ವಿಜಯಪುರ ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘದಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿಜಯಪುರ ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘ ಹಾಗೂ ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘ ಬೆಂಗಳೂರಿನ ಸಹಯೋಗದಲ್ಲಿ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಛಾಯಾಗ್ರಹಣದ ಕ್ಷೇತ್ರದಲ್ಲಿರುವ ಮಹಿಳಾ ಸಾಧಕಿಯರಿಗೆ ಗೌರವ ಸನ್ಮಾನ ಹಾಗೂ ಏಪ್ರೀಲ್ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆಯುವ ೨೦೨೫ರ ೧೧ನೇ ಡಿಜಿ ಇಮೇಜ್ ವಸ್ತು ಪ್ರದರ್ಶನದ ಭಿತ್ತಿಪತ್ರ ಅನಾವರಣ ಕಾರ್ಯಕ್ರಮ ಈಚೆಗೆ ಉದ್ಘಾಟಿಸಲಾಯಿತು.
ನಗರದ ಸರಕಾರಿ ಆರ್ಟ್ ಗ್ಯಾಲರಿಯಲ್ಲಿ ನಡೆದ ಈ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಕಾರ್ಮಿಕ ಅಧಿಕಾರಿ ಉಮಾಶ್ರಿ ಕೋಳಿ ಮಾತನಾಡಿ, ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿಯೂ ಸ್ವಾವಲಂಭಿಯಾಗಿ ಬದುಕು ರೂಪಿಸಿಕೊಳ್ಳಬೇಕು. ಇವತ್ತು ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ತಮ್ಮ ವಿಶಿಷ್ಠವಾದ ಛಾಪು ಮೂಡಿಸುತ್ತ ಯಶಸ್ವಿಯಾಗಿ ಜೀವನ ಸಾಗಿಸುತಿದ್ದಾರೆ. ಛಾಯಾಗ್ರಹಣ ಕ್ಷೇತ್ರದಲ್ಲೂ ಮದುವೇ ಮನೆ ಸಹಿತ ವನ್ಯ ಜೀವಿ ಹವ್ಯಾಸಿ ಛಾಯಾಗ್ರಹಣ, ಡಿಸೈನಿಂಗ್, ವಿಡಿಯೊ ಎಡಿಟಿಂಗ್ ಮಾಡುವ ಎಷ್ಟೋ ಮಹಿಳೆಯರು ನಮ್ಮ ನಾಡಿನಲ್ಲಿದ್ದಾರೆ. ಅವರಿಗೆ ಸರಿಯಾದ ಅವಕಾಶ ಸಿಕ್ಕರೆ ಅವರು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಬೆಳೆದು ನಾಡಿಗೆ ಕೀರ್ತಿ ತರುತ್ತಾರೆ ಎಂದರು.
ಸರಕಾರ ಛಾಯಾಗ್ರಾಹಕ ವೃತ್ತಿಮಾಡುವವರನ್ನು ಕಾರ್ಮಿಕರ ಇಲಾಖೆಯಲ್ಲಿ ಸೇರ್ಪಡೆ ಮಾಡಿ ಅವರಿಗೂ ಎಲ್ಲ ರೀತಿಯ ಸಹಕಾರ ಸಿಗುವಂತೆ ಮಾಡಿದೆ. ಕಾರಣ ಎಲ್ಲರೂ ಕಾರ್ಮಿಕ ಇಲಾಖೆಯಲ್ಲಿ ನೋದಣಿ ಮಾಡಿಸಿ ಇಲಾಖೆಯ ಸವಲತ್ತು ಪಡೆಯಲು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬೆಂಗಳೂರಿನ ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘದ ರಾಜ್ಯಾಧ್ಯಕ್ಷ ಎಚ್. ಎಸ್. ನಾಗೇಶ ಮಾತನಾಡುತ್ತ, ಉತ್ತರ ಕರ್ನಾಟಕದ ಭಾಗಗಳಲ್ಲಿ ಅತಿ ಹೆಚ್ಚು ಛಾಯಾಚಿತ್ರಗ್ರಾಹಕರು ಛಾಯಾಗ್ರಹಣ ಮಾಡಿ ಜೀವನ ರೂಪಿಸಿಕೊಂಡ ಸಾವಿರಾರು ಜನರಿದ್ದಾರೆ. ವಿಜಯಪುರದಲ್ಲಿಯೂ ಅಂತರ ರಾಷ್ಟ್ರೀಯ ಡಿಜಿ ಇಮೇಜ್ ವಸ್ತು ಪ್ರದರ್ಶನ ಇನ್ನು ಕೆಲವೇ ದಿನಗಳಲ್ಲಿ ಏರ್ಪಡಿಸಲಾಗುವುದು ಮತ್ತು ಮಹಿಳೆ ಮತ್ತು ಪುರುಷರಿಗೆ ಪ್ರತ್ತೇಕವಾಗಿ ಕಾರ್ಯಾಗಾರಗಳನ್ನು ಮಾಡಿ ಒಬ್ಬ ಯಶಸ್ವಿ ಉದ್ಯಮಿಯಾಗಿ ರೂಪುಗೊಳ್ಳಲು ಎಲ್ಲ ರೀತಿಯ ಸಹಾಯ ರಾಜ್ಯ ಸಂಘದಿಂದ ಮಾಡಲಾಗುವುದು ಎಂದು ಭರವಸೆ ನೀಡಿದರು.
ಇನ್ನೊಬ್ಬ ಮುಖ್ಯ ಅತಿಥಿ ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘದ ನಿರ್ದೇಶಕ ಮಲ್ಲಕಾರ್ಜುನ ಮಾತನಾಡಿ, ಆಧುನಿಕವಾಗಿ ಬೆಳೆಯುತ್ತಿರುವ ಛಾಯಾಗ್ರಹಣ ಕ್ಷೇತ್ರ ಇಂದು ಪುರುಷ ಮಹಿಳೆ ಎನ್ನುವ ಭೇದ ಭಾವವಿಲ್ಲದೆ ಬೆಳಯುತ್ತಿದೆ ಎಂದರು.
ಜಿಲ್ಲೆಯ ಛಾಯಾಗ್ರಹಣ ಕ್ಷೇತ್ರದಲ್ಲಿ ಕೆಲಸಮಾಡುತ್ತಿರುವ ಮಹಿಳಾ ಸಾಧಕಿಯರಾದ ಗಂಗಾ ಮಠ, ಸಿಂದಗಿ. ಲಕ್ಷ್ಮಿ ಲೋಟಗೆರಿ, ಮುದ್ದೇಬಿಹಾಳ. ಗಂಗೂ ಗೋಳಸಾರ ಇಂಡಿ. ವಿಶಾಲಾಕ್ಷಿ ಕಾಖಂಡಕಿಮಠ. ಬಸವನ ಬಾಗೇವಾಡಿ. ಪೂಜಾ ಜಾಧವ, ಇಂಡಿ. ಇವರಿಗೆ ಜಿಲ್ಲಾ ಛಾಯಾಸಾಧಕಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಸಂಘದ ಅಧ್ಯಕ್ಷ ರಮೇಶ ಚವ್ಹಾಣ ಮಾತನಾಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘದ ಪಿ.ಆರ್.ಓ ನಾಗರಾಜ ಟಿ. ಸಿ ಕರ್ನಾಟಕ ನಿರ್ದೇಶಕರಾದ ಬೆಳಗಾವಿಯ ಮಲ್ಲಿಕಾರ್ಜುನ ಕೆ. ಆರ್, ಬೀದರಿನÀ ರವಿರಾಜ ಗುರು, ಗದಗನ ಪವನ ಮೇಹರವಾಡೆ, ಧಾರವಾಡದ ಪ್ರಭಯ್ಯ ಲಕ್ಕುಂಡಿಮಠ, ಬಾಗಲಕೋಟ ಜಿಲ್ಲಾ ಛಾಯಾಚಿತ್ರಗ್ರಾಹಕರ ಸಂಘದ ಅಧ್ಯಕ್ಷ ವಿಠ್ಠಲ ಶಿ. ಹಿರೇಮಠ, ಬೆಳಗಾವಿ ಜಿಲ್ಲಾ ಛಾಯಾಚಿತ್ರಗ್ರಾಹಕರ ಸಂಘದ ಅಧ್ಯಕ್ಷ, ಲಕ್ಷಣ ಚ. ಯಮಕನಮರಡಿ ಹಾಗೂ ವಿಜಯಪುರ ಜಿಲ್ಲೆಯ ಎಲ್ಲ ತಾಲೂಕಿನ ಛಾಯಾಗ್ರಾಹಕರ ಸಂಘದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಛಾಯಾಗ್ರಾಹಕರಾದ ಜಂಗಲಿಬಾಷಾ ಮುಜಾವರ, ಸಂಗಯ್ಯಾ ಮಠಪತಿ, ಪಿಂಟು ರಜಪೂತ, ಪರಶುರಾಮ ಗೂಳ್ಳುರ, ಸಿದ್ದು ಕುದರೆ, ಸಂಜಯ ರೇವೆ, ಖಾಜು, ರವಿ ಕುಂಟೋಜಿ, ಮಹೇಶ ಮಾಟೀಲ, ಮುರಾರಿ ಕರ್ವಾ, ಉಮೇಶ ಹಿರೆದೇಸಾಯಿ, ಮಹೇಶ ಕುಂಬಾರ, ಚಂದ್ರಶೇಖರ್ ವಡ್ಡರ, ಸಿದ್ದು ಹೊದ್ಲೂರ್, ಕ್ಷೇತ್ರ ಸಮನ್ವಯಾಧಿಕಾರಿ ಸುರೇಶ, ಮೋಹನಸಿಂಗ್ ಉಪಾಧ್ಯೆ, ಕಲಾವಿದರಾದ ಪಿ.ಎಸ್.ಕಡೇಮನಿ, ವಿದ್ಯಾಧರ ಸಾಲಿ ಎಂ.ಕೆ. ಪತ್ತಾರ, ಲಿಂಗರಾಜ ಕಾಚಾಪುರ, ಬಿ.ಎಸ್. ಪಾಟೀಲ, ಛಾಯಾಗ್ರಾಹಕರಾದ ಮಹಾಂತೇಶ ದಿಂಡವಾರ, ಶಶಿ ಕುಂಭಾರ, ಕಿಶೋರ ಖಂಡಾಗಳೆ, ಗೌಡಪ್ಪ ಬಿರಾದಾರ, ವಿಠ್ಠಲ್ ಗುಜ್ಜರ, ಉಮೇಶ ಶಾಖಾಪುರ, ಗಣೇಶ ಶಿಂದೆ ಜಿಲ್ಲೆಯ ಎಲ್ಲ ತಾಲೂಕಿನ ಪದಾಧಿಕಾರಿಗಳು, ಜಮಂಖಂಡಿ ತಾಲೂಕಿನ ಪದಾಧಿಕಾರಿಗಳು ಹಾಗೂ ಜಿಲ್ಲಾ ಸಂಘದ ಉಪಾಧ್ಯಕ್ಷ ಪ್ರಶಾಂತ ಪಟ್ಟಣಶೆಟ್ಟಿ, ಕಾರ್ಯದರ್ಶಿ ಸತೀಶಕುಮಾರ ಕಲಾಲ, ಖಜಾಂಚಿ ಸುರೇಶ ರಾಠೋಡ, ನಿರ್ದೇಶಕರಾದ ರಾಜುಸಿಂಗ ರಜಪೂತ, ಗುರುಬಾಳಪ್ಪ ಗಲಗಲಿ, ಮಲ್ಲಿಕಾರ್ಜುನ ಪಾರ್ವತಿ, ಪವನಕುಮಾರ ಅಂಗಡಿ, ಸಂಜು ಕುಂಬಾರ ಸೇರಿದಂತೆ ಹಲವರಿದ್ದರು.
ಮಹೇಶ ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು.

“ವಿಜಯಪುರದಲ್ಲಿ ಛಾಯಾಗ್ರಾಹಕರು ಇಂದು ಅತ್ಯಂತ ಯಶಸ್ವಿಯಾಗಿ ಸ್ವಾವಲಂಬಿಯಾಗಿ ವೃತ್ತಿಪರ ಕೆಲಸ ಮಾಡುತಿದ್ದಾರೆ. ಅದರ ಜೊತೆಯಲ್ಲಿ ಕಲಾತ್ಮಕ ಛಾಯಾಗ್ರಾಹಕರಾಗಿ ಹಲವಾರು ಪ್ರಶಸ್ತಿ ಪುರಸ್ಕೃತ ರಾಷ್ಟ್ರೀಯ, ಅಂತರರಾಷ್ಟ್ರೀಯ ಛಾಯಾಗ್ರಾಹಕರು ನಮ್ಮಲಿದ್ದಾರೆ. ಛಾಯಾಗ್ರಾಹಕ ವೃತ್ತಿಯಲ್ಲಿರುವ ಮಹಿಳಾ ಸಾಧಕಿಯರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿ, ಪುರಸ್ಕರಿಸುವ ಕಾರ್ಯವು ಎಲ್ಲ ಜಿಲ್ಲೆಗಳಲ್ಲಿಯೂ ನಡೆಯಬೇಕು.”
– ರಮೇಶ ಚವ್ಹಾಣ
ಅಧ್ಯಕ್ಷರು
ವಿಜಯಪುರ ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘ, ವಿಜಯಪುರ

