Author: editor.udayarashmi@gmail.com

ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಪಠ್ಯಯಾಧಾರಿತ ರಸಪ್ರಶ್ನೆ ಕಾರ್ಯಕ್ರಮ | ಹರುಷದಿಂದ ಮಕ್ಕಳು ಭಾಗಿ | ಹಳದಿ, ಕೆಂಪು ತಂಡಕ್ಕೆ ಪ್ರಶಸ್ತಿ ಉದಯರಶ್ಮಿ ದಿನಪತ್ರಿಕೆ ಚಿಕ್ಕಪಡಸಲಗಿ: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ವೃದ್ಧಿಗೊಸ್ಕರ ಗದುಗಿನ ತೋಂಟದಾರ್ಯ ವಿದ್ಯಾಪೀಠ ಸಂಸ್ಥೆಯ ಇಲ್ಲಿನ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲಾ ಎಸ್ಸೆಸ್ಸೆಲ್ಸಿ ಮಕ್ಕಳಿಗಾಗಿ ಶುಕ್ರವಾರ ಪಠ್ಯಾಧಾರಿತ ವಿಷಯಗಳ ಕುರಿತು ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸಲಾಗಿತ್ತು.ಮಧ್ಯಾಹ್ನದ ಅವಧಿಯಲ್ಲಿ ಹಮ್ಮಿಕೊಂಡಿದ್ದ ಕನ್ನಡ, ಇಂಗ್ಲೀಷ್, ಹಿಂದಿ, ವಿಜ್ಞಾನ, ಗಣಿತ,ಸಮಾಜ ವಿಜ್ಞಾನ ಈ ಎಲ್ಲ ಆರು ವಿಷಯವನ್ನು ಒಳಗೊಂಡ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಮಕ್ಕಳು ಅತ್ಯಂತ ಉತ್ಸುಕರಾಗಿ ಪಾಲ್ಗೊಂಡಿದ್ದರು. ಕೇಳಲಾದ ಪ್ರಶ್ನೆಗಳಿಗೆ ಥಟ್ಟನೆ ಉತ್ತರ ನೀಡುತ್ತಾ ಪರಸ್ಪರ ಖುಷಿ,ಸಂಭ್ರಮ ಹಂಚಿಕೊಂಡರು. ಲವಲವಿಕೆಯ ಅಲೆಯಲ್ಲಿ ಮಿನುಗಿದರು.ಬಾಲಕರ ವಿಭಾಗದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಸಂಗಮೇಶ ಹಿಪ್ಪರಗಿ ನೇತೃತ್ವದ ಹಳದಿ ತಂಡ 50 ಅಂಕ ಪಡೆದು ಪ್ರಥಮ ಸ್ಥಾನ ಪಡೆಯಿತು. ಆಕಾಶ ಬಡಿಗೇರ ನೇತೃತ್ವದ ಹಸಿರು ತಂಡ 45 ಅಂಕದೊಂದಿಗೆ ದ್ವೀತಿಯ ಸ್ಥಾನ ಪಡೆದರೆ ರಾಹುಲ ರಾಯಪ್ಪಗೋಳ ನಾಯಕತ್ವದ ಕೆಂಪು ತಂಡ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಶ್ವ ಮಧುಮೇಹ ದಿನದ ಅಂಗವಾಗಿ ನಗರದ ಬಿ.ಎಲ್.ಡಿ.ಇ. ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ನವೆಂಬರ್ 11 ಸೋಮವಾರದಿಂದ ನವೆಂಬರ್ 16‌‌ ಶನಿವಾರದವರೆಗೆಪಾದರೋಗದ ಉಚಿತ ತಪಾಸಣೆ ಹಾಗೂ ಚಿಕಿತ್ಸೆ ಸಪ್ತಾಹ ಶಿಬಿರನಡೆಯಲಿದೆ.ನವೆಂಬರ್ 14 ರಂದು ವಿಶ್ವ ಮಧುಮೇಹ ದಿನದ ಅಂಗವಾಗಿ ಬಿ.ಎಲ್.ಡಿ.ಇ ಆಸ್ಪತ್ರೆಯ ಶಸ್ತ್ರಚಿಕಿತ್ಸೆ ವಿಭಾಗ ಮತ್ತು ವಿಜಯಪುರ ಜಿಲ್ಲಾ ಶಸ್ತ್ರಚಿಕಿತ್ಸಕರ ಸಂಘದ ಸಹಯೋಗದಲ್ಲಿ ಈ ಶಿಬಿರ ಆಯೋಜಿಸಲಾಗಿದೆ. ಆಸ್ಪತ್ರೆಯ ಶಸ್ತ್ರಚಿಕಿತ್ಸೆ ಓ.ಪಿ.ಡಿ ನಂ.10. ರಲ್ಲಿ ಈ ಶಿಬಿರ ನಡೆಯಲಿದೆ. ಈ ಶಿಬಿರದಲ್ಲಿ ತಪಾಸಣೆ, ಚಿಕಿತ್ಸೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಆರೋಗ್ಯ ಮಾಹಿತಿ ನೀಡಲಾಗುವುದು. ಅಲ್ಲದೇ, ರಕ್ತ ಮತ್ತು ಮೂತ್ರ ತಪಾಸಣೆ, ಬಯೋತಿಸಿಯೋ ಮೀಟರ: ಅಂಗಾಂಗಗಳ ಕಂಪನ ಜ್ಞಾನ, ಮೋನೋಫಿಲಾಮೆಂಟ್: ಸ್ಪರ್ಷದೋಷ, ಹ್ಯಾರಿಸ್ ಮ್ಯಾಟ್: ಒತ್ತಡ ಅಂಕಗಳನ್ನು ತಪಾಸಣೆ ಮಾಡಲಾಗುವದು. ಅಗತ್ಯವಿರುವ ಮಧುಮೇಹಿಗಳು ಉಚಿತ ತಪಾಸಣೆ ಶಿಬಿರದ ಪ್ರಯೋಜನ ಪಡೆಯಬೇಕು ಎಂದು ಶಿಬಿರದ ಸಂಚಾಲಕ ಮತ್ತು…

Read More

ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅಭಿಮತ ಉದಯರಶ್ಮಿ ದಿನಪತ್ರಿಕೆ ಹುಬ್ಬಳ್ಳಿ: ರೋಗಿಗಳ ಸೇವೆಯಲ್ಲಿ ಕೀಮ್ಸ್ ವೈದ್ಯರ ಪಾತ್ರ ಅನನ್ಯವಾಗಿದ್ದು. ವಿಶೇಷವಾಗಿ ಮಕ್ಕಳ ಚಿಕಿತ್ಸಾ ವಿಭಾಗವನ್ನು ಅತ್ಯಾಧುನಿಕ ಉಪಕರಣಗಳೊಂದಿಗೆ ಮಕ್ಕಳ ಆರೋಗ್ಯ ಸೇವೆಯಲ್ಲಿ ನಿರತರಾಗಿರುವ ಇಲ್ಲಿಯ ವೈದ್ಯರು ಆಸ್ಪತ್ರೆಯ ಸಮಸ್ತ ಸಿಬ್ಬಂದಿ ವರ್ಗ ನೀಡುತ್ತಿರುವ ಗುಣಮಟ್ಟದ ವೈದ್ಯಕೀಯ ಸೇವೆ ಈ ಭಾಗದ ಮಕ್ಕಳಿಗೆ ಮತ್ತು ರೋಗಿಗಳಿಗೆ ವರದಾನವಾಗಿದೆ ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ ಹೇಳಿದರು.ಶುಕ್ರವಾರ ಅವರು ಪ್ರತಿಷ್ಠಿತ ಹುಬ್ಬಳ್ಳಿಯ ಕೀಮ್ಸ್ ವೈದ್ಯಕೀಯ ಮಹಾವಿದ್ಯಾಲಯದ ಮಕ್ಕಳ ಚಿಕಿತ್ಸಾ ಘಟಕ, ಅಪೌಷ್ಟಿಕ ಮಕ್ಕಳ ಪುನರ್ವಸತಿ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿರುವ ವ್ಯವಸ್ಥೆಯನ್ನು ಪರಿಶೀಲಿಸಿದ ಅವರು ಉಪಸ್ಥಿತರಿದ್ದ ವೈದ್ಯರ ಮತ್ತು ಸಿಬ್ಬಂದಿ ವರ್ಗಕ್ಕೆ ಅಗತ್ಯ ಸೂಚನೆಗಳನ್ನು ನೀಡಿದರು.ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕರಾದ ಡಾ ಎಸ್ ಎಫ್ ಕಮ್ಮಾರ, ಧಾರವಾಡ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶ್ರೀಮತಿ ನೀತಾ ವಾಡ್ಕರ ಕೀಮ್ಸ್ನ ವಿವಿಧ ವಿಭಾಗಗಳ ವೈದ್ಯಾಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ…

Read More

ಹಿಂದೂ-ಮುಸ್ಲೀಂರ ನಡುವೆ ಕಂದಕ ಸೃಷ್ಟಿಸಲು ಬಿಜೆಪಿ ಯತ್ನ | ಬಿಜೆಪಿಯದು ದುರುದ್ದೇಶದ ಹೋರಾಟ | ಸಚಿವ ಎಂ.ಬಿ.ಪಾಟೀಲ ಭರವಸೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಕ್ಫ್ ವಿಷಯವನ್ನು ಬಿಜೆಪಿಯವರು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡು ಹಿಂದೂ- ಮುಸ್ಲೀಂರ ನಡುವೆ ಕಂದಕ ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ.ಪಾಟೀಲ ಆರೋಪಿಸಿದರು.ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಟಿ ನಡೆಸಿದ ಅವರು, ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಹಿಂದುತ್ವದ ಬಗ್ಗೆ ಮಾತನಾಡುವ ಬಿಜೆಪಿಯವರಿಗೆ ಹಿಂದೂಗಳು ಹಾಗೂ ರೈತರ ಬಗ್ಗೆ ನಿಜವಾದ ಕಳಕಳಿಯೇ ಇಲ್ಲ. ಬಿಜೆಪಿಯದು ದುರುದ್ದೇಶದ ಹೋರಾಟವಾಗಿದೆ.ವಕ್ಫ್ ಕಾಯ್ದೆ ರದ್ದತಿಗೆ ಒತ್ತಾಯಿಸಿ ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಹೊರಾಂಗಣದಲ್ಲಿ ಆಹೋರಾತ್ರಿ ಧರಣಿ ಹಮ್ಮಿಕೊಂಡಿದ್ದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಅರ್ಧಕ್ಕೆ ತಮ್ಮ ಹೋರಾಟವನ್ನು ಏಕೆ ನಿಲ್ಲಿಸಿದರು? ಗೆಜೆಟ್ ನೋಟಿಫಿಕೇಶನ್ ರದ್ದಾಗುವವರೆಗೆ ಹೋರಾಟ ಮುಂದುವರೆಸಬಹುದಿತ್ತಲ್ಲ. ಬಹುಶಃ ಸೊಳ್ಳೆಯ ಕಾಟದಿಂದಾಗಿ ಹೋರಾಟ ನಿಲ್ಲಿಸಿರಬಹುದು ಎಂದು ವ್ಯಂಗ್ಯವಾಡಿದರು.ಹಿಂದೆ ಅಧಿಕಾರದಲ್ಲಿದ್ದಾಗ ಬಿಜೆಪಿಯೇ ವಕ್ಫ್ ಬಗ್ಗೆ ಅಪಾರವಾದ ಕಾಳಜಿ ತೋರಿಸಿದೆ. ವಕ್ಫ್ ಗೆ ಸಂಬಂಧಿಸಿದಂತೆ…

Read More

ಲೇಖನಡಾ.ಶಶಿಕಾಂತ ಪಟ್ಟಣ, ಪೂನಾ ಉದಯರಶ್ಮಿ ದಿನಪತ್ರಿಕೆ “ಧರ್ಮ” ಎನ್ನುವ ಪದವು ಸಂಸ್ಕೃತ ಪದದಿಂದ ಬಂದದ್ದು “ಧಾರಣಾತ್ ಧರ್ಮಃ” ಅಂದರೆ ಯಾವುದನ್ನು ಧರಿಸಲು ಆಧರಿಸಲು ಸಮರ್ಥವಾಗುತ್ತದೆಯೋ ಅದು ಧರ್ಮವೆಂದಾಗುತ್ತದೆ. ಧರ್ಮ ಅಂದರೆ ಧಾರಣ. ಜಿಡ್ಡುಗಟ್ಟಿದ ಮೃತಪ್ರಾಯವಾಗ ಬಹುದಾದ ಸಾಮಾಜಿಕ ಧಾರ್ಮಿಕ ರಾಜಕೀಯ ಆರ್ಥಿಕ ವ್ಯವಸ್ಥೆಗೆ ಒಂದು ಬೃಹತ್ ಪರ್ಯಾಯ ವ್ಯವಸ್ಥೆಯನ್ನು 12ನೆ ಶತಮಾನದಲ್ಲಿ ಶರಣರು ಕಲ್ಪಿಸಿದರು. ಧರ್ಮವು ಶೊಷಣೆಯಾದಾಗ ಮೋಸ ಕಪಟ ಕಳ್ಳತನ ಕಂದಾಚಾರ ಮೂಡನಂಬಿಕೆ ತಾಂಡವವಾಡುವಾಗ ಬಸವಣ್ಣನವರು “ದಯವಿಲ್ಲದ ಧರ್ಮ ಅದೆವುದಯ್ಯಾ” ಎಂದು ಧರ್ಮಕ್ಕೆ ದಯೆ ಪ್ರೀತಿಯನ್ನು ಅಡಿಪಾಯ ಹಾಕಿದರು.Religion is a way of life -ಅದು ಬರಿ ಸಿದ್ಧಾಂತವಲ್ಲ ಬದುಕಿನ ಕ್ರಮ ಅಥವಾ ಸಾಧನೆಯ ಹಾದಿ(Religion is a way of life but not view of Life ). ಬದುಕನ್ನ ಕೇವಲ ಅವಲೋಕಿಸಿ ವ್ಯಾಖ್ಯಾನ ಮಾಡುವುದು ಧರ್ಮವಲ್ಲ. ಶರಣರು “ಧರ್ಮ ಕೇವಲ ಬದುಕಿನ ಮಾರ್ಗವಲ್ಲ ಆದರೆ ಅದು ಬದುಕಿನ ನೀತಿ ಸಂಹಿತೆ ಸತ್ಯ ಶುದ್ಧ ಆಚರಣೆ”…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಗೆಳೆತನ ಎಂಬುದೊಂದು ಗಟ್ಟಿ ಬಂಧನ. ಸ್ನೇಹ ಆಕಸ್ಮಿಕವಾದರೂ ಅಪರೂಪವಾದ ಬಂಧ. ನಮ್ಮ ನೋವು-ನಲಿವಿಗೆ ಸ್ಪಂದಿಸುವ ಆ ಜೀವದಿಂದ ಸಿಗುವ ಕಾಳಜಿ, ಆತ್ಮೀಯತೆ ಮತ್ತು ಸಂತೋಷಕ್ಕೆ ಬೆಲೆ ಕಟ್ಟಲಾಗದು ಎಂದು ’ಉದಯರಶ್ಮಿ’ ಪತ್ರಿಕೆ ಸಂಪಾದಕ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಇಂದುಶೇಖರ ಮಣೂರ ಹೇಳಿದರು.ವಿಜಯಪುರದ ಚಾಣಕ್ಯ ಮಹಾವಿದ್ಯಾಲಯದಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ಯು ಈ ವಿದ್ಯಾಲಯದ ಸಹಯೋಗದೊಂದಿಗೆ ಆಯೋಜಿಸಿದ “ಮೈಸೂರು ಸಾಂಪ್ರದಾಯಿಕ ಶೈಲಿ ತರಬೇತಿ ಕಾರ್ಯಾಗಾರ” ದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಕಲಾವಿದ ಮಿತ್ರರಿಂದ ತಮ್ಮದೇ ಭಾವಚಿತ್ರದ ಕಲಾಕೃತಿ ಸ್ವೀಕರಿಸಿ ಅವರು ಭಾವುಕರಾಗಿ ನುಡಿದರು.ಎಂಭತ್ತರ ದಶಕದ ಸ್ನೇಹಿತರನ್ನು ಹಲವು ದಶಕಗಳ ಬಳಿಕ ಮುಖಾಮುಖಿಯಾಗಿದ್ದು ಇದೊಂದು ಅವಿಸ್ಮರಣೀಯ ಘಳಿಗೆ‌. ಸಂತೋಷಕುಮಾರ್ ಮತ್ತು ರವೀಶ್ ಇವರೊಂದಿಗಿನ ಎಂದೂ ಮಾಸದ ನೆನಪುಗಳಿಗೆ ಇಂದಿನ ಈ ಮಿಲನ ಮತ್ತಷ್ಟು ರಂಗು ತುಂಬಿದೆ ಎಂದು ಇಂದುಶೇಖರ ಮಣೂರ ಸಂತಸ ವ್ಯಕ್ತಪಡಿಸಿದರು.ಸಂಪಾದಕ ಮಣೂರ ಅವರ ೮೦ ರ ದಶಕದ ಬೆಂಗಳೂರಿನ ಕೆನ್ ಕಲಾ ಶಾಲೆಯ ಸಹಪಾಠಿಗಳಾದ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಗೆಳೆತನ ಎಂಬುದೊಂದು ಗಟ್ಟಿ ಬಂಧನ. ಸ್ನೇಹ ಆಕಸ್ಮಿಕವಾದರೂ ಅಪರೂಪವಾದ ಬಂಧ. ನಮ್ಮ ನೋವು-ನಲಿವಿಗೆ ಸ್ಪಂದಿಸುವ ಆ ಜೀವದಿಂದ ಸಿಗುವ ಕಾಳಜಿ, ಆತ್ಮೀಯತೆ ಮತ್ತು ಸಂತೋಷಕ್ಕೆ ಬೆಲೆ ಕಟ್ಟಲಾಗದು ಎಂದು ’ಉದಯರಶ್ಮಿ’ ಪತ್ರಿಕೆ ಸಂಪಾದಕ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಇಂದುಶೇಖರ ಮಣೂರ ಹೇಳಿದರು.ವಿಜಯಪುರದ ಚಾಣಕ್ಯ ಮಹಾವಿದ್ಯಾಲಯದಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ಯು ಈ ವಿದ್ಯಾಲಯದ ಸಹಯೋಗದೊಂದಿಗೆ ಆಯೋಜಿಸಿದ “ಮೈಸೂರು ಸಾಂಪ್ರದಾಯಿಕ ಶೈಲಿ ತರಬೇತಿ ಕಾರ್ಯಾಗಾರ” ದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಕಲಾವಿದ ಮಿತ್ರರಿಂದ ತಮ್ಮದೇ ಭಾವಚಿತ್ರದ ಕಲಾಕೃತಿ ಸ್ವೀಕರಿಸಿ ಅವರು ಭಾವುಕರಾಗಿ ನುಡಿದರು. ಎಂಭತ್ತರ ದಶಕದ ಸ್ನೇಹಿತರನ್ನು ಹಲವು ದಶಕಗಳ ಬಳಿಕ ಮುಖಾಮುಖಿಯಾಗಿದ್ದು ಇದೊಂದು ಅವಿಸ್ಮರಣೀಯ ಘಳಿಗೆ‌. ಸಂತೋಷಕುಮಾರ್ ಮತ್ತು ರವೀಶ್ ಇವರೊಂದಿಗಿನ ಎಂದೂ ಮಾಸದ ನೆನಪುಗಳಿಗೆ ಇಂದಿನ ಈ ಮಿಲನ ಮತ್ತಷ್ಟು ರಂಗು ತುಂಬಿದೆ ಎಂದು ಇಂದುಶೇಖರ ಮಣೂರ ಸಂತಸ ವ್ಯಕ್ತಪಡಿಸಿದರು.ಸಂಪಾದಕ ಮಣೂರ ಅವರ ೮೦ ರ ದಶಕದ ಬೆಂಗಳೂರಿನ ಕೆನ್ ಕಲಾ ಶಾಲೆಯ…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ತಾಲೂಕಿನ ಉಕ್ಕಲಿ ಗ್ರಾಮದ ರೈತ ಬಾಂಧವರು ವಿಜಯಪುರ ನಗರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ನೇತೃತ್ವದಲ್ಲಿ ನಡೆಯುತ್ತಿರುವ ವಕ್ಫ್ ಹಠಾವೋ ದೇಶ ಬಚಾವೋ, ಮಾದಕ ವಕ್ಫ್ಕಾಯ್ದೆ ರದ್ದುಗೊಳಿಸಬೇಕೆಂದು ಆಗ್ರಹಿಸಿ ನಡೆಯುತ್ತಿರುವ ಧರಣಿ ಸತ್ಯಾಗ್ರಹಕ್ಕೆ ಬುಧವಾರ ರೊಟ್ಟಿ ಬುತ್ತಿ ನೀಡುವ ಮೂಲಕ ಬೆಂಬಲ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ರೈತರಾದ ಅಶೋಕ ಹಾವಿನಾಳ, ಬಾಬುಗೌಡ ಬಿರಾದಾರ, ಅಶೋಕ ಮಸಳಿ, ಜೀವಪ್ಪ ಬಮನಳ್ಳಿ, ಮಲ್ಲೇಸಿ ಜುಮನಾಲ, ಬಸು ಬಡಿಗೇರ, ಶಂಕ್ರಯ್ಯ ಬಬಲೇಶ್ವರ, ಪ್ರಶಾಂತ ಬಡಿಗೇರ, ರಾಹುಲ ಕಲಗೊಂಡ, ಚಿದು ಬೆಲ್ಲದ, ಗೊಲ್ಲಾಳ ನಾದ, ಜಾವು ಮಸಳಿ, ಜಕ್ಕಪ್ಪ ನಾದ, ಮೋಹನ ಬಡಿಗೇರ, ಅಶೋಕ ಹಡಪದ, ಗಂಗಾಧರ ಬಡಿಗೇರ, ಮಹಾಂತೇಶ ಕಂಬಿ, ರಾಜು ಮಸಳಿ, ಪ್ರಜ್ವಲ ಹಂಡಿ, ಜಗು ಬಸರಿಗಿಡದ, ಭೀಮು ಹಡಪದ ಇತರರು ಇದ್ದರು.

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ತಾಲೂಕಿನ ನರಸಲಗಿ ಗ್ರಾಮದ ಶ್ರೀಶೈಲಗೌಡ ಹೊಸಳ್ಳಿ ಅವರ ತೋಟದ ಭಾವಿಯಲ್ಲಿ ಬುಧವಾರ ಆಕಸ್ಮಿಕವಾಗಿ ಬಿದ್ದ ಎಮ್ಮೆಯನ್ನು ಸ್ಥಳೀಯ ಅಗ್ನಿ ಶಾಮಕ ಠಾಣೆಯ ಸಿಬ್ಬಂದಿ ತೆರಳಿ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ಎಮ್ಮೆಯನ್ನು ರಕ್ಷಿಸಿದರು. ಈ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಸಂಗಮೇಶ ಶಿವಪೂಜಿ, ಸಿಬ್ಬಂದಿಗಳಾದ ಬಸಪ್ಪ ಜಾಲಗೇರಿ, ಉಮೇಶ ಹೂಗಾರ, ಚಂದ್ರಗುಪ್ತ ಅಂಬಳನೂರ ಶ್ರೀಕಾಂತ ಅಂಕಲಗಿ, ಯಮನಪ್ಪ ಹೊಲೇರ ಇದ್ದರು.

Read More