ಉದಯರಶ್ಮಿ ದಿನಪತ್ರಿಕೆ
ಕೊಲ್ದಾರ: ಪಟ್ಟಣದಿಂದ ಬೆಳಗಾವಿ ಜಿಲ್ಲೆಯ ಯಡೂರ ಶ್ರೀ ವೀರಭದ್ರೇಶ್ವರ ದೇವಸ್ಥಾನದವರೆಗೆ ಯಶಸ್ವಿ 31ನೇ ವರ್ಷದ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಮಾರ್ಚ್ 25 ರಂದು ಬೆಳಿಗ್ಗೆ 8 ಗಂಟೆಗೆ ಕೊಲ್ದಾರದ ಶ್ರೀಶೈಲ ರೇವಣಪ್ಪ ಮೇಲಗಿರಿ ಇವರ ಮನೆಯಿಂದ ಪಾದಯಾತ್ರೆಯು ಆರಂಭಗೊಂಡು ಮುಂಡಗನೂರು, ಆಸಂಗಿ, ಆಲಕನೂರು ಮಾರ್ಗವಾಗಿ ಮಾರ್ಚ್ 28 ರಂದು ಯಡೂರ ವೀರಭದ್ರೇಶ್ವರ ದೇವಸ್ಥಾನ ತಲುಪಲಿದ್ದಾರೆ ಎಂದು ಈರಣ್ಣ ಔರಸಂಗ, ವ್ಹಿ.ಎಂ. ಶ್ಯಾವಿಗೊಂಡ, ರಾಚಯ್ಯ ಗಣಕುಮಾರ ಸಿ.ಎಂ. ಗಣಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳವ ಭಕ್ತರು ಈರಣ್ಣ ಔರಸಂಗ – 9986330925, ವ್ಹಿ.ಎಂ. ಶ್ಯಾವಿಗೊಂಡ 9740630453, ಈರಯ್ಯ ಹಳ್ಳಿ – 7019575172, ಸಿ.ಎಂ. ಗಣಕುಮಾರ 9008692092 ದೂರವಾಣಿಗೆ ಸಂಪರ್ಕಿಸಬೇಕು ಎಂದು ತಿಳಿಸಿದ್ದಾರೆ.

