Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ರೂಪಾಯಿಗೆ ೮೦ ರೂಪಾಯಿ ನೀಡುವ ಕರಾರಿನ ಮೇರಿಗೆ ಸಾರ್ವಜನಿಕ ಸ್ಥಳಗಳಲ್ಲಿ ನಿಂತು ಓಸಿ ಜೂಜಾಟವಾಡುತ್ತಿದ್ದ ಇಬ್ಬರ ಮೇಲೆ ಇಲ್ಲಿನ ಪಿಎಸ್‌ಐ ಸಂಜಯ ತಿಪರೆಡ್ಡಿ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದಾರೆ.ತಾಲೂಕಿನ ನೇಬಗೇರಿ ಗ್ರಾಮದ ಕುಮಾರ ಬಾಬು ಚವ್ಹಾಣ ಪಟ್ಟಣದ ಬಸ್ ನಿಲ್ದಾಣ ಬಳಿ ಮತ್ತು ತಾಲೂಕಿನ ನಾಲತವಾಡದ ನಾಡಗೌಡರ ಓಣಿಯ ರಮೇಶ ಬಸಪ್ಪ ಭಜಂತ್ರಿ ನಾಲತವಾಡ ಪಟ್ಟಣದ ವಿರೇಶ್ವರ ವೃತ್ತದ ಬಳಿ ಹೀಗೆ ಇಬ್ಬರೂ ಜೂಜಾಟದಲ್ಲಿ ತೊಡಗಿದ್ದಾಗ ಪೊಲೀಸರ ಕೈಗೆ ಸಿಕಿದ್ದು ಇವರಿಂದ ಕೆಲ ಹಣ, ಓಸಿ ಚೀಟಿ ಮತ್ತು ಬಾಲ್ ಪೆನ್ನುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಚಿಕ್ಕರೂಗಿ ಗ್ರಾಮದ ವಿವಿಧೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಚುನಾವಣೆಯಲ್ಲಿ ಸಮಾನ ಮನಸ್ಕರ ಪೆನಲ್‌ನ ಎಲ್ಲ ೧೨ ಅಭ್ಯರ್ಥಿಗಳು ಜಯಗಳಿಸಿದ್ದಾರೆ.ತಾಲ್ಲೂಕಿನ ಚಿಕ್ಕರೂಗಿ ಗ್ರಾಮದ ವಿ.ಪ್ರಾ.ಗ್ರಾ.ಕೃ.ಸ. ಸಂಘಕ್ಕೆ ಶನಿವಾರದಂದು ಜರುಗಿದ ಚುನಾವಣೆಯಲ್ಲಿ ಸಮಾನ ಮನಸ್ಕರ ಪೆನಲ್‌ನ ನಾಗಣ್ಣ ಮುಳಜಿ, ಸೋಮನಗೌಡ ಪಾಟೀಲ(ಕಡ್ಲೇವಾಡ), ಜಟ್ಟೇಪ್ಪ ಚಂಡಕಿ, ಪೂನ್ನಪ್ಪ ಖೈರಾವಿಕರ, ಹಣಮಂತ್ರಾಯ ಬಿರಾದಾರ, ಗುರಣ್ಣ ಅಂಜುಟಗಿ, ಚಂದ್ರಕಾಂತ ಬಿರಾದಾರ, ಸುಜಾತಾ ಬಾಗಲಕೋಟ, ಇಂದ್ರಾಬಾಯಿ ನಾಟೀಕಾರ, ರಾಜಬಕ್ಸರ ಚಾಂದಕವಠೆ, ಲಕ್ಷ್ಮಣ ತಳಕೇರಿ, ಪಿಡ್ಡಪ್ಪ ಗಣಜಲಿ ಜಯಗಳಿಸಿದರು. ನಂತರ ವಿಜಯೋತ್ಸವ ಆಚರಿಸಲಾಯಿತು.ಈ ಸಂದರ್ಭದಲ್ಲಿ ಸಂಘದ ನಿಕಟಪೂರ್ವ ಅಧ್ಯಕ್ಷ ಭೀಮರಾಯಗೌಡ ಬಿರಾದಾರ ಮಾತನಾಡಿ, ನಮ್ಮ ಸಂಘವು ಸುಮಾರು ೨೦ ಕೋಟಿ. ರೂಗಳಷ್ಟು ವ್ಯವಹಾರ ನಡೆಸಿ ರೈತರಿಗೆ ಸಹಕಾರಿಯಾಗಿದೆ. ನಾವು ಸಂಘದ ಬೆಳವಣಿಗೆಗೆ ನಮ್ಮ ಪೆನಲ್‌ನಿಂದ ಎಲ್ಲರೂ ಶ್ರಮವಹಿಸಿದ್ದು, ಮುಂದೆ ಕೂಡಾ ಸಂಘದ ಬೆಳವಣಿಗೆ ನಮ್ಮೇಲ್ಲರ ಸಹಕಾರವಿದೆ. ಮುಂದೆಯೂ ಕೂಡಾ ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡೋಣ. ಆಗ ಸಂಘದ ಬೆಳವಣಿಗೆ ಹೆಚ್ಚಾಗಲೂ ಸಾಧ್ಯ ಎಂದರು.ಗ್ರಾಮ ಪಂಚಾಯಿತಿ…

Read More

ಲೇಖನ- ವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿ, ಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು.ಹೊಸ ವರ್ಷ ಎಂದರೇನು?ಡಿಸೆಂಬರ್ ನ ಕೊನೆಯ ದಿನವೇ? ಜನವರಿಯ ಮೊದಲ ದಿನವೇ? ಹಳೆಯ ಕ್ಯಾಲೆಂಡರ್ ತನ್ನ ಅಸ್ಮಿತೆಯನ್ನು ಕಳೆದುಕೊಂಡು ರದ್ದಿ ಪುಸ್ತಕಗಳಲ್ಲಿ ಜಾಗೆ ಕಂಡುಕೊಂಡಿದ್ದೇ?? ಹೊಸ ಕ್ಯಾಲೆಂಡರ್ ನಡು ಮನೆಯ ಗೋಡೆಯನ್ನು ಅಲಂಕರಿಸಿದ್ದೇ?? ಅಥವಾ ಋತು ಬದಲಾವಣೆಯಾಗಿ ನಿಸರ್ಗ ಸಹಜವಾಗಿ ಮಾಮರದಲ್ಲಿ ಎಲೆ ಚಿಗುರಿ, ಕೋಗಿಲೆಗಳು ಕೂಗಿ, ವಸಂತನ ಆಗಮನವನ್ನು ಸಾರುವ ದಿನವೇ? ನಿಜವಾದ ಅರ್ಥದಲ್ಲಿ ಭಾರತೀಯರಾದ ನಮಗೆ ಋತುಮಾನಗಳ ಚರ್ಯೆಯ ಮೇಲೆ ಬದಲಾಗುವ ಮಾಸಗಳಲ್ಲಿ ವಸಂತ ಮಾಸ ಪ್ರಾರಂಭವಾಗುವ ಯುಗಾದಿಯ ದಿನವೇ ನಮ್ಮ ನಿಜವಾದ ಹೊಸ ವರುಷ. ಆದರೆ ಜಾಗತೀಕರಣದ ಈ ಪ್ರವಾಹದಲ್ಲಿ ನಾವು ಕೂಡ ತೇಲುತ್ತಿದ್ದೇವೆ ಆದ್ದರಿಂದ ಇಡೀ ವಿಶ್ವದಲ್ಲಿ ಆಚರಿಸುವ ಡಿಸೆಂಬರ್ 31ರ ರಾತ್ರಿ 12 ಗಂಟೆಗೆ ಹಳೆ ವರ್ಷವನ್ನು ಹಿಂದಟ್ಟಿ ಹೊಸ ವರ್ಷವನ್ನು ಸ್ವಾಗತಿಸುತ್ತೇವೆ.ನಿನ್ನೆ ಎಂಬುದು ಕಳೆದು ಹೋಗಿದೆ. ನಾಳೆಯನ್ನು ಕಂಡವರಾರು?? ಇಂದಿನ ದಿನ ನಮ್ಮ ಕಣ್ಣ ಮುಂದೆ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರ(ಗ್ರಾಮೀಣ) ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ ಒಟ್ಟು ೪೨ ಅಂಗನವಾಡಿ ಕಾರ್ಯಕರ್ತೆ ಹಾಗೂ ೧೦೫ ಅಂಗನವಾಡಿ ಸಹಾಯಕಿಯರ ಗೌರವ ಸೇವೆ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ೦೯-೧೧-೨೦೨೪ ರ ವರೆಗೆ ಕಾಲಾವಕಾಶ ನೀಡಲಾಗಿತ್ತು, ಪ್ರಸ್ತುತ ಅರ್ಜಿ ಸಲ್ಲಿಸುವ ಕಾಲಾವಧಿ ಮುಗಿದಿದೆ. ಅರ್ಜಿ ಸಲ್ಲಿಸುವ ೪ ಹಂತಗಳನ್ನು ಪೂರ್ಣಗೊಳಿಸದೇ ಅಪೂರ್ಣ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮಾತ್ರ ದಿನಾಂಕ: ೨೬-೧೨-೨೦೨೪ ರಿಂದ ದಿನಾಂಕ: ೦೫-೦೧-೨೦೨೫ ರಂದು ಸಂಜೆ ೫.೩೦ ರವರೆಗೆ ಅರ್ಜಿಗಳನ್ನು ಪೂರ್ಣಗೊಳಿಸಲು ವೆಬ್‌ಸೈಟ್‌ನಲ್ಲಿ ಇಲಾಖಾ ವತಿಯಿಂದ ಅವಕಾಶ ನೀಡಿ ಆದೇಶಿಸಲಾಗಿದೆ. ಅಪೂರ್ಣ ಅರ್ಜಿಗಳನ್ನು ಪೂರ್ಣಗೊಳಿಸುವಾಗ ಅಧಿಸೂಚನೆಯ ಕೊನೆಯ ದಿನಾಂಕದ ಒಳಗಿನ ದಾಖಲಾತಿಗಳನ್ನು ಅಪ್‌ಲೋಡ್ ಮಾಡಲು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ ವಿಜಯಪುರ(ಗ್ರಾಮೀಣ) ಇಲ್ಲಿಗೆ ಕಛೇರಿ ಸಮಯದಲ್ಲಿ ಸಂಪರ್ಕಿಸಬಹುದಾಗಿದೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ವತಿಯಿಂದ ಇಂಡಿ ತಾಲೂಕಿನ ಆರ್.ಎಂ.ಶಹಾ ಸಿ.ಬಿ.ಎಸ್.ಇ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ದಿನಾಂಕ- ೦೫-೦೧-೨೦೨೫ರಂದು ಬೆಳಿಗ್ಗೆ ೯.೩೦ ರಿಂದ ೪.೩೦ರವರೆಗೆ ಬೋಧಕ/ಭೋಧಕೇತರ ಹುದ್ದೆಗಳಿಗಾಗಿ ನೇರ ಸಂದರ್ಶನ ಆಯೋಜಿಸಲಾಗಿದೆ.ಸಂದರ್ಶನದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಬಿ.ಎ, ಎಂ.ಎ, ಬಿಸಿಎ, ಎಂಎಸ್ಸಿ, ಡಿ.ಇಡಿ, ಬಿ.ಇಡಿ, ಬಿ.ಎಸ್ಸಿ, ಎಂ.ಎಸ್ಸಿ, ಹಿಂದಿ ಬಿ.ಇಡಿ, ಬಿ.ಪಿ.ಇಡಿ, ಡಿಗ್ರಿ ಇನ್ ಯೋಗಾ, ಲೈಬ್ರರಿಯನ್, ಎನ್ ಟಿಟಿಸಿ, ಮೌಂಟೆಷರಿ ಹಾಗೂ ಬೋಧಕೇತರ ಹುದ್ದೆಗಳಾದ ವಾರ್ಡನ್ ಮತ್ತು ಕ್ಲರ್ಕಗೆ ಪದವಿ ವಿದ್ಯಾರ್ಹತೆಯುಳ್ಳ ಆಸಕ್ತ ಅಭ್ಯರ್ಥಿಗಳು ಭಾಗವಹಿಸಬಹುದು, ಹೆಚ್ಚಿನ ಮಾಹಿತಿಗಾಗಿ ಮೊ: ೭೭೯೫೩೨೪೧೭೦/ ೯೯೪೫೦೦೦೭೯೩ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯದ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇಂಡಿ ಶಿಶು ಅಭಿವೃದ್ಧಿಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ ೬೭ ಅಂಗನವಾಡಿ ಕಾರ್ಯಕರ್ತೆ ಹಾಗೂ ೧೬೪ ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಆನ್-ಲೈನ್ ಮೂಲಕ ಅರ್ಜಿಸಲ್ಲಿಸಲು ದಿನಾಂಕ ೦೯-೧೧-೨೦೨೪ರ ವರೆಗೆ ಕಾಲಾವಕಾಶ ನೀಡಲಾಗಿರುತ್ತದೆ. ಪ್ರಸ್ತುತ ಅರ್ಜಿ ಸಲ್ಲಿಸುವ ಕಾಲಾವಧಿ ಮುಗಿದಿದ್ದು, ಅರ್ಜಿ ಸಲ್ಲಿಸುವ ೦೪ ಹಂತಗಳನ್ನು ಪೂರ್ಣಗೊಳಿಸದೇ ಅಪೂರ್ಣಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮಾತ್ರ ದಿನಾಂಕ: ೨೬-೧೨-೨೦೨೪ ರಿಂದ ದಿನಾಂಕ: ೦೫-೦೧-೨೦೨೫ ರವರಗೆ ಅರ್ಜಿಗಳನ್ನು ಪೂರ್ಣಗೊಳಿಸಲು ವೆಬ್‌ಸೈಟ್‌ನಲ್ಲಿ ಇಲಾಖಾ ವತಿಯಿಂದ ಅವಕಾಶ ನೀಡಿ ಆದೇಶಿಸಲಾಗಿರುತ್ತದೆ. ಅಪೂರ್ಣಗೊಂಡ ಕಾರ್ಯಕರ್ತೆ/ಸಹಾಯಕಿಯರ ಪಟ್ಟಿಯನ್ನು ಸಂಬAಧಿಸಿದ ಗ್ರಾಮ ಪಂಚಾಯತ ಹಾಗೂ ಪುರಸಭೆಯಲ್ಲಿ ಪ್ರಕಟಿಸಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಗೆ, ಕಛೇರಿ ಸಮಯದಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅಮೃತ್ ಮಿತ್ರ ೨.೦ ಅಭಿಯಾನದಡಿ ತಾಂತ್ರಿಕೇತರ ಚಟುವಟಿಕೆ ಕಾರ್ಯಕ್ರಮಗಳಿಗೆ ಮಹಿಳಾ ಸ್ವ-ಸಹಾಯ ಸಂಘಗಳಿAದ ಅರ್ಜಿ ಆಹ್ವಾನಿಸಿದೆ.ಅರ್ಜಿ ಸಲ್ಲಿಸುವ ಸ್ವ-ಸಹಾಯ ಸಂಘ ಡೇ-ನಲ್ಮ್ ಯೋಜನೆಯ ಪಂಚಸೂತ್ರ ಅನುಸರಿಸುತ್ತಿರಬೇಕು. ಸಂಘದ ಕನಿಷ್ಠ ಒಬ್ಬ ಸದಸ್ಯ ೮ನೇ ತರಗತಿ ಶಿಕ್ಷಣ ಹಾಗೂ ಡಿಜಿಟಲ್ ಸಾಕ್ಷರತೆ ಹೊಂದಿರಬೇಕು. ಸಂಘದ ಹೆಸರಿನಲ್ಲಿ ಬ್ಯಾಂಕ್ ಖಾತೆ ಇರಬೇಕು. ಸಂಘ ಯಾವುದೇ ಅಪರಾಧ ಅಥವಾ ಸಮಾಜ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿರಬಾರದು. ವಾರ್ಡ್ ಮಟ್ಟದಲ್ಲಿ ಕೆಲಸ ಮಾಡುವ ಸ್ವ-ಸಹಾಯ ಗುಂಪಿಗೆ ಆದ್ಯತೆ ನೀಡಲಾಗುವುದು.ಆಸಕ್ತ ಸ್ವ-ಸಹಾಯ ಸಂಘಗಳು ಮಹಾನಗರ ಪಾಲಿಕೆಯ ಕೇಂದ್ರ ಕಛೇರಿ ಡೇ-ನಲ್ಮ್ ಶಾಖೆಗೆ ಭೇಟಿ ನೀಡಿ, ಕಾರ್ಯಾಲಯದಿಂದ ಅರ್ಜಿ ನಮೂನೆ ಪಡೆದು ಜನವರಿ- ೦೭-೦೧-೨೦೨೫ರ ಒಳಗಾಗಿ ತಮ್ಮ ಅರ್ಜಿಯನ್ನು ಮುಚ್ಚಿದ ಲಕೋಟೆಯಲ್ಲಿ ಕಾರ್ಯಾಲಯಕ್ಕೆ ಸಲ್ಲಿಸಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿಯಲ್ಲಿ ಎರಡು ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಮುಖ್ಯ ಕಾನೂನು ನೆರವು ಅಭಿರಕ್ಷಕರ ಒಂದು ಹುದ್ದೆ, ಉಪ ಮುಖ್ಯ ಕಾನೂನು ನೆರವು ಅಭಿರಕ್ಷಕರ ಒಂದು ಹುದ್ದೆ ಹಾಗೂ ಸಹಾಯಕ ಕಾನೂನು ನೆರವು ಅಭಿರಕ್ಷಕರ ಒಂದು ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತರು, ಜನವರಿ ೧೦,೨೦೨೫ ರೊಳಗಾಗಿ ಭರ್ತಿ ಮಾಡಿದ ಅರ್ಜಿಯನ್ನು ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಎಡಿಆರ್ ಕಟ್ಟಡ, ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣ, ವಿಜಯಪುರ ಇವರಿಗೆ ಸಲ್ಲಿಸುವಂತೆಯೂ ಹೆಚ್ಚಿನ ಮಾಹಿತಿಗಾಗಿ https://vijayapura.dcourts.gov.in/dlsaಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

– ಜಿ. ಬಿ. ಸಾಲಕ್ಕಿವಿಜಯಪುರ ಉದಯರಶ್ಮಿ ದಿನಪತ್ರಿಕೆ ಹಾಲು, ಪೇಪರ ದಿನನಿತ್ಯದ ವಹಿವಾಟುಗಳ ದಿನಗಳ ಗುಂಡು ಕಟ್ಟುವ ಹಳೆ ಹಾಳೆಗಳಿಗೆ ವಿದಾಯ, ಹೊಸದಕ್ಕೆ ಸ್ವಾಗತ ಅಗಲಿದ ಹಿರಿಯರ ನೆನಪು, ಸಿಹಿ, ಕಹಿ ಘಟನೆಗಳ ಸ್ಮರಣೆ. ಹಾಗಾಗಬಾರದಿತ್ತೆಂಬ ಹಳಹಳಿ ಮತ್ತೆ ಮರೆವು ಅದೇ ಕುರಡು ಕಾಂಚಾಣದಾಟ, ಸತ್ಯದ ಮೇಲೆ ಹಾರಾಡುವ ಸುಳ್ಳುಗಳು, ಮನುಷ್ಯನನ್ನು ಮನುಷ್ಯನನ್ನಾಗಿ ಕಾಣಬೇಕೆಂಬುವ ಸವಕಳಿಯಾದ ಭೋದನೆ.ನಾಲ್ಕಾರು ದಿನಗಳ ಹುರುಪು ಕೋಟಿ, ಕೋಟಿ ಖರ್ಚಿನ ಪಾರ್ಲಿಮೆಂಟು, ವಿಧಾನ ಸಭೆಗಳಲ್ಲಿ ಆಡಳಿತ, ವಿರೋಧಿಗಳ ಕೆಸರಾಟ,ಮಸ್ತಿ, ಮೋಜು ಮತ ಹಾಕಿ ಚುನಾಯಿಸಿದ ನಾಗರಿಕ ಮತನೀಡಿದ ಕೖ ಹಿಚುಕಿ ಪಶ್ಚಾತ್ತಾಪ, ಮತ್ತೆ ಮರೆವು ಆದಕ್ಕೇನೆ ಬೆಂಬಲ ಪ್ರಜಾತಂತ್ರದ ಪದಗಳಿಗೆ ಪ್ರತಿಜ್ನೆ ಮಾಡಿದ ಸ್ವಜನಪಕ್ಷ ಪಾತ, ಜಾತ್ಯಾತೀತೆಗಳು ಕೇವಲ ಅಕ್ಷರಗಳಲ್ಲಿ ಹಳೆಯ ವರ್ಷ ಗತಿಸುವ ನೆಪದಲಿ ಗುಂಡು, ತುಂಡು, ಮೋಜು ಮಸ್ತಿ ಹೊಸ ವರ್ಷಕೆ ಹೊಸ ನಿರ್ಣಯ, ನಿರ್ಧಾರ ಎಂಬ ಬಾವ ಕೆಲ ದಿನ ಮಾತ್ರ ಮತ್ತೆ ಅದೇ ನಡೆ, ಅದೇ ಮಾತು ವರ್ಷ ವರ್ಷ ಕಳೆದರೂ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಶರಣು ವಿಶ್ವ ವಚನ ಫೌಂಡೇಷನ್ ಮೈಸೂರು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು ಇವರ ಸಹಯೋಗದಲ್ಲಿ ಮೈಸೂರಿನ ವಿಜಯನಗರದ ಕನ್ನಡ ಸಾಹಿತ್ಯ ಭವನದಲ್ಲಿ ಈಚೆಗೆ ನಡೆದ ೧೦ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಮಾಜ ಮುಖಿ ಕಾರ್ಯ, ಉತ್ತಮ ಬೋಧನೆ, ತರಬೇತಿ ನೀಡುವ ಕೌಶಲ್ಯ ಹಾಗೂ ಸ್ಲಮ್ ಮಕ್ಕಳಿಗಾಗಿ ಉಚಿತ ಕಲಿಕಾ ಕೇಂದ್ರ ಸ್ಥಾಪಿಸಿ ಪಾಠ ಬೋಧನೆ ಮಾಡುವಲ್ಲಿ ಯಶಸ್ವಿಯಾಗಿರುವ ನ್ಯಾಷನಲ್ ಕೌನ್ಸಿಲ್ ಆಫ್ ಟೀಚರ್ ಸೈಂಟಿಸ್ಟ, ಇಂಡಿಯಾದ ಕರ್ನಾಟಕ ಸ್ಟೇಟ್ ಡೈರೆಕ್ಟರ್, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ವಿಜಯಪುರದ ಖಜಾಂಚಿ, ಕಿಡ್ಸ್ಜೋನ್ ಶಾಲೆಯ ಆಡಳಿತಾಧಿಕಾರಿ ಹಾಗೂ ಶಿಕ್ಷಕಿ ಶ್ರೀಮತಿ ಸುಮಾ ಚೌಧರಿ ಇವರಿಗೆ ಫೌಂಡೇಷನ್‌ನ ಸಂಸ್ಥಾಪಕ ಡಾ.ವಚನ ಕುಮಾರಸ್ವಾಮಿ, ಶ್ರೀಮತಿ ರೂಪಾಕುಮಾರ ಸ್ವಾಮಿ, ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್, ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಹಾಗೂ ಅತಿಥಿಗಳು “ರಾಜ್ಯ ಮಟ್ಟದ ಚಿನ್ಮಯ ಜ್ಞಾನಿ ಶಿಕ್ಷಕ ಪ್ರಶಸ್ತಿ” ನೀಡಿ ಗೌರವಿಸಿದರು.ಚಿನ್ಮಯಜ್ಞಾನಿ ಪ್ರಶಸ್ತಿಗೆ ಭಾಜನರಾದ…

Read More