Author: editor.udayarashmi@gmail.com

ಶಾಸಕ ಸಿ.ಎಸ್.ನಾಡಗೌಡರಿಗೆ ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಸವಾಲು ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ನನ್ನ ಜೀವಮಾನದಲ್ಲಿ ನಾನು ಮಾತ್ರ ಅಲ್ಲ, ನಮ್ಮ ಮನೆಯ ನಾಯಿ ಕೂಡ ನಿಮ್ಮ ಮನೆಗೆ ಬಂದಿಲ್ಲ ಎಂದು ಮಾಜಿ ಶಾಸಕ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಆಕ್ರೋಶ ವ್ಯಕ್ತಪಡಿಸಿದರು.ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.ಪತ್ರಿಕಾಗೋಷ್ಟಿ ನಡೆಸಿ ನೀವು ಮಾತನಾಡುವಾಗ ಈ ಮಾತನ್ನು ನೀವು ಬಳಸಿದ್ದೀರಿ. ೨೦ ವರ್ಷದ ಹಿಂದೆ ನೀವೇ ದೊಡ್ಡವರು ಅಂತಾ ನನ್ನ ಬಳಿ ಬಂದಿರುವುದಾಗಿ ತಿಳಿಸಿದ್ದೀರಿ. ನಿಮ್ಮ ಮನೆಗೆ ಬಂದಿರುವ ಒಂದು ಸಾಕ್ಷಿಯನ್ನ ನೀಡಿದರೆ ರಾಜಕೀಯ ಜೀವನದಿಂದ ನಿವೃತ್ತಿ ಹೊಂದುವೆ ಎಂದು ಶಾಸಕ ಸಿ.ಎಸ್.ನಾಡಗೌಡರಿಗೆ ಸವಾಲು ಹಾಕಿದರು.ಮಾತನಾಡಬೇಕಾದರೆ ಬಹಳ ಎಚ್ಚರದಿಂದ ಮಾತಾಡಿ. ನಾನು ಹಿಂದೆ ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಜಿಲ್ಲೆಯ ಯಾವ ರಾಜಕೀಯ ನಾಯಕರ ಮನೆಗೂ ಹೋಗಿಲ್ಲ, ನನ್ನ ಸ್ವಂತ ಶಕ್ತಿಯಿಂದ ಬಂದಿದ್ದು. ನಾನು ಯಾವತ್ತು ನಿಮ್ಮ ಬಾಗಿಲಿಗೆ ಬಂದಿದ್ದೆ? ಸುಳ್ಳು ಹೇಳ್ತೀರಿ, ನಿಮ್ಮ ಮನೆ ಎಲ್ಲಿದೆ…

Read More

ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ನಮ್ಮ ತಾಲ್ಲೂಕಿನ ಗ್ರಾಮೀಣ ಭಾಗದ ಕ್ರೀಡಾಪಟುಗಳು ರಾಷ್ಟ್ರದ ನಾನಾ ರಾಜ್ಯಗಳ ಕೊಕ್ಕೊ ತಂಡಗಳನ್ನು ಸೋಲಿಸಿ ದ್ವಿತೀಯ ಸ್ಥಾನ ಪಡೆದಿದ್ದು ಹೆಮ್ಮೆಯ ವಿಷಯ, ಇದಕ್ಕೆ ಕಾರಣೀಭೂತರಾದ ಗ್ರಾಮದ ಜನತೆ, ತರಬೇತುದಾರರಿಗೆ, ಕ್ರೀಡಾಪಟುಗಳಿಗೆ ಧನ್ಯವಾದ ಎಂದು ನಿಡಗುಂದಿ ತಹಶೀಲ್ದಾರ್ ಎ.ಡಿ. ಅಮರಾವದಗಿ ಹೇಳಿದರು.ಬುಧವಾರ, ಸಮೀಪದ ಬೇನಾಳ ಆರ್.ಎಸ್. ಗ್ರಾಮದಲ್ಲಿ ರಾಷ್ಟ್ರ ಮಟ್ಟದ ಕೊಕ್ಕೊ ಕ್ರೀಡೆಯಲ್ಲಿ ರಜತ ಪದಕ ಪಡೆದ ಕರ್ನಾಟಕ ತಂಡದ ಎಲ್ಲಾ ೧೨ ಜನ ಕೊಕ್ಕೊ ಕ್ರೀಡಾಪಟುಗಳಿಗೆ ಹಾಗೂ ತರಬೇತುದಾರ ಎನ್.ಬಿ.ದಾಸರ ಅವರಿಗೆ ಸಮೀಪದ ಬೇನಾಳ ಆರ್.ಎಸ್. ಗ್ರಾಮದಲ್ಲಿ ಗ್ರಾಮ ಪಂಚಾಯ್ತಿ, ನಿಡಗುಂದಿ ಪಟ್ಟಣ ಪಂಚಾಯ್ತಿ ಹಾಗೂ ಶಿಕ್ಷಕರ ಸಂಘದ ವತಿಯಿಂದ ಜರುಗಿದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಮಾತನಾಡಿ, ಆಲಮಟ್ಟಿಯಲ್ಲಿ ಈ ವರ್ಷ ರಾಜ್ಯ ಮಟ್ಟದ ಕೊಕ್ಕೊ ಪಂದ್ಯಾವಳಿ ಸಂಘಟಿಸಿದ್ದೇವು, ಮುಂದಿನ ಕೆಲ ವರ್ಷಗಳಲ್ಲಿ ರಾಷ್ಟ್ರದ ಮಟ್ಟದ ಕೊಕ್ಕೊ ಮತ್ತು ಕಬಡ್ಡಿ ಪಂದ್ಯವನ್ನು ಸಂಘಟಿಸಲಾಗುವುದು, ರಾಷ್ಟ್ರ ಮಟ್ಟದಲ್ಲಿ…

Read More

ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಆಲಮಟ್ಟಿ ಎಡದಂಡೆ ಕಾಲುವೆಯಲ್ಲಿ ಮುಳುಗಿ ನಾಪತ್ತೆಯಾಗಿದ್ದ ಹಸೇನ್ ನಿಂಗರಾಜ ಭಜಂತ್ರಿ (೧೩ ತಿಂಗಳು) ಶವ ಬುಧವಾರ ಬೆಳಿಗ್ಗೆ ಘಟನೆ ನಡೆದ ಸ್ಥಳದಿಂದ ಎರಡು ಕಿ.ಮೀ ದೂರದಲ್ಲಿ ಪತ್ತೆಯಾಗಿದೆ.ಒಟ್ಟಾರೇ ಈ ಘಟನೆಯಲ್ಲಿ ನಾಲ್ವರು ಮಕ್ಕಳು ದುರಂತ ಅಂತ್ಯ ಕಂಡಂತಾಗಿದೆ. ಜ.೧೩ ಸೋಮವಾರ ಇಬ್ಬರ ಶವ, ಮಂಗಳವಾರ ಒಬ್ಬನ ಶವ ಪತ್ತೆಯಾಗಿತ್ತು.ಅಗ್ನಿಶಾಮಕ ದಳದ ಭೀಮಾಶಂಕರ ಹಾಗೂ ಪಿ.ಟಿ.ಜಾಲಗೇರಿ ನೇತೃತ್ವದಲ್ಲಿ ನಡೆದ ಶೋಧ ಕಾರ್ಯದಲ್ಲಿ ನಾಲ್ವರ ಶವವೂ ಪತ್ತೆಯಾದಂತಾಗಿದೆ.ನಿಡಗುಂದಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಮೂವರ ಹಾಗೂ ಬುಧವಾರ ಮತ್ತೊಬ್ಬ ಮಗುವಿನ ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹಗಳನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ನಿಡಗುಂದಿ ಪೊಲೀಸರು ತಿಳಿಸಿದ್ದಾರೆ.

Read More

– ದೇವೇಂದ್ರ ಹೆಳವರಹಿರಿಯ ಪತ್ರಕರ್ತರುವಿಜಯಪುರ ಉದಯರಶ್ಮಿ ದಿನಪತ್ರಿಕೆ ಹಿರಿಯ ಪತ್ರಕರ್ತ ಶಿವಾನಂದ ತಗಡೂರ ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾಗಿ ಪತ್ರಕರ್ತರ ಸಮಸ್ಯೆ ಹಾಗೂ ಬೇಡಿಕೆಗಳಿಗೆ ಸದಾ ಸ್ಪಂದಿಸುತ್ತ ಯಶಸ್ವಿಯಾಗಿ ಸಂಘದ ಕಾರ್ಯಚಟುವಟಿಕೆಗಳನ್ನು ನಡೆಸುವ ಮೂಲಕ ಸಂಘದ ಘನತೆ ಹೆಚ್ಚಿಸಿದ್ದಾರೆ ಎಂದರೆ ತಪ್ಪಾಗಲಾರದು.ಸಂಘದ ಏಳ್ಗೆ ಹಾಗೂ ಪತ್ರಕರ್ತರ ಶ್ರೇಯೋಭಿವೃದ್ಧಿಗೆ ನಿರಂತರ ಶ್ರಮವಹಿಸುತ್ತಿರುವ ತಗಡೂರ ಅವರು, ಸಂಘದ ಎಲ್ಲ ಸದಸ್ಯರೊಂದಿಗೆ ತುಂಬಾ ಪ್ರೀತಿ-ವಿಶ್ವಾಸದಿಂದ ಮಾತನಾಡುತ್ತ ಎಲ್ಲರ ಗೆದ್ದ ಮಾತೃ ಹೃದಯದ ವ್ಯಕ್ತಿ.ರಾಜ್ಯಮಟ್ಟದ ಒಂದು ಪತ್ರಿಕೆಯ ಹಿರಿಯ ವರದಿಗಾರರಾಗಿ ತಮ್ಮ ಕರ್ತವ್ಯ ನಿರ್ವಹಿಸುವ ಜೊತೆಗೆ ರಾಜ್ಯದುದ್ದಗಲಕ್ಕೂ ದಣಿವಿಲ್ಲದೇ ಸಂಚರಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವನ್ನು ಒಂದು ಬಲಿಷ್ಠ ಸಂಘಟನೆಯನ್ನಾಗಿ ಮಾಡುವ ಜೊತೆಗೆ ಗಡಿಯಾಚೆಯ ಕೇರಳದ ಕಾಸರಗೋಡು ಹಾಗೂ ಮಹಾರಾಷ್ಟ್ರದ ಮುಂಬಯಿಯಲ್ಲೂ ಕೆಯುಡಬ್ಲ್ಯೂಜೆ ಘಟಕಗಳನ್ನು ರಚನೆ ಮಾಡಿ ಅಲ್ಲಿ ಸಂಘ ಸಕ್ರಿಯವಾಗಿರುವಂತೆ ಮಾಡಿರುವುದು ತಗಡೂರ ಅವರ ಹೆಗ್ಗಳಿಕೆ.ಪಕ್ಷಾತೀತವಾಗಿ ಎಲ್ಲ ರಾಜಕೀಯ ನಾಯಕರೊಂದಿಗೆ ಒಳ್ಳೆಯ ಬಾಂಧವ್ಯ ಹೊಂದಿರುವ ತಗಡೂರ ಅವರು, ಸರಕಾರದ ಮಟ್ಟದಲ್ಲಿ ತಮ್ಮ ಪ್ರಭಾವ…

Read More

ರಚನೆ- ಗೀತಾ ಶರ್ಮಾ(“ನಮ್ಮ ಕಥಾ ಅರಮನೆ” ಬರಹಗಾರರು) ಉದಯರಶ್ಮಿ ದಿನಪತ್ರಿಕೆ ಎಲ್ಲಿನೋಡಿದರು ಪ್ಲಾಸ್ಟಿಕ್ ಬಳಕೆ ನಿರಂತರವಾಗಿದೆಯಾವರೀತಿಯೂ ಕರಗದ ಘನತ್ಯಾಜ್ಯ ಹೆಚ್ಚಾಗಿದೆಪ್ರಕೃತಿಮಡಿಲಿಗೆ ಇದರ ಹಾವಳಿ ತಡೆಯದಾಗಿದೆನೀರಿನ ಒಸರಿನಕೊರತೆ ನೀಗಿಸಲು ಕಷ್ಟವಾಗುತ್ತಿದೆ ವೈಜ್ಞಾನಿಕವಾಗಿ ಭೂಮಿಯ ಫಲವತ್ತತೆ ತಗ್ಗುತ್ತದೆನಿಸರ್ಗದ ಉಷ್ಣಾಂಶಹೆಚ್ಚಿ ಪರಿಣಾಮ ಬೀರುತ್ತಿದೆ ಬಣ್ಣದರೂಪದ ವಸ್ತುಗಳಿಂದ ಆರೋಗ್ಯಕೆಡುತ್ತಿದೆಹಲವಾರು ರೋಗರುಜಿನಕ್ಕೆ ಆಮಂತ್ರಣ ನೀಡಿದೆ ಪರಿಸರಮಾಲಿನ್ಯ ನಿಯಂತ್ರಣ ಜನರ ಕೈಯಲ್ಲಿದೆಪ್ರಾಣಿ ಪಕ್ಷಿ ಪ್ರಾಣಸಂರಕ್ಷಣೆ ಮಾಡಿಕೊಳ್ಳಬೇಕಿದೆವಿಕೋಪವನು ತಡೆಯಲು ಎಲ್ಲರ ಸಹಕಾರ ಬೇಕಿದೆಮುಂದಿನ ಅನಾಹುತವ ತಡೆಯಲು ವಿನಂತಿಯಿದೆ

Read More

ಲೇಖನ- ನಂದಿನಿ ಧರ್ಮರಾಜ್(“ನಮ್ಮ ಕಥಾ ಅರಮನೆ” ಬರಹಗಾರರು) ಉದಯರಶ್ಮಿ ದಿನಪತ್ರಿಕೆ ತಂಪಾದ ಗಾಳಿ, ಜೀಕುತ್ತಿದ್ದ ಸೀರೆಯ ಜೋಳಿಗೆಯಲ್ಲಿ ತನ್ನ ಕಂದನನ್ನು ಮಲಗಿಸಿ, ಕೈ ಬಳೆಯ ಸದ್ದು ಕೂಸಿನ ನಿದಿರೆಗೆ ಭಂಗತಾರದಂತೆ ಮೆಲ್ಲನೆ ಸಾವರಿಸಿ , ದೂರ ಸರಿದು ವಾರದ ಬಾಣಂತಿಯೆಂದೂ ಲೆಕ್ಕಿಸದೆ,ತನ್ನ ಕುಟುಂಬದ ನಿರ್ವಹಣೆಗಾಗಿ ಕಬ್ಬು ಕಡಿಯಲು ನಿಂತ, ಉತ್ತರ ಕರ್ನಾಟಕದಿಂದ ಕೆಲಸಕ್ಕಾಗಿ ನಮ್ಮೂರಿನತ್ತ ಬಂದು ತನ್ನ ವಲಸೆಯ ಗುರಿ ಮತ್ತು ಉದ್ದೇಶವನ್ನು ಪ್ರತಿ ನಿತ್ಯ ಆರಾಧಿಸುವ ,ಹನುಮವ್ವ ಅವಳ ಕುಟುಂಬವೆಂಬ ಜಗತ್ತಿಗೆ ಊರುಗೋಲು ಮತ್ತು ಮಾದರಿಯಾಗಿದ್ದಾಳೆ.ಅಲ್ಲಾ ಹನುಮವ್ವ ಬಾಣಂತಿ ನಂಜಾದರೆ ಏನು ಮಾಡ್ತೀಯಾ ..!ಸ್ವಲ್ಪ ದಿನ ಕೆಲಸ ಮಾಡದೆ ಸುಮ್ಮನಿರು.ನಿಮ್ಮೂರಿಗೋಗಿ ಬಾಣಂತನ ಮುಗಿಸಿಕೊಂಡು ಬಾ.ಆಮೇಲೆ ಇದ್ದಿದ್ದೇ ..!ಎಂದಾಗಇಲ್ಲಾ ಕಣ್ರಕ್ಕಾ ..ನನ್ನ ಗಂಡ ಅದಾನಲ್ಲಾ, ಇಲ್ಲಿದ್ರೆ ಸುಮ್ಮನೆ ಕೆಲಸ ಮಾಡ್ತಾನಾ..ನಮ್ಮೂರಿಗೆ ಒಂಟ್ನಂದ್ರಾ.. ಅದೇ ಕುಡಿಯಕತ್ತಾನ..ನಾನಿದ್ರಾ ಹಂಗೆ ಮಾಡೋವಲ್ಲಾ..!ಇಬ್ರೂ ಕೂಡಿ ಕೆಲಸ ಮಾಡ್ತೀವಿ.. ಊರಲ್ಲಿ ಕಟ್ಟೀರೋ ಮನೆಗೆ ಬ್ಯಾಂಕನಾಗ ಸಾಲ ಮಾಡಿವ್ರೀ..ಮತ್ತೆ ಒಬ್ಬಾತ ದುಡಿದ್ರೇ ಹೆಂಗ ಆದಾದ್ರೀ..ಇಬ್ರೂ ದುಡಿದು ಒಟ್ಟಾಗಿ ಊರಿಗೆ ಹೋಕ್ಕಿವ್ರಿ…ಹನುಮವ್ವ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಮಾಜಿ ಪ್ರಧಾನಿ ಡಾ.ಮನಮೋಹನ ಸಿಂಗ್ ನಿಧನದಿಂದ ಮೊಟಕುಗೊಂಡಿದ್ದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಸಮಾರಂಭ ಗಾಂಧಿ ಭಾರತಕ್ಕೆ ಮರು ಚಾಲನೆ ನೀಡಲು ಮುಂದಾಗಿರುವ ಕಾಂಗ್ರೆಸ್ ಜ.೨೧ರಂದು ಅದ್ದೂರಿಯಾಗಿ ಈ ಸಮಾವೇಶ ನಡೆಸಲು ತೀರ್ಮಾನಿಸಿದ್ದು ಸಮರೋಪಾದಿಯಲ್ಲಿ ಸಿದ್ದತೆ ನಡೆಸುತ್ತಿದೆ ಎಂದು ಕಲಬುರಗಿ ಗ್ರಾಮೀಣ ಶಾಸಕ ಅಲ್ಲಮಪ್ರಭು ಪಾಟೀಲ ಹೇಳಿದರು.ಸಿಂದಗಿ ಪಟ್ಟಣದ ಎಪಿಎಂಸಿ ಯಾರ್ಡ್ನಲ್ಲಿರುವ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು.ಜ.೨೧ರಂದು ಬೆಳಗಾವಿಯಲ್ಲಿ ನಡೆಯಲಿರುವ ಗಾಂಧಿ ಭಾರತ ಸಮಾವೇಶದಲ್ಲಿ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರೂ ಭಾಗವಹಿಸಬೇಕು. ಬೆಳಗಾವಿಯಲ್ಲಿ ೧೯೨೪ರ ಡಿ.೨೬,೨೭ರಂದು ಮಹಾತ್ಮ ಗಾಂಧಿ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್‌ನ ೩೯ನೇ ಅಖಿಲ ಭಾರತ ಅಧಿವೇಶನ ನಡೆದಿತ್ತು. ಗಾಂಧೀಜಿ ಅಧ್ಯಕ್ಷತೆ ವಹಿಸಿದ್ದ ಏಕೈಕ ಅಧಿವೇಶನವೂ ಅದಾಗಿತ್ತು. ಅದಕ್ಕೀಗ ೧೦೦ ವರ್ಷಗಳಾಗಿವೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಅಖಿಲ ಭಾರತ ಮಟ್ಟದಲ್ಲಿ ಗಾಂಧಿ ಭಾರತ ಸಮಾವೇಶ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಅಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದು, ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಬೇಕು ಎಂದು…

Read More

ವರ್ಚಸ್ಸು ಇರುವ ಪೂರ್ಣಪ್ರಮಾಣದ ಹೊಸ ಅಧ್ಯಕ್ಷರು ಬೇಕು | ಸಚಿವ ಸತೀಶ್ ಜಾರಕಿಹೊಳಿ ಆಗ್ರಹ ಬೆಂಗಳೂರು: ಆದಷ್ಟು ಶೀಘ್ರವೇ ಕೆಪಿಸಿಸಿಗೆ ಹೊಸ ಅಧ್ಯಕ್ಷರ ನೇಮಕ ಮಾಡಿ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿ ಮಾಡಿ ಬೇಡಿಕೆ ಇಟ್ಟಿದ್ದೇನೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾತ್ರಿ ಸುರ್ಜೆವಾಲಾರನ್ನು ಭೇಟಿ ಮಾಡಿದ್ದೇನೆ. ಪಕ್ಷದ ಆಗು ಹೋಗುಗಳು ಹಾಗೂ ಸಂಘಟನೆ ಬಗ್ಗೆ ಚರ್ಚೆ ಮಾಡಿದೆ. ಆದಷ್ಟು ಬೇಗ ಹೊಸ ಅಧ್ಯಕ್ಷರ ನೇಮಕ ಆಗಬೇಕು ಎಂದು ಹೇಳಿದ್ದೇನೆ ಎಂದರು.ಸದ್ಯ ಡಿಕೆ ಶಿವಕಮಾರ್ ಅವರು ಅಧ್ಯಕ್ಷರಾಗಿದ್ದು, ಇವರನ್ನೇ ಮುಂದುವರಿಸುವುದಾದರೆ ಅದನ್ನು ಸ್ಪಷ್ಟಪಡಿಸಿ ಅಂತ ಹೇಳಿದ್ದೇನೆ. ನಮಗೆ ಪೂರ್ಣಪ್ರಮಾಣದ ಅಧ್ಯಕ್ಷರು ಬೇಕು. ಮತ ಸೆಳೆಯುವವರನ್ನು ಹಾಗೂ ವರ್ಚಸ್ಸು ಇರುವವರನ್ನು ಅಧ್ಯಕ್ಷರನ್ನಾಗಿ ಮಾಡಿ ಅಂತ ಹೇಳಿದ್ದೇನೆ ಎಂದರು.ನನ್ನನ್ನು ಅಧ್ಯಕ್ಷ ಮಾಡಿ ಅಂತ ಕೇಳಿಲ್ಲ. ಆದರೆ ಪೂರ್ಣ ಪ್ರಮಾಣದ ಅಧ್ಯಕ್ಷರನ್ನು ಮಾಡಿ ಎಂದು ಹೇಳಿದ್ದೇನೆ. ಇವರು ಇರಬೇಕು ಬೇಡ ಎಂಬ ಬಗ್ಗೆ ಗೊಂದಲಗಳಿವೆ.…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಸರಕಾರಕ್ಕೆ ಮಾಡಲಾಗದ ಸಮಾಜಮುಖಿ ಕಾರ್ಯಗಳನ್ನು ನಾಡಿನ ಮಠ ಮಾನ್ಯಗಳು ಮಾಡುತ್ತಿವೆ. ಶ್ರೀ ತ್ರೀಧರೇಶ್ವರ ಮಹಾಶಿವಯೋಗಿಗಳು ಲೀಗೈಕ್ಯರಾಗಿ ೩೦ ವರ್ಷ ಕಳೆದರೂ ಅವರು ಇಂದು ಭಕ್ತರ ಮನೆ ಮನದಲ್ಲಿ ಬೆಳಕಾಗಿದ್ದಾರೆ. ಎಲ್ಲರನ್ನು ಪ್ರೀತಿಸಿ ಎಲ್ಲರನ್ನು ಜೊತೆಯಾಗಿ ಕರೆದುಕೊಂಡು ಹೋಗುವ ಮಠ ಗೋಳಸಾರದ ಮಠವಾಗಿದೆ. ಮೌನ ಕ್ರಾಂತಿಯ ಮೂಲಕ ಧಾರ್ಮಿಕ ಇತಿಹಾಸ ಮೂಡಿಸುತ್ತಿರುವ ಅಭಿನವ ಪುಂಡಲಿಂಗ ಮಹಾಶಿವಯೋಗಿಗಳ ಕಾರ್ಯ ಶ್ಲಾಘನೀಯ ಎಂದು ಕಲಬುರಗಿಯ ದೂರದರ್ಶನ ಮತ್ತು ಆಕಾಶವಾಣಿ ಕಲಾವಿದ ಮಲ್ಲಿಕಾರ್ಜುನ ಶಾಸ್ತ್ರಿಗಳು ಹೇಳಿದರು.ಮಂಗಳವಾರ ಸಂಜೆ ತಾಲೂಕಿನ ಗೋಳಸಾರದ ಶ್ರೀ ಪುಂಡಲಿಂಗ ಮಹಾಶಿವಯೋಗಿಗಳ ಮಠದಲ್ಲಿ ಹಮ್ಮಿಕೊಂಡ ಸದ್ಗುರು ತ್ರೀಧರೇಶ್ವರ ಮಹಾಶಿವಯೋಗಿಗಳ ೩೧ ನೇ ಪುಣ್ಯಾರಾಧನೆ ಮಹೋತ್ಸವದ ಎರಡನೆಯ ದೀಪೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಇಂದಿನ ಸಮಾಜದಲ್ಲಿಬಡವರಿಗೆ ಆಶ್ರಯ ನೀಡಿ ಬಡಮಕ್ಕಳಿಗೆ ಶಿಕ್ಷಣ ನೀಡುತ್ತ ಅನ್ನ ದಾಶೋಹ ನೀಡುತ್ತಿರುವ ಗೋಳಸಾರ ಮಠದ ಕಾರ್ಯ ಇತರರಿಗೆ ಮಾದರಿ ಎಂದರು.ನಿವೃತ್ತ ಪ್ರಾಚಾರ್ಯ ಎ.ಪಿ.ಕಾಗವಾಡಕರ ಮಾತನಾಡಿ, ದೇವತಾ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕರ ಸಹಕಾರದಿಂದ…

Read More

ಆಲಮೇಲದಲ್ಲಿ ಹಿಂದೂ ಜನಜಾಗೃತಿ ಸಮಿತಿಯಿಂದ ಪ್ರತಿಭಟನೆ ಉದಯರಶ್ಮಿ ದಿನಪತ್ರಿಕೆ ಆಲಮೇಲ: ಪಟ್ಟಣದಲ್ಲಿ ಹಿಂದುಗಳ ಪವಿತ್ರ ದೇವತೆ ಎಂದು ಪೂಜೆ ಮಾಡಿತ್ತಿರುವ ಗೋ ಮಾತೆಯ ಕೆಚ್ಚಲವನ್ನು ಕತ್ತರಿಸುವ ಜಿಹಾದಿಗಳ ಅಟ್ಟಹಾಸವನ್ನು ಬಲವಾಗಿ ಖಂಡಿಸುತ್ತೇವೆ ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ ಶ್ರೀಮಂತ ದುದ್ದಗಿ ಹೇಳಿದರುಆಲಮೇಲದ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಕಾಮಧೇನು ಕೆಚ್ಚಲು ಕೊಯ್ದ ನೀಚನಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಬೃಹತ್ ಪ್ರತಿಭಟನೆ ಮಾಡಲಾಯಿತು.ವೀರಭದ್ರ ಚೌಕದಿಂದ ಬಸವೇಶ್ವರ ಸರ್ಕಲ್ ದವರಗೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು. ಹಿಂದುಗಳ ಸಂಕ್ರಾಂತಿಯ ಹಬ್ಬದ ಸಮಯದಲ್ಲಿ ಆರಾಧನೆ ಮಾಡುತ್ತಿರುವ ಗೋ ಕೆಚ್ಚಲನ್ನು ಕತ್ತರಿಸಿದ ವ್ಯಕ್ತಿಗಳಿಗೆ ಇಲ್ಲಿಯವರೆಗೆ ಬಂಧಿಸಿಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲದ ಸರ್ಕಾರ ಜಿಯಾದಿಗಳಿಗೆ ರಕ್ಷಣೆ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಾಚಿಕೆ ಬರಬೇಕೆಂದು ಹೇಳಿದರು‌ಸ್ವಾಮಿ ವಿವೇಕಾನಂದ ಯುವಕ ಸಂಘದ ಅಧ್ಯಕ್ಷ ಹಣಮಂತ ಸಿಂಗ್ ರಜಪೂತ ಮಾತನಾಡಿ, ಚಾಮರಾಜ ಪೇಟೆಯಲ್ಲಿ ನಡೆದ ಘಟನೆ ನಮಗೆ ನೋವು ಉಂಟುಮಾಡಿದೆ. ಇಂತಹ ಜಿಹಾದಿಗಳಿಗೆ ಜಿವಾವಧಿ ಶಿಕ್ಷೆ…

Read More