Author: editor.udayarashmi@gmail.com

ಲೇಖನ- ಅವಿನಾಶ ಸೆರೆಮನಿಬೈಲಹೊಂಗಲ ಉದಯರಶ್ಮಿ ದಿನಪತ್ರಿಕೆ ಈಗಾಗಲೇ ವಿದ್ಯಾರ್ಥಿಗಳು ಪರೀಕ್ಷೆ ಬರೆದು ಫಲಿತಾಂಶಕ್ಕಾಗಿಕಾತುರದಿಂದ ಕಾಯುತ್ತಿದ್ದಾರೆ. ಮೊದಲು ದ್ವಿತೀಯ ಪಿಯುಸಿ ನಂತರ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗುತ್ತದೆ.ಫಲಿತಾಂಶ ಎಂದಾಕ್ಷಣ ಬಹಳಷ್ಟು ವಿದ್ಯಾರ್ಥಿಗಳ ಎದೆಯಲಿ ಗುಡುಗು ಸಿಡಿಲಿನ ಮಿಂಚು, ಎದೆಯಲ್ಲಿ ಲಬ್ ಡಬ್ ಆರಂಭವಾಗಿರುತ್ತದೆ.ಪರೀಕ್ಷೆಗಳು ಒಂದು ಭಾಗ ಮಾತ್ರವಿದ್ಯಾರ್ಥಿಗಳೆ ನಮ್ಮ ಜೀವನದಲಿ ನೂರಾರು ಪರೀಕ್ಷೆಗಳು ಎದುರಾಗುತ್ತವೆ ಅದರಲ್ಲಿ ವಿದ್ಯಾರ್ಥಿ ಜೀವನದ ಪರೀಕ್ಷೆಗಳು ಒಂದು ಭಾಗ ಮಾತ್ರ. ಪರೀಕ್ಷೆ ಎಂಬುದು ನಮ್ಮೊಳಗಿನ ವಿಷಯದ ಜ್ಞಾನದ ಮಟ್ಟವನ್ನು ಪರೀಕ್ಷಿಸುವ ಸಾಧನ. ಪರೀಕ್ಷೆ ಎಂದರೆ ಬಹುತೇಕ ವಿದ್ಯಾರ್ಥಿಗಳಿಗೆ ಭಯ, ಒತ್ತಡ, ಆತಂಕವನ್ನುಂಟುಮಾಡುವ ಒಂದು ಪದ. ಆದರೆ ನಿಜವಾದ ಅರ್ಥದಲ್ಲಿ ಪರೀಕ್ಷೆ ಎಂದರೆ ಕೇವಲ ಅಂಕಗಳ ಅಳತೆಗೋಲು ಅಲ್ಲ; ಅದು ನಮ್ಮ ಜ್ಞಾನ, ಶ್ರಮ, ಶಿಸ್ತಿನ ಪ್ರತಿಬಿಂಬವಾಗಿದೆ. ಮರೀಕ್ಷೆ ಫಲಿತಾಂಶ ಜೀವನದ ಫಲಿತಾಂಶವಲ್ಲಇಂದಿನ ಸಮಾಜದಲ್ಲಿ ಪರೀಕ್ಷೆಯ ಫಲಿತಾಂಶಕ್ಕೆ ಅತಿಯಾದ ಮಹತ್ವ ನೀಡಲಾಗುತ್ತಿದೆ. ಇದರ ಪರಿಣಾಮವಾಗಿ ವಿದ್ಯಾರ್ಥಿಗಳು ತಮ್ಮ ಜೀವನದ ಮೌಲ್ಯವನ್ನೇ ಅಂಕಗಳ ಮೂಲಕ ಅಳೆಯಲು ಆರಂಭಿಸಿದ್ದಾರೆ. ಆದ್ದರಿಂದ…

Read More

ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಬಸನಗೌಡ ಎಂ.ಪಾಟೀಲರಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಿ.ಎಲ್.ಡಿ.ಇ ಸಂಸ್ಥೆ ಜಿಲ್ಲೆಯ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಸದಾ ನೆರವು ನೀಡುತ್ತ ಬಂದಿದೆ ಎಂದು ಬಿ.ಎಲ್.ಡಿ.ಇ ಸಂಸ್ಥೆಯ ನಿರ್ದೇಶಕ ಮತ್ತು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಬಸನಗೌಡ ಎಂ. ಪಾಟೀಲ ಹೇಳಿದ್ದಾರೆ.ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಎಸ್.ಎಸ್ ಪಿ.ಯು ಕಾಲೇಜಿನ ವಿದ್ಯಾರ್ಥಿನಿ ಸಾನಿಕಾ ಮೆಟಗಾರ, ತೃತೀಯ ಸ್ಥಾನ ಪಡೆದ ಅಕ್ಷತಾ ಚವ್ಹಾಣ ಮತ್ತು ಬರಡೋಲ ಸರಕಾರಿ ಪಿ.ಯು ಕಾಲೇಜಿನ ಲಕ್ಷ್ಮಿ ಶ್ರೀಕಾಂತ ನಂದೂರ ಹಾಗೂ ನಾಲ್ಕನೇ ಸ್ಥಾನ ಪಡೆದೆ ಎಸ್.ಎಸ್ ಪಿಯು ಕಾಲೇಜಿನ ವಿದ್ಯಾರ್ಥಿ ಯುವರಾಜ ಬಗಲಿ ಅವರನ್ನು ಸನ್ಮಾನಿಸಿ ಮತ್ತು ಆರ್ಥಿಕ ನೆರವು ನೀಡಿ ಅವರು ಮಾತನಾಡಿದರು.ದ್ವಿತೀಯ ಪಿ.ಯು ಪರೀಕ್ಷೆಯಲ್ಲಿ ವಿಜಯಪುರ ಜಿಲ್ಲೆ 29ನೇ ಸ್ಥಾನದಲ್ಲಿತ್ತು ಈ ಹಿನ್ನಲೆಯಲ್ಲಿ ಬೋಧನೆ ಗುಣಮಟ್ಟ ಸುಧಾರಿಸಿ, ಪರೀಕ್ಷೆಗೆ ಸಾಕಷ್ಟು…

Read More

ನಿವರಗಿಯ ಸರ್ಕಾರಿ ಹಾಸ್ಟೇಲ್‌ನಲ್ಲಿ ದಾರುಣ ಘಟನೆ | ಡೆತ್‌ನೋಟ್ ಬರೆದು ಸಾವಿಗೆ ಶರಣು ಉದಯರಶ್ಮಿ ದಿನಪತ್ರಿಕೆ ಚಡಚಣ: ತಾಲೂಕಿನ ನಿವರಗಿ ಗ್ರಾಮದ ಸಮಾಜ ಕಲ್ಯಾಣ ಇಲಾಖೆಯ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಹೆಡ್ ಕುಕ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.ಈ ಪ್ರಕರಣಕ್ಕೆ ಸಂಬಂಧಿಸಿ ವಸತಿ ನಿಲಯದ ವಾರ್ಡನ್ ಮಲ್ಲಪ್ಪ ಎಸ್. ವಾಲೀಕಾರ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಸಂಬಂಧ ಹಾಸ್ಟೇಲ್ ವಾರ್ಡನ್ ವಿರುದ್ಧ ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೃತರನ್ನು ಭಗವಾನಸಿಂಗ್ ಕಿಶನಸಿಂಗ್ ಪರದೇಶಿ (58) ಎಂದು ಗುರುತಿಸಲಾಗಿದೆ. ಇವರು ಸುಮಾರು 23 ವರ್ಷಗಳಿಂದ ಸಮಾಜ ಕಲ್ಯಾಣ ಇಲಾಖೆಯಡಿಯಲ್ಲಿ ಹೆಡ್ ಕುಕ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಕುಟುಂಬದೊಂದಿಗೆ ನಿವರಗಿಯಲ್ಲಿ ವಾಸವಾಗಿದ್ದು, ಪತ್ನಿ ಅನಿತಾ ಹಾಗೂ ಮಗ ಕಿಶನಸಿಂಗ್ ಕೂಡ ಇದೇ ಹಾಸ್ಟೇಲ್‌ನಲ್ಲಿ ಗುತ್ತಿಗೆ ಆಧಾರದ ಮೇಲೆ ಅಡುಗೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು.ಮೃತರ ಪತ್ನಿ ಅನಿತಾ ಪರದೇಶಿ…

Read More

ವೇಳಾಪಟ್ಟಿ ಪ್ರಕಟಣೆ ಇಲ್ಲದೆ ನಾಮಪತ್ರ ಸ್ವೀಕಾರ | ಶಿಕ್ಷಕರ ಅಸಮಾಧಾನ ಉದಯ ರಶ್ಮಿ ದಿನಪತ್ರಿಕೆ ಅಥಣಿ: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಗೆ ಸಂಬಂಧಿಸಿದಂತೆ ಗೊಂದಲದ ವಾತಾವರಣ ನಿರ್ಮಾಣವಾಗಿದೆ ಎಂದು ಶಿಕ್ಷಕ ಸಂಗಮೇಶ ಹಚಡದ ಹೇಳಿದರು.ಅಥಣಿ ಪಟ್ಟಣದಲ್ಲಿ ಮಾತನಾಡಿದ ಅವರು, ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಮತ್ತು ನಾಳೆ ಮಾತ್ರ ಅವಕಾಶ ನೀಡಲಾಗಿದೆ. ಆದರೆ, ಇದುವರೆಗೆ ಚುನಾವಣಾ ವೇಳಾಪಟ್ಟಿ, ಚುನಾವಣಾ ನಡೆಯುವ ಸ್ಥಳ ಹಾಗೂ ಸಂಬಂಧಿತ ಕಚೇರಿಗಳ ಕುರಿತು ಯಾವುದೇ ಅಧಿಕೃತ ಪ್ರಕಟಣೆ ನೀಡಲಾಗಿಲ್ಲ ಎಂಬುದು ಶಿಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ.ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆಗೆ ಸಂಬಂಧಿಸಿದಂತೆ ಪ್ರಶ್ನೆಗಳು ಉದ್ಭವವಾಗಿವೆ. ಹಲವಾರು ಶಿಕ್ಷಕರು ಈ ಕ್ರಮವನ್ನು ಪ್ರಶ್ನಿಸಿ, ಸಮರ್ಪಕ ಮಾಹಿತಿ ನೀಡದೇ ನಾಮಪತ್ರ ಸ್ವೀಕಾರ ಪ್ರಾರಂಭಿಸಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.ಶಿಕ್ಷಕರ ಸಂಘದ ಚುನಾವಣೆಯು ಪ್ರಜಾಸತ್ತಾತ್ಮಕ ವಿಧಾನದಲ್ಲಿ, ಸ್ಪಷ್ಟ ಮಾರ್ಗಸೂಚಿಗಳೊಂದಿಗೆ ನಡೆಯಬೇಕು ಎಂಬುದು ಶಿಕ್ಷಕರ ಒತ್ತಾಯವಾಗಿದೆ. ತಕ್ಷಣವೇ ಚುನಾವಣಾ ವೇಳಾಪಟ್ಟಿ, ಸ್ಥಳ ಮತ್ತು ಸಂಬಂಧಿತ ವಿವರಗಳನ್ನು ಪ್ರಕಟಿಸಬೇಕೆಂದು ಅವರು ಆಗ್ರಹಿಸಿದ್ದಾರೆ.ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟನೆ…

Read More

ಬೀದರ್ ನಲ್ಲಿ ಆಯೋಜಿಸಿದ್ದ 40 ನೇ ರಾಜ್ಯ ಪತ್ರಕರ್ತರ ಸಮ್ಮೇಳನ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ಉದಯರಶ್ಮಿ ದಿನಪತ್ರಿಕೆ ಬೀದರ್: ಗಾಂಧೀ ಮತ್ತು ಅಂಬೇಡ್ಕರ್ ಪತ್ರಕರ್ತರಾಗಿದ್ದರು. ಗಾಂಧೀಜಿಯವರ ಪತ್ರಿಕೆ ಸ್ವಾತಂತ್ರಕ್ಕೆ ಸಹಕಾರಿಯಾದರೆ, ಅಂಬೇಡ್ಕರ್ ಅವರು ಪತ್ರಿಕೆ ಧ್ವನಿ ಇಲ್ಲದವರ ಧ್ವನಿಯಾಗಿ ಕೆಲಸ ಮಾಡಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಮರಿಸಿದರು.ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಶನಿವಾರ ಬೀದರ್ ನಲ್ಲಿ ಆಯೋಜಿಸಿದ್ದ 40 ನೇ ರಾಜ್ಯ ಪತ್ರಕರ್ತರ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.ನಮ್ಮ ಸಮಾಜದಲ್ಲಿ ಅನೇಕ ಜಾತಿ , ಧರ್ಮ ಭಾಷೆಗಳಿವೆ. ಇಂತಹ ವೈರುದ್ದ ಸಮಾಜದಲ್ಲಿ ನಾವೆಲ್ಲ ಸಮಾನವಾಗಿ ಬದುಕಲು ಅಂಬೇಡ್ಕರ್ ಸಂವಿಧಾನ ರಚಿಸಿದ್ದಾರೆ. ಬಸವಣ್ಣನವರು ಕೂಡ ಈ ಉದ್ದೇಶದಿಂದ ಅನೇಕ ಕಾರ್ಯವನ್ನು ಮಾಡಿದ್ದರು. ಅದರೂ ಅಸಮಾನತೆ ನಿಂತಿಲ್ಲ. ಸಮಾಜದ ಕೆಲವು ಪಟ್ಟಭದ್ರಹಿತಾಸಕ್ತಿಗಳು ಇದನ್ನು ಮುಂದುವರೆಸಲು ಕಾಯುತ್ತಿದ್ದಾರೆ. ಅದನ್ನು ನಾವೆಲ್ಲ ಹೊಗಲಾಡಿಸಬೇಕು ಎಂದರು.ಬಸವಣ್ಣ ಕರ್ಮ ಸಿದ್ದಾಂತವನ್ನು ತಿರಸ್ಕರಿಸಿದ್ದರು. ಆದರೆ ಈಗ ಅದನ್ನು ಹೆಚ್ಚಾಗಿ ಶಿಕ್ಷಣವಂತರೆ ಪಾಲಿಸುತ್ತಿದ್ದಾರೆ. ಇದಕ್ಕೆ ಕಾರಣ ನಮ್ಮ ಶಿಕ್ಷಣದಲ್ಲಿ…

Read More

ಉದಯರಶ್ಮಿ ದಿನಪತ್ರಿಕೆ ಹೆಚ್ ಡಿ ಕೋಟೆ: ತಾಲೂಕಿನ ತುಂಬಸೋಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಜೆಡಿಎಸ್ ಅಭ್ಯರ್ಥಿ ಮಹೇಶ್ ಡಿಪಿ ದೇವಲಾಪುರ, ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಜಯಾ ಕೆಂಡಗಣಸ್ವಾಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 12 ಜನ ನಿರ್ದೇಶಕರಿದ್ದು ನಾಮಪತ್ರ ಸಲ್ಲಿಸಲು ಶುಕ್ರವಾರ ಬೆಳಿಗ್ಗೆ 11:30 ರವರೆಗೆ ಸಮಯ ನಿಗದಿಪಡಿಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಮಹೇಶ್. ಉಪಾಧ್ಯಕ್ಷ ಸ್ಥಾನಕ್ಕೆ ಜಯ ಕೆಂಡಗಣಸ್ವಾಮಿ ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆ, ಚುನಾವಣಾಧಿಕಾರಿ ರವೀಶ್ ಅವರು ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಹೆಸರು ಘೋಷಣೆ ಮಾಡಿದರು. ಹೆಸರು ಘೋಷಣೆ ಬಳಿಕ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಹೊರಗಡೆ ಪಟಾಕಿ ಸಿಡಿಸಿ, ಸಿಹಿಹಂಚಿ ಸಂಭ್ರಮಿಸಿದರು. ಬಳಿಕ ಅಭಿಮಾನಿಗಳು ಅಧ್ಯಕ್ಷ ಮಹೇಶ್ ಹಾಗೂ ಉಪಾಧ್ಯಕ್ಷರಾಗಿರುವ ಜಯ ಅವರಿಗೆ ಸನ್ಮಾನಿಸಿದರು.ಈ ವೇಳೆ ಮಾತನಾಡಿದ ನೂತನ ಅಧ್ಯಕ್ಷ ಮಹೇಶ್ ಡಿಪಿ, ಸುತ್ತಮುತ್ತಲಿನ ಗ್ರಾಮಗಳ ರೈತರ ಸಹಕಾರ ಮತ್ತು ಎಲ್ಲ ನಿರ್ದೇಶಕರ ಸಹಕಾರದಿಂದ ಇವತ್ತು…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ನಗರದ ಸಿ.ವಿ. ರಾಮನ್ ಪದವಿ ಪೂರ್ವ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ೨೦೨೫-೨೬ ನೇ ಸಾಲಿನ ದ್ವಿತೀಯ ಪಿ.ಯು ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದು ಇಂಡಿ ತಾಲೂಕಿಗೆ ಕೀರ್ತಿ ತಂದಿದ್ದಾರೆ ಕಾಲೇಜಿನ ಒಟ್ಟು ವಿದ್ಯಾರ್ಥಿಗಳು ೧೦೦% ರಷ್ಟು ಫಲಿತಾಂಶ ಲಭಿಸಿದೆ.ವಿದ್ಯಾರ್ಥಿನಿ ಕುಮಾರಿ ಅಶ್ವಿನಿ ಹಿರೇಮಠ್ ೯೬% (೫೭೬)ಮೂಲಕ ಕಾಲೇಜಿಗೆ ಪ್ರಥಮ, ಕುಮಾರಿ ಸೃಷ್ಟಿ ಸಾಲಕ್ಕಿ ೯೫.೩೩%(೫೭೨) ದ್ವಿತೀಯ, ಕುಮಾರಿ ಪ್ರತೀಕ್ಷಾ ಅಂಬೂರೆ ೯೪%(೫೬೪), ಕು.ವಿಜಯ ಹೊಸೂರ ೯೪%(೫೬೪) ತೃತೀಯ ಸ್ಥಾನ ಪಡೆದಿದ್ದಾರೆ.೧೫ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, ೨೩ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಪಾಸಾಗಿ ಹೆಮ್ಮೆ ತಂದಿದ್ದಾರೆವಿದ್ಯಾರ್ಥಿಗಳ ಸಾಧನೆ ಕಂಡು ಭೌತಶಾಸ್ತ್ರ ವಿಷಯದಲ್ಲಿ ಕುಮಾರಿ ಅಶ್ವಿನಿ ಹಿರೇಮಠ್ ಮತ್ತು ಕುಮಾರ ವಿಜಯ ಹೊಸೂರ್ ಇಬ್ಬರು ವಿದ್ಯಾರ್ಥಿಗಳು ನೂರಕ್ಕೆ ನೂರು(೧೦೦/೧೦೦) ಅಂಕ ಪಡೆದು ಸಾಧನೆಗೈದಿದ್ದಾರೆ ಕಾಲೇಜಿನ ಪ್ರಾಚಾರ್ಯೆ ವಿಶಾಲಾಕ್ಷಿ ವಿದ್ಯಾರ್ಥಿಗಳಿಗೆ ಮತ್ತು ಸಿಬ್ಬಂದಿ ವರ್ಗಕ್ಕೆ ಅಭಿನಂದಿಸಿದ್ದಾರೆ.ಗ್ರಾಮೀಣ ವಿದ್ಯಾರ್ಥಿಗಳ ಸಾಧನೆಯಲ್ಲಿ ಕಾಲೇಜಿನ ಬಹಳಷ್ಟು ಪರಿಶ್ರಮವಿದೆ ಎಂದು ಸಂಸ್ಥೆಯ ಸಂಸ್ಥಾಪಕರಾದ ಶಿವಾನಂದ್ ಕಾಮಗೊಂಡ್ ಅವರು ಹರ್ಷ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲೂಕಿನ ಲಚ್ಯಾಣದಲ್ಲಿ ನಡೆದ ಸದ್ಗುರು ಶ್ರೀ ಶಂಕರಲಿಂಗ ಶಿವಯೋಗಿಗಳ ಮಹಾರಥೋತ್ಸವ ಅಂಗವಾಗಿ ಬುಧವಾರದಂದು ಅಗ್ನಿ ಶಮನ ಕಾರ್ಯಕ್ರಮ ನೆರೆದ ಸಹಸ್ರಾರು ಭಕ್ತರ ಜಯಘೋಷಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.ಉತ್ಸವದ ಅಂಗವಾಗಿ ನಿಗಧಿಯಂತೆ ಲಚ್ಯಾಣ ಹಾಗೂ ಬಂಥನಾಳ ಮಠದ ಪ್ರಸ್ತುತ ಪೀಠಾಧೀಶರಾದ ಶ್ರೀ ವೃಷಭಲಿಂಗೇಶ್ವರ ಮಹಾ ಶಿವಯೋಗಿಗಳ ಅಡ್ಡ ಪಲ್ಲಕ್ಕಿ ಉತ್ಸವ ನಡೆಯಬೇಕಿತ್ತು. ಆದರೆ ಬಂಥನಾಳ ಪೂಜ್ಯರ ಅಪ್ಪಣೆಯ ಮೇರೆಗೆ ಯರನಾಳ ಮಠದ ಪೀಠಾಧೀಶರಾದ ಪೂಜ್ಯ ಗುರು ಸಂಗನಬಸವ ಮಹಾಸ್ವಾಮೀಜಿ ಅವರ ಅಡ್ಡ ಪಲ್ಲಕ್ಕಿ ಉತ್ಸವ ಹಾಗೂ ಅಗ್ನಿ ಪ್ರವೇಶ ಕಾರ್ಯಕ್ರಮ ಇದೇ ಮೊದಲ ಬಾರಿಗೆ ನಡೆಯಿತು. ಅಪರೂಪದ ಈ ದೃಶ್ಯಕ್ಕೆ ನೆರೆದ ಸಹಸ್ರಾರು ಜನರು ಸಾಕ್ಷಿಯಾಗಿ ಪೂಜ್ಯರ ದರ್ಶನ ಪಡೆದು ಪುನೀತರಾದರು.ಶ್ರೀ ಸಿದ್ದಲಿಂಗ ಮಹಾರಾಜರ ಐಕ್ಯ ಮಂಟಪದಿಂದ ಆರಂಭವಾದ ಯರನಾಳ ಪೂಜ್ಯರ ಪಲ್ಲಕ್ಕಿ ಉತ್ಸವ ಭವ್ಯ ಮೆರವಣಿಗೆಯೊಂದಿಗೆ ಉತ್ತರ ದಿಕ್ಕಿನ ಮಠದ ಮಹಾದ್ವಾರ ಬಾಗಿಲಿನ ಮುಂಭಾಗದ ಪಾದಗಟ್ಟೆಯ ವರೆಗೆ ವಾದ್ಯ ಮೇಳದೊಂದಿಗೆ ನಡೆಯಿತು.ಬಳಿಕ ಪುರವಂತರೊAದಿಗೆ ಅಗ್ನಿ ಶಮನ ಕಾರ್ಯಕ್ರಮ ಮಠದ…

Read More

ಲೇಖನ- ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಬಾಳ ದೇವತೆ,ನಾನಿಂದು ಬಾನಿನಾಚೆಯ ಪರಿಧಿಯಲ್ಲಿ ರೆಕ್ಕೆ ಬಿಚ್ಚಿ ಹಾರುತ್ತಿದ್ದೇನೆಂದರೆ ಅದಕ್ಕೆ ಕಾರಣ ನಿನ್ನೊಂದಿಗೆ ಕಳೆದ ಸವಿ ಕ್ಷಣಗಳೇ ಹೊರತು ಬೇರೆನಿಲ್ಲ. ನಿನ್ನನ್ನು ಸೇರುವ ಮುನ್ನ ಬದುಕು ಹರಿದ ಗಾಳಿ ಪಟವಾಗಿತ್ತು. ಮನದೊಳಗೆ ಸುಂದರ ಕನಸುಗಳು ನುಸುಳಲು ಬಿಡದಂಥ ವಿಚಿತ್ರ ಪರಿಸ್ಥಿತಿ. ಒಳಗೊಳಗೆ ಅವಮಾನ ನುಂಗಿ ಕೊಳ್ಳುತ್ತಿದ್ದೆ. ಬಡತನದ ಅಸಹಾಯಕ ಸ್ಥಿತಿ ಕಣ್ಣೀರನ್ನೂ ಬತ್ತಿಸಿತ್ತು. ಹೋದಲೆಲ್ಲ ಹಡೆದವ್ವನಿಗಾದ ಅವಮಾನಗಳು ಸುತ್ತಿಕೊಂಡು ಬರುತ್ತಿದ್ದವು. ಹಣೆಯ ಮೇಲಿನ ಗಾಯದ ಗೀರಿನಂತೆ ಎದ್ದು ಕಾಣುತ್ತಿದ್ದವು.ಬೀದಿ ದೀಪಗಳ ಕೆಳಗೆ ಪುಸ್ತಕ ತೆರೆದಾಗಲೂ ನನ್ನನ್ನು ನಿಲ್ಲಿಸಿ ಕೇಳುತ್ತಿದ್ದವು. ಬೆಟ್ಟದ ಮೇಲೆ ಚಳಿ ಬೀಸುವಾಗಲೂ ಮೈಯಲ್ಲಿ ಸಣ್ಣ ನಡುಕ. ಬದುಕು ಹೀಗೇ ನನ್ನನ್ನು ಕಪಿ ಮುಷ್ಟಿಯಲ್ಲಿ ಹಿಡಿದುಕೊಂಡೇ ನಡೆದರೆ ಗತಿ ಏನು? ಎಂಬ ಚಿಂತೆಯ ಸುಳಿಯಲ್ಲಿ ಸಿಕ್ಕಾಗ ಭರವಸೆಯ ಕಿರಣದಂತೆ ಬಂದ ಬಾಳ ದೇವತೆ ನೀನು. ಬೆಟ್ಟದ ಮೇಲಿನ ಹನುಮಂತನ ದೇವಾಲಯ ನನ್ನ ಖಾಯಂ ವಿಳಾಸ. ನೀನು ಪ್ರತಿ ಶನಿವಾರ ಗೆಳತಿಯರ…

Read More