Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಇಂಡಿ: ಇಂದು ಕೃಷಿ ಗೊಬ್ಬರ ದಾಸ್ತಾನು ಮಳಿಗೆಗಳಿಗೆ ಕೃಷಿ ಉಪ ನಿರ್ದೇಶಕ ಚಂದ್ರಕಾAತ ಪವಾರ ಇವರ ನೇತೃತ್ವದಲ್ಲಿ ಭೇಟಿ ನೀಡಿದರು.ಎ.ಸಿ.ಧನಶೆಟ್ಟಿ, ಶಾಂತು ಧನಶೆಟ್ಟಿ ಮತ್ತು ಪ್ರಕಾಸಗೌಡ ಬಿರಾದಾರ ಇವರ ಮಳಿಗೆಗಳಿಗೆ ಭೇಟಿ ನೀಡಿದರು.ತಾಲೂಕಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಗೊಬ್ಬರ ಸಂಗ್ರಹವಿದೆ. ಸರಿಯಾದ ದರಕ್ಕೆ ಗೊಬ್ಬರ ನೀಡಬೇಕು. ದರ ಪಟ್ಟಿ ಪ್ರಕಟಿಸಬೇಕು. ಅವಧಿ ಮುಗಿದ ಗೊಬ್ಬರ ನೀಡಬಾರದು. ಅಂತಹ ಪ್ರಕರಣ ರೈತರಿಂದ ಬಂದರೆ ಕ್ರಮ ಕೈಕೊಳ್ಳಲಾಗುವದು.ಸರಕಾರ ನಿಗದಿ ಪಡಿಸಿದ ದರಕ್ಕೆ ಕೃಷಿ ಪರಿಕರ ನೀಡಬೇಕು. ಸ್ಟಾಕು ಲಗ್ತಿಸಬೇಕು ಎಂದರು.ಸಹಾಯಕ ಕೃಷಿ ನಿರ್ದೇಶಕ ಮಹಾದೇವಪ್ಪ ಏವೂರ, ಕೃಷಿ ಅಧಿಕಾರಿ ಮಹಾಂತೇಶ ಶೆಟ್ಟೆನ್ನವರ ಮತ್ತಿತರಿದ್ದರು.
ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲೂಕಿನಲ್ಲಿ ಹರಿಯುವ ಕೃಷ್ಣಾ ಮುಖ್ಯ ಕಾಲುವೆಗೆ ಒಂದು ಟಿಎಂಸಿ ನೀರು ಹರಿಯ ಬಿಡಲಾಗಿದೆ ಎಂದು ಇಂಡಿಯ ಕಂದಾಯ ಉಪವಿಬಾಗಾಧಿಕಾರಿ ಚಿದಾನಂದ ಗುರುಸ್ವಾಮಿ ತಿಳಿಸಿದ್ದಾರೆ.ವಿಭಾಗೀಯ ಆಯುಕ್ತರು ಕಲಬುರಗಿ ವಿಭಾಗ ಇವರು ಬೆಳಗಾವಿ ವಿಭಾಗೀಯ ಆಯುಕ್ತರ ಕೋರಿಯ ಮೇರೆಗೆ ನಾರಾಯಣ ಜಲಾಶಯದಿಂದ ಒಂದು ಟಿ.ಎಂ.ಸಿ ನೀರನ್ನು ಹರಿಸಿದ್ದಾರೆ.ಕೆಬಿಜೆಎನ್ಎಲ್ ಅಧಿಕ್ಷಕ ಅಭಿಯಂತರ ಮನೋಜಕುಮಾರ ಗಡಬಳ್ಳಿ, ಇಂಡಿಯ ಶಾಸಕ ಯಶವಂತರಾಯಗೌಡ ಪಾಟೀಲರು ಮತ್ತು ನಾಗಠಾಣದ ಶಾಸಕ ವಿಠ್ಠಲ ಕಟಕದೊಂಡ ಇವರ ಪ್ರಯತ್ನದಿಂದ ನೀರು ಪಡೆಯಲಾಗಿದೆ.ನೀರು ಈಗಾಗಲೇ ಏ. ೧೧ ರಿಂದ ಕೃಷ್ಣಾ ಕಾಲುವೆಯಲ್ಲಿ ಹರಿಯುತ್ತಿದ್ದು ಒಂದು ಟಿಎಂಸಿ ಹೆಚ್ಚುವರಿ ನೀರಿನಿಂದ ಏ. ೨೩ ರ ವರೆಗೆ ನೀರು ಕಾಲುವೆಯಲ್ಲಿ ಹರಿಯುತ್ತದೆ ಮತ್ತು ಈ ನೀರು ಕೇವಲ ಕುಡಿಯಲು ಮತ್ತು ಜನ ಜಾನುವಾರುಗಳು ಮಾತ್ರ ಉಪಯೋಗಿಸಲು ತಿಳಿಸಿದ್ದಾರೆ.ಇಂದು ಕೃಷ್ಣಾ ಕಾಲುವೆ ಮೇಲೆ ಕಂದಾಯ ಉಪವಿಬಾಗಾಧಿಕಾರಿಗಳು ಬೇಟಿ ನೀಡಿ ಸಾಲೋಟಗಿಯಿಂದ ಮಾವಿನಹಳ್ಳಿಯ ವರೆಗೆ ಕಾಲುವೆಯನ್ನು ವಿಕ್ಷಿಸಿದರು.ಇಒ ಭೀಮಾಶಂಕರ ಕನ್ನೂರ ಹೆಸ್ಕಾಂ ಎಇಇ ಎಸ್.ಆರ್.ಮೆಂಡೆಗಾರ, ಕೆಬಿಜೆಎನ್ಎಲ್ ಭೀರಪ್ಪ…
ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲೂಕಿನ ಚವಡಿಹಾಳ ಗ್ರಾಮದ ಶ್ರೀ ಭಾಗ್ಯವಂತಿ ಪದವಿಪೂರ್ವ ಮಹಾವಿದ್ಯಾಲಯದ ಕಲಾ ವಿಭಾಗದ ವಿದ್ಯಾರ್ಥಿನಿ ಸರಸ್ವತಿ ಶಿವರಾಜ ನಿಡೋಣಿ ಪಿಯು ಪರೀಕ್ಷೆಯಲ್ಲಿ ೫೮೮ ಅಂಕ ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಮತ್ತು ಜಿಲ್ಲೆಗೆ ೮ ನೆಯ ಸ್ಥಾನ ಪಡೆದಿದ್ದಾಳೆ.ಅವಳ ತಂದೆ ಶಿವರಾಯ ಮತ್ತು ತಾಯಿ ವಿಮಲಾ ಇಬ್ಬರೂ ಬೇರೆ ರೈತರ ಹೊಲದಲ್ಲಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಇರಲು ಸ್ವಂತ ಮನೆಯಿಲ್ಲ. ಮನೆಯಲ್ಲಿ ಕಡು ಬಡತನ, ಸರಸ್ವತಿ ಶಾಲೆಗೆ ಚಪ್ಪಲ ಇಲ್ಲದೆ ಹೋಗಿರುವ ಪ್ರಸಂಗ ಹೆಚ್ಚು.ಶಾಲೆ ತೋಟದಿಂದ ಮೂರು ಕಿಮಿ ದೂರದಲ್ಲಿದೆ. ಪ್ರತಿದಿನ ನಡೆದುಕೊಂಡು ಹೋಗುತ್ತಿದ್ದಳು.ಬೆಳಗ್ಗೆ ಶಾಲೆ ೯ ಗಂಟೆಯಿಂದ ೫ ಗಂಟೆಯ ವರೆಗೆ ನಂತರ ೫ ಗಂಟೆಯಿಂದ ೮ ಗಂಟೆಯ ವರೆಗೆ ವಿಶೇಷ ತರಗತಿಗೆ ಹೋಗುತ್ತಿದ್ದಳು. ನಂತರ ಮನೆಯಲ್ಲಿ ಬಂದು ೧೦ ಗಂಟೆಯ ವರೆಯ ಅಭ್ಯಾಸ ಮಾಡುತ್ತಿದ್ದಳು. ಹೊಲದಲ್ಲಿ ವಿದ್ಯುತ್ ೧೦ ಗಂಟೆಯ ವರೆಗೆ ಮಾತ್ರ ಇರುವದರಿಂದ ೧೦ ಗಂಟೆಗೆ ಮಲಗಿ ನಂತರ ಬೆಳಿಗ್ಗೆ ೫…
ಉದಯರಶ್ಮಿ ದಿನಪತ್ರಿಕೆ ಇಂಡಿ: ಶೈಕ್ಷಣಿಕ ವಲಯ ವ್ಯಾಪ್ತಿಗೊಳಪಟ್ಟ ಸಾಯಿ ಖಾಸಗಿ ಪ್ರೌಢಶಾಲೆಯಲ್ಲಿ ಎಐ ಟೀಚರ್ ಗಮನ ಸೆಳೆಯುತ್ತಿದೆ.ತಾಲೂಕಿನಲ್ಲಿಯೇ ಖಾಸಗಿ ಶಾಲೆ ವಿದ್ಯಾರ್ಥಿಗಳ ಬೋಧನೆಗೆ ಎಐ ಟೀಚರ್ ಆದಿತಿ ಯನ್ನು ಪರಿಚಯಿಸುವ ದಿಟ್ಟ ಹೆಜ್ಜೆ ಇಟ್ಟಿದೆ.ಸಾಯಿ ಶಾಲೆಯಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ ಶಿಕ್ಷಕಿ ಕಾರ್ಯ ನಿರ್ವಹಣೆ ಸಜ್ಜಾಗಿದ್ದು ಏ.೧೨ ರಂದು ವಿದ್ಯುಕ್ತ ಚಾಲನೆ ನೀಡಲಾಗಿದೆ.ನೀತಿ ಆಯೋಗ ಪ್ರಾರಂಭಿಸಿದ ಅಟಲ್ ಟಿಂಕರಿಂಗ್ ಲ್ಯಾಬ್ ಯೋಜನೆಯಡಿ ನಿರ್ಮಿಸಿಲಾದ ಆದಿತಿ ಸಾಂಪ್ರದಾಯಿಕ ಬೋಧನಾ ವಿಧಾನಗಳನ್ನು ಕ್ರಾಂತಿಗೊಳಿಸುವ ಗುರಿ ಹೊಂದಿರುವ ಹಲವಾರು ವೈಶಿಷ್ಟಗಳನ್ನು ಹೊಂದಿದೆ. ೨೦ ಭಾಷೆಗಳನ್ನು ಮಾತನಾಡುವ ಮತ್ತು ಪ್ರಶ್ನೆಗಳನ್ನು ನಿಭಾಯಿಸುವ ಸಾಮಥ್ಯದೊಂದಿಗೆ ಆದಿತಿ ಪ್ರತಿ ವಿದ್ಯಾರ್ಥಿಗೆ ಕಲಿಕೆಯ ಅನುಭವ ನೀಡುತ್ತದೆ. ಸೀರೆಯಲ್ಲಿ ಕಂಗೊಳಿಸಿದ ಆದಿತಿ ಎಐ ಶಿಕ್ಷಕಿ ವಿದ್ಯಾರ್ಥಿಗಳ ಸಂವಾದ ನಡೆಸುತ್ತದೆ. ಕೈ ಕುಲುಕುತ್ತದೆ. ವಿದ್ಯಾರ್ಥಿಗಳಿಗೆ ಬಹುಬೇಗ ಇಷ್ಟವಾಗುತ್ತದೆ. ಮಗು ಯಾವದೇ ಪ್ರಶ್ನೆ ಕೇಳಿದರೂ ಎಐ ಶಿಕ್ಷಕಿ ಥಟ್ ಅಂತ ಉತ್ತರ ಹೇಳುತ್ತದೆ. ವಿಶೇಷವಾಗಿ ಇಂಗ್ಲೀಷ್ ಕಲಿಕೆಗೆ ಹೆಚ್ಚು ಪೂರಕವಾಗಲಿದೆ.ಎಜುಕೇಷನ್ ಕನ್ಸಲಟನ್ಸಿಯವರ ಜೊತೆಗೆ ಒಪ್ಪಂದ ಮಾಡಿಕೊಂಡು ಬೆಂಗಳೂರಿನಿಂದ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಅಖಿಲ ಭಾರತ ಮಾನವೀಯತೆ ಸಂದೇಶ ವೇದಿಕೆ ಸಿಂದಗಿ ಶಾಖೆಯ ವತಿಯಿಂದ ಸಿಂದಗಿ ನಗರದ ಮೂರು ಪ್ರಮುಖ ಆಸ್ಪತ್ರೆಯಲ್ಲಿ ಹಳ್ಳಿಗಳಿಂದ ಬಂದ ರೋಗಿಗಳಿಗೆ ಮತ್ತು ಹಸಿದವರಿಗ ಹಾಗೂ ಬಸ್ ನಿಲ್ದಾಣದಲ್ಲಿ ರಾತ್ರಿಯ ಹೊತ್ತು ಪ್ರಯಾಣ ಮಾಡುವ ನೂರ, ಐವತ್ತು ಪ್ರಯಾಣಿಕರಿಗೆ ಸಂಜೆಯ ಊಟ ವಿತರಿಸಲಾಯಿತು.ಹಸಿವು ಮುಕ್ತ ಸಮಾಜವೆಂದರೆ ಎಲ್ಲರಿಗೂ ಆಹಾರ ಲಭ್ಯವಾಗುವ ಸಮಾಜವಾಗಬೇಕು. ಇದು ಮೂಲಭೂತ ಮಾನವ ಹಕ್ಕು. ನಾವು ಒಟ್ಟಾಗಿ ಕೆಲಸ ಮಾಡಿದರೆ, ಹಸಿವನ್ನು ನಿರ್ಮೂಲನೆ ಮಾಡಬಹುದು.ಪ್ರತಿ ಊಟವೂ ಒಂದು ಉಡುಗೊರೆ. ಹಸಿದವರಿಗೆ ಊಟ ನೀಡುವುದು ನಮ್ಮ ಕರ್ತವ್ಯ. ನಾವು ಆಹಾರವನ್ನು ವ್ಯರ್ಥ ಮಾಡಬಾರದು. ಬದಲಿಗೆ ಅದನ್ನು ಅಗತ್ಯವಿರುವವರಿಗೆ ಹಂಚಬೇಕು. ಹಸಿವು ಮುಕ್ತ ಸಮಾಜಕ್ಕಾಗಿ, ನಾವು ಒಗ್ಗಟ್ಟಾಗಿ ನಿಲ್ಲೋಣ ಎಂದು ಮೌಲಾನಾ ದಾವೂದ ನದ್ವಿ ಹೇಳಿದರು.ಇದೇ ರೀತಿ ಮೌಲಾನಾ ಕಲೀಮುಲ್ಲಾಹ ನದ್ವಿ ಹಸಿದವರಿಗೆ ಊಟ ನೀಡುವ ಸೇವೆಯು ಬಹಳ ಶ್ರೇಷ್ಠವಾದ ಕೆಲಸ. ಇದು ನಮ್ಮ ಸಮಾಜದಲ್ಲಿ ಬಡತನ ಮತ್ತು ಹಸಿವಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಎಂಬ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಅಖಿಲ ಭಾರತ ಮಾನವೀಯತೆ ಸಂದೇಶ ವೇದಿಕೆ ವತಿಯಿಂದ ಸಿಂದಗಿ ನಗರದಲ್ಲಿ ಕುಡಿಯುವ ನೀರಿನ ಅರವಟಿಗೆ ಸೌಲಭ್ಯ ಕಲ್ಪಿಸಿ ಮಾನವೀಯತೆ ಮೆರೆದಿದೆ.ಸುಡು ಬೇಸಿಗೆ ಹೆಚ್ಚುತ್ತಿರುವ ತಾಪಮಾನವನ್ನು ಗಮನದಲ್ಲಿ ಇಟ್ಟುಕೊಂಡು ಅಖಿಲ ಭಾರತ ಮಾನವೀಯತೆ ಸಂದೇಶ ವೇದಿಕೆಯು ನಗರದ ಪ್ರಮುಖ ಸ್ಥಳಗಳಲ್ಲಿ ನೀರಿನ ಅರವಟಿಗೆ ಅಳವಡಿಸಿ ಜನಸಾಮಾನ್ಯರಿಗೆ, ಬಾಯಾರಿ ಬಂದವರಿಗೆ ನೀರಿನ ದಾಹ ತಣಿಸುವ ಕಾರ್ಯ ಮಾಡುತ್ತಿದೆ.ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ, ಪೊಲೀಸ್ ಠಾಣೆ ಇನ್ನು ಹಲವಾರು ನಗರದ ಪ್ರಮುಖ ಬೀದಿಗಳಲ್ಲಿ ನೀರಿನ ಅರವಟಿಗೆಯನ್ನು ಅಳವಡಿಸಿ ಈ ಸೇವೆಯ ಕಾರ್ಯಗೆ ಚಾಲನೆ ನೀಡಲಾಯಿತು.ಈ ಸೇವೆ ಸುಮಾರು ಹತ್ತು ವರ್ಷಗಳಿಂದ ಸಿಂದಗಿ ನಗರದಲ್ಲಿ ತುಂಬಾ ಯಶಸ್ವಿಯಾಗಿ ಮುಂದುವರೆಯುತ್ತಿದೆ. ಸಾರ್ವಜನಿಕರಿಂದ ವೇದಿಕೆಯ ಈ ಸೇವೆ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಇಂತಹ ಸೇವೆಯ ಭಾವನೆಯಿಂದ ಸುಂದರ ಸಮಾಜದ ನಿರ್ಮಾಣ ಸಾಧ್ಯ ಇಂತಹ ಕಾರ್ಯದಿಂದ ಜನಸಾಮಾನ್ಯರಿಗೆ, ಕಛೇರಿಗೆ ಬರುವ ಹಳ್ಳಿ ಭಾಗದ ಜನರಿಗೆ ತುಂಬಾ ಅನುಕೂಲವಾಗುವುದು ಹಾಗೂ ಮಾನವೀಯ ಮೌಲ್ಯವನ್ನು ಬೇಳೆಸುವಲ್ಲಿ ವೇದಿಕೆಯ ಪಾತ್ರ ಬಹುಮುಖ್ಯವಾಗಿದೆ. ಎಂದು ಸರ್ವ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸೋಮವಾರದಂದು ಬಸವ ಜಯಂತಿ ಹಾಗೂ ಅಕ್ಷಯ ತೃತೀಯ ಪ್ರಯುಕ್ತ ಜಿಲ್ಲೆಯಾದ್ಯಂತ ಮಾಂಸ ಮತ್ತು ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಉಮೇಶ ಕೋಳಕೂರ ಒತ್ತಾಯಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಇದೇ ದಿ. 20 ರಂದು ವಿಶ್ವಗುರು ಬಸವಣ್ಣನವರ ಜನ್ಮದಿನವಾದ ‘ಬಸವ ಜಯಂತಿ’ ಹಾಗೂ ಅತ್ಯಂತ ಪವಿತ್ರವಾದ ‘ಅಕ್ಷಯ ತೃತೀಯ’ ಹಬ್ಬಗಳು ಒಟ್ಟಾಗಿ ಆಚರಿಸಲ್ಪಡುತ್ತಿವೆ. ಈ ದಿನಗಳು ನಮ್ಮ ನಾಡಿನ ಸಾಂಸ್ಕೃತಿಕ ಮತ್ತು ಧಾರ್ಮಿಕ ಇತಿಹಾಸದಲ್ಲಿ ಅತ್ಯಂತ ಮಹತ್ವದ ದಿನಗಳಾಗಿವೆ.ವಿಶ್ವಗುರು ಬಸವಣ್ಣನವರು ದಯವೇ ಧರ್ಮದ ಮೂಲವಯ್ಯಾ…ಎಂದು ಸಾರಿದವರು. ಅಹಿಂಸೆ ಮತ್ತು ಜೀವಕಾರುಣ್ಯ ಅವರ ತತ್ವಗಳ ಮೂಲಾಧಾರ. ಅಂತಹ ಮಹಾಪುರುಷರ ಜಯಂತಿಯ ದಿನದಂದು ಜಿಲ್ಲೆಯಾದ್ಯಂತ ಮಾಂಸದ ಅಂಗಡಿಗಳು ತೆರೆದಿರುವುದು ಮತ್ತು ಪ್ರಾಣಿ ವಧೆ ಮಾಡುವುದು ಅವರ ತತ್ವಗಳಿಗೆ ಹಾಗೂ ಭಕ್ತರ ಭಾವನೆಗಳಿಗೆ ತೀವ್ರ ಧಕ್ಕೆ ತರುತ್ತದೆ. ಅದೇ ರೀತಿ, ಅಕ್ಷಯ ತೃತೀಯದಂತಹ ಮಂಗಳಕರ ದಿನದಂದು ಮದ್ಯದಂತಹ ವಸ್ತುಗಳ ಮಾರಾಟವು…
ವಿಜಯಪುರದಲ್ಲಿ “ಬಯಕೆಯ ಬಳ್ಳಿ” ಪುಸ್ತಕ ಲೋಕಾರ್ಪಣೆಗೊಳಿಸಿದ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ರಾಹುಲ್ಕುಮಾರ್ ಭಾವಿದೊಡ್ಡಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಾಹಿತ್ಯ ಎಂಬುದು ಕೇವಲ ಪದಗಳ ಜೋಡಣೆವಲ್ಲ ಅದು ಮನಸ್ಸಿನ ನಿಜ ಸ್ವರೂಪವನ್ನು ಪ್ರತಿಬಿಂಬಿಸುವ ಕನ್ನಡಿಯಾಗಿದೆ. ಅನುಭವಗಳ ಆಳ ಭಾವಗಳ ವ್ಯಾಪ್ತಿ ಜೀವನಗಳ ಸತ್ಯ ಸೌಂದರ್ಯಗಳ ಸಂಗಮವೇ ಕಾವ್ಯವಾಗಿದೆ ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾದ ರಾಹುಲ್ಕುಮಾರ್ ಭಾವಿದೊಡ್ಡಿ ಅವರು ಹೇಳಿದರು.ನಗರದ ಸರ್ಕಾರಿ ಆರ್ಟ್ಸ್ ಗ್ಯಾಲರಿಯಲ್ಲಿ ಬುಧವಾರ ಹಮ್ಮಿಕೊಂಡ ಬಯಕೆಯ ಬಳ್ಳಿ ಪುಸ್ತಕದ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಮಣ್ಣು ಮತ್ತು ಸಸಿ ಹಣ್ಣುಗಳ ಸಂರಕ್ಷಣೆ ಮತ್ತು ಪೋಷಣೆಯಲ್ಲಿ ತೊಡಗಿಸಿಕೊಂಡಿರುವ ಸಂಗೀತ ತೇಲಿ ಅವರು ಸಾಹಿತ್ಯದೊಂದಿಗೆ ಆಸಕ್ತಿ ಹೊಂದಿ ತಮ್ಮ ಚೊಚ್ಚಲ ಪುಸ್ತಕವನ್ನು ರಚಿಸಿರುವ ಇವರ ಸಾಹಿತ್ಯ ಪಯಣ ಯಶಸ್ವಿಯಾಗಲಿ, ಕನ್ನಡ ಸಾಂಸ್ಕೃತಿಕ ವಲಯದಲ್ಲಿ ಇವರು ಗುರುತಿಸಿಕೊಳ್ಳಲಿ ಎಂದು ಅವರು ಹೇಳಿದರು.ಈ ಸಂದರ್ಭ ಸಾಹಿತಿ ಮನು ಪತ್ತಾರ ಮಾತನಾಡಿ, ಬಯಕೆಯ ಬಳ್ಳಿಯಲ್ಲಿ 30 ಹನಿ ಕವನಗಳು ಮಲ್ಲಿಗೆ ಹೂವಿನ ಪರಿಮಳ ಸೂಸುವ ಹಾಗೂ…
