ಉದಯರಶ್ಮಿ ದಿನಪತ್ರಿಕೆ
ಎಚ್ ಡಿ ಕೋಟೆ: ಅದಿವಾಸಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸರ್ಕಾರ ಸಕಲ ಸವಲತ್ತು ಕಲ್ಪಿಸಿಕೊಟ್ಟಿದೆ. ಈ ಬಾರಿಯ sslc ಪರೀಕ್ಷೆಯಲ್ಲಿ ತಾಲೂಕಿನಲ್ಲಿ 68 ಹಾಡಿ ಮಕ್ಕಳು ತೇರ್ಗಡೆಯಾಗಿದ್ದಾರೆ. ಎಸ್ ಎಲ್ ಸಿ ಮುಗಿದ ಬಳಿಕ ಪಿಯುಸಿಗೆ ಮಕ್ಕಳನ್ನು ಪೋಷಕರು ಸೇರಿಸುತ್ತಿಲ್ಲದಿರುವುದು ನನ್ನ ಗಮನಕ್ಕೆ ಬಂದಿದೆ. ಯಾವುದೇ ಕಾರಣಕ್ಕೂ ಮಕ್ಕಳನ್ನು ಶಿಕ್ಷಣದಿಂದ ವಂಚಿತರಾಗಿ ಮಾಡಬೇಡಿ. ಕನಿಷ್ಠ ಪಿಯುಸಿ ಓದಿಸಿದರೆ ಅವರು ಸಮಾಜದಲ್ಲಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುತ್ತಾರೆ ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಸಿ ಎನ್ ರಾಜು ಹೇಳಿದರು
ಪಟ್ಟಣದ ಡಾ ಬಿ ಆರ್ ಅಂಬೇಡ್ಕರ್ ಭವನದಲ್ಲಿ ನಡೆದ ಪೀಪಲ್ ಟ್ರೀ ಸಂಸ್ಥೆಯ ಚಿಲ್ಡ್ರನ್ಸ್ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ತಾಲೋಕಿನಲ್ಲಿ ಆದಿವಾಸಿ ಮಕ್ಕಳ ಶಿಕ್ಷಣ, ಆರೋಗ್ಯ, ಆಹಾರದ ವಿಷಯಗಳಲ್ಲಿ ಪೀಪಲ್ ಟ್ರೀ ಸಂಸ್ಥೆ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದು ಇದು ಶ್ಲಾಘನೀಯ ಕೆಲಸವಾಗಿದೆ. ಇಂತಹ ಉತ್ತಮ ಕೆಲಸ ಮಾಡುತ್ತಿರುವ ಈ ಸಂಸ್ಥೆಯಲ್ಲಿ ಓದುತ್ತಿರುವ ಮಕ್ಕಳಿಗೆ ನನ್ನ ಕೈಲಾದ ಸಹಾಯ ಮಾಡುತ್ತೆನೆ ಎಂದು ಸಿ. ಎನ್ ರಾಜು ಭರವಸೆ ನೀಡಿದರು.
ಸಂಸ್ಥೆಯ ಸಂಯೋಜಕಿ ಸುಮಿತ್ರ ಮಾತನಾಡಿ, ಪೀಪಲ್ ಟ್ರೀ ಸಂಸ್ಥೆಯೂ ತಾಲೂಕಿನಲ್ಲಿ ಸುಮಾರು 30 ಕ್ಕೂ ಹೆಚ್ಚು ಹಾಡಿಗಳಲ್ಲಿ ಆದಿವಾಸಿಗಳ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಸಂಘಟನೆ ವಿಷಯಗಳ ಜೊತೆಗೆ ಆದಿವಾಸಿಗಳ ಆರೋಗ್ಯ, ಆಹಾರ, ಕಲೆ, ಸಂಸ್ಕೃತಿ ಮತ್ತು ಹವಾಮಾನ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಾ ಬರುತ್ತಿದೆ.ಶಿಕ್ಷಣ ವಂಚಿತ ಮಕ್ಕಳಿಗೆ ಗುಣಮಟ್ಟದ ಕಲಿಕೆ ನೀಡುವ ಉದ್ದೇಶದಿಂದ ಮಗ್ಗೆಯಲ್ಲಿ ಹೆಣ್ಣುಮಕ್ಕಳಿಗಾಗಿ ವಸತಿ ಶಾಲೆಯನ್ನು ತೆರೆದು ಸರ್ಕಾರಿ ಶಾಲೆಗೊಗುವ ಮಕ್ಕಳನ್ನ ಅಲ್ಲಿ ಉಳಿಸಿಕೊಂಡು ಸಂಜೆ ಮತ್ತು ಬೆಳ್ಳಗ್ಗೆ ಟ್ಯೂಷನ್, ಕೊಡುವ ಮೂಲಕ ಮಕ್ಕಳಿಗೆ ಬೇಕಾದ ಎಲ್ಲಾ ವಿಷಯಗಳನ್ನು ಕಲಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾದೇಶ್, ಸೋಮಣ್ಣ, ಮಹೇಂದ್ರ ಕುಮಾರ್, ಮಹೇಶ್, ವಿಜಯ್ ಕುಮಾರ್, ನಟರಾಜ್, ಜಿ ಸ್ವಾಮಿ, ಕೆಂಚಯ್ಯ, ಎಡತೊರೆ ಮಹೇಶ್, ಜವರೇಗೌಡ ಮಕ್ಕಳನ್ನು ಕುರಿತು ಮಾತನಾಡಿದರು.
ವೇದಿಕೆಯಲ್ಲಿ ಪೀಪಲ್ ಟ್ರೀ ಸಂಸ್ಥೆ ಸಂಸ್ಥಾಪಕ ಸಿದ್ಧಾರ್ಥ. ಗ್ರೇಡ್ ೨ ತಹಶೀಲ್ದಾರ್ ಮಾದೇಶ್, ಬಿಇಒ ಸಿ ಎನ್ ರಾಜು, ಪ.ವರ್ಗ ಕಲ್ಯಾಣಾಧಿಕಾರಿ ಮಹೇಶ್, ಪದ್ಮಶ್ರೀ ಪುರಸ್ಕೃತ ಸೋಮಣ್ಣ, ಮಹೇಂದ್ರ ಕುಮಾರ್, ಸಂಪನ್ಮೂಲ ವ್ಯಕ್ತಿಗಳಾದ ಉಮೇಶ್. ಬಿ. ನೂರಲಕುಪ್ಪೆ, ಯು ಎಸ್ ಉನ್ಮೀಲ್, ರಾಜಾ ಹುಣಸೂರು, ಎಡತೊರೆ ಮಹೇಶ್, ರಮೇಶ್ ಕೋಟೆ, ಆದಿವಾಸಿ ಮುಖಂಡರಾದ ನಟರಾಜ್, ಜಿ ಸ್ವಾಮಿ, ಕೆಂಚಯ್ಯ, ವಿಜಯ್ ಕುಮಾರ್, ಸುರೇಶ್, ಚೆನ್ನಬಸಪ್ಪ, ಶಿವಮ್ಮ, ಪ್ರಸನ್ನ, ಆನಂದ, ಶಶಿಕಲಾ, ಸವಿತಾ, ಬಸವರಾಜ್, ಕುಮಾರಿ, ರತ್ನಮ್ಮ, ಪೀಪಲ್ ಟ್ರೀ ಸಂಸ್ಥೆಯ ಜವರೇಗೌಡ, ಸುಮಿತ್ರ, ಲತಾ, ಸಮುದಾಯ ನಾಯಕರಾದ ಮಂಜು, ಮರಿಲಿಂಗಯ್ಯ, ಸಣ್ಣಸ್ವಾಮಿನಾಯ್ಕ, ರೇಖಾ, ಮತ್ತಿತರರು ಹಾಜರಿದ್ದರು.

