ಉದಯರಶ್ಮಿ ದಿನಪತ್ರಿಕೆ
ಇಂಡಿ: ತಾಲೂಕಿನ ಚವಡಿಹಾಳ ಗ್ರಾಮದ ಶ್ರೀ ಭಾಗ್ಯವಂತಿ ಪದವಿಪೂರ್ವ ಮಹಾವಿದ್ಯಾಲಯದ ಕಲಾ ವಿಭಾಗದ ವಿದ್ಯಾರ್ಥಿನಿ ಸರಸ್ವತಿ ಶಿವರಾಜ ನಿಡೋಣಿ ಪಿಯು ಪರೀಕ್ಷೆಯಲ್ಲಿ ೫೮೮ ಅಂಕ ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಮತ್ತು ಜಿಲ್ಲೆಗೆ ೮ ನೆಯ ಸ್ಥಾನ ಪಡೆದಿದ್ದಾಳೆ.
ಅವಳ ತಂದೆ ಶಿವರಾಯ ಮತ್ತು ತಾಯಿ ವಿಮಲಾ ಇಬ್ಬರೂ ಬೇರೆ ರೈತರ ಹೊಲದಲ್ಲಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಇರಲು ಸ್ವಂತ ಮನೆಯಿಲ್ಲ. ಮನೆಯಲ್ಲಿ ಕಡು ಬಡತನ, ಸರಸ್ವತಿ ಶಾಲೆಗೆ ಚಪ್ಪಲ ಇಲ್ಲದೆ ಹೋಗಿರುವ ಪ್ರಸಂಗ ಹೆಚ್ಚು.
ಶಾಲೆ ತೋಟದಿಂದ ಮೂರು ಕಿಮಿ ದೂರದಲ್ಲಿದೆ. ಪ್ರತಿದಿನ ನಡೆದುಕೊಂಡು ಹೋಗುತ್ತಿದ್ದಳು.
ಬೆಳಗ್ಗೆ ಶಾಲೆ ೯ ಗಂಟೆಯಿಂದ ೫ ಗಂಟೆಯ ವರೆಗೆ ನಂತರ ೫ ಗಂಟೆಯಿಂದ ೮ ಗಂಟೆಯ ವರೆಗೆ ವಿಶೇಷ ತರಗತಿಗೆ ಹೋಗುತ್ತಿದ್ದಳು. ನಂತರ ಮನೆಯಲ್ಲಿ ಬಂದು ೧೦ ಗಂಟೆಯ ವರೆಯ ಅಭ್ಯಾಸ ಮಾಡುತ್ತಿದ್ದಳು. ಹೊಲದಲ್ಲಿ ವಿದ್ಯುತ್ ೧೦ ಗಂಟೆಯ ವರೆಗೆ ಮಾತ್ರ ಇರುವದರಿಂದ ೧೦ ಗಂಟೆಗೆ ಮಲಗಿ ನಂತರ ಬೆಳಿಗ್ಗೆ ೫ ಗಂಟೆಗೆ ಎದ್ದು ೭ ಗಂಟೆಯ ವರೆಗೆ ಅಭ್ಯಾಸ. ನಂತರ ತಂದೆ ತಾಯಿ ಕೆಲಸದ ಹೋದ ನಿಮಿತ್ಯ ಮನೆ ಕೆಲಸ ಈಕೆಯೇ ಮಾಡಬೇಕು.
ಸರಸ್ವತಿ ರಾಜ್ಯಶಾಸ್ತ್ರ, ಸಮಾಜ ಶಾಸ್ತ್ರ, ಇತಿಹಾಸ ವಿಷಯದಲ್ಲಿ ೧೦೦ ಕ್ಕೆ ನೂರು ಅಂಕಗಳು ಮತ್ತು ಕನ್ನಡ ಅರ್ಥಶಾಸ್ತçದಲ್ಲಿ ೯೯ಅಂಕಗಳು ಇಂಗ್ಲೀಷ ವಿಷಯದಲ್ಲಿ ಮಾತ್ರ ೯೦ ಅಂಕಗಳು.
ಸರಸ್ವತಿಗೆ ಒಬ್ಬ ತಮ್ಮ ಮತ್ತು ಮೂವರು ಸಹೋದರಿಯರು.
ಶಿಕ್ಷಕರ ಸಹಕಾರ ಮತ್ತು ಸಹಪಾಠಿಗಳ ಸಹಕಾರ ಮತ್ತು ಮನೆಯವರ ಸಹಕಾರದಿಂದ ತಾನು ಪರೀಕ್ಷೆಯಲ್ಲಿ ಯಶಸ್ವಿಯಾಗಿರುವದಾಗಿ ಹೇಳುತ್ತಾಳೆ.
“ಸರಸ್ವತಿ ಬಡ ವಿದ್ಯಾರ್ಥಿನಿ ಹೀಗಾಗಿ ಅವಳಿಗೆ ಫೀ ಹೆಚ್ಚು ಪಡೆದಿಲ್ಲ. ಅದಲ್ಲದೆ ಅವಳಿಗೆ ಎಲ್ಲ ಶಿಕ್ಷಕರು ಅಭ್ಯಾಸದಲ್ಲಿ ಸಹಕಾರ ನೀಡಿದ್ದು ಹೆಚ್ಚು ಅಂಕ ಪಡೆಯಲು ಸಾದ್ಯವಾಗಿದೆ.”
– ಚಂದ್ರಶೇಖರ ದಶವಂತ
ಮುಖ್ಯ ಗುರು, ಬಾಗ್ಯವಂತಿ ಪಪೂ ವಿದ್ಯಾಲಯ, ಚವಡಿಹಾಳ

