Author: editor.udayarashmi@gmail.com

ರಚನೆ- ಡಾ.ಶಶಿಕಾಂತ ಪಟ್ಟಣಪುಣೆ ಉದಯರಶ್ಮಿ ದಿನಪತ್ರಿಕೆ ಚೆಂದುಳ್ಳ ಚೆಲುವೆಯಅಂದುಳ್ಳ ಮುಖದಾಗಹಾಲ ಚೆಲ್ಲುವ ಚೆಲುವಮೂಡಿ ಬರುವ . ಬೆಳ್ಳಿಯ ಬಿಂದಿಗಿಹುಣ್ಣಿಮೆಯ ತಂಬಿಗಿಬೆಣ್ಣಿ ತುಂಬಿದ ಮೋಡಚದುರಿದವು ಮುಗಿಲಾಗ ಪಡುವಲ ದಿಕ್ಕಿಗೆಸೂರ್ಯನು ಮುಳಗ್ಯಾನಹಕ್ಕಿ ಪಕ್ಷಿಗಳುಗೂಡೊಳಗ ಮಲಗ್ಯಾವ ಚುಕ್ಕಿ ತಾರೆಯರೆಲ್ಲತವರಿಗೆ ಹೋಗ್ಯಾರಕತ್ತಲ ಕಡೆಗಣಿಸಿಚೆಂದಿರನು ಬಂದಾನ ಹಸಿರು ಭೂಸಿರಿಯುಸೂಸುವಾ ತಂಗಾಳಿಕನಸುಗಳ ಖನಿಜಬಿಚ್ಯಾವೋ ಎದೆಯಾಗ ಬಿಳಿ ಸೀರಿ ಬಾಲೆಯರುಆರತಿ ಎತ್ತ್ಯಾರೋಸೋಬಾನ ಹಾಡ್ಯಾರೋಶರಣರ ನೆನೆಯುತ ಚೆಂದುಳ್ಳ ಚೆಲುವೆಯಅಂದುಳ್ಳ ಮುಖದಾಗಹಾಲ ಚೆಲ್ಲುವ ಚೆಲುವಮೂಡಿ ಬರುವ

Read More

ಲೇಖನ- ಜಯಶ್ರೀ .ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಬದುಕು ಬದಲಾಗುತ್ತಲೇ ಇರುತ್ತದೆ ನಿನ್ನೆಯಂತೆ ಇಂದು ಇಲ್ಲ. ಇಂದಿನಂತೆ ನಾಳೆ ಇರುವುದಿಲ್ಲ. ನಮಗೆ ಇಷ್ಟವಿರಲಿ ಬಿಡಲಿ ಅದು ಬದಲಾಗುತ್ತಲೇ ಇರುತ್ತದೆ. ನಮ್ಮ ಭಾವ ಬಂಧ ಸಂಬಂಧಗಳು ಬದಲಾಗುತ್ತಲೇ ಇರುತ್ತವೆ. ಬದುಕಲು ಬೇಕಾಗಿರುವುದು ಉತ್ತಮ ಆರೋಗ್ಯ, ತಲೆ ಮೇಲೊಂದು ಸೂರು, ತುಂಬಿದ ಜೇಬು. ಇವೆಲ್ಲ ಇದ್ದರೂ ಒಂದಿಷ್ಟು ಪ್ರೀತಿ ತುಂಬುವ ಜೀವವೊಂದು ಜತೆಗೆ ಇರದಿದ್ದರೆ, ಇವೆಲ್ಲವು ಇದ್ದೂ ಉಪಯೋಗವಿಲ್ಲ. ಕೋಟಿ ಕೋಟಿ ರೂಪಾಯಿ, ಅಪರೂಪದ ರೂಪ ಕೊಡದ ಆನಂದ ಒಂದು ಹಿಡಿ ಪ್ರೀತಿ ನೀಡಬಲ್ಲದು. ಮನದೊಡಲಲ್ಲಿ ಸಂತಸ ಸಂತೃಪ್ತಿ ತುಂಬಬಲ್ಲದು. ಪ್ರೀತಿಸುವ ಜೀವಗಳು ಜತೆಗಿದ್ದರೆ ಜತೆಗೆ ಆನಂದದ ಸಾಗರವೇ ಇದ್ದಂತೆ. ಸೊಗಸಿಗೆ ನೆಲೆಯಿದ್ದಂತೆ. ಸಿಹಿಗೆ ಸವಿಯಿದ್ದಂತೆ ಚೆಂದದ ಚೆಲುವೆಗೆ ಚೆಲುವಿದ್ದಂತೆ.ಜೀವನವೆಂಬುದು ನಿತ್ಯ ನೂತನ. ಕಣ್ಮನ ಸೆಳೆಯುವ ನಿಸರ್ಗ, ನದಿವನಗಳ ಸುಂದರ ವಿಹಂಗಮ ನೋಟ ಪ್ರಕೃತಿಯಲ್ಲಿಯ ಪ್ರತಿಯೊಂದನ್ನು ಖುಷಿಯಿಂದ ನೋಡಲು, ಆಸ್ವಾದಿಸಲು ಸಾಧ್ಯವಾಗುವುದು ಮನದಲ್ಲಿ ಪ್ರೀತಿಯ ಮಡಿಲು ಭರಪೂರ ತುಂಬಿದಾಗ ಮಾತ್ರ. ಪ್ರೀತಿಯ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಅಭಿವೃದ್ದಿ ಶಿಕ್ಷಣದಿಂದ ಮಾತ್ರ ಸಾಧ್ಯ. ಶಿಕ್ಷಣ ವ್ಯಕ್ತಿಯ ವೈಯಕ್ತಿಕ, ಕೌಟುಂಬಿಕ, ಮತ್ತು ಸಾಮಾಜಿಕ ಜೀವನ ಸಾಧಾರಣದಿಂದ ಅಸಾಧಾರಣ ಮಟ್ಟಕ್ಕೆ ಕೊಂಡೆೊಯುತ್ತಿದೆ. ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.ತಾಲೂಕಿನ ಹಳಗುಣಕಿ ಗ್ರಾಮದ ಸರಕಾರಿ ಕರ್ನಾಟಕ ಪಬ್ಲಿಕ ಶಾಲೆ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.ಶಾಲೆಯಲ್ಲಿ ಒಂದನೆಯ ತರಗತಿಯಿಂದ ಹನ್ನೆರಡನೆಯ ತರಗತಿ ವರೆಗೆ ಇಂಗ್ಲೀಷ ಮತ್ತು ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುವದು ಎಂದರು.ಶೈಕ್ಷಣಿಕ ಅಭಿವೃದ್ದಿ ಮಾಡುವ ಉದ್ದೇಶದಿಂದ ಹಳಗುಣಕಿ ಗ್ರಾಮದಲ್ಲಿ ಸರಕಾರಿ ಪ್ರೌಢ ಶಾಲೆ ಹಾಗೂ ವಸತಿ ನಿಲಯ ಅತ್ಯಂತ ಗುಣಮಟ್ಟದಾಗಿದೆ. ಈ ಹಿಂದೆ ಡಾ.ಬಿ.ಆರ್ ಅಂಬೇಡ್ಕರವರ ಪ್ರತಿಮೆ ಆನಾವರಣಗೊಳಿಸಿ ಅನೇಕ ಸಚಿವರನ್ನು ಕರೆಯಿಸಿ ಈ ಭಾಗದ ಜ್ವಲಂತ ಸಮಸ್ಯಗಳನ್ನು ಮನವರಿಕೆ ಮಾಡಲಾಗಿದೆ. ಇಂಡಿ ಪಟ್ಟಣದಲ್ಲಿ ಶೈಕ್ಷಣಿಕ ಕಾಶಿ ಮಾಡಿ ಈ ಭಾಗದ ವಿಧ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂದರು.ಅಭಿನವ ಸಿದ್ದಾರೂಢ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು.ಸುಂಗಟ್ಯಾಳ ಗುರುಗಳು ಮಾತನಾಡಿದರು.ಶಾಲೆ ಮುಖ್ಯಗುರು ಆರ್.ಆರ್ ಬಗಲಿ, ಗ್ರಾ.ಪಂ ಅಧ್ಯಕ್ಷ ಸಿದರಾಯಗೌಡ ಬಿರಾದಾರ, ಉಪಾಧ್ಯಕ್ಷೆ…

Read More

ಉದಯರಶ್ಮಿ ದಿನಪತ್ರಿಕೆ ತಿಕೋಟಾ: ತಾಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತಿಕೋಟಾ ನೂತನ ಕಲಾ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕ ಡಾ.ಸಂತೋಷ ಬಿ.ನವಲಗುಂದ ಅವರು ರಚಿಸಿದ “ಮುಂಜಾನೆಗೊಂದು ಚೈತನ್ಯ ಬಿಂದು'(ಚಿಂತನಗಳ ವಿಚಾರ ಲಹರಿ) ಎಂಬ ಕಿರು ಪುಸ್ತಕವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲರು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ, ಸಮ್ಮೇಳನದ ಸರ್ವಾಧ್ಯಕ್ಷ ಚೆನ್ನಮಲ್ಲಿಕಾರ್ಜುನ ಮಹಾಸ್ವಾಮಿಗಳು ವಿರಕ್ತಮಠ ತಿಕೋಟಾ, ಹಿರೇಮಠದ ಶಿವಬಸವ ಶಿವಾಚಾರ್ಯ ಮಹಾಸ್ವಾಮಿಗಳು ತಿಕೋಟಾ, ಹೊನವಾಡದ ಬಾಬುರಾವ ಮಹಾರಾಜರು, ಜಿಲ್ಲಾ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲೀಕಾರ, ತಿಕೋಟಾ ತಾಲೂಕು ಕಸಾಪ ಅಧ್ಯಕ್ಷ ಸಿದ್ದರಾಮಯ್ಯ ಲಕ್ಕುಂಡಿಮಠ, ತಹಸೀಲ್ದಾರ್ ಸುರೇಶ ಚವಲರ, ಮುಖಂಡರಾದ ಬಸಯ್ಯ ವಿಭೂತಿ, ಆರ್.ಬಿ.ದೇಸಾಯಿ, ಸೋಮಶೇಖರ ಜತ್ತಿ, ಅಡಿವೆಪ್ಪ ಸಾಲಗಲ್, ಕೆಪಿಸಿಸಿ ಸದಸ್ಯ ಪೀರ್ ಪಟೇಲ್, ಮಾಜಿ ಜಿಪಂ ಸದಸ್ಯೆ ಶೋಭಾ ಹುಲ್ಯಾಳ, ಮಾಜಿ ಪಿಕೆಪಿಎಸ್ ಅಧ್ಯಕ್ಷೆ ಭಾಗೀರಥಿ ತೇಲಿ, ಆರ್.ಜಿ.ಯರನಾಳ, ವಿಜುಗೌಡ ಪಾಟೀಲ, ಎಸ್.ಪಿ.ಪಾಟೀಲ, ಗ್ರಾಮದ ಮುಖಂಡರು, ಕಸಾಪದ ಪದಾಧಿಕಾರಿಗಳು ಇದ್ದರು. ಕನ್ನಡಾಭಿಮಾನಿಗಳು, ಶಾಲಾ ಕಾಲೇಜು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ತಿಕೋಟಾ: ತಾಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತಿಕೋಟಾ ನೂತನ ಕಲಾ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕ ಡಾ.ಸಂತೋಷ ಬಿ.ನವಲಗುಂದ ಅವರು ರಚಿಸಿದ “ಮುಂಜಾನೆಗೊಂದು ಚೈತನ್ಯ ಬಿಂದು'(ಚಿಂತನಗಳ ವಿಚಾರ ಲಹರಿ) ಎಂಬ ಕಿರು ಪುಸ್ತಕವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲರು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ, ಸಮ್ಮೇಳನದ ಸರ್ವಾಧ್ಯಕ್ಷ ಚೆನ್ನಮಲ್ಲಿಕಾರ್ಜುನ ಮಹಾಸ್ವಾಮಿಗಳು ವಿರಕ್ತಮಠ ತಿಕೋಟಾ, ಹಿರೇಮಠದ ಶಿವಬಸವ ಶಿವಾಚಾರ್ಯ ಮಹಾಸ್ವಾಮಿಗಳು ತಿಕೋಟಾ, ಹೊನವಾಡದ ಬಾಬುರಾವ ಮಹಾರಾಜರು, ಜಿಲ್ಲಾ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲೀಕಾರ, ತಿಕೋಟಾ ತಾಲೂಕು ಕಸಾಪ ಅಧ್ಯಕ್ಷ ಸಿದ್ದರಾಮಯ್ಯ ಲಕ್ಕುಂಡಿಮಠ, ತಹಸೀಲ್ದಾರ್ ಸುರೇಶ ಚವಲರ, ಮುಖಂಡರಾದ ಬಸಯ್ಯ ವಿಭೂತಿ, ಆರ್.ಬಿ.ದೇಸಾಯಿ, ಸೋಮಶೇಖರ ಜತ್ತಿ, ಅಡಿವೆಪ್ಪ ಸಾಲಗಲ್, ಕೆಪಿಸಿಸಿ ಸದಸ್ಯ ಪೀರ್ ಪಟೇಲ್, ಮಾಜಿ ಜಿಪಂ ಸದಸ್ಯೆ ಶೋಭಾ ಹುಲ್ಯಾಳ, ಮಾಜಿ ಪಿಕೆಪಿಎಸ್ ಅಧ್ಯಕ್ಷೆ ಭಾಗೀರಥಿ ತೇಲಿ, ಆರ್.ಜಿ.ಯರನಾಳ, ವಿಜುಗೌಡ ಪಾಟೀಲ, ಎಸ್.ಪಿ.ಪಾಟೀಲ, ಗ್ರಾಮದ ಮುಖಂಡರು, ಕಸಾಪದ ಪದಾಧಿಕಾರಿಗಳು ಇದ್ದರು. ಕನ್ನಡಾಭಿಮಾನಿಗಳು, ಶಾಲಾ ಕಾಲೇಜು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Read More

ರಾಷ್ಟ್ರೀಯ ಮೀನುಗಾರರ ಸಂಘದ ರಾಜ್ಯಾಧ್ಯಕ್ಷ ಮಂಜುನಾಥ ಸುಣಗಾರ ಆಗ್ರಹ | ಕೇಂದ್ರ ಜಲಶಕ್ತಿ ಇಲಾಖೆ ರಾಜ್ಯ ಖಾತೆ ಸಚಿವ ಡಾ.ರಾಜಭೂಷಣ್ ಚೌಧರಿ ಅವರಿಗೆ ಮನವಿ ಉದಯರಶ್ಮಿ ದಿನಪತ್ರಿಕೆ ಬೆಂಗಳೂರು: ಹಿಂದುಳಿದ ವರ್ಗಗಳಲ್ಲಿ ಅದರಲ್ಲೂ ಮೀನುಗಾರರಿಗೆ ಮೀಸಲಾತಿಯಲ್ಲಿ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸುವ ಕುರಿತು ನಿರಾವರಿ ಇಲಾಖೆಗಳ ವ್ಯಾಪ್ತಿಗೆ ಬರುವ ಕೆರೆಗಳನ್ನು ಸಾಂಪ್ರದಾಯಿಕ ಮೀನುಗಾರರಿಗೆ ಗುತ್ತಿಗೆ ನೀಡುವಂತೆ ರಾಷ್ಟ್ರೀಯ ಮೀನುಗಾರರ ಸಂಘದ ರಾಜ್ಯಾಧ್ಯಕ್ಷ ಮಂಜುನಾಥ ಸುಣಗಾರ ಆಗ್ರಹಿಸಿದರು.ಕೇಂದ್ರದ ಜಲಶಕ್ತಿ ಇಲಾಖೆಯ ರಾಜ್ಯ ಖಾತೆ ಸಚಿವ ಡಾ.ರಾಜಭೂಷಣ್ ಚೌಧರಿ ಅವರನ್ನು ದೆಹಲಿಯ ಅವರ ನಿವಾಸದಲ್ಲಿ ತಮ್ಮ ನೇತೃತ್ವದ ನಿಯೋಗದೊಂದಿಗೆ ಭೇಟಿಯಾಗಿ ಅವರು ಮಾತನಾಡಿದರು.ಇದೇ ವೇಳೆ ಗುತ್ತಿಗೆ ನೀಡುವ ಸಂದರ್ಭದಲ್ಲಿ ಶೇಕಡಾ 75% ಮೀಸಲಾತಿಯನ್ನು ಸಾಂಪ್ರದಾಯಿಕ ಮೀನುಗಾರ ಸಮುದಾಯದವರಿಗೆ ನೀಡಬೇಕೆಂದು ಮನವಿ ಸಲ್ಲಿಸಲಾಯಿತು ಹಾಗೂ ಮೀನುಗಾರಿಕೆಯಲ್ಲಿ e procurement ಅನ್ನು ರದ್ದುಪಡಿಸಿ ನೇರವಾಗಿ ಸಾಂಪ್ರದಾಯಿಕ ಮೀನುಗಾರರಾದ ಗಂಗಾಮತಸ್ಥರು, ಬೆಸ್ತರು, ಕೊಲಿ ಕಬ್ಬಲಿಗ, ಮೊಗವೀರ ಸಮುದಾಯದ ಸಂಘಗಳಿಗೆ ಗುತ್ತಿಗೆ ಹಕ್ಕನ್ನು ನೀಡುವುದು ಮತ್ತು ಅವರುಗಳಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸುವಂತೆ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ ಅವರು ಜಿಲ್ಲಾ ಪಂಚಾಯಿತಿ ಹಾಗೂ ಗ್ರಾಮೀಣ ಮತ್ತು ಚಿಕ್ಕ ಉದ್ಯಮ ಇಲಾಖೆ ವತಿಯಿಂದ 2024-25 ನೇ ವರ್ಷದಲ್ಲಿ ಮಂಜೂರಾದ ಉಚಿತ ವಿದ್ಯುತ್ ಚಾಲಿತ ಹೊಲಿಗೆ ಯಂತ್ರಗಳನ್ನು ಫಲಿನುಭವಿಗಳಿಗೆ ವಿತರಿಸಿದರು.ಸೋಮವಾರ ನಗರದಲ್ಲಿರುವ ಗೃಹ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಿಕೋಟಾ ಮತ್ತು ಬಬಲೇಶ್ವರ ತಾಲೂಕುಗಳ ಒಟ್ಟು ೭೬ ವೃತ್ತಿಪರ ಅರ್ಹ ಮಹಿಳಾ ಕುಶಲಕರ್ಮಿಗಳಿಗೆ ಅವರು ವಿದ್ಯುತ್ ಚಾಲಿತ ಹೊಲಿಗೆ ಯಂತ್ರಗಳನ್ನು ವಿತರಿಸಿದರು.ಬಳಿಕ ಮಾತನಾಡಿದ ಸಚಿವರು, ಈ ಯಂತ್ರಗಳನ್ನು ಬಳಸಿಕೊಂಡು ಮಹಿಳೆಯರು ಸ್ವಾಭಿಮಾನಿಯಾಗಿ ಬದುಕು ಕಟ್ಟಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಈ ಸಂದರ್ಭದಲ್ಲಿ ಜಿ.ಪಂ.ಹಾಗೂ ಗ್ರಾಮೀಣ ಮತ್ತು ಚಿಕ್ಕ ಉದ್ಯಮ ಇಲಾಖೆ ಉಪನಿರ್ದೇಶಕ ಎಸ್. ಎಂ. ಪಾಟೀಲ ಸೇರಿದಂತೆ ಫಲಾನುಭವಿಗಳು ಉಪಸ್ಥಿತರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪರೀಕ್ಷೆ ಬರೆಯಲು ತೆರಳುವಾಗ ರಸ್ತೆ ಅಪಘಾತದಲ್ಲಿ ಗಾಯಗೊಂಡು ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 10ನೇ ತರಗತಿ ವಿದ್ಯಾರ್ಥಿನಿಯರನ್ನು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.ಸೋಮವಾರ ಜಿಲ್ಲೆಯ ಕುಮಟಗಿ ತಾಂಡಾದ 10ನೇ ತರಗತಿಯ ವಿದ್ಯಾರ್ಥಿಗಳಾದ ಐಶ್ವರ್ಯಾ ಚವ್ಹಾಣ, ಪ್ರೀತಿ ಚವ್ಹಾಣ ಮತ್ತು ಪಕ್ಕದ ಮನೆಯ ಶ್ವೇತಾ ರಾಠೋಡ ಕಗ್ಗೋಡ ಪ್ರೌಢಶಾಲಾ ಕೇಂದ್ರಕ್ಕೆ ತೆರಳುವಾಗ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದರು. ಅವರನ್ನು ಚಿಕಿತ್ಸೆಗಾಗಿ ವಿಜಯಪುರ ನಗರದ ಬಿ.ಎಲ್.ಡಿ.ಇ ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ವಿಷಯ ತಿಳಿದ ತಕ್ಷಣ ಸಚಿವರು ಬಿ.ಎಲ್.ಡಿ.ಇ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿನಿಯರನ್ನು ಭೇಟಿಯಾಗಿ ವಿದ್ಯಾರ್ಥಿನಿಯರಿಗೆ ಧೈರ್ಯ ತುಂಬಿ, ಶೀಘ್ರ ಗುಣಮುಖರಾಗುವಂತೆ ಹಾರೈಸಿದರು. ಅಲ್ಲದೇ, ವಿದ್ಯಾರ್ಥಿಗಳು ಸಂಪೂರ್ಣ ಚೇತರಿಸಿಕೊಳ್ಳುವವರೆಗೆ ಅವರಿಗೆ ಉಚಿತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚನೆ ನೀಡಿದರು.ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರು ಉಪಸ್ಥಿತರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ಕೊಲ್ದಾರ: ಪಟ್ಟಣದಿಂದ ಬೆಳಗಾವಿ ಜಿಲ್ಲೆಯ ಯಡೂರ ಶ್ರೀ ವೀರಭದ್ರೇಶ್ವರ ದೇವಸ್ಥಾನದವರೆಗೆ ಯಶಸ್ವಿ 31ನೇ ವರ್ಷದ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಮಾರ್ಚ್ 25 ರಂದು ಬೆಳಿಗ್ಗೆ 8 ಗಂಟೆಗೆ ಕೊಲ್ದಾರದ ಶ್ರೀಶೈಲ ರೇವಣಪ್ಪ ಮೇಲಗಿರಿ ಇವರ ಮನೆಯಿಂದ ಪಾದಯಾತ್ರೆಯು ಆರಂಭಗೊಂಡು ಮುಂಡಗನೂರು, ಆಸಂಗಿ, ಆಲಕನೂರು ಮಾರ್ಗವಾಗಿ ಮಾರ್ಚ್ 28 ರಂದು ಯಡೂರ ವೀರಭದ್ರೇಶ್ವರ ದೇವಸ್ಥಾನ ತಲುಪಲಿದ್ದಾರೆ ಎಂದು ಈರಣ್ಣ ಔರಸಂಗ, ವ್ಹಿ.ಎಂ. ಶ್ಯಾವಿಗೊಂಡ, ರಾಚಯ್ಯ ಗಣಕುಮಾರ ಸಿ.ಎಂ. ಗಣಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳವ ಭಕ್ತರು ಈರಣ್ಣ ಔರಸಂಗ – 9986330925, ವ್ಹಿ.ಎಂ. ಶ್ಯಾವಿಗೊಂಡ 9740630453, ಈರಯ್ಯ ಹಳ್ಳಿ – 7019575172, ಸಿ.ಎಂ. ಗಣಕುಮಾರ 9008692092 ದೂರವಾಣಿಗೆ ಸಂಪರ್ಕಿಸಬೇಕು ಎಂದು ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಸಮಾಜದ ಕಟ್ಟಕಡೆಯ ಮಹಿಳೆಯರಿಗಾಗಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್.ಆರ್.ಎಲ್.ಎಮ್) ಯೋಜನೆ ಬಹಳ ಸಹಕಾರಿಯಾಗಿದೆ ಎಂದು ವಿಜಯಪುರ ಜಿಲ್ಲಾ ಪಂಚಾಯತಿ ಯೋಜನಾ ನಿರ್ದೇಶಕ ಬಿ.ಎಸ್. ರಾಠೋಡ ಹೇಳಿದರು.ಪಟ್ಟಣದ ಸಂತೆ ಮಾರುಕಟ್ಟೆ ಸ್ಥಳದ ಹತ್ತಿರ ಜಿಲ್ಲಾ ಪಂಚಾಯತಿ ವಿಜಯಪುರ ಹಾಗೂ ತಾಲೂಕ ಪಂಚಾಯತಿ ಕೊಲ್ಹಾರ ಇವರ ಸಹಯೋಗದಲ್ಲಿ ಎನ್.ಆರ್.ಎಲ್.ಎಮ್ ಯೋಜನೆಯಡಿ ಸಂಜೀವಿನಿ ಮಾಸಿಕ ಸಂತೆ ಮೇಳ ಹಾಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಈ ಯೋಜನೆಯಲ್ಲಿ ಮಹಿಳೆಯರಿಗೆ ಉನ್ನತ ತರಬೇತಿಗಳನ್ನು ನೀಡಿ ಸಾಲ ಸೌಲಭ್ಯಗಳನ್ನು ನೀಡಿ ಸ್ವಂತ ಉದ್ಯೋಗ ಮಾಡಲು ಹಾಗೂ ಸ್ವ ಸಹಾಯ ಗುಂಪಿನ ಸದಸ್ಯರುಗಳು ಸೇರಿ ಉದ್ಯಮ ಪ್ರಾರಂಭಿಸಲು ಎಲ್ಲ ರೀತಿಯ ಅನುಕೂಲಗಳನ್ನು ಕಲ್ಪಿಸಿ ಕೊಡಲಾಗುವುದು ಎಲ್ಲ ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.ತಾಪಂ ಇಓ ಸುನೀಲ ಮದ್ದಿನ ಅಧ್ಯಕ್ಷತೆ ವಹಿಸಿ ಮಾತನಾಡಿ ಮಹಿಳೆಯರು ಸ್ವಾವಲಂಬನೆ ಬದುಕು ರೂಪಿಸಿಕೊಳ್ಳುವುದರಲ್ಲಿ ಹಾಗೂ ಅವರ ಆರ್ಥಿಕ ಜೀವನ…

Read More