Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಕಲಕೇರಿ: ಸಮಿಪದ ತಿಳಗೂಳ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ೧೧ ಅಡಿ ಎತ್ತರದ ಅಶ್ವಾರೂಡ ಬಸವಣ್ಣನವರ ಮೂರ್ತಿ ಪ್ರತಿಸ್ಥಾಪನೆ,ಧರ್ಮ ಸಭೆ,ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಮೇ.೪ ರಂದು ರವಿವಾರ ಸಂಜೆ ೪ ಘಂಟೆಗೆ ನಡೆಯಲಿದೆ.ಕಾರ್ಯಕ್ರಮದ ನಿಮಿತ್ಯವಾಗಿ ಮೇ.೪ ರಂದು ಬೆಳಿಗ್ಗೆ ೮ ಘಂಟೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಗಜ್ಯೋತಿ ಬಸವೆಶ್ವರರ ಭಾವಚಿತ್ರದ ಮೆರವಣಿಗೆ ನಡೆಯಲಿದ್ದು, ಸಂಜೆ ೪ ಘಂಟೆಗೆ ನೂತನವಾಗಿ ನಿರ್ಮಿಸಿದ ಅಶ್ವಾರೂಡ ಮೂರ್ತಿಯ ಪ್ರತಿಸ್ಥಾಪನೆ ಹಾಗೂ ಲೋಕಾರ್ಪಣೆ, ಹಾಗೂ ಧರ್ಮ ಸಭೆ ಕಾರ್ಯಕ್ರಮ ನಡೆಯಲಿದ್ದು, ಚಿಗರಹಳ್ಳಿಯ ಜಗದ್ಗುರು ಮರುಳಶಂಕರ ದೇವರ ಗುರುಪೀಠದ ಸಿದ್ದಬಸವ ಕಭೀರ ಮಹಾಸ್ವಾಮಿಗಳು ಹಾಗೂ ತಿಳಗೂಳದ ಭ್ರಹ್ಮ ವಿಧ್ಯಾಶ್ರಮದ ಮಹೇಶ್ವರಾನಂದ ಸ್ವಾಮಿಗಳು ಸಾನಿಧ್ಯವನ್ನು ವಹಿಸುವರು, ಮಹಾಂತಯ್ಯ ಹಿರೇಮಠ ಅಧ್ಯಕ್ಷತೆ ವಹಿಸಲಿದ್ದು, ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಕುದರಿಸಾಲೋಡಗಿ ಕಾರ್ಯಕ್ರಮವನ್ನು ಉದ್ಘಾಟಿಸುವರು,ವಿಶೇಷ ಭಾಷಣಕಾರರಾಗಿ ಬೆಂಗಳೂರಿನ ಖ್ಯಾತ ವಾಗ್ಮಿ ಹಾರಿಕಾ ಮಂಜುನಾಥ ಭಾಗಿಯಾಗುವರು.ಮುಖ್ಯ ಅಥಿತಿಗಳಾಗಿ ಮಾಜಿ ಶಾಸಕರಾದ ಸೋಮನಗೌಡ ಪಾಟೀಲ ಸಾಸನೂರ, ಶರಣಪ್ಪ ಸುಣಗಾರ, ಅನುಗ್ರಹ ಕಣ್ಣಿನ ಆಸ್ಪತ್ರೆಯ ಡಾ.ಪ್ರಭುಗೌಡ…
ವಿಶ್ವಪ್ರಕಾಶ ಮಲಗೊಂಡ ನಟನೆಯ ಕಿರುಚಿತ್ರಕ್ಕೆ ಪ್ರಶಸ್ತಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ನಟ ನಿರ್ದೇಶಕ ವಿಶ್ವಪ್ರಕಾಶ ಟಿ ಮಲಗೊಂಡ ನಟಿಸಿ ನಿರ್ದೇಶಿಸಿರುವ “ವಿದ್ಯಾ ಲವ್ ವಿಶ್ವ” ಕಿರುಚಿತ್ರಕ್ಕೆ “ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿ” (ಬೆಸ್ಟ್ ಶಾರ್ಟ ಫೀಲಂ ಅವಾರ್ಡ) ಲಭಿಸಿದೆ.ಇತ್ತೀಚೆಗೆ ಕೊಪ್ಪಳ ನಗರದ ಜೆಕೆಎಸ್ ಹೊಟೇಲ್ ನಲ್ಲಿ ಕವಿತಾ ಮೀಡಿಯಾ ಸೋರ್ಸ್ ಆಯೋಜಿಸಿದ್ದ ಕಿರುಚಿತ್ರೋತ್ಸವ ಸಿಜನ್ -2 ರ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗಿದ್ದು, ಅದರಲ್ಲಿ ಅತ್ಯುತ್ತಮ ಕಿರುಚಿತ್ರ ವಿಭಾಗದಲ್ಲಿ ವಿದ್ಯಾ ವಿಶ್ವ ಕಿರುಚಿತ್ರ ಪ್ರಶಸ್ತಿ ಪಡೆದಿದೆ.ಕಿರುಚಿತ್ರೋತ್ಸವದಲ್ಲಿ ನಿರ್ದೇಶಕ ಬಸವರಾಜ ಕೊಪ್ಪಳ, ಪತ್ರಕರ್ತ ಶರಣಬಸವ ಹುಲಿಹೈದರ, ಕಿರುಚಿತ್ರೋತ್ಸವ ನಿಕಟಪೂರ್ವ ಅಧ್ಯಕ್ಷ ಡಾ.ಮಹಾಂತೇಶ ಮಲ್ಲನಗೌಡರ, ಡಾ.ಸಿದ್ದಲಿಂಗಪ್ಪ ಕೊಟ್ನೇಕಲ್, ಶರಣಬಸಪ್ಪ ಬಿಳಿಯಲಿ, ಭೀರಪ್ಪ ಅಂಡಗಿ, ನಾಗರಾಜ ಗುಡಿ, ಮುತ್ತಣ್ಣ ಧರ್ಮಂತಿ, ಬಿ ಎನ್ ಹೊರಪೇಟಿ, ಪ್ರೀಯದರ್ಶಿನಿ ಮುಂಡರಗಿಮಠ, ಕೆ ಎಂ ಖಲೀಲ್ ಕಾರ್ಕಳ, ನಟ ಪ್ರೀತಮ್ ವೇದಿಕೆ ಮೇಲಿದ್ದರು.
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಸಾಂಪ್ರದಾಯಿಕವಾಗಿ ಗಾಣದಿಂದ ಎಣ್ಣೆ ತೆಗೆಯುವ ಬೆಂಗಳೂರು ದಕ್ಷಿಣ ಜಿಲ್ಲೆಯ ವಾಸಿಗಳಾದ ಶಿವನಗೌಡ ಜಿ ಪಾಟೀಲ್ ರವರು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ದೊಡ್ಡಬಳ್ಳಾಪುರ ವತಿಯಿಂದ ಪ್ರತಿ ವರ್ಷ ವಿವಿಧ ಕ್ಷೇತ್ರದ ಸಾಧಕರಿಗೆ ನೀಡುವ ರಾಜ್ಯ ಮಟ್ಟದ ಕಾಯಕ ರತ್ನ ಪ್ರಶಸ್ತಿ ಪಡೆದುಕೊಂಡಿದ್ದಾರೆ ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಸಂಸ್ಥಾಪಕ ಅಧ್ಯಕ್ಷರಾಗಿರುವ ಡಾ ಹುಲಿಕಲ್ ನಟರಾಜ್ ತಿಳಿಸಿದರು.ಮೇ 1 ಗುರುವಾರ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಸಮೀಪದ ರಬಕವಿಯ ಶ್ರೀ ಶಿವದಾಶಿವಯ್ಯ ಸಮುದಾಯ ಭವನದಲ್ಲಿ ನಡೆದ ರಾಜ್ಯಮಟ್ಟದ ಕಾಯಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ-2025. ಪ್ರಶಸ್ತಿ ಪ್ರಧಾನ ಮಾಡಲಾಯಿತು. ಬೆಂಗಳೂರು ದಕ್ಷಿಣ ಜಿಲ್ಲೆ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ. ಜಿ ಜಗದೀಶ್, ಜಿಲ್ಲಾ ಕಾರ್ಯದರ್ಶಿ ಡಾ. ಕೆ ಜಿ ರಾವ್ ಹಾಗೂ ಜಿಲ್ಲಾ ಪದಾಧಿಕಾರಿಗಳು ಇದ್ದರು.ಶಿವನಗೌಡ ಜಿ ಪಾಟೀಲ್ ಸತತವಾಗಿ 25 ವರ್ಷಗಳಿಂದ ಉತ್ತಮ ಆರೋಗ್ಯಕ್ಕಾಗಿ ಕಲ್ಲಿನ ಎತ್ತಿನಗಾಣದಿಂದ ಸಾಂಪ್ರದಾಯಿಕವಾಗಿ ಶ್ರೇಷ್ಠ ಗುಣಮಟ್ಟದ ಕಡಲೆ…
ರಚನೆ*- ಡಾ.ಶಶಿಕಾಂತ ಪಟ್ಟಣಪುಣೆ ಉದಯರಶ್ಮಿ ದಿನಪತ್ರಿಕೆ ಮದುವೆಯಾಗಿವಾರವೂ ಕಳೆದಿರಲಿಲ್ಲಹಚ್ಚಿದ ಅರಿಸಿನ ಅರಿರಲಿಲ್ಲಕಾಶ್ಮೀರ ಪಯಣಕೆಹೊರಟ ದಂಪತಿ ಅತ್ತ ಮಗಹೆಂಡತಿ ಜೊತೆಗೆರಜೆ ಕಳೆಯಲುಹೊರಟರುಕಣಿವೆ ನಾಡಿಗೆ ಅದೆಷ್ಟೋ ಪ್ರವಾಸಿಗಳುಕನಸು ಬಯಕೆ ಹೊತ್ತುಬಂದರು ಹಸಿರು ತಾಣಕೊಳಗಳ ಪುಟ್ಟ ದೋಣಿಮಂಜುಗಡ್ಡೆ ಮುತ್ತಿಕ್ಕಿತ್ತು ನೋಡು ನೋಡುವರೊಳಗೆಬಂದು ನಿಂತರು ಉಗ್ರಗಾಮಿಗಳುಕಂಡ ಕಂಡಲ್ಲಿ ಗುಂಡುರಕ್ತ ಸುರಿಸಿದ ರಕ್ಕಸರು ಚೀರಾಟ ಕೂಗಾಟ ಅಕ್ರ೦ದನಕರುಣೆ ಇಲ್ಲದ ಕಟುಕರುಮೂವತ್ತು ಹೆಣ ಉರುಳಿದವುಇರಲಿಲ್ಲ ಸೇನೆ ಕಾವಲಿಗೆಮಸಣವಾದ ಫೆಹಲ್ಗಾಮ
ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಭಾರತದ ಮೊಟ್ಟ ಮೊದಲ ಸ್ವತಂತ್ರ ವಿಚಾರವಾದಿ ಬಸವಣ್ಣನವರು ಮನುಕುಲದ ಮಂದಾರವಾಗಿದ್ದಾರೆ. ವಿಶ್ವದ ವಿಚಾರ ಕ್ರಾಂತಿಯ ಇತಿಹಾಸದಲ್ಲಿ ೧೨ನೇ ಶತಮಾನ ಒಂದು ಸುವರ್ಣ ಯುಗವಾಗಿದೆ. ಬಸವಣ್ಣ ಬಡವರ ನಿಧಿಯು, ವಚನ ಸಾಹಿತ್ಯದ ಸಿರಿಯಾಗಿ, ಅನುಭವ ಮಂಟಪದ ನಿರ್ಮಾಪಕರಾಗಿ ಯುಗಾವತಾರಿಯಾದ ಬಸವಣ್ಣನವರ ಜೀವನ ದಿವ್ಯದರ್ಶನವಾಗಿದೆ ಎಂದು ಸ್ಥಳಿಯ ವಿರಕ್ತಮಠದ ಶ್ರೀ ಪ್ರಭು ಮಹಾಸ್ವಾಮಿಗಳು ಹೇಳಿದರು.ಚಿಮ್ಮಡ ಬಸ್ ನಿಲ್ದಾಣದ ಆವರಣದಲ್ಲಿ ಬುಧವಾರ ಜಗಜ್ಯೋತಿ ಬಸವೇಶ್ವರರ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ ಅವರು ಬಸವಣ್ಣನವರ ತತ್ವಾದರ್ಶಗಳನ್ನು ಪ್ರತಿನಿತ್ಯ ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ಬಸವ ನಾಡಿನಲ್ಲಿ ಜನಿಸಿದ ನಮ್ಮ ಜನ್ಮ ಸಾರ್ಥಕವಾಗುವುದು ಎಂದರು.ಸ್ಥಳಿಯ ರಘುನಾಥ ಪ್ರೀಯ ಸಾಧು ಮಹಾರಾಜರ ಮಠದ ಶ್ರೀ ಜನಾರ್ಧನ ಮಹಾರಾಜರು ಮಾತನಾಡಿದರು.ಗ್ರಾಮದ ಪ್ರಮುಖರಾದ ರಾಮಣ್ಣ ಮುಗಳಖೋಡ, ಪುಂಡಲಿಕಪ್ಪಾ ಪೂಜಾರಿ, ಬಾಳಪ್ಪಾ ಹಳಿಂಗಳಿ, ಅಣ್ಣಪ್ಪಗೌಡ ಪಾಟೀಲ, ರಾಮಣ್ಣ ಬಗನಾಳ, ಗುರಲಿಂಗಪ್ಪಾ ಪೂಜಾರಿ, ರಾಚಯ್ಯ ಮಠಪತಿ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಶಂಕರ ಬಟಕುರ್ಕಿ, ಪ್ರಭು ಪಾಲಭಾವಿ, ಅಶೋಕ ಧಡೂತಿ, ಪರಪ್ಪ ನೇಸೂರ, ಬಸವರಾಜ…
ಉದಯರಶ್ಮಿ ದಿನಪತ್ರಿಕೆ ಚಿಕ್ಕಪಡಸಲಗಿ: ಬಸವಣ್ಣನವರು ನಾಗರಿಕ ಸಮಾಜದ ಬೆಳಕಾಗಿದ್ದಾರೆ.ಅವರ ಆದರ್ಶತನದ ಕಾಯಕ ತತ್ವಾದರ್ಶಗಳು ನಮಗೆಲ್ಲ ಪ್ರೇರಣಾದಾಯಕವಾಗಿವೆ. ಅಣ್ಣ ಬಸವೇಶ್ವರ ಕಾಯಕ ವಿಚಾರ,ಮಂಥನಗಳು ಸರಳತೆಯ ಶ್ರೇಷ್ಠತೆ ಕಂಡಿವೆ.ಬಸವ ಕಾಯಕ ಮಿಡಿತ ಜನಮನದಲ್ಲಿ ಪೂಜ್ಯತೆ ಭಾವ ತೋರಿವೆ. ನೈಜತೆಯ ಹೊಳಪಿನಲ್ಲಿ ಮಿನುಗಿವೆ.ಅವು ಜಗದಗಲಕ್ಕೆ ಸಂದಿವೆ ಎಂದು ಪ್ರಭಾರಿ ಮುಖ್ಯೋಪಾಧ್ಯಾಯ ಬಸವರಾಜ ಜಾಲೋಜಿ ಅಭಿಪ್ರಾಯಿಸಿದರು.ಜಗದ್ಗುರು ತೋಂಟದಾರ್ಯ ವಿದ್ಯಾಪೀಠ, ಗದಗ ಸಂಸ್ಥೆಯ ವತಿಯಿಂದ ಚಿಕ್ಕಪಡಸಲಗಿ ಗ್ರಾಮದಲ್ಲಿ ನಡೆಯುತ್ತಿರುವ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ಬಸವಣ್ಣನವರ 892 ನೇ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಸವೇಶ್ವರರ ಮಾನವೀಯ ಮೌಲ್ಯಗಳು ಆದರ್ಶಪ್ರಾಯಗಳಾಗಿವೆ. ಕಾಯಕ ನಿಷ್ಟೆಗೆ ಆದ್ಯತೆ ನೀಡಿ ಸಾಮಾಜಿಕ ಕಳಕಳಿ ಮೆರೆದಿರುವ ಬಸವಣ್ಣನವರು ತಮ್ಮ ಜ್ಞಾನಯೋಗದಿಂದ ಜಗಕ್ಕೆ ಸದಾ ಒಳಿತು ಬಯಸಿ ಮಹಾತ್ಮರಾಗಿದ್ದಾರೆ ಎಂದರು.ಒಳಿತು ಭಾವಗಳ ಸಾಂಸ್ಕೃತಿಕ ನಾಯಕ, ಕಾಯಕಯೋಗಿ ಬಸವ ಶರಣರ ತತ್ವ, ಸಂದೇಶಗಳು ಸಾರ್ವಕಾಲಿಕ ಪ್ರಸ್ತುತವಾಗಿವೆ. ಅವರ ಅಪ್ರತಿಮ ಆಚಾರ,ವಿಚಾರ ಪವಿತ್ರವಾಗಿವೆ.ಸಮಸಮಾಜದ ಕನಸುಗಾರ ಬಸವಣ್ಣನವರ ಜೀವನ ಚರಿತ್ರೆಯ ಯಶೋಗಾಥೆ ಅರ್ಥವತ್ತಾಗಿದೆ. ಮೈಮನ ಪುಳುಕುವಂತೆ…
ಮುಸ್ಲಿಂ ಕುಟುಂಬದಿಂದ ಬಸವ ಜಯಂತಿ ಆಚರಣೆ | ಶಾಂತಿ ಸೌಹಾರ್ದತೆಯಿಂದ ಕೂಡಿ ಬಾಳಲು ಪ್ರಾರ್ಥನೆ ಉದಯರಶ್ಮಿ ದಿನಪತ್ರಿಕೆ ಬೆಂಗಳೂರು: ಭೂಮಿ ಮೇಲಿನ ಭಯೋತ್ಪಾದನೆ ನಿರ್ಮೂಲನೆಯಾಗಬೇಕಾದರೆ, ಜಗತ್ ಜ್ಯೋತಿ ಬಸವಣ್ಣನವರ ದಯೋತ್ಪಾದನೆ (ದಯೆವೇ ಧರ್ಮದ ಮೂಲ) ಸಿದ್ದಾಂತ ಮೈಗೂಡಿಸಿಕೊಂಡಾಗ ಮಾತ್ರ ಸಾಧ್ಯ ಎಂದು ಆರಕ್ಷಕ ಮೌಲಾಲಿ ಆಲಗೂರ ಹೇಳಿದರು.ಕಳೆದ ಮೂರು ವರ್ಷಗಳಿಂದ ಆಡುಗೋಡಿಯ ತಮ್ಮ ಪೊಲೀಸ್ ವಸತಿ ಗೃಹದಲ್ಲಿ ಬಸವಣ್ಣನವರ ಜಯಂತಿ ಆಚರಣೆ ಮಾಡುತ್ತ ಬರುತ್ತಿರುವ ಮೌಲಾಲಿ ಅವರು ಪೋಟೋಗೆ ಪೂಜೆ ಮಾಡಿ ಮಾತನಾಡಿದರು.ಇತ್ತೀಚೆಗೆ ಸಮಾಜದಲ್ಲಿ ಅಮಾನವೀಯ ಕೃತ್ಯಗಳು ಹೆಚ್ಚುತ್ತಿವೆ, ಶ್ರೇಷ್ಠ ಜೀವಿ ಎನಿಸಿಕೊಂಡ ಮನುಜ ಧರ್ಮ, ಜಾತಿಗಳ ಹೆಸರಿನಲ್ಲಿ ಸಂಘರ್ಷದ ಹಾದಿ ತುಳಿಯುತ್ತಿರುವುದು ವಿಷಾದನೀಯ. ಬಸವಣ್ಣನವರು 12 ನೇ ಶತಮಾನದಲ್ಲಿಯೇ ಪ್ರತಿಪಾದಿಸಿದ ಸಮಾನತೆ, ಸಹಿಷ್ಣುತೆ, ಭ್ರಾತೃತ್ವ ಸೇರಿದಂತೆ ಮಾನವೀಯ ಮೌಲ್ಯಾಧಾರಿತ ಚಿಂತನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೋಳ್ಳದೇ ಇರುವುದು ನೋವಿನ ಸಂಗತಿ ಎಂದರು.ಆರಕ್ಷಕ ಮಷಾಕ್ ನಾಯ್ಕೋಡಿ ಮಾತನಾಡಿ, ಬಸವಣ್ಣನವರು ಹೇಳಿದ ಹಾಗೆ ಇವನಾರವ ಇವನಾರವ ಇವನಾರವ ಎನ್ನದೆ, ಇವ ನಮ್ಮವ ಇವ ನಮ್ಮವ,…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಭಾರತ ದೇಶ ಸನಾತನ ಧರ್ಮದಲ್ಲಿ ನಡೆಯುತ್ತಿದೆ. ಎಲ್ಲ ಧರ್ಮಗಳಿಗೂ ಧರ್ಮ ಗುರುಗಳಿದ್ದರೆ, ಸನಾತನ ಧರ್ಮವನ್ನು ಸ್ವತ: ಭಗವಂತನೇ ಸೃಷ್ಟಿಸಿದ ಧರ್ಮವಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ರವರು ಹೇಳಿದರು.ತಾಲ್ಲೂಕಿನ ಸುಕ್ಷೇತ್ರ ಬೊಮ್ಮನಹಳ್ಳಿ ಗ್ರಾಮದಲ್ಲಿ ಗುರುವಾರ ಜಡೆಯ ಶಾಂತೇಶ್ವರ ಜಾತ್ರಾ ಮಹೋತ್ಸವದಲ್ಲಿ ಮಾತನಾಡಿದ ಅವರು, ಕೇಸರಿ ಯಾವುದೇ ಒಂದು ಜಾತಿಗೆ ಸೀಮಿತವಲ್ಲ. ಕೇಸರಿ ಎಂದರೇ ತ್ಯಾಗ, ನಿಷ್ಠೆ, ಸನಾತನ ಧರ್ಮದ ಸಂಕೇತವಾಗಿದೆ. ಸಂಕಷ್ಟ ನಿವಾರಣೆ ಮಾಡುವ ದೇವರು ಹನುಮಂತ. ಆತನನ್ನು ಕೂಡ ಕೇಸರಿ ನಂದನ ಎನ್ನುತ್ತಾರೆ. ಹಣಮಂತ ಇಲ್ಲದ ಊರೇ ಇಲ್ಲ ಎಂದರು.ಸಮಾಜದಲ್ಲಿರುವ ಮೂಢನಂಬಿಕೆಗಳನ್ನು ಹೋಗಲಾಡಿಸಲು ಬಸವಣ್ಣನವರು ಕ್ರಾಂತಿ ಮಾಡಿದರು. ಅವರ ವಚನಗಳಲ್ಲಿ ಎಲ್ಲಿಯೂ ಪಂಚಪೀಠಗಳ ವಿರುದ್ಧವಿಲ್ಲ, ಮೂಢನಂಬಿಕೆಗಳ ವಿರುದ್ಧ ಇವೆ. ಆದರೆ, ಕೆಲವರು ಪಂಚಪೀಠ ಬೇರೆ, ಅವರು ವೈದಿಕರು, ಹೋಮ ಹವನ ಮಾಡುತ್ತಾರೆ, ಬಸವಣ್ಣ ಹೋಮ ಹವನ ವಿರೋಧ ಮಾಡಿದರೆಂದು ಅಪಪ್ರಚಾರ ಮಾಡಿ ಜಗಳಾ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಎಲ್ಲರನ್ನೂ ಕೂಡಿಸುವ ಕೆಲಸ ಬೊಮ್ಮನಹಳ್ಳಿ ಗ್ರಾಮದವರಿಂದ…
ಲೇಖನ- ವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ನೀವು ಯಾರೊಂದಿಗಾದರೂ ವಾದ ಮಾಡುವಾಗ ಆ ವ್ಯಕ್ತಿಯಲ್ಲಿ ನಿಮ್ಮ ಮಾತುಗಳನ್ನು ಅರ್ಥಮಾಡಿಕೊಳ್ಳುವ ಮತ್ತೊಂದು ರೀತಿಯಲ್ಲಿ ಗ್ರಹಿಸುವ ಶಕ್ತಿ ಇದೆಯೇ ಎಂಬುದನ್ನು ಯೋಚಿಸಬೇಕು. ನಿಮ್ಮ ಮಾತುಗಳನ್ನು ಅವರು ಗ್ರಹಿಸಿಕೊಳ್ಳುವುದಿಲ್ಲ ಎಂದಾದರೆ ನೀವು ಅವರೊಂದಿಗೆ ಮಾತನಾಡುವುದರಲ್ಲಿ ಯಾವುದೇ ಅರ್ಥ ಇಲ್ಲ.ಎಷ್ಟೋ ಬಾರಿ ನಾವು ಮಾಡುವ ಚರ್ಚೆ ಮತ್ತು ವಾದ ವಿವಾದಗಳು ನಮ್ಮ ಶಕ್ತಿಯ ವ್ಯಯವನ್ನು ಮಾತ್ರ ಮಾಡುತ್ತದೆ.ಒಂದು ಅರ್ಥಪೂರ್ಣ ಸಂಭಾಷಣೆ ಮತ್ತು ಅನಗತ್ಯವಾದ ವಿವಾದಗಳ ನಡುವಿನ ವ್ಯತ್ಯಾಸವೇ ಇದು. ಅನೇಕ ಬಾರಿ ನಾವು ಅದೆಷ್ಟೇ ಸ್ಪಷ್ಟವಾಗಿ ನಮ್ಮ ಭಾವನೆಗಳನ್ನು ವ್ಯಕ್ತಪಡಿಸಿದರೂ ಕೂಡ ತಿಳಿಯದವರಂತೆ ವರ್ತಿಸುತ್ತಾರೆ. ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವುದೇ ಇಲ್ಲ. ಇದು ಒಂದು ರೀತಿಯಲ್ಲಿ ಮಲಗಿದಂತೆ ನಟನೆ ಮಾಡುವವರನ್ನು ಎಬ್ಬಿಸಿದಂತೆ.. ಎಂದೂ ಸಾಧ್ಯವಾಗುವುದಿಲ್ಲ. ಅವರು ಕೇಳಿದಂತೆ ನಟಿಸುತ್ತಾರೆ ಆದರೆ ಪ್ರತಿಕ್ರಿಯಿಸುವುದಿಲ್ಲ. ತಮ್ಮದೇ ನಂಬಿಕೆಯ ಒಳ ಬಾಗಿಲನ್ನು ಚಿಲಕ ಹಾಕಿಕೊಂಡು ಕುಳಿತಿರುವ ಅವರು ಬೇರೆ ರೀತಿಯ ಗ್ರಹಿಕೆಗಳನ್ನು ಒಪ್ಪುವುದೇ ಇಲ್ಲ. ಅಂತಹವರೊಂದಿಗಿನ ಮಾತುಕಥೆಗಳು ನಮ್ಮನ್ನು…
ಇಂದು “ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ” (ಮೇ.೦೩ ಶನಿವಾರ) ನಿಮಿತ್ತ ಈ ವಿಶೇಷ ಲೇಖನ ಲೇಖನ- ವಿದ್ಯಾಶ್ರೀ ಹೊಸಮನಿಪ್ರಶಿಕ್ಷಣಾರ್ಥಿವಾರ್ತಾ ಇಲಾಖೆವಿಜಯಪುರ ಉದಯರಶ್ಮಿ ದಿನಪತ್ರಿಕೆ ಪ್ರಜಾತಂತ್ರದ ವ್ಯವಸ್ಥೆಯಲ್ಲಿ ಪತ್ರಿಕಾ ಸ್ವಾತಂತ್ರ್ಯ ಮಹತ್ವದಾಗಿದೆ. ಪತ್ರಿಕೆಗಳಲ್ಲಿ ಪ್ರಚಲಿತ ಘಟನೆಗಳನ್ನು ಮೆಲುಕು ಹಾಕುತ್ತಾ, ಸಾಮಾಜಿಕ, ರಾಜಕೀಯ, ಆರ್ಥಿಕ, ಶೈಕ್ಷಣಿಕ, ನೈತಿಕ ಹೀಗೆ ಅನೇಕ ಬೆಳವಣಿಗೆಗಳನ್ನು ಸಾರ್ವಜನಿಕರು ಅರಿತುಕೊಳ್ಳುವರು. ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿಗಳನ್ನೋ ಅಥವಾ ವಿಷಯಗಳನ್ನೋ ಸತ್ಯ ಎಂದು ಅವರು ನಂಬುವರು. ಹೀಗೆ ನಂಬುವ ಸಾರ್ವಜನಿಕರಿಗೆ ಯಾವುದೇ ನಿರ್ಭಿತಿಯಿಲ್ಲದೆ ವರದಿಯನ್ನು ಕೈಗನ್ನಡಿಯಂತೆ ಓದುವರಿಗೆ ಮುಟ್ಟಿಸುವ ನಿಟ್ಟಿನಲ್ಲಿ ಪ್ರಜಾತಂತ್ರದ ವ್ಯವಸ್ಥೆಯಲ್ಲಿ ಪತ್ರಿಕಾ ಸ್ವಾತಂತ್ರ್ಯ ಮಹತ್ವದಾಗಿದೆ.ಭಾರತದ ಸ್ವಾತಂತ್ರ್ಯ ಪೂರ್ವದಲ್ಲಿ ಜನತೆಗೆ ಸ್ವಾತಂತ್ರ್ಯದ ಅರಿವು ಮೂಡಿಸುವುದರೊಂದಿಗೆ ಎಲ್ಲ ಬೇಧವನ್ನು ತೊರೆದು ರಾಷ್ಟ್ರವನ್ನು ಒಗ್ಗೂಡಿಸಿ ಬ್ರಿಟಿಷರ ವಿರುದ್ಧ ಹೋರಾಡಿ ದೇಶ ಸ್ವಾತಂತ್ರ್ಯಗೊಳ್ಳುವುದರಲ್ಲಿ ಪತ್ರಿಕೆಗಳ ಪಾತ್ರ ಅಭೂತವಾಗಿತ್ತು. ಸಂವಿಧಾನದ ನಾಲ್ಕನೇ ಅಂಗವೆಂದು ಪತ್ರಿಕಾ ರಂಗವು ಸ್ವಾತಂತ್ರ್ಯವಾಗಿ ಕಾರ್ಯನಿರ್ವಹಿಸಿದ್ದಲ್ಲಿ ಒಂದು ಸಮೃದ್ಧ ರಾಷ್ಟ್ರ ನಿರ್ಮಾಣವಾಗುತ್ತದೆ.ಜಗತ್ತಿನ ಯಾವುದೇ ರಾಷ್ಟ್ರ ತೆಗೆದುಕೊಂಡರೂ ಅಲ್ಲಿನ ಪತ್ರಿಕಾ ರಂಗ ಪ್ರಬಲವಾಗಿದ್ದರೆ ಯಾವುದೇ ತೊಡಕುಗಳಿಲ್ಲದೆ…
