Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಇಂಡಿ: ವ್ಯಕ್ತಿಯು ಗುಣಗಳಿಂದ ಸಂಪನ್ನನಾಗುತ್ತಾನೆ, ಸದಾ ಕ್ರೀಯಾಶೀಲತೆಯನ್ನು ಮೈಗೂಡಿಸಿಕೊಳ್ಳುವ ಆದರ್ಶತನ ಇಂದು ಎಲ್ಲರಲ್ಲಿ ಬರಬೇಕಿದೆ ಎಂದು ಐಕ್ಯೂಎಸಿ ಸಂಚಾಲಕ ಪ್ರೊ.ರವಿಕುಮಾರ ಅರಳಿ ಹೇಳಿದರು.ಅವರು ಇಂಡಿ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಕಾಲೇಜಿನ ಪ್ರಾಚಾರ್ಯ ರಮೇಶ ಆರ್.ಎಚ್ ಹಾಗೂ ಗ್ರಂಥಪಾಲಕ ತಿಪ್ಪಣ್ಣ ವಗ್ದಾಳ ಅವರು ಸಹ ಪ್ರಾಧ್ಯಾಪಕರಾಗಿ ಪದೋನ್ನತಿ ಹೊಂದಿದ ಪ್ರಯುಕ್ತ ಅಭಿನಂದಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಮಾತಾನಡಿದ ಪ್ರಾಚಾರ್ಯ ಪ್ರೊ.ರಮೇಶ ಆರ್.ಎಚ್ ” ಪದವಿ, ಗೌರವಗಳು ಬರುತ್ತಿರುತ್ತವೆ, ಕರ್ತವ್ಯದಲ್ಲಿ ಎಲ್ಲರನ್ನೂ ಸಮಾನರಾಗಿ ಕಂಡು ಕೆಲಸ ಮಾಡುವ ಪ್ರಾಮಾಣಿಕತೆ ಇರಬೇಕು ಎಂದರು. ಎಲ್ಲರಿಗೂ ಒಳಿತನ್ನು ಬಯಸುವುದು ಮುಖ್ಯಕಾರ್ಯವಾಗಿದೆ ಎಂದರು.ಅಕ್ಕಮಹಾದೇವಿ ವಿವಿ ಸಿಂಡಿಕೇಟ್ ಸದಸ್ಯ ಪ್ರೊ. ಎಸ್.ಜೆ.ಮಾಡ್ಯಾಳ, ಬೆರಗು ಪ್ರಕಾಶನದ ರಮೇಶ ಕತ್ತಿ ಮೊದಲಾದವರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಪ್ರೊ. ಸಂಗಮೇಶ ಹಿರೇಮಠ ಸ್ವಾಗತಿಸಿದರು. ಎನ್. ಎಸ್.ಎಸ್. ಸಂಯೋಜಕ ಪರಸಪ್ಪ ದೇವರ ವಂದಿಸಿದರು. ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು , ವಿದ್ಯಾರ್ಥಿಗಳು ಹಾಜರಿದ್ದರು.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರ ಪೊಲೀಸ್ ಅಧೀಕ್ಷಕರ ವರದಿಯನ್ವಯ ತಿಕೋಟಾ ತಾಲೂಕಿನ ಲೋಗಾಂವದ ರಾಜುಗೌಡ ಸಿದ್ದಲಿಂಗಪ್ಪ ಬಿರಾದಾರ ಹಾಗೂ ಪಿಂಟು ಹೀರು ಲಮಾಣಿ ಇವರಿಗೆ ಆತ್ಮರಕ್ಷಣೆ ಸಲುವಾಗಿ ನೀಡಿರುವ ಆಯುಧ ಪರವಾನಿಗೆಯನ್ನು ದುರುಪಯೋಗ ಪಡಿಸಿಕೊಂಡಿರುವ ಕಾರಣದಿಂದಾಗಿ ಭಾರತೀಯ ಆಯುಧ ಕಾಯ್ದೆ ೧೯೫೯ರ ಕಲಂ ೧೭(೩)(ಬಿ ) ಮತ್ತು ೧೭(೩)(ಡಿ ) ಅನ್ವಯ ಇವರು ಹೊಂದಿರುವ ಆಯುಧ ಪರವಾನಿಗೆಯನ್ನು ಅಮಾನತ್ತುಗೊಳಿಸಿ ವಿಚಾರಣೆಗೆ ಕಾಯ್ದಿರಿಸಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಆದೇಶಿಸಿದ್ದಾರೆ.ಸದರಿ ಪರವಾನಿಗೆದಾರು ತಾವು ಹೊಂದಿರುವ ಆಯುಧವನ್ನು ಕೂಡಲೇ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಜಮೆ ಮಾಡುವಂತೆಯೂ ಆದೇಶದಲ್ಲಿ ಅವರು ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಮಾಜಿ ಕೇಂದ್ರ ಸಚಿವರು ವಿಜಯಪುರ ನಗರದ ಜನಪ್ರಿಯ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ರವರನ್ನು ಉಚ್ಛಾಟನೆ ಮಾಡಿದ್ದು ತುಂಬಾ ನೋವಿನ ಸಂಗತಿ ಎಂದು ಬಿಜೆಪಿ ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಪ್ರಭು ತಳಗೇರಿ ಕಳವಳ ವ್ಯಕ್ತಪಡಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಪಕ್ಷಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಧೀಮಂತ ನಾಯಕರು, ಹಿಂದುತ್ವವನ್ನು ಮೈಗೂಡಿಸಿಕೊಂಡು ರಾಜ್ಯದಲ್ಲಿ ತಮ್ಮದೇ ಆದ ಅಭಿಮಾನಿಗಳ ಬಳಗ ಹೊಂದಿದ್ದ ನಿಷ್ಠಾವಂತ ನಾಯಕರನ್ನು ಬಿಜೆಪಿ ಪಕ್ಷವು ಉಚ್ಛಾಟನೆ ಮಾಡಿದ್ದು ಅತ್ಯಂತ ದುರದೃಷ್ಟಕರ. ಯತ್ನಾಳರವರು ಇಲ್ಲದೇ ಬಿಜೆಪಿ ಪಕ್ಷವು ನೆಲಕೆಚ್ಚುವುದು ಖಚಿತ. ಯುತ್ನಾಳರು ಬಿಜೆಪಿ ಪಕ್ಷದ ಪ್ರಭಾವಿ ನಾಯಕರಾಗಿ ಹೊರಹೊಮ್ಮಿದ್ದು ಯಾರು ಜೊತೆ ರಾಜಿಯಾಗಿದೆ ಗಂಡೆದೆಯ ಮಾತುಗಾರಿಕೆಯ ನೇರ ನಡೆಯ ನಾಯಕರು. ಇವರನ್ನು ಉಚ್ಛಾಟನೆ ಮಾಡಿದ್ದು ವಿಪರ್ಯಾಸ. ತಕ್ಷಣ ಉಚ್ಛಾಟನೆಯನ್ನು ಹಿಂಪಡೆಯಬೇಕು ಎಂದು ಪ್ರಧಾನಿಯವರಿಗೆ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಮನವಿ ಮಾಡಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ಜಿಲ್ಲೆಯಲ್ಲಿ ದಿ.5 ಶನಿವಾರ ಮತ್ತು ದಿ.6 ರವಿವಾರ ಎರಡು ದಿನಗಳವರೆಗೆ ಪ್ರವಾಸ ಕೈಗೊಳ್ಳಲಿದ್ದಾರೆ.ದಿ.5 ಶನಿವಾರ ಬೆ. 9.30ಗಂ. ಡಾ. ಬಾಬು ಜಗಜೀವನರಾಂ ಅವರ 118 ನೇ ಜಯಂತಿ ನಿಮಿತ್ತ ಅಥಣಿ ರಸ್ತೆಯ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸುವರು. ಬೆ.10ಗಂ. ತಿಕೋಟಾ ತಾಲೂಕಿನ ಕನಮಡಿ ಗ್ರಾಮದಲ್ಲಿ ರೂ. 27ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಮಳೆಮಲ್ಲೇಶ್ವರ ಕೆಳಗಿನಮಠ ಯಾತ್ರಿ ನಿವಾಸ ಕಟ್ಟಡ ಹಾಗೂ 110 ಕೆ.ವ್ಹಿ. ವಿದ್ಯುತ್ ಸ್ಟೇಷನ್ ಉದ್ಘಾಟಿಸಲಿದ್ದಾರೆ. ಸಂ.4ಗಂ. ಬಬಲೇಶ್ವರ ತಾಲೂಕಿನ ನಿಡೋಣಿಯಲ್ಲಿ 110 ಕೆ.ವ್ಹಿ. ವಿದ್ಯುತ್ ಸ್ಟೇಷನ್ ಉದ್ಘಾಟಿಸಿ, ಸಂ.6ಗಂ. ಕಾಖಂಡಕಿ ಗ್ರಾಮದಲ್ಲಿ ರೂ. 5 ಕೋಟಿ ವೆಚ್ಚದ ಕಾಖಂಡಕಿ-ಕಾರಜೋಳ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ, 110ಕೆ.ವ್ಹಿ.ವಿದ್ಯುತ್ ಸ್ಟೇಷನ್ ಉದ್ಘಾಟಿಸಲಿದ್ದಾರೆ.ನಂತರ ಕಾಖಂಡಕಿ –ಗುರುದೇವರ ಆಶ್ರಮದವರೆಗೆ ರೂ.90 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ಮತ್ತು ಕಾಖಂಡಕಿ ಗ್ರಾಮದಲ್ಲಿ ರೂ. 50…
ರಚನೆ- ದೀಪಾ ಪೂಜಾರಿಕುಶಾಲನಗರ ಉದಯರಶ್ಮಿ ದಿನಪತ್ರಿಕೆ ಬಾಲಗಿರಿಗೆ ಬನಗಿರಿಗೆಮರುಳು ಹೋದಹಕ್ಕಿಯಂತೆ,ಬೇಲಿಯಾಚೆ ನೋಡುವಕನಸುಗಳಂತೆ,ಕೈಯಲ್ಲಿ ಹಣ್ಣಿದ್ದರೂಬಳಲುವ ಹಸಿವಿನಂತೆ,ಬದುಕಿ ಬಿಡು ಇದ್ದಂತೆ! ಮುಗಿಯದ ಹಾದಿಯಬೆಟ್ಟದ ಮೇಲೆ,ಸಂಜೆಯ ಬೀಸಣಿಯಲ್ಲಿಚಿಂತೆ ಬಿಟ್ಟು,ಜಲಧಾರೆಯಲಿ ನೀರಿನಹಾಡಂತೆ,ಬದುಕಿ ಬಿಡು ನೀನುಬದುಕು ಇದ್ದಂತೆ! ಕತ್ತಲಿಗೇ ಬೆಳಕಿನಕನಸು ,ಮೌನಕ್ಕೂ ನಗುವಿನಮನಸು,ಗಾಳಿಯೊಂದಿಗೆ ಹಾರುವಗಾಳಿಪಟದಂತೆ,ಬದುಕಿ ಬಿಡು ನೀನುಬದುಕು ಇದ್ದಂತೆ! ನಾಳೆ ಹೇಗಿರಬಹುದುಯಾರು ಬಲ್ಲರು?ನಿನ್ನ ಹೃದಯವಅರಿಯುವವರಾರು?ಹೂ ಅರಳುವ ಸಂತಸಸಂಭ್ರಮದಲ್ಲಿ,ಬದುಕಿ ಬಿಡು ನೀನುಬದುಕು ಇದ್ದಂತೆ!
ಲೇಖನ- ವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಮೂಲತಃ ಮನುಷ್ಯ ಸಮಾಜ ಜೀವಿ. ಸಾಮಾಜಿಕ ಸಂಬಂಧಗಳು ಆತನ ಬದುಕಿನ ಅವಶ್ಯಕತೆ. ನಮ್ಮ ಮನೆಯ ಶುಭಾಶುಭ ಕಾರ್ಯಕ್ರಮಗಳಲ್ಲಿ ನಮ್ಮವರ ಪಾಲ್ಗೊಳ್ಳುವಿಕೆ ಅತ್ಯವಶ್ಯಕ. ಸುಖದ, ಸಂತೋಷದ ಕ್ಷಣಗಳಲ್ಲಿ ನಮ್ಮ ಖುಷಿಯನ್ನು ಹಂಚಿಕೊಳ್ಳಲು, ಸಂತಸವನ್ನು ಇಮ್ಮಡಿಗೊಳಿಸಲು ನಮಗೆ ಸಾಮಾಜಿಕ, ಕೌಟುಂಬಿಕ ಸಂಬಂಧಗಳು ಬೇಕು. ಅಂತೆಯೇ ದುಃಖದ, ನೋವಿನ ಘಳಿಗೆಗಳಲ್ಲಿ ನಮ್ಮ ನೋವನ್ನು ಶಮನಗೊಳಿಸುವ ಪರಿಹಾರವನ್ನು ಸೂಚಿಸುವ ನಾವು ಇರ್ತೀವಿ ಬಿಡು, ತಲೆ ಕೆಡಿಸಿಕೊಳ್ಳಬೇಡ ಎಂದು ಧೈರ್ಯ ಹೇಳುವ ಸಾಮಾಜಿಕ ಸಂಬಂಧಗಳು ನಮ್ಮ ಜೀವನಕ್ಕೆ ಮರುಭೂಮಿಯಲ್ಲಿರುವ ಓಯಸಿಸ್ ನಂತೆ ಅತ್ಯವಶ್ಯಕ.ವಿವಾಹವೇ ಇರಲಿ ಮಸಣವೇ ಇರಲಿ ನಮ್ಮವರ ಹಾಜರಿಯ ಅಗತ್ಯ ನಮಗಿದೆ. ನಮ್ಮ ಹೆಣವನ್ನು ನಾವೇ ಹೊರುವುದಿಲ್ಲ, ಅದನ್ನು ಹೊರಲಾದರೂ ನಮಗೆ ನಮ್ಮ ಸಂಬಂಧಿಗಳು, ಸ್ನೇಹಿತರು, ಬಂಧು ಬಾಂಧವರು ಬೇಕೇ ಬೇಕು. ನಮ್ಮ ಜೀವನದ ಅತ್ಯಂತ ನಿರಾಶಾದಾಯಕ ಸಮಯದಲ್ಲಿ ನಮಗೆ ಬೇರೊಬ್ಬರ ಸಲಹೆಯ ಅವಶ್ಯಕತೆ ಇರುವುದಿಲ್ಲ. ಯಾರ ಸಲಹೆಗಳೂ ನಮ್ಮ ಮನಸ್ಸಿಗೆ ಸಮಾಧಾನವನ್ನು ಕೊಡುವುದಿಲ್ಲ,ಅಂತಹ ಸಂದಿಗ್ಧದ…
ಬೂದಿಹಾಳ ಏತ ನೀರಾವರಿ ಯೋಜನೆ | ಕ್ರಿಯಾಶೀಲ ವೇದಿಕೆ ವತಿಯಿಂದ ಡಿಸಿಎಂ ಡಿ.ಕೆ.ಶಿವಕುಮಾರ ಗೆ ಮನವಿ ಉದಯರಶ್ಮಿ ದಿನಪತ್ರಿಕೆ ಕಲಕೇರಿ: ಪೀರಾಪೂರ – ಬೂದಿಹಾಳ ಏತ ನೀರಾವರಿ ಯೋಜನೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಒತ್ತಾಯಿಸಿ ತಾಳಿಕೋಟಿ ತಾಲೂಕಿನ ಪೀರಾಪೂರ ಬೂದಿಹಾಳ ಏತ ನೀರಾವರಿ ಯೋಜನೆ ಕ್ರಿಯಾಶೀಲ ವೇದಿಕೆ ವತಿಯಿಂದ ನೀರಾವರಿ ಸಚಿವ ಡಿ.ಕೆ.ಶಿವಕುಮಾರ ಅವರಿಗೆ ಬೆಂಗಳೂರಿನಲ್ಲಿ ಬುಧವಾರ ಮನವಿ ಅರ್ಪಿಸಿದರು.ಈ ಯೋಜನೆಗಾಗಿ ಸರಕಾರ ಈಗಾಗಲೇ ಸುಮಾರು ರೂ. ೮೦೦ ಕೋಟಿಯಷ್ಟು ದುಡ್ಡು ವ್ಯಯ ಮಾಡಿದೆಯಾದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಇನ್ನೂ ಕೇವಲ ಹೊಲಗಾಲುವೆಯ ೧೦ ಪ್ರತಿಶತ ಕೆಲಸ ಮಾತ್ರ ಬಾಕಿ ಇದ್ದು, ಈ ಕಾಮಗಾರಿಯನ್ನು ಇದೇ ಬೇಸಿಗೆಯಲ್ಲಿ ತ್ವರಿತಗತಿಯಲ್ಲಿ ಮಾಡಿಕೊಡಬೇಕು ಮತ್ತು ಇನ್ನೂ ಕೇವಲ ರೂ.೧೭೦ ರಿಂದ ರೂ.೨೦೦ ಕೋಟಿಯಷ್ಟು ಹಣಕಾಸು ಮಂಜೂರು ಮಾಡಿಕೊಟ್ಟರೆ ಈ ಭಾಗದ ೫೦೬೦೭ ಎಕರೆ ಕೃಷಿ ಭೂಮಿ ನೀರಾವರಿಗೆ ಒಳಪಡುತ್ತದೆ ಎಂದು ಮನವಿ ಮಾಡಲಾಯಿತು.ಈಗಾಗಲೇ ಈ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಶೋಚನೀಯವಾಗಿದ್ದು. ಹಳ್ಳಿಗಳ ಜನರು ಬೆಂಗಳೂರು, ಬಾಂಬೆ, ಗೋವಾ,…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ದಕ್ಷಿಣ ಭಾರತದ ಅತ್ಯಂತ ಗಟ್ಟಿ ಹಿಂದೂ ನಾಯಕ, ಪಂಚಮಸಾಲಿ ಸಮಾಜದ ಸಮರ್ಥನೀಯ ನಾಯಕ, ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳರನ್ನು ಬಿಜೆಪಿ ಪಕ್ಷದಿಂದ ಉಚ್ಛಾಚಿಸಿದ್ದನ್ನು ಖಂಡಿಸಿ ಮತ್ತು ಮರಳಿ ಬಿಜೆಪಿಗೆ ಸೇರ್ಪಡೆಗೊಳಿಸಿಕೊಳ್ಳಬೇಕು ಎಂದು ಆಗ್ರಹಿಸಿ ಏ.೭ ರಂದು ಪಟ್ಟಣದಲ್ಲಿ ಬ್ರಹತ್ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಮತಕ್ಷೇತ್ರದ ಎಲ್ಲ ಪಂಚಮಸಾಲಿ ಸಮಾಜ ಬಂಧುಗಳು, ಯತ್ನಾಳರ ಅಭಿಮಾನಿಗಳು ಭಾಗಿಯಾಗಿ ಯತ್ನಾಳರ ಕೈ ಬಲಪಡಿಸಬೇಕು ಎಂದು ಪಕ್ಷಾತೀತವಾಗಿ ಪಟ್ಟಣದ ಪಂಚಮಸಾಲಿ ಸಮಾಜದ ಮುಖಂಡರು ಕರೆ ನೀಡಿದರು.ಪಟ್ಟಣದಲ್ಲಿ ಈ ಕುರಿತು ನಡೆದ ಸುದ್ದಿಗೋಷ್ಟಿಯಲ್ಲಿ ಸಮಾಜದ ಮುಖಂಡ ಅರವಿಂದ ಕೊಪ್ಪ ಮಾತನಾಡಿ, ಯತ್ನಾಳರನ್ನು ಉಚ್ಛಾಟಿಸಿದ ವಿಷಯ ಇವತ್ತು ಇಡೀ ರಾಜ್ಯದ ಜನತೆಗೆ, ಹಿಂದೂ ಪರ ಸಂಘಟನೆಗಳಿಗೆ, ಅಭಿವೃದ್ಧಿ ಪರ ಚಿಂತಕರಿಗೆ ಸಾಕಷ್ಟು ನೋವು ತಂದಿರುವ ವಿಷಯದನ್ವಯ, ಯತ್ನಾಳರಿಗೆ ನೈತಿಕ ಬೆಂಬಲ ನೀಡಲು, ಓಲೈಕೆ ರಾಜಕಾರಣದಿಂದ ಅತೀತರಾಗಿ ನೇರ ನಿಷ್ಟುರ ನುಡಿಗೆ ಹೆಸರಾಗಿರುವ, ಅಭಿವೃದ್ಧಿ ಪರ ಕಾಳಜಿ ಇಟ್ಟುಕೊಂಡ ವ್ಯಕ್ತಿಗೆ ಇಂದು ಸೋಲಾಗಬಾರದು ಎಂದು ಪಟ್ಟಣದ ಸಮಸ್ತ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಮಕ್ಕಳ ವಿದ್ಯಾಭ್ಯಾಸದಲ್ಲಿ ಶಾಲೆಯ ಶಿಕ್ಷಕರದಷ್ಟೇ ಮಹತ್ವದ ಪಾತ್ರವಲ್ಲ. ಪಾಲಕರ ಪಾತ್ರವು ಹಿರಿದಾದದ್ದು ಎಂದು ನಾಗರತ್ನ ಅಶೋಕ ಮನಗೂಳಿ ಹೇಳಿದರು.ಪಟ್ಟಣದ ಕಿಡ್ಜಿ ಆಂಗ್ಲಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡ ವಾರ್ಷಿಕ ಸಂಸ್ಕಾರ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ಅವರ ಚಲನ ವಲನದ ಮೇಲೆ ಪಾಲಕರು ನಿಗಾವಹಿಸಬೇಕು. ಪ್ರಾಥಮಿಕ ಹಂತ ಮಕ್ಕಳ ಬೆಳವಣಿಗೆಗೆ ಭದ್ರ ಬುನಾದಿ ಇದ್ದಂತೆ. ಮಕ್ಕಳು ಎಳ ವಯಸ್ಸಿನಲ್ಲಿಯೇ ಉತ್ತಮ ಸಂಸ್ಕಾರದ ಅಡಿಪಾಯ ಹಾಕುವಲ್ಲಿ ಪಾಲಕ, ಶಿಕ್ಷಕರು ಒಂದೇ ನಾಣ್ಯದ ಎರಡು ಮುಖಗಳಂತೆ ಕಾರ್ಯನಿರ್ವಹಿಸಬೇಕು. ಮಕ್ಕಳ ದೈಹಿಕ, ಮಾನಸಿಕ ಶ್ರೇಯೋಭಿವೃದ್ಧಿಗೆ ಶಾಲೆ ಆವರಣದ ಪರಿಸರವು ಪರಿಣಾಮ ಬೀರುತ್ತದೆ. ಈ ಶಾಲೆಯಲ್ಲಿ ಮಕ್ಕಳ ಪ್ರಗತಿಗೆ ಪೂರಕ ವಾತರಣವಿರುವುದು ತುಂಬಾ ಹರ್ಷ ತಂದಿದೆ. ಕೇವಲ ಎರಡೇ ವರ್ಷದಲ್ಲಿ ಶಾಲೆ ಇಷ್ಟೋಂದು ಎತ್ತರಕ್ಕೆ ಬೆಳೆಯಬೇಕಾದರೆ ಶಾಲಾ ವ್ಯವಸ್ಥಾಪಕ ಮಂಡಳಿಯ ಜೊತೆಗೆ ಸಿಬ್ಬಂದಿಗಳ ಶ್ರಮವೂ ಪ್ರಮುಖವಾಗಿದೆ ಎಂದರು.ಈ ವೇಳೆ ಅತಿಥಿಯಾಗಿ ಭಾಗವಹಿಸಿದ ಪಿಎಸ್ಐ ಆರೀಫ್ ಮುಷಾಪುರಿ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಶಿಕ್ಷಕರಿಗೆ ವಿಷಯ ಬೋಧನೆಯ ಜೊತೆಗೆ ಬೋಧನಾ ಕೌಶಲ್ಯಗಳು ತುಂಬಾ ಮುಖ್ಯವಾಗಿವೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ವಿಷಯವನ್ನು ಪರಿಣಾಮಕಾರಿಯಾಗಿ ತಲುಪಿಸಲು ಅಣುಬೋಧನೆ ಒಂದು ಪ್ರಮುಖ ಸಾಧನವಾಗಿದೆ. ಎಂದು ಆರ್.ಡಿ.ಪಾಟೀಲ ಪಪೂ ಕಾಲೇಜಿನ ಉಪನ್ಯಾಸಕ ಡಾ.ಶರಣಬಸವ ಜೋಗೂರ ಹೇಳಿದರು.ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಹಾಗೂ ವಿದ್ಯಾರ್ಥಿ ಮಾರ್ಗದರ್ಶನದಡಿಯಲ್ಲಿ ಹಮ್ಮಿಕೊಂಡ ಅಣುಬೋಧನಾ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ನುಡಿಗಳಲ್ಲಿ ಶಿಕ್ಷಣವು ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಇದು ಕೇವಲ ಜ್ಞಾನವನ್ನು ನೀಡುವುದಲ್ಲದೇ ವ್ಯಕ್ತಿತ್ವವನ್ನು ರೂಪಿಸುತ್ತದೆ. ಸಮಾಜದಲ್ಲಿ ಯಶಸ್ವಿ ಜೀವನ ಸಾಗಿಸಲು ಸಹಾಯ ಮಾಡುತ್ತದೆ. ಇಂದಿನ ದಿನಮಾನದಲ್ಲಿ ಶಿಕ್ಷಕರಾದವರು ತಂತ್ರಜ್ಞಾನದ ಮೂಲಕ ಬೋಧನೆ ಮಾಡುವುದು ಅವಶ್ಯಕ ಎಂದರು.ಕಾರ್ಯಕ್ರಮದ ಅದ್ಯಕ್ಷತೆಯನ್ನು ಪ್ರಾಚಾರ್ಯೆ ಜೆ.ಸಿ.ನಂದಿಕೋಲ ವಹಿಸಿದ್ದರು. ಪ್ರಶಾಂತ ಕುಲಕರ್ಣಿ ಸ್ವಾಗತಿಸಿದರು. ಶೈಲಾ ದೊಡ್ಡಮನಿ ನಿರೂಪಿಸಿದರು. ಪವಿತ್ರಾ ಬಿರಾದಾರ ವಂದಿಸಿದರು. ಕ್ರಾರ್ಯಕ್ರಮದಲ್ಲಿ ಉಪನ್ಯಾಸಕ ಎಸ್.ಬಿ.ಬಿರಾದಾರ, ಆರ್.ಎ.ಹಾಲಕೇರಿ, ಭಾಗ್ಯಜ್ಯೋತಿ ದಸ್ಮಾ, ನಾಜಿಯಾ ಮುಲ್ಲಾ, ಚನ್ನಬಸವರಾಜ ಕತ್ತಿ, ಶಿವಕುಮಾರ ಕತ್ತಿ ಸೇರಿದಂತೆ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿಗಳು ಇದ್ದರು.
