ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಯಾವುದೆ ಧರ್ಮದ ಹಬ್ಬ ಹರಿದಿನಗಳಾಗಲಿ ಅದಕ್ಕೆ ಸಂಬಂದಪಟ್ಟಂತ ಕಾರ್ಯಕ್ರಮಗಳು ಮಾಡಬೇಕು ಅದರಿಂದ ಸಮಾಜ ಸುದಾರಣೆಯಾಗುವಂತ ಉತ್ತಮ ಸಂದೇಶ ನೀಡುವಂತಿರಬೇಕು ಎಂದು ಪ.ಪಂ ಅಧ್ಯಕ್ಷ ಸಾಧಿಕ ಸುಂಬಡ ಹೇಳಿದರು.
ಶನಿವಾರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮೊಹರಮ್ ಹಬ್ಬದ ನಿಮಿತ್ಯ ಹಮ್ಮಿಕೊಂಡಿದ್ದ ಪೂರ್ವಬಾವಿ ಶಾಂತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಹಬ್ಬ ಹರಿದಿನ, ಉತ್ಸವಗಳೆಂದರೆ ಕುಡಿದು ಅಸಭ್ಯ ವರ್ತನೆ ಮಾಡುವುದು ಹಬ್ಬಗಳಿಗೆ ಅಗೌರವಿಸಿದಂತೆ. ಯಾವುದೆ ಧರ್ಮದ ಹಬ್ಬಗಳಾಗಲಿ ಎಲ್ಲರು ಒಂದಾಗಿ ಶ್ರದ್ದಾ ಭಕ್ತಿಯಿಂದ ಶಾಂತಿಯುತವಾಗಿ ಹಬ್ಬವನ್ನು ಆಚರಿಸಬೇಕು ಎಂದು ಹೇಳಿದರು.
ಪಿಎಸ್ಐ ಅರವಿಂದ ಅಂಗಡಿ ಮಾತನಾಡಿ ಕಳೆದ ವರ್ಷ ಮೋರಮ್ಮ ಹಬ್ಬದಂದು ಬೇರೆ ಗ್ರಾಮಗಳಿಂದ ಸ್ನೇಹಿತರನ್ನು ಕರಿಸಿ ಸಣ್ಣ ಪುಟ್ಟ ಗಲಾಟೆಗಳಾಗಿದ್ದು ಈ ವರ್ಷ ಅದು ಮರುಕಳಿಸದೆ ಶಾಂತಿಯುತವಾಗಿ ಆಚರಿಸಿ. ಎಲ್ಲರು ಕಾನೂನಿ ಚೌಕಟ್ಟಿನಲ್ಲಿ ನಡೆದುಕೊಳ್ಳಬೇಕು ಒಂದು ವೇಳೆ ಕಾನೂನು ಮೀರಿ ಶಾಂತಿ ಭಂಗ ತರುವಂತ ಕೆಲಸ ಮಾಡಿದರೆ ಹಂತವರ ವಿರುದ್ದ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವದು. ಮಸಿದಿ ಮಂದಿರಗಳಲ್ಲಿ ಮತ್ತು ಪ್ರಮುಖ ಸ್ಥಳಗಳಲ್ಲಿ ಸಿಸಿ ಟಿವಿಗಳನ್ನು ಅಳವಡಿಸಲು ತಿಳಿಸಲಾಗಿದೆ ಅದನ್ನು ಅಳವಡಿಸಿ ಎಲ್ಲರು ಕಾನೂನು ಪರಿಪಾಲನೆ ಮಾಡಿ ಹಾಗೆ ಪೊಲೀಸ್ರಿಗೆ ಸಹಕಾರ ನೀಡಬೇಕು ಎಂದು ಹೇಳಿದರು.
ಹರಿಶ ಎಂಟಮಾನ, ಅಂಜುಮನ ಕಮಿಟಿಯ ಕಾರ್ಯದರ್ಶಿ ರಾಜಅಹ್ಮದ ಪಟೇಲ, ಮೈಬೂಬ ಸಳಿ ಮಾತನಾಡಿದರು. ವಾಹಬ ಸುಂಬಡ, ಬಸಿರ ತಾಂಬೋಳಿ, ದಯಾನಂದ ನಾರಯಣಕರ ಹಾಗೂ ಪಂಜಿ ಕುಡಿಸುವರು, ಬಾವಾಗಳು ಇದ್ದರು.