Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅಂಚೆ ವಿಭಾಗದ ೨೦೨೫-೨೬ನೇ ಸಾಲಿನ ೪ನೇ ತ್ರೈಮಾಸಿಕ ಅಂಚೆ ಅದಾಲತ್ ಕಾರ್ಯಕ್ರಮ ಮಾ.೨೩ ರಂದು ಮಧ್ಯಾಹ್ನ ೩ ಗಂಟೆಗೆ ವಿಜಯಪುರ ವಿಭಾಗದ ಅಂಚೆ ಅಧೀಕ್ಷಕರ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ.ಜಿಲ್ಲೆಯ ಬಬಲೇಶ್ವರ, ಬಸವನ ಬಾಗೇವಾಡಿ, ಚಡಚಣ, ದೇವರಹಿಪ್ಪರಗಿ, ಇಂಡಿ, ಕೊಲ್ಹಾರ, ಮುದ್ದೇಬಿಹಾಳ, ನಿಡಗುಂದಿ, ಸಿಂದಗಿ, ತಾಳಿಕೋಟೆ, ತಿಕೋಟಾ, ಆಲಮೇಲ ಹಾಗೂ ವಿಜಯಪುರ ತಾಲೂಕುಗಳ ವ್ಯಾಪ್ತಿಯ ಅಂಚೆ ಸೇವೆಗಳಿಗೆ ಸಲಹೆ-ಸೂಚನೆ ಹಾಗೂ ದೂರುಗಳನ್ನು ಅಂಚೆ ಅದಾಲತ್‌ನಲ್ಲಿ ವಿಚಾರಣೆಗೆ ಎಂದು ಮೇಲ್ಬರಹ ಬರೆದು ದಿನಾಂಕ: ೧೬-೦೩-೨೦೨೬ರೊಳಗೆ ಯಾವುದೇ ಅಂಚೆ ಕಚೇರಿಯಲ್ಲಿ ಸಲ್ಲಿಸಬಹುದಾಗಿದೆ. ಇಂತಹ ದೂರು ಮತ್ತು ಸಲಹೆಯ ಲಕೋಟೆಗೆ ಯಾವುದೇ ಅಂಚೆ ವೆಚ್ಚ ಭರಿಸುವ ಅಗತ್ಯವಿರುವುದಿಲ್ಲ.ಅಂಚೆ ಅದಾಲತ್‌ನಲ್ಲಿ ಅಂಚೆ ಇಲಾಖೆಯಿಂದ ಒದಗಿಸಲಾಗುತ್ತಿರುವ ಸೇವೆಗಳಲ್ಲಿ ಇರುವ ಕೊರತೆಗಳನ್ನು ಮತ್ತು ಸುಧಾರಿಸುವ ಸಲಹೆ ಸೂಚನೆಗಳ ಕುರಿತು ಚರ್ಚಿಸಲಾಗುವುದು ಎಂದು ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಹೆಚ್ ಡಿ ಕೋಟೆ: ಸಾಮೂಹಿಕ ವಿವಾಹ ಮಾಡಿಸಿ ಬಡಕುಟುಂಬಗಳಿಗೆ ದಾರಿದೀಪವಾದ ಹೆಚ್ ಡಿ ಕೋಟೆ ಶಾಸಕ ಅನಿಲ್ ಚಿಕ್ಕಮಾದು – ಸೌಮ್ಯ ಅನಿಲ್ ದಂಪತಿ. ಇಂದಿನ ದಿನಗಳಲ್ಲಿ ಮದುವೆ ಎನ್ನುವುದು ಅತ್ಯಂತ ದುಬಾರಿ ಆಚರಣೆಯಾಗಿ ಬದಲಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಆರ್ಥಿಕ ಹೊರೆಯನ್ನು ಕಡಿಮೆ ಮಾಡಿ, ಸಾಮಾಜಿಕ ಕಳಕಳಿಯನ್ನು ಮೆರೆಯುವ ‘ಸಾಮೂಹಿಕ ಸರಳ ವಿವಾಹ’ಗಳು ಮಾದರಿಯಾಗುತ್ತಿವೆ. ಇಂತಹ ಮಹತ್ಕಾರ್ಯಕ್ಕೆ ಮುಂದಾಗಿ ನಾಲ್ಕು ಜೋಡಿ ಸಾಮೂಹಿಕ ಸರಳ ವಿವಾಹ ನೆರವೇರಿಸುವ ಮೂಲಕ ಶಾಸಕ ಅನಿಲ್ ಚಿಕ್ಕಮಾದು ಮಾದರಿಯಾಗಿದ್ದಾರೆ.ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಯು ಈ ಯೋಜನೆಯಡಿ ವಧುವಿಗೆ ಚಿನ್ನದ ತಾಳಿ, ವರನಿಗೆ ಧೋತಿ-ಶರ್ಟ್ ಮತ್ತು ದಂಪತಿಗಳಿಗೆ ಒಟ್ಟು ₹55,000 ವರೆಗಿನ ಪ್ರೋತ್ಸಾಹ ಧನವನ್ನು ನೀಡುತ್ತಿದೆ. ಆದರೆ ನಂಜಗೂಡಿನಲ್ಲಿ ನಡೆದ ಈ ಸಾಮೂಹಿಕ ವಿವಾಹಕ್ಕೆ ಸರ್ಕಾರದಿಂದ ಒಂದೇ ಒಂದು ರೂಪಾಯಿ ಹಣ‌ ಪಡೆಯದೆ ತಾಳಿ ಬಟ್ಟೆ, ಬಂದಂತಹ ಪ್ರತಿಯೊಬ್ಬರಿಗೂ ಊಟ ತಿಂಡಿ ವ್ಯವಸ್ಥೆ ಮಾಡುವ ಮೂಲಕ ಸಂಪೂರ್ಣ ವೆಚ್ಚವನ್ನು ಶಾಸಕ ಅನಿಲ್ ಚಿಕ್ಕಮಾದು ದಂಪತಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಹಿಳೆಯರು ಆತ್ಮಗೌರವ, ಆತ್ಮವಿಶ್ವಾಸ ಮತ್ತು ಆತ್ಮಸ್ಥೈರ್ಯದಂತಹ ಗುಣಗಳನ್ನು ಬೆಳೆಸಿಕೊಂಡರೆ ಸಮಾಜದಲ್ಲಿ ಧೈರ್ಯವಾಗಿ ಮುನ್ನಡೆಯಲು ಸಾಧ್ಯವಾಗುತ್ತದೆ ಎಂದು ಕವಿಯಿತ್ರಿ ಡಾ.ರೇಖಾ ಪಾಟೀಲ ಹೇಳಿದರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಅಹಲ್ಯಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ಹಾಗೂ ಕಲಾ ನಿಕಾಯದ ಸಹಯೋಗದೊಂದಿಗೆ ಮಹಿಳಾ ಸಾಂಸ್ಕೃತಿಕ ಹಬ್ಬ-೨೦೨೬ ಪ್ರಯುಕ್ತ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸೋಮವಾರ ಆಯೋಜಿಸಿದ್ದ ಬಹುಭಾಷಾ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.ಮಹಿಳೆಯರ ಮೇಲಿನ ದೌರ್ಜನ್ಯವನ್ನು ತೊಡೆದು ಹಾಕಿ ಅವರು ತಲೆಯೆತ್ತಿ ನಿಲ್ಲಲು ಸಮಾಜದ ಎಲ್ಲರೂ ಸಹಕಾರ ನೀಡಬೇಕು. ಜಾಗತಿಕ ಮಟ್ಟದಲ್ಲಿ ಮಹಿಳೆಯರು ಹಲವು ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳನ್ನು ಪಡೆದಿದ್ದರೂ, ದೈಹಿಕ ಮತ್ತು ಮಾನಸಿಕ ಒತ್ತಡಗಳನ್ನು ಎದುರಿಸುವ ಪರಿಸ್ಥಿತಿ ಇಂದಿಗೂ ಇದೆ. ಮಹಿಳೆಯರು ತಮ್ಮ ಮೇಲಿನ ದೌರ್ಜನ್ಯಗಳ ಕುರಿತು ದೂರು ನೀಡಲು ಇನ್ನೂ ಹಿಂಜರಿಯುತ್ತಿದ್ದಾರೆ, ಏಕೆಂದರೆ ಅಪರಾಧಿಗಳಿಂದಾಗುವ ಮುಂದಿನ ತೊಂದರೆಗಳ ಭಯ ಇದೆ ಎಂದು ಹೇಳಿದರು. ಲಿಂಗ ಅಸಮಾನತೆ ಮತ್ತು ಲಿಂಗ ಆಧಾರಿತ ತಾರತಮ್ಯವು…

Read More

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ’ಉದಯರಶ್ಮಿ’ ದಿನಪತ್ರಿಕೆಯ ಪ್ರಕಾಶಕಿ ಶ್ರೀಮತಿ ಶೈಲಾ ಮಣೂರ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿ ಹೊಂದಿದಾಗ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ’ಉದಯರಶ್ಮಿ’ ದಿನಪತ್ರಿಕೆಯ ಪ್ರಕಾಶಕಿ ಶ್ರೀಮತಿ ಶೈಲಾ ಮಣೂರ ಅಭಿಪ್ರಾಯಿಸಿದರು.ನಗರದ ಗೆಲಾಕ್ಸಿ ಹೊಟೇಲಿನಲ್ಲಿ ’ಬಿಜಾಪುರ ಬೆಸ್ಟೀ ಫ್ರೆಂಡ್ಸ್ ’ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಪ್ರತಿ ಕುಟುಂಬದಲ್ಲಿಯೂ ಹೆಣ್ಣುಮಗಳು ತಾಯಿಯಾಗಿ, ಮಗಳಾಗಿ, ಸಹೋದರಿಯಾಗಿ, ಪತ್ನಿಯಾಗಿ ಹೀಗೆ ಎಲ್ಲ ರೀತಿಯ ರೂಪಗಳಲ್ಲಿ ತನ್ನ ಕುಟುಂಬವನ್ನು ರಕ್ಷಣೆ ಮಾಡುವುದರ ಜೊತೆಗೆ ಸಾಮಾಜಿಕ ಜೀವನವನ್ನು ಮುನ್ನಡೆಸುತ್ತಿದ್ದಾಳೆ. ಅವಳ ದುಡಿಮೆಗೆ, ಅವಳ ತ್ಯಾಗಕ್ಕೆ ಬೆಲೆ ಕಟ್ಟಲಾಗದು ಎಂದು ಶ್ಲಾಘಿಸಿದರು.ಶಿಕ್ಷಕಿ ಶ್ರೀಮತಿ ಸುಮಂಗಲಾ ಬಿರಾದಾರ (ಕೋಳೂರ) ಮಾತನಾಡಿ, ಗ್ರಾಮೀಣ ಮಹಿಳೆಯರು ಆರ್ಥಿಕವಾಗಿ ಸಬಲೀಕರಣ ಹೊಂದಬೇಕು. ಸ್ವಾವಲಂಬಿ ಜೀವನ ನಡೆಸಲು ಶಕ್ತಳಾಗಬೇಕು. ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ, ಶಿಕ್ಷಣ ನೀಡಿದಾಗ ಮಾತ್ರ ಅವರ ಭವಿಷ್ಯ ಉಜ್ವಲವಾಗಲು ಸಾಧ್ಯ ಎಂದು ಹೇಳಿದರು.ಸೌಂದರ್ಯ ತಜ್ಞೆ ಶ್ರೀಮತಿ ರೇಖಾ…

Read More

ಉದಯರಶ್ಮಿ ದಿನಪತ್ರಿಕೆ ದಾವಣಗೆರೆ: ‘ಪದ್ಮಭೂಣ’ ಡಾ. ಪಂ. ಪುಟ್ಟರಾಜರ ಜೀವನ ಅದು ಸಂಗೀತದ ಶ್ರೀಗಂಧವಾಗಿತ್ತು. ಶ್ರೀಗಂಧವು ತೇಯಿದಾಗ ಹೇಗೆ ಪರಿಮಳ ಬೀರಿ ಪರಿಸರವನ್ನು ಆಹ್ಲಾದಕರವಾಗಿ ಮಾಡುತ್ತದೆಯೋ ಹಾಗೆ ಪುಟ್ಟರಾಜ ಗುರುವರ್ಯರು, ತಮ್ಮ ಜೀವನವನ್ನು ಸಂಗೀತಕ್ಕೆ ತೆಯಿದು, ಸಂಗೀತದ ಪರಿಮಳವನ್ನು ತಮ್ಮ ಶಿಷ್ಯ ಪ್ರಶಿಷ್ಯರಿಂದ ವಿಶ್ವದ ತುಂಬೆಲ್ಲಾ ಪಸರಿಸಿದರು. ಸಂಗೀತದ ಮೂಲಕ ಶಿವಯೋಗವನ್ನು ಸಾಧಿಸಿ ಶಿವಯೋಗಿಯನಿಸಿದರು. ಅವರ ಲಿಂಗ ಪೂಜೆ ಸಂಗೀತಯುಕ್ತವಾಗಿರುತಿತ್ತು. ಇಂತಹ ಪೂಜ್ಯರ ಪ್ರೀತಿಗೆ ಪಾತ್ರರಾದ ದಾವಣಗೆರೆ ಭಕ್ತರೇ ಧನ್ಯರು ಎಂದು ವೇ. ಚನ್ನವೀರ ಸ್ವಾಮಿ ಹಿರೇಮಠ, (ಕಡಣಿ) ಸಂಸ್ಥಾಪಕರು, ಡಾ. ಪಂ. ಪುಟ್ಟರಾಜ ಸೇವಾ ಸಮಿತಿ, ಗದಗ ಇವರು ಹೇಳಿದರು.ಅವರು ದಿನಾಂಕ, ೦೮ ರಂದು ಬಾನುವಾರ ಸಂಜೆ ೬ ಗಂಟೆಗೆ, ದಾವಣಗೆರೆ ನಗರದ ಶ್ರೀಗಂಧ ರೆಸಿಡೆನ್ಸಿಯ ‘ಗಿಹನ’ ಬ್ಯಾಂಕ್ವೆಟ್ ಹಾಲಿನಲ್ಲಿ, ಗದುಗಿನ ಡಾ. ಪಂ. ಪುಟ್ಟರಾಜ ಸೇವಾ ಸಮಿತಿ, ಮತ್ತು ನಗರದ ಶ್ರೀಗಂಧ ರೆಸಿಡೆನ್ಸಿ, ಸಂಯುಕ್ತವಾಗಿ ಆಯೋಜಿಸಲಾಗಿದ್ದ ಪದ್ಮಭೂಷಣ ಡಾ. ಪಂ. ಪುಟ್ಟರಾಜರ ೧೧೨ನೆಯ ಜಯಂತಿ ಹಾಗೂ ಪುಟ್ಟರಾಜರ ಮಾಸದ…

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ಪಟ್ಟಣದಲ್ಲಿ ಬಣ್ಣದ ಹಬ್ಬದ ಸಂಭ್ರಮ ಮನೆ ಮಾಡಿದೆ. ಯುವಕ ಯುವತಿಯರು, ಚಿಣ್ಣರು ಬಣ್ಣದೋಕುಳಿಯಲ್ಲಿFCC ಮಿಂದೆದ್ದಿದ್ದರು. ಹೋಳಿಯಾಟದಲ್ಲಿ ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು. ಗಲ್ಲಿ, ಗಲ್ಲಿಗಳಲ್ಲಿ ರೇನ್ ಡಾನ್ಸ್ ಹಾಗೂ ಡಿಜೆ ಸೌಂಡ್ಗೆ ಹೆಜ್ಜೆ ಹಾಕಿ ಕುಣಿದಿದ್ದಾರೆ.ಹೋಳಿ ಹಬ್ಬದ ಅಂಗವಾಗಿ ಪಟ್ಟಣದಲ್ಲಿ ಬೆಳಗ್ಗೆಯಿಂದಲೇ ಬಣ್ಣಗಳ ಆಟ ಶುರುವಾಗಿ, ಮಕ್ಕಳು, ಯುವಕರು, ಮಹಿಳೆಯರು ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು.ಹೋಳಿ ಹುಣ್ಣಿಮೆಯ 5ನೇ ದಿನ ರವಿವಾರದಂದು ಪಟ್ಟಣದಲ್ಲಿ ಅಲ್ಲಲ್ಲಿ ರೇನ್ ಡ್ಯಾನ್ಸ್ ಹಾಗೂ ಡಿಜೆ ಸೌಂಡ್ ಎರ್ಪಡಿಸಿದ್ದರು. ಡಿಜೆ. ಸೌಂಡ್ಗೆ ಮಹಿಳೆಯರು, ಯುವತಿಯರು, ಯುವಕರು ಹೆಜ್ಜೆ ಹಾಕಿ, ನೃತ್ಯ ಮಾಡಿ ಬಣ್ಣದ ಹಬ್ಬದ ಉತ್ಸಾಹ ಹೆಚ್ಚಿಸಿದರು. ಪಟ್ಟಣದಾದ್ಯಂತ ಹೋಳಿ ಸಂಭ್ರಮ ಜೋರಾಗಿತ್ತು. ರಂಗಿನಾಟದಲ್ಲಿ ಮಿಂದೆದ್ದ ಯುವಕ ಯುವತಿಯರು, ಪರಸ್ಪರ ಬಣ್ಣ ಎರಚಿ ಕೇಕೆ ಹಾಕಿ ಕುಣಿದು ಕುಪ್ಪಳಿಸಿದ ದೃಶ್ಯ ಪಟ್ಟಣದಾದ್ಯಂತ ಕಂಡು ಬಂದಿತು.ಬಣ್ಣದಾಟದ ದಿನ ಯಾವುದೇ ರೀತಿಯ ಅಹಿತಕರ ಘಟನೆ ಸಂಭವಿಸದಂತೆ ಮುಂಜಾಗೃತಾ ಕ್ರಮವಾಗಿ ಸಿ.ಪಿ.ಐ. ಪರಶುರಾಮ ಮನಗೂಳಿ ನೇತೃತ್ವದಲ್ಲಿ ಪೊಲೀಸ್…

Read More

ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಹೆಣ್ಣು ಮಗಳು ತಾಯಿಯಾಗಿ, ಮಗಳಾಗಿ, ಸಹೋದರಿಯಾಗಿ, ಪತ್ನಿಯಾಗಿ ಎಲ್ಲಾ ನಾನಾ ರೀತಿಯ ರೂಪಗಳಲ್ಲಿ ತನ್ನ ಕುಟುಂಬವನ್ನು ರಕ್ಷಣೆ ಮಾಡುವುದರ ಜೊತೆಗೆ ಸಾಮಾಜಿಕ ಜೀವನವನ್ನು ಮುನ್ನಡೆಸುತ್ತಿದ್ದಾಳೆ ಎಂದು ನಿವೃತ್ತ ಶಿಕ್ಷಕಿ ಶೇಕವ್ವ ಶಾವೀರ್ ಹೇಳಿದರು.ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕಡಪಟ್ಟಿ ಗ್ರಾಮದ ನೆಲ್ಲೂರು ನಿಂಬೆಕ್ಕ ಸಮುದಾಯ ಭವನದಲ್ಲಿ ನಡೆದ ಸಾವಿತ್ರಿಬಾಯಿ ಫುಲೆ ಮಹಿಳಾ ಮಂಡಲ ಕಡಪಟ್ಟಿ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ನಮ್ಮ ಭಾರತೀಯ ಅನೇಕ ಮಹಿಳೆಯರು ಇತಿಹಾಸವನ್ನು ನಿರ್ಮಿಸಿದ್ದಾರೆ ಕಿತ್ತೂರ ರಾಣಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ಒನಕೆ ಓಬವ್ವ, ಝಾನ್ಸಿ ರಾಣಿ ಲಕ್ಷ್ಮೀಬಾಯಿ ಇವರು ಬ್ರಿಟಿಷರ ವಿರುದ್ಧ ಹೋರಾಡಿ ನಮ್ಮ ದೇಶದ ಕೀರ್ತಿಯನ್ನು ಎತ್ತಿ ಹಿಡಿದಿದ್ದಾರೆ, ಸಾಹಿತ್ಯ ಕ್ಷೇತ್ರದಲ್ಲಿ ಅಕ್ಕಮಹಾದೇವಿ ವಚನಗಳು ಅಜರಾಮರವಾಗಿವೆ ಇವುಗಳು ನಮ್ಮ ಬದುಕಿಗೆ ದಾರಿದೀಪವಾಗಿವೆ, ನಮ್ಮ ಜೀವನದಲ್ಲಿ ಯಾವ ರೀತಿಯಾಗಿರಬೇಕೆಂದು ವಚನಗಳು ನಮಗೆ ತಿಳಿಸಿಕೊಡುತ್ತವೆ,ಈ ಎಲ್ಲ ಮಹಿಳೆಯರೂ ನಮಗೆ ಸ್ಫೂರ್ತಿ ,ಎಲ್ಲ ಕ್ಷೇತ್ರದಲ್ಲಿ ಮಹಿಳೆ ಮುಂದೆ ಬರಬೇಕೆಂದು ಹೇಳಿದರು.ಶಿಕ್ಷಕರಾದ ಬಸವರಾಜ್…

Read More

ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಕಾನೂನು ಮಹಾವಿದ್ಯಾಲಯದಲ್ಲಿ‌ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಕಾನೂನು ಮಹಾವಿದ್ಯಾಲಯದಲ್ಲಿ‌ ನಾನಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳೆಯರನ್ನು‌ ಸನ್ಮಾನಿಸಲಾಯಿತು.ಸೋಮವಾರ ನಡೆದ ಈ ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಸಿಂಧು ಪೋತದಾರ‌ ಪಾಲ್ಗೊಂಡು ಮಾತನಾಡಿದರು.ಮಹಿಳೆಯರು ಧೈರ್ಯದಿಂದ ಮುನ್ನಡೆಯಬೇಕು. ಪ್ರತಿಯೊಂದು ಕ್ಷೇತ್ರದಲ್ಲೂ ಆತ್ಮವಿಶ್ವಾಸದಿಂದ ಮುನ್ನುಗ್ಗಬೇಕು‌ ಎಂದು‌‌ ಹೇಳಿದ ಅವರು, ನಾನಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯನ್ನು ಸನ್ಮಾನಿಸುವ ಈ ಪ್ರಯತ್ನವನ್ನು ಪ್ರಶಂಸಿಸಿದರು.ಕಾನೂನು‌ ಶಾಲೆಯ ಪ್ರಾಚಾರ್ಯ ಡಾ. ರಘುವೀರ ಜಿ. ಕುಲಕರ್ಣಿ ಮಾತನಾಡಿ, ಮಹಿಳೆಯರು ನಾನಾ ಕ್ಷೇತ್ರಗಳಲ್ಲಿ ಮಾಡಿರುವ ಸೇವೆಗಳನ್ನು‌ ಸ್ಮರಿಸಿದರು.ಈ ಸಂದರ್ಭದಲ್ಲಿ‌ ಮಹಿಳಾ ಸಂಘದ ಸಂಯೋಜಕಿ ಸನಾ ಕೌಸರ್ ಮೊಗಲಾಯಿ, ಬೋಧಕ ಮತ್ತು ಬೋಧಕರ ಹೊರತಾದ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Read More

ಲೇಖನ:- ಸಂತೋಷ್ ರಾವ್ ಪೆರ್ಮುಡಪೆರ್ಮುಡ ಮನೆಪಟ್ರಮೆ ಗ್ರಾಮ ಮತ್ತು ಅಂಚೆಬೆಳ್ತಂಗಡಿ ತಾಲೂಕು,ದ.ಕ ಜಿಲ್ಲೆ-574198ದೂ: 9742884160 ಉದಯರಶ್ಮಿ ದಿನಪತ್ರಿಕೆ ‘ಸ್ತ್ರೀ’ ಎಂದರೆ ಅಷ್ಟೇ ಸಾಕೆ? ಆಕೆ ಮನೆಯ ಮಗಳಾಗಿ, ಒಡತಿಯಾಗಿ, ಗರತಿ. ತಾಯಾಗಿ, ತಂಗಿಯಾಗಿ, ಮಡದಿಯಾಗಿ, ಅಕ್ಕನಾಗಿ ಗಂಡು ಹೆಣ್ಣೆಂಬ ಬೇಧವಿಲ್ಲದೇ ಎಲ್ಲರನ್ನೂ ಸಲಹುತ್ತಾಳೆ. ಇಂತಹ ಶಕ್ತಿಯನ್ನು ಕೇವಲ ‘ಸ್ತ್ರೀ’ ಎಂದು ಕರೆದರಷ್ಟೇ ಸಾಲದು. ಒಂದು ಮನೆಯ ಮಗಳಾಗಿ ಹುಟ್ಟಿ, ಮತ್ತೊಂದು ಮನೆಯನ್ನು ಸೊಸೆಯಾಗಿ ಬೆಳಗುತ್ತಾಳೆ. ತನ್ನೊಡಲಲ್ಲಿ ಒಂದು ಹೊಸ ಜೀವಕ್ಕೆ ಉಸಿರು ನೀಡಿ ಜೀವವಾಗುವವಳು. ಬದುಕಿಡೀ ತನ್ನನು ತಾನು ಗಂಧದಂತೆ ತೇಯುವಳು, ದೀಪದಂತೆ ಉರಿಯುವಳು. ಅವಳು ಬರೀ ಹೆಣ್ಣಲ್ಲ, ಜಗತ್ತಿಗೆ ಕಣ್ಣು. ಅನುದಿನವೂ ಕುಟುಂಬಕ್ಕಾಗಿ ದುಡಿಯುವ ಅವಳಿಗಾಗಿ ವರ್ಷದ ಒಂದು ದಿನವನ್ನು ಮುಡಿಪಾಗಿಡಬೇಕು. ಮಾರ್ಚ್ 8ನ್ನು ಮಹಿಳಾ ದಿನಾಚರಣೆಯಾಗಿದ್ದು, ಅಂದು ಮಹಿಳೆಯರ ಸಾಧನೆಯನ್ನು ಗೌರವಿಸುವುದರೊಂದಿಗೆ ಲಿಂಗ ಸಮಾನತೆಯ ಜಾಗೃತಿ ಮೂಡಿಸಲಾಗುತ್ತದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಮಹಿಳೆಯರ ಸಾಧನೆಯನ್ನು ನೆನೆಯಲಾಗುತ್ತದೆ. 1908ರಲ್ಲಿ ಅಮೆರಿಕದ ನ್ಯೂಯಾರ್ಕಿನಲ್ಲಿ ಸಾವಿರಾರು ಮಹಿಳೆಯರು ಉತ್ತಮ ವೇತನ, ಕಡಿಮೆ ಕೆಲಸದ…

Read More

ಲೇಖನ- ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಬದುಕು ಯಾವಾಗಲೂ ನಾವು ಅಂದುಕೊಂಡಂತೆಯೇ ಸಾಗುವುದಿಲ್ಲ. ಅನ್ನೋದು ಹಲವಾರು ತಿರುವುಗಳನ್ನು ಕಂಡವರಿಗೆಲ್ಲ ಅರಿವಿಗೆ ಬಂದಿರುತ್ತದೆ. ಬದುಕಿನಲ್ಲಿ ನಾವು ನಿರೀಕ್ಷಿಸಿದಂತೆ ನಡೆಯುವುದು ತುಂಬಾ ಕಡಿಮೆ. ‘ಬದುಕು ಅನಿರೀಕ್ಷಿತಗಳ ಮೊತ್ತ.’ ಎಂಬ ಮಾತು ಅಕ್ಷರಶಃ ಸತ್ಯ. ಜೀವನವು ಅನಿರೀಕ್ಷಿತ. ಅದು ಹಠಾತ್ತನೇ ಮತ್ತು ಅನೌಪಚಾರಿಕವಾಗಿ ಕೊನೆಗೊಳ್ಳಬಹುದು ಎಂಬುದು ಈಗಾಗಲೇ ವಿಪುಲ ಉದಾಹರಣೆಗಳಿಂದ ಸಾಬೀತಾಗಿದೆ. ಅಂದರೆ ಇಲ್ಲಿ ನಾನು ಹೇಳ ಹೊರಟಿರುವುದು ಅನಿರೀಕ್ಷಿತ ಘಟನೆಗಳು ನಡೆದಾಗ ದುಃಖ ನಿರಾಶೆ ಭಯ ಉಂಟಾಗುವುದು ಸಹಜ. ಆದರೆ ಅವೇ ಭಾವನೆಗಳಲ್ಲಿ ಮುಳುಗಿಹೋಗುವಷ್ಟು ಸಮಯವಿಲ್ಲ. ಅಂದರೆ ಇದರರ್ಥ ಜೀವನವು ವೇಗವಾಗಿ ಚಲಿಸುತ್ತದೆ ಮತ್ತು ಅವಕಾಶಗಳು ಶಾಶ್ವತವಾಗಿ ಉಳಿಯುವುದಿಲ್ಲ ಎಂಬುದನ್ನು ಅರಿವಿನಲ್ಲಿ ಇಟ್ಟುಕೊಳ್ಳಬೇಕು. ‘ನಿಮ್ಮ ಜೀವನದಲ್ಲಿ ನಿಮ್ಮ ಛಾಪು ಮೂಡಿಸಲು ನಿಮಗೆ ಕೇವಲ ಅಲ್ಪಾವಧಿ ಮಾತ್ರ ಇದೆ.’ ಈ ಹೇಳಿಕೆಯಲ್ಲಿ ಹಾಲಿವುಡ್ ಜಾರ್ಜ್ ಕ್ಲೋನಿ ಗಮನಾರ್ಹ ಪರಿಣಾಮ ಬೀರಲು ಇರುವ ಸೀಮಿತ ಸಮಯವನ್ನು ಒತ್ತಿ ಹೇಳಿದ್ದಾರೆ. ಒಂದು ಕಲೆ‘ಸಮುದ್ರ ಶಾಂತವಿದ್ದಾಗ ಯಾರೂ…

Read More