ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ಭಾರತದ ಮೊಟ್ಟ ಮೊದಲ ಸ್ವತಂತ್ರ ವಿಚಾರವಾದಿ ಬಸವಣ್ಣನವರು ಮನುಕುಲದ ಮಂದಾರವಾಗಿದ್ದಾರೆ. ವಿಶ್ವದ ವಿಚಾರ ಕ್ರಾಂತಿಯ ಇತಿಹಾಸದಲ್ಲಿ ೧೨ನೇ ಶತಮಾನ ಒಂದು ಸುವರ್ಣ ಯುಗವಾಗಿದೆ. ಬಸವಣ್ಣ ಬಡವರ ನಿಧಿಯು, ವಚನ ಸಾಹಿತ್ಯದ ಸಿರಿಯಾಗಿ, ಅನುಭವ ಮಂಟಪದ ನಿರ್ಮಾಪಕರಾಗಿ ಯುಗಾವತಾರಿಯಾದ ಬಸವಣ್ಣನವರ ಜೀವನ ದಿವ್ಯದರ್ಶನವಾಗಿದೆ ಎಂದು ಸ್ಥಳಿಯ ವಿರಕ್ತಮಠದ ಶ್ರೀ ಪ್ರಭು ಮಹಾಸ್ವಾಮಿಗಳು ಹೇಳಿದರು.
ಚಿಮ್ಮಡ ಬಸ್ ನಿಲ್ದಾಣದ ಆವರಣದಲ್ಲಿ ಬುಧವಾರ ಜಗಜ್ಯೋತಿ ಬಸವೇಶ್ವರರ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ ಅವರು ಬಸವಣ್ಣನವರ ತತ್ವಾದರ್ಶಗಳನ್ನು ಪ್ರತಿನಿತ್ಯ ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ಬಸವ ನಾಡಿನಲ್ಲಿ ಜನಿಸಿದ ನಮ್ಮ ಜನ್ಮ ಸಾರ್ಥಕವಾಗುವುದು ಎಂದರು.
ಸ್ಥಳಿಯ ರಘುನಾಥ ಪ್ರೀಯ ಸಾಧು ಮಹಾರಾಜರ ಮಠದ ಶ್ರೀ ಜನಾರ್ಧನ ಮಹಾರಾಜರು ಮಾತನಾಡಿದರು.
ಗ್ರಾಮದ ಪ್ರಮುಖರಾದ ರಾಮಣ್ಣ ಮುಗಳಖೋಡ, ಪುಂಡಲಿಕಪ್ಪಾ ಪೂಜಾರಿ, ಬಾಳಪ್ಪಾ ಹಳಿಂಗಳಿ, ಅಣ್ಣಪ್ಪಗೌಡ ಪಾಟೀಲ, ರಾಮಣ್ಣ ಬಗನಾಳ, ಗುರಲಿಂಗಪ್ಪಾ ಪೂಜಾರಿ, ರಾಚಯ್ಯ ಮಠಪತಿ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಶಂಕರ ಬಟಕುರ್ಕಿ, ಪ್ರಭು ಪಾಲಭಾವಿ, ಅಶೋಕ ಧಡೂತಿ, ಪರಪ್ಪ ನೇಸೂರ, ಬಸವರಾಜ ಕುಂಚನೂರ, ಅಶೋಕ ಮೋಟಗಿ, ಪ್ರಭು ಮುಧೋಳ, ಅವ್ವನಪ್ಪಾ ಮುಗಳಖೋಡ ಸೇರಿದಂತೆ ಹಲವಾರು ಜನ ಪ್ರಮುಖರು ಉಪಸ್ಥಿತರಿದ್ದರು.
ಇದೇ ಸಂಧರ್ಬದಲ್ಲಿ ವಿಶ್ವಗುರು ಬಸವಣ್ಣನವರ ಜಯಂತೋತ್ಸವದ ನಿಮಿತ್ತ ಬಸವೇಶ್ವರರ ಬ್ರಹತ್ ಭಾವಚಿತ್ರವನ್ನು ಟ್ರಾಕ್ಟರನಲ್ಲಿಟ್ಟು ಸಕಲವಾದ್ಯ ವೃಂದಗಳೊಂದಿಗೆ ಮಹಿಳೆಯರು ಆರತಿ ತಟ್ಟೆಯಂದಿಗೆ ಗ್ರಾಮದ ವಿರಕ್ತಮಠದಿಂದ ಸ್ಥಳಿಯ ಬಸ್ ನಿಲ್ದಾಣದ ವರೆಗೆ ಬ್ರಹತ್ ಮೆರವಣಿಗೆ ಮಾಡಲಾಯಿತು.

