ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಮನೆ ಮಂದಿ, ಬಂಧು-ಬಳಗವನ್ನು ಬಿಟ್ಟು ದೇಶ ಸೇವೆ ಮಾಡಿದಕ್ಕೆ ಇಂದು ತಾವು ನೀಡಿದ ಗೌರವಕ್ಕೆ ಚಿರಋಣಿಯಾಗಿದ್ದೇನೆ ಎಂದು ನಿವೃತ್ತ ಯೋಧ ಯಲಗೊಂಡ ರಾಮನಗೌಡ ಬಾಲಗೊಂಡ ಹೇಳಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ನಿವೃತ್ತ ಯೋಧ ಯಲಗೊಂಡ ರಾಮನಗೌಡ ಬಾಲಗೊಂಡ ಅವರು ಮಾತನಾಡಿದ ಅವರು, ನಮ್ಮ ದೇಶವನ್ನು ಯಾರು ಸೋಲಿಸಲು ಸಾಧ್ಯವಿಲ್ಲದ್ದಷ್ಟು ನಮ್ಮ ಸೈನ್ಯ ಬಲಿಷ್ಠವಾಗಿದೆ. ಯುವಕರು ಚೆನ್ನಾಗಿ ಓದಿ ದುಶ್ಚಟಗಳಿಗೆ ಬಲಿಯಾಗದೆ ದೇಶ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದರು.
ಭಾರತ ದೇಶದ ವಿವಿಧೆಡೆ ೪೦ ವರ್ಷಗಳ ಕಾಲ ಇನ್ಸ್ಪೆಕ್ಟರ್/ಡಿಜಿ ಯೋಧನಾಗಿ ಸೇವೆ ಸಲ್ಲಿಸಿ ಈಚೆಗೆ ನಿವೃತ್ತಿ ಪಡೆದು ಹುಟ್ಟೂರಿಗೆ ಹಿಂದಿರುಗಿದ ಅವರನ್ನು ಬಸವೇಶ್ವರ ವೃತ್ತದಿಂದ ಅವರ ಸ್ವಗೃದವರೆಗೆ ಪತ್ನಿ ಹಾಗೂ ಮೊಮ್ಮಕ್ಕಳ ಜೊತೆಯಲ್ಲಿ ಡಿಜೆಯೊಂದಿಗೆ ಅಲಕೃಂತ ರಥದಲ್ಲಿ ಮೆರವಣಿಗೆ ಮಾಡಿದರು. ಮೆರವಣಿಗೆ ಮದ್ಯದಲ್ಲಿ ಭಾರತ ಮಾತಾಕೀ ಜೈ ಜೈಕಾರ ಮೊಳಿಗಿದವು. ಬಳಿಕ ಗ್ರಾಮಸ್ಥರು, ಹಿರಿಯರು ಸನ್ಮಾನಿಸಿ ಗೌರವಿಸಿದರು.
ಈ ವೇಳೆ ಸೈನಿಕ ಸಂಘದ ಉಕ ಗೌರವಾಧ್ಯಕ್ಷ ಶಬ್ಬಿರಪಟೇಲ ಬಿರಾದಾರ ಮಾತನಾಡಿ, ದೇಶದ ಜನರ ಸುರಕ್ಷತೆಗಾಗಿ ಪ್ರಾಣವನ್ನು ಒತ್ತೆಯಿಟ್ಟು ಗಡಿಯಲ್ಲಿ ಕಾಯುವ ಯೋಧರ ಸೇವೆಗೆ ಸರಿಸಾಟಿ ಯಾರಿಲ್ಲ. ಅಂತಹವರನ್ನು ಸನ್ಮಾನಿಸುವುದು, ಭವ್ಯವಾಗಿ ಬರಮಾಡಿಕೊಳ್ಳುವುದು ನಮ್ಮೆಲ್ಲರ ಆದ್ಯಕರ್ತವ್ಯ. ಇವರ ಆಗಮನ ನಮ್ಮ ಸಂಘಕ್ಕೆ ಮತ್ತಷ್ಟು ಆನೆ ಬಲ ಬಂದಂತಾಯಿತು ಎಂದರು.
ಇದೇ ಸಂದರ್ಭದಲ್ಲಿ ಇಂಗಳೇಶ್ವರ ಶ್ರೀಮಠದ ಬ್ರುಂಗೇಶ್ವರಲಿಂಗ ಶಿವಾಚಾರ್ಯರು, ಸೈನಿಕ ಸಂಘದ ತಾಲೂಕಾಧ್ಯಕ್ಷ ಶ್ರೀಶೈಲ ಯಳಮೇಲಿ, ಅರೆ ಸೇನಾಪಡೆ ಅಧ್ಯಕ್ಷ ಹಣಮಂತಪ್ಪ ಕುಳೇಕುಮಟಗಿ, ಮಾಜಿ ಲಿಂಬೆ ಅಭಿವೃದ್ಧಿ ನಿಮಗ ಅಧ್ಯಕ್ಷ ಅಶೋಕ ಅಲ್ಲಾಪೂರ, ಸತೀಶ ಹಿರೇಮಠ, ಜಗದೀಶ ಪಾಟೀಲ, ಮಾಜಿ ಸೈನಿಕರಾದ ಸದಾನಂದ ಧರಿಕಾರ, ಜಹೀರ ಪಟೇಲ, ಸಿದ್ದರಾಮ ಹೊರಕೇರಿ, ಉದಯ ಬರಲಿ, ಚಂದ್ರಕಾಂತ ಅತನೂರ, ಅಣ್ಣಾರಾಯ ವಾಲೀಕಾರ, ಎಂ.ಎಸ್.ಪತ್ತಾರ, ಮಹಿಬೂಬ ಪಟೇಲ, ಅಪ್ಪಾಸಾಹೇನ ಬೇವಿನಮಟ್ಟಿ, ಶಿವಲಿಂಗಪ್ಪ ಎಂ, ಧರೇಪ್ಪ ಕಂಠಿಕೊಂಡ, ರಮೇಶ ಮೋರಟಗಿ, ಪುಂಡಲೀಕ ಮರಡಿ, ಹಣಮಂತ ಭಜಂತ್ರಿ, ಈರಣ್ಣ ತಳವಾರ ಸೇರಿದಂತೆ ಕಡಣಿ ಗ್ರಾಮಸ್ಥರು, ಸಿಂದಗಿ ನಗರದ ಜನತೆ ಮಾಜಿ ಯೋಧರು ಇದ್ದರು.
ಅಧಿಕಾರಿಗಳು ಪಾಲ್ಗೊಳ್ಳದಿರುವುದು ಅಗೌರವದ ಸಂಕೇತ
ಮನೆ, ಬಂಧು-ಬಳಗ ಎಲ್ಲವನ್ನೂ ಬಿಟ್ಟು ದೇಶ ಸೇವೆಗಾಗಿ ತಮ್ಮ ಬದುಕನ್ನು ಮುಡಿಪಿಟ್ಟು ಸೇವೆ ಸಲ್ಲಿಸಿ ಮರಳಿ ಯಾತ್ನಾಡಿಗೆ ಬಂದಾಗ ಅವರನ್ನು ಸ್ವಾಗತಿಸಲು ತಾಲೂಕು ಆಡಳಿತಾಧಿಕಾರಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಳ್ಳದೇ ಇರುವುದು ಅಗೌರವದ ಸಂಕೇತವಾಗಿದೆ. ವಯೋ ನಿವೃತ್ತಿ ಹೊಂದಿ ತಾಯ್ನಾಡಿಗೆ ಮರಳಿದ ಯೋಧರನ್ನು ಸ್ವಾಗತಿಸಲು ಅಧಿಕಾರಿಗಳು ಮುಂಬರುವ ದಿನಮಾನಗಳಲ್ಲಿ ಭಾಗವಹಿಸಿಲಿ ಎಂಬುದು ಮಾಜಿ ಯೋಧರ ಅಭಿಪ್ರಾಯ.

