Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ತಿಕೋಟಾ: ಇತ್ತೀಚೆಗೆ ವೀರಮರಣ ಹೊಂದಿದ ಪಟ್ಟಣದ ಯೋಧ ರಾಜು ಕರ್ಜಗಿ ಅವರ ಪುತ್ಥಳಿ ನಿರ್ಮಾಣಕ್ಕೆ ಗಣರಾಜ್ಯೋತ್ಸವ ದಿನದಂದು ಗಣ್ಯರು ಅಡಿಗಲ್ಲು ಸಮಾರಂಭ ನೆರವೇರಿಸಿದರು.ಧ್ವಜಾರೋಹಣ ನೆರವೇರಿಸಿದ ಮಲ್ಲಿಕಾರ್ಜುನ ಹಂಜಗಿಯವರು ಪುತ್ಥಳಿ ನಿರ್ಮಾಣಕ್ಕೆ ₹ 25 ಸಾವಿರ ದೇಣಿಗೆ ನೀಡಿದರು. ಗಂಗಪ್ಪ ಕರಜಗಿ, ರುದ್ರಯ್ಯ ಸಾಲಿಮಠ, ಪ್ರಭಾವತಿ ನಾಟಿಕಾರ, ಲಕ್ಕಪ್ಪ ಹಂಜಗಿ, ಡಾ.ವಾಗ್ಮೋರೆ, ಮಾಯಪ್ಪ ಪಡಸಗಿ, ಮುತ್ತು ಹಂಜಗಿ, ಶಾಲಾ ಮಕ್ಕಳು, ಗ್ರಾಮಸ್ಥರು ಇದ್ದರು.
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಭಾರತ ಸಂವಿಧಾನವು ಸರ್ವರಿಗೂ ಸಮಾನತೆಯನ್ನು ಒದಗಿಸಿದೆ. ಮತ್ತು ಮೂಲಭೂತ ಕರ್ತವ್ಯಗಳನ್ನು ನೀಡಿ ನಮ್ಮೆಲ್ಲರನ್ನು ರಕ್ಷಿಸುವ ಕಾನೂನುಗಳನ್ನು ನೀಡುವ ಜೊತೆಗೆ ನಮ್ಮ ದೇಶದ ಪ್ರಜಾಪ್ರಭುತ್ವ ಬಲಪಡಿಸಿದೆ ಎಂದು ಸಂಸ್ಥೆಯ ನಿರ್ದೇಶಕ ಪಿ.ಡಿ.ಕುಲಕರ್ಣಿ ಹೇಳಿದರು.ಪಟ್ಟಣದ ನಾಗೂರ ಬಡಾವಣೆಯ ಸಮರ್ಥ ವಿದ್ಯಾವಿಕಾಸ ಸಂಸ್ಥೆಯ ಪ್ರೇರಣಾ ಶಿಶುನಿಕೇತನ, ವಿದ್ಯಾನಿಕೇತನ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ ಮತ್ತು ಪ್ರೇರಣಾ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಸಹಯೋಗದಲ್ಲಿ ಹಮ್ಮಿಕೊಂಡ ೭೬ನೇ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು.ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ನೃತ್ಯ, ಭಾಷಣ, ಛದ್ಮವೇಷ, ಆಕರ್ಷಕ ಕವಾಯತು ಜರುಗಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಆರ್.ಡಿ.ಕುಲಕರ್ಣಿ, ಮುಖ್ಯಗುರುಮಾತೆ ಎಮ್.ಪಿ.ಬುಕ್ಕಾ, ಸಾವಿತ್ರಿ ಅಸ್ಕಿ, ಸತೀಶ ಕುಲಕರ್ಣಿ, ಎಸ್.ಡಿ.ನಾಯಕ, ಎಸ್.ವಿ.ಕಡಣಿ, ಎಮ್.ಎಮ್.ಜುಮನಾಳ ಸೇರಿದಂತೆ ಶಾಲೆಯ ಬೋಧಕ-ಬೋಧಕೇತರ ಸಿಬ್ಬಂಧಿಗಳು ಇದ್ದರು.ಶ್ರೀ ಪದ್ಮರಾಜ ಮಹಿಳಾ ಕಾಲೇಜು:ಪಟ್ಟಣದ ಶ್ರೀ ಪದ್ಮರಾಜ ಮಹಿಳಾ ಕಾಲೇಜಿನಲ್ಲಿ ೭೬ನೇ ಗಣರಾಜ್ಯೋತ್ಸವ ಆಚರಣೆ ಮಾಡಲಾಯಿತು.ಇದೇ ವೇಳೆ ಪದವಿ ಪ್ರಾಚಾರ್ಯ ಎಸ್.ಎಂ ಪೂಜಾರಿ, ಪಪೂ ಕಾಲೇಜಿನ ಪ್ರಾಚಾರ್ಯ ಎಂ.ಎಸ್.ಹೈಯ್ಯಾಳಕರ, ಉಪನ್ಯಾಸಕರಾದ ಜಿ.ಎ.ನಂದಿಮಠ,…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಸರಕಾರದ ಅನೇಕ ಯೋಜನೆಗಳು ಕಂದಾಯ ಇಲಾಖೆ ಜನ ಸಾಮಾನ್ಯರ ಮನೆ ಬಾಗಿಲಿಗೆ ಮುಟ್ಟಿಸುವ ಕಾರ್ಯವನ್ನು ಪ್ರಾಮಾಣಿಕವಾಗಿ ನೆರವೇರಿಸುತ್ತಿದ್ದೇವೆ ಎಂದು ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ಹೇಳಿದರು.ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ತಾಲೂಕಾಡಳಿತ ಹಮ್ಮಿಕೊಂಡ ೭೬ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೇರವೇರಿಸಿ ಮಾತನಾಡಿ, ಭಾರತ ದೇಶ ಸಂವಿಧಾನವನ್ನು ಅಧೀಕೃತವಾಗಿ ಅಂಗೀಕರಿಸಿದ ದಿನವನ್ನು ನಾವೆಲ್ಲ ಅತ್ಯಂತ ಸಂಭ್ರಮದಿಂದ ಗಣರಾಜ್ಯೋತ್ಸವ ದಿನವನ್ನು ಆಚರಣೆ ಮಾಡುತ್ತಿದ್ದೇವೆ. ಸರಕಾರ ರೈತರಿಗಾಗಿ ನೀಡುವ ಶೇ.೫೦ರಷ್ಟು ಸಬ್ಸಿಡಿಯಲ್ಲಿ ೫ಜನ ರೈತರಿಗೆ ಕಬ್ಬು ಕಟಾವು ಮಾಡುವ ಯಂತ್ರಗಳನ್ನು ರೂ.೧.೪೦ಕೋಟಿ ಅನುದಾನದಲ್ಲಿ ನೀಡಲಾಗಿದೆ. ಅಲ್ಲದೇ ವಿವಿಧ ಇಲಾಖೆಗಳಿಂದ ಸಾರ್ವಜನಿಕರಿಗೆ ಸೌಲಭ್ಯಗಳನ್ನು ನೀಡಲಾಗುತ್ತಿದೆ ಇದರ ಸದುಪಯೋಗವನ್ನು ತಾಲೂಕಿನ ಜನತೆ ಪಡೆದುಕೊಳ್ಳಬೇಕು ಎಂದರು.ಈ ವೇಳೆ ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ, ಉಪಾದ್ಯಕ್ಷ ರಾಜಣ್ಣಿ ನಾರಾಯಣಕರ ಮಾತನಾಡಿ, ಪಟ್ಟಣದ ಪುರಸಭೆ ಅತೀಕ್ರಮಣ ಜಾಗೆಯನ್ನು ತೆರೆವುಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿದೆ ಎಂದರು.ಈ ವೇಳೆ ಕವಾಯತನಲ್ಲಿ ನಗರದ ವಿವಿಧ ಶಾಲಾ ಮಕ್ಕಳಿಂದ ಆಕರ್ಷಕ ಕವಾಯತ್ ಜರುಗಿತು. ವಿವಿಧ ಸಾಧಕರಿಗೆ ಗೌರವಿಸಿ ಸನ್ಮಾನಿಸಲಾಯಿತು.ವೇದಿಕೆ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣದಲ್ಲಿ ಗಾಂಧಿ ವೃತ್ತ ಅತ್ಯಂತ ಚಿಕ್ಕದಾಗಿತ್ತು. ಸಿಂದಗಿ ಶಾಸಕ ಅಶೋಕ ಮನಗೂಳಿ ಅವರು ಮನಗಂಡು ಅದನ್ನು ಅವರ ವೈಯುಕ್ತಿಕ ಹಣದಿಂದ ಅತ್ಯಂತ ಸುಂದರವಾದ ವೃತ್ತ ನಿರ್ಮಾಣ ಮಾಡಲು ಹೊರಟಿದ್ದು ಸಂತಸ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದರು.ಸಿಂದಗಿ ಪಟ್ಟಣದ ಆಲಮೇಲ ರಸ್ತೆಯಲ್ಲಿ ನೂತನವಾಗಿ ಗಾಂಧಿ ವೃತ್ತ ನಿರ್ಮಾಣ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಪಂಚ ಗ್ಯಾರೆಂಟಿಗಳಿಂದ ರಾಜ್ಯದ ಕೋಟ್ಯಾಂತರ ಜನರಿಗೆ ಅನುಕೂಲವಾಗಿದೆ. ಇವುಗಳಿಂದ ರಾಜ್ಯದ ಅಭಿವೃದ್ದಿಯಲ್ಲಿ ಯಾವುದೇ ರೀತಿಯ ಕುಂಟಿತವಾಗಿಲ್ಲ. ರಂಬಾಪುರಿ ಶ್ರೀಗಳು ರಾಜ್ಯ ಸರ್ಕಾರ ಪಂಚ ಗ್ಯಾರೆಂಟಿಗಳನ್ನು ಸರ್ಕಾರ ವಿಮರ್ಶೆ ಮಾಡಬೇಕೆಂದ ಮಾತಿಗೆ ಪರ್ತಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿದ ಅವರು ಸಿಎಂ ಸಿದ್ದರಾಮಯ್ಯ ಅವರು ೧೬ ಬಾರಿ ಬಜೆಟನ್ನು ಮಂಡಿಸಿದ್ದಾರೆ. ಅವರು ಹಣಕಾಸಿನ ವ್ಯವಸ್ಥೆಯನ್ನು ಸಮರ್ಥವಾಗಿ ನಿಭಾಯಿಸುತ್ತಾರೆ ಶ್ರೀಗಳ ಮಾತನ್ನು ನಾವು ಸ್ವಾಗತಿಸುತ್ತೇವೆ. ವಿಜಯಪುರ ನಗರದಲ್ಲಿ ದೊಡ್ಡದಾದ ಗಾಂಧಿ ವೃತ ನಿರ್ಮಾಣ ಮಾಡುವಲ್ಲಿ ಪಣ ತೊಟ್ಟಿದ್ದೇವು ಆದರೆ ಮೇಲಸೇತುವೆ ವಿಚಾರ ಮಧ್ಯ ಬಂದಾಗ ವೃತ್ತದ…
ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಆಲಮಟ್ಟಿ ಜಲಾಶಯಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ ರೈತರ ಜೀವನಾಡಿಯಾಗಿದೆ ಎಂದು ಕೆಬಿಜೆಎನ್ ಎಲ್ ಅಣೆಕಟ್ಟು ವಲಯದ ಮುಖ್ಯ ಎಂಜಿನಿಯರ್ ಡಿ ಬಸವರಾಜ ಹೇಳಿದರು.ಆಲಮಟ್ಟಿಯ ಎಂಪಿಎಸ್ ಶಾಲೆಯ ಆವರಣದಲ್ಲಿ ಕೆಬಿಜೆಎನ್ ಎಲ್ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಆಶ್ರಯದಲ್ಲಿ ಜರುಗಿದ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ಆಲಮಟ್ಟಿಯ ವಿವಿಧ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ಗಳ ಸೌಲಭ್ಯ ಹಾಗೂ ಆಟದ ಮೈದಾನದ ಆಧುನೀಕರಣ ಕಾಮಗಾರಿ ಶೀಘ್ರವೇ ಆರಂಭಿಸಲಾಗವುದ ಎಂದರು.ನೌಕರರ ಸಂಘದ ಅಧ್ಯಕ್ಷ ಸದಾಶಿವ ದಳವಾಯಿ ಅಧ್ಯಕ್ಷತೆ ವಹಿಸಿದ್ದರು.ಕೆಬಿಜೆಎಟಿಂಲ್ ಹಿರಿಯ ಅಧಿಕಾರಿಗಳಾದ ವಿ.ಆರ್. ಹಿರೇಗೌಡರ, ಐಎಲ್. ಕಳಸಾ, ತಾರಾಸಿಂಗ್ ದೊಡಮನಿ, ರವಿ ಚಂದ್ರಗಿರಿಯವರ, ಶರಣಪ್ಪ ಚಲವಾದಿ, ಜಯಣ್ಣ, ಆರ್ ಎಫ್ ಓ ಮಹೇಶ ಪಾಟೀಲ, ಎಫ್.ಎಸ್. ಇಂಡಿಕರ, ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ, ಜ್ಞಾನೇಶ್ವರ ತಾವಡೆ, ಪಿ.ಎ. ಹೆಮಗಿರಿಮಠ, ಜಿ.ಎಂ. ಕೊಟ್ಯಾಳ, ಎಸ್.ಐ.ಗಿಡ್ಡಪ್ಪಗೋಳ, ಬಿ.ಎಸ್. ಯರವಿನತೆಲಿಮಠ, ಜಿ.ಸಿ.ದ್ಯಾವಣ್ಣವರ, ನೌಕರರ ಸಂಘದ ಪ್ರಧಾನ…
ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಸಂವಿಧಾನ ನಮಗೆ ಪ್ರಶ್ನಿಸುವ ಹಕ್ಕನ್ನು, ಸಮಾನತೆಯನ್ನು ನೀಡಿದೆ, ಅದರ ಆಶಯದಂತೆ ನಮ್ಮೆಲ್ಲರ ಜೀವನ ಸಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಹೇಳಿದರು.ಆಲಮಟ್ಟಿಯ ಎಂಪಿಎಸ್ ಶಾಲೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಹಾಗೂ ಸಂವಿಧಾನ ಶಿಲ್ಪಿ ಡಾ ಅಂಬೇಡ್ಕರ ಅವರನ್ನು ಅವರ ಕಣ್ಮರೆಯಾಗಿ ೭೦ ವರ್ಷಕ್ಕೂ ಹೆಚ್ಚು ದಿನಗಳಾದರೂ ಈಗಲೂ ಅವರನ್ನು ಇಡೀ ದೇಶ ಸ್ಮರಿಸುತ್ತದೆ , ಅದರಂತೆ ನಾವು ಸಮಾಜದಲ್ಲಿ ಬದುಕಬೇಕು ಎಂದರು.ಮುಖ್ಯ ಶಿಕ್ಷಕ ಬಿ.ಎಸ್.ಯರವಿನತೆಲಿಮಠ ಅಧ್ಯಕ್ಷತೆ ವಹಿಸಿದ್ದರು.ಎಸ್ ಡಿಎಂಸಿ ಅಧ್ಯಕ್ಷ ನಿಸ್ಸಾರ್ ಪಿಂಜಾರ್, ಸುರೇಶ ಹುರಕಡ್ಲಿ, ಸಾವಿತ್ರಿ ಅಂಗಡಿ ಮತ್ತಿತರರು ಇದ್ದರು.ಮಕ್ಕಳು ಸಾಂಸ್ಕೃತಿಕ ನೃತ್ಯಗಳನ್ನು ಪ್ರದರ್ಶಿಸಿದರು
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಪಟ್ಟಣದ ಸಂಘ ಸಂಸ್ಥೆಗಳು ಸೇರಿದಂತೆ ವಿವಿಧೆಡೆ ಧ್ವಜಾರೋಹಣ ನೆರವೇರಿಸಿ ೭೬ನೇ ಗಣರಾಜ್ಯೋತ್ಸವ ಆಚರಿಸಲಾಯಿತು.ಸಮೃದ್ಧಿ ಸಹಕಾರ ಸಂಘ :ಸ್ಥಳೀಯ ಸಮೃದ್ಧಿ ಸಹಕಾರ ಸಂಘದಲ್ಲಿ ಅಧ್ಯಕ್ಷೆ ಸಂಗೀತಾ ನಾಯಿಕ ಧ್ವಜಾರೋಹಣ ನೆರವೇರಿಸಿದರು.ಉಪಾಧ್ಯಕ್ಷ ರಿಯಾಜ್ ಯಲಗಾರ, ಮಾರ್ಗದರ್ಶಕ ಡಾ.ಆರ್.ಆರ್.ನಾಯಿಕ್, ಕಾರ್ಯನಿರ್ವಾಹಕ ಗುರುಬಸಯ್ಯ ಹಿರೇಪಟ್ಟ, ನಿರ್ದೇಶಕರುಗಳಾದ ಪ್ರಭುದೇವ ಹಿರೇಮಠ, ವೆಂಕಟೇಶ ಕುಲಕರ್ಣಿ, ಬಿ.ಎನ್.ಬಬಲೇಶ್ವರ, ಕೆ.ಎಸ್.ಕೋರಿ, ಗುರು ಕರಭಂಟನಾಳ, ಎ.ಕೆ.ಹಿರೇಮಠ, ಮಂಜುನಾಥ ಒಂಟೆತ್ತಿನ ಸಿಬ್ಬಂದಿ ಲತಾ ತಡಪಟ್ಟಿ, ಬಸವರಾಜ ಸಜ್ಜನ, ಅಕ್ಷಯ ರಾಠೋಡ, ಬಸವರಾಜ ಹಿರೇಮಠ, ಶರಣು ಹಿರೇಮಠ ಇದ್ದರು.ಇಂದುಮತಿ ಸಾವಳಗಿ ಶಾಲೆ :ಸಂಸ್ಥೆಯ ಅಧ್ಯಕ್ಷ ಶಾಂತಪ್ಪ ಸಾವಳಗಿ ಧ್ವಜಾರೋಹಣ ನೆರವೇರಿಸಿದರು.ಸಾಹೇಬಗೌಡ ಬಿರಾದಾರ(ಡೋಣಿ ಬೂದಿಹಾಳ), ಕಾರ್ಯದರ್ಶಿ ಸಂತೋಷ ಸಾವಳಗಿ, ಶಂಕರಗೌಡ ಪಾಟೀಲ ಸೇರಿದಂತೆ ಸಿಬ್ಬಂದಿ ಹಾಗೂ ಮಕ್ಕಳು ಇದ್ದರು.ಮೀನುಗಾರಿಕೆ ಸಹಕಾರ ಸಂಘ:ಸಂಘದ ತಾಲ್ಲೂಕು ಅಧ್ಯಕ್ಷ ಶ್ರೀಕಾಂತ ಬಜಂತ್ರಿ ಧ್ವಜಾರೋಹಣ ನೆರವೇರಿಸಿದರು.ಉಪಾಧ್ಯಕ್ಷ ಮಹಿಬೂಬ್ ಚೌಧರಿ ಪಂಚಾಕ್ಷರಿ ಮಿಂಚನಾಳ ಸಂಪತ್ ಜಮಾದಾರ, ಬಸವರಾಜ ಬಜಂತ್ರಿ, ಬಾಬು ರಾಠೋಡ, ಭೀಮಶೀ ಸೂರ್ಯವಂಶಿ ಹಾಗೂ ಸದಸ್ಯರು ಇದ್ದರು.ಎಂಡಿಜಿ ಗ್ಯಾಸ್ ವಿತರಣಾ…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಭಾರತದ ಸಂವಿಧಾನ ಶ್ರೇಷ್ಠವಾಗಿದೆ. ಇದು ಎಲ್ಲ ಜಾತಿ, ಮತ, ಪಂಥಗಳ ಧರ್ಮಗ್ರಂಥವೇನಿಸಿದೆ ಎಂದು ಶಾಸಕ ರಾಜುಗೌಡ ಪಾಟೀಲ(ಕುದರಿ ಸಾಲವಾಡಗಿ) ಹೇಳಿದರು.ಪಟ್ಟಣದ ಶಾಸಕರ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಭಾನುವಾರ ಜರುಗಿದ ೭೬ನೇ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಶ್ವದಲ್ಲಿಯೇ ವಿಶೇಷವಾದ ನಮ್ಮ ಸಂವಿಧಾನದ ಮಹತ್ವ, ಧ್ಯೆಯೋದ್ಧೇಶಗಳನ್ನು ನಾವುಗಳೆಲ್ಲಾ ಅರಿಯಬೇಕಾಗಿದೆ ಎಂದರು.ತಹಶೀಲ್ದಾರ್ ಪ್ರಕಾಶ ಸಿಂದಗಿ ಧ್ವಜಾರೋಹಣ ನೆರವೇರಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ನಂತರ ತಾಲ್ಲೂಕಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳು, ಸಾಧಕರು ಹಾಗೂ ಶಿಕ್ಷಕಿಯರನ್ನು ಸನ್ಮಾನಿಸಲಾಯಿತು. ನಂತರ ವಿವಿಧ ಶಾಲೆಗಳ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಶ್ರೀ ದೇವಣಗಾಂವ, ಉಪಾಧ್ಯಕ್ಷ ರಮೇಶ ಮಸಬಿನಾಳ, ಮುಖ್ಯಾಧಿಕಾರಿ ಎಸ್.ಎಸ್.ಬಾಗಲಕೋಟ ಪಿಎಸೈ ಬಸವರಾಜ ತಿಪರಡ್ಡಿ, ತಾಲ್ಲೂಕು ಪಂಚಾಯಿತಿ ಇಓ ಭಾರತಿ ಚಲುವಯ್ಯ, ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಅಶೋಕ ಹೆಗಡೆ, ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ರಿಯಾಜ್ ಯಲಗಾರ, ಸಿಆರ್ಪಿ ವಿಜಯಲಕ್ಷ್ಮಿ ನವಲಿ, ಪಟ್ಟಣ ಪಂಚಾಯಿತಿ ಸದಸ್ಯರಾದ ಕಾಸುಗೌಡ ಬಿರಾದಾರ, ಕಾಶೀನಾಥ ಬಜಂತ್ರಿ,…
ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ.ಕಲಾ ಮತ್ತು ಕೆ .ಸಿ .ಪಿ ವಿಜ್ಞಾನ ಮಹಾವಿದ್ಯಾಲಯ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಭವ್ಯ ಭಾರತ, ಬಲಿಷ್ಠ ಭಾರತವನ್ನು ನಿರ್ಮಾಣ ಮತ್ತು ಮಹಾನ್ ದಾರ್ಶನಿಕರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಕರಗತ ಮಾಡಿಕೊಳ್ಳಬೇಕು.ಅದರಂತೆ ನಮ್ಮ ದೇಶವನ್ನು ಇನ್ನಷ್ಟು ಉತ್ತಮಗೊಳಿಸಲು, ಭಾರತವನ್ನು ಭವಿಷ್ಯದಲ್ಲಿ ಮತ್ತಷ್ಟು ಬಲಿಷ್ಠಗೊಳಿಸಲು ಇಂದಿನ ಯುವ ಶಕ್ತಿಯ ಪಾತ್ರ ಅತ್ಯಂತ ಮಹತ್ವದೆಂದು ಪ್ರಾಚಾರ್ಯೆ ಡಾ.ಆರ್.ಎಮ್.ಮಿರ್ದೆ ಹೇಳಿದರು.ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್. ಬಿ. ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ನಡೆದ ೭೬ನೇ ಗಣರಾಜ್ಯೋತ್ಸವದಲಿ ದ್ವಜಾರೋಹಣ ನೇರವೇರಿಸಿ ಮಾತನಾಡಿದ ಅವರು ನ್ಯಾಯ, ಸ್ವಾತಂತ್ರö್ಯ, ಸಮಾನತೆ, ಭ್ರಾತೃತ್ವ ಜಾತ್ಯಾತೀತ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ಸಂವಿಧಾನವನ್ನು ಜನವರಿ ೨೬ ೧೯೫೦ ರಲ್ಲಿ ಜಾರಿಗೊಳಿಸುವ ಮೂಲಕ ಭಾರತ ಸ್ವತಂತ್ರöಗಣರಾಜ್ಯವಾಯಿತು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಕೊಡುಗೆ ಅಪಾರವಾದದ್ದು, ಭಾರತದ ಜನಸಂಖ್ಯೆಯ ಶೇ. ೬೫ ರಷ್ಟು ಜನರು ೩೫ ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಆದ್ದರಿಂದ ನಮ್ಮ ಯುವಕರು ನಮ್ಮ ಶಕ್ತಿ ಮತ್ತು ಈ ಶಕ್ತಿಯು ನಮ್ಮ…
ರಚನೆಮಾಣಿಕ ನೇಳಗಿತಾಳಮಡಗಿ ಉದಯರಶ್ಮಿ ದಿನಪತ್ರಿಕೆ ಹರಿಯಲಿ ಹರುಷದ ಹೊನಲು ನವ ವರುಷದಲಿಗೊಂದಲಗಳಿಗಿಂದು ಮನ ತೆರೆಯನೆಳೆಯಲಿತನು ಸಂತಸದ ಗೂಡಾಗಲಿ ಹೊಸ ಸಂವತ್ಸರದಲಿಬಂಧು ಬಾಂಧವರ ನಡುವೆ ಸಾಮರಸ್ಯ ಮೂಡಲಿ ಮನಮನಗಳಲಿ ಹುದುಗಿದ ವೈಷಮ್ಯ ಅಳಿಯಲಿಪ್ರೀತಿ ಪ್ರೇಮದ ಸಸಿ ಮೊಳಕೆಯೊಡೆದರಳಲಿಎಲ್ಲೆಡೆ ಕಂಪರಳಿಸಿ ಹೃದಯಕೆ ಗಂಧವ ತೀಡಲಿಉಲ್ಲಾಸದ ಬದುಕಿಗೆ ಜನರು ನಾಂದಿಯು ಹಾಡಲಿ ಉನ್ನತ ವಿಚಾರಧಾರೆ ಸುತ್ತಮುತ್ತಲು ಹರಡಲಿಮಾನಿನಿಯರ ಏಳಿಗೆಗೆ ಲೋಗರು ಕೈಜೋಡಿಸಲಿವೈಚಾರಿಕ ಪ್ರಜ್ಞೆಯು ಪ್ರಖರದಿ ಹೊರಹೊಮ್ಮಲಿಚಿಮ್ಮಲಿ ಬುದ್ಧನ ನಗೆ ನೂತನ ವಸಂತಕಾಲದಲಿ.
