Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ನಗರದ ವಿದ್ಯಾನಗರ ಶ್ರೀಚನ್ನವೀರ ಸ್ವಾಮೀಜಿ ಉದ್ಯಾನವನದ ಹತ್ತಿರವಿರುವ ಮಾಜಿ ವಿಪ ಸದಸ್ಯ ಅರುಣ ಶಹಾಪುರ ಅವರ ಮನೆಯ ಮೇಲೆ ಬಿಜೆಪಿ ಸಂಸ್ಥಾಪನ ದಿನವನ್ನು ಬಿಜೆಪಿ ಧ್ವಜ ಹಾರಿಸುವುದರ ಮೂಲಕ ಆಚರಣೆ ಮಾಡಲಾಯಿತು.ಈ ವೇಳೆ ಮಾಜಿ ವಿಪ ಸದಸ್ಯ ಅರುಣ ಶಹಾಪುರ ಸಿಂದಗಿ ನಗರದ ಘಟಕದ ಬಿಜೆಪಿ ಅಧ್ಯಕ್ಷ ಮಲ್ಲಿಕಾರ್ಜುನ ಪಡಶೆಟ್ಟಿ, ಪ್ರಧಾನ ಕಾರ್ಯದರ್ಶಿ ಗುರು ತಳವಾರ, ಸಿದ್ದರಾಮ ಆನಗೊಂಡ ಇದ್ದರು.
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಸನಾತನ ಹಿಂದೂ ಧರ್ಮದ ತತ್ವ ಸಿದ್ದಾಂತವನ್ನು ಇಡೀ ವಿಶ್ವಕ್ಕೆ ಪಸರಿಸಿದ ಕೀರ್ತಿ ಶ್ರೀರಾಮಚಂದ್ರರಿಗೆ ಸಲ್ಲುತ್ತದೆ ಎಂದು ಸಂಘ ಪರಿವಾರದ ಸದಸ್ಯ ಶೇಖರಗೌಡ ಪಾಟೀಲ ಹೇಳಿದರು.ಸಿಂದಗಿ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸಂಘ-ಪರಿವಾರ ನೇತೃತ್ವದಲ್ಲಿ ಸಿಂದಗಿ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ವತಿಯಿಂದ ಪ್ರಪ್ರಥಮ ಬಾರಿಗೆ ಶ್ರೀರಾಮ ನವಮಿ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಧರ್ಮ ಶಾಶ್ವತ. ಅಧರ್ಮ ಅಶಾಶ್ವತವೆಂದು ತಮ್ಮ ರಾಜ್ಯಾಢಳಿತದಲ್ಲಿ ಇಡೀ ಜಗತ್ತಿಗೆ ತೋರಿಸಿ ಕೊಟ್ಟವರು ಯಾರಾದರೂ ಇದ್ದರೇ ಅದು ಶ್ರೀರಾಮ ಎಂದರು.ಈ ವೇಳೆ ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ ಮಾತನಾಡಿ, ತಂತ್ರಜ್ಞಾನದ ಪ್ರಗತಿಯೊಂದಿಗೆ ಜನರು ಧರ್ಮ ಮತ್ತು ಅಧರ್ಮದ ನಡುವಿನ ವ್ಯತ್ಯಾಸ ಅರಿತುಕೊಂಡು ಕರ್ಮದ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳಬೇಕು. ಎಲ್ಲರೂ ಧರ್ಮದ ಪರಿಕಲ್ಪನೆಯನ್ನು ಅಳವಡಿಸಿಕೊಂಡು ಸದಾ ಧರ್ಮದ ಹಾದಿಯಲ್ಲಿ ನ್ಯಾಯ, ನೀತಿ, ಧಾನ, ಧರ್ಮ ಮತ್ತು ಸತ್ಯದಿಂದ ನಡೆದ ಪ್ರಭು ಶ್ರೀರಾಮರ ಜೀವನ ಶೈಲಿ ಅಳವಡಿಸಿಕೊಂಡು ಎಲ್ಲರೂ ಸನಾತನ ಧರ್ಮದ ರಕ್ಷಣೆಯಲ್ಲಿ ಜೀವನ ಸಾಗಿಸುವಂತಾಗಬೇಕು ಎಂದು…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಇಂದು ಬಿಜೆಪಿ ಪಕ್ಷ ಸ್ಥಾಪನೆಗೊಂಡ ದಿನ. ಪಕ್ಷಕ್ಕಾಗಿ ಅಟಲ್ಬಿಹಾರಿ ವಾಜಪೇಯಿ, ಎಲ್.ಕೆ ಅಡ್ವಾಣಿ, ನರೇಂದ್ರ ಮೋದಿ, ಅಮಿತ್ ಶಾ, ಯೋಗಿ ಆದಿತ್ಯನಾಥ, ಯಡಿಯೂರಪ್ಪ ಅವರಂತಹ ಹಿರಿಯರ ಮಾರ್ಗದರ್ಶನದ ಜೊತೆಗೆ ಸಾವಿರಾರು ಕಾರ್ಯಕರ್ತರು ಧ್ಯೇಯಕ್ಕಾಗಿ ತಮ್ಮ ಬದುಕನ್ನು ಸಮರ್ಪಿಸಿ ಪಕ್ಷ ಕಟ್ಟಿ ಬೆಳಸಿದ್ದಾರೆ ಎಂದು ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ ಹೇಳಿದರು.ಸಿಂದಗಿ ಪಟ್ಟಣದ ಭಾರತೀಯ ಜನತಾ ಪಕ್ಷದ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಬಿಜೆಪಿ ಪಕ್ಷದ ೪೬ನೇ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಭಾರತ ಮಾತೆ ಹಾಗೂ ಪಕ್ಷದ ಸಂಸ್ಥಾಪಕ ಶ್ಯಾಮಪ್ರಸಾದ್ ಮುಖರ್ಜಿ, ಪಂಡಿತ ದೀನದಯಾಲ್ ಉಪಾಧ್ಯಾಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು, ವಿಶ್ವದಲ್ಲೇ ಅತೀ ಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷವಾಗಿ ಬಿಜೆಪಿ ಬೆಳೆದಿದೆ. ದೇಶದ ಯಾವುದೋ ಭಾಗದ ಸಾಮಾನ್ಯ ಕಾರ್ಯಕರ್ತನೊಬ್ಬ ದೇಶವನ್ನು ಮುನ್ನಡೆಸುವ ನಾಯಕನಾಗಿ ಬೆಳೆಯಲು ಅವಕಾಶವಿರುವ ಏಕೈಕ ಪಕ್ಷವೆಂದರೆ ಅದು ಭಾರತೀಯ ಜನತಾ ಪಕ್ಷ. ಇಡೀ ವಿಶ್ವ ಪ್ರಸಂಶಿಸುವಂತಹ ಶ್ರೇಷ್ಠ ನಾಯಕರು ಪಕ್ಷದ ತತ್ವ ಸಿದ್ಧಾಂತಕ್ಕೆ…
ಉದಯರಶ್ಮಿ ದಿನಪತ್ರಿಕೆ ಚಿಕ್ಕಪಡಸಲಗಿ :ಬಾಗಲಕೋಟೆ ಜಿಲ್ಲೆಯ ಬನಹಟ್ಟಿ-ರಬಕವಿ ತಾಲೂಕಿನ ಯಲ್ಲಟ್ಟಿ ಕೊಣ್ಣೂರ ವಿಜ್ಞಾನ ಪದವಿಪೂರ್ವ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕ ಚಂದ್ರಕಾಂತ ರಾಮಪ್ಪ ಹೊಸೂರ ಅವರಿಗೆ ಡಾಕ್ಟರೇಟ್ ಪಿಎಚ್.ಡಿ ಪದವಿ ಲಭಿಸಿದೆ.ಹೊಸೂರ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ “ಕೃಷ್ಣಾತೀರ ಕನ್ನಡ ಕಥನ ಸಾಹಿತ್ಯದಲ್ಲಿ ಸಾಂಸ್ಕೃತಿಕ ವಿನ್ಯಾಸಗಳು” (ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಮುಳುಗಡೆ ಪ್ರದೇಶದ ಪರಿಸರವನ್ನು ಅನುಲಕ್ಷಿಸು ) ಎಂಬ ಪ್ರಬಂಧವನ್ನು ಮಂಡಿಸಿದ್ದರು. ಕೆಎಲ್ಇ ಪದವಿ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯರಾದ ಡಾ.ಬಿ.ಎಮ್.ಪಾಟೀಲ ಇವರ ಮಾರ್ಗದರ್ಶನದಲ್ಲಿ ಹೊಸೂರ ಅವರು ಮಂಡಿಸಿದ ಪ್ರಬಂಧಕ್ಕೆ ಡಾಕ್ಟರೇಟ್ ಪಿಎಚ್.ಡಿ ಪದವಿ ದೊರೆತಿದೆ.ಈಚೆಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ೩೩ ನೇ ನುಡಿಹಬ್ಬದಲ್ಲಿ ರಾಜ್ಯಪಾಲರು ಸೇರಿದಂತೆ ಉನ್ನತ ಶಿಕ್ಷಣ ಸಚಿವರಾದ ಡಾ.ಎಮ್.ಸಿ.ಸುಧಾಕರ್ ಅವರು ಹಾಗೂ ಕುಲಪತಿಗಳಿಂದ ಚಂದ್ರಕಾಂತ ಹೊಸೂರ ಪಿಎಚ್.ಡಿ (ಡಾಕ್ಟರೇಟ್) ಪದವಿ ಪ್ರಮಾಣ ಪತ್ರವನ್ನು ಸ್ವೀಕರಿಸಿದ್ದಾರೆ.ಡಾಕ್ಟರೇಟ್ ಪಿಎಚ್.ಡಿ ಪದವಿ ಪಡೆದಿರುವ ಚಂದ್ರಕಾಂತ ಹೊಸೂರ ಅವರಿಗೆ ಕೊಣ್ಣೂರ ಕಾಲೇಜಿನ ಪ್ರಾಂಶುಪಾಲರಾದ ಪ್ರೊ,ಬಸವರಾಜ ಕೊಣ್ಣೂರ, ಆಡಳಿತಾಧಿಕಾರಿಗಳಾದ ಶೀತಲ ಕೊಣ್ಣೂರ, ಉಪ ಪ್ರಾಚಾರ್ಯರಾದ ಶಿವಾನಂದ…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಬೇಸಿಗೆಯಲ್ಲಿ ಜನಜಾನುವಾರಗಳಿಗೆ ಸಹಕಾರಿಯಾಗುವಂತೆ ಕೂಡಲೇ ಆಲಮಟ್ಟಿ ಜಲಾಶಯದ ಚಿಮ್ಮಲಗಿ ಏತ ನೀರಾವರಿ ಕಾಲುವೆಗೆ ನೀರು ಹರಿಸುವಂತೆ ರೈತರು ಆಗ್ರಹಿಸಿದ್ದಾರೆ.ಪಟ್ಟಣದ ಪ್ರವಾಸಿಮಂದಿರದಲ್ಲಿ ಭಾನುವಾರ ಸಭೆ ಸೇರಿದ ರೈತರು ಎಪ್ರೀಲ್ನಲ್ಲಿ ಬೇಸಿಗೆಯ ಬಿಸಿಲಿನ ತಾಪಕ್ಕೆ ನೀರಿನ ಕೊರತೆ ಕಾಡಲಾರಂಭಿಸಿದೆ. ಇನ್ನೂ ಮೇ ತಿಂಗಳು ಮುಗಿಯಬೇಕು. ಅಲ್ಲಿಯವರೆಗೆ ಜನತೆ ಹಾಗೂ ಜಾನುವಾರಗಳಿಗೆ ಕುಡಿಯುವ ನೀರಿನ ಅಗತ್ಯತೆಯಿದೆ. ಆದ್ದರಿಂದ ಇದೇ ದಿ: ೯ ರ ಒಳಗಾಗಿ ಚಿಮ್ಮಲಗಿ ಏತನೀರಾವರಿ ಕಾಲುವೆಗೆ ನೀರು ಹರಿಸಲು ಜಿಲ್ಲಾ ಸಚಿವರು, ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು.ಕಾಲುವೆಗಳಿಗೆ ನೀರು ಹರಿಯುವುದರಿಂದ ಜಲಮೂಲಗಳಾದ ಭಾವಿ, ಬೊರೆವೆಲ್ಗಳು ಸಹ ನೀರಿನಿಂದ ಭರ್ತಿಯಾಗಿ ಪ್ರಾಣಿ, ಪಕ್ಷಿಗಳಿಗೆ ಜೀವಜಲ ದೊರೆಯುವಂತಾಗುತ್ತದೆ. ಒಂದು ವೇಳೆ ಶಾಸಕರು, ಸಚಿವರು, ಜಿಲ್ಲಾಡಳಿತ ನಿರ್ಲಕ್ಷ್ಯ ತೋರಿ ನೀರು ಹರಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ರೈತರು ರಾಷ್ಟೀಯ ಹೆದ್ದಾರಿ ತಡೆ ಕೈಗೊಂಡು ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ. ಆದ್ದರಿಂದ ತಾಲ್ಲೂಕಿನ ಜಾಲವಾದ, ಬಮ್ಮನಜೋಗಿ, ಪುರದಾಳ, ಮುಳಸಾವಳಗಿ, ಇಂಗಳಗಿ, ಹರನಾಳ, ಕಡ್ಲೇವಾಡ ಪಿಸಿಎಚ್,…
ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅಭಿಮತ ಉದಯರಶ್ಮಿ ದಿನಪತ್ರಿಕೆ ಆಲಮೇಲ: ಈ ವರ್ಷ ಮಳೆ, ಬೆಳೆ ಚೆನ್ನಾಗಿರುತ್ತದೆ ಎಂದು ಹಾಸನ ಜಿಲ್ಲೆಯ ಹಾರನಳ್ಳಿ ಕೊಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದರು.ಅವರು ಆಲಮೇಲ ತಾಲ್ಲೂಕಿನ ಕಡಣಿ ಗ್ರಾಮದ ಶರಣ ಭೋಗೇಶ್ವರ ಜಾತ್ರಾ ಮಹೋತ್ಸವದ ಸಾಮೂಹಿಕ ವಿವಾಹ ಮಹೋತ್ಸವ ಹಾಗೂ ಧರ್ಮಸಭೆ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು.ಸ್ವಾರ್ಥ ತುಂಬಿದ ವಾತಾವರಣ ಕಲ್ಮಶವಾಗಿರುವ ಇಂದಿನ ದಿನಗಳಲ್ಲಿ ಸಾಮೂಹಿಕ ಕಲ್ಯಾಣ ಮಹೋತ್ಸವ ಕಾರ್ಯಗಳು ಶ್ಲಾಘನೀಯ, ಜ್ಞಾನ ತಿಳುವಳಿಕೆಗಳು ಬರಬೇಕಾದರೆ ಅರಿಷಡ್ ಗುಣಗಳು ಮೊದಲು ಹೋಗಲಾಡಿಸಬೇಕು ಎಂದರು.ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಕಾರ್ಯಕ್ರಮವನ್ನು ಉದ್ಘಾಟಿಸಿ ” ಸಾಮೂಹಿಕ ವಿವಾಹಗಳು ಬಡವರಿಗೆ ಅನುಕೂಲವಾಗಿವೆ ಮತ್ತು ದುಂಡುವೆಚ್ಚಕ್ಕೆ ಕಡಿವಾಣ ಹಾಕಿದಂತಾಗಿದೆ ಎಂದು ಹೇಳಿ ನೀರು ಕೊಡುವ ಮತ್ತು ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬಿಸುವ ಕಾರ್ಯವನ್ನು ಜಲಸಂಪನ್ಮೂಲ ಸಚಿವನಾಗಿ ನಿಭಾಯಿಸಿದ್ದೇನೆ, ಈಗ ಕೈಗಾರಿಕಾ ಮಂತ್ರಿಯಾಗಿ ಜಿಲ್ಲೆಯ ಹತ್ತು ಸಾವಿರ ಜನರಿಗೆ ಉದ್ಯೋಗ ಕೊಡುವಲ್ಲಿ ಪ್ರಮಾಣಿಕವಾಗಿ ನಡೆದುಕೊಳ್ಳುವೆ,ಇದು ಬದಲಾವಣೆಯ ಪರ್ವಕಾಲ, ಮನುಷ್ಯನ…
ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಸಮೀಪದ ಯಲಗೂರದ ಯಲಗೂರೇಶ್ವರ ದೇವಸ್ಥಾನದಲ್ಲಿ ಭಾನುವಾರ ಸಂಭ್ರಮದಿಂದ ರಾಮನವಮಿ ಆಚರಿಸಲಾಯಿತು.ಬೆಳಿಗ್ಗೆ ಶ್ರೀ ರಾಮನ ಉತ್ಸವ ಮೂರ್ತಿಯ ಮೆರವಣಿಗೆ ಪೂರ್ಣ ಕುಂಭ ಹೊತ್ತ ಮಹಿಳೆಯರ ಮಧ್ಯೆ ಜರುಗಿತು. ಕೃಷ್ಣಾ ನದಿಗೆ ತೆರಳಿ ಸ್ನಾನ ಮಾಡಿಸಿ ನಂತರ ನದಿಯಿಂದ ದೇವಸ್ಥಾನದವರೆಗೆ ಮೆರವಣಿಗೆ ಜರುಗಿತು.ದೇವಸ್ಥಾನದ ಆವರಣದಲ್ಲಿ ಮಧ್ಯಾಹ್ನ ೧೨ ಕ್ಕೆ ತೊಟ್ಟಿಲಲ್ಲಿ ರಾಮನ ಮೂರ್ತಿ ಇಟ್ಟು ರಾಮನ ತೊಟ್ಟಿಲು ತೂಗಲಾಯಿತು. ಅಲ್ಲಿ ಹೆಸರಿಡುವ ಪ್ರಕ್ರಿಯೆ ಜರುಗಿತು. ಭಕ್ತ ಸಮುದಾಯ ರಾಮನ ಘೋಷಣೆ ಕೂಗಿದರು. ಸೇರಿದ್ದ ಮಹಿಳೆಯರು ರಾಮನ ವಿವಿಧ ಅರತಿ ಹಾಡಿದರು. ಯಲಗೂರೇಶನಿಗೆ ಪಂಚಾಮೃತ ಅಭಿಷೇಕ, ಅಲಂಕಾರ, ಮಹಾಪೂಜೆಯೂ ಜರುಗಿತು.ನೆರೆದ ಭಕ್ತಾದಿಗಳಿಗೆ ಪಾನಕಾ, ಮಜ್ಜಿಗೆ, ಕೋಸಂಬರಿ ವಿತರಿಸಲಾಯಿತು. ಡಾ ವಾದಿರಾಜ ಯಲಬುರ್ಗಿ ದಂಪತಿ ಪೂಜೆ ನೆರವೇರಿಸಿದರು.ಫಂಡರಪುರದಿಂದ ಬಂದ ಭಕ್ತಾದಿಗಳು ಸೇರಿ ದ್ರಾಕ್ಷಿಯ ಅಲಂಕಾರ ನೆರವೇರಿಸಿದರು. ಯಲಗೂರೇಶನಿಗೆ ಹಾಗೂ ದೇವಸ್ಥಾನದ ಆವರಣವೆಲ್ಲವೂ ದ್ರಾಕ್ಷಿಯ ಅಲಂಕಾರ ಮಾಡಿದ್ದು ವಿಶೇಷ. ೧೦೦ ಕೆಜಿಗೂ ಅಧಿಕ ದ್ರಾಕ್ಷಿ ಬಳಸಲಾಗಿತ್ತು.ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಅನಂತ ಓಂಕಾರ, ಪಾಂಡುರಂಗ ಆಚಾರ್ಯ…
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಎಲೆಮರೆಯ ಕಾಯಿಯಂತೆ ಸಮಾಜದ ಏಳಿಗೆಗಾಗಿ ಸೇವೆ ಸಲ್ಲಿಸಿ ವಿಶೇಷ ಸಾಧನೆ ಮಾಡಿದ 35 ಜನ ಸಾಧಕರನ್ನು ಗುರುತಿಸಿ ಅವರ ಜೀವಮಾನ ಸಾಧನೆ, ಪಡೆದ ಪ್ರಶಸ್ತಿ-ಪುರಸ್ಕಾರಗಳ ಕುರಿತು ‘ಅಪರೂಪದವರು’ ಕೃತಿಯಲ್ಲಿ ದಾಖಲಿಸಿರುವುದು ಜನ ಮೆಚ್ಚುಗೆಯ ಕಾರ್ಯವಾಗಿದೆ ಎಂದು ಶಾಸಕ ನಾಡೋಜ ಜಗದೀಶ ಗುಡಗುಂಟಿ ಹೇಳಿದರು.ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಮತ್ತು ತಾಲ್ಲೂಕು ಘಟಕಗಳು, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಮನ ಟ್ರಸ್ಟ್ ಬೆಂಗಳೂರು, ಸಾಹಿತ್ಯ ಸೌರಭ ವೇದಿಕೆ ಜಮಖಂಡಿ ಹಾಗೂ ಶ್ರೀವೀರೇಶ್ವರ ಪ್ರಕಾಶನ ಜಮಖಂಡಿ ಇವುಗಳ ಆಶ್ರಯದಲ್ಲಿ ಇಲ್ಲಿನ ಡಾ.ಗುರುದೇವ ರಾನಡೆ ಸಾಂಸ್ಕೃತಿಕ ಭವನದಲ್ಲಿ ನಡೆದ ಡಾ.ಸಂಗಮೇಶ ಮಟೋಳಿ ವಿರಚಿತ ತಾಲ್ಲೂಕಿನ ‘ಅಪರೂಪದವರು’ ಕೃತಿ ಲೋಕಾರ್ಪಣೆ ಮತ್ತು ರಾಜ್ಯಮಟ್ಟದ ‘ಸಾಧಕರತ್ನ’ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಮೂಲ್ಯವಾದ ಸಮಯವನ್ನು ಕೊಟ್ಟು ಇನ್ನೊಬ್ಬರ ಸಾಧನೆಯನ್ನು ಮೆಚ್ಚಿ ಕೃತಿ ರಚಿಸಿರುವುದು ಲೇಖಕರ ಹೃದಯ ಶ್ರೀಮಂತಿಕೆಯ ಪ್ರತೀಕವಾಗಿದೆ ಎಂದರು.ರಾಜ್ಯ ಸರ್ಕಾರದ ಮಾಹಿತಿ ಆಯೋಗದ ಮಾಹಿತಿ ಆಯುಕ್ತ ರಾಜಶೇಖರ…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ವಿವೇಕಾನಂದ ಗಲ್ಲಿಯಲ್ಲಿ ರಾಮನವಮಿಯಂಗವಾಗಿ ಭಾನುವಾರ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜನರಿಗೆ ಪಾನಕ,ಸಿಹಿ ಪ್ರಸಾದ ಹಂಚುವ ಮೂಲಕ ರಾಮನವಮಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಅಶೋಕ ಹಾರಿವಾಳ, ಮತಾಬ ಬಮ್ಮನಬಳ್ಳಿ, ಬಸವರಾಜ ಹಾರಿವಾಳ, ಪ್ರಕಾಶ ಮುರಾಳ, ಕೃಷ್ಣಾ ಬಡಿಗೇರ, ಸಂಗಮೇಶ ಮುರಾಳ, ಸಂಗಮೇಶ ಪಡಶೆಟ್ಟಿ, ಮಲ್ಲಿಕಾರ್ಜುನ ಎರಡೆತ್ತಿನ, ಬಸವರಾಜ ಕೆಂಭಾವಿ, ದಯಾನಂದ ಬಾಸುತ್ಕರ, ಮಲ್ಲು ಬೇವನೂರ, ಗುರು ಬೇವನೂರ, ಜಗು ಬಡಿಗೇರ, ಅಶ್ವಿನಿ ಮುರಾಳ, ರೂಪಾ ಮುರಾಳ,ರಮೇಶ ಮುರಾಳ ಇತರರು ಇದ್ದರು.
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ಐತಿಹಾಸಿಕ ಬಸವೇಶ್ವರ ದೇವಸ್ಥಾನ ಮುಂಭಾಗ ವಿವೇಕ ಬ್ರಿಗೇಡ್ ಸಂಸ್ಥೆಯ ಬೇಸಿಗೆಕಾಲದ ಹಿನ್ನೆಲೆಯಲ್ಲಿ ಜನರ ಬೇಸಿಗೆಯ ಬೇಗೆಯನ್ನು ತಣಿಸಲು ಕುಡಿಯುವ ನೀರಿನ ಅರವಟ್ಟಿಗೆ ಸೇವೆ ಹಾಗೂ ಪ್ರಾಣಿ-ಪಕ್ಷಿಗಳಿಗೆ ದವಸ ಧಾನ್ಯ, ಕುಡಿಯಲು ನೀರಿನ ವ್ಯವಸ್ಥೆಗೆ ಸಿದ್ದಲಿಂಗ ಸ್ವಾಮೀಜಿ, ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ ಅವರು ಶನಿವಾರ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು, ಈ ವರ್ಷದಲ್ಲಿ ಬೇಸಿಗೆ ಬಿಸಿಲು ಬಹಳವಾಗಿದೆ. ಮಾರುಕಟ್ಟೆ ಬರುವ ಜನರ ಬೇಗೆ ತಣಿಸಲು ವಿವೇಕ ಬ್ರಿಗೇಡ್ ಸಂಸ್ಥೆಯುವರು ಮಾಡಿರುವ ಅರವಟ್ಟಿಗೆ ಸೇವೆ ನಿಜಕ್ಕೂ ಶ್ಲಾಘನೀಯ. ಪ್ರಾಣಿ-ಪಕ್ಷಿಗಳಿಗೂ ಕುಡಿಯುವ ನೀರು, ದವಸ-ಧಾನ್ಯ ವ್ಯವಸ್ಥೆ ಮಾಡಿರುವದು ಅವರ ಅಳಿಲು ಸೇವೆಯು ಮೆಚ್ಚುವಂತಹದ್ದು ಎಂದರು.ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಅಶೋಕ ಹಾರಿವಾಳ, ಕರ್ನಾಟಕ ರಾಜ್ಯೋತ್ಸವ ಪುರಸ್ಕ್ರತ ಜನಪದ ಗಾಯಕ ಬಸವರಾಜ ಹಾರಿವಾಳ, ವಿವೇಕ ಬ್ರಿಗೇಡ್ ಸಂಸ್ಥೆಯ ವಿನುತ ಕಲ್ಲೂರ, ರವಿಗೌಡ ಚಿಕ್ಕೊಂಡ, ಡಾ.ಬಸವರಾಜ ಕೋಟಿ, ಮಣಿಕಂಠ ಕಲ್ಲೂರದೇಸಾಯಿ, ಶಿವಾನಂದ ತೋಳನೂರ, ಸಿದ್ದು ಬೆಣ್ಣೂರ, ಮಹೇಂದ್ರಕುಮಾರ ಸತೀಶ ಕ್ವಾಟಿ, ಪ್ರಾಣೇಶ…
