Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಲೇಖನ- ಮನು ಪತ್ತಾರಕಲಕೇರಿವಿಜಯಪುರ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಈ ರಾಷ್ಟ್ರವನ್ನು ಕಟ್ಟುವಲ್ಲಿ ಅಹರ್ನಿಶಿ ಯಾಗಿ ದುಡಿದ ಮಹನೀಯರಲ್ಲಿ ಬಾಬು ಜಗಜೀವನ್ ರಾಮ್ ರು ಕೂಡಾ ಒಬ್ಬರು, ” ಪ್ರಾಚೀನ ಭಾರತದ ಜನ ತಾಂತ್ರಿಕ ವ್ಯವಸ್ಥೆಯ ತೊಟ್ಟಿಲು” ಎಂದೇ ಕರೆಯಲಾಗುವ ಬಿಹಾರ ರಾಜ್ಯದ ಶಾಹಬಾದ್ ಜಿಲ್ಲೆಯ ಚಂದ್ವಾ ಎಂಬ ಪುಟ್ಟ ಗ್ರಾಮದಲ್ಲಿ ಚಮ್ಮಾರ ಕುಲದ ಶೋಭಿರಾಮ ಮತ್ತು ವಸಂತದೇವಿ ಯವರ ಐದನೇಯ ಮಗನಾಗಿ 1908 ಏಪ್ರಿಲ್ 5 ರಂದು ಜನಿಸಿದ ಜಗಜೀವನರಾಂ, ಭಾರತೀಯ ಶ್ರೇಣೀಕೃತ ಸಮಾಜದ ವ್ಯವಸ್ಥೆಯನ್ನು ಪ್ರಶ್ನಿಸುವ ಮೂಲಕ ಅಲಕ್ಷಿತ ಸಮುದಾಯಗಳನ್ನು ಹೊಸ ಮನ್ವಂತರದ ಕಡೆಗೆ ತೆಗೆದುಕೊಂಡು ಹೋದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಹತ್ತೊಂಬತ್ತನೆಯ ಶತಮಾನದ ಆರಂಭದಲ್ಲಿ ಅಲಕ್ಷಿತ ಜನರಿಗೆ ಗಗನ ಕುಸುಮವಾದ ಶಿಕ್ಷಣವನ್ನು ಪಡೆಯಲೇ ಬೇಕೆಂದು ಪಣ ತೊಟ್ಟು ಹಠ ಯೋಗಿಯಂತೆ ದಾಪುಗಾಲು ಹಾಕಿದ ಜಗಜೀವನ್ ರಾಮ್, ತಂದೆ ಶೋಭಿರಾಮ ತಾಯಿ ವಸಂತದೇವಿ ಯವರ ಆದರ್ಶಗಳನ್ನು ಮೈಗೂಡಿಸಿಕೊಂಡವರು, ಶಿವನಾರಾಯಣ ಸಚೇತನ ಪಂತದ ಅನುಯಾಯಿಗಳಾದ ತಂದೆತಾಯಿಯವರು ರಾಮ್ ಅವರಿಗೆ ಬಾಲ್ಯಾವಸ್ಥೆಯಲ್ಲಿಯೇ ಧಾರ್ಮಿಕ, ಆಧ್ಯಾತ್ಮಿಕಯಲ್ಲಿ ಒಲವು…
ಉದಯರಶ್ಮಿ ದಿನಪತ್ರಿಕೆ ಅಥಣಿ: ತಾಲೂಕಿನ ಹುಳುಗಬಾಳ ಗ್ರಾಮದ ಉಜ್ವಲಾ ಸಾಂಗ್ಲಿ ಅವರು ಕೆನರಾ ಬ್ಯಾಂಕಿನಲ್ಲಿ ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ ಮಾಡಿಸಿದರು ವರ್ಷಕ್ಕೆ 436 ರೂಪಾಯಿ ಹಣವನ್ನು ಈ ಯೋಜನೆಯಲ್ಲಿ ತೊಡಗಿಸಿದ್ದು ಇವರು ಅನಾರೋಗ್ಯದಿಂದ ಮರಣ ಹೊಂದಿದ್ದು ಇವರ ನಾಮಿನಿಯಾದ ಕುಮಾರ ಮಹಾವೀರ ಸಾಂಗ್ಲಿ ಇವರಿಗೆ 2, ಲಕ್ಷ ರೂಪಾಯಿ ಪರಿಹಾರ ವಿತರಿಸಿದರು.ಈ ವೇಳೆ ಕೇನರಾ ಬ್ಯಾಂಕ್ ಚೀಫ್ ಮಾನೇಜರ ಪ್ರೌನ್ ಜಾನ ಮಾತನಾಡಿ ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಯಾವುದೇ ಕಾರಣದಿಂದಾಗಿ ಮರಣ ಹೊಂದಿದವರಿಗೆ ಜೀವ ವಿಮಾ ರಕ್ಷಣೆಯನ್ನು ನೀಡುವ ವಿಮಾ ಯೋಜನೆಯಾಗಿದ್ದು ಇದು ಒಂದು ವರ್ಷದ ಕವರೇಜ್ ಆಗಿದ್ದು, ವರ್ಷದಿಂದ ವರ್ಷಕ್ಕೆ ನವೀಕರಿಸಬಹುದಾಗಿದೆ ಈ ಯೋಜನೆಯನ್ನು ಬ್ಯಾಂಕು ಅಥವಾ ಅಂಚೆ ಕಚೇರಿಗಳು ನೀಡುತ್ತವೆ ಮತ್ತು ಜೀವ ವಿಮಾ ಕಂಪನಿಗಳ ಮೂಲಕ ನಿರ್ವಹಿಸಲ್ಪಡುತ್ತವೆ 18 ರಿಂದ 50 ವರ್ಷ ವಯಸ್ಸಿನ ಭಾಗವಹಿಸುವ ಬ್ಯಾಂಕುಗಳು ಅಥವಾ ಅಂಚೆ ಕಚೇರಿಯ ಖಾತೆದಾರರಾಗಿರುವ ಎಲ್ಲಾ ವ್ಯಕ್ತಿಗಳು ಸೇರಲು ಅರ್ಹರಾಗಿರುತ್ತಾರೆಂದು…
ಉದಯರಶ್ಮಿ ದಿನಪತ್ರಿಕೆ ದಾವಣಗೆರೆ 4. ಮೀಸಲಾತಿ ಸೌಲಭ್ಯಗಳಿಂದ ಲಿಂಗಾಯತ ಬಡಮಕ್ಕಳು ವಂಚಿತರಾಗಿದ್ದು, ಸಾಮಾನ್ಯ ಲಿಂಗಾಯತರಿಗೆ ಸರ್ಕಾರದ ಎಲ್ಲ ಸೌಲಭ್ಯಗಳು ದೊರೆಯುವ ನಿಟ್ಟಿನಲ್ಲಿ ವಿರಕ್ತ ಮಠಾಧೀಶರು ಮತ್ತು ಪಂಚಪೀಠಾಧೀಶರರು ವಿವಿಧ ರಾಜಕೀಯ ಪಕ್ಷಗಳ ಒಕ್ಕೂಟ ಕಾಮನ್ ಮಿನಿಮಮ್ ಪ್ರೋಗ್ರಾಂ ರೀತಿಯಲ್ಲಿ ಸಮಾಜದ ಒಕ್ಕೂಟ್ಟು ಮತ್ತು ಏಳ್ಗಿಗಾಗಿ ಅದರನಗುಣವಾಗಿ ಮುನ್ನಡೆಯುವ ಅಗತ್ಯತೆ ಇದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಹೇಳಿದರು.ದಾವಣಗೆರೆ ದೊಡ್ಡಪೇಟೆ ವಿರಕ್ತಮಠದಲ್ಲಿ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದಾವಣಗೆರೆಯಲ್ಲಿ ನಡೆದ ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧಿವೇಶನದಲ್ಲಿ ಶಾಮನೂರು ಶಿವಶಂಕರಪ್ಪನವರ ಆಶಯದಂತೆ ಕೈಗೊಂಡ ನಿರ್ಣಯ ಐತಿಹಾಸಿಕವಾಗಿದೆ. ಈ ನಿರ್ಣಯ ಇಡೀ ನಮ್ಮ ಧರ್ಮದ ಅಸ್ಮೀತೆಯಾಗಿದೆ. ಅವರಿಗೆ ನಾವೂ ಋಣಿಯಾಗಿರಬೇಕು. ಆ ನಿಟ್ಟಿನಲ್ಲಿ ಶಾಮನೂರು ಶಿವಶಂಕರಪ್ಪನವರನ್ನು ಸದಾ ಸ್ಮರಿಸುವ, ಗೌರವಿಸುವ ಕಾರ್ಯವನ್ನು ಎಲ್ಲ ಬಾಂಧವರು ಈ ಉಪಚುನಾವಣೆಯಲ್ಲಿ ಅವರ ಮೊಮ್ಮಗ ಸಮರ್ಥರನ್ನು ಗೆಲ್ಲಿಸುವ ಮೂಲಕ ಋಣ ತೀರಿಸಬೇಕು ಎಂದರು.ಕನ್ನಡದ ಮೊದಲ ಕವಿಯತ್ರಿ ಅಕ್ಕಮಹಾದೇವಿ. ಇಡೀ ಸ್ತ್ರೀ ಕುಲದ ಸಂಕೇತ.…
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಇಂದಿನ ಸಮಾಜದಲ್ಲಿ ಬಹಳಷ್ಟು ಜನ ಅಂಗವಿಕಲತೆಯಿಂದ ಬಳಲುತ್ತಿದ್ದಾರೆ ಅಂತವರು ಅಂಗವಿಕಲತೆಯನ್ನು ಮೆಟ್ಟಿ ನಿಲ್ಲಬೇಕು. ಅಂಗವಿಕಲತೆ ಎನ್ನುವುದು ಶಾಪವಲ್ಲ ಅದನ್ನು ವರವಾಗಿ ಮಾಡಿಕೊಳ್ಳುವಂತಹ ಕಲೆಯನ್ನು ಎಲ್ಲರು ಬೆಳೆಸಿಕೊಳ್ಳಬೇಕು ಎಂದು ಮಾನವ ಕಂಪ್ಯೂಟರ್ ಎಂದೇ ಖ್ಯಾತರಾದ ಬಸವರಾಜ ಉಮರಾಣಿ ಹೇಳಿದರು.ಅವರು ಪ್ರತಿಷ್ಠಿತ ಬಿ ಎಲ್ ಡಿ ಇ ಶಿಕ್ಷಣ ಮಹಾವಿದ್ಯಾಲಯ (ಬಿ.ಇಡಿ) ಜಮಖಂಡಿಯಲ್ಲಿ ಶನಿವಾರ ಪ್ರಶಿಕ್ಷಣಾರ್ಥಿಗಳನ್ನು ಉದ್ದೇಶಿಸಿ ಪ್ರೋತ್ಸಾಹದಾಯಕ ಮಾತುಗಳನ್ನು ಹೇಳಿ ಮಾರ್ಗದರ್ಶನ ಮಾಡಿದರು.ಇಂದು ಬಹಳಷ್ಟು ಜನ ನಾಟಕೀಯವಾಗಿ ಯಾವುದಾದರೂ ಒಂದು ನ್ಯೂನತೆ ಇದ್ದರೆ ಅದನ್ನೇ ದೊಡ್ಡದಾಗಿ ಮಾಡುತ್ತಾರೆ, ನಿಜವಾಗಿಯೂ ಅದು ನ್ಯೂನತೆ ಅಲ್ಲ, ಅದನ್ನು ಮರೆ ಮಾಚಿ ನಮ್ಮಿಂದ ಯಾರಿಗೂ ತೊಂದರೆ ಆಗದಂತೆ ಜೀವನ ನಡೆಸಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಕೆ ಜೆ ಜೀರಗಾಳಿ ಮಾತನಾಡಿ, ಬಸವರಾಜ ಉಮರಾಣಿ ಅವರನ್ನು ಪ್ರಶಂಶಿಸಿ, ಅವರು ಸಾವಿರಾರು ವಿದ್ಯಾರ್ಥಿಗಳಿಗೆ ಮಾದರಿ ಹಾಗೂ ಯಶಸ್ವಿಗೆ ಸತತ ಪರಿಶ್ರಮ ಮುಖ್ಯ ಎಂದು ಅಧ್ಯಕ್ಷೀಯ ನುಡಿಗಳನ್ನು ಹೇಳಿದರು. ಅತಿಥಿ ಪರಿಚಯವನ್ನು ಪ್ರೊ. ಪ್ರೇಮಾನಂದ…
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಮಕ್ಕಳು ತಂದೆ – ತಾಯಿಗಳು ಕೊಟ್ಟ ಸಂಸ್ಕಾರದಂತೆ ಬೆಳೆಯುತ್ತಾರೆ. ಆದ್ದರಿಂದ ಮಕ್ಕಳಿಗೆ ದುಡ್ಡಿನ ಮಹತ್ವ ಮತ್ತು ಅನ್ನದ ಬೆಲೆಯನ್ನು ತಿಳಿಸಿಕೊಡಬೇಕು ಎಂದು ಓಲೆಮಠದ ಆನಂದ ದೇವರು ಶ್ರೀಗಳು ಹೇಳಿದರು.ವ್ಯಸನಮುಕ್ತ ಗ್ರಾಮಗಳ ನಿರ್ಮಾಣದ ಸಂಕಲ್ಪದೊಂದಿಗೆ ದುಶ್ಚಟಗಳ ಭಿಕ್ಷೆ, ಸದ್ಗುಣಗಳ ದೀಕ್ಷೆ ಕುರಿತು ಜಮಖಂಡಿ ನಗರದ ಓಲೆಮಠದ ಆಶ್ರಯದಲ್ಲಿ ತಾಲ್ಲೂಕಿನ ಟಕ್ಕಳಕಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ನಾಲ್ಕು ದಿನಗಳ ಜನಜಾಗೃತಿ ಕಾರ್ಯಕ್ರಮದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.ಮಾಜಿ ಶಾಸಕ ಆನಂದ ನ್ಯಾಮಗೌಡ ಮುಖ್ಯ ಅತಿಥಿಯಾಗಿ ಮಾತನಾಡಿ, ದುಶ್ಚಟಗಳನ್ನು ಬಿಡಿಸಿ ಮನೆಗೆ ಬೆಳಕು ಕೊಡುವ ಸತ್ಕಾರ್ಯವನ್ನು ಓಲೆಮಠದ ಪೂಜ್ಯರು ಮಾಡಿದ್ದಾರೆ. ಹಾಗಾಗಿ ದುಶ್ಚಟಗಳನ್ನು ಬಿಡುವುದಾಗಿ ಪ್ರಮಾಣ ಮಾಡಿದ ಯುವಕರು ಮರಳಿ ದುಶ್ಚಟಕ್ಕೆ ಅಂಟಿ ಕೊಳ್ಳಬಾರದು ಎಂದು ಸಲಹೆ ನೀಡಿದರು.ಎಪಿಎಂಸಿ ಮಾಜಿ ಅಧ್ಯಕ್ಷ ಮುತ್ತಣ್ಣ ಹಿಪ್ಪರಗಿ ಮಾತನಾಡಿ, ಗ್ರಾಮಗಳಲ್ಲಿ ಇನ್ನೂ ಒಂದಿಷ್ಟು ಸಂಸ್ಕೃತಿ, ಸಂಸ್ಕಾರ ಉಳಿದಿರುವುದು ಮಹಿಳೆಯರಿಂದ ಮಾತ್ರ ಎಂದರು.ಝುಂಜರವಾಡದ ಬಸವರಾಜ ಶರಣರು ಪ್ರವಚನ ನೀಡಿದರು.ತಾಲ್ಲೂಕಿನ ವಿವಿಧ ಪ್ರಕಾರಗಳ ಕಲಾವಿದರನ್ನು…
ಉದಯರಶ್ಮಿ ದಿನಪತ್ರಿಕೆ ಚಡಚಣ: ಪಟ್ಟಣ ಪಂಚಾಯತಿ ಚಡಚಣ ವ್ಯಾಪ್ತಿಯ ನಾಗರಿಕರು 2026-27ನೇ ಸಾಲಿನ ಆಸ್ತಿ ತೆರಿಗೆಯನ್ನು ಏಪ್ರಿಲ್ 1ರಿಂದ 30ರೊಳಗೆ ಪಾವತಿಸಿದಲ್ಲಿ ಒಟ್ಟು ಮೊತ್ತದಲ್ಲಿ ಶೇ.5 ರಿಯಾಯಿತಿ ಪಡೆಯಬಹುದಾಗಿದೆ ಎಂದು ಪಟ್ಟಣ ಪಂಚಾಯತಿ ಪ್ರಕಟಣೆಯಲ್ಲಿ ತಿಳಿಸಿದೆ.ನಿಗದಿತ ಅವಧಿಯೊಳಗೆ ತೆರಿಗೆ ಪಾವತಿಸಿ ಈ ರಿಯಾಯತಿ ಸದುಪಯೋಗಪಡಿಸಿಕೊಳ್ಳುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ. ಮೇ ಹಾಗೂ ಜೂನ್ ತಿಂಗಳಲ್ಲಿ ಯಾವುದೇ ರೀತಿಯ ರಿಯಾಯತಿ ನೀಡಲಾಗುವುದಿಲ್ಲ. ಜುಲೈ ತಿಂಗಳಿಂದ ಬಾಕಿ ಇರುವ ಆಸ್ತಿ ತೆರಿಗೆಯ ಮೇಲೆ ಶೇ.2ರಷ್ಟು ಬಡ್ಡಿ ವಿಧಿಸಲಾಗುವುದು ಎಂದು ತಿಳಿಸಲಾಗಿದೆ.ಆಸ್ತಿ ತೆರಿಗೆ ಪಾವತಿಸಲು ನಾಗರಿಕರು ಪಟ್ಟಣ ಪಂಚಾಯತಿ ಕಚೇರಿಗೆ ಭೇಟಿ ನೀಡಿ ಪಾವತಿ ಮಾಡಬಹುದು.ಈ ಕುರಿತು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಬಾಬಾಸಾಹೇಬ ತಾವಸೆ, ಅಧ್ಯಕ್ಷ ಮಲ್ಲಿಕಾರ್ಜುನ ಧೋತ್ರೆ ಹಾಗೂ ಉಪಾಧ್ಯಕ್ಷ ಇಲಾಹಿಸಾಬ ನದಾಫ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಚಡಚಣ: ಪಟ್ಟಣ ಪಂಚಾಯತಿ ಚಡಚಣ ವತಿಯಿಂದ ಸಾರ್ವಜನಿಕರಿಗೆ ಪ್ರಕಟಣೆ ನೀಡಲಾಗಿದ್ದು, ಪಟ್ಟಣ ಪಂಚಾಯತಿಯ ಮಾಲೀಕತ್ವದಲ್ಲಿರುವ ಒಟ್ಟು 34 ವಾಣಿಜ್ಯ ಮಳಿಗೆಗಳ ಪೈಕಿ 5 ಮಳಿಗೆಗಳು ಖಾಲಿ ಇರುವುದರಿಂದ ಅವುಗಳನ್ನು ಹರಾಜು ಮೂಲಕ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ ಎಂದು ಬಿ ಕೆ ತಾವಸೆ ಮುಖ್ಯಾಧಿಕಾರಿ ಪ.ಪಂ. ಚಡಚಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಖಾಲಿ ಇರುವ ಮಳಿಗೆಗಳ ವಿವರ ಹೀಗಿದೆ: ಅಗಸಿ ಹತ್ತಿರ ಮಳಿಗೆ ಸಂಖ್ಯೆ 05 (ಸಾಮಾನ್ಯ), ಹಳೆ ತಹಶೀಲ್ದಾರ ಕಾರ್ಯಾಲಯ ಹತ್ತಿರ ಮಳಿಗೆ ಸಂಖ್ಯೆ 09 (ಪರಿಷಿಷ್ಟ ಪಂಗಡ), ಡಿ.ಸಿ.ಸಿ ಬ್ಯಾಂಕ್ ಹತ್ತಿರ ಮಳಿಗೆ ಸಂಖ್ಯೆ 05 (ಅಂಗವಿಕಲರಿಗೆ), ಮಳಿಗೆ ಸಂಖ್ಯೆ 08 (ಸಾಮಾನ್ಯ) ಹಾಗೂ ಮಳಿಗೆ ಸಂಖ್ಯೆ 02 (ಪರಿಷಿಷ್ಟ ಜಾತಿ).ಮಾನ್ಯ ಸರ್ಕಾರದ ಅಧಿನ ಕಾರ್ಯದರ್ಶಿಗಳು ನಗರಾಭಿವೃದ್ಧಿ ಇಲಾಖೆಯ ಆದೇಶದನ್ವಯ,ತಿದ್ದುಪಡೆ ಸಂಖ್ಯೆ : ನಅಇ 254 ಟಿ.ಎಮ್.ಎಸ್ 2021(ಇ) ದಿನಾಂಕ 04-11-2022ರನ್ವಯ, ದಿನಾಂಕ 13-04-2026 ರಂದು ಬೆಳಿಗ್ಗೆ 11.00 ಗಂಟೆಗೆ ಪಟ್ಟಣ ಪಂಚಾಯತಿ ಸಭಾಭವನದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ.ಹರಾಜಿನಲ್ಲಿ ಭಾಗವಹಿಸಲು…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಇಂದು ಪಾಲಕರು ತಮ್ಮ ಮಕ್ಕಳನ್ನು ಲಕ್ಷ ಲಕ್ಷ ಡೊನೇಶನ್ ಕೊಟ್ಟು ಕಲಿಸದೇ ಲಕ್ಷ್ಯ ವಹಿಸಿ ಕಲಿಸುವಂತಾಗುವ ಜೊತೆಗೆ ತಾಯಂದಿಯರು ಮೊಬೈಲ್ ತ್ಯಾಗ ಮಾಡಿ ಮಕ್ಕಳನ್ನು ಉತ್ತಮರನ್ನಾಗಿ ಬೆಳೆಸುವಂತಾಗಬೇಕೆಂದು ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಹೇಳಿದರು.ಪಟ್ಟಣದ ನಂದಿ ಬಡಾವಣೆಯ ಮಾರುತಿ ದೇವಸ್ಥಾನದ ಆವರಣದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು, ಕದಳಿ ವೇದಿಕೆಯ ಸಹಯೋಗದಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಅಕ್ಕಮಹಾದೇವಿ ಜಯಂತಿ ಹಾಗೂ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಚಿಕ್ಕಮಕ್ಕಳನ್ನು ಆದಷ್ಟು ಮೊಬೈಲ್ ದಿಂದ ದೂರವಿಡಬೇಕು.ಇಂದು ಮೊಬೈಲ್ ಬಳಕೆ ಹೆಚ್ಚಾಗಿ ಬಳಕೆ ಮಾಡಿದ ಪರಿಣಾಮ ನಿಮ್ಹಾನ್ಸ್ ನಲ್ಲಿ ಹೆಚ್ಚು ಮಕ್ಕಳನ್ನು ಕಾಣುವಂತಾಗಿದೆ. ಮಕ್ಕಳ ಜೀವನ ಶುದ್ಧರಾಗಿಬೇಕಾದರೆ ಮೊದಲು ಪಾಲಕರು ಮಕ್ಕಳು ಇರುವಾಗ ಮೊಬೈಲ್ ತ್ಯಾಗ ಮಾಡಬೇಕು. ಇಂದು ಮಕ್ಕಳು ಹಠ ಮಾಡಬಾರದು ಎಂಬ ಕಾರಣಕ್ಕೆ ಪಾಲಕರೇ ಮೊಬೈಲು ಗೀಳು ಮಕ್ಕಳಿಗೆ ಅಂಟಿಸುತ್ತಿರುವುದು ವಿಷಾದನೀಯ. ಇದು ನಿಲ್ಲಬೇಕಿದೆ. ಮೊಬೈಲ್ ಬಳಕೆ ಸದುಪಯೋಗವಾಗುವಂತಿರಬೇಕು. ಇಂದು ಕೊಲ್ಲಿ ಯುದ್ಧ ಪರಿಣಾಮ…
ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಮದುವೆ ನಿಶ್ಚಿತಾರ್ಥ ಮುರಿದು ಬಿದ್ದ ನಂತರ ಮರಳಿ ಹೆಣ್ಣು ಸಿಗದ ಕಾರಣ ಕುರಿಗಾಹಿ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಜರುಗಿದೆ.ಮೃತ ಯುವಕ ಚಿಮ್ಮಲಗಿ ಭಾಗ-೨ ಗ್ರಾಮದ ಶಂಕರ ತಳವಾರ (೨೫).ಚಿಮ್ಮಲಗಿ ಗ್ರಾಮದ ಜಮೀನೊಂದರಲ್ಲಿಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಎರಡು ವರ್ಷದ ಹಿಂದೆ ಮದುವೆ ನಿಶ್ಚಯವಾಗಿ ಮುರಿದು ಬಿದ್ದಿತ್ತುತದನಂತರ ಎಷ್ಟು ಹುಡುಕಿದ್ರೂ ಹೆಣ್ಣು ಸಿಕ್ಕಿರಲಿಲ್ಲ.ಈ ಕಾರಣ ಮನನೊಂದು ಜಮೀನಲ್ಲಿ ಬೇವಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ನಿಡಗುಂದಿ ಪೊಲೀಸರು ತಿಳಿಸಿದ್ದಾರೆ.
