Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಚಡಚಣ: ತಾಲೂಕಿನ ಲೋಣಿ (ಬಿಕೆ) ಗ್ರಾಮದ ಗ್ರಾಮ ದೇವತೆ ಶ್ರೀ ಭಾಗ್ಯವಂತಿ ಜಾತ್ರಾ ಮಹೋತ್ಸವ ಸಂಭ್ರಮದಿಂದ ಆಚರಿಸಲಾಯಿತು. ಪ್ರತಿ ವರ್ಷದಂತೆ ಈ ವರ್ಷವೂ ಅಕ್ಷಯ ತೃತೀಯ ದಂದು ಶ್ರೀ ಭಾಗ್ಯವಂತಿ ದೇವಿಯ ಜಾತ್ರೆಯನ್ನು ಗ್ರಾಮಸ್ಥರು ಸೇರಿಕೊಂಡು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರುಗಿತು.ಕಾರ್ಯಕ್ರಮದಲ್ಲಿ ಮಾತನಾಡಿದ ಕಾಂಗ್ರೇಸ್ ಮುಖಂಡ ಬಾಬಾಸಾಹೇಬ ವಿಜಯಧಾರೆ, ಇಂತಹ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತವೆ ಎಂದು ಹೇಳಿದರು.ಜಾತ್ರೆಯ ಅಂಗವಾಗಿ ಭಾಗ್ಯವಂತಿ ದೇವಿಯ ಫೋಟೋ ಪೂಜೆ ನೆರವೇರಿಸಿ, ನಂತರ ಬರಗೂಡಿ ಭಾಗ್ಯವಂತಿ ಪಲ್ಲಕ್ಕಿ, ಲೋಣಿ ಬಿಕೆ ಲಾಯಗಂಗಾ ಪಲ್ಲಕ್ಕಿ, ರುದ್ರಮಹಾರಾಜರ ದಿಂಡಿ, ಗೊಂಬೆ ಕುಣಿತ ಹಾಗೂ ನೂರಾರು ಮುತ್ತೈದೆಯರಿಂದ ಕುಂಭದೊಂದಿಗೆ ಭವ್ಯ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿಬಂದಿತು.ಶ್ರೀ ಸಿದ್ದಾರೂಢ ಮಠ, ಆಳೂರ-ಪಡನೂರದ ಶ್ರೀ ಶಂಕರಾನಂದ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಧರ್ಮದ ಕಾರ್ಯಕ್ರಮಗಳು ಜೀವನದ ದಾರಿದೀಪವಾಗಿದ್ದು, ಸಾಂಪ್ರದಾಯಿಕ ಬೆಳವಣಿಗೆಗೆ ಕಾರಣವಾಗುತ್ತವೆ. ಹಬ್ಬ-ಜಾತ್ರೆಗಳು ಕೇವಲ ಆಚರಣೆಗೆ ಸೀಮಿತವಾಗದೆ, ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುತ್ತವೆ…

Read More

ಲೇಖನ- ಡಾ. ಶಶಿಕಾಂತ ಪಟ್ಟಣಸಾಹಿತಿಗಳು, ವಿಮರ್ಶಕರುರಾಮದುರ್ಗ – ಪುಣೆ ಉದಯರಶ್ಮಿ ದಿನಪತ್ರಿಕೆ ಪ್ರಾಥಮಿಕ ಮತ್ತು ಹೈಸ್ಕೂಲ್ ಶಿಕ್ಷಣವನ್ನು ಗದಗ, ಬಿಜಾಪುರ, ಧಾರವಾಡ, ಬೆಳಗಾವಿ, ಕಲ್ಬುರ್ಗಿ ಮತ್ತು ಬೆಂಗಳೂರಿನಲ್ಲಿ ಪೂರೈಸಿ, ಅಲ್ಲಿಯೇ ಗೃಹ ವಿಜ್ಞಾನ ಕಾಲೇಜಿನಲ್ಲಿ ಸೈಕಾಲಜಿ, ಸೋಶಿಯಲ್ ವೆಲ್ಫೇರ್ ಮತ್ತು ಹ್ಯೂಮನ್ ಡೆವಲಪ್ಮೆಂಟ್ ಗಳವಿಷಯಗಳನ್ನು ಆಯ್ದುಕೊಂಡು ಡಿಗ್ರಿ ಮುಗಿಸಿದರು.ಕನ್ನಡ ಸಾರಸ್ವತ ಲೋಕದಲ್ಲಿ ಕಥೆ ಕವನ ವ್ಯಕ್ತಿ ಪರಿಚಯ ಅಂಕಣ ಶರಣ ಚರಿತ್ರೆ ವಿಮರ್ಶೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಸೈ ಎನಿಸಿಕೊಂಡ ಈಗ ಬೆಳಗಾವಿಯ ಅನೇಕ ಸಾಹಿತಿಕ ಸಾಂಸ್ಕೃತಿಕ ಸಂಘಟನೆಗಳಲ್ಲಿ ಪದಾಧಿಕಾರಿಯಾಗಿ ಸಕ್ರಿಯವಾಗಿ ಕನ್ನಡ ನಾಡು ನುಡಿ ಸಂಸ್ಕೃತಿ ವಚನ ಚಳುವಳಿಗಾಗಿ ಶ್ರಮಿಸುತ್ತಿದ್ದಾರೆ. ಇವರು ಬಸವ ತಿಳುವಳಿಕೆ ಸಂಶೋಧನಾ ಕೇಂದ್ರದ ವಿಶ್ವಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ವಚನ ಸಾಹಿತ್ಯದ ಗೀಳು ಮತ್ತು ಅಧ್ಯಯನಸುಧಾ ಪಾಟೀಲ ಅವರಿಗೆ ಬಾಲ್ಯದಲ್ಲಿಯೇ ಡಾ. ಜ.ಚ.ನಿ ಅವರಿಂದ ಲಿಂಗ ದೀಕ್ಷೆಯಾಗಿತ್ತು. ತಾಯಿ ಅಕ್ಕಮಹಾದೇವಿ ಆಧುನಿಕ ಕಾಲದ ಶರಣೆ. ನಿತ್ಯ ವಚನ ಸಾಹಿತ್ಯ ಚಿಂತನೆ ಮಗಳಾದ ಸುಧಾ ಅವರ ಮೇಲೆ ದಟ್ಟವಾಗಿ ಬೀರಿದೆ.ಸುಧಾ…

Read More

ಲೇಖನಡಾ. ಶಶಿಕಾಂತ ಪಟ್ಟಣಅಧ್ಯಕ್ಷರುಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ.ಪುಣೆ – ವಿಜಯಪುರ ಉದಯರಶ್ಮಿ ದಿನಪತ್ರಿಕೆ ಭಾರತೀಯ ಸಂಸ್ಕೃತಿ ಮತ್ತು ಸಂಗೀತ ಕ್ಷೇತ್ರಗಳಲ್ಲಿ ದಾಪುಗಾಲು ಇಟ್ಟು ವಚನ ಸಾಹಿತ್ಯದ ಮೌಲ್ಯವನ್ನು ಪಸರಿಸುವ ಗುರುತರವಾದ ಜವಾಬ್ದಾರಿಯನ್ನು ಕೈಗೊಂಡಅಪ್ಪಟ ಹಿಂದೂಸ್ತಾನಿ ಗಾಯಕಿ ಕಲಾವಿದೆ ಬೆಳಗಾವಿಯ ಶರಣೆ ನೈನಾ ಗಿರಿಗೌಡರ ..ಚಿಕ್ಕೋಡಿಯ ಪ್ರತಿಷ್ಠಿತ ಭಾತೆ ಮನೆತನದ ಶ್ರೀ ಶಿವಲಿಂಗಪ್ಪ ಭಾತೆ ವಕೀಲರು ತಾಯಿ ಶರಣೆ ಮಂಗಳಾ ಶಿ ಭಾತೆ ಇವರ ಮಗಳಾಗಿ ಜನಿಸಿ ತಮ್ಮ ಪ್ರಾಥಮಿಕ ಶಿಕ್ಷಣವನ್ನೂ ಚಿಕ್ಕೋಡಿಯಲ್ಲಿ ಮುಗಿಸಿ ಅಲ್ಲಿಯೇ ತಮ್ಮ ವಿಜ್ಞಾನದ ಪದವಿ ಪಡೆದು ಒಬ್ಬ ವಿನಮ್ರ ಭಾವದ ಸರಳ ಸಜ್ಜನಿಕೆಯ ಸಾಕಾರ ಮೂರ್ತಿ.ಬಾಲ್ಯದಿಂದಲೂ ಸಂಗೀತದ ಗೀಳು ಹೊಂದಿರುವ ಅಪರೂಪದ ಪ್ರಬುದ್ಧ ಗಾಯಕಿ ನೈನಾ ಇವರಿಗೆ ತಾಯಿಯೇ ಸಂಗೀತದ ಪ್ರಥಮ ಗುರುಬೆಳಗಾವಿಯ ಶ್ರೀ ಉಮೇಶ್ ಗಿರಿಗೌಡರನ್ನು ಮದುವೆಯಾದ ಮೇಲೆ ಸಂಗೀತ ಅಭ್ಯಾಸ ಮುಂದುವರೆಸಿದರು. ಬೆಳಗಾವಿಯ ಕನ್ನಡ ಭವನದಲ್ಲಿ ಖ್ಯಾತ ಸಂಗೀತ ತಜ್ಞೆ ಡಾ ಸುನೀತಾ ಪಾಟಿಲ ಅವರ ಹತ್ತಿರ ಸಂಗೀತ ಶಿಕ್ಷಣ ಶಾಸ್ತ್ರೀಯವಾಗಿ ಕಲಿತರು.ಕಾರಂಜಿಶ್ರೀ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ರಾಷ್ಟ್ರ ಕಂಡ ಅಪ್ರತಿಮ ಸಮಾಜ ಸುಧಾರಕ ತತ್ವಜ್ಞಾನಿ ಹಾಗೂ ದಾರ್ಶನಿಕ ಭಕ್ತಿ ಭಂಡಾರಿ ಜಗಜ್ಯೋತಿ ಕ್ರಾಂತಿಯೋಗಿ ಬಸವೇಶ್ವರರು ವಿಶ್ವದ ಮೊದಲ ಆಧ್ಯಾತ್ಮಿಕ ಸಂಸತ್ತಿನ ಶಿಲ್ಪಿ ಎಂದು ಕಂದಾಯ ಉಪವಿಬಾಗಾಧಿಕಾರಿ ಚಿದಾನಂದ ಗುರುಸ್ವಾಮಿ ಹೇಳಿದರು.ನಗರದ ತಾಲೂಕಾ ಆಡಳಿತ ವತಿಯಿಂದ ನಡೆದ ಬಸವೇಶ್ವರರ ೮೯೫ ನೆಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಸಮಾನತೆಯನ್ನು ಎಲ್ಲರಿಗಿಂತ ಮೊದಲು ಪ್ರತಿಪಾದಿಸಿದ ಕ್ರಾಂತಿಕಾರಿ ಬಸವಣ್ಣನವರು ತಮ್ಮ ವಚನಗಳ ಮೂಲಕ ಕಾಯಕದ ಮಹತ್ವ ಆತ್ಮಶುದ್ದಿಯ ಅಗತ್ಯ ನಿರಹಂಕಾರದ ತತ್ವಗಳನ್ನು ಎಲ್ಲರಿಗೂ ತಲುಪಿಸುವ ಮೂಲಕ ಧರ್ಮ ಮತ್ತು ಶ್ರೀಸಾಮಾನ್ಯರ ನಡುವೆ ಇದ್ದ ಅಂತರವನ್ನು ಕರಗಿಸಿದರು ಎಂದರು.ತಹಸೀಲ್ದಾರ ಬಿ.ಎಸ್.ಕಡಕಬಾವಿ ಮಾತನಾಡಿ, ಜಾತಿ ಮತ್ತು ವರ್ಗಾಧರಿತ ಹರಿದು ಹಂಚಿ ಹೋಗಿದ್ದ ಸಮಾಜವನ್ನು ಜಾತಿ ರಹಿತ ವರ್ಗರಹಿತ ಸಮಾಜವನ್ನಾಗಿಸುವ ನಿಟ್ಟಿನಲ್ಲಿ ಅವರ ಹೋರಾಟ ಕ್ರಾಂತಿಕಾರಿಯಾಗಿತ್ತು. ಬಸವಣ್ಣನವರ ಕಾಯಕವೇ ಕೈಲಾಸ ಮತ್ತು ದಾಸೋಹ ಎಂಬ ತತ್ವಗಳು ಸತ್ಯ ನಿಷ್ಠ ಶ್ರಮವನ್ನು ದೈವ ಪೂಜೆಯಂತಲೂ ಹಾಗೂ ಸಮಾಜದಲ್ಲಿ ಸಮಾನತೆಯ ಬಾಂದವ್ಯದ ಮೂಲ ಸೇತುವೆಯಂತೆ ಬಳಸಿಕೊಂಡರು ಎಂದರು.ಕಾರ್ಯಕ್ರಮದಲ್ಲಿ ವೀರಶೈವ…

Read More

ಮುಸ್ಲಿಂ ಕುಟುಂಬದಿಂದ ಕಳೆದ ನಾಲ್ಕು ವರ್ಷಗಳಿಂದ ಬಸವ ಜಯಂತಿ ಆಚರಣೆ ಉದಯರಶ್ಮಿ ದಿನಪತ್ರಿಕೆ ಬೆಂಗಳೂರು: ದಲಿತ ಬಲಿತ ಎಂಬ ಭೇದ ಬೇಡ, ಮನುಜರೆಲ್ಲ ಒಂದೇ ಕುಲ ಎಂಬ ತತ್ವದಡಿ ವಿಶ್ವ ಭ್ರಾತೃತ್ವ ಸಾರಿದ ಮಹಾನ್ ಮಾನವತಾವಾದಿ ಶರಣ ಜಗಜ್ಯೋತಿ ಬಸವಣ್ಣ ಎಂದು ಆರಕ್ಷಕ ಮೌಲಾಲಿ ಆಲಗೂರ ಹೇಳಿದರು.ಬೆಂಗಳೂರಿನ ಆಡುಗೋಡಿ ಪೊಲೀಸ್ ಗೃಹದಲ್ಲಿರುವ ಆರಕ್ಷಕ ಮೌಲಾಲಿ ಶ್ವಾನದಳದಲ್ಲಿ ಹೆಡ್ ಕಾನ್ಸ್‌ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಧರ್ಮದಲ್ಲಿ ಮುಸ್ಲಿಂನಾದರೂ ಕೂಡ ಪ್ರತಿ ವರ್ಷ ಬಸವ ಜಯಂತಿ ದಿನದಂದು ಬಸವಣ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಗೌರವದಿಂದ ನಮಿಸಿ, ಸಕಲರ ಒಳಿತಿಗಾಗಿ ಪ್ರಾರ್ಥಿಸಿ, ತನ್ನ ಮೂರು ಮಕ್ಕಳಿಗೂ ಬಸವಣ್ಣನ ಸಮಸಮಾಜದ ಚಿಂತನೆ ಕುರಿತು ತಿಳಿಸುತ್ತಾರೆ. ಕಳೆದ 4 ವರ್ಷಗಳಿಂದ ಬಸವ ಜಯಂತಿಯನ್ನು ತಮ್ಮ ಮನೆಯಲ್ಲಿಯೇ ಭಕ್ತಿ, ಭಾವ, ಶ್ರದ್ಧೆಯಿಂದ ಆಚರಿಸುತ್ತಾ ಬರುತ್ತಿದ್ದಾರೆ.12ನೇ ಶತಮಾನದಲ್ಲಿ ಆಳವಾಗಿ ಬೇರೂರಿದ ಜಾತಿ ವ್ಯವಸ್ಥೆ, ಶೋಷಣೆ, ಅಸಮಾನತೆ, ಅಸ್ಪೃಶ್ಯತೆ, ಅನಾಗರಿಕತೆ, ಲಿಂಗ ತಾರತಮ್ಯದ ವಿರುದ್ಧ ವಚನ ಕ್ರಾಂತಿ ಕೈಗೊಂಡ ಬಸವಣ್ಣ, ದಯ, ಕರುಣೆ,…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಪಟ್ಟಣದಲ್ಲಿ ತಾಲೂಕು ಆಡಳಿತ ಹಾಗೂ ಶರಣ ಸಾಹಿತ್ಯ ಪರಿಷತ್ ವತಿಯಿಂದ ಬಸವಣ್ಣ ಅವರ ೮೯೩ನೇ ಜಯಂತೋತ್ಸವವನ್ನು ಸೋಮವಾರ ತಹಶೀಲ್ದಾರ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.ಪ್ರಾಸ್ತಾವಿಕವಾಗಿ ಶಿರಸ್ತೇದಾರ್ ಕೃಷ್ಣಾ ಗುಡೂರ ಮಾತನಾಡಿ, ಸಮಾಜದಲ್ಲಿ ಜಾತಿ ವ್ಯವಸ್ಥೆ ಮತ್ತು ಮೂಢನಂಬಿಕೆಗಳನ್ನು ನಿರ್ಮೂಲನೆ ಮಾಡಿ ಸಮಾನತೆಯ ಸಂದೇಶವನ್ನು ತಮ್ಮ ವಚನಗಳ ಮೂಲಕ ಜನರಿಗೆ ತಲುಪಿಸಿದ ಮಹಾನ್ ಚಿಂತಕರಾಗಿದ್ದರು ಎಂದು ಹೇಳಿದರು.ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಬಾಲಗೊಂಡ ಮಾತನಾಡಿ, ನಮ್ಮ ದಿನನಿತ್ಯದ ಕಾಯಕದಲ್ಲಿ ನಿಷ್ಠೆ, ಶ್ರದ್ಧೆ ಮತ್ತು ಭಕ್ತಿ ಇದ್ದರೆ ಅದುವೇ ಕೈಲಾಸವೆಂಬ ಬಸವಣ್ಣನವರ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.ಕಾರ್ಯಕ್ರಮದಲ್ಲಿ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಮಲ್ಲಪ್ಪ ಗಣಿ ಅವರು ಸ್ವರಚಿತ ಕವನವನ್ನು ಭಜನಾ ಶೈಲಿಯಲ್ಲಿ ಹಾಡಿ ಕಾರ್ಯಕ್ರಮಕ್ಕೆ ಮೆರುಗು ತಂದರು.ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ಪಿ.ಎಸ್. ಹುಡೇದ, ಗ್ರಾಮ ಲೆಕ್ಕಾಧಿಕಾರಿ ಬಿ.ಎನ್. ಜಿಡ್ಡಿಮನಿ, ಆನಂದ ಇಂಡಿ, ಸಂಜು ಡೋಣೂರ, ಶಿಕ್ಷಕರಾದ ಕೃಷ್ಣಾ ರಜಪುತ, ಗರಸಂಗಿ ಸರ್ ಹಾಗೂ ಚೈತ್ರಾ…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಪಟ್ಟಣದ ಬಸವೇಶ್ವರ ದೇವಸ್ಥಾನದಲ್ಲಿ ಅಕ್ಷಯ ತೃತೀಯ ಶುಭದಿನದಂದು ಬಸವ ಜಯಂತಿಯ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ಬಸವೇಶ್ವರ ಜಾತ್ರಾ ಮಹೋತ್ಸವ ಭಾರೀ ವಿಜೃಂಭಣೆಯಿಂದ ಜರುಗಿತು.ಮುಂಜಾನೆ ವೇದಮೂರ್ತಿ ಮುರುಘೇಂದ್ರ ಮಹಾಸ್ವಾಮಿಗಳು (ಹಿರೇಮಠ) ಅವರ ಅಮೃತವಾಣಿಯಿಂದ ವೇದಮಂತ್ರಗಳ ಪಠಣದೊಂದಿಗೆ ದೇವಸ್ಥಾನದಲ್ಲಿರುವ ಬಸವೇಶ್ವರ ಶಿಲಾಮೂರ್ತಿಗೆ ರುದ್ರಾಭಿಷೇಕ ಸಹಿತ ಪೂಜಾ ವಿಧಿವಿಧಾನಗಳು ನೆರವೇರಿಸಲಾಯಿತು. ಭಕ್ತರಿಗೆ ಅನ್ನಪ್ರಸಾದದ ವ್ಯವಸ್ಥೆಯೂ ಮಾಡಲಾಗಿತ್ತು.ಸಂಜೆ ಐದು ಗಂಟೆಗೆ ಪಟ್ಟಣದ ರೈತರು ತಮ್ಮ ಎತ್ತುಗಳನ್ನು ಅಲಂಕರಿಸಿಕೊಂಡು ಬಸವೇಶ್ವರ ದೇವಸ್ಥಾನಕ್ಕೆ ಕರೆತಂದರು. ಸುಮಾರು ೧೦೧ಕ್ಕೂ ಅಧಿಕ ಎತ್ತುಗಳೊಂದಿಗೆ ಗೋಮಾತೆಯ ಮೆರವಣಿಗೆ ಮತ್ತು ಪಲ್ಲಕ್ಕಿ ಉತ್ಸವವು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯ ವೈಭವಗಳೊಂದಿಗೆ ನೂರಾರು ರೈತರು ಹಾಗೂ ದೇವಸ್ಥಾನದ ಆಡಳಿತ ಮಂಡಳಿಯವರ ಸಮ್ಮುಖದಲ್ಲಿ ಸಾಂಗೋಪಾಂಗವಾಗಿ ನಡೆಯಿತು.ಗೋಮಾತೆ, ಎತ್ತುಗಳು ಹಾಗೂ ಬಸವೇಶ್ವರ ಮತ್ತು ಅಕ್ಕಮಹಾದೇವಿಯ ಭಾವಚಿತ್ರಗಳ ಮೆರವಣಿಗೆ ದೇವಸ್ಥಾನಕ್ಕೆ ತಲುಪಿದ ಬಳಿಕ ರೈತರಿಗೆ ಉಪಯುಕ್ತವಾಗುವ ಕೃಷಿ ಸಂಬಂಧಿತ ವಿವಿಧ ಬಹುಮಾನಗಳನ್ನು ಆಡಳಿತ ಮಂಡಳಿಯವರು ವಿತರಿಸಿದರು.ತದನಂತರ ಬಸವಣ್ಣನವರ ತೊಟ್ಟಿಲೋತ್ಸವ ಕಾರ್ಯಕ್ರಮವು ನೂರಾರು ಮಹಿಳೆಯರ…

Read More

ವಿಜಯಪುರದಲ್ಲಿ ಜಿಲ್ಲಾಡಳಿತದಿಂದ ಅದ್ದೂರಿ ಬಸವ ಜಯಂತಿ ಕಾರ್ಯಕ್ರಮ | ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ೧೨ನೇ ಶತಮಾನದಲ್ಲಿ ಅಣ್ಣ ಬಸವಣ್ಣನವರು ಸೇರಿದಂತೆ ಬಸವಾದಿ ಶರಣರ ವಚನಗಳನ್ನು ಡಾ. ಫ.ಗು ಹಳಕಟ್ಟಿಯಂತವರು ಶರಣರ ವಚನಗಳನ್ನು ಬೆಳಕಿಗೆ ತಂದರು. ಈ ಸಮಾಜಕ್ಕೆ ಶರಣರ ಕೊಡುಗೆ ಅಪಾರ. ಬಸವ ನೆಲದಲ್ಲಿ ಬಸವಣ್ಣನವರ ಚಿಂತನೆಗಳು ಈಗಲೂ, ಎಂದೆಂದಿಗೂ ಪ್ರಸ್ತುತವಾಗಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಗರದ ಕಂದಗಲ್ ಶ್ರೀ ಹನುಂತರಾಯ ರಂಗಮಂದಿರದಲ್ಲಿ ಸೋಮವಾರ ಆಯೋಜಿಸಲಾದ ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.೧೨ನೇ ಶತಮಾನದಲ್ಲಿ ಅಸಮಾನತೆ, ಮೇಲು-ಕೀಳು ಅನಿಷ್ಟ ಪದ್ಧತಿ ಮೂಢನಂಬಿಕೆ ತಾಂಡವವಾಡುತ್ತಿತ್ತು. ನಮ್ಮ ನೆಲದಲ್ಲಿ ಜನಿಸಿದ ಬಸವಣ್ಣ ವಚನಗಳ ಮೂಲಕ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಇಷ್ಟಲಿಂಗ ಎಷ್ಟು ಮಹತ್ವ ಹೊಂದಿದೆಯೋ ವಚನ ಸಾಹಿತ್ಯವೂ ಅಷ್ಟೇ ಮಹತ್ವ ಹೊಂದಿದೆ. ಬಸವ ತತ್ವ ಬರೀ ಬಸವಣ್ಣನವರದ್ದಷ್ಟೇ ಅಲ್ಲ, ಅದು ಸಕಲ ಶರಣರ ವಚನಗಳ ಸಾರವಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಆರ್.ಡಿ.ಕುಲಕರ್ಣಿ ಹೇಳಿದರು.ಸಿಂದಗಿ ನಗರದ ನಾಗೂರ ಬಡಾವಣೆಯಲ್ಲಿರುವ ಎಸ್.ಎಸ್.ವಿ.ವಿ.ವಿ ಸಂಸ್ಥೆಯ ವಿದ್ಯಾನಿಕೇತನ ಪ್ರಾಥಮಿಕ ಶಾಲೆ ಹಾಗೂ ಪ್ರೇರಣಾ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಬಸವಣ್ಣನವರ ೮೯೩ನೇ ಜಯಂತಿಯನ್ನು ಆಚರಿಸಿ ಮಾತನಾಡಿದ ಅವರು, ಲಿಂಗಧಾರಣೆ ಹಾಗೂ ಇಷ್ಟಲಿಂಗ ಪೂಜೆಯು ವೈಜ್ಞಾನಿಕವಾದದ್ದು. ಇದರಿಂದ ಮನಸಿಗೆ ಶಾಂತಿ, ನೆಮ್ಮದಿ ಸಿಗುತ್ತದೆ. ಇಷ್ಟಲಿಂಗ ಪೂಜೆಯಿಂದ ಮನುಷ್ಯನ ವೈಚಾರಿಕತೆ ಹೆಚ್ಚಿಸಲು ಸಾಧ್ಯ ಎಂದರು.ಈ ವೇಳೆ ಸಂಸ್ಥೆಯ ನಿರ್ದೇಶಕ ಪಿ.ಡಿ.ಕುಲಕರ್ಣಿ, ವಿದ್ಯಾನಿಕೇತನ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ, ಪ್ರೇರಣಾ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಎಮ್.ಪಿ.ಬುಕ್ಕಾ ಶಿಕ್ಷಕರಾದ ಸತೀಶ ಕುಲಕರ್ಣಿ, ಅಲ್ತಾಫ್ ತಾಂಬೋಳಿ, ಕುಮಾರ ಕಿರಣ ಕುಲಕರ್ಣಿ, ಸಂತೋಷ ಕುಂಟೋಜಿ, ಅಕ್ಷಯ ಯಲಗಟ್ಟಿ, ಶ್ರೀಕಾಂತ ಹೂನಳ್ಳಿ, ಬಿ.ಎಸ್.ಪಾಟೀಲ, ಎಸ್.ವಿ.ಕಡಣಿ, ಎಮ್.ಎಮ್.ಜುಮನಾಳ, ಎಮ್.ಜಿ.ಧ್ಯಾಮಗೊಂಡ, ವಿ.ಎ.ನಾಯಕ, ಎಮ್. ಜಿ.ಬಳಗಾನೂರ,…

Read More