Author: editor.udayarashmi@gmail.com

ಟ್ರಾಕ್ಟರ್ ನಲ್ಲಿ ರೈತರ ದಂಡು | ಸರ್ಕಾರದ ವಿರುದ್ಧ ರೈತರ ಗುಡುಗು | ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ಪ್ರತಿಭಟನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಜ್ಯ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಸಾವಿರಾರು ರೈತರು ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ಟ್ರ್ಯಾಕ್ಟರ್ ರ‍್ಯಾಲಿ ನಡೆಸಿದರು.ಸಾವಿರಾರು ಸಂಖ್ಯೆಯಲ್ಲಿ ಬೆಂಗಳೂರು ಹೆದ್ದಾರಿ ರಸ್ತೆಯಲ್ಲಿರುವ ಟೋಲ್ ಕೇಂದ್ರದಲ್ಲಿ ಟ್ರ್ಯಾಕ್ಟರ್‌ಗಳ ಮೂಲಕ ಆಗಮಿಸಿ ಸಮಾವೇಶಗೊಂಡರು. ನೂರಾರು ರೈತರು ಹಸಿರು ಶಲ್ಯ ಧರಿಸಿ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದರು.ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸದ ಸರ್ಕಾರಕ್ಕೆ ಧಿಕ್ಕಾರ, ರೈತ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಎಂಬಿತ್ಯಾದಿ ಫಲಕಗಳನ್ನು ಪ್ರದಶಿಸಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.ಅಕಾಲಿಕ ಮಳೆಯಿಂದಾಗಿ ಹಾನಿಗೀಡಾಗಿರುವ ತೊಗರಿ, ಮೆಕ್ಕೆಜೋಳ, ಉಳ್ಳಾಗಡ್ಡಿ ಬೆಳೆಗಳನ್ನು ಪ್ರದರ್ಶಿಸಿ ಪರಿಹಾರಕ್ಕಾಗಿ ಹಕ್ಕೊತ್ತಾಯ ಮಂಡಿಸಿದರು.ಇನ್ನೂ ಹಲವಾರು ಕಡೆ ಸೂಕ್ತ ಬೆಲೆ ನಿಗದಿ ಮಾಡದ ಹಿನ್ನೆಲೆಯಲ್ಲಿ ಈರುಳ್ಳಿ ಸೇರಿದಂತೆ ಅನೇಕ ಬೆಳೆಗಳನ್ನು ಸುರುವಿ ಆಕ್ರೋಶ ಹೊರಹಾಕಿದರು.ಕೇವಲ ಪ್ರತಿಭಟನೆಗೆ ಸೀಮಿತವಾದ ಟ್ರ್ಯಾಕ್ಟರ್…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಉತ್ತಮ ಸಂವಹನ ಕಲೆಯೇ ಯಶಸ್ಸಿನ ಮೆಟ್ಟಿಲು. ಯಾವ ವ್ಯಕ್ತಿ ಕಮ್ಯೂನಿಕೇಶನ್ ಸ್ಕಿಲ್‌ನ್ನು ಹೊಂದಿರುತ್ತಾನೋ, ಆ ವ್ಯಕ್ತಿ ಜೀವನದಲ್ಲಿ ಯಶಸ್ಸು ಸಾಧಿಸುತ್ತಾನೆ. ಅದಕ್ಕೆ ನಮ್ಮ ಹಿರಿಯರು “ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲವೆಂದು” ಹೇಳಿದ್ದಾರೆ. ಹಾಗಾಗಿ ರಾಜ್ಯಾದ್ಯಾಂತ ಮಕ್ಕಳ ದಿನಾಚರಣೆ ಅಂಗವಾಗಿ ಕರ್ನಾಟಕ ಬಾಲವಿಕಾಸ ಅಕಾಡೆಮಿಯು ಆಯೋಜಿಸಿದ್ದ ಜಿಲ್ಲಾಮಟ್ಟದಲ್ಲಿ ಆಯ್ಕೆಗೊಂಡು ರಾಜ್ಯಮಟ್ಟದ ಸ್ಪರ್ಧೆಗೆ ಆಗಮಿಸಿದ್ದ, “ನವ ಭಾರತದ ನಿರ್ಮಾಣದಲ್ಲಿ ಪಂಡಿತ ಜವಾಹರಲಾಲ ನೆಹರೂಜಿ ಯವರ ಕೊಡುಗೆ” ಕುರಿತು ರಾಜ್ಯ ಮಟ್ಟದ ಭಾಷಣ ಸ್ಪರ್ಧೆಗೆ ಆಗಮಿಸಿರುವ ೩೧ ಜಿಲ್ಲೆಯ ಮಕ್ಕಳು ಅತ್ಯೋತ್ತಮ ಮಾತಿನ ಕೌಶಲ್ಯವನ್ನು ಹೊಂದಿದ್ದು, ನೀವು ಜೀವನದಲ್ಲಿ ಯಶಸ್ಸು ಪಡೆಯುವುದರಲ್ಲಿ ಸಂದೇಹವೇ ಇಲ್ಲವೆಂದು ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಸಂಗಮೇಶ ಬಬಲೇಶ್ವರ ಹೇಳಿದರು.ಅವರು ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಸಭಾವನದಲ್ಲಿ ಆಯೋಜಿಸಿದ ಪ್ರಾಥಮಿಕ / ಪ್ರೌಢ ಹಾಗೂ ಪದವಿ ಪೂರ್ವ ವಿಭಾಗಗಳ ರಾಜ್ಯಮಟ್ಟದ ಭಾಷಣ ಸ್ಪರ್ಧೆಯ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ನಂತರ ಪ್ರಶಸ್ತಿ ವಿತರಿಸಿ ಅವರು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇಂಗ್ಲಿಷ್ ಅನುವಾದ ತುಂಬಾ ಕಷ್ಟಕರ ಕೆಲಸ. ಡಾ. ಯಲಿಗಾರ ಅವರು ಕೇವಲ ವಚನಗಳನ್ನು ಅಷ್ಟೇ ಅಲ್ಲದೆ, ಸಮಗ್ರ ಕನ್ನಡ ಸಾಹಿತ್ಯವನ್ನು ಇಂಗ್ಲಿಷ್ ಭಾಷೆಗೆ ಭಾಷಾಂತರಿಸಿ ಇನ್ನಷ್ಟು ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಲಿ ಎಂದು ಪೋಲಿಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ಹೇಳಿದರು.ಬುಧವಾರ ಸಂಜೆ ನಗರದಲ್ಲಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಶ್ರೀ ಬಸವರಾಜ ಎಲಿಗಾರ್ ಇವರಿಗೆ ಸಾಹಿತ್ಯ ಮತ್ತು ಸಾರ್ವಜನಿಕ ಸೇವೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ನಾವು ಹೀಗೆಲ್ಲ ಮಹಿಳಾ ಸಮಾನತೆ ಬಗ್ಗೆ ಮಾತನಾಡುತ್ತಿದ್ದೇವೆ. 12ನೇ ಶತಮಾನದಲ್ಲಿ ಮಹಿಳೆಯರಿಗೆ ಸೂಕ್ತ ಸ್ಥಾನಮಾನ ಕೊಟ್ಟು ಲಿಂಗ ತಾರತಮ್ಯತೆಯನ್ನು ಹೋಗಲಾಡಿಸಿದವರು ಬಸವಣ್ಣನವರು ಎಂದು ಹೇಳಿದರು.ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ಡಿವೈಎಸ್ಪಿ ಬಸವರಾಜ ಯಲಿಗಾರ ಅವರು, ನಿಮ್ಮ ಸನ್ಮಾನಕ್ಕೆ ನಾನು ಯಾವತ್ತಿಗೂ ತಾವು ನನ್ನ ಮೇಲೆ ಇಟ್ಟರುವ ಪ್ರೀತಿ ವಿಶ್ವಾಸ ಅಭಿಮಾನಕ್ಕೆ ಚಿರಋಣಿ. ಇಂಥ ಮಹತ್ವ ಕಾರ್ಯವನ್ನು ನನ್ನ ಕೈಯಿಂದ ಬಸವಣ್ಣ ಮಾಡಿಸಿದ್ದಾನೆ, ಇದರಲ್ಲಿ ನನ್ನದೇನು ದೊಡ್ಡ ಪಾತ್ರವಿಲ್ಲ…

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ಪಟ್ಟಣದ ಸರ್ವೇ ನಂ.132 ಕ್ಷೇತ್ರ-31 ಗುಂಟೆ ಜಾಗೆಯಲ್ಲಿ ಕೆಲ ಖಾಸಗಿ ವ್ಯಕ್ತಿಗಳು ಅತಿಕ್ರಮಣ ಮಾಡಿರುವುದು ಕಂಡು ಬಂದಿದ್ದು, ಅತಿಕ್ರಮಣ ತೆರವುಗೊಳಿಸಿ, ಈ ಜಾಗೆಯನ್ನು ಪ.ಪಂ.ಗೆ ನೀಡಬೇಕು ಎಂದು ಪ.ಪಂ. ಸದಸ್ಯರು ಗುರುವಾರ ತಹಶೀಲದಾರರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಪ.ಪಂ. ಅಧ್ಯಕ್ಷ ಮಲ್ಲಿಕಾರ್ಜುನ ಧೊತ್ರೆ ಮಾತನಾಡಿ, ಪಟ್ಟಣದ ಇಂಡಿ ಮುಖ್ಯ ರಾಜ್ಯ ಹೆದ್ದಾರಿಗೆ ಹೊಂದಿಕೊಂಡು ಇರುವ ಸ.ನಂ. 132 ರಲ್ಲಿ ಇರುವ ಕ್ಷೇತ್ರ-31 ಗುಂಟೆ ಜಾಗೆ ಸುಮಾರು ಕೋಟ್ಯಾಂತರ ರೂ. ಸಧ್ಯ ಮಾರುಕಟ್ಟೆ ಬೆಲೆ ಹೊಂದಿದ್ದು, ಈ ಜಾಗೆಯಲ್ಲಿ ಕೆಲ ಖಾಸಗಿ ವ್ಯಕ್ತಿಗಳು ರಸ್ತೆ ನಿರ್ಮಿಸಿ ಅತಿಕ್ರಮಣ ಮಾಡಿಕೊಂಡಿದ್ದಾರೆ. ಈ ಜಾಗೆ ಕಂದಾಯ ಇಲಾಖೆಗೆ ಸಂಬಂಧಪಟ್ಟಿದ್ದು, ಅಲ್ಲಿ ನಾಮಫಲಕ ಕೂಡ ಅಳವಡಿಸಲಾಗಿದೆ. ಆದರೂ ಕೂಡ ಕೆಲ ಖಾಸಗಿ ಪ್ರಭಾವಿ ವ್ಯಕ್ತಿಗಳು ಜಾಗೆಯನ್ನು ಅತಿಕ್ರಮಣ ಮಾಡಿ ಮುಖ್ಯ ಇಂಡಿ ರಾಜ್ಯ ಹೆದ್ದಾರಿಗೆ ಕೂಡುವಂತೆ ರಸ್ತೆ ನಿರ್ಮಿಸಿದ್ದಾರೆ ಎಂದು ಹೇಳಿದ ಅವರು, ತಹಶೀಲದಾರರು ಸದರಿ ಜಾಗೆಯನ್ನು ಪರಿಶೀಲನೆ ಮಾಡಿ, ಇದರ ಹದ್ದು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದಲ್ಲಿ ಡಿಸೆಂಬರ್ 7 ರಂದು ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್ -2025 ಗೆ ವಿಜಯಪುರ ಹೊಟೇಲ್ ಅಸೋಸಿಯೇಶನ್ ರೂ.1.50 ಲಕ್ಷ ದೇಣಿಗೆ ನೀಡಿದ್ದಾರೆ.ಗುರುವಾರ ನಗರದಲ್ಲಿ ರನ್ ಕಮಿಟಿಯ ಪದಾಧಿಕಾರಿಗಳನ್ನು ಭೇಟಿಯಾದ ಅಸೋಸಿಯೇಶನ್ ಅಧ್ಯಕ್ಷ ಚಂದ್ರಕಾಂತ ಶೆಟ್ಟಿ, ಮಾಜಿ ಉಪಮೇಯರ ದಿನೇಶ ಹಳ್ಳಿ, ನಾಗರಾಜ ಇಜೇರಿ, ರವಿ ಗಚ್ಚಿನಕಟ್ಟಿ, ಶುಭಂ ಶಿಂಧೆ, ಸಿದ್ದು ಚಿಕ್ಕೊಡಿ ಹಾಗೂ ವಿ.ಎಂ.ಗೌಡರ ದೇಣಿಗೆ ಚೆಕ್ ನೀಡಿದರು.ಈ ಸಂದರ್ಭದಲ್ಲಿ ರನ್ ಕಮಿಟಿಯ ಸಂತೋಷ ಔರಸಂಗ, ವೀರೇಂದ್ರ ಗುಚ್ಚಟ್ಟಿ, ಶಿವನಗೌಡ ಪಾಟೀಲ, ಸೋಮಶೇಖರ ಸ್ವಾಮಿ, ಸಿದ್ದು ನಾಯ್ಕೊಡಿ, ಶ್ರೀಕಾಂತ ಅಂಗಡಿ ಮುಂತಾದವರು ಉಪಸ್ಥಿತರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದಲ್ಲಿ ಡಿಸೆಂಬರ್ 7 ರಂದು ರವಿವಾರ ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್-2025 ಓಟದಲ್ಲಿ ಪಾಲ್ಗೊಳ್ಳಲಿರುವ ಕ್ರೀಡಾಪಟುಗಳು ಓಡಲಿರುವ ಮಾರ್ಗ ಮತ್ತು ಓಟ ಪ್ರಾರಂಭವಾಗಲಿರುವ ಸ್ಥಳ, ಸಮಯ ಮತ್ತೀತರ ಮಾಹಿತಿಯನ್ನು ರನ್ ಕೋರ್ ಕಮಿಟಿ ಪ್ರಕಟಿಸಿದೆ.ಬೆಳಿಗ್ಗೆ 5.30 ರಿಂದಲೇ ನಗರದಲ್ಲಿ ಓಟ ನಡೆಯುವ ಮಾರ್ಗದಲ್ಲಿ ಝಿರೋ ಟ್ರಾಫಿಕ್ ವ್ಯವಸ್ಥೆ ಇರುವುದರಿಂದ ಎಲ್ಲ ವಿಭಾಗಗಳ ಕ್ರೀಡಾಪಟುಗಳು ನಸುಕಿನ ಜಾವ 5.30 ಗಂಟೆಯೊಳಗೆ ಕ್ರೀಡಾಂಗಣಕ್ಕೆ ಆಗಮಿಸಬೇಕು ಎಂದು ಸಂಘಟಕರು ಮನವಿ ಮಾಡಿದ್ದಾರೆ.ಒಟ್ಟು 18 ಕಡೆಗಳಲ್ಲಿ ಓಟಗಾರರಿಗೆ ಪುನಶ್ಚೇತನ ಹೊಂದಲು ಹೈಡ್ರೇಶನ್ ಪಾಯಿಂಟ್ ಗಳ ವ್ಯವಸ್ಥೆ ಮಾಡಲಾಗಿದೆ. ರೇಸ್, ರೂಟ್ ಮ್ಯಾಪ್, ಹೈಡ್ರೇಶನ್ ಪಾಯಿಂಟ್ಸ್ ಗಳಿಗಾಗಿ ಈಗಾಗಲೇ ಆಯಾ ಸಮಿತಿಯು ಈಗಾಗಲೇ ಎಲ್ಲ ಸಿದ್ಧತೆಗಳನ್ನು ಮಾಡಿದೆ.ವಿಭಾಗವಾರು ಓಟಗಳು ಪ್ರಾರಂಭವಾಗುವ ಸಮಯ, ಸಾಗುವ ಮಾರ್ಗ, ಮುಕ್ತಾಯದ ರೂಟ್ ಮಾಹಿತಿ ಇಲ್ಲಿದೆ.21 ಕಿ. ಮೀ. ಓಟ, ಪ್ರಾರಂಭ ಸಮಯ ಬೆಳಿಗ್ಗೆ 6 ಗಂಟೆಗೆಓಟ ಪ್ರಾರಂಭ ಸ್ಥಳ- ಭಾರತರತ್ನ ಡಾ. ಬಿ. ಆರ್. ಅಂಬೇಡ್ಕರ್ ಕ್ರೀಡಾಂಗಣದಿಂದ ಪ್ರಾರಂಭ.…

Read More

ಲೇಖನ- ಸುಧಾ ಪಾಟೀಲ (ಬೆಳಗಾವಿ)ವಿಶ್ವಸ್ಥರುಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರಪುಣೆ ಉದಯರಶ್ಮಿ ದಿನಪತ್ರಿಕೆ ಕನ್ನಡ ಸಾಹಿತ್ಯದಲ್ಲಿ ಹಲವಾರು ಪ್ರಸಿದ್ದ ಮಹಿಳಾ ಸಾಹಿತಿಗಳಿದ್ದಾರೆ. ಇದರಲ್ಲಿ ಅಕ್ಕಮಹಾದೇವಿ ಅವರು ಕನ್ನಡದ ಮೊದಲ ಕವಯಿತ್ರಿ.ಅಕ್ಕಮಹಾದೇವಿ ಹನ್ನೆರಡನೆಯ ಶತಮಾನದ ಪ್ರಸಿದ್ಧ ವಚನಕಾರ್ತಿ. ಅಕ್ಕಮಹಾದೇವಿ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಉಡುತಡಿಯವರು. ಬಾಲ್ಯದಿಂದಲೇ ಶಿವನಲ್ಲಿ ಅಪಾರವಾದ ಭಕ್ತಿಯಿದ್ದ ಮಹಾದೇವಿಯಕ್ಕ ಕೌಶಿಕನೆಂಬ ರಾಜನೊಡನೆ ಆಗುತ್ತಿರುವ ಬಲವಂತದ ವಿವಾಹವನ್ನು ತೊರೆದು ಕಲ್ಯಾಣಕ್ಕೆ ಸಾಗುತ್ತಾರೆ. ಶರಣರೊಂದಿಗೆ ಆಧ್ಯಾತ್ಮಿಕ ಚರ್ಚೆಯಲ್ಲಿ ಪಾಲ್ಗೊಂಡು, ಎಲ್ಲ ಶರಣರ ಜೊತೆ ಕೂಡಿ ಇನ್ನಷ್ಟು ಪರಿಣಾಮಕಾರಿಯಾದ ವಚನ ಗಳನ್ನು ರಚಿಸಿ, ವಚನ ಸಾಹಿತ್ಯಕ್ಕೆ ತಮ್ಮದೇ ಆದ ಅಮೂಲ್ಯವಾದ ಕೊಡುಗೆಯನ್ನು ಕೊಟ್ಟು ನಂತರ ಶ್ರೀಶೈಲದ ಕದಳಿ ವನದಲ್ಲಿ ಐಕ್ಯರಾದರೆಂದು ಐತಿಹ್ಯ.ಅಕ್ಕಮಹಾದೇವಿ ಎಲ್ಲರಂತೆ ಜನಿಸಿದರೂ ಎಲ್ಲರಂತೆ ಬೆಳೆಯಲಿಲ್ಲ, ಎಲ್ಲರಂತೆ ಬಾಳಲಿಲ್ಲ. ಅಸಾಮಾನ್ಯರಂತೆ ಬೆಳೆದು ಪರಿಪೂರ್ಣಳಂತೆ ಬದುಕಿದರು. ಅಕ್ಕಮಹಾದೇವಿ ಒಟ್ಟು ಜೀವಿಸಿದುದು ಕೇವಲ ಇಪ್ಪತ್ತು ವರ್ಷ ಮಾತ್ರವಾದರೂ 2000 ವರ್ಷಗಳಲ್ಲಿ ಸಾಧಿಸಲಾರದುದನ್ನು ಸಾಧಿಸಿ “ಅದೇನು ಹೆಣ್ಣೋ ಜಗದ ಕಣ್ಣೋ” ಎಂಬಂತೆ ಮಿಂಚಿ -ಕೋರೈಸಿ ಕಣ್ಮರೆಯಾದರು.ಶರಣರ…

Read More

ಲೇಖನ- ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)ಉಪನ್ಯಾಸಕರುವಿಜಯಪುರ ಉದಯರಶ್ಮಿ ದಿನಪತ್ರಿಕೆ ಹೋವಾರ್ಡ ವಾರನ್ ಬಫೆಟ್ ಅವರು “ಮಣ್ಣು ಜೀವಂತ ಪರಿಸರ ವ್ಯವಸ್ಥೆಯಾಗಿದೆ ಮತ್ತು ಇದು ರೈತರ ಅತ್ಯಂತ ಅಮೂಲ್ಯ ಆಸ್ತಿಯಾಗಿದೆ. ರೈತನ ಉತ್ಪಾದಕ ಸಾಮರ್ಥ್ಯವು ಅವನ ಅಥವಾ ಅವಳ ಮಣ್ಣಿನ ಆರೋಗ್ಯಕ್ಕೆ ನೇರವಾಗಿ ಸಂಬಂಧಿಸಿದೆ ಎಂದು ಹೇಳಿರುವದು ನೂರಕ್ಕೆ ನೂರರಷ್ಟು ಸತ್ಯವಾದ ಮಾತು. ಮಣ್ಣು ಎಂಬುದು ಭೂಮಿಯ ಮೇಲಿರುವ ಘನ, ದ್ರವ ಮತ್ತು ಅನಿಲ ರೂಪದ ವಸ್ತುಗಳಿಂದ ಕೂಡಿರುವ ಸಂಕೀರ್ಣವಾದ ವ್ಯವಸ್ಥೆಯಾಗಿದೆ. ಸಸ್ಯಗಳ ಬೆಳವಣಿಗೆಗೆ ನೆರವು ನೀಡುವ ಈ ಮಣ್ಣು ಜಗತ್ತಿನ ಆಹಾರ ಭದ್ರತೆಗೆ ತನ್ನದೇ ಆದ ಮಹತ್ತರವಾದ ಕೊಡುಗೆ ನೀಡುತ್ತಿದೆ. ಅದಕ್ಕೆ ಮಣ್ಣು ಎಂದರೆ ಭೂ ತಾಯಿ ಅಥವಾ ಭೂ ಮಾತೆ ಎಂತಲೂ ಕರೆಯುತ್ತಾರೆ. ಮಣ್ಣಿಲ್ಲದೇ ಜೀವ ಸಂಕುಲವೇ ಇಲ್ಲ ಎಂದರೆ ತಪ್ಪಾಗಲಾರದು.ನಮ್ಮ ಬದುಕಿನ ಎಲ್ಲ ಸ್ತರಗಳಲ್ಲೂ ಅತಿ ಅಗತ್ಯ ಹಾಗೂ ಪೂರಕವಾಗಿರುವ ಮಣ್ಣು ಇಂದು ವಿವಿಧ ಪ್ರಕಾರದ ಮಾಲಿನ್ಯಗಳಿಂದಾಗಿ ಕಲುಷಿತಗೊಳ್ಳುತ್ತಿದೆ. ಅದರಲ್ಲಿರುವ ಗುಣಮಟ್ಟ, ಪೋಷಕಾಂಶಗಳು ಮತ್ತು ಫಲವತ್ತತೆಯ ಮಟ್ಟ ಕಡಿಮೆಯಾಗುತ್ತಿದೆ.…

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ದೈಹಿಕವಾಗಿ ಶೇ. 75ರಷ್ಟು ಅಸಮರ್ಥತೆ ಇದ್ದವರೂ ಇಂದು ಉನ್ನತ ಸಾಧನೆಯ ಶಿಖರವನ್ನೇರಿದ್ದಾರೆ. ಅಂತಹ ಮಹಾನ್ ಸಾಧಕರ ಆದರ್ಶಗಳನ್ನು ವಿಕಲಚೇತನರು ಪಾಲಿಸುವಂತೆ ವಿಶೇಷ ಚೇತನ ಮಕ್ಕಳ ತಾಲೂಕಾ ಸಂಪನ್ಮೂಲ ವ್ಯಕ್ತಿ ಗುರವ ಹೇಳಿದರು.ನಿವರಗಿ ಗ್ರಾಮದ ಕೆಜಿಎಸ್, ಎಚ್ ಪಿ ಎಸ್ ಹಾಗೂ ಸಮೂಹ ಸಂಪನ್ಮೂಲ ಕೇಂದ್ರ ನಿವರಗಿ ಇವರ ಸಂಯುಕ್ತ ಆಶ್ರಯದಲ್ಲಿ ಕೆ.ಜಿ.ಎಸ್. ನಿವರಗಿ ಶಾಲಾ ಆವರಣದಲ್ಲಿ ಬುಧವಾರ ಹಮ್ಮಿಕೊಳ್ಳಲಾದ ವಿಶ್ವ ವಿಶೇಷ ಚೇತನರ ದಿನಾಚರಣೆಯಲ್ಲಿ ಅವರು ಮಾತನಾಡಿದರು.ವಿಶೇಷ ಚೇತನರನ್ನು ಮುಖ್ಯ ವಾಹಿನಿಗೆ ಸೇರಿಸುವ ಕುರಿತು ಜನ ಜಾಗೃತಿ ಮೂಡಿಸಬೇಕು ಅವರು ಕೂಡ ನಮ್ಮಂತೆ ಪ್ರತಿಯೊಂದರಲ್ಲಿ ಭಾಗವಹಿಸುವಂತೆ ತಿಳಿಸಿಕೊಟ್ಟರು.ಮುಖ್ಯ ಗುರು ಸುನಿಲ ಎಳಮೇಲಿ ಮಾತನಾಡಿ, ವಿದ್ಯಾರ್ಥಿಗಳಿಗೆ ಕಲಿಕೆ ಮತ್ತು ಸಹಪಠ್ಯ ಚಟುವಟಿಕೆಗಳಲ್ಲಿ ಸಮಾನ ಅವಕಾಶ ಕಲ್ಪಿಸಿ ಅವರು ಹಿಂಜರಿಯದಂತೆ ಮನವಲಿಸಿ ಪ್ರತಿ ರಂಗದಲ್ಲಿಯೂ ಮುನ್ನುಗ್ಗುವಂತೆ ನಾವೆಲ್ಲರೂ ನೋಡಿಕೊಳ್ಳಬೇಕೆಂದು ಕರೆಕೊಟ್ಟರು.ಪ್ರಾಸ್ತಾವಿಕವಾಗಿ ಸಿ.ಆರ್.ಪಿ ಪ್ರಕಾಶ್ ತಳವಾರ ಮಾತನಾಡಿದರು.ರಾಜು ಜಂಬಗಿ ಸ್ವಾಗತಿಸಿದರು, ಪ್ರಾರ್ಥನೆಯನ್ನು ಮಹದೇವ್ ಕಾಂಬಳೆ ಅತಿಥಿ ಶಿಕ್ಷಕರು ನಡೆಸಿಕೊಟ್ಟರು ವಂದನಾರ್ಪಣೆಯನ್ನು ಮುಖ್ಯ…

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ಪಟ್ಟಣದ ಶಿವಾಜಿನಗರದಲ್ಲಿ ಮೊಹಮ್ಮದ್ ಮಾಜ್ ಎಂಬ ಪುಟ್ಟ ಬಾಲಕನನ್ನು ಯಾರೋ ದುಷ್ಕರ್ಮಿಗಳು ಮನೆಯಂಗಳದಿಂದ ಬುಧವಾರ ಬೆಳಗಿನ ಜಾವ ಅಪಹರಿಸಿದ ಘಟನೆ ನಡೆದಿದೆ.ಅಪಹರಣಕ್ಕೀಡಾದ ಬಾಲಕ ವಿದ್ಯಾನಗರದ ನವಗ್ರಹ ಹತ್ತಿರ ವೆಲ್ಡಿಂಗ್ ಶಾಪ್ ನಡೆಸುತ್ತಿರುವ ಚಾಂದ ಶೇಕ್ ಅವರ ಪುತ್ರನೆಂದು ತಿಳಿದು ಬಂದಿದೆ. ಪ್ರತ್ಯಕ್ಷದರ್ಶಿಗಳು ಹೇಳುವಂತೆ ಮಗು ಮನೆಯ ಮುಂದೆ ಆಟವಾಡುತ್ತಿದ್ದಾಗ ನೀಲಿ ಸೀರೆಯಲ್ಲಿ ಬಂದ ಇಳಿವಯಸ್ಸಿನ ಹೆಣ್ಣುಮಗಳು ಮಗುವನ್ನು ಅಪಹರಣ ಮಾಡಿದ್ದಾರೆ ಎಂದು ತಿಳಿದುಬಂದಿದೆ.ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ನಾಗರಿಕರು ವ್ಯಾಪಕ ಶೋಧ ನಡೆಸಿ, ಸ್ಥಳೀಯ ಶ್ರೀ ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ಅಪರಿಚಿತ ಮಹಿಳೆ ಮಗುವನ್ನು ಆಟವಾಡಿಸುತ್ತಿದ್ದುದು ತಿಳಿದು ಬಂದ ತಕ್ಷಣ ಪೊಲೀಸರು ಅಲ್ಲಿಗೆ ತೆರಳಿ ಅಪರಿಚಿತ ಮಹಿಳೆಯಿಂದ ಮಗುವನ್ನು ಸುರಕ್ಷಿತವಾಗಿ ಪಾಲಕರಿಗೆ ಒಪ್ಪಿಸಿದ್ದಾರೆ.ಮಗುವನ್ನು ಅಪಹರಿಸಿದ ಮಹಿಳೆಯನ್ನು ಠಾಣೆಗೆ ತಂದು ವಿಚಾರಿಸಿದಾಗ ಆ ಮಹಿಳೆ ಮಾನಸಿಕ ಅಸ್ವಸ್ಥೆ ಎಂದು ಪೊಲೀಸ ಮೂಲಗಳಿಂದ ತಿಳಿದು ಬಂದಿದೆ.

Read More