ಉದಯರಶ್ಮಿ ದಿನಪತ್ರಿಕೆ
ಇಂಡಿ: ಪಟ್ಟಣದ ವಿಜಯಪುರ ರಸ್ತೆಯ ಕರ್ನಾಟಕ ಬ್ಯಾಂಕ ಹತ್ತಿರದ ಮೈನೋದ್ದಿನ ಚಪ್ಪರಬಂದ ಇವರಿಗೆ ಸೇರಿದ ಅಂಗಡಿಗೆ ಬೆಳಿಗ್ಗೆ ೧೦.೧೫ ಗಂಟೆಗೆ ಬೆಂಕಿ ಕಾಣಿಸಿಕೊಂಡಿದೆ.
ಅಂಗಡಿಯು ಮೋಟಾರು ಬಾಯಿಕ ಶೋ ರೋಮ ಮತ್ತು ಬಿಡಿಭಾಗ ಮತ್ತು ಸೀಟ ಕವರ ಮಾರಾಟ ಮಾಡುವದಾಗಿದೆ.
ಅಗ್ನಿಶಾಮಕ ಸಿಬ್ಬಂದಿ ಬಂದು ಬೆಂಕಿ ಆರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೂ ಒಂದು ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ವಸ್ತುಗಳು ಸುಟ್ಟು ಕರಕಲಾಗಿವೆ.

