Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಜ್ಯೋತಿಬಾ ಫುಲೆ ಆದರ್ಶ ವ್ಯಕ್ತಿಗಳಾಗಿದ್ದರು, ಎಲ್ಲರಿಗೂ ಶಿಕ್ಷಣ ದೊರೆಯಲಿ ಎಂದು ಹಿಂದುಳಿದ ವರ್ಗ, ದೀನ ದಲಿತರಿಗೆ ಶಿಕ್ಷಣ ನೀಡಿದರು, ಸಾಮಾಜಿಕ ಸಮಾನತೆ ಮತ್ತು ಮಹಿಳಾ ಶಿಕ್ಷಣಕ್ಕಾಗಿ ಹೋರಾಡಿದವರು ಎಂದು ಶಿಕ್ಷಣ ಪ್ರೇಮಿ ಮಹಾನಿಂಗ ರಾಮದುರ್ಗ ಹೇಳಿದರು.ಸಮೀಪದ ಕಡಪಟ್ಟಿ ಗ್ರಾಮದ ಮಾಳಿ ಸಮಾಜ ಹಾಗೂ ಶ್ರೀ ಜ್ಯೋತಿಬಾ ಫುಲೆ ಯುವಕ ಮಂಡಳ ಇವರ ಸಹಯೋಗದಲ್ಲಿ ನಡೆದ ಮಹಾತ್ಮ ಜ್ಯೋತಿಬಾ ಫುಲೆ ಅವರ 199 ನೆಯ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಜ್ಯೋತಿಬಾ ಫುಲೆ ಹಾಗೂ ಸಾವಿತ್ರಿಬಾಯಿ ಫುಲೆ ಆದರ್ಶ ದಂಪತಿಗಳಾಗಿದ್ದರು ಅವರ ಆದರ್ಶಗಳನ್ನು ನಾವು ಪಾಲಿಸಬೇಕು, ಅವರು ಮಾಡಿದ ಸಾಮಾಜಿಕ ಕಾರ್ಯಗಳನ್ನು ನಾವು ಎಂದಿಗೂ ಮರೆಯಬಾರದು, ಎಲ್ಲರೂ ಸೇರಿ ಸಮಾಜವನ್ನು ಒಗ್ಗೂಡಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.ಸಾಮಾಜಿಕ ಹೋರಾಟಗಾರ ಜಕ್ಕಪ್ಪ ಮೆಂಡಿಗೇರಿ ಮಾತನಾಡಿ,ಜ್ಯೋತಿಬಾ ಫುಲೆ ಅವರು ಶಿಕ್ಷಣ ಪ್ರೇಮಿಯಾಗಿದ್ದರು ಸಮಾಜದ ಪ್ರತಿಯೊಬ್ಬ ಮಹಿಳೆಯರಿಗೆ ಶಿಕ್ಷಣ ದೊರೆಯಲಿ ಎಂದು ಹಗಲಿರುಳು ದುಡಿದವರು, ಸ್ವತಂತ್ರ ಪೂರ್ವದಲ್ಲಿ ಮಹಿಳೆಯರಿಗೆ ಶಿಕ್ಷಣ ದೊರೆಯಬಾರದೆಂದು ಫುಲೆ ದಂಪತಿಗಳಿಗೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಕ್ಯಾನವಾಸ್ ಆರ್ಟ್ ಫೌಂಡೇಶನ್ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನಸಹಾಯದೊಂದಿಗೆ ವಿಶ್ವ ದೃಶ್ಯಕಲಾ ದಿನಾಚರಣೆಯ ಅಂಗವಾಗಿ ಕ್ಯಾನವಾಸ್ ಆರ್ಟ್ ಫೌಂಡೇಶನ್ ಸಂಸ್ಥೆಯ ಸಂಗ್ರಹದಲ್ಲಿರುವ ನಮ್ಮ ನಾಡಿನ ಹಿರಿಯ ಮತ್ತು ಯುವ ಕಲಾವಿದರ ರೇಖಾಚಿತ್ರ ಮತ್ತು ಚಿತ್ರಕಲಾ ಕಲಾಪ್ರದರ್ಶನವನ್ನು ಬುಧವಾರ ದಿನಾಂಕ : ೧೫-೦೪-೨೦೨೬ ಸಂಜೆ. ೦೪:೦೦ ಗಂಟೆಗೆ ಪ್ರವಾಸೋದ್ಯಮ ಇಲಾಖೆಯ “ಸರಕಾರಿ ಆರ್ಟ್ ಗ್ಯಾಲರಿಯಲ್ಲಿ ನಡೆಯಲಿದೆ ಪ್ರದರ್ಶನದ ಉದ್ಘಾಟನೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಂತೋಷ ಭೋವಿ ನೆರವೆರಿಸಲಿದ್ದಾರೆ ಅತಿಥಿಗಳಾಗಿ ವಿಜಯಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ಅಶೋಕ ಯಡಳ್ಳಿ ಹಿರಿಯ ಕಲಾವಿದರಾದ ಪಿ. ಎಸ್. ಕಡೇಮನಿ, ಪ್ರವಾಸೋಧ್ಯಮ ಇಲಾಖೆಯ ಉಪನಿರ್ದೇಶಕರಾದ ಅರವಿಂದ ಹೂಗಾರ, ವಿಜಯಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಇಂದುಶೇಖರ ಮಣೂರ ಅವರು ಆಗಮಿಸಲಿದ್ದಾರೆ. ಬಹಳ ಅಪರೂಪದ ಮತ್ತು ಶ್ರೇಷ್ಠ ಕಲಾವಿದರುಗಳ ವಿಶೇಷ ಕಲಾಪ್ರದರ್ಶನ ಇದಾಗಲಿದೆ ಈ ಪ್ರದರ್ಶನದಲ್ಲಿ ನಮ್ಮ ನಾಡಿನ ಹೆಸರಾಂತ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆ-1 ಫಲಿತಾಂಶದಲ್ಲಿ ಜಿಲ್ಲೆಯ ಆಲಮಟ್ಟಿ ಎಸ್.ವಿ.ವಿ.ಸಂಸ್ಥೆಯ ಮಂಜಪ್ಪ ಹಡೇ೯ಕರ ಸ್ಮಾರಕ ಸಂಯುಕ್ತ ಪದವಿಪೂರ್ವ (ಎಂಎಚ್ಎಂ) ಕಾಲೇಜು ಹಿಂದೆಂದೂ ಕಂಡರಿಯದ ರೀತಿಯಲ್ಲಿ ಅತ್ಯತ್ತಮ ಫಲಿತಾಂಶ ದಾಖಲಿಸಿಕೊಂಡಿದೆ.2025-2026 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1 ಕಲಾ,ವಾಣಿಜ್ಯ ವಿಭಾಗದಲ್ಲಿ ಈ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಗಳಿಸುವ ಮೂಲಕ ಕಾಲೇಜಿಗೆ, ಸಂಸ್ಥೆಗೆ ಹಾಗೂ ಆಲಮಟ್ಟಿ ಗ್ರಾಮಕ್ಕೆ ಅಪಾರ ಕೀತಿ೯ ತಂದಿದ್ದಾರೆ.ಕಲಾ ವಿಭಾಗದಲ್ಲಿ 92 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ 91 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಕುಳಿತ್ತಿದ್ದ 31 ವಿದ್ಯಾರ್ಥಿಗಳಲ್ಲಿ 30 ಜನ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಕಲಾ ವಿಭಾಗದ ಫಲಿತಾಂಶ ಶೇ, 98.91 ರಷ್ಟಾಗಿದೆ. ವಾಣಿಜ್ಯ ವಿಭಾಗದ ರಿಜಲ್ಟ್ ಶೇ,96.97 ರಷ್ಟಾಗಿದೆ. ಇವೆರಡೂ ವಿಭಾಗ ಸೇರಿ ಈ ಬಾರಿ ಕಾಲೇಜಿನ ಒಟ್ಟು ಫಲಿತಾಂಶ ಶೇ, 98.27 ರಷ್ಟು ದಾಖಲಾಗಿದೆ.ಕಲಾ ವಿಭಾಗದಲ್ಲಿ 20 ಡಿಸ್ಟಿಂಕ್ಷನ್, 60 ಪ್ರಥಮ, 08 ದ್ವಿತೀಯ, 03 ತೃತೀಯ ದಜೆ೯ಯಲ್ಲಿ…
ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ರಾಜ್ಯಾಧ್ಯಕ್ಷರಿಂದ ಬೆದರಿಕೆ ತಂತ್ರ | ಶಿಕ್ಷಕಿ ಜಯಶ್ರೀ ಬೆಣ್ಣಿ ಆರೋಪ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ೨೦೨೬ ರಿಂದ ೩೧ರ ಅವಧಿಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಗೆ ಸಂಬಂಧಿಸಿದಂತೆ ಗೊಂದಲದ ವ್ಯವಸ್ಥೆ ನಿರ್ಮಾಣವಾಗಿದೆ ಎಂದು ಶಿಕ್ಷಕಿ ಜಯಶ್ರೀ ಬೆಣ್ಣಿ ಆಕ್ರೋಶ ವ್ಯಕ್ತಪಡಿಸಿದರು.ಸಿಂದಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಧಿಕ್ಕರಿಸಿ ಸಂಘವು ಈಗ ಪ್ರಕಟಪಡಿಸುತ್ತಿರುವ ಮತದಾರರ ಪಟ್ಟಿಯಲ್ಲಿ ಸೇವೆಗೆ ಸೇರಿದಾಗಿನಿಂದ ಈ ತನಕ ಸದಸ್ಯತ್ವ ಕಟಾವಣೆಯಾಗಿದ್ದ ಸದಸ್ಯರ ಹೆಸರನ್ನು ಮತದಾರ ಪಟ್ಟಿಯಿಂದ ಕೈಬಿಡು ಹುನ್ನಾರ ನಡೆದಿದೆ ಎಂದು ತಿಳಿದು ಬಂದಿದ್ದು, ಒಂದು ವೇಳೆ ಪಟ್ಟಿಯಲ್ಲಿ ಹೆಸರುಗಳನ್ನು ಸೇರಿಸದೇ ಚುನಾವಣೆ ಮಾಡಿದ್ದೇ ಆದಲ್ಲಿ ಇದು ಪ್ರಜಾಪ್ರಭುತ್ವದ ಒಂದು ವಿಕಾರ ರೂಪವನ್ನು ತಾಳುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.ಕರ್ನಾಟಕ ರಾಜ್ಯ ತಾಲೂಕು ಪ್ರಾಥಮಿಕ ಶಿಕ್ಷಕ ಸಂಘ ಸಿಂದಗಿ ಘಟಕದ ನಿರ್ದೇಶಕ ಸ್ಥಾನಗಳ ಚುನಾವಣೆ ಘೋಷಣೆಯಾಗಿದೆ ಎಂದು ರಾಜ್ಯ ಚುನಾವಣಾಧಿಕಾರಿ ಮೈಬೂಬಪಾಷಾ ಮೂಲಿಮನಿ ಆದೇಶ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಆರ್ಬಿಐ ಅಧೀನದಲ್ಲಿ ಬರುವ ಪಿಕೆಪಿಎಸ್, ಡಿಸಿಸಿ ಬ್ಯಾಂಕ್, ಪೈನಾನ್ಸ್ಗಳಲ್ಲಿ ಏ.೧೪ರಂದು ಡಾ. ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸುವಂತೆ ಆದೇಶ ನೀಡಬೇಕು ಎಂದು ಭೀಮ ಸೇನೆ ಕರ್ನಾಟಕ ಸಂಘಟನೆ ಪದಾಧಿಕಾರಿಗಳು ತಹಶೀಲ್ದಾರ್ ಕರೆಪ್ಪ ಬೆಳ್ಳಿ ಅವರಿಗೆ ಮನವಿ ಸಲ್ಲಿಸಿದರು.ಈ ವೇಳೆ ಭೀಮ್ ಸೇನೆ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಅನಿಲ ಹೊಸಮನಿ, ಸಮಾಜ ಹೋರಾಟಗಾರ ಹರ್ಷವರ್ಧನ ಪೂಜಾರಿ ಮಾತನಾಡಿ, ಸಿಂದಗಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಆರ್ಬಿಐ ಅಧೀನದಲ್ಲಿ ಬರುವ ಪಿಕೆಪಿಎಸ್, ಡಿಸಿಸಿ ಬ್ಯಾಂಕ್, ಪೈನಾನ್ಸ್ಗಳಲ್ಲಿ ಏ.೧೪ ರಂದು ಕಡ್ಡಾಯವಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಆಚರಿಸುವಂತೆ ಲಿಖಿತ ರೂಪದಲ್ಲಿ ಆದೇಶ ನೀಡಬೇಕು ಎಂದು ಮನವಿ ಮಾಡಿಕೊಂಡರು.ಮನವಿ ಸ್ವೀಕರಿಸಿ ತಹಶೀಲ್ದಾರ ಕರೆಪ್ಪ ಬೆಳ್ಳಿ ಮಾತನಾಡಿ, ಆರ್ಬಿಐ ಅಧೀನದಲ್ಲಿ ಬರುವ ಆರ್ಥಿಕ ವ್ಯವಹಾರ ಸಂಸ್ಥೆಗಳಲ್ಲಿ ಏ.೧೪ರಂದು ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಆದೇಶ ಆಚರಿಸುವಂತೆ ನೀಡಲಾಗುವುದು ಎಂದು ಭರವಸೆ ನೀಡಿದರು. ಈ ವೇಳೆ ತಾಲೂಕಾಧ್ಯಕ್ಷ ಪ್ರಜ್ವಲ್ ಮಲ್ಲಾರಿ, ದ್ಯಾವಪ್ಪ ಕುದರಗುಂಡ, ಲಕ್ಷ್ಮಣ ಓಲೇಕಾರ ಸೇರಿದಂತೆ ಇತರರು ಇದ್ದರು.
ಉದಯರಶ್ಮಿ ದಿನಪತ್ರಿಕೆ ಕಲಕೇರಿ: ಗ್ರಾಮದ ಶ್ರೀ ಬಸವೇಶ್ವರ ಪದವಿ ಪೂರ್ವ ಕಾಲೇಜಿನ ಕುಮಾರಿ ನೀಲಮ್ಮ ನಿಂಗಪ್ಪ ಬಿಸನಾಳ ದ್ವಿತೀಯ ಪಿಯುಸಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾಳೆ.ಅಸ್ಕಿ ಗ್ರಾಮದ ನಿಂಗಪ್ಪ ಬಿಸನಾಳ ಎಂಬ ಬಡ ರೈತರ ಮಗಳಾದ ಇವರು ಮೂಲತ ಕೃಷಿ ಕುಟುಂಬದಿಂದ ಬಂದಿದ್ದು ಇವರ ತಂದೆ ಪ್ರತಿದಿನವೂ ಕೂಲಿ ಮಾಡಿ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಹಗಳಿರಳು ಶ್ರಮಿಸುತ್ತಿದ್ದಾರೆ. ಇವರ ಮಗಳಾದ ಕುಮಾರಿ ನೀಲಮ್ಮ ಬೀಸನಾಳ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ ಕನ್ನಡ 98 ಇಂಗ್ಲೀಷ 86 ಇತಿಹಾಸ 97 ಅರ್ಥಶಾಸ್ತ್ರ 95 ಸಮಾಜಶಾಸ್ತ್ರ 93 ರಾಜ್ಯಶಾಸ್ತ್ರ 100ಕೆ 100 ಅಂಕಗಳೊಂದಿಗೆ ಶೇಕಡಾ 94.83 ರಷ್ಟು ಅಂಕಗಳನ್ನು ಗಳಿಸಿ ಪರೀಕ್ಷಾ ಕೇಂದ್ರಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿರುತ್ತಾರೆ.
ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲೂಕಿನ ಹಿರೇಬೇವನೂರ ಗ್ರಾಮದ ಹತ್ತಿರ ಟಂ ಟಂ ನಲ್ಲಿ ಸಾಗಿಸುತ್ತಿದ್ದ ೫೦ ಕೆಜಿ ಒಂದು ಚೀಲದ ೩೦ ಚೀಲಗಳನ್ನು ವಶ ಪಡಿಸಿಕೊಂಡಿದ್ದು ಅದರ ಅಂದಾಜು ಮೌಲ್ಯ ೪೨ ಸಾವಿರ ರೂ ಇದೆ ಆಹಾರ ನೀರಿಕ್ಷಕ ಪರಮಾನಂದ ಹೂಗಾರ ಜಪ್ತಿ ಮಾಡಿದ್ದಾರೆ.ಇಂಡಿಯ ತಹಸೀಲ್ದಾರರು ನೀಡಿದ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ್ದುಟಂ ಟಂ ನಲ್ಲಿ ಸಾಗಿಸುತ್ತಿದ್ದ ಅಕ್ಕಿ ಸಮೇತ ಸಾಬೀರ ಬಾಗವಾನ ಮತ್ತು ಯೂನುಶ ಚಾಂದ ಬಾಗವಾನ ಸೋಲಾಪುರದ ಮೂಳೇಗಾವದವರನ್ನು ಬಂಧಿಸಿ ಅಕ್ಕಿ ವಶ ಮಾಡಿಕೊಂಡಿದ್ದಾರೆ.ಗ್ರಾಮೀಣ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉದಯರಶ್ಮಿ ದಿನಪತ್ರಿಕೆ ಇಂಡಿ: ರಕ್ತದಾನದಿಂದ ರಕ್ತ ಕಳೆದುಕೊಂಡ ರೋಗಿಗಳಿಗೆ ಅನುಕೂಲವಾಗುವ ಜತೆಗೆ ರಕ್ತದಾನ ಮಾಡುವವರ ಆರೋಗ್ಯ ಉತ್ತಮ ವಾಗಲಿದೆ ಎಂದು ಸ್ಪಂದನಾ ಆಸ್ಪತ್ರೆಯ ವೈದ್ಯ ಡಾ|| ಶಿವಾನಂದ ಸೋನಾವನೆ ಹೇಳಿದರು.ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ ಶ್ರೀ ಶಿವಯೋಗೀಶ್ವರ ಜಾತ್ರಾ ಮಹೋತ್ಸವ ನಿಮಿತ್ಯ ನಡೆದ ೨೦೧೪ ರಲ್ಲಿ ಸಾಲೋಟಗಿಯ ಶಿವಯೋಗೀಶ್ವರ ಮಾಧ್ಯಮಿಕ ಶಾಲೆಯಲ್ಲಿ ಓದಿದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಗೆಳೆಯರ ಬಳಗ ಮತ್ತು ಶ್ರೀ ಶಿವಯೋಗೀಶ್ವರ ಜಾತ್ರಾ ಸಮಿತಿ ಸಹಯೋಗದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣೆ ನೇತ್ರ ತಪಾಸಣೆ ಮತ್ತು ರಕ್ತದಾನ ಶಿಬಿರದಲ್ಲಿ ಮಾತನಾಡಿದರು.ಪ್ರತಿಯೊಬ್ಬರು ರಕ್ತದಾನ ಮಾಡಬಹುದು. ಸಂಘಟನೆಗಳ ಮೂಲಕ ಯುವಕರು ರಕ್ತದಾನ ಮಾಡುವದರಿಂದ ರಕ್ತದ ಅಗತ್ಯ ಇರುವವರಿಗೆ ಅನುಕೂಲವಾಗಲಿದೆ. ರಕ್ತ ತಯಾರಿಸಲು ಸಾದ್ಯವಿಲ್ಲ, ಮನುಷ್ಯನಿಂದಲೇ ಇನ್ನೊಬ್ಬರಿಗೆ ರಕ್ತವನ್ನು ನೀಡಬೇಕಾಗಿದೆ ಎಂದರು.೨೧೦ ಜನರ ಆರೋಗ್ಯ ತಪಾಸಣೆ, ೪೨ ಜನರ ನೇತ್ರ ತಪಾಸಣೆ ಮತ್ತು ೪೫ ಜನರಿಂದ ರಕ್ತದಾನ ಮಾಡಲಾಯಿತು.ಆರೋಗ್ಯ ಇಲಾಖೆಯ ವೈ.ವಿ.ಪೂಜಾರಿ , ಡಾ.ಲಕ್ಷ್ಮೀಕಾಂತ ಮೇತ್ರಿ, ಎಸ್ಸೆಸ್ಸೆಲ್ಸಿ ಗೆಳೆಯರ ಬಳಗದ ಇಂದ್ರಕುಮಾರ ವಾಲಿಕಾರ, ಕೇದಾರನಾಥ ಅಕ್ಕಲಕೋಟ,…
ಉದಯರಶ್ಮಿ ದಿನಪತ್ರಿಕೆ ಇಂಡಿ: ಸಿದ್ದಸಿರಿ ಸಹಕಾರಿ ಸೌಹಾರ್ಧ ರಾಜ್ಯದಲ್ಲಿ ಸೌಹಾರ್ಧದಲ್ಲಿ ಒಂದನೆಯ ಸ್ಥಾನದಲ್ಲಿದ್ದು ದೇಶದಲ್ಲಿ ಹತ್ತನೆಯ ಸ್ಥಾನದಲ್ಲಿದೆ. ಮುಂದಿನ ಎರಡು ವರ್ಷಗಳಲ್ಲಿ ಸಿದ್ದಸಿರಿ ನಿಮ್ಮೆಲ್ಲರ ಸಹಕಾರದಿಂದ ದೇಶದಲ್ಲಿಯೇ ಒಂದನೆಯ ಸ್ಥಾನಕ್ಕೆ ಬರಲಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಹೇಳಿದರು.ತಾಲೂಕಿನ ನಾದ ಗ್ರಾಮದಲ್ಲಿ ಸಿದ್ದಸಿರಿ ಸೌಹಾರ್ಧ ನೂತನ ಸಹಕಾರಿ ಸೌಹಾರ್ಧ ಕಟ್ಟಡ ಉದ್ಘಾಟಿಸಿ ಮಾತನಾಡಿದರು.ಸಾಲೋಟಗಿಯ ಜ್ಞಾನ ಯೋಗಾಶ್ರಮ ಶ್ರೀ ಸಿದ್ದೇಶ್ವರ ಗುರುದೇವಾಶ್ರಮದ ಸಂಗಮೇಶ್ವರ ಶ್ರೀಗಳು ಮಾತನಾಡಿ ಇಂಡಿ ತಾಲೂಕಿನಲ್ಲಿ ಸಿದ್ದಸಿರಿ ಸಂಸ್ಥೆಯ ೧೫ ಶಾಖೆಗಳನ್ನು ಹೊಂದಿದ್ದು ನಾದ ತಾಂಬಾ ನೂತನ ಕಟ್ಟಡ ಸೇರಿ ೮ ಶಾಖೆಗಳಿಗೆ ಸ್ವಂತ ಕಟ್ಟಡಗಳಿವೆ. ಇಂಡಿ ತಾಲೂನಿನಲ್ಲಿನ ಶಾಖೆಗಳಲ್ಲಿ ೪೮೪ ಕೋಟಿ ೮೮ ಲಕ್ಷ ಠೇವಣಿ ಹೊಂದಿವೆ. ಅಲ್ಲದೆ ಸಿಧ್ಧಸಿರಿಯ ಎಲ್ಲ ಶಾಖೆಗಳನ್ನು ಒಳಗೊಂಡು ೫೨೨೦ ಕೋಟಿ ೨೫ ಲಕ್ಷ ರೂಪಾಯಿ ಠೇವಣಿ ಇದೆ. ರಾಜ್ಯಾದ್ಯಂತ ೨೧೨ ಶಾಖೆಗಳನ್ನು ಹೊಂದಿದ್ದು ೫ ಸಾವಿರ ಯುವಕರಿಗೆ ಉದ್ಯೋಗ ನೀಡಲಾಗಿದ್ದು ಹೆಮ್ಮೆಯ ವಿಷಯ ಎಂದರು.ನಾದ ಕೆಡಿ ಸಂಸ್ಥಾನ ಮಠದ ಶಿವಾನಂದ…
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಸರ್ಕಾರಿ ಪದವಿ ಪೂರ್ವ ಕಾಲೇಜುಗಳೆಂದರೆ ಮೂಗುಮುರಿಯುವವರೇ ಜಾಸ್ತಿ ಆದರೆ ನಿಜವಾದ ಗುಣಾತ್ಮಕ ಬದಲಾವಣೆಗಳು ಇರುವುದು ಸರಕಾರಿ ಕಾಲೇಜುಗಳಲ್ಲಿ ಎಂಬುದನ್ನ ಸರಕಾರಿ ಪದವಿ ಪೂರ್ವ ಕಾಲೇಜು, ಕೂಡಗಿಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ತೋರಿಸಿಕೊಟ್ಟಿದ್ದಾರೆ ೨೦೨೫- ೨೬ ನೇ ಸಾಲಿನ ಪಿಯುಸಿ ದ್ವಿತೀಯ ಫಲಿತಾಂಶ ಶೇಕಡ ೯೫.೫೨ ರಷ್ಟಾಗಿದ್ದು ಕಾಲೇಜಿನ ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರು ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಗ್ರಾಮದ ಗುರು ಹಿರಿಯರು ಶುಭ ಹಾರೈಸಿದ್ದಾರೆ.ಇಡೀ ಕಾಲೇಜಿಗೆ ಲಕ್ಷ್ಮಿಹಂಗರಗಿ ೫೬೬, ಭಾಗ್ಯಶ್ರೀ ಮೋಡೆ ೫೪೯, ಶಿಲ್ಪಾ ಆಸಂಗಿ ೫೪೬, ರಕ್ಷಿತಾ ಇಬ್ರಾಹಿಂಪುರ್ ೫೪೫, ರೇಖಾ ಜಲದಿ ೫೨೯, ಶೃತಿ ಹಂಗರಗಿ ೫೧೩, ರಕ್ಷಿತಾ ತೋಳಮಟ್ಟಿ ೫೧೩, ಶಿವನಗೌಡ ಪಾಟೀಲ್ ೫೦೬ ಹಾಗೂ ಪ್ರೇರಣಾ ಹಿರೇಮಠ ೪೯೯, ಮನೋಜ ಸಾಲಹಳ್ಳಿ ೪೯೯ ಅಂಕಗಳನ್ನು ಪಡೆಯುವುದರ ಮೂಲಕ ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ.೬೭ ವಿದ್ಯಾರ್ಥಿ ಗಳಲ್ಲಿ ೬೫ ವಿದ್ಯಾರ್ಥಿಗಳು ಪಾಸಾಗೋದರ ಮೂಲಕ ಖುಷಿಪಟ್ಟಿದ್ದಾರೆ. ೦೭ ವಿದ್ಯಾರ್ಥಿಗಳು…
