ಕಠಿಣ ಪರೀಶ್ರಮ ಮತ್ತು ಬೋಧಕರ ಸಮರ್ಪಣಾ ಭಾವದ ಫಲವೇ ಈ ಫಲಿತಾಂಶ :ಬಸವರಾಜ್ ಕೌಲಗಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಗುಣಮಟ್ಟದ ಶಿಕ್ಷಣವನ್ನು ನೀಡುವ ಮೂಲಕ ನಾಡಿನಾಧ್ಯಂತ ಹೆಸರು ಮಾಡಿರುವ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜು ಜೆಇಇ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ತನ್ನ ಗುಣಮಟ್ಟದ ಶಿಕ್ಷಣಕ್ಕೆ ಮತ್ತೊಮ್ಮೆ ಸಾಕ್ಷಿ ಒದಗಿಸಿದೆ.
ಐಐಟಿ, ಐಐಐಟಿ ಸೇರಿದಂತೆ ಭಾರತದ ಪ್ರತಿಷ್ಠಿತ ತಾಂತ್ರಿಕ ಶಿಕ್ಷಣ ಕಾಲೇಜುಗಳಲ್ಲಿ ಎಂಜಿನೀಯರಿಂಗ್ ಕೋರ್ಸಗಳಿಗೆ ಪ್ರವೇಶ ಪಡೆದುಕೊಳ್ಳುವುದಕ್ಕೆಂದು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್ಟಿಎ) ಮೂಲಕ ನಡೆಸಲಾಗುವ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸುವ ಮೂಲಕ ಎಕ್ಸಲಂಟ್ ಕಾಲೇಜಿನ ವಿದ್ಯಾರ್ಥಿಗಳು ಮತ್ತೊಂದು ಸಾಧನೆ ಮಾಡಿದ್ದಾರೆ. ಜನೇವರಿ ೨೦೨೫ ರಲ್ಲಿ ಜರುಗಿದ ಜೆಇಇ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ಅತ್ಯಂತ ಸ್ಪರ್ಧಾತ್ಮಕವಾಗಿರುವ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದುಕೊಳ್ಳುವ ಮೂಲಕ ವಿದ್ಯಾರ್ಥಿಗಳು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಸಮರ್ಥ ಕಾಲಾಲ್(೯೮.೯೬), ಹರ್ಷ ಋಣವಾಲ(೯೮.೬೮), ಪ್ರೀತಮ ಬಾಗಲೇ(೯೭.೭೪), ಇಜ್ರೆಲ್ ಮಗಲಿ(೯೭.೫೬), ಅಭಿಷೇಕ್ ಜೋರಾಪುರ(೯೭.೫೩), ಪ್ರೇಮ್ ಚನಗೊಂಡ(೯೭.೧೮), ಗಂಗಾಧರ ಮುಟಗಿ(೯೭.೧೬), ಅಶ್ವೀನಿ ಯಕ್ಕುಂಡಿ(೯೬.೬೬), ಗಂಗೋತ್ರಿ ಬಿರಾದಾರ(೯೬.೧೯), ಬಸವರಾಜ್ ಹೊಸವಕ್ಕಲಿಗ(೯೫.೭೭), ಸಚಿನ ಸಜ್ಜನ್(೯೫.೦೧), ಸುಮೀತ್ ಪತ್ತಾರ(೯೪.೫೭), ಪ್ರಮೋದ ಚಾಂದಕವಟೆ(೯೪.೫೨), ಅಭಿಷೇಕ್ ಮಾವಿನಮರ(೯೩.೪೪), ಸಚಿನ ಮಾಳಿ(೯೨.೮೨), ಪ್ರೀತಿ ಮಂಟೂರ(೯೨.೬೯), ಶಿರೀಷ್ ಕುಲಕರ್ಣಿ(೯೨.೧೩), ಸ್ನೇಹಾ ಉಪ್ಪೀನ್(೯೧.೫೭), ಪ್ರವೀಣ ಮಾಳಿ(೯೧.೪೧), ಹರೀಶ ಚನಗೊಂಡ(೯೦.೯೧), ಶ್ರೇಯಸ್ ಕರ್ಜಗಿ(೯೦.೯೧), ಶ್ರೀದತ್ತ ದೀಕ್ಷಿತ(೯೦.೯೦), ಆದಿತ್ಯ ಬಾಗಲಕೋಟ(೯೦.೪೪), ಆಕಾಂಕ್ಷಾ ಬೊಂದರಡೆ(೯೦.೧೬) ಸೇರಿದಂತೆ ಒಟ್ಟು ೨೪ ವಿದ್ಯಾರ್ಥಿಗಳು ಶೇ ೯೦ ಕ್ಕೂ ಅಧಿಕ ಅಂಕಗಳನ್ನು ಪಡೆದುಕೊಂಡಿದ್ದು ಈ ಮೂಲಕ ಮುಂದಿನ ದಿನಗಳಲ್ಲಿ ಜರುಗುವ ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿಯೂ ಸಹ ಅತ್ಯುತ್ತಮವಾದ ಫಲಿತಾಂಶವನ್ನು ಪಡೆದುಕೊಳ್ಳುವ ಭರವಸೆ ಮೂಡಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆ ಕುರಿತು ಅಭಿಪ್ರಾಯಗಳನ್ನು ಹಂಚಿಕೊಂಡ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ್ ಕೌಲಗಿ, ವಿದ್ಯಾರ್ಥಿಗಳ ಈ ಸಾಧನೆಯ ಹಿಂದೆ ಕಠೀಣ ಪರಿಶ್ರಮ ಹಾಗೂ ಕಾಲೇಜಿನ ಬೋಧಕ ವರ್ಗದ ಸಮರ್ಪಣಾ ಭಾವ ಹಾಗೂ ಅವಿರತ ಪ್ರಯತ್ನದ ಫಲವಾಗಿ ಇಂದು ಕಾಲೇಜಿನ ಕೀರ್ತಿಗೆ ಮತ್ತೊಂದು ಗರಿ ಸಿಕ್ಕಿಸಿದ ಹಾಗಾಗಿದೆ. ಈ ಮಕ್ಕಳ ಸಾಧನೆಯು ನಮಗೆ ಮಾತ್ರ ಹರ್ಷ ತರದೇ ಪ್ರಥಮ ಪಿಯುಸಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೂ ಸಹ ಮಾರ್ಗವನ್ನು ಹಾಕಿಕೊಟ್ಟಿದೆ. ನಾವೂ ಸಹ ಇವರಂತೆ ಅಧ್ಯಯನದಲ್ಲಿ ತೊಡಗಿ ಹೆತ್ತವರ ಕನಸನ್ನು ನನಸು ಮಾಡಬೇಕು ಎನ್ನುವ ಮಹತ್ವಾಕಾಂಕ್ಷೆಯನ್ನು ಹುಟ್ಟು ಹಾಕಿದೆ ಎಂದು ಹೇಳುವುದರೊಂದಿಗೆ ಸಾಧನೆಯ ಹಾದಿಯಲ್ಲಿ ಸಾಗುತ್ತಿರುವ ಮಕ್ಕಳಿಗೆ ಹಾಗೂ ಅವರ ಸಾಧನೆಗೆ ನೆರವಾದ ಉಪನ್ಯಾಸಕ ವರ್ಗಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು.
ಮಕ್ಕಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿಯ ಸರ್ವ ಸದಸ್ಯ ಬಳಗ, ಕಾಲೇಜಿನ ಪ್ರಾಚಾರ್ಯ ಶ್ರೀಕಾಂತ ಕೆ.ಎಸ್ ಸೇರಿದಂತೆ ಎಲ್ಲ ಬೋಧಕ ಹಾಗೂ ಬೋಧಕೇತರ ಸಿಬ್ಬಂಧಿ ಅಭಿನಂದನೆಗಳನ್ನು ಸಲ್ಲಿಸಿದರು.

