ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಶ್ರೀಸಿದ್ಧಾರೂಢರ ಮಹಾಪುರಾಣ ಮಂಗಲ ಕಾರ್ಯಕ್ರಮದ ಅಂಗವಾಗಿ ಜೋಡಿ ಪಲ್ಲಕ್ಕಿ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜರುಗಿತು.
ಗ್ರಾಮದ ಶ್ರೀಕಾಶೀ ವಿಶ್ವನಾಥ ಕೈಲಾಸ ಮಂದಿರದಲ್ಲಿ ಹಮ್ಮಿಕೊಂಡ ಸಿದ್ಧಾರೂಢರ ಮಹಾಪುರಾಣ ಮಂಗಲದ ಅಂಗವಾಗಿ ವಾಲಗ, ಕಳಸ,ಕುಂಭ, ಪುರವಂತರ ಸೇವೆಯೊಂದಿಗೆ ಆರಂಭಗೊಂಡ ಪಲ್ಲಕ್ಕಿ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಚೌಕಿಮಠದ ಅಭಿನವ ಮುರುಗೇಂದ್ರ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪುರಾಣಿಕ ರಮೇಶ ಶರಣರು, ನಿಂಗಣ್ಣ ಶರಣರು, ಶಿವಪ್ಪ ತಾಳಿಕೋಟಿ, ಗುರಣ್ಣ ಚಾಂದಕವಟೆ, ನಿಂಗಣ್ಣ ಸಜ್ಜನ, ಚನ್ನಪ್ಪ ಭದ್ರಗೊಂಡ, ಚಿದಾನಂದ ನಾಶೀ, ಭೀಮನಗೌಡ ಹಳವಣ್ಣಿ, ಬಸವರಾಜ ಸುಂಬಡ, ಚನ್ನಪ್ಪಗೌಡ ಬಿರಾದಾರ, ಅಶೋಕ ಹುಣಸಗಿ, ಸಂತೋಷ ಯತ್ನಾಳ, ಮಾಂತೇಶ ಜಂಬುಗೋಳ, ಎಂ.ಡಿ.ಮನಹಳ್ಳಿ , ರಾಮು ಯತ್ನಾಳ ಸೇರಿದಂತೆ ಮಹಿಳೆಯರು, ಮಕ್ಕಳು ಇದ್ದರು.

