Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಕೊಚ್ಚಿ ಹೋಗಿರುವ ಬೇನಾಳ ಅಬ್ಬಿಹಾಳ ರಸ್ತೆ ಸೇತುವೆ ಬಾಕ್ಸ್ ಕಲ್ವರ್ಟ್ ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಆಲಮಟ್ಟಿ ಬೇನಾಳ ಆರ್.ಎಸ್.ಹಾಗೂ ಬೇನಾಳ ಎನ್.ಹೆಚ್.ಇತರ ಗ್ರಾಮಗಳಿಗೆ ಸಂಪರ್ಕ ರಸ್ತೆಯಾಗಿರುವ ಬೇನಾಳ ಅಬ್ಬಿಹಾಳ ರಸ್ತೆಗೆ ೨೦೧೨ ರಲ್ಲಿ ಕೃಷ್ಣಾ ಭಾಗ್ಯ ಜಲನಿಗಮದಿಂದ ಸುಮಾರು ೮.೫ ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾದ ಅಗಸರ ಹಳ್ಳ ರಸ್ತೆ ಸೇತುವೆಯ ಬಾಕ್ಸ್ ಕಲ್ವರ್ಟ್ ಗಳ ರಕ್ಷಣಾ ಗೋಡೆ ಹಳ್ಳದಲ್ಲಿ ರಭಸದಿಂದ ಹರಿಯುವ ನೀರಿಗೆ ಕೊಚ್ಚಿ ಹೋಗಿದೆ . ಬೇನಾಳ ಹತ್ತಿರ ಇರುವ ಪಾರ್ವತಿ ಕಟ್ಟೆ ಹಳ್ಳಕ್ಕೆ ಆಲಮಟ್ಟಿ ಜಲಾಶಯದ ಹಿನ್ನೀರು ಸುಮಾರು ಎಂಟು ತಿಂಗಳ ಕಾಲ ಇಲ್ಲಿ ಆವರಿಸಿರುತ್ತದೆ ಹಿನ್ನೀರಿನ ಮಧ್ಯ ಸುಮಾರು ಎರಡುವರೆ ಕಿಲೋಮೀಟರ್ ಉದ್ದದ ಮಣ್ಣಿನ ಏರಿ ನಿರ್ಮಿಸಿ ಸೇತುವೆ ನಿರ್ಮಿಸಲಾಗಿದ್ದು ಹಳ್ಳದ ನೀರು, ಮತ್ತು ಜಲಾಶಯದ ಹಿನ್ನೀರು ಸರಾಗವಾಗಿ ಹರಿಯಲು ಮಧ್ಯದಲ್ಲಿ ಆರು ಬೃಹತ್ ಬಾಕ್ಸ್ ಕಲ್ವರ್ಟ್ ನಿರ್ಮಿಸಿ ಎರಡು ಬದಿಗೆ ಕಾಂಕ್ರೀಟ್ ರಕ್ಷಣಾ ಗೋಡೆ ಮತ್ತು ದಿಪ್ ನಿರ್ಮಿಸಲಾಗಿದೆ.ಪೆಬ್ರವರಿ ತಿಂಗಳಿನಿಂದ ಜೂನ್ ತಿಂಗಳ ಅಂತ್ಯದವರೆಗೆ…
ತಿಕೋಟಾ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ.ಬಿ.ಪಾಟೀಲ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕನ್ನಡ ಅಭಿಮಾನಿಗಳು, ಭಾಷಿಕರು ಸಾಗರದಾಚೆಗೆ ವಿವಿಧ ದೇಶಗಳಲ್ಲಿ ಕನ್ನಡ ಮಾತುಗಳಿಂದ ತಮ್ಮ ಅಸ್ತಿತ್ವ ಉಳಿಸಿಕೊಂಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ.ಬಿ.ಪಾಟೀಲ ಹೇಳಿದರು.ತಿಕೋಟಾದಲ್ಲಿ ನಡೆದ ತಿಕೋಟಾ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಬಿ ಎಲ್ ಡಿ ಈ ಸಂಸ್ಥೆಯು ದಾಸ ಸಾಹಿತ್ಯದ ೪೦ ಕೃತಿಗಳ ರಚನೆ ಮಾಡಿದ್ದೇವೆ. ವಿಜಯಪುರ ಆದಿಲ್ ಶಾಹಿ ಆಡಳಿತದ ಉದು೯ಭಾಷೆಯಿಂದ ಕನ್ನಡಕ್ಕೆ ಅನುವಾದ ಮಾಡಿದ ಕೀತಿ೯ ಬಿ ಎಲ್ ಡಿ ಈ ಸಂಸ್ಥೆಗೆ ಸಲ್ಲುತ್ತದೆ. ಹನ್ನೇರಡನೆಯ ಶತಮಾನದ ವಚನ ಸಾಹಿತ್ಯ ಜಗತ್ತಿಗೆ ಆಧ್ಯಾತ್ಮಿಕ ಜೀವನಕ್ಕೆ ಮೌಲ್ಯ ನೀಡಿದ್ದು ಶ್ಲಾಘನೀಯ. ಈ ಭಾಗದ ರೈತರಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಿ ನೀರು ತಂದಿರುವ ತೃಪ್ತಿ ನನಗಿದೆ ಎಂದು ಸಚಿವರು ನುಡಿದರು.ಸಮ್ಮೇಳನ ಸವಾ೯ಧ್ಯಕ್ಷರಾದ ಚನ್ನಮಲ್ಲಿಕಾಜು೯ನ ಸ್ವಾಮೀಜಿ ಮಾತನಾಡಿ, ನಮ್ಮ ಭಾಷೆ, ನಡೆ-ನುಡಿ ನಮ್ಮ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕಾವ್ಯ ಹುಟ್ಟುವುದು ಒಂದು ವಿಶಿಷ್ಟ ಸಂದರ್ಭದಲ್ಲಿ. ಕಾವ್ಯದಲ್ಲಿ ರಾಗ, ತಾಳ,ಲಯ, ಪ್ರಾಸಗಳು ಆ ಕವಿತೆಯ ಭಾವವನ್ನು ಹೆಚ್ಚಿಸುವಲ್ಲಿ ತನ್ನದೇಯಾದ ಮಹತ್ವದ ಪಾತ್ರ ವಹಿಸುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅಭಿಪ್ರಾಯಪಟ್ಟರು. ತಿಕೋಟಾದ ವಾಡೆಯಲ್ಲಿ ನಡೆದ ತಿಕೋಟಾದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು “ವಿಜಯಪುರ ಜಿಲ್ಲೆ ಕವಿಗಳ ನಾಡು” ಎಂದ ಅವರು ಅಭಿನವ ಪಂಪ ನಾಗಚಂದ್ರನಿಂದ ಹಿಡಿದು ಕುವೆಂಪುರವರ ವರೆಗೆ ಅನೇಕ ಕವಿಗಳು ಹಾಗೂ ಕವಯತ್ರಿಯರು,ಸಾಹಿತಿಗಳು ಕನ್ನಡ ಭಾಷೆಯ,ಸಾಹಿತ್ಯದ ಶ್ರೀಮಂತಿಕೆಯನ್ನು ಹೆಚ್ಚಿಸುವ ಮೂಲಕ ವಿಜಯಪುರ ಜಿಲ್ಲೆಯ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ ಎನ್ನುತ್ತ ಕವಿಗಳು ರಚಿಸಿದ ಕವಿತೆ ಜನಸಾಮಾನ್ಯರ, ಓದುಗರ ಹೃದಯ ಗೆಲ್ಲುವಂತಿರಬೇಕು ಎನ್ನುತ್ತ, ಹೆಚ್ಚು ಹೆಚ್ಚು ಅಧ್ಯಯನದಿಂದ ಉತ್ತಮ ಕವಿತೆಗಳು ಹೊರಹೊಮ್ಮಲು ಸಾಧ್ಯ ಎಂದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಗೌರವ ಅಧ್ಯಕ್ಷೆ ಭಾರತಿ ಪಾಟೀಲ ಮಾತನಾಡುತ್ತ, ಕವಿಗೋಷ್ಠಿಯಲ್ಲಿ ಭಾಗವಹಿಸಿದ ಕವಿಗಳು ಸಮಾಜಮುಖಿಯಾದ, ಪ್ರೀತಿ ವಿಶ್ವಾಸದ ಕೊಂಡಿ ಬೆಸೆಯುವ ಭಾವನಾತ್ಮಕ ಸನ್ನಿವೇಶಗಳನ್ನು ತಮ್ಮ…
ಉದಯರಶ್ಮಿ ದಿನಪತ್ರಿಕೆ ಕಲಕೇರಿ: ವಿಧ್ಯಾರ್ಥಿಗಳಿಗೆ ಶಿಕ್ಷಣವನ್ನು ನಿಡುವದರ ಜೊತೆಗೆ ಅವರಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವದು ಮುಖ್ಯವಾಗಿದೆ, ವಿಧ್ಯಾರ್ಥಿಗಳನ್ನು ಕೆವಲ ಅಂಕ ಗಳಿಕೆಗಾಗಿ ಅವರನ್ನು ತಯಾರು ಮಾಡುವ ಬದಲಾಗಿ ದೇಶದ ಸತ್ಪçಜೆಯಾಗಿ ಹೊರಹೊಮ್ಮುವಂತ ನೈತಿಕ ಶಿಕ್ಷಣದ ಅವಶ್ಯಕತೆಯಿದ್ದು ಈ ಕೆಲಸವನ್ನು ತುರಕನಗೇರಿಯ ಶ್ರೀ ಸಿದ್ದಗಂಗಾ ಶಿಕ್ಷಣ ಸಂಸ್ಥೆ ಈ ಭಾಗದ ಅನಾಥ ಗಾಗೂ ನಿರ್ಗತಿಕ, ಕಡುಬಡವ ಮಕ್ಕಳಿಗೆ ಉಚಿತ ಶಿಕ್ಷಣ ನಿಡುವದರ ಮೂಲಕವಾಗಿ ಮಾಡುತ್ತಿದೆ ಎಂದು ದೇವರಹಿಪ್ಪಗಿ ಶಾಸಕ ರಾಜುಗೌಡ ಪಾಟೀಲ ಕುದರಿಸಾಲೋಡಗಿ ಅವರು ಹೆಳಿದರು.ಕಲಕೇರಿ ಸಮಿಪದ ತುರಕುನಗೇರಿ ಗ್ರಾವiದಲ್ಲಿ ಶನಿವಾರ ಸಂಜೆ ನಡೆದ ಶ್ರೀ ಸಿದ್ದಗಂಗಾ ಕಿರಿಯ ಪ್ರಾಥಮಿಕ ಶಾಲೆಯ ೭ ನೇ ವರ್ಷದ ವಾರ್ಷಿಕೋತ್ಸವ ಹಾಗೂ ತುಮಕುರಿನ ಸಿದ್ದಗಂಗಾ ಮಠದ ಲಿಂ. ಶ್ರೀ ಶಿವಕುಮಾರ ಸ್ವಾಮಿಜಿಯವರ ೧೧೮ ನೇ ಜಯಂತ್ಯೋತ್ಸವ ಹಾಗೂ ವಿವಿದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ “ಸಿದ್ದಗಂಗಾ ಶ್ರೀ ಕಾಯಕ ರತ್ನ” ಹಾಗೂ “ಸಿದ್ದಗಂಗಾ ಶ್ರೀ ರತ್ನ” ಪ್ರಶಸ್ತಿ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಈ ಸಂಸ್ಥೆಯ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಭಾರತೀಯ ಜನತಾ ಪಕ್ಷದ ವಿಜಯಪುರ ಜಿಲ್ಲೆಯ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಸಿಂದಗಿ ನಗರಕ್ಕೆ ಪ್ರಥಮ ಬಾರಿಗೆ ಆಗಮಿಸಿದ ಜಿ.ಡಿ.ಅಂಗಡಿ ಅವರಿಗೆ ಸಿಂದಗಿ ಮಂಡಲ ಕೋಶಾಧ್ಯಕ್ಷ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ ಸನ್ಮಾನಿಸಿ ಗೌರವಿಸಿದರು.ಈ ವೇಳೆ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ, ಬಿ.ಎಚ್.ಬಿರಾದಾರ, ಪರಶುರಾಮ ಗೂಳ್ಳುರ, ಈರಯ್ಯ ಮುತ್ಯಾ, ಮುರುಜಾವರ ಮಠ, ಆನಂದ ಕಂಠಿಗೊಂಡ, ಯಮನೇಶ ಮಾಗಣಗೇರಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಇದ್ದರು.
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ರಕ್ತದಾನದಿಂದ ರಕ್ತದೊತ್ತಡ, ಮಧುಮೇಹದಂತಹ ರೋಗಗಳು ನಿಯಂತ್ರಣಕ್ಕೆ ಬರುವುದರ ಜೊತೆಗೆ ಆತ್ಮತೃಪ್ತಿ ದೊರೆಯುತ್ತದೆ ಎಂದು ರಾಂಪೂರ ಪಿಎ ಗ್ರಾಮದ ಆರೂಢ ಮಠದ ಸಮರ್ಥ ಸದ್ಗುರು ಆರೂಢ ನಿತ್ಯಾನಂದ ಶಿವಯೋಗಿಗಳು ಹೇಳಿದರು.ತಾಲೂಕಿನ ರಾಂಪೂರ ಪಿಎ ಗ್ರಾಮದ ಶ್ರೀ ಸಮರ್ಥ ಸದ್ಗುರು ಆರೂಢ ಸಂಗನಬಸವೇಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ನಿಮಿತ್ಯ ಹಮ್ಮಿಕೊಂಡ ಶ್ರೀಮನ್ ನಿಜಗುಣ ಶಿವಯೋಗಿಗಳ ವಿರಚಿತ ಕೈವಲ್ಯ ಪದ್ದತಿ ಪ್ರವಚನ ಕಾರ್ಯಕ್ರಮದಲ್ಲಿ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಸಹಯೋಗದಲ್ಲಿ ಜರುಗಿದ ರಕ್ತದಾನ ಶಿಬಿರವನ್ನು ಉದ್ದೇಶಿಸಿ ಮಾತನಾಡಿದ ಅವರು, ರಕ್ತದಾನ ಮಾನವನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ದೇಶದಲ್ಲಿ ಪ್ರತಿವರ್ಷ ೪೧ದಶ ಲಕ್ಷ ಯೂನಿಟ್ ರಕ್ತದ ಕೊರತೆ ಉಂಟಾಗುತ್ತದೆ. ಸಮಯಕ್ಕೆ ಸರಿಯಾಗಿ ರಕ್ತ ದೊರೆಯದೆ ವಿವಿಧ ಕಾಯಿಲೆಗಳಿಂದ ಬಳಲುವ ರೋಗುಗಳು, ಅಪಘಾತದ ಗಾಯಾಳುಗಳು ಮೃತಪಟ್ಟಿದ್ದಾರೆ. ಅಮೂಲ್ಯವಾದ ಜೀವ ಉಳಿಸಲು ಸ್ವಯಂ ಪ್ರೇರಣೆಯಿಂದ ಎಲ್ಲರೂ ರಕ್ತದಾನ ಮಾಡುವುದು ಅತೀ ಅವಶ್ಯಕ ಎಂದರು.ಈ ವೇಳೆ ತಾಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ನಮ್ಮೂರ ಸರ್ಕಾರಿ ಶಾಲೆ ಯಾವುದೇ ಖಾಸಗಿ ಶಾಲೆಗಳಿಗಿಂತ ಕಡಿಮೆಯಿಲ್ಲ ಎಂದು ಮಂಗಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷ ವಿಠ್ಠಲ ರೇವೂರ ಹೇಳಿದರು.ತಾಲೂಕಿನ ಮಂಗಳೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಹಮ್ಮಿಕೊಂಡ ವಿದ್ಯಾರ್ಥಿಗಳ ಬಿಳ್ಕೋಡುಗೆ, ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಶಾರದೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮೂರ ಸರ್ಕಾರಿ ಶಾಲೆಯನ್ನು ಇಡೀ ತಾಲೂಕಿಗೆ ಮಾದರಿ ಶಾಲೆಯನ್ನಾಗಿ ಮಾಡೋಣ ಇದಕ್ಕೆ ಗ್ರಾಮಸ್ಥರ ಹಾಗೂ ಪಾಲಕರ ಸಹಕಾರ ಅತ್ಯಗತ್ಯ ಎಂದರು.ಕಾರ್ಯಕ್ರಮವನ್ನು ಭೀಮಾ ಶಿಕ್ಷಣ ಸಂಸ್ಥೆಯ ನಿರ್ದೇಶಕ, ಅಭಿಯಂತರ ದತ್ತು ಮಾವೂರ ಉದ್ಘಾಟಿಸಿ ಮಾತನಾಡಿದರು. ಈ ವೇಳೆ ಶಾಲೆಯಲ್ಲಿ ಕಲಿತು ಉನ್ನತ ವ್ಯಾಸಂಗದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಮತ್ತು ಮಕ್ಕಳಿಂದ ವಿವಿಧ ಮನೋರಂಜನಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಕಾರ್ಯಕ್ರಮದ ಸಾನಿಧ್ಯವನ್ನು ಮಲ್ಲಯ್ಯ ಹಿರೇಮಠ, ಮುಖ್ಯ ಅತಿಥಿಗಳಾಗಿ ಸಾಹೇಬಗೌಡ ಪಾಟೀಲ, ಎಸ್.ಬಿ.ಪಾಟೀಲ, ಡಿ.ಪಿ.ಗಣಿಹಾರ, ಗುರಣ್ಣ ಹುಮನಾಬಾದ, ಬಿ.ಬಿ.ಮಾವೂರ, ಶಂಕರ ಕೋರಳ್ಳಿ, ಶಾಂತಪ್ಪ ರೇವೂರ, ನಾಗೇಶ ರೇಷ್ಮಿ, ಸಿದ್ದು ಮಾದರ,…
Sವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ ಶಾಸಕ ಮನಗೂಳಿ ಗೆ ಟಾಂಗ್ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಸಿಂದಗಿ ಮತಕ್ಷೇತ್ರದಲ್ಲಿ ಕೆಲಸ ಮಾಡಿದ್ದು, ಅನುದಾನ ಕೊಟ್ಟಿದ್ದು ಬಿಜೆಪಿ ಸರಕಾರ. ಈಗಿನ ಶಾಸಕರು ಮಾತ್ರ ಕೇವಲ ಪೂಜೆ ಮಾಡಲಿಕ್ಕೆ ಬಂದಿದ್ದಾರೆ. ಹಿಂದಿನ ಮಾಜಿ ಶಾಸಕರ ಪಾತ್ರವೇ ಏನು ಇಲ್ಲ ಎಂಬಂತೆ ಈಗಿನ ಆಡಳಿತ ಪಕ್ಷದ ಶಾಸಕರು ನಡೆದುಕೊಳ್ಳುತ್ತಿದ್ದಾರೆ. ಆದರೆ ನಮ್ಮ ಕಾಮಗಾರಿಗಳಿಗೆ ಈಗಿನ ಶಾಸಕರು ಪೂಜೆ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಶಾಸಕ ಅಶೋಕ ಮನಗೂಳಿ ಅವರಿಗೆ ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ ಟಾಂಗ್ ಕೊಟ್ಟಿದ್ದಾರೆ.ಸಿಂದಗಿ ಪಟ್ಟಣದ ಮಾಜಿ ಶಾಸಕ ರಮೇಶ ಭೂಸನೂರ ಅವರ ಸ್ವಗೃಹದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ವಿಜಯಪುರ, ಕಲಬುರಗಿ ಮತ್ತು ಬಾಗಲಕೋಟ ಸೇರಿದಂತೆ ವಿವಿಧ ಭಾಗಗಳ ರೈತರ ತೊಗರಿ ಬೆಳೆ ಈ ಬಾರಿ ಸಂಪೂರ್ಣ ನಾಶವಾಗಿ ರೈತ ಕಂಗಾಲಾಗಿದ್ದರು, ರಾಜ್ಯ ಸರಕಾರ ಮಾತ್ರ ಪರಿಹಾರ ನೀಡದಿರುವುದು ಖೇದಕರ ಸಂಗತಿ. ರಾಜ್ಯ ಕಾಂಗ್ರೆಸ್…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಭಾರತದ ಉಪಪ್ರಧಾನಮಂತ್ರಿಯಾಗಿದ್ದ ಬಾಬು ಜಗಜೀವನರಾಮ್ ಅವರ ಜಯಂತಿಯನ್ನು ದಿ:೫ ರಂದು ಕಾರ್ಯಾಲಯದಲ್ಲಿ ಆಚರಿಸಲಾಗುತ್ತಿದೆ ಎಂದು ತಹಶೀಲ್ದಾರ ಪ್ರಕಾಶ ಸಿಂದಗಿ ಹೇಳಿದರು.ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಬಾಬು ಜಗಜೀವನರಾಮ್ ಜಯಂತಿ ಅಂಗವಾಗಿ ಈಚೆಗೆ ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜಯಂತಿಯ ರೂಪುರೇಷೆಗಳ ಕುರಿತು ಸಾರ್ವಜನಿಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದಾಗಿದೆ ಎಂದರು.ಸಭೆಯಲ್ಲಿ ಭಾಗವಹಿಸಿದ ಸಮುದಾಯದ ಪ್ರಮುಖರು ಕಾರ್ಯಕ್ರಮದ ಯೋಜನೆಯ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.ಉಪತಹಶೀಲ್ದಾರ ಸುರೇಶ ಮ್ಯಾಗೇರಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್.ಎಸ್. ಬಾಗಲಕೋಟ, ಪಶು ವೈದ್ಯಕೀಯ ಇಲಾಖೆಯ ಆರ್.ಸಿ.ಪಟ್ಟಣದ, ರೇಷ್ಮೆ ಇಲಾಖೆಯ ಬಿ.ಬಿ.ಪಾಟೀಲ, ಕಲ್ಯಾಣರಾವ ಕುಲಕರ್ಣಿ, ಸಂತೋಷ ಬೇವಿನಗಿಡದ, ಸಂಜೀವ ಬಜಂತ್ರಿ, ಹಣಮಂತ ಮ್ಯಾಕೇರಿ, ಪ್ರಭು ಸಂಗಣ್ಣವರ, ರಾಹುಲ ದೊಡಮನಿ, ಎಂ.ಆರ್.ಪಡಗಾನೂರ, ಚಂದ್ರಕಾಂತ ಮಾನೆ, ಆರ್.ಕೆ.ವಾಲಿಕಾರ, ಪುಂಡಲೀಕ ಮಾನೆ ಸೇರಿದಂತೆ ಸಮುದಾಯದ ಪ್ರಮುಖರು ಹಾಗೂ ಸಿಬ್ಬಂದಿ ಇದ್ದರು.
ಉದಯರಶ್ಮಿ ದಿನಪತ್ರಿಕೆ ತಿಕೋಟಾ: ತುಬಚಿ ಬಬಲೇಶ್ವರ ಯೋಜನೆ ಮೂಲಕ ತಿಕೋಟಾ ಭಾಗದ ಜನ ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸಬೇಕು ಎಂದು ಒತ್ತಾಯಿಸಿ ರೈತರು ಇಂದು ದಿ.24 ಸೋಮವಾರ ತಿಕೋಟಾದಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ರೈತ ಮುಖಂಡರು ಕರೆನೀಡಿದ್ದಾರೆ.ಈ ಮೂಲಕ ಪ್ರಕಟಣೆಯಲ್ಲಿ ತಿಳಿಸಿರುವ ಅವರು, ತುಬಚಿ ಬಬಲೇಶ್ವರ ಯೋಜನೆಗೆ ಜಾಕವೆಲ್ ಸ್ಥಳದಲ್ಲಿ ಪದೇ ಪದೇ ಅಡ್ಡಿಪಡಿಸುತ್ತಿರುವ ಕೆಲವು ವ್ಯಕ್ತಿಗಳನ್ನು ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ತಿಕೋಟಾ ತಾಲ್ಲೂಕಿನ ರೈತರ ಪ್ರತಿಭಟನೆ ಹಾಗು ತಹಶೀಲ್ದಾರ ಅವರಿಗೆ ಮನವಿ ನೀಡಲಾಗುವುದು.ಎಲ್ಲ ರೈತರು ತಪ್ಪದೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಜಿ.ಪಂ ಮಾಜಿ ಅಧ್ಯಕ್ಷ ಸೋಮನಾಥ ಬಾಗಲಕೋಟ ಹಾಗೂ ರೈತ ಮುಖಂಡ ಯಾಕುಬ್ ಜತ್ತಿ ತಿಳಿಸಿದ್ದಾರೆ.
