Author: editor.udayarashmi@gmail.com

ಲೇಖನ- ಸಂತೋಷ್ ರಾವ್ ಪೆರ್ಮುಡಪೆರ್ಮುಡ ಮನೆಪಟ್ರಮೆ ಗ್ರಾಮ ಮತ್ತು ಅಂಚೆಬೆಳ್ತಂಗಡಿ ತಾಲೂಕುದ.ಕ ಜಿಲ್ಲೆ-೫೭೪೧೯೮ದೂ:೯೭೪೨೮೮೪೧೬೦ ) ಉದಯರಶ್ಮಿ ದಿನಪತ್ರಿಕೆ ನಮ್ಮೂರಿನ ಜಾತ್ರೆಯನ್ನು ಮುಗಿಸಿ ಕಾಡು ಗುಡ್ಡದ ಹಾದಿಯಲ್ಲಿ ರಾತ್ರಿ ಹನ್ನೆರಡರ ವೇಳೆಗೆ ನಾನೂ ನನ್ನ ಸಹೋದರ ಇಬ್ಬರೂ ಟಾರ್ಚ್ ಲೈಟಿನ ಬೆಳಕನ್ನು ಹಾಯಿಸಿಕೊಂಡು ಮನೆಯೆಡೆಗೆ ಹೆಜ್ಜೆ ಹಾಕುತ್ತಿದ್ದೆವು. ರಾತ್ರಿಯ ಪಯಣವೆಂದರೆ ನನಗೆ ಅದೇನೋ ಒಂದು ರೀತಿ ರೋಮಾಂಚನವನ್ನು ನೀಡುತ್ತಿದ್ದರೂ ಒಳಗೊಳಗೇ ಏನೋ ಭಯ. ಆದರೂ ಧೈರ್ಯ ಮಾಡಿ ನೆರೆಮನೆಯವರನ್ನು ಜಾತ್ರೆಯಲ್ಲೇ ಬಿಟ್ಟು ಇಬ್ಬರೇ ಮನೆಯ ಕಡೆಗಿನ ಕಾಡು ಹಾದಿಯನ್ನು ದಾಟಿ ತಲುಪಿದ ಇತಿಹಾಸವನ್ನು ಸೃಷ್ಟಿಸುವ ತವಕ ನಮಗಿಬ್ಬರಿಗೂ. ಹೊರಟು ಸ್ವಲ್ಪ ಹೊತ್ತಾಗಿದೆಯಷ್ಟೇ ಕಾಡಿನ ಪೊದೆಯ ಮರೆಯ ತರಗೆಲೆಗಳ ಮೇಲೆ ಏನೋ ಚಲಿಸುತ್ತಿರುವ ಸದ್ದು. ಯಾವುದೋ ಕಾಡು ಪ್ರಾಣಿ ಇರಬಹುದೆಂಬ ಭಯದಿಂದ ಎದೆಬಡಿತ ಹೆಚ್ಚಾಗತೊಡಗಿತು. ಸ್ವಲ್ಪ ಮುಂದಕ್ಕೆ ಹೋಗುತ್ತಿದ್ದಂತೆ ತರಗೆಲೆಗಳ ಸದ್ದು ಮತ್ತಷ್ಟು ಹೆಚ್ಚಾಯಿತು, ಕುತೂಹಲದಿಂದ ಅತ್ತ ನನ್ನ ಕೈಯಲ್ಲಿದ್ದ ಟಾರ್ಚ್ ಲೈಟಿನ ಬೆಳಕನ್ನು ಬೀರಿದೆ. ಯಾವುದೋ ಒಂದು ಪುಟ್ಟ ಪ್ರಾಣಿ ಏನನ್ನೋ ಕಿತ್ತು…

Read More

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸಕಾ೯ರಕ್ಕೆ ಒತ್ತಾಯ ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಇದೇ ಮೇ ತಿಂಗಳದೊಳಗಾಗಿ 50 ಸಾವಿರಕ್ಕೂ ಹೆಚ್ಚು ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಂಡು ಕೂಡಲೇ ಆದೇಶ ಹೊರಡಿಸಬೇಕು ಎಂದು ಕನಾ೯ಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಕೆ. ನಾಗೇಶ ಹಾಗೂ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಜಂಟಿಯಾಗಿ ರಾಜ್ಯ ಸಕಾ೯ರವನ್ನು ಆಗ್ರಹಿಸಿದ್ದಾರೆ.ಬೇಸಿಗೆ ಕಾಲದ ರಜೆ ಬಳಿಕ ರಾಜ್ಯಾದ್ಯಂತ ಇದೇ ಮೇ 29 ರಿಂದ ಶಾಲೆಗಳು ಪುನರಾರಂಭಗೊಳ್ಳಲಿವೆ.ಎಂದಿನಂತೆ ಶಾಲಾ ತರಗತಿಗಳು ಆರಂಭವಾಗಲಿವೆ.ಕಾರಣ ಶಾಲೆಗಳು ಪ್ರಾರಂಭಗೊಳ್ಳುವ ಮೊದಲೇ ರಾಜ್ಯಾದ್ಯಂತ ಅಗತ್ಯ ವಿರುವ 50 ಸಾವಿರಕ್ಕೂ ಅಧಿಕ ಅತಿಥಿ ಶಿಕ್ಷಕರ ನೇಮಕ ಸಕಾ೯ರ ಮಾಡಿಕೊಂಡು ತಕ್ಷಣವೇ ಆದೇಶ ಹೊರಡಿಸಬೇಕು ಎಂದವರು ಒತ್ತಾಯಿಸಿದ್ದಾರೆ.ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ವಿ. ಮಹೇಶ್ ಅವರಿಗೆ ಪತ್ರ ಬರೆದು ಆಗ್ರಹಿಸಿರುವ ಅವರು, ರಾಜ್ಯದ ಶಾಲೆಗಳಿಗೆ ಹೆಚ್ಚು ಕಡಿಮೆ ಸುಮಾರು 50 ಸಾವಿರಕ್ಕೂ ಹೆಚ್ಚು ಅತಿಥಿ ಶಿಕ್ಷಕರ ಅವಶ್ಯಕತೆ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ೨೦೨೫-೨೬ನೆಯ ಸಾಲಿನ ಬಜೆಟ್ ಸಭೆ ಕರೆಯುವಂತೆ ಮಾ.೨೬ರಂದು ಪತ್ರ ಬರೆಯಲಾಗಿತ್ತು. ಆದರೆ ಸಿಂದಗಿ ಪುರಸಭೆ ಮುಖ್ಯಾಧಿಕಾರಿ ಯಾವುದೇ ಮುನ್ಸೂಚನೆ ಇಲ್ಲದೇ ನನ್ನ ಹಾಗೂ ಮೇಲಾಧಿಖಾರಿಗಳ ಗಮನಕ್ಕೆ ತರದೇ ತಮ್ಮ ಅಧಿಕಾರವನ್ನು ದುರುಪಯೋಗ ಪಡೆಸಿಕೊಂಡು ರದ್ದುಪಡಿಸಿರುವ ಪರಿಣಾಮ ಪಟ್ಟಣದ ಸಾರ್ವಜನಿಕರಿಗೆ ಮತ್ತು ಪೌರ ಕರ್ಮಿಕರ ಸಿಬ್ಬಂದಿಗಳಿಗೆ ಸರಿಯಾದ ಸಮಯದಲ್ಲಿ ವೇತನ ಮಾಡಲು ಸಾಧ್ಯವಾಗುತ್ತಿದೆ. ಇದರಿಂದ ಪುರಸಭೆ ಆಡಳಿತ ಸಂಪೂರ್ಣವಾಗಿ ಹದಗೆಟ್ಟಿದ್ದು, ಸಿಂದಗಿ ಪುರಸಭೆ ಆರ್ಥಿಕವಾಗಿ ಹಿಂದುಳಿಯುವುದಕ್ಕೆ ತಾವೇ ಕಾರಣಿಕರ್ತರಾಗಿದ್ದು, ಅದನ್ನು ಸರಿದೂಗಿಸುವ ಉದ್ದೇಶದಿಂದ ಮೇ.೦೯ರಂದು ಪುರಸಭೆ ಬಜೆಟ್ ಸಭೆಯನ್ನು ಕರೆಯುವಂತೆ ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಮುಖ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ತಾಲೂಕಿನ ಭಂಟನೂರ ಗ್ರಾಮದ ಶಂಕರಲಿಂಗ ದೇವರ ನೂತನ ಮೂರ್ತಿ ಪ್ರತಿಷ್ಠಾಪನೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಂಭ್ರಮ ಮತ್ತು ಸಡಗರದಿಂದ ಜರುಗಿತು.ಮೇ.೦೨ರಂದು ಶುಕ್ರವಾರ ದೇವಸ್ಥಾನಕ್ಕೆ ವಿದ್ಯುತ್ ಅಲಂಕಾರ, ತಳಿರು ತೋರಣಗಳಿಂದ ಸಿಂಗರಿಸಲಾಯಿತು. ಸಂಜೆ ೭ಗಂಟೆಗೆ ಗ್ರಾಮದ ದೇವರುಗಳಾದ ಶಂಕರಲಿಂಗ ಪಲ್ಲಕ್ಕಿ, ಗಂಗಿಲಿಂಗ ದೇವರ ಪಲ್ಲಕ್ಕಿ, ಲಕ್ಷ್ಮೀದೇವಿ ಪಲ್ಲಕ್ಕಿ, ಫಕೀರೇಶ್ವರ ಪಲ್ಲಕ್ಕಿ, ಗೊಲ್ಲಾಳೇಶ್ವರ ಪಲ್ಲಕ್ಕಿ ಈ ಎಲ್ಲ ದೇವರಗಳ ಪಲ್ಲಕ್ಕಿಗಳ ಭವ್ಯ ಮೆರವಣಿಗೆ ವಿವಿಧ ವಾಧ್ಯಗಳೊಂದಿಗೆ ಹೊರಗಿನ ದೇವಸ್ಥಾನಕ್ಕೆ ತಲುಪಿತು. ರಾತ್ರಿ ೧೦ ಗಂಟೆಗೆ ಭಜನೆಗಳು ಜರುಗಿದವು.ಮೇ.೦೩ರಂದು ನಸುಕಿನಲ್ಲಿ ನೂತನ ಮೂರ್ತಿಗೆ ಮಹಾ ರುದ್ರಾಭಿಷೇಕ, ಆಗಮಿಸಿದ ಎಲ್ಲ ದೇವರುಗಳಿಗೆ ಮಹಾಪೂಜೆ ಮಂಗಳಾರುತಿ ಜರುಗಿತು. ಮುಂಜಾನೆ ೯ಗಂಟೆಗೆ ೧೦೧ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು. ಬಳಿಕ ೧೦ಗಂಟೆಗೆ ಸಾರವಾಡದ ಬೊಂಬೆ ಕುಣಿತ, ಸಿಂದಗಿ ತಾಲೂಕಿನ ಬಸ್ತಿಹಾಳ, ಸುಂಗಠಾಣ ಗ್ರಾಮದ ಕಲಾವಿದರಿಂದ ಡೊಳ್ಳಿನ ವಾಲಗ, ಪ್ರಸಿದ್ಧ ಪುರವಂತರ ಸೇವೆಯೊಂದಿಗೆ, ಕಳಸದ ಭವ್ಯ ಮೆರವಣಿಗೆಯು ಮದ್ದು ಸುಡುವುದರೊಂದಿಗೆ ಸಾಗಿ ಅಗಸಿ ಮುಂದಿರುವ ಮೈದಾನಕ್ಕೆ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಇಂದಿನ ಯುವಕರಿಗೆ ಸ್ಪೂರ್ತಿ ತುಂಬುವ ನಿಟ್ಟಿನಲ್ಲಿ ವಿದ್ಯಾರ್ಥಿಗಳೊಂದಿಗೆ ಪರಿಣಿತರ ಸಂವಾದ ಕಾರ್ಯಕ್ರಮ ಅತ್ಯವಶ್ಯ ಎಂದು ಇತ್ತಿಚೆಗೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ ೫೮೨ ರ‍್ಯಾಂಕ ಪಡೆದ ಡಾ.ಮಹೇಶ ಮಡಿವಾಳರ ಹೇಳಿದರು.ಪಟ್ಟಣದ ಎಲೈಟ್ ಪ್ರಾಥಮಿಕ, ಪ್ರೌಢಶಾಲೆ ಹಾಗೂ ವಿಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಜೊತೆ ಹಮ್ಮಿಕೊಂಡ ಸಂವಾದ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಸ್ವೀಕರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ಗುರಿ ತಲುಪಲು ವಿದ್ಯಾಭ್ಯಾಸದೆಡೆಗೆವ ಹೆಚ್ಚಿನ ಗಮನ ಹರಿಸಬೇಕು. ಈ ಯುಗವನ್ನು ಸ್ಪರ್ಧಾತ್ಮಕ ಯುಗವೆಂದು ಕರೆಯಲಾಗುತ್ತಿದೆ. ಹಾಗಾಗಿ ವಿದ್ಯಾರ್ಥಿಗಳು ಎಷ್ಟೇ ಓದಿದರು ಕಡಿಮೆ. ನಮ್ಮ ಗುರಿಯನ್ನು ತಲುಪಲು ಸದಾ ನಾವು ಓದಿನಲ್ಲಿ ನಿರತರಾಗಬೇಕು. ಅಂದಾಗ ತಂದೆ ತಾಯಿಗಳ ಕನಸು ನನಸಾಗಿಸಲು ಸಾಧ್ಯ. ಈ ವಯಸ್ಸಿನಲ್ಲಿ ಯಾವುದೇ ಕಡೆ ಚಿತ್ತವನ್ನು ಹರಿಸದೇ ಮಸ್ತಕಕ್ಕೆ ಪುಸ್ತಕದ ಚಿತ್ತವನ್ನು ಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಈ ವೇಳೆ ಸಂಸ್ಥೆಯ ಅಧ್ಯಕ್ಷ ಮಹಿಬೂಬ ಅಸಂತಾಪೂರ, ಪ್ರಾಚಾರ್ಯ ಇಜಾಜ್ ಜುಮನಾಳ ಸೇರಿದಂತೆ ಬೋಧಕ-ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣದ ಹೊರವಲಯದಲ್ಲಿರುವ ಜೇವರ್ಗಿ ಬೈಪಾಸ್ ಹತ್ತಿರ ಸರ್ಕಾರಿ ಬಸ್ ಹಾಗೂ ಕಾರಿನ ಮಧ್ಯ ಅಪಘಾತವಾಗಿದ್ದು, ನಾಲ್ಕು ಜನರಿಗೆ ಗಂಭೀರ ಗಾಯವಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಾಗಿದ್ದಾರೆಂದು ತಿಳಿದು ಬಂದಿದೆ. ಸರ್ಕಾರಿ ಬಸ್ ಚಾಲಕನ ನಿರ್ಲಕ್ಷತೆಯಿಂದ ಈ ಅಪಘಾತವಾಗಿದ್ದು ಕಂಡು ಬಂದಿದೆ. ಘಟನಾ ಸ್ಥಳಕ್ಕೆ ಹೈವೇ ಪೆಟ್ರೋಲಿಯಂ ಪೊಲೀಸ್ ಗಸ್ತು ವಾಹನ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.ಘಟನಾ ಸ್ಥಳಕ್ಕೆ ಸಿಂದಗಿ ಪಿಎಸ್‌ಐ ಆರೀಫ್ ಮುಶಾಪುರಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಘಟನೆ ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಬೈಕ್ ಅಪಘಾತದಲ್ಲಿ ಗ್ರಾಮ‌ ಆಡಳಿತಾಧಿಕಾರಿ ಸಾವನ್ನಪ್ಪಿರುವ ಘಟನೆ ಪಟ್ಟಣ ಸಿಂದಗಿ ರಸ್ತೆಯ ದೇಶಪಾಂಡೆ ತಾಂಡಾದ ಹತ್ತಿರ ನಡೆದಿದೆ.ಇಂಡಿ ತಾಲ್ಲೂಕಿನ ಸಾಲೋಟಗಿ ಗ್ರಾಮದ ಚಂದ್ರಕಾಂತ ಸೂರ್ಯವಂಶಿ ವಯಾ (36) ಎಂಬುವರು ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಅವರು ಸುಮಾರು 14 ವರ್ಷದಿಂದ ಗ್ರಾಮ ಆಡಳಿತ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ‌ಪ್ರಸ್ತುತ್ ತಾಲ್ಲೂಕಿನ ಹಿರೇರೂಗಿ ಗ್ರಾಮ ಆಡಳಿತ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು.ಆದರೆ ನಿನ್ನೆ ಸಾಯಂಕಾಲ ಮನೆಯಲ್ಲಿ ಲಕ್ಷ್ಮೀ ಎಂಬ ಮಗಳ ಜನ್ಮ ದಿನ ಇರುವುದರಿಂದ ಪಟ್ಟಣಕ್ಕೆ ತೆರಳಿ ಕೆಕ್ ತರುವ ಬಗ್ಗೆ ಮನೆಯಲ್ಲಿ ಹೇಳಿ ಹೋಗಿದ್ದರು. ಆದರೆ 7 :30 ಕ್ಕೆ ಮರಳಿ ಸಾಲೋಟಗಿ ಗ್ರಾಮಕ್ಕೆ ಬರುವಾಗ ಬೈಕ್ ಸ್ಕೀಡಾಗಿ ಬಿದ್ದು, ತಲೆಗೆ ಹಾಗೂ ಮುಖಕ್ಕೆ ಬಾರಿ ಪೆಟ್ಟು ಬಿದ್ದು ಸಾವು ಬದುಕಿನ ಮದ್ಯ ಹೋರಾಟ ಮಾಡುತ್ತಿರುವ ಸಂದರ್ಭದಲ್ಲಿ ತಾಲ್ಲೂಕು ಸಾರ್ವಜನಿಕ ಸರಕಾರಿ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗ್ರಾಮ ಆಡಳಿತ ಅಧಿಕಾರಿ ಸಾವನ್ನಪ್ಪಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಭಗೀರಥ ಮಹರ್ಷಿ ಅವರನ್ನು ಏಕೆ ಸ್ಮರಿಸಿಕೊಳ್ಳುತ್ತಾರೆ. ಪಟ್ಟಣದಲ್ಲಿ ಪ್ಲಾಟ್ ಖರದಿಸಿದ್ದಾರೆಯೇ..? ಸ್ವಿಸ್ ಬ್ಯಾಂಕ್ ನಲ್ಲಿ ಹಣ ಇಟ್ಟದ್ದಾರೆಯೇ..? ಇಲ್ಲ..! ನಿರಂತರ ಪ್ರಯತ್ನ ಮತ್ತು ಶ್ರಮದಿಂದ ಜಗತ್ತಿಗೆ ಅಮೂಲ್ಯವಾದ ವಸ್ತು ಕೊಡುಗೆ ನೀಡಿದ್ದಾರೆ. ಹಾಗಾಗಿ ಈ ಇಡೀ ನಾಡಿನಲ್ಲಿ ಸ್ಮರಿಸಿಕೊಳ್ಳುತ್ತೆವೆ ಎಂದು ಶಿರಶ್ಯಾಡದ ಅಭಿನವ ಮುರುಘೆಂದ್ರ ಶಿವಾಚಾರ್ಯರು ಹೇಳಿದರು.ಭಾನುವಾರ ಪಟ್ಟಣದ ತಾಲೂಕಾ ಆಡಳಿತ ಸೌಧದಲ್ಲಿ ತಾಲೂಕಾ ಆಡಳಿತ ವತಿಯಿಂದ ಹಮ್ಮಿಕೊಂಡ ಭಗೀರಥ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಭಗಿರಥ ಮಹರ್ಷಿಯನ್ನು ನೆನೆಯುವುದು, ಕೊಂಡಾಡುವುದನ್ನು ಕಂಡರೆ ಸಮಾಜದಲ್ಲಿ ಜಾಗೃತಿ ಅಲೆ ಬೆಳೆದಿದೆ ಎಂದರ್ಥ.‌ ಆದರೆ ಜಾಗೃತಿ ಅಲೆ ಕೇವಲ ಜಯಂತಿಗೆ ಸೀಮಿತವಾಗಿರದೆ, ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದ ಸಮುದಾಯದ ಪ್ರತಿಭಾನ್ವಿತ ಮಕ್ಕಳನ್ನು ಗುರುತಿಸಿ, ಅವರ ಶಿಕ್ಷಣ ಭವಿಷ್ಯಕ್ಕೆ ಹೊಸ ಸ್ವರೂಪ ನೀಡುವ ಕಾರ್ಯ ನಿಮ್ಮಿಂದಾಗಬೇಕು. ವಿಧ್ಯೆ ಯಾರು ಸ್ವತ್ತು ಅಲ್ಲಾ..!ವಿದ್ಯಗಿಂತ ಜಗತ್ತಿನಲ್ಲಿ ಯಾವ ದೊಡ್ಡ ಆಯುಧ ಇಲ್ಲ. ಅದಕ್ಕಾಗಿ ಸಮುದಾಯದಲ್ಲಿರುವ ಅನಾನುಕೂಲ…

Read More

ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಪ್ರಸಕ್ತ ೨೦೨೪-೨೫ ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ೧ ರಲ್ಲಿ ಸ್ಥಳೀಯ ವೀರಶೈವ ವಿದ್ಯಾಲಯ ಅಸೋಸಿಯೇಷನ್ ಸಂಸ್ಥೆಯ ಮಂಜಪ್ಪ ಹರ್ಡೇಕರ (ಎಂ.ಎಚ್.ಎಂ) ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ.ಪ್ರತಿಭಾವಂತ ವಿದ್ಯಾರ್ಥಿ ಪ್ರಜ್ವಲ್ ಶ್ರೀಕಾಂತ್ ಬಿರಾದರ್ ೬೨೫ ಕ್ಕೆ ೫೭೩ (ಶೇ, ೯೧.೬೮) ಅಂಕ ಪಡೆಯುವ ಮೂಲಕ ಶಾಲೆಗೆ ಪ್ರಥಮ ಸ್ಥಾನ ಗಿಟ್ಟಿಸಿಕೊಂಡಿದ್ದಾನೆ. ಪ್ರತಿಭಾನ್ವಿತೆ ಅಶ್ವಿನಿ ಅ ಚೌಹಾಣ್ (ಶೇ, ೮೬.೪೦%) ದ್ವೀತಿಯ, ಸಾನಿಯಾ ಬೇಗಂ ನದಾಫ್ (ಶೇ,೮೨%) ತೃತೀಯ ಸ್ಥಾನ ಪಡೆದಿದ್ದಾರೆ.ಫೈರೋಜಾ ಬಾಗಲಕೋಟ ೫೨೯, ಅಕ್ಷತಾ ಅಮೀನಪ್ಪಗೋಳ ೫೦೦, ಪ್ರಜ್ವಲ್ ವಾಲಿಕಾರ ೪೯೦, ಸಾನಿಯಾ ಬೈಲ್ಕುರ್ ೪೮೫, ಚಂದ್ರಿಕಾ ಹಿರೇಮಠ ೪೮೦, ನಿಶ್ಮಿತಾ ಕೋಪನ್ನವರ್ ೪೮೦, ಐಶ್ವರ್ಯ ಮಂಗುಳ್ಳಿ ೪೭೦ ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.ಪರೀಕ್ಷೆಯಲ್ಲಿ ಗುಣಾತ್ಮಕ ಸಾಧನೆಯೊಂದಿಗೆ ತೇರ್ಗಡೆಯಾಗಿ ಶಾಲೆಗೆ,ಸಂಸ್ಥೆಗೆ ಕೀರ್ತಿ ತಂದಿರುವ ಸಾಧಕ ಮಕ್ಕಳಿಗೆ ಸಂಸ್ಥೆಯ ಅಧ್ಯಕ್ಷರಾದ ಗದುಗಿನ ತೋಂಟದ ಡಾ. ಸಿದ್ದರಾಮ ಮಹಾಸ್ವಾಮಿಗಳವರು, ಸಂಸ್ಥೆಯ ಕ್ರಿಯಾಶೀಲ ಕಾರ್ಯದರ್ಶಿಗಳಾದ ಪ್ರೊ,ಶಿವಾನಂದ ಪಟ್ಟಣಶೆಟ್ಟರ…

Read More

ಉದಯರಶ್ಮಿ ದಿನಪತ್ರಿಕೆ ಆಲಮೇಲ: ವಿಭೂತಿಹಳ್ಳಿಯ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಯ ಎಸ್‌ಎಸ್‌ಎಲ್‌ಸಿ ಪರೀಕ್ಷಯೆ ೮೫% ಫಲಿತಾಂಶ ಬಂದಿದೆ.ಪವಿತ್ರಾ ಬಿರಾದಾರ ೫೯೫ (೯೪.೨೦%) ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ, ಸಾನಿಕಾ ಹೊಸಮನಿ ೫೯೪ (೯೫.೦೪%) ಅಂಕ ಪಡೆದು ದ್ವಿತೀಯ ಸ್ಥಾನ, ಸ್ನೇಹ ಚೌಹಾಣ (೯೪%) ಅಂಕ ಪಡೆದು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಒಟ್ಟು ೪೮ ವಿದ್ಯಾರ್ಥಿನಿಯರಲ್ಲಿ ೨೧ ವಿದ್ಯಾರ್ಥಿನಿಯರು ಡಿಸ್ಟಿಂಗಷನ ಪಾಸಾಗಿದ್ದರೆ, ೨೦ ವಿದ್ಯಾರ್ಥಿನಿಯರು ಪ್ರಥರ್ಮ ದರ್ಜೇಯಲ್ಲಿ ಪಾಸಾಗಿದ್ದಾರೆ, ೨ ವಿದ್ಯಾರ್ಥಿನಿಯರು ದ್ವಿತೀಯ ಸ್ಥಾನದಲ್ಲಿ ಪಾಸಾಗಿದ್ದಾರೆ. ವಿದ್ಯಾರ್ಥಿನಿಯರ ಸಾಧನೆಗೆ ಸಿಬ್ಬಂದಿ ಹರ್ಷ ವೆಕ್ತಪಡಿಸಿದ್ದಾರೆ ಎಂದು ಮುಖ್ಯ ಶಿಕ್ಷ ಪ್ರಭಾಕರ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More