿ, ನಾನು ಈ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ವಿಜಯಪುರ ಜಿಲ್ಲೆಯ ಅಭಿವೃದ್ಧಿಗೆ ಒಂದು ಲಕ್ಷ ಕೋಟಿ ಅನುದಾನ ತಂದಿರುವೆ ವಿಮಾನ ನಿಲ್ದಾಣ, ರೈಲು ಮೇಲ್ ಸೇತುವೆ ಹೀಗೆ ಹತ್ತು ಹಲವಾರು ಕೆಲಸಗಳನ್ನು ಮಾಡಿದ್ದೇನೆ. ಬಂಜಾರ ಸಮಾಜಕ್ಕೆ ಸಾಕಷ್ಟು ಅಭಿವೃದ್ಧಿ ಕೆಲಸವನ್ನು ಕೂಡ ಮಾಡಿದ್ದೇನೆ ಎಂದರು.ಈ ಸಮಯದಲ್ಲಿ ಬಂಜಾರಾ ಸಮುದಾಯದ ಮುಖಂಡರುಗಳು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಹೇಂದ್ರ ಕುಮಾರ್ ನಾಯಕ್ ಮಾತನಾಡಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಮ್ಮ ಬಂಜಾರ ಸಮಾಜವು ಬಿಜೆಪಿ ಪರ ನಿಲ್ಲಲಿದೆ. ದೇಶ ರಕ್ಷಣೆಗೆ ಮತ್ತೆ ಮೋದಿ ಪ್ರಧಾನಿಯಾಗಲೇಬೇಕು. ರಮೇಶ ಜಿಗಜಿಣಗಿಯವರು ಈ ಬಾರಿಯೂ ಸಹ ಒಂದು ಲಕ್ಷ ಮತಗಳ ಅಂತರದಿಂದ ಗೆಲುವನ್ನು ಸಾಧಿಸಲಿದ್ದಾರೆ. ದೇಶ ರಕ್ಷಣೆಗೆ ಪ್ರಧಾನಿ ಮೋದಿಯವರು ಹಗಲಿರುಳು ಶ್ರಮಿಸುತ್ತಿದ್ದಾರೆ.…

Read More

ವಿಜಯಪುರ: ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾ ಭವನದಲ್ಲಿ ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ಹಿರಿಯ ಹೋರಾಟಗಾರರಾದ ಅಪ್ಪಾಸಾಹೇಬ ಯರನಾಳ, ಹಣಮಂತ ಮಮದಾಪೂರ, ಎಂ.ಎ. ಮಾಲಬಾವಡಿ, ಆರ್.ಡಿ. ಹಳ್ಳಿಗಳಿ (ನ್ಯಾಯವಾದಿಗಳು), ಬಿ.ವಾಯ್. ದೊಡಮನಿ ಕಾರ್ಮಿಕರ ಕುರಿತು ಮಾತನಾಡಿದರು.ಹಿರಿಯ ಹೋರಾಟಗಾರರಾದ ಅಪ್ಪಾಸಾಹೇಬ ಯರನಾಳ ಕಾರ್ಮಿಕ ದಿನಾಚರಣೆಯನ್ನು ಕಾರ್ಮಿಕರ ಹಬ್ಬವನ್ನಾಗಿ ಆಚರಿಸುತ್ತಾರೆ ಎಂದರು.ಈ ಸಂದರ್ಭದಲ್ಲಿ ಕಾರ್ಮಿಕ ಹೋರಾಟಗಾರರಾದ ಸಿದ್ದು ಎಂ. ಕಲ್ಲೂರ, ಕೆ.ಕೆ. ಬನ್ನಟ್ಟಿ, ಎಂ.ಎ. ಮಾಲಬಾವಡಿ, ಬಿ.ವೈ.ದೊಡಮನಿ ಇವರನ್ನು ಸನ್ಮಾನಿಸಲಾಯಿತು.ಈ ಕಾರ್ಯಕ್ರಮದಲ್ಲಿ ಭಾಸ್ಕರ ಮಂದಕನಳ್ಳಿ, ಸರ್ವೆಶ ಕಟ್ಟಿ, ಶಿವಾನಂದ ಮೂಡಲಗಿ, ರಮೇಶ ಮುಂಡೇವಾಡಿ ಇನ್ನಿತರರು ಭಾಗವಹಿಸಿದ್ದರು.

Read More

ಢವಳಗಿ: ವಿಜಯಪುರ ಲೋಕಸಭಾ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಚಂದಪ್ಪ ಜಿಗಜಿಣಿಗಿ ಅವರ ಪರವಾಗಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಪ್ರಭು ತಳಗೇರಿ ಅವರು ಬುಧವಾರದಂದು ತಾಲೂಕಿನ ಬಳವಾಟ, ಜೆಕ್ಕೆರಾಳ, ಜಮ್ಮಲದಿನ್ನಿ, ತಾರನಾಳ, ಢವಳಗಿ ಗ್ರಾಮದಲ್ಲಿ ರಮೇಶ ಜಿಗಜಿಣಿಗಿ ಅವರ ಪರವಾಗಿ ಕೇಂದ್ರ ಸರ್ಕಾರದ ಅಭಿವೃದ್ಧಿಗಳನ್ನು ಜನರಿಗೆ ತಿಳಿಸಿ ಬಿಜೆಪಿ ಪಕ್ಷಕ್ಕೆ ಮತ ನೀಡುವಂತೆ ಕೇಳಿಕೊಂಡರು.ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರವು ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಲ್ಯಾಣದಿಂದ ಹಿಡಿದು ಇಡಿ ವಿಶ್ವ ಮಟ್ಟದಲ್ಲಿ ಭಾರತ ದೇಶದ ಗೌರವವನ್ನು ಹೆಚ್ಚಿಸುವಂತೆ ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡಿದೆ. ಆಡಳಿತಾತ್ಮಕವಾಗಿ ಇಡಿ ದೇಶದಲ್ಲಿ ಸುಶಾಸನ ಜಾರಿಗೆ ಬಂದಿದ್ದು ಮೋದಿಜೀಯವರಿಂದ. ಇಂತಹ ಸಮರ್ಥ ನೇತೃತ್ವಕ್ಕೆ ಮತ್ತೆ ದೇಶದ ಆಡಳಿತ ಸುಧಾರಣೆಗಾಗಿ ಮತ್ತೋಮ್ಮೆ ಪ್ರಧಾನಿ ಗದ್ದುಗೆ ಏರಲು ಮೋದಿಯವರನ್ನು ಗೆಲ್ಲಿಸೋಣ, ಮೋದಿ ಅವರ ಗೆಲುವಿಗೆ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಿಗೆ ಅವರಿಗೆ ಮತ ನೀಡಿ ಎಂದು ಮಾತನಾಡಿದರು.ಇದೇ ಸಂದರ್ಭದಲ್ಲಿ ಬಸರಕೋಡ ಗ್ರಾಮದ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಯಮನಪ್ಪ…

Read More

ವಿಜಯಪುರ : ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಬಿಜಾಪುರ ಲೋಕಸಭಾ ಅಭ್ಯರ್ಥಿಯಾಗಿರುವ ಗಣಪತಿ ರಾಥೋಡ್ ಅವರ ಪರವಾಗಿ ಇಂದು ವಿಜಯಪುರ ನಗರ ಸೇರಿದಂತೆ ವಿವಿಧ ಭಾಗಗಳಲ್ಲಿ ರಾಜ್ಯಾಧ್ಯಕ್ಷ ರವಿಕೃಷ್ಣ ರೆಡ್ಡಿ ಮತಯಾಚನೆ ಮಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ರವಿಕೃಷ್ಣ ರೆಡ್ಡಿ ಮಾತನಾಡಿ, ಕಾಂಗ್ರೆಸ್ ಪಕ್ಷ ಸುಮಾರು ೬೦ ವರ್ಷಗಳ ಕಾಲ ಕೇವಲ ಕುಟುಂಬ ರಾಜಕಾರಣ ಮಾಡುತ್ತಾ ಬಂದಿದ್ದು, ಈ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಯಾವುದೇ ಬೆಲೆ ಇಲ್ಲ. ಕೇವಲ ಹಣ ಇದ್ದರೆ ಮಾತ್ರ ಈ ಪಕ್ಷದಲ್ಲಿ ಬೆಲೆ ಇದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿದ್ದು, ಇವರ ಮಗ, ಮಗಳು, ಹೆಂಡತಿ, ಅಳಿಯ ಇಂತಹ ವ್ಯಕ್ತಿಗಳಿಗೆ ಮಾತ್ರ ಪಕ್ಷದ ಟಿಕೆಟ್ ನೀಡಿದ್ದು, ರಾಜ್ಯದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಿಟ್ಟಿಗೆ ಗುರಿಯಾಗಿವೆ. ಉನ್ನತ ಹುದ್ದೆಗಳನ್ನು ಪಕ್ಷದಲ್ಲಿರುವ ಸಚಿವರು, ಶಾಸಕರ ಮಕ್ಕಳಿಗೆ ಪಕ್ಷದ ಟಿಕೆಟ್ ನೀಡಿದ್ದರಿಂದ ನಿಜವಾದಿ ಪಕ್ಷದ ನಿಷ್ಠಾವಂತ ಪಕ್ಷದ ಕಾರ್ಯಕರ್ತರಿಗೆ ಅನ್ಯಾಯ ಮಾಡಿದ್ದಾರೆ. ಅದೇ ರೀತಿ…

Read More

ಇಂಡಿ: ಲೋಕಸಭಾ ಅಭ್ಯರ್ಥಿ ರಮೇಶ್ ಜಿಗಜಿಣಗಿ ಅವರು ಒಬ್ಬ ಅಜಾತಶತ್ರು ಅಭಿವೃದ್ಧಿಯ ಹರಿಕಾರ ಸರಳ ಸಜ್ಜನಿಕೆಯ ರಾಜಕಾರಣಿ ಜಂಬ ಕೊಚ್ಚಿಕೊಳ್ಳದ ಧೀಮಂತ ನಾಯಕ. ಪ್ರಚಾರಪ್ರಿಯನಲ್ಲದೆ ಕೆಲಸ ಪ್ರಿಯನಾಗಿ ಕೆಲಸ ಮಾಡುವ ವ್ಯಕ್ತಿಯಾಗಿದ್ದಾರೆ ಎಂದು ಬಿಜೆಪಿ ಇಂಡಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವುಡೆ ಹೇಳಿದರು.ಅವರು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇಂಡಿ ಮತಕ್ಷೇತ್ರಕ್ಕೆ ಪ್ರತಿ ಮನೆ ಮನೆಗೆ ನಲ್ಲಿ ನೀರು ಕೊಡುವುದು, ಕೆರೆ ತುಂಬುವ ಯೋಜನೆ, ರೇವಣಸಿದ್ದೇಶ್ವರ ಏತ ನೀರಾವರಿ, ಹಿರೇಮಣೂನೂರ ಗ್ರಾಮದಿಂದ ಇಂಡಿ ಮುಖಾಂತರ ವಿಜಯಪುರ ಜಿಲ್ಲೆಗೆ ರಾಷ್ಟ್ರೀಯ ಹೆದ್ದಾರಿ, ಮತಕ್ಷೇತ್ರದ ಜನರಿಗೆ ಅನುಕೂಲವಾಗಲು ಜಿಲ್ಲೆಯಲ್ಲಿ ಮಾಡಿದ ಹತ್ತು ವರ್ಷದ ಅಭಿವೃದ್ಧಿ ಕಾರ್ಯಗಳು ಒಟ್ಟು ೧ ಲಕ್ಷ ಕೋಟಿಗೂ ಅಧಿಕ ಕೇಂದ್ರ ಸರ್ಕಾರದಿಂದ ಹಣ ತಂದು ಅಭಿವೃದ್ಧಿ ಮಾಡಿದ ಅಭಿವೃದ್ಧಿಯ ಹರಿಕಾರರಾಗಿದ್ದಾರೆ.ಒಂದು ದೇಶವಾಗಲಿ, ಒಂದು ರಾಜ್ಯವಾಗಲಿ ಸಮೃದ್ಧವಾಗಬೇಕಾದರೆ ಸರ್ವತೋಮುಖ ಅಭಿವೃದ್ಧಿಯ ಯೋಜನೆಗಳಿಂದಲೇ ಹೊರತು ಗ್ಯಾರೆಂಟಿ ಇಂದಲ್ಲ, ಗ್ಯಾರೆಂಟಿಯ ಹಣದಿಂದ ಕುಡಿಯಲು ನೀರು ಸಿಗುವುದಿಲ್ಲ, ಸಮಗ್ರ ನೀರಿನ ಯೋಜನೆಗಳಿಂದ ಮಾತ್ರ ಕುಡಿಯಲು ನೀರು ಸಿಗುತ್ತದೆ,…

Read More

ಇಂಡಿ: ತಾಲೂಕಿನ ಶಿರಶ್ಯಾಡ ಗ್ರಾಮದಲ್ಲಿ ಭಾರತೀಯ ಜನತಾ ಪಾರ್ಟಿ ವಿಜಯಪುರ ಜಿಲ್ಲಾ ಲೋಕಸಭಾ ಅಭ್ಯರ್ಥಿ ರಮೇಶ ಜಿಗಜಿಣಗಿಯವರ ಪರವಾಗಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.ಈ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡ ಬಾಳು ಮುಳಜಿ ಮಾತನಾಡಿ. ಲೋಕಸಭಾ ಚುನಾವಣೆ ದೇಶದ ಅಳಿವು ಉಳಿವಿನ ಚುನಾವಣೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ಸರಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು ದೇಶವನ್ನು ಇಡೀ ವಿಶ್ವವೇ ಹಿಂತಿರುಗಿ ನೋಡುವಂತಹ ವಾತಾವರಣ ನಿರ್ಮಿಸಿದ್ದಾರೆ.ಜಾತಿ-ಮಥ-ಪಂಥ ಎನ್ನದೆ ಎಲ್ರೂ ಬಿಜೆಪಿ ಅಭ್ಯರ್ಥಿಗಳಿಗೆ ಮತದಾನ ಮಾಡಿ ದೇಶವನ್ನು ಉತ್ಯುಂಗಕ್ಕೆ ಕೊಂಡೊಯ್ಯಲು ಕೈ ಜೋಡಿಸೋಣ ಎಂದರು.ಈ ಸಂದರ್ಭದಲ್ಲಿ ಬಾಳು ಮುಳಜಿ, ದಾದಾಗೌಡ ಪೋಲಿಸ್‌ಪಾಟೀಲ್, ಶ್ರೀಕಾಂತ ಪಾಸೋಡಿ, ದಾದು ಕೋಣಶಿರಸಗಿ, ಧರ್ಮರಾಜ ಕಲ್ಲೂರ್, ಶಿವರಾಜ ಬಿರಾದಾರ, ಅಶೋಕ್ ಕಲ್ಲೂರ, ಈರಣ್ಣ ಕಾಮಾ, ಸಂತೋಷ್ ಪಾಟೀಲ್, ರಮೇಶ್ ಬಿರಾದಾರ ಸೇರಿದಂತೆ ಬಿಜೆಪಿ ಕಾರ್ಯಕರ್ತರಿದ್ದರು.

Read More

ರೇವತಗಾಂವ ಗ್ರಾಮದಲ್ಲಿ ದುರ್ಗಾದೇವಿ ದೇವರುಗಳ ಭವ್ಯ ಭೇಟಿ ವಿಜಯಪುರ: ಜಿಲ್ಲೆಯ ಚಡಚಣ ತಾಲೂಕಿನ ರೇವತಗಾಂವ ಗ್ರಾಮದ ದುರ್ಗಾದೇವಿ ಜಾತ್ರೆಯ ಅಂಗವಾಗಿ ಮಂಗಳವಾರದಂದು ದುರ್ಗಾದೇವಿ ಪಲ್ಲಕ್ಕಿಗಳ ಭೇಟಿ ಕಾರ್ಯಕ್ರಮವು ಅದ್ಧೂರಿಯಾಗಿ ಜರುಗಿತು.ಗ್ರಾಮದ ಮಾತಂಗ ಓಣೆಯಲ್ಲಿರುವ ದುರ್ಗಾದೇವಿ ಜಾತ್ರೆಯ ನಿಮಿತ್ತ ನಸುಕಿನ ಜಾವ ದುರ್ಗಾದೇವಿಯ ಪುಣ್ಯಸ್ಥಾನವು ಬೀಮಾ ನದಿಯ ನೀರಿನಿಂದ ನೇರವೇರಿಸಿ ವಾಸುದೇವ, ಮುದಕಪ್ಪ ಹಾಗೂ ದುರ್ಗಪ್ಪ ಪೂಜಾರಿಗಳಿಂದ ರುದ್ರಾಬಿಷೇಕ ಪೂಜೆಯು ಜರುಗಿತು. ಭಕ್ತರಿಂದ ದೀರ್ಘದಂಡ ನಮಸ್ಕಾರವನ್ನು ಸಲ್ಲಿಸುವ ಮೂಲಕ ತಮ್ಮ ಹರಿಕೆಗಳನ್ನು ತೀರಿಸಿದರು. ನಂತರ ಜಾತ್ರೆಯಲ್ಲಿ ಸೇರಿದ ಭಕ್ತರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮವು ಜರುಗಿತು. ನಂತರ ಗ್ರಾಮದ ಕಲಾವಿದರಿಂದ ಚೌಡಕಿ ಪದಗಳು ಜರುಗಿದವು.ಸಾಯಂಕಾಲ ೫ ಗಂಟೆ ಗ್ರಾಮದ ದುರ್ಗಾದೇವಿ ಹಾಗೂ ತಿಕೋಟದ ದುರ್ಗಾದೇವಿ ಪಲ್ಲಕ್ಕಿಗಳ ಮೆರವಣಿಗೆಯು ವಿವಿಧ ವಾದ್ಯ ವೈಭವಗಳ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರೇವಣಸಿದ್ದೇಶ್ವರ ದೇವಾಸ್ಥಾನದ ಮುಂಭಾಗ ನೆರದ ಭಕ್ತ ಸಮೂಹ ಮುಂದೆ ದೇವರುಗಳ ಪಲ್ಲಕ್ಕಿಗಳ ಭೇಟಿ ಕಾರ್ಯಕ್ರಮವು ಸಡಗರದಿಂದ ಜರುಗಿತು. ಈ ವೇಳೆಯಲ್ಲಿ ಭಕ್ತರು ಭಂಡಾರ, ಬದಾಮ,…

Read More