Subscribe to Updates
Get the latest creative news from FooBar about art, design and business.
Author: editor.udayarashmi@gmail.com
ನವದೆಹಲಿ: ದೇಶದಲ್ಲಿ ಭಾರೀ ಸದ್ದು ಮಾಡಿದ್ದ ಚುನಾವಣಾ ಬಾಂಡ್ಗೆ ಸಂಬಂಧಿಸಿದಂತೆ ಎಸ್ಒಪಿ ಮಾಹಿತಿಯನ್ನು ನೀಡಲು ಭಾರತೀಯ ಸ್ಟೇಟ್ ಬ್ಯಾಂಕ್ ಮತ್ತೆ ನಿರಾಕರಿಸಿದ್ದು, ಕೇಂದ್ರ ಮಾಹಿತಿ ಆಯೋಗಕ್ಕೆ (ಸಿಐಸಿ) ನಿರಾಕರಣೆಯ ವಿರುದ್ಧ ಮೇಲ್ಮನವಿ ಸಲ್ಲಿಸಲು ಆರ್ಟಿಐ ಕಾರ್ಯಕರ್ತೆ ಅಂಜಲಿ ಭಾರದ್ವಾಜ್ ಮುಂದಾಗಿದ್ದಾರೆ.ಮಾಹಿತಿ ಹಕ್ಕು ಕಾಯಿದೆಯಡಿ ಸಲ್ಲಿಸಲಾದ ಮೊದಲ ಮೇಲ್ಮನವಿಗೆ ಪ್ರತಿಕ್ರಿಯೆಯಾಗಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಚುನಾವಣಾ ಬಾಂಡ್ಗಳ ಮಾರಾಟ ಮತ್ತು ನಗದೀಕರಣ ಕುರಿತಂತೆ ಶಾಖೆಗಳಿಗೆ ನೀಡಿದ ಎಸ್ಒಪಿ (ಸ್ಟಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ಸ್) ಪ್ರತಿಯನ್ನು ಒದಗಿಸಲು ಮತ್ತೆ ನಿರಾಕರಿಸಿದೆ. ಮಾಹಿತಿ ಹಕ್ಕು ಕಾಯಿದೆಯಡಿ ಕೋರಲಾದ ಮಾಹಿತಿಯನ್ನು ಬ್ಯಾಂಕ್ “ಕಮರ್ಷಿಯಲ್ ಕಾನ್ಫಿಡೆನ್ಸ್” ಆಗಿ ಇರಿಸಿಕೊಂಡಿದೆ ಮತ್ತು ಅದು “ಬ್ಯಾಂಕ್ನ ಬೌದ್ಧಿಕ ಆಸ್ತಿ” ಎಂದು ಮಾಹಿತಿ ನಿರಾಕರಣೆಗೆ ಬ್ಯಾಂಕ್ ಕಾರಣ ನೀಡಿದೆ. ಮೇಲಾಗಿ ಆಂತರಿಕ ಮಾರ್ಗಸೂಚಿಗಳು ಚುನಾವಣಾ ಬಾಂಡ್ ಕುರಿತಂತೆ ಕಾರ್ಯನಿರ್ವಹಿಸುವ ಸಿಬ್ಬಂದಿಗಾಗಿ ಮಾತ್ರ ಆಗಿವೆ ಎಂದೂ ಬ್ಯಾಂಕ್ ಹೇಳಿದೆ.
ಬ್ರಹ್ಮದೆವನಮಡು: ಕುಡಿದ ಮತ್ತಿನಲ್ಲಿ ಪತ್ನಿ ಶೀಲಶಂಕಿಸಿ ಕೊಡಲಿಯಿಂದ ಕೊಚ್ಚಿ ಪತಿ ಕೊಲೆ ಮಾಡಿದ ಘಟನೆ ಸಿಂದಗಿ ತಾಲೂಕಿನ ಢವಳಾರ ಗ್ರಾಮದಲ್ಲಿ ನಡೆದಿದೆ.ಕಮಾಲಬಾಯಿ ಇಂಚಗೇರಿ (೪೫) ಕೊಲೆಯಾದ ಮೃತ ದುದೈ೯ವಿಯಾಗಿದ್ದು.ಕುಡಿದ ಮತ್ತಿನಲ್ಲಿ ಗೋಲ್ಲಾಳಪ್ಪಗೌಡ ಭಗವಂತಪಗೌಡ ಇಂಚಗೇರಿ ಗೆ ಜಗಳ ಮಾಡಿಕೊಂಡಿದ್ದಾನೆ.ಜಗಳ ವಿಕೋಪಕ್ಕೆ ಹೋಗಿ ಪತ್ನಿಯನ್ನೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಅಲ್ಲದೇ ಕೊಲೆ ಮಾಡಿ ಸ್ಥಳದಲ್ಲಿಯೇ ಮಲಗಿದ್ದಾನೆ.ಘಟನಾ ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಶಂಕರ ಮಾರಿಹಾಳ, ಇಂಡಿ ಡಿವೈಎಸ್ಪಿ ಎಚ್.ಜಗದೀಶ, ಸಿಂದಗಿ ಸಿಪಿಆಯ್ ನಾನಾಗೌಡ ಪೋಲಿಸ್ ಪಾಟೀಲ, ಕಲಕೇರಿ ಠಾಣೆಯ ಪಿಎಸೈ ರೋಹಿಣಿ ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.ಕಲಕೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುದ್ದೇಬಿಹಾಳ: ಇಲ್ಲಿನ ತಹಶೀಲ್ದಾರ ಕಚೇರಿಯ ಸಭಾಭವನದಲ್ಲಿ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದರು. ತಾಲೂಕು ಪಂಚಾಯತ ವ್ಯಾಪ್ತಿಯಲ್ಲಿ ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ. ಖಾತೆಗಳ ಬದಲಾವಣೆ ಸೇರಿದಂತೆ ಗ್ರಾಮ ಪಂಚಾಯತಗಳಲ್ಲಿ ಪಿಡಿಓ ಗಳು ಸರಿಯಾಗಿ ಕಾರ್ಯನಿರ್ವಹಿಸದ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿದ್ದು ಸರಿಪಡಿಸುವಂತೆ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದರು.ಜಿಪಿಎಸ್ ಮಾಡಿಕೊಡುವದಾಗಿ ಸುಳ್ಳು ಹೇಳಿ ಸಾರ್ವಜನಿಕರಿಕರಿಂದ ಭೂ ಮಾಪಕರು ಹಣ ಪಡೆಯುತ್ತಿರುವ ಬಗ್ಗೆ ದೂರುಗಳು ಬಂದಿದ್ದು ಹೀಗಾಗದಂತೆ ಕ್ರಮವಹಿಸುವಂತೆ ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೆ ಸೂಚಿಸಿದರು. ಕಾಲ ಕಾಲಕ್ಕೆ ಮೊಟ್ಟೆ ಸೇರಿದಂತೆ ಗರ್ಭಿಣಿಯರಿಗೆ ನೀಡುತ್ತಿರುವ ಪೋಶಕಾಂಶಯುಕ್ತ ಪದಾರ್ಥಗಳ ವಿತರಣೆಗಳ ಮಾಹಿತಿ ಕಲೆ ಹಾಕಿದ ಲೋಕಾಯುಕ್ತ ಅಧಿಕಾರಿಗಳು ಭ್ರೂಣ ಹತ್ಯೆ ಪ್ರಕರಣಗಳ ಬಗ್ಗೆ ಸೂಕ್ತ ಗಮನ ಹರಿಸುವಂತೆ, ಸ್ಕಾö್ಯನಿಂಗ್ ಸೆಂಟರ್ಗಳ ಮೇಲೆ ನಿಗಾ ವಹಿಸುವಂತೆ ಸೂಚಿಸಿದರು. ಪುರಸಭೆ ವ್ಯಾಪ್ತಿಯಲ್ಲಿ ಬರುವ ಪಟ್ಟಣ ಸ್ವಚ್ಛವಿಲ್ಲದ ಬಗ್ಗೆ ಪುರಸಭೆ ಮುಖ್ಯಾಧಿಕಾರಿಗೆ, ಕೃಷಿ ಹೊಂಡ ಟಾರ್ಗೇಟ್ ರೀಚ್ ಮಾಡದ ಬಗ್ಗೆ ಕೃಷಿ ಅಧಿಕಾರಿಯನ್ನ ತರಾಟೆಗೆ…
ಇಂಡಿ: ಸಿಂದಗಿ ಮತ್ತು ಆಲಮೇಲ ತಾಲೂಕುಗಳಲ್ಲಿ ಭೀಮಾ ನದಿಯಲ್ಲಿ ಆಕ್ರಮ ಮರುಳು ಸಾಗಾಣಿಕೆ ಮಾಡುವ ಕುರಿತು ಸೋಮವಾರ ರಾತ್ರಿ ೧೧ ಗಂಟೆಯಿಂದ ರೇಡ್ ಇಂಡಿಯ ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಇವರ ನೇತೃತ್ವದಲ್ಲಿ ನಡೆಯಿತು.ಇಂಡಿ, ಸಿಂದಗಿ ಮತ್ತು ಆಲಮೇಲ ತಾಲೂಕುಗಳಲ್ಲಿ ಎಲ್ಲ ಕಡೆಗೂ ಆಕ್ರಮ ಮರುಳು ಮಾಡುವಾಗಲೇ ಹಿಡಿದಿದ್ದಾರೆ.ಎಲ್ಲ ಕಡೆಗೂ ಆಕ್ರಮ ಮರುಳು ಮಾಡುವವರು ತಮ್ಮ ವಾಹನ ಗಳಿಗೆ ಕೀಲಿ ಹಾಕಿ ಓಡಿ ಹೋಗಿದ್ದಾರೆ.ಒಂದು ಹಿಟಾಚಿ, ಒಂದು ಜೆಸಿಪಿ, ಎರಡು ಟ್ಯಾçಕ್ಟರ್ ಒಂದು ಬುಲೆರೋ ಸೇರಿದಂತೆ ಹಲವಾರು ವಾಹನ ವಶದಲ್ಲಿ ಪಡೆದಿದ್ದಾರೆ.ಅದಲ್ಲದೆ ಯಾರೂ ನದಿಯಲ್ಲಿಯ ಮರುಳು ಆಕ್ರಮ ಮಾಡಬಾರದು. ಮರುಳು ತೆಗೆಯಲು ವಾಹನಗಳನ್ನು ಬಳಸಬಾರದು, ನದಿ ದಂಡೆಯ ಸಮೀಪದ ತೋಟದವರು ಮರುಳು ಆಕ್ರಮಕ್ಕೆ ವಾಹನ ಹೋಗಲು ಜಾಗ ನೀಡಬಾರದು. ಇಲ್ಲದಿದ್ದರೆ ಕ್ರಮ ಜರುಗಿಸಲಾಗುವದು ಎಂದರು.ಆಲಮೇಲ ತಹಸೀಲ್ದಾರ ಮಹಾದೇವ ಸಣ್ಣಮೂರಿ, ಲಕ್ಷö್ಮಣ ಕಾಢೆ, ರವಿ ಕಕ್ಕಳಮೇಲಿ, ಮಾರುತಿ ಸಾಳುಂಕೆ, ಯಮನೂರ ಗೊಂಧಳಿ, ಭೀಮಣ್ಣ ಜೇರಟಗಿ, ಶರಣು ತಳವಾರ, ದತ್ತು ವಾಲಿಕಾರ, ಮಲಕಪ್ಪ ಮತ್ತಿತರಿದ್ದರು.
ಇಂಡಿ: ಪಟ್ಟಣದ ಕೆನರಾ ಬ್ಯಾಂಕ್ ಖಾತೆಯಲ್ಲಿರುವ ಶಿವಾನಂದ ಲಕ್ಕುಂಡಿಮಠ ಇವರ ಖಾತೆ ೧೨೫೦೦೪೯೩೯೨೧೯ ಅಕೌಂಟಿನಿಂದ ಎರಡು ಲಕ್ಷ ಹತ್ತು ಸಾವಿರ ರೂ ವಂಚನೆ ಯಾಗಿರುತ್ತದೆ.ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಯಾಗಿದ್ದು ಯಾರು ಈ ಕೃತ್ಯ ಮಾಡಿದ್ದಾರೆ ಎಂಬುದು ಇನ್ನೂ ತಿಳಿಸಿದಿಲ್ಲ.ಖಾತೆಯಲ್ಲಿಯ ಹಣ ಒಂದೇ ಬಾರಿಗೆ ತೆಗೆಯದೇ ರವಿವಾರ ಮಧ್ಯಾಹ್ನ ಸುಮಾರಿಗೆ ಮೊದಲಬಾರಿಗೆ ಒಂದು ಲಕ್ಷ ರೂ, ೨ ನೇ ಸಲ ೩೫ ಸಾವಿರ ರೂ, ೩ ನೇ ಸಲ ೫೦ ಸಾವಿರ ರೂ, ೪ ನೇ ಬಾರಿ ೨೫ ಸಾವಿರ ರೂ ಹಣ ಹೋಗಿದೆ.ಬ್ಯಾಂಕ್ ಮೊಬಾಯಿಲ್ ಆಪ್ ಇಲ್ಲ, ಎಟಿಎಂ ಇಲ್ಲ,ಚೆಕ್ ಇಲ್ಲ ಹಿಗಿದ್ದರೂ ಸಹಿತ ಖಾತೆಯಲ್ಲಿಯ ಹಣ ಖಾಲಿಯಾಗಿದೆ.ಈ ಕುರಿತು ಭಾನುವಾರ ಸಾಯಂಕಾಲವೇ ವಿಜಯಪುರ ಸೈಬರ್ ಕ್ರೈಂ ಪೋಲಿಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.ಇಂದು ಪಟ್ಟಣದ ಅನೇಕ ಜನರು ಕೆನರಾ ಬ್ಯಾಂಕಿಗೆ ಭೇಟಿ ನೀಡಿ ಬ್ಯಾಂಕಿನ ಹಿರಿಯ ವ್ಯವಸ್ಥಾಪಕರ ಜೊತೆಗೆ ಚರ್ಚಿಸಿದರು.ಹಿರಿಯ ವ್ಯವಸ್ಥಾಪಕ ಸಿದ್ದನಗೌಡ ಮಾತನಾಡಿ ಬ್ಯಾಂಕ ಖಾತೆಯಿಂದ ಹಣ…
ಮುದ್ದೇಬಿಹಾಳ: ತಾಲೂಕಿನ ಹುಲ್ಲೂರು ಗ್ರಾಮದ ಎಸ್.ಎನ್.ಡಿ ನ್ಯಾಶನಲ್ ಪಬ್ಲಿಕ್ ಶಾಲೆಯಲ್ಲಿ ೨೦೨೪-೨೫ ನೇ ಸಾಲಿನ ೯ನೇ ತರಗತಿಯ ೧೫ ವಿದ್ಯಾರ್ಥಿಗಳನ್ನು ಉಚಿತವಾಗಿ ಪ್ರವೇಶ ಪಡೆದುಕೊಳ್ಳಲು ಸಂಸ್ಥೆ ನಿರ್ಧರಿಸಿದೆ ಎಂದು ಅಧ್ಯಕ್ಷ ಎಂ.ಎಸ್.ಕೊಪ್ಪ ತಿಳಿಸಿದರು.ಈ ಕುರಿತು ಸುದ್ದಿಗಾರರೊಂದಿಗೆ ಮತನಾಡಿದ ಅವರು ಪರಮ ಪೂಜ್ಯ ಚನ್ನಬಸವ ಮಹಾಸ್ವಾಮಿಗಳ ಮಹಾದೇಶದಂತೆ ಈ ನಿರ್ಧಾರ ಕೈಗೊಂಡಿದ್ದು, ವಿದ್ಯಾರ್ಥಿಗಳು ಉಚಿತ ಪ್ರವೇಶ ಪಡೆಯಲು ಮೇ೨೫ ರಂದು ಪರೀಕ್ಷೆಯೊಂದನ್ನ ಆಯೋಜಿಸಲಾಗಿದೆ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮೊದಲ ೧೫ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಪಡೆಯುವದಾಗಿ ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದು – ೯೬೧೧೦೭೫೧೭೩, ೮೦೮೮೪೩೫೨೮೨
ವಿಜಯಪುರ: ಶಾಸಕರ ಮೂಲಕ ನೇಮಕವಾಗುವ ವಿಧಾನ ಪರಿಷತ್ ಸದಸ್ಯರ 11 ಸ್ಥಾನಗಳಿಗೆ ಚುನಾವಣಾ ಆಯೋಗ ಜೂ.13 ರಂದು ಚುನಾವಣೆ ಘೋಷಿಸಿದ್ದು, ಬಿಜೆಪಿಯಿಂದ ಹಿರಿಯ ಮಾಜಿ ಸಚಿವ, ರಾಜ್ಯ ಗಾಣಿಗ ಸಮುದಾಯದ ಪ್ರಭಾವಿ ನಾಯಕರಾದ ಎಸ್.ಕೆ. ಬೆಳ್ಳುಬ್ಬಿ ಅವರಿಗೆ ಬಿಜೆಪಿ ಟಿಕೇಟ್ ನೀಡಬೇಕೆಂದು ದಿಗಂಬರೇಶ್ವರ ಸಂಸ್ಥಾನಮಠದ ಕಲ್ಲಿನಾಥ ಮಹಾಸ್ವಾಮೀಜಿ ಬಿಜೆಪಿ ಪಕ್ಷದ ವರಿಷ್ಠರಿಗೆ ಒತ್ತಾಯಿಸಿದರು.ವಿಜಯಪುರದಲ್ಲಿ ಮಂಗಳವಾರ ಗಾಣಿಗ ಸಮುದಾಯದ ಜಿಲ್ಲಾ ನಾಯಕರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಕಲ್ಲಿನಾಥ ಸ್ವಾಮೀಜಿ ಮಾತನಾಡಿದರು. ರಾಜ್ಯದಲ್ಲಿ ಸುಮಾರು 80 ಲಕ್ಷದಷ್ಟು ಜನಸಂಖ್ಯೆ ಹೊಂದಿರುವ ಗಾಣಿಗ ಸಮಾಜವು ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ, ಪ್ರಧಾನಿ ನರೇಂದ್ರ ಮೋದಿಜಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಅವರ ಅಭಿವೃದ್ಧಿ ಕಾರ್ಯಗಳು ಹಾಗೂ ನಾಯಕತ್ವ ಗುಣಗಳನ್ನು ಮೆಚ್ಚಿಕೊಂಡು ಹಲವಾರು ದಶಕಗಳಿಂದ ಗಾಣಿಗ ಸಮಾಜ ಬಿಜೆಪಿ ಬೆಂಬಲಿಸಿಕೊಂಡು ಬಂದಿದೆ.ರಾಜ್ಯದಲ್ಲಿ ಗಾಣಿಗ ಸಮುದಾಯದ ಪ್ರಭಾವಿ ನಾಯಕರಾಗಿರುವ ಹಿರಿಯ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿಯವರು ಸಂತ್ರಸ್ತರು, ರೈತರ ಪರ ಹೋರಾಟಗಳ ಮೂಲಕವೇ ಮಂಡಲ ಪಂಚಾಯಿತಿಯಿಂದ ಸಚಿವ…
ವಿಜಯಪುರ: ಹುಬ್ಬಳ್ಳಿ ನಗರದಲ್ಲಿ ಇತ್ತೀಚಿಗೆ ಕೊಲೆಯಾದ ಕು.ಅಂಜಲಿ ಅಂಬಿಗೇರ ಅವರ ಮನೆಗೆ ನಗರ ಶಾಸಕರಾದ ಬಸನಗೌಡ ರಾ.ಪಾಟೀಲ ಯತ್ನಾಳ ಅವರು ಮಂಗಳವಾರ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಆತ್ಮಸ್ಥೈರ್ಯ ತುಂಬಿದರು.
ವಿಜಯಪುರ: ಕುಸ್ತಿ ಪಂದ್ಯಾವಳಿ ವಿಶ್ವದ ಅತ್ಯಂತ ಪ್ರಾಚೀನ ಕ್ರೀಡೆಯಾಗಿದೆ. ಕುಸ್ತಿ ಭಾರತದಲ್ಲಿ ವೈಭವಯುತ ಇತಿಹಾಸ ಹಾಗೂ ಜನಪ್ರಿಯತೆ ಹೊಂದಿದೆ ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.ಹಿಟ್ನಳ್ಳಿ ಗ್ರಾಮದ ದ್ಯಾಮಗಂಗಾ ಹಾಗೂ ಮಾರುತೇಶ್ವರ ಜಾತ್ರೆ ನಿಮಿತ್ತ ಏರ್ಪಡಿಸಿದ್ದ ಕುಸ್ತಿ ಪಂದ್ಯಾವಳಿಯು ಉದ್ಘಾಟಿಸಿ ಮಾತನಾಡುತ್ತಾ, ಒಲಂಪಿಕ್ಸ್ ದಲ್ಲಿ ಕುಸ್ತಿ ಪ್ರತಿಷ್ಠಿತ ಕ್ರೀಡೆಯಾಗಿದೆ ಮೊದಮೊದಲು ಇದನ್ನು ಮಲ್ಲಯುದ್ಧವೆಂದು ಕರೆಯಲಾಗುತ್ತಿತ್ತು. ಇಂದು ಭಾರತಿಯ ಕ್ರೀಡಾ ಪ್ರಾಧಿಕಾರ ಇಂತಹ ಅಪ್ರತಿಮ ಕುಸ್ತಿಪಟುಗಳಿಗೆ ತರಬೇತಿ ನೀಡಿ ಪ್ರೋತ್ಸಾಹಿಸುತ್ತಿದೆ. ಕುಸ್ತಿಪಟುಗಳ ಸಂಖ್ಯೆ ಕುಸಿಯುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿ ಎಂದರು.ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಹಾಸಿಂಪೀರ್ ವಾಲಿಕಾರ್ ಅಧ್ಯಕ್ಷ ವಹಿಸಿ ಮಾತನಾಡುತ್ತಾ, ಕರ್ನಾಟಕದಲ್ಲಿ ದಸರಾ ಕುಸ್ತಿಗಳು ಜಗತ್ಪ್ರಸಿದ್ಧವಾಗಿವೆ. ಮಹಿಳಾ ಕುಸ್ತಿಪಟುಗಳು ಸಹ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿಯನ್ನು ಗಳಿಸಿದ್ದಾರೆ. ಶಿಕ್ಷಣದ ಜೊತೆಗೆ ಕ್ರೀಡೆಗೆ ಅವಕಾಶ ಹಾಗೂ ಪ್ರೋತ್ಸಾಹ ಅಗತ್ಯ ಎಂದರು.ಸಂಘಟಕರಾದ ಶ್ರೀಕಾಂತ್ ಚೌದರಿ, ಸಿದ್ದು ಪವಾರ, ಜಗನಾಥ ಚೌದ್ರಿ, ಚಂದ್ರಶೇಖರ್ ಮಲಗಾಣ, ಅಶೋಕ್ ಬಗಲಿ, ರಾಜೇಂದ್ರ ಬಿರಾದಾರ್ ಅತಿಥಿಗಳನ್ನು ಗೌರವಿಸಿದರು.ಕಾರ್ಯಕ್ರಮದಲ್ಲಿ ಬಸವನಗೌಡ…
