ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಇಷ್ಟಲಿಂಗ ಎಷ್ಟು ಮಹತ್ವ ಹೊಂದಿದೆಯೋ ವಚನ ಸಾಹಿತ್ಯವೂ ಅಷ್ಟೇ ಮಹತ್ವ ಹೊಂದಿದೆ. ಬಸವ ತತ್ವ ಬರೀ ಬಸವಣ್ಣನವರದ್ದಷ್ಟೇ ಅಲ್ಲ, ಅದು ಸಕಲ ಶರಣರ ವಚನಗಳ ಸಾರವಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಆರ್.ಡಿ.ಕುಲಕರ್ಣಿ ಹೇಳಿದರು.
ಸಿಂದಗಿ ನಗರದ ನಾಗೂರ ಬಡಾವಣೆಯಲ್ಲಿರುವ ಎಸ್.ಎಸ್.ವಿ.ವಿ.ವಿ ಸಂಸ್ಥೆಯ ವಿದ್ಯಾನಿಕೇತನ ಪ್ರಾಥಮಿಕ ಶಾಲೆ ಹಾಗೂ ಪ್ರೇರಣಾ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಬಸವಣ್ಣನವರ ೮೯೩ನೇ ಜಯಂತಿಯನ್ನು ಆಚರಿಸಿ ಮಾತನಾಡಿದ ಅವರು, ಲಿಂಗಧಾರಣೆ ಹಾಗೂ ಇಷ್ಟಲಿಂಗ ಪೂಜೆಯು ವೈಜ್ಞಾನಿಕವಾದದ್ದು. ಇದರಿಂದ ಮನಸಿಗೆ ಶಾಂತಿ, ನೆಮ್ಮದಿ ಸಿಗುತ್ತದೆ. ಇಷ್ಟಲಿಂಗ ಪೂಜೆಯಿಂದ ಮನುಷ್ಯನ ವೈಚಾರಿಕತೆ ಹೆಚ್ಚಿಸಲು ಸಾಧ್ಯ ಎಂದರು.
ಈ ವೇಳೆ ಸಂಸ್ಥೆಯ ನಿರ್ದೇಶಕ ಪಿ.ಡಿ.ಕುಲಕರ್ಣಿ, ವಿದ್ಯಾನಿಕೇತನ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ, ಪ್ರೇರಣಾ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಎಮ್.ಪಿ.ಬುಕ್ಕಾ ಶಿಕ್ಷಕರಾದ ಸತೀಶ ಕುಲಕರ್ಣಿ, ಅಲ್ತಾಫ್ ತಾಂಬೋಳಿ, ಕುಮಾರ ಕಿರಣ ಕುಲಕರ್ಣಿ, ಸಂತೋಷ ಕುಂಟೋಜಿ, ಅಕ್ಷಯ ಯಲಗಟ್ಟಿ, ಶ್ರೀಕಾಂತ ಹೂನಳ್ಳಿ, ಬಿ.ಎಸ್.ಪಾಟೀಲ, ಎಸ್.ವಿ.ಕಡಣಿ, ಎಮ್.ಎಮ್.ಜುಮನಾಳ, ಎಮ್.ಜಿ.ಧ್ಯಾಮಗೊಂಡ, ವಿ.ಎ.ನಾಯಕ, ಎಮ್. ಜಿ.ಬಳಗಾನೂರ, ಶಿಲ್ಪಾ ಎಸ್.ಪಾಟೀಲ, ವಿ.ಎ.ನಾಯಕ, ಆರ್.ಎಮ್.ಫಕೀರಪೂರ, ವಿಜಯಲಕ್ಷ್ಮಿ ಅಲಾಳಮಠ, ರೂಪಾ ಶಿವಸಿಂಪಿಗೇರ, ಸಾವಿತ್ರಿ ವಿರಾಪೂರ, ಆರ್.ಎಮ್.ಪಕೀರಪುರ ಸೇರಿದಂತೆ ಬೋಧಕೇತರ ಸಿಬ್ಬಂದಿಗಳು ಹಾಗೂ ಮಕ್ಕಳು ಇದ್ದರು.
ವಿದ್ಯಾರ್ಥಿಗಳಾದ ದರ್ಶಿನಿ ಅಲಾಳಮಠ, ಅಭಿನವ ನಾಯ್ಕೋಡಿ, ಶಾಲಿನಿ ಬಿರಾದಾರ, ಸಾಹಿತ್ಯ ಹಿರೇಮಠ ಹಾಗೂ ಸಂಗಡಿಗರಿಂದ ವಚನ ಗಾಯನದೊಂದಿಗೆ ಪುಷ್ಪಾರ್ಪಣೆಯನ್ನು ಸಲ್ಲಿಸಲಾಯಿತು.
ಶ್ರೀ ಪದ್ಮರಾಜ ಮಹಿಳಾ ಕಾಲೇಜು
ಪಟ್ಟಣದ ಶ್ರೀ ಪದ್ಮರಾಜ ಮಹಿಳಾ ಪಪೂ ಕಾಲೇಜಿನಲ್ಲಿ ಬಸವಣ್ಣನವರ ೮೯೩ನೇ ಜಯಂತಿಯನ್ನು ಆಚರಿಸಲಾಯಿತು. ಇ
ದೇ ವೇಳೆ ಪದವಿ ಕಾಲೇಜಿನ ಪ್ರಾಚಾರ್ಯ ವ್ಹಿ.ಡಿ.ಪಾಟೀಲ, ಉಪನ್ಯಾಸಕರಾದ ಯು.ಸಿ.ಪೂಜೇರಿ, ಮಮತಾ ಹರನಾಳ, ಹೇಮಾ ಕಾಸರ, ವಿಜಯಲಕ್ಷ್ಮಿ ಭಜಂತ್ರಿ ಶಿವಶಂಕರ ಕುಂಬಾರ ಸೇರಿದಂತೆ ಮಾಹಾವಿದ್ಯಾಲಯದ ಬೋಧಕೇತರ ಸಿಬ್ಬಂದಿಗಳು ಇದ್ದರು.
ಮಹಿಳಾ ವಸತಿ ನಿಲಯ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಡಿಯಲ್ಲಿ ಶ್ರೀಧರಸ್ವಾಮಿ ವಿದ್ಯಾವರ್ಧಕ ಸಂಘ ನಡೆಸುವ ಮಹಿಳಾ ವಸತಿ ನಿಲಯದಲ್ಲಿ ಬಸವಣ್ಣನವರ ೮೯೩ನೇ ಜಯಂತಿಯನ್ನು ಆಚರಿಸಲಾಯಿತು.
ಮಹಿಳಾ ಸಾಂತ್ವನ ಸಹಾಯವಾಣಿ ಕೇಂದ್ರದ ಸಿಬ್ಬಂದಿ ರಶ್ಮಿ ನೂಲಾನವರ, ವಿದ್ಯಾವತಿ ದೇಸಾಯಿ ಇದ್ದರು.

