Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪ್ರಾಚೀನ ಕಾಲದಿಂದಲೂ ಭಾರತಿಯ ಸಮಾಜದಲ್ಲಿ ಆರ್ಥಿಕ, ಸಾಮಾಜಿಕ, ಧಾರ್ಮಿಕ ತಾರತಮ್ಯತೆ ಬದುಕು ನಿರಂತರವಾಗಿ ಸಾಗಿ ಬಂದಿತ್ತು. ೧೨ ನೇ ಶತಮಾನದಲ್ಲಿ ಇದಕ್ಕೊಂದು ನ್ಯಾಯ ಒದಗಿಸಿಕೊಡುವ ಪ್ರಯತ್ನ ಬಸವಾದಿ ಶರಣರಿಂದ ನಡೆಯಿತು ಎಂದು ಅಕ್ಕನಾಗಮ್ಮ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಸುರೇಶ ಗಬ್ಬೂರ ಹೇಳಿದರು.ಪಟ್ಟಣದ ಬಿಎಲ್ಡಿಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು, ಮಹಾವಿದ್ಯಾಲಯದ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಹಾಗೂ ಲಿಂ.ನಾಗಪ್ಪ ಗುರಪ್ಪ ಮರ್ತುರ, ಲಿಂ.ಭಾಗೀರಥಿಬಾಯಿ ಮೇಟಿ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ೧೨ ನೇ ಶತಮಾನದಲ್ಲಿ ರಚನೆಗೊಂಡ ಅತ್ಯಮೂಲ್ಯವಾದ ವಚನ ಸಾಹಿತ್ಯವನ್ನು ೨೧ ನೇ ಶತಮಾನದಲ್ಲಿ ಸರಳವಾಗ ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಲು ಅವಕಾಶ ಮಾಡಿಕೊಟ್ಟ ಶ್ರೇಯಸ್ಸು ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಅವರಿಗೆ ಸಲ್ಲುತ್ತದೆ. ವಚನ ಸಾಹಿತ್ಯದಿಂದ ಸಮಾಜಕ್ಕೆ ನ್ಯಾಯ ಸಿಗುತ್ತದೆ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎ.ವ್ಹಿ.ಸೂರ್ಯವಂಶಿ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ವಚನ ಸಾಹಿತ್ಯದ ಸಂರಕ್ಷಣೆ ಮತ್ತು ಪ್ರಸಾರದಲ್ಲಿ ಡಾ.ಹಳಕಟ್ಟಿ ಅವರ ಪಾತ್ರ ಅನನ್ಯವಾದುದು. ಅವರು ತಮ್ಮ ಜೀವನವನ್ನೇ ಈ ಮಹತ್ಕಾರ್ಯಕ್ಕೆ ಮುಡಿಪಾಗಿಟ್ಟರು. ನಶಿಸಿಹೋಗುತ್ತಿದ್ದ ವಚನಗಳನ್ನು ಸಂಗ್ರಹಿಸಿ, ಸಂಪಾದಿಸಿ, ಪ್ರಕಟಿಸುವ ಮೂಲಕ ಅವರು ಕನ್ನಡ ಸಾಹಿತ್ಯ ಲೋಕಕ್ಕೆ ಅಳಿಸಲಾಗದ ಕೊಡುಗೆ ನೀಡಿದ್ದಾರೆ ಎಂದು ಕಾಯಾಧ್ಯಕ್ಷ ಸುಧಾಕರ ಚವ್ಹಾಣ ಹೇಳಿದರು.ಸಿಂದಗಿ ಪಟ್ಟಣದ ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದಲ್ಲಿ ಎಕ್ಯೂಐಸಿ ಮತ್ತು ಕನ್ನಡ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಅವರ ೧೪೫ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಚನ ಪಿತಾಮಹ ಡಾ.ಪ.ಗು. ಹಳಕಟ್ಟಿಯವರು ಒಬ್ಬ ಶ್ರೇಷ್ಠ ಸಾಮಾಜಿಕ ಸಂತ. ವಚನ ಸಾಹಿತ್ಯಕ್ಕೆ ಅವರು ನೀಡಿದ ಕೊಡುಗೆ ಅನನ್ಯ. ವಚನಗಳ ಮಹತ್ವವನ್ನು ಇಂದಿನ ಯುವ ಪೀಳಿಗೆಗೆ ತಲುಪಿಸುವ ಅಗತ್ಯವಿದೆ ಎಂದರು.ಈ ವೇಳೆ ಐಕ್ಯೂಎಸಿ ಮುಖ್ಯಸ್ಥ ಪ್ರಶಾಂತ ಕುಲಕರ್ಣಿ, ಉಪನ್ಯಾಸಕ ದಾನಯ್ಯ ಮಠಪತಿ ಮಾತನಾಡಿ, ಡಾ.ಹಳಕಟ್ಟಿ ಅವರು ಕೇವಲ ಒಬ್ಬ ಸಂಶೋಧಕರಾಗಿರಲಿಲ್ಲ. ಬದಲಿಗೆ ವಚನ ಚಳುವಳಿಯ ಪುನರುಜ್ಜೀವನಕ್ಕೆ ಕಾರಣರಾದವರು. ಅವರ ಶ್ರಮವಿಲ್ಲದಿದ್ದರೆ,…
ಲೇಖನ- ಜಯಶ್ರೀ .ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಜೀವನವು ಸರಳ ರೇಖೆಯಲ್ಲ. ಅದು ಏರಿಳಿತಗಳಿಂದ ತುಂಬಿದೆ. ಬದುಕಿನ ಎಲ್ಲ ದಿನಗಳೂ ಒಂದೇ ತರನಾಗಿರುವುದಿಲ್ಲ. ಒಂದು ದಿನ ನಾನು ಎಲ್ಲವನ್ನೂ ಅರ್ಥಮಾಡಿಕೊಂಡಿದ್ದೇನೆ ಎಂದು ಅನಿಸಬಹುದು. ನಂತರ ಒಂದೇ ಕ್ಷಣದಲ್ಲಿ ನನಗೇನೂ ಗೊತ್ತಿಲ್ಲ. ನಾನಿನ್ನೂ ಬಹಳಷ್ಟು ತಿಳಿದುಕೊಳ್ಳುವುದು ಬಾಕಿ ಇದೆ ಎಂದೆನಿಸುವುದು. ಪ್ರತಿದಿನ ಬೇರೆ ಬೇರೆ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಸವಾಲುಗಳನ್ನು ದಾರಿ ನಡುವೆ ಇರುವ ದೊಡ್ಡ ಕಲ್ಲುಗಳೆಂದು ತಿಳಿಯುತ್ತೇವೆ. ಎಷ್ಟೋ ಸಲ ಅವುಗಳನ್ನು ಮಗ್ಗಲು ಮುಳ್ಳುಗಳೆಂದು ಭಾವಿಸಿ ಕಷ್ಟ ಪಡುತ್ತೇವೆ. ಆದರೆ ಅಸಲಿಯಾಗಿ ಅವುಗಳು ನಮ್ಮ ಬದುಕನ್ನು ಬೆಳಗಿಸುವ ದೀಪಗಳು. ಏಕೆಂದರೆ ಅವು ನಮ್ಮಲ್ಲಿ ಹುದುಗಿರುವ ಸೃಜನಶೀಲ ಮೇದಾವಿತನವನ್ನು ಹೊರಗೆಡುವುತ್ತವೆ. ಆದರೆ ನಾವು ಸವಾಲುಗಳ ಕರೆಗೆ ಓಗೊಡುವುದಿಲ್ಲ. ಅದಕ್ಕೆ ಕಾರಣ ಇಲ್ಲದಿಲ್ಲ. ನಮ್ಮಲ್ಲಿ ಬಹಳಷ್ಟು ಜನರು ಬದಲಾವಣೆ ಬಯಸುವುದಿಲ್ಲ. ಅಸಾಮಾನ್ಯರಾಗಲು ಹಿಂಜರಿಯುತ್ತಾರೆ. ಕೇವಲ ಕೆಲವರು ಮಾತ್ರ ಸಾಧಕರಾಗುತ್ತಿದ್ದಾರೆ. ಅವರು ಮಾತ್ರ ಸವಾಲುಗಳ ಬೇಲಿಯನ್ನು ದಾಟಲು ಮನಸ್ಸು ಮಾಡುತ್ತಾರೆ. ಉಳಿದವರೆಲ್ಲ ಸವಾಲೆಂಬ ಬೇಲಿಗಳಿಗೆ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಮನೆ ಮಂದಿ, ಬಂಧು-ಬಳಗವನ್ನು ಬಿಟ್ಟು ದೇಶ ಸೇವೆ ಮಾಡಿದಕ್ಕೆ ಇಂದು ತಾವು ನೀಡಿದ ಗೌರವಕ್ಕೆ ಚಿರಋಣಿಯಾಗಿದ್ದೇನೆ ಎಂದು ನಿವೃತ್ತ ಯೋಧ ಯಲಗೊಂಡ ರಾಮನಗೌಡ ಬಾಲಗೊಂಡ ಹೇಳಿದರು.ಪಟ್ಟಣದ ಬಸವೇಶ್ವರ ವೃತ್ತದಲ್ಲಿ ನಿವೃತ್ತ ಯೋಧ ಯಲಗೊಂಡ ರಾಮನಗೌಡ ಬಾಲಗೊಂಡ ಅವರು ಮಾತನಾಡಿದ ಅವರು, ನಮ್ಮ ದೇಶವನ್ನು ಯಾರು ಸೋಲಿಸಲು ಸಾಧ್ಯವಿಲ್ಲದ್ದಷ್ಟು ನಮ್ಮ ಸೈನ್ಯ ಬಲಿಷ್ಠವಾಗಿದೆ. ಯುವಕರು ಚೆನ್ನಾಗಿ ಓದಿ ದುಶ್ಚಟಗಳಿಗೆ ಬಲಿಯಾಗದೆ ದೇಶ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದರು.ಭಾರತ ದೇಶದ ವಿವಿಧೆಡೆ ೪೦ ವರ್ಷಗಳ ಕಾಲ ಇನ್ಸ್ಪೆಕ್ಟರ್/ಡಿಜಿ ಯೋಧನಾಗಿ ಸೇವೆ ಸಲ್ಲಿಸಿ ಈಚೆಗೆ ನಿವೃತ್ತಿ ಪಡೆದು ಹುಟ್ಟೂರಿಗೆ ಹಿಂದಿರುಗಿದ ಅವರನ್ನು ಬಸವೇಶ್ವರ ವೃತ್ತದಿಂದ ಅವರ ಸ್ವಗೃದವರೆಗೆ ಪತ್ನಿ ಹಾಗೂ ಮೊಮ್ಮಕ್ಕಳ ಜೊತೆಯಲ್ಲಿ ಡಿಜೆಯೊಂದಿಗೆ ಅಲಕೃಂತ ರಥದಲ್ಲಿ ಮೆರವಣಿಗೆ ಮಾಡಿದರು. ಮೆರವಣಿಗೆ ಮದ್ಯದಲ್ಲಿ ಭಾರತ ಮಾತಾಕೀ ಜೈ ಜೈಕಾರ ಮೊಳಿಗಿದವು. ಬಳಿಕ ಗ್ರಾಮಸ್ಥರು, ಹಿರಿಯರು ಸನ್ಮಾನಿಸಿ ಗೌರವಿಸಿದರು.ಈ ವೇಳೆ ಸೈನಿಕ ಸಂಘದ ಉಕ ಗೌರವಾಧ್ಯಕ್ಷ ಶಬ್ಬಿರಪಟೇಲ ಬಿರಾದಾರ ಮಾತನಾಡಿ, ದೇಶದ…
ನನಗೆ ಬೇರೆ ದಾರಿ ಇಲ್ಲ | ಸಿದ್ದರಾಮಯ್ಯ ಬೆನ್ನಿಗೆ ನಿಂತು ಬೆಂಬಲಿಸುತ್ತೇನೆ | 5 ವರ್ಷ ನಾನೇ ಸಿಎಂ ಹೇಳಿಕೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐದು ವರ್ಷ ತಾವೇ ಸಿಎಂ ಎಂದು ಪ್ರತಿಪಾದಿಸುತ್ತಿದ್ದಂತೆ, ಆ ಹುದ್ದೆಯ ಪ್ರಮುಖ ಆಕಾಂಕ್ಷಿಯಾಗಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು, ಅದಕ್ಕೆ ತಮ್ಮ ಅಭ್ಯಂತರವಿಲ್ಲ ಮತ್ತು ಮುಖ್ಯಮಂತ್ರಿಯನ್ನು ಬೆಂಬಲಿಸುವುದಾಗಿ ಬುಧವಾರ ಹೇಳಿದ್ದಾರೆ.ಐದು ವರ್ಷ ನಾನೇ ಮುಖ್ಯಮಂತ್ರಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್ ಅವರು, ನನಗೆ ಬೇರೆ ದಾರಿ ಇಲ್ಲ. ನಾನು ಬೆಂಬಲ ನೀಡಲೇಬೇಕು ಮತ್ತು ಕಾಂಗ್ರೆಸ್ ಹೈಕಮಾಂಡ್ನ ನಿರ್ದೇಶನಗಳನ್ನು ಪಾಲಿಸುವುದಾಗಿ ಹೇಳಿದರು.ಬುಧವಾರ ನಂದಿ ಬೆಟ್ಟದಲ್ಲಿ ನಡೆಯುತ್ತಿರುವ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸುವುದಕ್ಕಾಗಿ ಆಗಮಿಸಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರು, “ನನಗೆ ಯಾವ ಆಯ್ಕೆ ಇದೆ? ಬೇರೆ ಮಾರ್ಗ ಇಲ್ಲ. ನಾನು ಅವರ (ಸಿದ್ದರಾಮಯ್ಯ) ಬೆನ್ನಿಗೆ ನಿಂತು ಬೆಂಬಲಿಸುತ್ತೇನೆ. ಅವರು ಸಿಎಂ ಆಗಿ ಮುಂದುವರೆಯುವುದಕ್ಕೆ ನನಗೆ ಯಾವುದೇ ಆಕ್ಷೇಪವಿಲ್ಲ.…
ನಿಡೋಣಿ ಗ್ರಾ.ಪಂ. ಗೆ ಭೇಟಿ ನೀಡಿ ವಿವಿಧ ಕಾಮಗಾರಿಗಳ ಪರಿಶೀಲಿಸಿದ ಜಿ.ಪಂ.ಸಿಇಓ ರಿಷಿ ಆನಂದ ಅಧಿಕಾರಿಗಳಿಗೆ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಿಷಿ ಆನಂದ ರವರು ಜುಲೈ ೨ರಂದು ಬಬಲೇಶ್ವರ ತಾಲೂಕಿನ ನಿಡೋಣಿ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು.ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ನಿರ್ಮಾಣವಾದ ಎನ್.ಆರ್.ಎಲ್.ಎಮ್ ಸಂಜೀವಿನಿ ಶೆಡ್ ಕಟ್ಟಡ ಹಾಗೂ ನೂತನ ಗ್ರಾಮ ಪಂಚಾಯಿತಿ ಕಟ್ಟಡಗಳಿಗೆ ಭೇಟಿ ನೀಡಿ ಪರಿಶೀಲಿಸಿ, ಇದೇ ವೇಳೆ ನೂತನವಾಗಿ ನಿರ್ಮಾಣವಾಗುತ್ತಿರುವ ಗ್ರಂಥಾಲಯ ಕಟ್ಟಡಕ್ಕೆ ಬೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿ, ಗ್ರಂಥಾಲಯ ಪೂರ್ಣಗೊಂಡ ತಕ್ಷಣವೇ ಎಲ್ಲ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಬೇಕು ಎಂದರು.ಅಂಗನವಾಡಿ ಮಕ್ಕಳಿಗೆ ಬೆಂಚ್ ವಿತರಣೆ: ಸಿಇಓ ರಿಷಿ ಆನಂದ ಅವರು, ಅಂಗನವಾಡಿ ಕೇಂದ್ರದ ಮಕ್ಕಳಿಗೆ ಕುರ್ಚಿ ಮತ್ತು ಬೆಂಚ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಕ್ಕಳೊಂದಿಗೆ ಸಂವಾದ ನಡೆಸಿ ಕೇಂದ್ರದಲ್ಲಿ ಮಕ್ಕಳಿಗೆ ನೀಡುವ ಪೌಷ್ಠಿಕ ಆಹಾರ ವಿತರಣೆ, ಆಟ, ಪಾಠ ಯೋಗಕ್ಷೇಮ ಕುರಿತು ವಿಚಾರಿಸಿದರಲ್ಲದೆ,…
ವಿಜಯಪುರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿಯಲ್ಲಿ ಸಸಿ ನೆಡುವ ಕಾರ್ಯಕ್ರಮ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಸ್ಟೇಶನ್ ರಸ್ತೆಯಲ್ಲಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಮಂಗಳವಾರ ಕಚೇರಿ ಆವರಣದಲ್ಲಿ ವಾರ್ತಾಧಿಕಾರಿ ಅಮರೇಶ ದೊಡಮನಿ ಅವರು ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರತಿಯೊಬ್ಬರು ಪರಿಸರ ರಕ್ಷಣೆಗೆ ಮುಂದಾಗಬೇಕು. ಪರಿಸರ ರಕ್ಷಣೆ ಎಲ್ಲರ ಜವಾಬ್ದಾರಿಯಾಗಿದೆ. ಇಂದಿನಿಂದಲೇ ನಾವು ಪರಿಸರವನ್ನು ಕಾಪಾಡಿಕೊಂಡು ಹೋದಲ್ಲಿ ಮುಂದಿನ, ಭವಿಷ್ಯದ ಪೀಳಿಗೆಗೆ ಸ್ವಚ್ಛ ಸುಂದರ ಪರಿಸರ ನೀಡಬಹುದಾಗಿದೆ. ಈ ನಿಟ್ಟಿನಲ್ಲಿ ಮನೆ, ಕಚೇರಿ ಆವರಣಗಳಲ್ಲಿ ಗಿಡಗಳನ್ನು ನೆಡುವ ಮೂಲಕ ಪರಿಸರ ರಕ್ಷಣೆಗೆ ಕೈ ಜೋಡಿಸಬೇಕು ಎಂದು ಅವರು ಹೇಳಿದರು.ಈ ಸಂದರ್ಭದಲ್ಲಿ ವಾರ್ತಾ ಇಲಾಖೆಯ ಸುರೇಶ ಅಂಬಿಗೇರ, ಅಬ್ದುಲರಜಾಕ ಬಾಗೇವಾಡಿ, ಪ್ರಕಾಶ ಘಟಕಾಂಬಳೆ, ನಾಗರಾಜ ಉಪಸ್ಥಿತರಿದ್ದರು.
ಲೇಖನ- ಜಯಶ್ರೀ .ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಜೀವನವು ಸರಳ ರೇಖೆಯಲ್ಲ. ಅದು ಏರಿಳಿತಗಳಿಂದ ತುಂಬಿದೆ. ಬದುಕಿನ ಎಲ್ಲ ದಿನಗಳೂ ಒಂದೇ ತರನಾಗಿರುವುದಿಲ್ಲ. ಒಂದು ದಿನ ನಾನು ಎಲ್ಲವನ್ನೂ ಅರ್ಥಮಾಡಿಕೊಂಡಿದ್ದೇನೆ ಎಂದು ಅನಿಸಬಹುದು. ನಂತರ ಒಂದೇ ಕ್ಷಣದಲ್ಲಿ ನನಗೇನೂ ಗೊತ್ತಿಲ್ಲ. ನಾನಿನ್ನೂ ಬಹಳಷ್ಟು ತಿಳಿದುಕೊಳ್ಳುವುದು ಬಾಕಿ ಇದೆ ಎಂದೆನಿಸುವುದು. ಪ್ರತಿದಿನ ಬೇರೆ ಬೇರೆ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಸವಾಲುಗಳನ್ನು ದಾರಿ ನಡುವೆ ಇರುವ ದೊಡ್ಡ ಕಲ್ಲುಗಳೆಂದು ತಿಳಿಯುತ್ತೇವೆ. ಎಷ್ಟೋ ಸಲ ಅವುಗಳನ್ನು ಮಗ್ಗಲು ಮುಳ್ಳುಗಳೆಂದು ಭಾವಿಸಿ ಕಷ್ಟ ಪಡುತ್ತೇವೆ. ಆದರೆ ಅಸಲಿಯಾಗಿ ಅವುಗಳು ನಮ್ಮ ಬದುಕನ್ನು ಬೆಳಗಿಸುವ ದೀಪಗಳು. ಏಕೆಂದರೆ ಅವು ನಮ್ಮಲ್ಲಿ ಹುದುಗಿರುವ ಸೃಜನಶೀಲ ಮೇದಾವಿತನವನ್ನು ಹೊರಗೆಡುವುತ್ತವೆ. ಆದರೆ ನಾವು ಸವಾಲುಗಳ ಕರೆಗೆ ಓಗೊಡುವುದಿಲ್ಲ. ಅದಕ್ಕೆ ಕಾರಣ ಇಲ್ಲದಿಲ್ಲ. ನಮ್ಮಲ್ಲಿ ಬಹಳಷ್ಟು ಜನರು ಬದಲಾವಣೆ ಬಯಸುವುದಿಲ್ಲ. ಅಸಾಮಾನ್ಯರಾಗಲು ಹಿಂಜರಿಯುತ್ತಾರೆ. ಕೇವಲ ಕೆಲವರು ಮಾತ್ರ ಸಾಧಕರಾಗುತ್ತಿದ್ದಾರೆ. ಅವರು ಮಾತ್ರ ಸವಾಲುಗಳ ಬೇಲಿಯನ್ನು ದಾಟಲು ಮನಸ್ಸು ಮಾಡುತ್ತಾರೆ. ಉಳಿದವರೆಲ್ಲ ಸವಾಲೆಂಬ ಬೇಲಿಗಳಿಗೆ…
ಲೇಖನ- ಡಾ. ರಾಜಶೇಖರ ನಾಗೂರ”ನಮ್ಮ ಕಥಾ ಅರಮನೆ”ಬರಹಗಾರರು ಉದಯರಶ್ಮಿ ದಿನಪತ್ರಿಕೆ ಆ ವ್ಯಕ್ತಿ ತನ್ನ ಪುಟ್ಟ ಮಗನನ್ನು ಬೆಳಿಗ್ಗೆ ಶಾಲೆಗೆ ತಂದು ಕಾರಿನ ಬಾಗಿಲು ತೆರೆದ. ಆ ಮಗು ಕಾರಿನಿಂದ ಇಳಿದು ಹತ್ತು ಹೆಜ್ಜೆ ಸಾಗಿ, ಅಪ್ಪನ ಕಡೆ ಭಾವನಾತ್ಮಕವಾಗಿ ನೋಡಿ “ಅಪ್ಪಾ ಶಾಲೆ ಬಿಟ್ಟ ನಂತರ ನನ್ನ ಕರೆದುಕೊಂಡು ಹೋಗಲು ಬರ್ತೀಯ ಅಲ್ವಾ” ಎಂದು ಕೇಳಿತು. ಕಾರು ಹತ್ತಿದ್ದ ಆ ತಂದೆ ಕೆಳಗಿಳಿದು ಬಂದು ಮಗುವನ್ನು ತಬ್ಬಿ “ಖಂಡಿತ ಮಗ, ನಿನ್ನ ಕರೆದುಕೊಂಡು ಹೋಗಲು ಬಂದೇ ಬರುವೆ” ಎಂದು ಮುಗುವಿನ ತಲೆಯ ಮೇಲೆ ಕೈಯಾಡಿಸಿ, ಮುದ್ದಿಸಿ ಹೊರಡುತ್ತಾನೆ.ಆ ವ್ಯಕ್ತಿ ಶಾಲೆಯಿಂದ ಹೊರಟ 20 ನಿಮಿಷಗಳ ನಂತರ ಅತ್ಯಂತ ಪ್ರಭಲ ಭೂಕಂಪ ಸಂಭವಿಸುತ್ತದೆ. ಕೇವಲ ನಾಲ್ಕು ನಿಮಿಷದಲ್ಲಿ ಇಡೀ ನಗರ ಸ್ಮಶಾನವಾಗಿ ಬಿಡುತ್ತದೆ. ಆ ರಸ್ತೆಯ ಮೂಲಕ ಕಾರ್ ಲ್ಲಿ ಹೊರಟ ಆ ವ್ಯಕ್ತಿಗೆ ತನ್ನ ಮಗುವಿನ ಗತಿ ಏನು ಎಂದು ಆತಂಕವಾಗಿ ತಕ್ಷಣವೇ ಶಾಲೆಯ ಕಡೆ ಕಾರನ್ನು ತಿರುಗಿಸಿಕೊಂಡು ಅವಸರದಲ್ಲಿ…
ಯಲಗೂರು ಗ್ರಾಮದಲ್ಲಿ ಮಹಿಳಾ ವಿವಿ ಹಮ್ಮಿಕೊಂಡಿದ್ದ ಮೂರು ದಿನಗಳ ನಾಗರಿಕ ಪೌರತ್ವ ತರಬೇತಿ ಶಿಬಿರ ಉದ್ಘಾಟನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ದೇಶದ ನಿಜವಾದ ಪ್ರಗತಿ ಗ್ರಾಮಗಳ ಪ್ರಗತಿಯಲ್ಲಿ ಅಡಕವಾಗಿದ್ದು, ಎಲ್ಲರ ದೃಷ್ಟಿಯೂ ಗ್ರಾಮಗಳ ಅಭಿವೃದ್ಧಿಯತ್ತ ಹರಿಯಬೇಕು ಎಂದು ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಹೇಳಿದರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಶಿಕ್ಷಣ ಅಧ್ಯಯನ ವಿಭಾಗವು ನಿಡಗುಂದಿ ತಾಲೂಕು ಯಲಗೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ ನಾಗರಿಕ ಪೌರತ್ವ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಶಿಕ್ಷಕ ತರಬೇತಿಯಲ್ಲಿ ಪೌರತ್ವ ಮೌಲ್ಯಗಳನ್ನು ಪರಿಚಯಿಸುವ ಈ ತರಬೇತಿ ಶಿಬಿರಗಳು ಅತ್ಯಂತ ಅವಶ್ಯವಾಗಿವೆ. ವಿಶೇಷವಾಗಿ ಇವು ಗ್ರಾಮೀಣ ಭಾಗದಲ್ಲಿ ಆಯೋಜನೆಯಾಗಬೇಕು. ವಿದ್ಯಾರ್ಥಿ ಮತ್ತು ಶಿಕ್ಷಕರಿಗೆ ನೇರ ಅನುಭವ ಒದಗಿಸಲು ಶಿಬಿರಗಳು ಉತ್ತಮ ವೇದಿಕೆಯಾಗುತ್ತವೆ ಎಂದರು.ಇದೇ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಶಾಂಮ ಪಾತ್ರದ ಮಾತನಾಡಿ, ಈ ತರಬೇತಿ ಶಿಬಿರವು ಗ್ರಾಮಸ್ಥರಿಗೆ ಬಹಳ ಅನುಕೂಲ ನೀಡುತ್ತದೆ. ಹಳ್ಳಿಗಳಲ್ಲಿ ವಂಚನೆಯ ಹಾಗೂ ಮೂಢನಂಬಿಕೆಗಳ ಸಮಸ್ಯೆ ನಿವಾರಣೆಗೆ ಶಿಕ್ಷಣವೇ ಪರಿಣಾಮಕಾರಿಯಾದ…
