ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷರಾಗಿ ಎನ್.ಬಿ.ಪಿಂಜಾರ ಅವರು ಎರಡನೇ ಅವಧಿಗೆ ಅವಿರೋಧವಾಗಿ ಆಯ್ಕೆಯಾದರು.
ಆಯ್ಕೆ ಕುರಿತು ಪಟ್ಟಣದ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದ ಸಭೆಯಲ್ಲಿ ಪಿಂಜಾರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಎಂ.ಡಿ.ಮಾಗಿ, ಪ್ರ.ಕಾರ್ಯದರ್ಶಿಯಾಗಿ ಬಿ.ಎಂ.ಕಡಿ, ಉಪಾರ್ಧಯಕ್ಷರಾಗಿ ಎಚ್.ಬಿ.ಕೊಣ್ಣೂರ, ರಾಜ್ಯ ಪರಿಷತ್ ಸದಸ್ಯರಾಗಿ ಬಸಯ್ಯ ಹಿರೇಮಠ, ಖಜಾಂಚಿಯಾಗಿ ಎಸ್.ಎಸ್. ಸುಧಾಕರ, ಸಹ ಕಾರ್ಯದರ್ಶಿಯಾಗಿ ಆರ್.ಜಿ.ಗುಣಕಿ ಮತ್ತು ಸಂಘಟನಾ ಕಾರ್ಯದರ್ಶಿಯಾಗಿ ಬಿ.ಜಿ.ಬಿರಾದಾರ ಆಯ್ಕೆಯಾಗಿದ್ದಾರೆ.
ಈ ವೇಳೆ ಶಾಲೆಯ ಮುಖ್ಯೋಪಾದ್ಯಾಯ ಎಂ.ಎಸ್.ಕವಡಿಮಟ್ಟಿ, ಸಂಘದ ಸದಸ್ಯರಾದ ದಯಾನಂದ ಪಾಟೀಲ, ಶಿವಾನಂದ ಮುತ್ತಗಿ, ಸಂಗಣ್ಣ ಹೂಗಾರ, ಜಿ.ಟಿ.ಮಂಗಳೂರ, ಎಸ್.ಎಸ್.ಪಾಟೀಲ, ಎಂ.ಎನ್.ಮೆರೆಖೋರ, ವಿ.ಪಿ.ಮಠ, ಮಹಾಂತೇಶ ತುರಡಗಿ, ಬಿ.ಜಿ.ಬೇನಾಳ, ಪಿ.ಬಿ.ಕುಂಟರೆಡ್ಡಿ, ಪ್ರಭುಗೌಡ ರಾರಡ್ಡಿ, ಸುಧಾರಾಣಿ, ಆರ್.ವೈ.ಸಜ್ಜನ ಇದ್ದರು.