ತಿಕೋಟಾ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ.ಬಿ.ಪಾಟೀಲ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕನ್ನಡ ಅಭಿಮಾನಿಗಳು, ಭಾಷಿಕರು ಸಾಗರದಾಚೆಗೆ ವಿವಿಧ ದೇಶಗಳಲ್ಲಿ ಕನ್ನಡ ಮಾತುಗಳಿಂದ ತಮ್ಮ ಅಸ್ತಿತ್ವ ಉಳಿಸಿಕೊಂಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ.ಬಿ.ಪಾಟೀಲ ಹೇಳಿದರು.
ತಿಕೋಟಾದಲ್ಲಿ ನಡೆದ ತಿಕೋಟಾ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಿ ಎಲ್ ಡಿ ಈ ಸಂಸ್ಥೆಯು ದಾಸ ಸಾಹಿತ್ಯದ ೪೦ ಕೃತಿಗಳ ರಚನೆ ಮಾಡಿದ್ದೇವೆ. ವಿಜಯಪುರ ಆದಿಲ್ ಶಾಹಿ ಆಡಳಿತದ ಉದು೯ಭಾಷೆಯಿಂದ ಕನ್ನಡಕ್ಕೆ ಅನುವಾದ ಮಾಡಿದ ಕೀತಿ೯ ಬಿ ಎಲ್ ಡಿ ಈ ಸಂಸ್ಥೆಗೆ ಸಲ್ಲುತ್ತದೆ. ಹನ್ನೇರಡನೆಯ ಶತಮಾನದ ವಚನ ಸಾಹಿತ್ಯ ಜಗತ್ತಿಗೆ ಆಧ್ಯಾತ್ಮಿಕ ಜೀವನಕ್ಕೆ ಮೌಲ್ಯ ನೀಡಿದ್ದು ಶ್ಲಾಘನೀಯ. ಈ ಭಾಗದ ರೈತರಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಿ ನೀರು ತಂದಿರುವ ತೃಪ್ತಿ ನನಗಿದೆ ಎಂದು ಸಚಿವರು ನುಡಿದರು.
ಸಮ್ಮೇಳನ ಸವಾ೯ಧ್ಯಕ್ಷರಾದ ಚನ್ನಮಲ್ಲಿಕಾಜು೯ನ ಸ್ವಾಮೀಜಿ ಮಾತನಾಡಿ, ನಮ್ಮ ಭಾಷೆ, ನಡೆ-ನುಡಿ ನಮ್ಮ ಕಾಯಕ ತಾಯಿ ಭುವನೇಶ್ವರಿ ನೀಡಿದ ಫಲ. ನಮ್ಮ ಮಕ್ಕಳು ಕನ್ನಡದಲ್ಲಿ ಶಿಕ್ಷಣ ಪಡೆಯಬೇಕು. ಕನ್ನಡ ಮಾತನಾಡಬೇಕು. ಹನ್ನೇರಡನೆಯ ಶತಮಾನದಲ್ಲಿ ಬಸವ, ಆಲ್ಲಮ, ಅಕ್ಕಮಹಾದೇವಿ ವಚನಗಳ ಮೂಲಕ ಕನ್ನಡ ಸಾಹಿತ್ಯ ಪ್ರಸಿದ್ಧವಾಗಿದೆ, ಹೊನವಾಡದ ಕಲ್ಮೇಶ, ಸಿದ್ದಾಪೂರದ ರೇವಣಸಿದ್ದೇಶ್ವರ, ಅರಕೇರಿ ಅಮೋಘಸಿದ್ಧ, ಸೋಮದೇವರಹಟ್ಟಿ ಸೋಮಲಿಂಗೇಶ್ವರ, ತೋರವಿ ಲಕ್ಷ್ಮಿ ಹಾಗು ಉಗ್ರ ನರಸಿಂಹ ಹಾಗು ತಿಕೋಟಾ ಹಾಜಿ ಮಸ್ತಾನ ಮುಂತಾದ ದೇವಸ್ಥಾನಗಳು ಭಾವೈಕ್ಯತೆಯ ಸಂಕೇತವಾಗಿವೆ. ಕನಮಡಿಯ ಶ್ರೀ ಸಿದ್ಧೇಶ್ವರ ಶ್ರೀಗಳವರು ಹಾಗು ಬಿಜ್ಜರಗಿಯಲ್ಲಿ ಜನಿಸಿದ ಗಣಿತ ತಜ್ಞ ಬಾಸ್ಕರಾಚಾಯ೯ ಅವರನ್ನು ಸ್ಮರಿಸುವದು ಅತ್ಯವಶ್ಯ. ಜೋಳ, ದ್ರಾಕ್ಷಿ, ದಾಳಿಂಬೆ ಮುಂತಾದ ಬೆಳೆಗಳು ಪ್ರಸಿದ್ಧ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ದಾಸ ಸಾಹಿತ್ಯ. ವಚನ ಸಾಹಿತ್ಯ ಹಾಗು ಜಾನಪದ ಸಾಹಿತ್ಯ ಕನ್ನಡ ಸಾಹಿತ್ಯ ಬುನಾದಿ. ಕನ್ನಡ ಸಾಹಿತ್ಯ ಪರಿಷತ್ತು ಇಂದು ರಾಜ್ಯದಲ್ಲಿ ಎರಡನೇಯ ಸ್ಥಾನ ಪಡೆದುಕೊಂಡಿದೆ. ಎಲ್ಲಾ ಸಮ್ಮೇಳನಗಳ ಸವಾ೯ಧ್ಯಕ್ಷರನ್ನು ಪಾರದರ್ಶಕ ಹಾಗು ಪ್ರಾಮಾಣಿಕವಾಗಿ ಆಯ್ಕೆ ಮಾಡಿದ ಹೆಮ್ಮೆ ಪರಿಷತ್ತಿನದಾಗಿದೆ ಎಂದರು.
ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ರಾಮಯ್ಯ ಲಕ್ಕುಂಡಿಮಠ ಆಶಯ ನುಡಿಗಳನ್ನಾಡಿದರು.
ಹಿರೇಮಠ ಸಂಸ್ಥಾನ ಶಿವಬಸವ ಶಿವಾಚಾರ್ಯ ಹಾಗು ಬಾಬುರಾವ ಮಹಾರಾಜ ಸಾನಿಧ್ಯ ವಹಿಸಿದ್ದರು
ಎಂ ಎಸ್ ರುದ್ರಗೌಡ, ಸೋಮನಾಥ ಬಾಗಲಕೋಟ. ಸೀರಪಟೇಲ ಪಾಟೀಲ, ಆರ್ ಜಿ ಯರನಾಳ, ಭಾಗಿರತಿ ತೇಲಿ, ಶೋಭಾ ಹುಲ್ಯಾಳ, ಅಡಿವೆಪ್ಪ ಸಾಲಗಲ್, ಸುರೇಶ ಚಲವರ, ಆರ ಬಿ ದೇಸಾಯಿ, ಬಸಯ್ಯ ವಿಭೂತಿ ವೇದಿಕೆಯ ಮೇಲಿದ್ದರು.
ಭೀಮು ನಾಟೀಕಾರ, ಶರಣು ಕಂಠಿ, ಸಿದ್ದು ಗೌಡನ್ನವರ, ಯಾಕೂಬ ಜತ್ತಿ, ಶಿವಾನಂದ ಹಂಜಗಿ, ಸುನೀಲ ನಾಲಾ, ಶಾಂತಯ್ಯಾ ಹಿರೇಮಠ, ಸುಭಾಷ ಕೆಶೆಟ್ಟಿ, ಈರಪ್ಪಾ ಟಕ್ಕಳಕಿ, ಬಸವರಾಜ ಸಾರವಾಡ, ಸೂಯ೯ಕಾಂತ ಹೋಸಮನಿ, ವಿರೂಪಾಕ್ಷಪ್ಪ ಬಂಡಿ, ಎಸ್ ಬಿ ಬಿರಾದಾರ, ಗಣಪತಿ ಗಳವೆ, ಶ್ರೀಶೈಲ ಸೋಲಾಪೂರ ಸ್ವಾಗತಿಸಿ, ನಿರೂಪಿಸಿದರು. ಹಾಸಿಂಪೀರ ವಾಲಿಕಾರ ವಂದಿಸಿದರು.

