ರಚನೆ
*- ಡಾ.ಶಶಿಕಾಂತ ಪಟ್ಟಣ
ಪುಣೆ
ಉದಯರಶ್ಮಿ ದಿನಪತ್ರಿಕೆ
ಮದುವೆಯಾಗಿ
ವಾರವೂ ಕಳೆದಿರಲಿಲ್ಲ
ಹಚ್ಚಿದ ಅರಿಸಿನ ಅರಿರಲಿಲ್ಲ
ಕಾಶ್ಮೀರ ಪಯಣಕೆ
ಹೊರಟ ದಂಪತಿ
ಅತ್ತ ಮಗ
ಹೆಂಡತಿ ಜೊತೆಗೆ
ರಜೆ ಕಳೆಯಲು
ಹೊರಟರು
ಕಣಿವೆ ನಾಡಿಗೆ
ಅದೆಷ್ಟೋ ಪ್ರವಾಸಿಗಳು
ಕನಸು ಬಯಕೆ ಹೊತ್ತು
ಬಂದರು ಹಸಿರು ತಾಣ
ಕೊಳಗಳ ಪುಟ್ಟ ದೋಣಿ
ಮಂಜುಗಡ್ಡೆ ಮುತ್ತಿಕ್ಕಿತ್ತು
ನೋಡು ನೋಡುವರೊಳಗೆ
ಬಂದು ನಿಂತರು ಉಗ್ರಗಾಮಿಗಳು
ಕಂಡ ಕಂಡಲ್ಲಿ ಗುಂಡು
ರಕ್ತ ಸುರಿಸಿದ ರಕ್ಕಸರು
ಚೀರಾಟ ಕೂಗಾಟ ಅಕ್ರ೦ದನ
ಕರುಣೆ ಇಲ್ಲದ ಕಟುಕರು
ಮೂವತ್ತು ಹೆಣ ಉರುಳಿದವು
ಇರಲಿಲ್ಲ ಸೇನೆ ಕಾವಲಿಗೆ
ಮಸಣವಾದ ಫೆಹಲ್ಗಾಮ
