ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಮದುವೆ ನಿಶ್ಚಿತಾರ್ಥ ಮುರಿದು ಬಿದ್ದ ನಂತರ ಮರಳಿ ಹೆಣ್ಣು ಸಿಗದ ಕಾರಣ ಕುರಿಗಾಹಿ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಜರುಗಿದೆ.
ಮೃತ ಯುವಕ ಚಿಮ್ಮಲಗಿ ಭಾಗ-೨ ಗ್ರಾಮದ ಶಂಕರ ತಳವಾರ (೨೫).
ಚಿಮ್ಮಲಗಿ ಗ್ರಾಮದ ಜಮೀನೊಂದರಲ್ಲಿ
ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಎರಡು ವರ್ಷದ ಹಿಂದೆ ಮದುವೆ ನಿಶ್ಚಯವಾಗಿ ಮುರಿದು ಬಿದ್ದಿತ್ತು
ತದನಂತರ ಎಷ್ಟು ಹುಡುಕಿದ್ರೂ ಹೆಣ್ಣು ಸಿಕ್ಕಿರಲಿಲ್ಲ.
ಈ ಕಾರಣ ಮನನೊಂದು ಜಮೀನಲ್ಲಿ ಬೇವಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ನಿಡಗುಂದಿ ಪೊಲೀಸರು ತಿಳಿಸಿದ್ದಾರೆ.
