ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ವಿಶ್ವಕರ್ಮ ಸಮಾಜ ಬಾಂಧವರು ಮಿನಿವಿಧಾನಸೌಧದಲ್ಲಿರುವ ತಹಸೀಲ್ದಾರ ಕಚೇರಿಯ ಮುಂಭಾಗ ಶನಿವಾರ ಜಮಾಯಿಸಿ ಗುತ್ತಿಗೆದಾರ ಸಚಿನ ಪಂಚಾಳ ಅವರ ನಿಗೂಢ ಸಾವಿನ ಕುರಿತು ಸರ್ಕಾರ ತನಿಖೆ ಮಾಡುವಂತೆ ಆಗ್ರಹಿಸಿ ರಾಜ್ಯಪಾಲರಿಗೆ, ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ ಮೂಲಕ ಸಲ್ಲಿಸಿದರು. ಮನವಿ ಪತ್ರವನ್ನು ಶಿರಸ್ತೇದಾರ ಎಸ್.ಎಂ.ಜಾಗೀರದಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಇಂಗಳೇಶ್ವರದ ಮಹೇಂದ್ರ ಸ್ವಾಮೀಜಿ ಮಾತನಾಡಿ, ಬೀದರ ಜಿಲ್ಲೆಯ ಬಾಲ್ಕಿ ತಾಲೂಕಿನ ತುಗಾಂವ ಗ್ರಾಮದ ಗುತ್ತಿಗೆದಾರರಾಗಿದ್ದ ಸಚಿನ ಮೋನಪ್ಪ ಪಂಚಾಳ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಆತ್ಮಹತ್ಯೆಗೆ ಕಾರಣೀಕರ್ತರನ್ನು ತಕ್ಷಣವೇ ಬಂಽಸಿ ಸಮಗ್ರ ತನಿಖೆ ನಡೆಸಿ ಸರ್ಕಾರ ನ್ಯಾಯ ಒದಗಿಸಬೇಕು. ಇವರ ಬಡ ಕುಟುಂಬಕ್ಕೆ ಸರ್ಕಾರ ಪರಿಹಾರವನ್ನು ಒದಗಿಸಿ ಕುಟುಂಬದ ಸದಸ್ಯರಿಗೆ ಸರ್ಕಾರಿ ನೌಕರಿ ಕೊಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ತಾಲೂಕಾಧ್ಯಕ್ಷ ಕೆ.ಬಿ.ಕಡೆಮನಿ, ಮುಖಂಡರಾದ ಪ್ರಭು ಬಡಗೇರ, ಜಗನ್ನಾಥ ಪತ್ತಾರ, ಬಸವರಾಜ ಯಂಭತ್ನಾಳ, ಮುತ್ತು ಪತ್ತಾರ, ಕಾಳು ಪತ್ತಾರ, ಶ್ರೀಶೈಲ ಪತ್ತಾರ, ಬಸವರಾಜ ಬಡಿಗೇರ, ಮಂಜುನಾಥ ಬಡಿಗೇರ, ತಮ್ಮಣ್ಣ ಬಡಿಗೇರ, ಬಸವರಾಜ ಕಂಠಿ, ರಾಮು ಬಡಿಗೇರ, ಬಾಗು ಚೌಧರಿ, ಮಲ್ಲು ಕೋಲಕಾರ, ಬಸವರಾಜ ಇಂಗಳೇಶ್ವರ, ಈರಣ್ಣ ಬಡಿಗೇರ, ದೇವೇಂದ್ರ ಬಡಿಗೇರ, ಸುಭಾಸ ಬಡಿಗೇರ, ಬಸವರಾಜ ಪತ್ತಾರ, ಬಸಗೊಂಡ ಬಡಿಗೇರ, ಆರ್.ಸಿ.ಪತ್ತಾರ ಇತರರು ಇದ್ದರು.

