ಕೊಚ್ಚಿ ಹೋಗಿರುವ ಬೇನಾಳ ಅಬ್ಬಿಹಾಳ ರಸ್ತೆ ಸೇತುವೆ ಬಾಕ್ಸ್ ಕಲ್ವರ್ಟ್
ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಆಲಮಟ್ಟಿ ಬೇನಾಳ ಆರ್.ಎಸ್.ಹಾಗೂ ಬೇನಾಳ ಎನ್.ಹೆಚ್.ಇತರ ಗ್ರಾಮಗಳಿಗೆ ಸಂಪರ್ಕ ರಸ್ತೆಯಾಗಿರುವ ಬೇನಾಳ ಅಬ್ಬಿಹಾಳ ರಸ್ತೆಗೆ ೨೦೧೨ ರಲ್ಲಿ ಕೃಷ್ಣಾ ಭಾಗ್ಯ ಜಲನಿಗಮದಿಂದ ಸುಮಾರು ೮.೫ ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾದ ಅಗಸರ ಹಳ್ಳ ರಸ್ತೆ ಸೇತುವೆಯ ಬಾಕ್ಸ್ ಕಲ್ವರ್ಟ್ ಗಳ ರಕ್ಷಣಾ ಗೋಡೆ ಹಳ್ಳದಲ್ಲಿ ರಭಸದಿಂದ ಹರಿಯುವ ನೀರಿಗೆ ಕೊಚ್ಚಿ ಹೋಗಿದೆ . ಬೇನಾಳ ಹತ್ತಿರ ಇರುವ ಪಾರ್ವತಿ ಕಟ್ಟೆ ಹಳ್ಳಕ್ಕೆ ಆಲಮಟ್ಟಿ ಜಲಾಶಯದ ಹಿನ್ನೀರು ಸುಮಾರು ಎಂಟು ತಿಂಗಳ ಕಾಲ ಇಲ್ಲಿ ಆವರಿಸಿರುತ್ತದೆ ಹಿನ್ನೀರಿನ ಮಧ್ಯ ಸುಮಾರು ಎರಡುವರೆ ಕಿಲೋಮೀಟರ್ ಉದ್ದದ ಮಣ್ಣಿನ ಏರಿ ನಿರ್ಮಿಸಿ ಸೇತುವೆ ನಿರ್ಮಿಸಲಾಗಿದ್ದು ಹಳ್ಳದ ನೀರು, ಮತ್ತು ಜಲಾಶಯದ ಹಿನ್ನೀರು ಸರಾಗವಾಗಿ ಹರಿಯಲು ಮಧ್ಯದಲ್ಲಿ ಆರು ಬೃಹತ್ ಬಾಕ್ಸ್ ಕಲ್ವರ್ಟ್ ನಿರ್ಮಿಸಿ ಎರಡು ಬದಿಗೆ ಕಾಂಕ್ರೀಟ್ ರಕ್ಷಣಾ ಗೋಡೆ ಮತ್ತು ದಿಪ್ ನಿರ್ಮಿಸಲಾಗಿದೆ.
ಪೆಬ್ರವರಿ ತಿಂಗಳಿನಿಂದ ಜೂನ್ ತಿಂಗಳ ಅಂತ್ಯದವರೆಗೆ ಈ ಸ್ಥಳದಲ್ಲಿ ಸಂಗ್ರಹವಾದ ಆಲಮಟ್ಟಿ ಜಲಾಶಯದ ಹಿನ್ನೀರು ಕಡಿಮೆಯಾಗುತ್ತದೆ ಏಪ್ರಿಲ್ ಮೇ,ಜೂನ್ ತಿಂಗಳಲ್ಲಿ ಬೀಳುವ ಅಕಾಲಿಕ ಮಳೆಯಿಂದ ಪಾರ್ವತಿ ಕಟ್ಟೆ ಹಳ್ಳಕ್ಕೆ ಪ್ರವಾಹ ಬಂದು ಈ ಸೇತುವೆ ಬಾಕ್ಸ್ ಕಲ್ವರ್ಟ್ ಗಳಿಗೆ, ಹಾಗೂ ಎರಡು ಬದಿಯ ರಕ್ಷಣಾ ಗೋಡೆಗಳಿಗೆ ಸಾಕಷ್ಟು ಹಾನಿಯಾಗಿ ಕೊಚ್ಚಿಕೊಂಡು ಹೋಗಿದೆ.ಈ ಬಗ್ಗೆ ಮೂರು ವರ್ಷಗಳ ಹಿಂದೆಯೆ ಕೃಷ್ಣಾ ಭಾಗ್ಯ ಜಲನಿಗಮದ ಆಲಮಟ್ಟಿ ವಲಯದ ಮುಖ್ಯ ಅಭಿಯಂತರರಿಗೆ ಮನವಿ ಕೊಂಡಿದ್ದು ಈ ರಸ್ತೆ ಸುಧಾರಣೆ ಯ ಪ್ರಸ್ತಾವನೆ ಯನ್ನು ಜಲಸಂಪನ್ಮೂಲ ಇಲಾಖೆಗೆ ಕಳುಹಿಸಲಾಗಿದೆ ಆದರೆ ಕಳೆದ ಮೂರು ವರ್ಷಗಳಿಂದ ಈ ಪ್ರಸ್ತಾವನೆ ಗೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿಲ್ಲ. ಆದ್ದರಿಂದ ಕೃಷ್ಣಾ ಭಾಗ್ಯ ಜಲನಿಗಮದ ಹಿರಿಯ ಅಧಿಕಾರಿಗಳು ಹಾನಿಯಾದ ಸ್ಥಳಕ್ಕೆ ತುರ್ತಾಗಿ ಬೇಟಿ ಮಾಡಿ ಇದೆ ಬೇಸಿಗೆಯಲ್ಲಿಯೆ ಹಾನಿಗೊಂಡ ಬಾಕ್ಸ್ ಕಲ್ವರ್ಟ್ ಗಳ ರಕ್ಷಣಾ ಗೋಡೆ ದುರಸ್ತಿ ಕೆಲಸ ಕೈಗೆತ್ತಿಕೊಳ್ಳ ಬೇಕೆಂದು ಕೃಷ್ಣಾ ತೀರ ಮುಳುಗಡೆ ಕ್ಷೇಮಾಭಿವೃದ್ಧಿ ಸಂಸ್ಥೆಯ ಯೋಜನಾ ಸಂಯೋಜಕ ಬಿ.ಹೆಚ್.ಗಣಿ. ಬೇನಾಳ ಆರ್.ಎಸ್.ಮತ್ತು ಬೇನಾಳ ಎನ್.ಹೆಚ್, ಗ್ರಾಮಗಳ ರೈತರುಗಳಾದ ಎಮ್.ಡಿ.ಪತ್ತೇಪೂರ. ಲಕ್ಷ್ಮಣ್ಣ ಮನಗೂಳಿ, ಬಸಪ್ಪ.ಸಿ.ಭಗವತಿ. ಬಸಲಿಂಗಪ್ಪ.ತಳವಾರ ಮತ್ತು ಅಭ್ಬಿಹಾಳ ಕಿರಿಶ್ಯಾಳ, ಗೋನಾಳ ಗ್ರಾಮಗಳ ಜನತೆ ಕೃಷ್ಣಾ ಭಾಗ್ಯ ಜಲನಿಗಮದ ಹಿರಿಯ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

