ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಕ್ಯಾನವಾಸ್ ಆರ್ಟ್ ಫೌಂಡೇಶನ್ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನಸಹಾಯದೊಂದಿಗೆ ವಿಶ್ವ ದೃಶ್ಯಕಲಾ ದಿನಾಚರಣೆಯ ಅಂಗವಾಗಿ ಕ್ಯಾನವಾಸ್ ಆರ್ಟ್ ಫೌಂಡೇಶನ್ ಸಂಸ್ಥೆಯ ಸಂಗ್ರಹದಲ್ಲಿರುವ ನಮ್ಮ ನಾಡಿನ ಹಿರಿಯ ಮತ್ತು ಯುವ ಕಲಾವಿದರ ರೇಖಾಚಿತ್ರ ಮತ್ತು ಚಿತ್ರಕಲಾ ಕಲಾಪ್ರದರ್ಶನವನ್ನು ಬುಧವಾರ ದಿನಾಂಕ : ೧೫-೦೪-೨೦೨೬ ಸಂಜೆ. ೦೪:೦೦ ಗಂಟೆಗೆ ಪ್ರವಾಸೋದ್ಯಮ ಇಲಾಖೆಯ “ಸರಕಾರಿ ಆರ್ಟ್ ಗ್ಯಾಲರಿಯಲ್ಲಿ ನಡೆಯಲಿದೆ ಪ್ರದರ್ಶನದ ಉದ್ಘಾಟನೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಂತೋಷ ಭೋವಿ ನೆರವೆರಿಸಲಿದ್ದಾರೆ ಅತಿಥಿಗಳಾಗಿ ವಿಜಯಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ಅಶೋಕ ಯಡಳ್ಳಿ ಹಿರಿಯ ಕಲಾವಿದರಾದ ಪಿ. ಎಸ್. ಕಡೇಮನಿ, ಪ್ರವಾಸೋಧ್ಯಮ ಇಲಾಖೆಯ ಉಪನಿರ್ದೇಶಕರಾದ ಅರವಿಂದ ಹೂಗಾರ, ವಿಜಯಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಇಂದುಶೇಖರ ಮಣೂರ ಅವರು ಆಗಮಿಸಲಿದ್ದಾರೆ. ಬಹಳ ಅಪರೂಪದ ಮತ್ತು ಶ್ರೇಷ್ಠ ಕಲಾವಿದರುಗಳ ವಿಶೇಷ ಕಲಾಪ್ರದರ್ಶನ ಇದಾಗಲಿದೆ ಈ ಪ್ರದರ್ಶನದಲ್ಲಿ ನಮ್ಮ ನಾಡಿನ ಹೆಸರಾಂತ ಹಿರಿಯ ಕಲಾವಿದರುಗಳಾದ ಸೋಮಶೇಖರ ಸಾಲಿ, ಎಸ್.ಎಸ್.ಮುನ್ನೊಳ್ಳಿ, ಎಂ. ಬಿ. ಪಾಟೀಲ್, ಆರ್. ಎಂ. ಹಡಪದ, ವಿಜಯ ಸಿಂಧೂರ, ಪ್ರೊ. ಎಂ. ಜೆ. ಕಮಲಾಕ್ಷಿ, ವಿ. ಬಿ.ಹಿರೇಗೌಡರ್, ಎಂ. ಎಸ್. ಚಂದ್ರಶೇಖರ್, ವೈ. ಎಚ್. ಸೂಗೂರ, ಪಿ. ಎನ್. ಚೋಯಾಲ್, ಕೆ. ಬಾಲ್ಗೋಪಾಲನ್, ವಾಸುದೇವ ಕಾಮತ್, ಡಾ. ವಿ. ಜಿ. ಅಂದಾನಿ, ಎಂ. ಆರ್. ಬಾಳಿಕಾಯಿ, ಪಿ. ಎಸ್. ಪುಂಚಿತ್ತಾಯ, ಆರ್. ಎಂ. ಪಳನಿಯಪ್ಪನ್, ಪಿ. ಎಸ್. ಕಡೇಮನಿ, ಕೆ. ಕೆ. ಮಕಾಳಿ, ಎ. ಎಂ. ಪ್ರಕಾಶ, ಬಿ. ಕೆ. ಬಡಿಗೇರ, ವಿದ್ಯಾಧರ ಸಾಲಿ, ಶ್ರೀ ಎಂ ಮೋಹನ್, ದಯಾನಂದ ತಪಶೆಟ್ಟಿ, ಪ್ರಭಾಕರ್ ಎಲ್, ಬಿ. ಎಸ್. ಪಾಟೀಲ, ವಿಜಯರಾಜ ಬೋಧನಕರ್, ಅಂಬಾರಾಯ್ ಚಿನಮಳ್ಳಿ, ಬಾಬು ಜತ್ತಕರ್, ಕಮಲ್ ಅಹಮ್ಮದ, ಎಂ. ನಂದಬಸಪ್ಪ ವಾಡೆ, ಎಂ. ಜಿ. ಮಕಾನದಾರ್, ಕಂದನ್ ಜಿ, ಕೂಡಲ ಹಿರೇಮಠ, ರಾಘವೇಂದ್ರ ಪಾಟೀಲ, ಮಂಜುನಾಥ ವಾಲಿ, ಶ್ರೀಕಾಂತ ರಜಪೂತ, ರಮೇಶ ಚವ್ಹಾಣ ಇವರೆಲ್ಲರ ಕಲಾಕೃತಿಗಳು ಇರಲಿವೆ
ಈ ಪ್ರದರ್ಶನವು ದಿನಾಂಕ ೧೫-೦೪-೨೦೨೬ ರಿಂದ ೧೯-೦೪-೨೦೨೬ರ ಮುಂಜಾನೆ ೧೦ ರಿಂದ ಸಂಜೆ ೫ ರ ವರೆಗೆ ಸಾರ್ವಜನಿಕರಿಗೆ ತೆರೆದಿರುತ್ತದೆ ಉಚಿತ ಪ್ರವೇಶವಿದೆ ಎಲ್ಲ ಕಲಾಸಕ್ತರು ಆಗಮಿಸಿ ಈ ಅಪರೂಪದ ಕಲಾ ಪ್ರದರ್ಶನ ವಿಕ್ಷಿಸಲು ಕ್ಯಾನವಾಸ್ ಆರ್ಟ್ ಫೌಂಡೇಶನ್ ಕಾರ್ಯದರ್ಶಿ ರಮೇಶ ಚವ್ಹಾಣ ಕೋರಿದ್ದಾರೆ.

