Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಸಮಾಜದಲ್ಲಿ ಕಷ್ಟದಲ್ಲಿರುವವರಿಗೆ ಧರ್ಮ-ಜಾತಿ ಭೇದಭಾವವಿಲ್ಲದೆ ಸಹಾಯ ಮಾಡುವ ಮನೋಭಾವ ಪಾರಥನಳ್ಳಿ ಪರಿವಾರದ ಅತ್ಯಂತ ಮುಖ್ಯ ಕಾರ್ಯ ಎಂದು ಡಿ.ವಾಯ್.ಎಸ್.ಪಿ ಸಯ್ಯದ ರೋಷನ್ ಜಮೀರ್ ಹೇಳಿದರು.ನಗರದ ಮಾಮನ ರಸಿದ ಪಾರಥನಳ್ಳಿ ಅವರ ಹಾರ್ಡ್ವೇರ್ ಅಂಗಡಿಯಲ್ಲಿ ರಮಝಾನ್ ಹಬ್ಬದ ಪ್ರಯುಕ್ತ ಬಡವರಿಗೆ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಹಿಂದೂ-ಮುಸ್ಲಿಂ ಎನ್ನದೆ ಎಲ್ಲರಿಗೂ ಸಹಾಯ ಮಾಡುವ ಮನಸ್ಸು ನಮ್ಮಲ್ಲಿರಬೇಕು. ಪರಸ್ಪರ ಸಹಕಾರದಿಂದಲೇ ಉತ್ತಮ ಸಮಾಜ ನಿರ್ಮಾಣ ಸಾಧ್ಯ” ಎಂದರು.ಅಂಜುಮನ್-ಎ-ಇಸ್ಲಾಂ ಸಮಿತಿಯ ಅಧ್ಯಕ್ಷ ತೌಫಿಕ್ ಪಾರಥನಳ್ಳಿ ಮಾತನಾಡಿ, ಬಡವರ ಏಳಿಗೆಗಾಗಿ ಎಲ್ಲರೂ ಒಂದಾಗಿ ಕೆಲಸ ಮಾಡಬೇಕು ಎಂದರು.ಅರ್ಬನ್ ಬ್ಯಾಂಕ್ ಉಪಾಧ್ಯಕ್ಷ ಮಾಮೂನ ರಸಿದ ಪಾರಥನಳ್ಳಿ ಮಾತನಾಡಿ, “ಹಬ್ಬ ಎಂದರೆ ಕೇವಲ ಹಣ ಅಥವಾ ಬಟ್ಟೆ ಕೊಡುವುದಲ್ಲ, ಬಡವರ ಜೊತೆ ನಿಲ್ಲುವುದು ಮತ್ತು ಸಂತೋಷ ಹಂಚಿಕೊಳ್ಳುವುದೇ ನಿಜವಾದ ಹಬ್ಬ” ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಸುಮಾರು 2500 ಕಿಟ್ಗಳು (ಧಾನ್ಯ, ಕುಕ್ಕರ್, ಗ್ಯಾಸ್ ಸ್ಟವ್, ಇಸ್ತ್ರಿ, ಮಿಕ್ಸರ್ ಸೇರಿದಂತೆ ಇತರೆ ಸಾಮಗ್ರಿಗಳನ್ನು ವಿತರಿಸಲಾಯಿತು.ಸಲ್ಮಾನ್ ಪಾರಥನಳ್ಳಿ, ನಜೀರ್…
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ತಾಲೂಕಿನ ಮೈಗೂರ ಗ್ರಾಮದ ಬಳಿ ಹರಿಯುವ ಕೃಷ್ಣಾ ನದಿಯಲ್ಲಿ ಈಜಲು ಹೋಗಿದ್ದ ಯುವಕನೋರ್ವ ಮುಳುಗಿ ಮೃತ ಪಟ್ಟಿರುವ ದುರ್ಘಟನೆ ನಡೆದಿದೆ.ಮೃತ ಯುವಕನನ್ನು 19 ವರ್ಷದ ನಿಂಗರಾಜ ಸದಾಶಿವ ಪಾಟೀಲ ಎಂದು ಗುರುತಿಸಲಾಗಿದೆ. ಈಜುವ ವೇಳೆ ಆಳವಾದ ನೀರಿಗೆ ಸಿಲುಕಿ ನಿಯಂತ್ರಣ ತಪ್ಪಿ ಮುಳುಗಿದ್ದಾನೆ ಎಂದು ತಿಳಿದು ಬಂದಿದೆ. ಘಟನೆಯ ಮಾಹಿತಿ ತಿಳಿದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯಾಚರಣೆ ನಡೆಸಿದರು. ನದಿಯಲ್ಲಿನ ಮೃತ ದೇಹವನ್ನು ಹೊರತೆಗೆದರು.ಅವರೊಂದಿಗೆ ಪೊಲೀಸರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಜಮಖಂಡಿ ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದರು.ಈ ಘಟನೆ ಗ್ರಾಮದಲ್ಲಿ ಶೋಕಮಯ ವಾತಾವರಣವನ್ನು ನಿರ್ಮಿಸಿದೆ.ಜಮಖಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ತಾಲೂಕಿನ ಕತಕನಹಳ್ಳಿಯ ಶ್ರೀ ಗುರುಚಕ್ರವರ್ತಿ ಸದಾಶಿವ ಜಾತ್ರಾ ಮಹೋತ್ಸವ ಮಾ.19 ರಿಂದ ಮಾ. 23 ರವರೆಗೆ ಸಡಗರ ಸಂಭ್ರಮದಿಂದ ನಡೆಯಲಿದ್ದು, ಜಾತ್ರೆ ಅಂಗವಾಗಿ ಹಲವು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.ಮಾ. 19 ರಂದು ಬೆಳಗ್ಗೆ 8 ಗಂಟೆಗೆ ಜಾನುವಾರು ಜಾತ್ರೆಯನ್ನು ಬಬಲಾದಿ-ಚಮಕೇರಿ-ಕತಕನಹಳ್ಳಿಯ ಶಿವಯ್ಯ ಸ್ವಾಮೀಜಿ ಉದ್ಘಾಟಿಸುವರು. ಬೆಳಗ್ಗೆ 10.30 ಗಂಟೆಗೆ ಕೃಷಿ ಮೇಳ ಉದ್ಘಾಟನೆ, ಮಧ್ಯಾಹ್ನ 4 ಗಂಟೆಗೆ ಕೆಸರಿನಲ್ಲಿ ಮನುಷ್ಯರ ಓಟದ ಸ್ಪರ್ಧೆ ಮತ್ತು ಸಂಜೆ 7 ಗಂಟೆಗೆ ಜ್ಞಾನ ದೀಪೋತ್ಸವ ನಡೆಯಲಿದೆ.ಮಾ. 20 ರಂದು ಬೆಳಗ್ಗೆ 8 ಗಂಟೆಗೆ ಕತೃ ಗದ್ದುಗೆಗ ರುದ್ರಾಭೀಷೇಕ, ಕುಂಭಾಭೀಷೇಕ ಜರುಗಲಿದೆ. ಬೆಳಗ್ಗೆ 10.30 ಗಂಟೆಗೆ ಚಾಣಕ್ಯ ಕರಿಯರ್ ಅಕಾಡೆಮಿ ನೇತೃತ್ವದಲ್ಲಿ ರಸಪ್ರಶ್ನೆ ಸ್ಪರ್ಧೆ, ಸಂಜೆ 7.30 ಪುರಾಣ ಪ್ರವಚನ ಮಂಗಲ ಮತ್ತು ರಾತ್ರಿ 9 ಗಂಟೆಗೆ ಭಜನಾ ಕಾರ್ಯಕ್ರಮಗಳು ಜರುಗಲಿವೆ.ಮಾ. 21 ರಂದು ಬೆಳಗ್ಗೆ 7 ಗಂಟೆಗೆ ಪಲ್ಲಕ್ಕಿ ಉತ್ಸವ, 8 ಗಂಟೆಗೆ ಉಡಿ ತುಂಬುವ ಕಾರ್ಯಕ್ರಮ, 9.30…
ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ದೇಶ ಕಾಯುವ ಸೈನಿಕರು ಜೈ ಜವಾನ್. ಅನ್ನ ನೀಡುವ ರೈತರು ಜೈ ಕಿಸಾನ್. ಅದೇ ರೀತಿ ದೇಶ ಕಟ್ಟುವ ಶಿಕ್ಷಕರು ಜೈ ಶಿಕ್ಷಕ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹೇಳಿದ್ದಾರೆ.ಬುಧವಾರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ನಗರದ ಬಿ. ಎಲ್.ಡಿ.ಇ.ಸಂಸ್ಥೆಯ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು.ದೇಶ ಕಟ್ಟುವುದು ಮತ್ತು ದೇಶದ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದೆ. ಪಾಲಕರನ್ನು ಹೊರತುಪಡಿಸಿದರೆ ಮಕ್ಕಳು ಶಿಕ್ಷಕರ ಹತ್ತಿರವೇ ಹೆಚ್ಚು ಬೆಳೆಯುತ್ತವೆ. ಹೀಗಾಗಿ ಭಾವಿ ಶಿಕ್ಷಕರಾಗಿ ಹೊರಹೊಮ್ಮುವ ಬಿ.ಎಡ್. ವಿದ್ಯಾರ್ಥಿಗಳು ಮಗುವಿನ ಸರ್ವತೋಮುಖ ಬೆಳವಣಿಗೆಗಾಗಿ ನಿರಂತರ ಶ್ರಮಿಸಬೇಕು. ರಾಜ್ಯದಲ್ಲಿ ಶಿಕ್ಷಣವು ಅತ್ಯುನ್ನತ ಸ್ಥಾನದಲ್ಲಿರಲು ಬಿ.ಎಲ್.ಡಿ.ಇ.ಸಂಸ್ಥೆಯೂ ಮಹತ್ವದ ಕೊಡುಗೆ ನೀಡಿದೆ ಎಂದು ಅವರು ಹೇಳಿದರು.ಬಿ.ಎಲ್.ಡಿ.ಇ.ಸಂಸ್ಥೆಯ ಎಸ್. ಎಸ್. ಅವರಣದ ಆಡಳಿತಾಧಿಕಾರಿ ಐ. ಎಸ್. ಕಾಳಪ್ಪನವರ ಮಾತ.ನಾಡಿ, ಶಿಕ್ಷಕ ವೃತ್ತಿಯು ಅತ್ಯಂತ ಪವಿತ್ರವಾಗಿದ್ದು,…
ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಡಾ.ಅರುಣ ಇನಾಮದಾರ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಂಶೋಧನೆ ಕ್ಷೇತ್ರದಲ್ಲಿ ಕೌಶಲ್ಯದ ಜೊತೆಗೆ ಒಳ್ಳೆಯ ಆದರ್ಶ ಮತ್ತು ನೈತಿಕತೆಯನ್ನು ಅಳವಡಿಸಿಕೊಳ್ಳಬೇಕು ಎಂದು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಡಾ.ಅರುಣ ಚಂ. ಇನಾಮದಾರ ಹೇಳಿದ್ದಾರೆ.ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಸಂಗನಬಸವ ಮಹಾಸ್ವಾಮೀಜಿ ಔಷಧೀಯ ಮಹಾವಿದ್ಯಾಲಯ ಮತ್ತು ಸಂಶೋಧನ ಕೇಂದ್ರದಲ್ಲಿ ಕರ್ನಾಟಕ ರಾಜ್ಯ ಔಷಧ ಮಂಡಳಿ ಮತ್ತು ಭಾರತದ ಔಷಧ ಶಿಕ್ಷಕರ ಸಂಘದ ರಾಜ್ಯ ಶಾಖೆ ಆಯೋಜಿಸಿರುವ ಔಷಧೀಯ ಶಿಕ್ಷಣ, ಸಂಶೋಧನೆ ಮತ್ತು ಉದ್ಯಮದಲ್ಲಿ ಪ್ರಗತಿಗಳು ವಿಷಯ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.ವೈದ್ಯಕೀಯ ಸಂಶೋಧನೆಯಲ್ಲಿ ಸಮಕಾಲೀನ ಪ್ರವೃತ್ತಿಗಳು ಮತ್ತು ಶೈಕ್ಷಣಿಕ ಹಾಗೂ ಉದ್ಯಮದ ನಡುವೆ ಪರಸ್ಪರ ಸಹಯೋಗ ಅಗತ್ಯವಾಗಿದೆ ಎಂದು ಅವರು ಯುವ ಸಂಶೋಧಕರಿಗೆ ಕರೆ ನೀಡಿದರು.ಕರ್ನಾಟಕ ರಾಜ್ಯ ಔಷಧ ಮಂಡಳಿ ಮತ್ತು ಭಾರತದ ಔಷಧ ಶಿಕ್ಷಕರ ಸಂಘದ ರಾಜ್ಯ ಶಾಖೆ ಅಧ್ಯಕ್ಷ ಡಾ. ಎಚ್. ಶಿವಕುಮಾರ ಮಾತನಾಡಿ, ಶಿಕ್ಷಣ…
ಲೇಖನ- ಡಾ.ಮಲ್ಲಿಕಾರ್ಜುನ ಎಸ್ ಆಲಮೇಲಯಡ್ರಾಮಿಮೋ: 9740499814 ಉದಯರಶ್ಮಿ ದಿನಪತ್ರಿಕೆ ಚೈತ್ರ ಮಾಸ ಅದರ ಇನ್ನೊಂದು ಹೆಸರು ಮಧು ಮಾಸ. ವೇದಗಳಲ್ಲಿ ಚೈತ್ರವನ್ನು ‘ಮಧು ಮಾಸ’ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ, ಋತುಗಳ ರಾಜನೆಂದು ಕರೆಯಲಾಗುವ ವಸಂತ ಋತುವು ತನ್ನ ಪೂರ್ಣ ಯೌವನದಲ್ಲಿರುತ್ತದೆ.ಹೊಸ ಚಿಗುರುಗಳಿಂದ ಮರಗಿಡಗಳು ಹಳೆಯ ಎಲೆಗಳನ್ನು ಉದುರಿಸಿ, ಕೆಂಪು ಮತ್ತು ಗುಲಾಬಿ ಮಿಶ್ರಿತ ಹೊಸ ಚಿಗುರನ್ನು ಧರಿಸುತ್ತವೆ. ಮಾವು – ಬೇವು ಮರಗಳಲ್ಲಿ ಹೂವು ಅರಳಿ ನಳನಳಿಸುತ್ತವೆಪರಿಸರದ ಸೌಂದರ್ಯ ಇಮ್ಮಡಿಗೊಂಡು ಹೂವುಗಳ ಸುಗಂಧದೊಂದಿಗೆ ಪ್ರಾತಃಕಾಲದಿ ಬೀಸುವ ತಂಪಾದ ಗಾಳಿಯು ಮನಸ್ಸಿಗೆ ಹೊಸ ಚೈತನ್ಯವನ್ನು ನೀಡುತ್ತದೆ. ಕೋಗಿಲೆಯ ಗಾಯನ ಮಾಧುರ್ಯವೂ ಚೈತ್ರದ ಆಗಮನವನ್ನು ಸಾರುತ್ತದೆ.ಇಡಿ ಧರಿತ್ರಿಯು ಮದುವಣಗಿತ್ತಿ ಸಿಂಗಾರಗೊಂಡು ನಯನ ಮನೋಹರವಾಗಿ ಕಂಗೊಳಿಸುವ ಸುಸಮಯವಿದು ಮಧುಮಾಸ – ವಸಂತ ಋತುವಿನ ಸಮ್ಮಿಲನ ಕುರಿತು ಅದೆಷ್ಟು ವರ್ಣಿಸಿದರು ಅಲ್ಪವೆನಿಸುತ್ತದೆ.ನಮ್ಮ ಕರುನಾಡಿನ ಹೆಮ್ಮೆಯ ರಾಷ್ಟ್ರಕವಿ ಕುವೆಂಪು ಅವರ ಒಂದು ಉತ್ಕೃಷ್ಟ ಸಾಹಿತ್ಯವು ಹೀಗಿದೆ ಸುರಲೋಕದ ಸುರವನದಿ ಮಿಂದುಸುರಲೋಕದ ಸಂಪದವ ತಂದುನವ ಸಂವತ್ಸರ ಭೂಮಿಗೆ ಬಂದುಹೊಸ…
ಲೇಖನ- ಸಂತೋಷ್ ರಾವ್ ಪೆರ್ಮುಡಪೆರ್ಮುಡ ಮನೆಪಟ್ರಮೆ ಗ್ರಾಮ ಮತ್ತು ಅಂಚೆಬೆಳ್ತಂಗಡಿ ತಾಲೂಕುದ.ಕ ಜಿಲ್ಲೆ-574198ದೂ: 9742884160 ಉದಯರಶ್ಮಿ ದಿನಪತ್ರಿಕೆ ಇಂದಿನ ಯುದ್ಧಗಳು ಕೇವಲ ಬಂದೂಕುಗಳ ಮೂಲಕ ನಡೆಯುವ ಬದಲು ಇಡೀ ಮನುಕುಲವನ್ನೇ ಕ್ಷಣಾರ್ಧದಲ್ಲಿ ನಾಶಪಡಿಸುವಂಥ ಅಪಾಯಕಾರಿ ಅಣ್ವಸ್ತ್ರಗಳು ಮತ್ತು ಜೈವಿಕ ಅಸ್ತ್ರಳಂತಹ ಸಮೂಹನಾಶಕ ಅಸ್ತ್ರಗಳನ್ನು ಪ್ರತೀ ದೇಶಗಳು ಒಗ್ಗೂಡಿಸಿ ಇಟ್ಟುಕೊಂಡಿವೆ. ಎಲ್ಲಾದರೂ ವಿವೇಚನೆ ಇಲ್ಲದೇ ಅವುಗಳನ್ನು ಪ್ರಯೋಗಿಸಿದರೆ ಅದರಿಂದ ಶತಮಾನದ ಹಿಂದೆ ಜಪಾನಿನಲ್ಲಿ ಆಗಿರುವ ಯುದ್ಧದ ಭೀಕರತೆಗಿಂತಲೂ ಹಲವು ಪಟ್ಟು ಹೆಚ್ಚಿನ ಪ್ರಮಾಣದ ನಾಶವಾಗುವುದು ದಿಟ. ಇಂತಹ ದುರಂತಕ್ಕೆ ಕಾರಣವಾಗುವ ಯುದ್ಧಕ್ಕೆ ಕೈಹಾಕುವ ಮೊದಲು ಯುದ್ಧದಾಹಿ ದೇಶಗಳು ತಮ್ಮ ದೇಶದ ನಾಗರಿಕರ ಮೇಲೆ ಆಗಬಹುದಾದ ಹಾನಿ ಮತ್ತು ದೇಶದ ಭವಿಷ್ಯದ ಕುರಿತು ಚಿಂತಿಸಬೇಕು. ಬರುವ ಸಮಸ್ಯೆಗಳಿಗೆ ಎಲ್ಲಕ್ಕೂ ಯುದ್ಧವೇ ಪರಿಹಾರ ಅಲ್ಲ ಎನ್ನುವುದನ್ನು ಗತಿಸಿರುವ ಯುದ್ಧ ಪರಿಣಾಮಗಳಿಂದ ಅರಿಯಬೇಕು.ಯುದ್ಧಗಳು ಯಥೇಚ್ಛ ಸಾವುನೋವು, ಆರ್ಥಿಕ ಕುಸಿತ, ಸಾಮಾಜಿಕ ಅಸ್ಥಿರತೆ ಮತ್ತು ಪರಿಸರ ವಿನಾಶವನ್ನು ಉಂಟುಮಾಡುವ ಮಾನವ ನಿರ್ಮಿತ ವಿಪತ್ತಾಗಿದೆ. ಇದು ತಲೆಮಾರುಗಳ ಕಾಲದವರೆಗೆ ಕಾಡುವ ಮಾನಸಿಕ…
ಉದಯರಶ್ಮಿ ದಿನಪತ್ರಿಕೆ ಚಡಚಣ: ಇಂಡಿ ತಾಲೂಕಿನ ಚಿಕ್ಕ ಬೇವಿನೂರು ವಲಯದ ಅಹಿರಸಂಗ ಕಾರ್ಯಕ್ಷೇತ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ (ರಿ) ವತಿಯಿಂದ ಮಾಸಾಶನ ಫಲಾನುಭವಿಯಾದ ರೇವೂಬಾಯಿ ಮಠ ಅವರಿಗೆ ವಾತ್ಸಲ್ಯ ಮನೆ ಹಸ್ತಾಂತರ ಕಾರ್ಯಕ್ರಮವನ್ನು ಭಾನುವಾರ ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮವನ್ನು ತಾಲೂಕು ಯೋಜನಾಧಿಕಾರಿ ನಟರಾಜ್ ಎಲ್.ಎಂ. ಅವರು ಉದ್ಘಾಟಿಸಿ ಎಲ್ಲರನ್ನು ಸ್ವಾಗತಿಸಿದರು.ಬಳಿಕ ಕಲಬುರಗಿ ಪ್ರಾದೇಶಿಕ ವಿಭಾಗದ ನಿರ್ದೇಶಕ ದಿನೇಶ್ ಪೂಜಾರಿ ಮಾತನಾಡಿ, ಡಾ. ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಹೇಮಾವತಿ ಅಮ್ಮನವರ ಆಶಯದಂತೆ ವಾತ್ಸಲ್ಯ ಮನೆ ಯೋಜನೆ ನಿರ್ಗತಿಕರಿಗೆ ಆಶ್ರಯ ಕಲ್ಪಿಸುತ್ತಿದೆ. ರಾಜ್ಯದಲ್ಲಿ ಈಗಾಗಲೇ ಸುಮಾರು 800 ವಾತ್ಸಲ್ಯ ಮನೆಗಳನ್ನು ನಿರ್ಮಿಸಲಾಗಿದ್ದು, 18 ಸಾವಿರಕ್ಕೂ ಹೆಚ್ಚು ಜನರಿಗೆ ಮಾಸಾಶನ ನೀಡಲಾಗುತ್ತಿದೆ ಎಂದು ತಿಳಿಸಿದರು. ವಿಜಯಪುರ ಜಿಲ್ಲೆಯಲ್ಲಿ ಕೆರೆಗಳ ಹೂಳೆತ್ತುವಿಕೆ, ಜ್ಞಾನದೀಪ ಶಿಕ್ಷಕರ ನೇಮಕ ಹಾಗೂ ಸುಜ್ಞಾನನಿಧಿ ಶಿಷ್ಯವೇತನ ಸೇರಿದಂತೆ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಯೋಜನೆ ಕೈಗೊಳ್ಳುತ್ತಿದೆ ಎಂದು ವಿವರಿಸಿದರು.ಈ ಸಂದರ್ಭದಲ್ಲಿ ರೇವೂಬಾಯಿ ಮಠ ಅವರಿಗೆ ವಾತ್ಸಲ್ಯ ಮನೆ ಕೀಲಿ ಕೈ…
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಸಾಮಾಜಿಕ ಭದ್ರತಾ ಮಂಡಳಿಯಲ್ಲಿ ಪುರೋಹಿತ ವರ್ಗಕ್ಕೆ ಪ್ರತ್ಯೇಕ ಮಂಡಳಿ ರಚಿಸಬೇಕು ಎಂದು ಒತ್ತಾಯಿಸಿ ಪುರೋಹಿತ ಸಂಘದ ಸದಸ್ಯರು ತಹಸೀಲ್ದಾರ ಅನೀಲ ಬಡಿಗೇರ ಅವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.ರಾಜ್ಯದ 31 ಜಿಲ್ಲೆಗಳಲ್ಲಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು ಸಾವಿರಾರು ಅರ್ಚಕರು, ಪುರೋಹಿತರು ಹಾಗೂ ಅಡಿಗೆ ಕಾರ್ಯದಲ್ಲಿ ತೊಡಗಿರುವವರು ಸದಸ್ಯರಾಗಿದ್ದಾರೆ. ಅವರ ಕುಟುಂಬ ಸದಸ್ಯರನ್ನು ಸೇರಿಸಿ ಒಟ್ಟು ಎಂಟು ಲಕ್ಷಕ್ಕಿಂತ ಹೆಚ್ಚು ಜನರು ಈ ವಲಯಕ್ಕೆ ಸೇರಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.ರಾಜ್ಯ ಸರ್ಕಾರ ಸಾಮಾಜಿಕ ಭದ್ರತಾ ಮಂಡಳಿಯಲ್ಲಿ ಪುರೋಹಿತರು, ಅರ್ಚಕರು ಹಾಗೂ ಅಡಿಗೆಯವರನ್ನು ಗುರುತಿಸಿ ಲೇಬರ್ ಕಾರ್ಡ್ ನೀಡುವ ವ್ಯವಸ್ಥೆ ಕಲ್ಪಿಸಿ, ಪ್ರತ್ಯೇಕ ಮಂಡಳಿ ರಚಿಸಿದರೆ ರಾಜ್ಯದ ಸುಮಾರು 8 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಹೆಚ್ಚಿನ ಅನುದಾನ ಮತ್ತು ಸೌಲಭ್ಯಗಳು ದೊರೆಯಲಿವೆ. ಆದ್ದರಿಂದ ಶೀಘ್ರದಲ್ಲೇ ಪ್ರತ್ಯೇಕ ಮಂಡಳಿ ರಚಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.ಇದೇ ವೇಳೆ ಸಂಸ್ಥೆಯ ರಾಜ್ಯಾಧ್ಯಕ್ಷರಾದ ಡಾ.ಜೆ ಶ್ರೀನಿವಾಸ್ ಮೂರ್ತಿ ಅವರನ್ನು ಮಂಡಳಿಯ ಅಧ್ಯಕ್ಷರಾಗಿ ಹಾಗೂ ಸತೀಶ್ ಸಿಂಹ ಎಚ್.…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವೈದ್ಯಕೀಯ ವೃತ್ತಿಯಲ್ಲಿ ಪ್ರ್ಯಾಕ್ಟಿಸ್ ಮಾಡಲು ನ್ಯಾಯಸಮ್ಮತ ಅಂಶಗಳನ್ನು ಗಮನದಲ್ಲಿಡಬೇಕು ಎಂದು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಕುಲಪತಿ ಡಾ.ಅರುಣ ಚಂ. ಇನಾಮದಾರ ಹೇಳಿದ್ದಾರೆ.ಶುಕ್ರವಾರ ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಕಾನೂನು ಶಾಲೆಯಲ್ಲಿ ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣೆ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಲಾದ ವೈದ್ಯಕೀಯ ನಿರ್ಲಕ್ಷ್ಯಕ್ಕೆ ಸಂಬಂಧಿಸಿದ ಕಾನೂನು ವಿಷಯದ ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದರು.ವೈದ್ಯಕೀಯ ವೃತ್ತಿಯಲ್ಲಿ ನ್ಯಾಯಸಮ್ಮತವಾಗಿ ಪ್ರಾಕ್ಟೀಸ ಮಾಡಲು ಐದು ಪ್ರಮುಖ ನ್ಯಾಯಾಂಗ ಕೇಸುಗಳನ್ನು ಅವರು ಉದಾಹರಣೆಯಾಗಿ ನೀಡಿದರು.ಗ್ರಾಹಕರ ಹಕ್ಕುಗಳು ಸಂಬಂಧ ಭಾರತೀಯ ವೈದ್ಯಕೀಯ ಸಂಘ ವಿರುದ್ಧ ಶಾಂತಾ ಕೇಸ್, ಕ್ರಿಮಿನಲ್ ನಿರ್ಲಕ್ಷ್ಯ ಮಾನದಂಡ ಸಂಬಂಧ ಜಾಕೋಬ್ ಮ್ಯಾಥ್ಯೂ ಪ್ರಕರಣ, ಮಾಹಿತಿಯುಕ್ತ ಒಪ್ಪಿಗೆಕ್ಕೆ ಪೂರಕವಾಗಿ ಸಮಿರಾ ಕೊಹ್ಲಿ ಪ್ರಕರಣ, ಅವಧಿಯ ನಂತರದ ಆರೈಕೆ ಮತ್ತು ದಯಾಮರಣದ ಬಗ್ಗೆ ಇರುವ ಅರುಣಾ ಶಾನ್ಬಾಗ್ ಪ್ರಕರಣ ಹಾಗೂ ಪರಿಹಾರ ಮತ್ತು ಹೊಣೆಗಾರಿಕೆ ಬಗ್ಗೆ ಇರುವ ಕುನಾಲ್ ಸಹಾ ಪ್ರಕರಣಗಳ ಕುರಿತು ಅವರು ಸೂಕ್ತ…
