Subscribe to Updates
Get the latest creative news from FooBar about art, design and business.
Author: editor.udayarashmi@gmail.com
– ನಯನಾ ಹೆಬ್ಬಾರ್✍️ಕಾಸರಗೋಡು ಉದಯರಶ್ಮಿ ದಿನಪತ್ರಿಕೆ ” ನೀರು ಚೆಲ್ಲಿದರೆ ಒರಸಿದರಾಯಿತು. ವಯಸ್ಸಾದಾಗ ಶರೀರ ನಾವು ಹೇಳಿದ ಹಾಗೆ ಕೇಳಲ್ಲ ಬಂಗಾರಿ… ನಿನ್ನ ಫ್ರೆಂಡ್ಸ್ ಬಂದಾಗ ಮಹಡಿ ರೂಮಿಗೆ ಕರೆದುಕೊಂಡು ಹೋಗಿ ಮಾತಾಡಿಕೋ .. ಅಜ್ಜಿಗೆ ನಾನು ತಿಳಿಸಿ ಹೇಳುವೆ” ಎಂದು ಮಗಳನ್ನು ಸಮಾಧಾನ ಮಾಡಿ ಕಾಲೇಜಿಗೆ ಕಳಿಸಿದ ಮಾನಸ ಗತ ನೆನಪಿನಲ್ಲಿ ಮುಳುಗಿದಳು.ಮಾನಸಳ ದೊಡ್ಡಮ್ಮ ಶಾರದಮ್ಮ. ಚಿಕ್ಕಂದಿನಲ್ಲಿಯೇ ತುಂಬಾ ಸುಂದಯಾದ ಹೆಣ್ಣು ಮಗಳು.ಆದರೆ ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಸಾಲಾಗಿ ಏಳು ಜನ ಮಕ್ಕಳು. ಹಾಡು ಹಸೆ ರಂಗೋಲಿಯಲ್ಲಿ ಎತ್ತಿದ ಕೈಯಾಗಿದ್ದ ಶಾರದಮ್ಮನವರನ್ನು ಹದಿಮೂರು ವರುಷವಿರುವಾಗಲೇ ಮೂವತ್ತು ವರ್ಷದ ವರನ ಜೊತೆ ಮದುವೆ ಮಾಡಿ ಕೊಟ್ಟಿದ್ದರು. ಅಮ್ಮನ ಮನೆಯಲ್ಲಿ ಊರಿನ ಮಕ್ಕಳ ಜೊತೆಗೆ ಕುಂಟಾಬಿಲ್ಲೆ ಆಡುತ್ತಾ ಖುಷಿಯಾಗಿದ್ದ ಹುಡುಗಿಗೆ ಮದುವೆಯಾದ ಮನೆ ನರಕವಾಯಿತು. ಬೆಳಗಿಂದ ರಾತ್ರಿ ತನಕವೂ ಕೆಲಸ. ರಾತ್ರಿಯಾದರೆ ಕಾಮುಕ ಗಂಡನಿಂದ ಮುಗ್ಧ ಮನಸ್ಸು ಮತ್ತು ಶರೀರದ ಮೇಲೆ ಪ್ರಹಾರ. ಆದರೂ ಪಾಪ ಯಾರ ಜೊತೆಗೂ ಹೇಳಿಕೊಳ್ಳುವಂತಿರಲಿಲ್ಲ.ಹೀಗಿರುವಾಗ ಒಂದು…
– ಹೆಚ್.ಡಿ. ದಿವಾಕರ್ಅರಸಿಕೇರೆ ಉದಯರಶ್ಮಿ ದಿನಪತ್ರಿಕೆ ಮನದ ವೀಣೆಯು ನುಡಿದಿದೆ ಶುಭವನುಒಲವಿನ ನಡಿಯಲಿ ಪ್ರೇಮ ನಾದವನುಮನಸಿಗೆ ಮುದ ನೀಡುತಿದೆ ನಿನಾದವನುಹೇಳುತಿದೆ ಚೆಲುವೆಗೆ ಶುಭ ಶಕುನವನು ಬಹುದಿನದ ಮೌನದ ವೀಣೆ ಮಾತಾಡಿದೆಮನದಲಿ ಹೊಸ ರಾಗವನು ಮೂಡಿಸಿದೆಮನಸಿನ ಆಶಯ ಅರಿತು ತಿಳಿಹೇಳಿದೆನನ್ನಯ ಪಿಸುಮಾತನು ಸಹ ಆಲಿಸಿದೆ ಬಯಸಿದ ಚೆಲುವೆಯ ಅಂದವ ಬಣ್ಣಿಸಿದೆಹೆಜ್ಜೆಯ ನೂಪುರದ ಸಪ್ಪಳವು ಕೇಳುತಿದೆಭಾವಗಳ ರಾಗವು ಇಂಪಾಗಿ ಹೊರಹೊಮ್ಮಿದೆಮನದ ವೀಣೆಗೆ ಹೃದಯವು ಧನ್ಯತೆ ಹೇಳಿದೆ
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರ ಜಿಲ್ಲೆಯ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ ಒಟ್ಟು ೬೭ ಅಂಗನವಾಡಿ ಕಾರ್ಯಕರ್ತೆ ಹಾಗೂ ೧೬೪ ಅಂಗನವಾಡಿ ಸಹಾಯಕಿಯರ ಗೌರವ ಸೇವೆ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿತ್ತು. ಪ್ರಸ್ತುತ ಅರ್ಜಿ ಸಲ್ಲಿಸುವ ಕಾಲಾವಧಿ ಮುಗಿದಿದೆ. ೪ ಹಂತಗಳನ್ನು ಪೂರ್ಣಗೊಳಿಸದೇ ಅಪೂರ್ಣ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮಾತ್ರ ದಿನಾಂಕ: ೨೬-೧೨-೨೦೨೪ ರಿಂದ ದಿನಾಂಕ: ೦೫-೦೧-೨೦೨೫ ರಂದು ಸಂಜೆ ೫.೩೦ ರವರೆಗೆ ಅರ್ಜಿಗಳನ್ನು ಪೂರ್ಣಗೊಳಿಸಲು ವೆಬ್ಸೈಟ್ನಲ್ಲಿ ಇಲಾಖಾ ವತಿಯಿಂದ ಅವಕಾಶ ನೀಡಿ ಆದೇಶಿಸಲಾಗಿದೆ. ಅಪೂರ್ಣ ಅರ್ಜಿಗಳನ್ನು ಪೂರ್ಣಗೊಳಿಸುವಾಗ ಅಧಿಸೂಚನೆಯ ಕೊನೆಯ ದಿನಾಂಕದ ಒಳಗಿನ ದಾಖಲಾತಿಗಳನ್ನು ಅಪ್ಲೋಡ್ ಮಾಡಲು ಸೂಚಿಸಿದೆ. ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ(ಇಂಡಿ) ಇಲ್ಲಿಗೆ ಕಛೇರಿ ಸಮಯದಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವಿಜಯಪುರ ಅವತಿಯಿಂದ ದಿನಾಂಕ ೨೮-೧೨-೨೦೨೪ ರಂದು ಪ್ರಕತಿ ಪರ ಸಂಘಟನೆಗಳ ಒಕ್ಕೂಟವರು ಒಂದು ದಿನದ ಬಂದ್ ಗೆ ಕರೆ ನೀಡಿರುವುದರಿಂದ ಮಾರುಕಟ್ಟೆ ಪ್ರಾಂಗಣದಲ್ಲಿ ಸದರಿ ದಿನದಂದು ಕೃಷಿ ಉತ್ಪನ್ನ ವ್ಯಾಪಾರ ವಹಿವಾಟಿಗೆ ತೋಮದರೆಯಾಗುವ ಸಂಭವವಿರುವುದರಿಂದ ರೈತ ಭಾಂದವರು ಯಾವುದೇ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಯ ಪ್ರಾಂಗಣಕ್ಕೆ ತರದೆ ಇರಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ | ‘ಗಾಂಧಿ ಭಾರತ’ ಕಾರ್ಯಕ್ರಮಗಳಿಗೆ ಚಾಲನೆ ಬೆಳಗಾವಿ: ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ 1924ರಲ್ಲಿ ಜರುಗಿದ ಕಾಂಗ್ರೆಸ್ ಅಧಿವೇಶನದ ಶತಮಾನೊತ್ಸವ ಅಂಗವಾಗಿ ನಗರದ ಟಿಳಕವಾಡಿಯಲ್ಲಿನ ವೀರಸೌಧದಲ್ಲಿ ಮಹಾತ್ಮ ಗಾಂಧೀಜಿ ನೂತನ ಪ್ರತಿಮೆಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಗುರುವಾರ ಅನಾವರಣಗೊಳಿಸಿದರು. ಇದರೊಂದಿಗೆ ‘ಗಾಂಧಿ ಭಾರತ’ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.ಇದೇ ವೇಳೆ ವೀರಸೌಧದ ಆವರಣದಲ್ಲಿನ ಗಾಂಧಿ ಸ್ಮಾರಕ ಭವನದಲ್ಲಿನ ನವೀಕೃತ ಫೋಟೊ ಗ್ಯಾಲರಿಯನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟಿಸಿದರು.ಬಳಿಕ ವೀರಸೌಧ (ಕಾಂಗ್ರೆಸ್ ಬಾವಿ) ಆವರಣದಲ್ಲಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಜಂಟಿಯಾಗಿ ಸಸಿ ನೆಟ್ಟು ನೀರೆರೆದರು.ಈ ಸಂದರ್ಭದಲ್ಲಿ ಸಚಿವರಾದ ಎಚ್.ಕೆ.ಪಾಟೀಲ, ಎಂ.ಬಿ.ಪಾಟೀಲ, ಎಚ್.ಸಿ.ಮಹದೇವಪ್ಪ, ಲಕ್ಷ್ಮೀ ಹೆಬ್ಬಾಳಕರ, ಶರಣಬಸಪ್ಪ ದರ್ಶನಾಪುರ, ಕೆ.ಎಚ್.ಮುನಿಯಪ್ಪ, ಶಾಸಕರಾದ ಆಸಿಫ್ (ರಾಜು) ಸೇಠ್, ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಮಾಜಿ ಆರ್.ವಿ.ದೇಶಪಾಂಡೆ, ಸರಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ, ಬುಡಾ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ವಾರ್ತಾ ಇಲಾಖೆಯ ಕಾರ್ಯದರ್ಶಿ ಕಾವೇರಿ ಬಿ.ಬಿ.,…
ಶ್ರೀ ಸಿದ್ದೇಶ್ವರ ಶ್ರೀಗಳ ಗುರುನಮನ ಮಹೋತ್ಸವ | “ಜ್ಞಾನಾರಾಧನೆ” ವಿಚಾರ ಗೋಷ್ಟಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಜಗತ್ತನ್ನೇ ಗೆದ್ದಂತವರು. ಜಗತ್ತಿನಾದ್ಯಂತ ಭಕ್ತ ಸಮೂಹ ಹೊಂದಿದ ಅತ್ಯಂತ ಸರಳ ಮತ್ತು ಶ್ರೇಷ್ಠ ಸಂತ ಎಂದು ಖ್ಯಾತ ಭಾಷಣಕಾರ ಮಹೇಶ ಮಾಶಾಳ ಹೇಳಿದರು.ನಗರದ ಜ್ಞಾನಯೋಗಾಶ್ರಮದಲ್ಲಿ ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿಯವರ ಗುರುನಮನ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ “ಜ್ಞಾನಾರಾಧನೆ” ಗೋಷ್ಠಿಯಲ್ಲಿ ಅವರು ಮಾತನಾಡಿದರು.ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ನಮ್ಮೆಲ್ಲರನ್ನು ಸತ್ಯದ ದಾರಿಯಲ್ಲಿ ನಡೆಯಿರಿ ಎಂದು ತೋರಿಸಿಕೊಟ್ಟವರು. ನಮ್ಮಲ್ಲಿರುವ ಎಲ್ಲ ಹೊಲಸನ್ನು ಹೊರಗೆ ಹಾಕಿ ನಮ್ಮನ್ನ ಮತ್ತು ನಮ್ಮ ಬದುಕನ್ನು ಶುಚಿಗೊಳಿಸಿದ ಮಹಾತ್ಮರು. ನಮ್ಮೆಲ್ಲರ ಮನಸ್ಸೊಳಗೆ ಅರಿವಿನ ದೀಪ ಹಚ್ಚಿದ ಅಪ್ಪನವರು ನಮ್ಮ ಮನಸ್ಸಲ್ಲಿ ಎಂದೆಂದಿಗೂ ಇರುತ್ತಾರೆ ಎಂದರು.ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಮಾತನಾಡಿ, ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಬದುಕಿದ ಜೀವನ ಶೈಲಿ ಇಡೀ ಜಗತ್ತಿನ ಸಂತ ಸಮೂಹಕ್ಕೆ ಹಾಗೂ ಅವರ ಸರಳತೆ ನಮ್ಮೆಲ್ಲರ ಬದುಕಿಗೆ ಮಾದರಿ ಎಂದರು.ಇನ್ನೋರ್ವ…
ರೈತ ಹೋರಾಟಗಾರ ಅರವಿಂದ ಕುಲಕರ್ಣಿ, ಸಾಹಿತಿ ವಿವೇಕಾನಂದ ಕಲ್ಯಾಣಶೆಟ್ಟಿ, ನ್ಯಾಯವಾದಿ ಎಚ್.ಎಸ್.ಗುರಡ್ಡಿ ಆಗ್ರಹ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನೂತನ ಬಸವನ ಬಾಗೇವಾಡಿ ಅಭಿವೃದ್ದಿ ಪ್ರಾಧಿಕಾರ ಇತ್ತಿಚೆಗೆ ಸರಕಾರ ಪ್ರತ್ಯೇಕವಾಗಿ ರಚಿಸಿದ್ದು ಈ ಪ್ರಾಧಿಕಾರಕ್ಕೆ ಕಂದಾಯ ಸಚಿವರನ್ನು ಬಸವನ ಬಾಗೇವಾಡಿ ಅಭಿವೃದ್ದಿ ಪ್ರಾಧಿಕಾರಕ್ಕೆ ಅಧ್ಯಕ್ಷರಾಗಿ ಮಾಡಿರುವುದು ತಪ್ಪು ನಿರ್ಣಯ ಸರಕಾರ ತೆಗೆದುಕೊಂಡಿದ್ದಾರೆ ಅದೆ ಕೂಡಲ ಸಂಗಮ ಅಭಿವೃದ್ದಿ ಪ್ರಾಧಿಕಾರಕ್ಕೆ ಮುಖ್ಯಮಂತ್ರಿಗಳೇ ಅಧ್ಯಕ್ಷರಾಗಿ ಮುಂದುವರೆದಿದ್ದಾರೆ ಆದರೆ ಬಸವನ ಬಾಗೇವಾಡಿ ಅಭಿವೃದ್ದಿ ಪ್ರಾಧಿಕಾರಕ್ಕೆ ಕಂದಾಯ ಸಚಿವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ಸರಕಾರ ಮಲತಾಯಿ ದೋರಣೆ ಅನುಸರಿಸಿದೆ ಆದ್ದರಿಂದ ಮುಖ್ಯಮಂತ್ರಿಗಳೇ ಅಧ್ಯಕ್ಷರಾಗಿ ಇರಬೇಕೆಂದು ರೈತ ಹೋರಾಟಗಾರ ಅರವಿಂದ ಕುಲಕರ್ಣಿ ಹಾಗೂ ಸಾಹಿತಿ ವಿವೇಕಾನಂದ ಕಲ್ಯಾಣಶೆಟ್ಟಿ ನ್ಯಾಯವಾದಿ ಎಚ್.ಎಸ್.ಗುರಡ್ಡಿ ಪತ್ರಿಕಾ ಗೋಷ್ಟಿಯಲ್ಲಿ ಸರಕಾರಕ್ಕೆ ಆಗ್ರಹಿಸಿದ್ದಾರೆ.ಗುರುವಾರದಂದು ಬಸವನ ಬಾಗೇವಾಡಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಜಂಟಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಬಸವನ ಬಾಗೇವಾಡಿ ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರ ಅನುಷ್ಠಾನಕ್ಕೆ ತಂದಿದ್ದು ಈ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 218 ರಲ್ಲಿ ಕೊಲ್ಹಾರ ತಾಲ್ಲೂಕಿನ ಮುಳವಾಡ ಗ್ರಾಮದ ಬಳಿ ಹೊಸದಾಗಿ ಸ್ಥಾಪಿಸಿರುವ ಟೋಲ್ ನಾಕಾದಲ್ಲಿ ಹೆದ್ದಾರಿ ಇತರೆ ಕಾಮಗಾರಿಗಳನ್ನು ಪೂರ್ಣಗೊಳಿಸದೇ ಈಗಾಗಲೇ ಹೆದ್ದಾರಿ ಶುಲ್ಕ ವಸೂಲಾತಿ ಆರಂಭಿಸಲಾಗಿದೆ. ಈ ಹಿಂದೆ ಮನವಿ ಮಾಡಿದಂತೆ ಹೆದ್ದಾರಿಯಲ್ಲಿನ ಕಾಮಗಾರಿಗಳನ್ನು ಪೂರ್ಣಗೊಳಿಸಿ ಸುತ್ತಮುತ್ತಲಿನ ಗ್ರಾಮಸ್ಥರ, ರೈತರ ಸಭೆ ಮಾಡುವವರೆಗೂ ಟೋಲ್ ಶುಲ್ಕ ವಸೂಲಾತಿ ಬಂದ್ ಮಾಡಬೇಕೆಂದು ವಿಜಯಪುರ ಜಿಲ್ಲಾ ಅನ್ನದಾತ ಯುವ ರೈತ ಸಂಘದಿಂದ ಸೋಮವಾರ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರು ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.ಈ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ಸುರೇಶ ಗರಸಂಗಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ 218 ರ ಮುಳವಾಡ ಬಳಿ ಟೋಲ್ ನಾಕಾ ಸ್ಥಾಪಿಸಿ, ಪ್ರತಿ ವಾಹನಗಳಿಂದ ಶುಲ್ಕ ವಸೂಲಾತಿ ಮಾಡಲಾಗುತ್ತಿದೆ. ಮುಳವಾಡ ಟೋಲ್ ಸಮೀಪದ ಹೊನಗನಹಳ್ಳಿ ರೈಲ್ವೆ ಗೇಟ್ ಬಳಿ ಹೆದ್ದಾರಿಗೆ ಮೇಲ್ಸೇತುವೆ ನಿರ್ಮಾಣ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ, ಅಲ್ಲದೇ ಅಲ್ಲಿನ ರಸ್ತೆ ಕಾಮಗಾರಿ ಸಹ ಕಳಪೆಮಟ್ಟದಾಗಿದೆ. ಜೊತೆಗೆ ಟೂಲ್ಗೇಟ್…
ಗೆಜೆಟೆಡ್ ಪ್ರೊಬ್ರೇಷನರ್ ಗ್ರೂಪ್ ಎ ಹಾಗೂ ಗ್ರೂಪ್ ಬಿ ವೃಂದದ ಪರೀಕ್ಷೆ ಪೂರ್ವಭಾವಿ ಸಭೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮುಂದಿನ ಆಡಳಿದ ಅಧಿಕಾರಿಗಳು ರೂಪುಗೊಳ್ಳುವ ಪರೀಕ್ಷೆ ಇದಾಗಿದ್ದು, ಅತ್ಯಂತ ಎಚ್ಚರಿಕೆ, ಸೂಕ್ಷ್ಮವಾಗಿ ಪಾರದರ್ಶಕತೆಯಿಂದ ಪರೀಕ್ಷೆ ನಡೆಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಪರೀಕ್ಷೆಗೆ ನಿಯೋಜಿತ ಅಧಿಕಾರಿಗಳಿಗೆ ಸೂಚಿಸಿದರು.ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ೨೦೨೩-೨೪ನೇ ಸಾಲಿನ ಗೆಜೆಟೆಡ್ ಪ್ರೊಬ್ರೇಷನರ್ ಗ್ರೂಪ್ ಎ ಹಾಗೂ ಗ್ರೂಪ್ ಬಿ ವೃಂದದ ಪರಿಕ್ಷೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಡಿಸೆಂಬರ್.೨೯ರ ರವಿವಾರ ನಡೆಯುವ ೩೨ ಕೇಂದ್ರಗಳಲ್ಲಿ ಒಟ್ಟು ೧೨೭೪೧ ಅಭ್ಯರ್ಥಿಗಳು ಪರೀಕ್ಷೆಯನ್ನು ಬರೆಯಲಿದ್ದಾರೆ. ಬೆಳಿಗ್ಗೆ ೧೦ಗಂಟೆಯಿಂದ ೧೨ಗಂಟೆಯ ವರೆಗೆ ಒಂದನೇ ಅಧಿವೇಶನ ಮದ್ಯಾಹ್ನ ೨ಗಂಟೆಯಿಂದ ೪ ಗಂಟೆಯ ವರೆಗೆ ಎರಡನೇ ಅವಧಿವೇಶನ ಪರೀಕ್ಷೆಗಳು ಜರುಗಲಿವೆ. ಅಭ್ಯರ್ಥಿಗಳು ಪರೀಕ್ಷಾ ದಿನಗಳಂದು ಬೆಳಗಿನ ಹಾಗೂ ಮಧ್ಯಾಹ್ನದ ಅಧಿವೇಶನಗಳ ಪರೀಕ್ಷೆ ಪ್ರಾರಂಭವಾಗುವ ೦೨ ಗಂಟೆ ಮೊದಲು ಕಡ್ಡಾಯವಾಗಿ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು. ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ…
ಉದಯರಶ್ಮಿ ದಿನಪತ್ರಿಕೆ ಇಂಡಿ: ಕಬ್ಬಿಣದ ಕಡಲೆ ಎನ್ನುವ ಗಣಿತ ವಿಷಯವನ್ನು ಅತ್ಯಂತ ಸುಲಭವಾಗಿ ಅರ್ಥೈಸಿಕೊಳ್ಳಬಹುದು ಎಂಬುದನ್ನು ತೋರಿಸಿದ ಭಾರತದ ಶ್ರೇಷ್ಠ ಗಣಿತಜ್ಞ ರಾಮಾನುಜನ್ ಎಂದು ಅಭಿಯಂತರ ಕಿರಣ್ ದೇಸಾಯಿ ಹೇಳಿದರು.ಅವರು ಇತ್ತೀಚೆಗೆ ಪಟ್ಟಣದ ದೇಸಾಯಿ ಅಂತರಾಷ್ಟ್ರೀಯ ಶಾಲೆಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗಣಿತ ದಿವಸ ಹಾಗೂ ಗಣಿತ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.ರಾಮಾನುಜನ್ ಅವರು ತಮಿಳುನಾಡಿನ ಈರೋಡ್ನಲ್ಲಿ ಡಿಸೆಂಬರ್ ೨೨, ೧೮೮೭ ರಲ್ಲಿ ಜನಿಸಿದರು. ಶ್ರೀನಿವಾಸ ರಾಮಾನುಜನ್ ರವರಿಗೆ ಗಣಿತ ವಿಷಯದೊಂದಿಗೆ ಇದ್ದ ಒಲವು, ಅಪಾರ ಜ್ಞಾನದಿಂದಾಗಿ ಅವರು ಗಣಿತ ಕ್ಷೇತ್ರಕ್ಕೆ ನೀಡಿದ ಕೊಡುಗೆ ಮತ್ತು ಸಾಧನೆಗಳನ್ನು ಗುರುತಿಸಲು ಪ್ರತಿ ವರ್ಷ ಡಿಸೆಂಬರ್ ೨೨ ರಂದು’ ರಾಷ್ಟ್ರೀಯ ಗಣಿತ ದಿನ’ವನ್ನು ಆಚರಣೆ ಮಾಡಲಾಗುತ್ತದೆ ಎಂದು ತಿಳಿಸಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೀರ್ತಿ ದೇಸಾಯಿ ಹಾಗೂ ಸೀಮಾ ದೇಸಾಯಿ ಅವರು ಗಣಿತ ವಸ್ತು ಪ್ರದರ್ಶನ ವೀಕ್ಷಿಸಿದರು.ವಿದ್ಯಾರ್ಥಿಗಳಿಂದ ಒಂದರಿAದ ಹತ್ತರವರೆಗಿನ ಸಂಖ್ಯೆಗಳನ್ನು ನೃತ್ಯದ ಮೂಲಕ ನಿರ್ಮಿಸಿ ತೋರಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ರಾಮಾನುಜನ್, ಶಕುಂತಲಾ ದೇವಿ,…
