Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರ ತಾಲೂಕಿನ ಹೆಸ್ಕಾಂನ ಗ್ರಾಮೀಣ ಉಪ ವಿಭಾಗ ಕಚೇರಿಯಲ್ಲಿ ಡಿ.೨೦ರ ಮಧ್ಯಾಹ್ನ ೩ ಗಂಟೆಗೆ ವಿದ್ಯುತ್ ವಿತರಣೆಗೆ ಸಂಬಂಧಿಸಿದಂತೆ ಗ್ರಾಹಕರ ಅಹವಾಲು, ಕುಂದು-ಕೊರತೆ ಸಭೆ ಆಯೋಜಿಸಲಾಗಿದೆ.ಸಭೆಗೆ ಗ್ರಾಹಕರು ಪಾಲ್ಗೊಂಡು ವಿದ್ಯುತ್ಗೆ ಸಂಬಂಧಿಸಿದ ತಮ್ಮ ಕುಂದು-ಕೊರತೆಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ ಎಂದು ವಿಜಯಪುರ ತಾಲೂಕಿನ ಹೆಸ್ಕಾಂನ ಗ್ರಾಮೀಣ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಬಲೇಶ್ವರ ತಾಲೂಕಿನ ಹೆಸ್ಕಾಂನ ಗ್ರಾಮೀಣ ಉಪ ವಿಭಾಗ ಕಚೇರಿಯಲ್ಲಿ ಡಿ.೨೦ರ ಮಧ್ಯಾಹ್ನ ೩.೩೦ ಗಂಟೆಗೆ ವಿದ್ಯುತ್ ವಿತರಣೆಗೆ ಸಂಬಂಧಿಸಿದಂತೆ ಗ್ರಾಹಕರ ಅಹವಾಲು ಸ್ವೀಕರಿಸಲು ಕುಂದು-ಕೊರತೆ ಸಭೆ ಆಯೋಜಿಸಲಾಗಿದೆ.ಸಭೆಗೆ ಹೆಚ್ಚಿನ ಸಂಖ್ಯೆಯ ಗ್ರಾಹಕರು ಪಾಲ್ಗೊಂಡು ವಿದ್ಯುತ್ಗೆ ಸಂಬಂಧಿಸಿದ ತಮ್ಮ ಕುಂದು-ಕೊರತೆಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ ಎಂದು ಬಬಲೇಶ್ವರ ತಾಲೂಕಿನ ಹೆಸ್ಕಾಂನ ಗ್ರಾಮೀಣ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿಗೆ ನಿರ್ಧಾರ | ವಿಜಯಪುರ ಜಿಲ್ಲಾಧಿಕಾರಿ ಡಾ.ಆನಂದ ಕೆ. ಹೇಳಿಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್ಎಕ್ಯೂ ಗುಣಮಟ್ಟದ ತೊಗರಿ ಖರೀದಿಸಲು ಕನಿಷ್ಠ ಬೆಂಬಲ ಬೆಲೆ ಕಾರ್ಯಪಡೆ ಸಮಿತಿ ಸಭೆಯಲ್ಲಿ ನಿರ್ಧರಿಸಿ, ತೊಗರಿ ಖರೀದಿ ಪ್ರಕ್ರಿಯೆ ಆರಂಭಿಸುವಂತೆ ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರು ಸೂಚಿಸಿದ್ದಾರೆ.ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡ ಜಿಲ್ಲಾ ಟಾಸ್ಕಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಜಿಲ್ಲೆಯ ಖರೀದಿ ಕೇಂದ್ರಗಳಲ್ಲಿ ನೊಂದಣಿ ಪ್ರಾರಂಭಿಸಿ, ಗ್ರಾಮೀಣ ಭಾಗದ ರೈತರಿಗೆ ಅನುಕೂಲವಾಗುವಂತೆ ಜಿಲ್ಲೆಯ ೯೮ ಖರೀದಿ ಕೇಂದ್ರಗಳಲ್ಲಿ ತೊಗರಿ ಖರೀದಿಯನ್ನು ಪ್ರಾರಂಭಿಸುವಂತೆ ಅವರು ಸೂಚನೆ ನೀಡಿದ್ದಾರೆ.ಖರೀದಿ ಕೇಂದ್ರಗಳಲ್ಲಿ ಪ್ರತಿ ಕ್ವೀಂಟಲಿಗೆ ೮೦೦೦ ರೂ.ಗಳಂತೆ ಪ್ರತಿ ರೈತರಿಂದ ಪ್ರತಿ ಎಕರೆಗೆ ೪ ಕ್ವಿಂಟಲ್ನಂತೆ ಫ್ರುಟ್ ತಂತ್ರಾಂಶದಲ್ಲಿ ಲಭ್ಯವಾಗುವ ರೈತರು ತೊಗರಿ ಬೆಳೆದ ವಿಸ್ತೀರ್ಣಕ್ಕೆ ಅನುಗುಣವಾದ ಪ್ರಮಾಣದಲ್ಲಿ ತೊಗರಿಯನ್ನು ಖರೀದಿಸಲಾಗುತ್ತದೆ. ನೊಂದಣಿ ಕಾರ್ಯ ೮೦ ದಿನಗಳವರೆಗೆ ನಡೆಯಲಿದ್ದು, ಖರೀದಿ ಪ್ರಕ್ರಿಯೆ ೯೦…
ಬಾಲ ಮಂದಿರಕ್ಕೆ ದಿಢೀರ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ.ಆನಂದ.ಕೆ ಕಿವಿಮಾತು ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಡಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ಬಾಲಕರ ಬಾಲ ಮಂದಿರಕ್ಕೆ ಶುಕ್ರವಾರ ಸಂಜೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಡಾ.ಆನಂದ ಕೆ ಅವರು ದಿಢೀರ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಬಾಲ ಮಂದಿರದ ಮೂಲಭೂತ ಸೌಕರ್ಯ ಪರಿಶೀಲಿಸಿದ ಅವರು, ಬಾಲ ಮಂದಿರದಲ್ಲಿರುವ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ,ಯಾವುದೇ ಕಾರಣಕ್ಕೂ ಮಕ್ಕಳಿಗೆ ತೊಂದರೆಯಾಗದAತೆ ನೋಡಿಕೊಳ್ಳಬೇಕು. ಶೌಚಾಲಯಗಳಲ್ಲಿ ಸ್ವಚ್ಛತೆ, ಕುಡಿಯುವ ನೀರು, ಸ್ನಾನಕ್ಕೆ ಬಿಸಿ ನೀರು, ಉತ್ತಮ ಆಹಾರ ಸೇರಿದಂತೆ ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಮಕ್ಕಳಿಗೆ ಒದಗಿಸಬೇಕು. ಕೌಶಲ್ಯತೆಯನ್ನು ಹೆಚ್ಚಿಸಲು ವಿದ್ಯಾಭ್ಯಾಸದ ಜೊತೆಗೆ ಪಠ್ಯೇತರ ಚಟುವಟಿಕೆಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ಬಾಲಮಂದಿರದ ಮಕ್ಕಳೊಂದಿಗೆ ಸಂವಾದ ನಡೆಸಿದ ಅವರು, ಮಕ್ಕಳ ಯೋಗಕ್ಷೇಮ ವಿಚಾರಿಸಿದರು.ಸತತ ಅಧ್ಯಯನಶೀಲತೆ ರೂಢಿಸಿಕೊಳ್ಳಬೇಕು. ಎಲ್ಲಾ ವಿಷಯಗಳನ್ನು ಕರಗತ ಮಾಡಿಕೊಳ್ಳಬೇಕು. ಶ್ರಮವಹಿಸಿ ಓದಿ ಉನ್ನತ…
ಉದಯರಶ್ಮಿ ದಿನಪತ್ರಿಕೆ ಬ್ರಹ್ಮದೇವನಮಡು: ಸಿಂದಗಿ ತಾಲೂಕಿನ ಬ್ರಹ್ಮದೇವನಮಡು ಗ್ರಾಮದಲ್ಲಿ ಎಳ್ಳಮವಾಸ್ಶೆ ನಿಮಿತ್ಶ ಶುಕ್ರವಾರ ರೈತರು ಹೊಲಗಳಿಗೆ ತೆರಳಿ ಭೂಮಿತಾಯಿಗೆ ಚರಗ ಚೆಲ್ಲಿ ವಿಶೇಷ ಪೂಜೆ ಸಲ್ಲಿಸಿ, ಈ ಹಬ್ಬವು ಸವ೯ರಿಗೂ ಸುಖ, ಶಾಂತಿ, ನೆಮ್ಮದಿ-ಸಮೃದ್ದಿ ತರಲಿ ಎಂದು ಪ್ರಾಥಿ೯ಸಿದರು.ನಂತರ ಸಜ್ಜಿ, ಜೋಳದ ಕಡಬು,ಭರ್ತ, ಪುಂಡಿ ಪಲ್ಯ, ಹಿಂಡಿ (ಕಾಳು) ಪಲ್ಯ. ಜತೆಗೆ ಶೇಂಗಾ ಹೋಳಿಗೆ, ಅನ್ನ-ಸಾರು ಸವಿದರು.ಈ ವೇಳೆ ಮಲ್ಲಿಕಾಜು೯ನ ಮನಗೂಳಿ, ಆರ್.ಜಿ.ಮಾನಶೆಟ್ಟಿ,ಬಂಗಾರಹಟ್ಟಿ ಪಿಡ್ಲ್ಶುಡಿ ಎಇಇ ಸಿದ್ರಾಮ ಮೋದಿ, ಹೊನ್ನಳ್ಳಿ ಕನಾ೯ಟಕ ಗ್ರಾಮೀಣ ಬ್ಶಾಂಕ್ ವ್ಶವಸ್ಥಾಪಕ ಆರ್.ಜಿ.ಗೂಗಲ್ಲ್, ಕ್ಶಾಸಿಯರ್ ಪರಸುರಾಮ ನಾಯ್ಕೋಡಿ, ಬಸವರಾಜ ಮಾನಶೇಟ್ಟಿ, ಪಿಗ್ಮಿಏಜಂಟ ಮೌನೇಶ ಗೌಂಡಿ, ಪತ್ರಕತ೯ ಮಲ್ಲು ಕೆಂಭಾವಿ, ನಡಗೇರಪ್ಪ ತಳವಾರ, ಡಿ.ಬಿ.ಸೀತನೂರ, ಶಿವಪ್ಪ ಕರಿಕಲ್ಲ್ , ಮಾಂತಮ್ಮ ಮನಗೂಳಿ, ಕನ್ಶಾಕುಮಾರಿ ಮನಗೂಳಿ, ಸುಜಾತಾ ಮಾನಶೇಟ್ಟಿ, ಮಾಹಾನಂದ ಮಾನಶೇಟ್ಟಿ, ಜಯಶ್ರೀ ಕರಿಕಲ್ಲ್, ಶರಣು ಕೋರವಾರ, ಸೇರಿದಂತೆ ಮತ್ತಿತ್ತರಿದ್ದರು.
ಹೈಕಮಾಂಡ್ ಸಿದ್ದರಾಮಯ್ಯ ಪರ ಇರೋದ್ರಿಂದಲೇ ಅವರು ಸಿಎಂ | ಪಕ್ಷ ಹೇಳಿದಂತೆ ನಾವು ಕೇಳುತ್ತೇವೆ | ಡಿಸಿಎಂ ಡಿ.ಕೆ ಶಿವಕುಮಾರ್ ಸ್ಪಷ್ಟನೆ ಉದಯರಶ್ಮಿ ದಿನಪತ್ರಿಕೆ ಗೋಕರ್ಣ: “ನನ್ನ, ಸಿಎಂ ನಡುವೆ ಒಂದು ಒಪ್ಪಂದವಾಗಿದೆ. ಹೈಕಮಾಂಡ್ ಒಂದು ಒಪ್ಪಂದಕ್ಕೆ ತಂದಿದೆ. ಆ ಪ್ರಕಾರ ನಾವಿಬ್ಬರೂ ನಡೆದುಕೊಂಡು ಹೋಗುತ್ತೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.ಗೋಕರ್ಣದಲ್ಲಿ ಶುಕ್ರವಾರ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶುಕ್ರವಾರ ಪ್ರತಿಕ್ರಿಯೆ ನೀಡಿದರು.ನಮ್ಮ ಮಧ್ಯೆ ಎರಡೂವರೆ ವರ್ಷದ ಒಪ್ಪಂದ ಆಗಿಲ್ಲ ಎಂಬ ಸಿಎಂ ಹೇಳಿಕೆ ಬಗ್ಗೆ ಕೇಳಿದಾಗ, “ಅವರು ಐದು ವರ್ಷ ಇರಲ್ಲ ಎಂದು ನಾನು ಯಾವತ್ತೂ ಹೇಳಿಲ್ಲ. ಹೈಕಮಾಂಡ್ ಅವರ ಪರ ಇಲ್ಲ ಎಂದು ಹೇಳಿಲ್ಲ. ಹೈಕಮಾಂಡ್ ಅವರ ಪರ ಇರುವುದಕ್ಕೆ ಅವರು ರಾಜ್ಯದ ಸಿಎಂ ಆಗಿದ್ದಾರೆ” ಎಂದರು.ಸಿಎಂ ಬದಲಾವಣೆ ಆಗುವುದಿಲ್ಲವೇ ಎಂದು ಕೇಳಿದಾಗ, “ನೀವು ಆ ಬಗ್ಗೆ ಚರ್ಚೆ ಮಾಡುತ್ತಿದ್ದೀರಿ. ನಮ್ಮಲ್ಲಿ ಅದು ಇಲ್ಲ. ಪಕ್ಷ ಹೇಳಿದಂತೆ ನಾವು ಕೇಳುತ್ತೇವೆ” ಎಂದರು.ಕಳೆದ ಬಾರಿ ಬಂದಾಗ ನಿಮ್ಮ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಆರೋಗ್ಯ ಕವಚ ೧೦೮ ವಾಹನ ಚಾಲಕ (ಪೈಲೆಟ್) ತಾಳಿಕೋಟಿ ದಯಾನಂದ ಬಸಪ್ಪ ಸಾಸನೂರ ಇವರ ಮೇಲೆ ಕಾನೂನು ಕ್ರಮ ಜರುಗಿಸಲು ಭೀಮ್ ಸರಕಾರ ಸಂಘಟನಾ ಸಮಿತಿ ಆಗ್ರಹಿಸಿದೆ.ನಗರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭೀಮ ಸರಕಾರ್ ಸಂಘಟನೆ ಪದಾಧಿಕಾರಿಗಳು, ಜಿಲ್ಲೆಯ ತಾಳಿಕೋಟಿ ಪಟ್ಟಣದ ಆರೋಗ್ಯ ಕವಚ ೧೦೮ ಅಂಬುಲೇನ್ಸ್ ಚಾಲಕ (ಪೈಲೆಟ್) ದಯಾನಂದ ಬಸಪ್ಪ ಸಾಸನೂರ ಇವರು ಬೆಂಗಳೂರಿನ ಇ.ಎಮ್.ಆರ್.ಐ ಗ್ರೀನ್ ಹೆಲ್ತ ಸರ್ವಿಸ್ ಕಂಪನಿಯಲ್ಲಿ ಹಲವಾರು ವರ್ಷಗಳಿಂದ ಪೈಲೆಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ತಮ್ಮ ಕರ್ತವ್ಯದಲ್ಲಿ ಕಿಂಚಿತು ಶೃದ್ಧೆ ಇಲ್ಲದೆ ತನ್ನ ಮೇಲಾಧಿಕಾರಿಗಳನ್ನು ಹಿಡಿತದಲ್ಲಿಟ್ಟುಕೊಂಡು ಅವರನ್ನ ಮೇಲಿಂದ ಮೇಲೆ ಬ್ಯಾಕಮೇಲ್ ಮಾಡುತ್ತ ತನಗೆ ಲಾಭದಾಯಕ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಅಧಿಕಾರಿ ಹಾಗೂ ಸಿಬ್ಬಂದಿಗಳ ಮಧ್ಯ ದಲ್ಲಾಳಿಯಾಗಿ ವರ್ಗಾವಣೆ ಕೆಲಸಕ್ಕೆ ಲಕ್ಷಾಂತರ ರೂಪಾಯಿ ಗಿಂಬಳ ಪಡೆದುಕೊಳ್ಳುತ್ತಿದ್ದಾನೆ. ಅಧಿಕಾರಿಗಳನ್ನು ಅಂಜಿಸಿ ಹಾಜರಾತಿ ಹಾಕಿಸಿ ವೇತನವನ್ನು ಪಡೆದುಕೊಳ್ಳುತ್ತಾನೆ.ಈ ಹಿಂದೆ ೩ ತಿಂಗಳ ಸತತ ಗೈರು ಇದ್ದ ಈತ ಪ್ರತಿ ತಿಂಗಳ ಸಂಬಳ…
ಉದಯರಶ್ಮಿ ದಿನಪತ್ರಿಕೆ ಚಡಚಣ: ಬಳ್ಳೊಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಂದಾಜು ಮೊತ್ತ ಮಾಡಲಾದ ಮೂರು ರಸ್ತೆ ಕಾಮಗಾರಿಗಳಲ್ಲಿ ಕೇವಲ ಶೇ.5ರಷ್ಟು ಮಾತ್ರ ಕೆಲಸ ನಡೆಸಿ, ಉಳಿದ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಗಂಭೀರ ಆರೋಪವನ್ನು ಗ್ರಾಮದ ರೈತ ಕುಮಾರ ಜಾಧವ ಮಾಡಿದ್ದಾರೆ.ಬಳ್ಳೊಳ್ಳಿ ಗ್ರಾಮ ಪಂಚಾಯತ್ ಅಡಿಯಲ್ಲಿ ವಿನೋದ್ ಗೋಡಿಹಾಳ ಜಮೀನಿಂದ ಸಾಯಬಗೌಡ ಹತ್ತಿ ಜಮೀನಿನವರೆಗೆ ಮುರುಮ ರಸ್ತೆ ಕಾಮಗಾರಿ (ಕಾಮಗಾರಿ ಸಂಖ್ಯೆ: 1507003034/ಆರ್.ಸಿ/93393042892515995), ಬಳ್ಳೊಳ್ಳಿಯಿಂದ ದೇವರನಿಂಬರಗಿ ರಸ್ತೆಯ ಪುರಾಣಿಕ ಹೊಲದಿಂದ ಅಪ್ಪಾಶ್ಯಾ ಬಿರಾದಾರ ಹೊಲದವರೆಗೆ ರಸ್ತೆ ನಿರ್ಮಾಣ ಕಾಮಗಾರಿ (1507003034/ ಆರ್.ಸಿ//93393042892515837) ಹಾಗೂ ಕದರಿ ಮಹಾದೇವ ವಸತಿಯಿಂದ ತೇಲಿ ವಸ್ತಿ ರಸ್ತೆ ಕಾಮಗಾರಿ (1507003034/ ಆರ್.ಸಿ//93393042892517645) ಈ ಮೂರು ಕಾಮಗಾರಿಗಳಲ್ಲಿ ಕಳಪೆ ಗುಣಮಟ್ಟದ ಕೆಲಸ ಮಾಡಿ ಹಣ ದೋಚಿದ್ದು ಸರಕಾರಕ್ಕೆ ಮತ್ತು ಸಾರ್ವಜನಿಕರಿಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.ಈ ಕುರಿತು ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ಗೆ ಲಿಖಿತವಾಗಿ ಮನವಿ ಸಲ್ಲಿಸಿದರೂ ಇಲ್ಲಿಯವರೆಗೆ ಅಧಿಕಾರಿಗಳು ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ. ರಸ್ತೆ ಕಾಮಗಾರಿ…
ಉದಯರಶ್ಮಿ ದಿನಪತ್ರಿಕೆ ಚಡಚಣ: ಅನ್ನ ನೀಡುವ ಭೂತಾಯಿಗೆ ಹಾಗೂ ಹೊಲದಲ್ಲಿ ಸಮೃದ್ಧವಾಗಿ ಬೆಳೆದು ನಿಂತ ಬೆಳೆಗೆ ಮನೆಮಂದಿಯಲ್ಲ ಸೇರಿ ಸಂಭ್ರಮದಿಂದ ಪೂಜೆಸಲ್ಲಿಸುವ ವಾಡಿಕೆ ಹಿಂದಿನಿಂದ ಬಂದಿದೆ. ಉತ್ತರ ಕರ್ನಾಟಕದ ರೈತರ ಪಾಲಿಗೆ ಸಂಭ್ರಮದ ಹಬ್ಬ. ಎಳ್ಳ ಅಮವಾಸ್ಯೆಯ ನಿಮಿತ್ತ ಚಡಚಣ ತಾಲೂಕಿನಾದ್ಯಂತ ಹಾಗೂ ರೇವತಗಾಂವ ಗ್ರಾಮದ ಕೆಂಬತ್ತಿ ವಸ್ತಿಯಲ್ಲಿನ ರೈತ ಮಹಿಳೆಯರು ಶುಕ್ರವಾರದಂದು ಭೂತಾಯಿಗೆ ವಿಶೇಷವಾದ ಪೂಜೆಯನ್ನು ಸಲ್ಲಿಸಿ, ಮುತ್ತ್ಯೈದೆಯರಿಗೆ ಉಡಿ ತುಂಬುವ ಮೂಲಕ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.ಅತಿವೃಷ್ಟಿಯಿಂದ ಮುಂಗಾರು ಬಹುತೇಕ ಹಾಳಾಗಿದ್ದು ಹಿಂಗಾರಿ ಚನ್ನಾಗಿ ಬೆಳದು ನಿಂತಿರೋ ಜೋಳ, ಕಡಲೆ ಸೇರಿದಂತೆ ಹಿಂಗಾರು ಬೆಳೆಯಲ್ಲಿ ಐದು ಕಲ್ಲಿನ ಪಾಂಡವರನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ‘ಸಜ್ಜಿ ರೊಟ್ಟಿ ಚವಳಿಕಾಯಿ ಚಾಂಗಬಲೋ’ ಎಂದು ಹೇಳುತ್ತ ಹೊಲದ ತುಂಬ ಭೂತಾಯಿಗೆ ಚರಗ ಚೆಲ್ಲಿದರು.ಚರಗ ಚೆಲ್ಲಿದ ಅನ್ನ ಆಹಾರ ತಿನ್ನಲು ಬರುವ ಪಕ್ಷಿಗಳು ಹೊಲದಲ್ಲಿರುವ ಕೀಟಗಳನ್ನು ತಿಂದು ರೈತರಿಗೆ ಸಹಾಯಮಾಡುತ್ತವೆ. ಚಡಚಣ ತಾಲೂಕಿನ ಪ್ರತಿ ಮಹಿಳೆಯರು ತಮ್ಮ ಮನೆಗಳಲ್ಲಿ ತಯಾರಿಸಿದ ಸಜ್ಜೆ ಕಡಬು, ಹೋಳಿಗೆ, ಹಸಿ…
ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಎಳ್ಳ ಅಮಾವಾಸ್ಯೆಗೆ ವಿಶೇಷ ಮಹತ್ವವಿದೆ.ಗ್ರಾಮೀಣ ಸೊಗಡಿನ ಹಬ್ಬದಂದು ಅನ್ನದಾತರು ಬನ್ನಿ ಗಿಡದ ಬುಡದಲ್ಲಿ ಪಂಚ ಪಾಂಡವರನ್ನು ಪ್ರತಿಷ್ಠಿಾಪಿಸಿಪೂಜೆ ಸಲ್ಲಿಸುತ್ತಾರೆ. ಭೂಮಿ ತಾಯಿಯ ಋಣ ತೀರಿಸುವ ಸಲುವಾಗಿ ಜೋಳದ ಕನಿಕೆಯಿಂದ ಕೊಂಪೆ ಕಟ್ಟಿ, ಸೀರೆ ಉಡಿಸಿ ಉಡಿ ತುಂಬಿ , ಪೂಜೆ ಸಲ್ಲಿಸಿ, ಕರ್ಪೂರ ಬೆಳಗಿ ಕಾಯಿ ಹೊಡೆದು ಭೂತಾಯಿಯ ಮಡಿಲ್ಲಲ್ಲಿ ಚರಗ ಚೆಲ್ಲಿ ಕೃತಜ್ಞತೆಯಿಂದ ಸ್ಮರಿಸುತ್ತಾರೆ.ಈ ಶುಭ ಸಂದರ್ಭದಲ್ಲಿ ಬಂಧು ಬಾಂಧವರು, ಆತ್ಮೀಯ ಸಹೋದ್ಯೋಗಿ ಮಿತ್ರರು ಒಂದಾಗಿ ಸೇರಿ ಹಬ್ಬದ ಸವಿ ರುಚಿ ಎಳ್ಳು ಹಚ್ಚಿದ ಸಜ್ಜಿ ರೋಟಿ, ಸಜ್ಜಿ ಕಡುಬು, ಪುಂಡಿ ಪಲ್ಲೆ, ಇಂಡಿ ಪಲ್ಯ , ಭರ್ತ, ಭಜ್ಜಿ, ಅಪ್ಪಳ, ಸೆಂಡಗೆ, ಅಂಬಲಿ, ಹೋಳಿಗೆ, ಅನ್ನ ಸಾರು, ಮೃಷ್ಟಾನ್ನ ಭೋಜನ ಸವಿದು ಸಂಭ್ರಮಿಸುತ್ತಾರೆ.ಈ ಪವಿತ್ರ ದಿನ ನಾಡಿನ ಸಮಸ್ತ ರೈತರಿಗೆ, ಕೃಷಿ ಕಾರ್ಮಿಕರಿಗೆ, ಸುಖ ಸಂತೋಷ ನೆಮ್ಮದಿ ಸಮೃದ್ಧಿ, ಸಂಪತ್ತು, ಕೊಟ್ಟು ಕರುಣಿಸಲಿ ಎನ್ನುತ್ತಾರೆ ರೈತಾಪಿ ವರ್ಗ.
