Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ವಿಜಯಪುರ ಹಾಗೂ ಬಾಗಲಕೋಟ ಜಿಲ್ಲೆಗಳ ರಾಜ್ಯ ಸರ್ಕಾರಿ ನೌಕರರ ಮಕ್ಕಳು ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ.೮೦ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ಮಕ್ಕಳ ಪ್ರತಿಭಾ ಪುರಸ್ಕಾರ ಆ.೯ ರಂದು ಮಧ್ಯಾನ್ಹ ೩ ಗಂಟೆಗೆ ಬಾಗಲಕೋಟದ ಕಲಾಭವನದಲ್ಲಿ ಹಮ್ಮಿಕೊಂಡಿದೆ. ಬಸವನಬಾಗೇವಾಡಿ ತಾಲೂಕಿನಿಂದ ಆಯ್ಕೆಯಾದ ಮಕ್ಕಳು ತಮ್ಮ ಪಾಲಕರೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸಿ ಸಂಘದ ಪ್ರತಿಭಾ ಪುರಸ್ಕಾರ ಸ್ವೀಕರಿಸಬೇಕೆಂದು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಮಂಗಾನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ತಾಲೂಕಿನಲ್ಲಿ ಆಯ್ಕೆಯಾದ ಬೆಳೆ ಸಮೀಕ್ಷೆಗಾರರು ಬೆಳೆ ಸಮೀಕ್ಷೆ ಮಾಡುವಾಗ ಬರುವ ನ್ಯೂನತೆಗಳನ್ನು ಸರಿಪಡಿಸಿಕೊಂಡು ನಿಖರವಾದ ಬೆಳೆ ಸಮೀಕ್ಷೆಯನ್ನು ಕೈಗೊಳ್ಳಬೇಕೆಂದು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಎಂ.ಎಚ್.ಯರಝರಿ ಹೇಳಿದರು.ಪಟ್ಟಣದ ತಹಸೀಲ್ದಾರ ಕಚೇರಿಯ ಸಭಾಂಗಣದಲ್ಲಿ ಕೃಷಿ ಇಲಾಖೆಯಿಂದ ೨೦೨೫-೨೬ ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಗಾಗಿ ಆಯ್ಕೆಯಾದ ಖಾಸಗಿ ನಿವಾಸಿಗಳಿಗೆ (ಬೆಳೆ ಸಮೀಕ್ಷೆಗಾರರು) ಹಮ್ಮಿಕೊಂಡಿದ್ದ ಒಂದು ದಿನದ ಬೆಳೆ ಸಮೀಕ್ಷೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಮೀಕ್ಷೆಗಾರರು ರೇಷ್ಮೆ ಬೆಳೆಗಳನ್ನು ಸೇರಿದಂತೆ ತಾಲೂಕಿನ ಯಾವುದೇ ರೈತರ ಜಮೀನುಗಳು ಕೈ ತಪ್ಪದಂತೆ ಸಮೀಕ್ಷೆ ಮಾಡಬೇಕು. ಬೆಳೆ ಸಮೀಕ್ಷೆಯಿಂದ ಸಂಗ್ರಹಿಸಿದ ದತ್ತಾಂಶಗಳನ್ನು ಸರ್ಕಾರದ ವಿವಿಧ ಯೋಜನೆಗಳಲ್ಲಿ ಕನಿಷ್ಠ ಬೆಂಬಲ, ಸಬ್ಸಿಡಿ ಪಾವತಿ, ಬೆಳೆ ಪ್ರದೇಶದ ಅಂದಾಜು ಕೃಷಿ ಮತ್ತು ತೋಟಗಾರಿಕ ಯೋಜನೆಗಳ ಅಡಿಯಲ್ಲಿ ಫಲಾನುಭವಿಗಳ ಆಯ್ಕೆಗೆ ಮುಂತಾದ ಸೌಲಭ್ಯ ಒದಗಿಸಲು ಬಳಕೆಯಾಗುತ್ತದೆ. ಬೆಳೆ ಸಮೀಕ್ಷೆಗಾರರು ಪ್ರಾಮಾಣಿಕವಾಗಿ, ನಿಖರವಾಗಿ ಮಾಡಬೇಕೆಂದು ಸೂಚಿಸಿದರು.ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಮಾತನಾಡಿ, ಎಲ್ಲ ಖಾಸಗಿ ನಿವಾಸಿಗಳು…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವ ದಿ.ರವೀಂದ್ರ ಹಂದಿಗನೂರ ಅವರು ಸೆ.೧೩, ೨೦೧೩ರಂದು ಹೃದಯಾಘಾತದಿಂದ ಸಾವನ್ನಪ್ಪಿದರು. ಕಳೆದ ೧೨ವರ್ಷಗಳಿಂದ ಸ್ವಗ್ರಾಮದಲ್ಲಿ ಅನಾಥವಾಗಿ ಬಿದ್ದಿರುವ ಸಮಾಧಿಯನ್ನು ಕನ್ನಡ ಮತ್ತು ಸಂಸ್ಕ್ರುತಿ ಇಲಾಖೆ ತನ್ನ ಅಧಿನಕ್ಕೆ ತೆಗೆದುಕೊಂಡು ಗಜಲ್ ಸಂಗೀತ ಶಾಲೆ ಸ್ಥಾಪಿಸಲು ಹಾಗೂ ಪಟ್ಟಣದಲ್ಲಿ ಒಂದು ಅತ್ಯುತ್ತಮ ಭವನ ನಿರ್ಮಾಣ ಮಾಡಲು ಸ್ಥಳೀಯ ಜನಪ್ರತಿನಿಧಿಗಳು ಗಮನ ಹರಿಸಿದರರೇ ಮಾತ್ರ ಗಾನ ವಿದ್ವಾಂಸಕ ದಿ.ಪಂಡಿತ ರವೀಂದ್ರ ಹಂದಿಗನೂರ ಅವರಿಗೆ ನಿಜವಾದ ಗೌರವ ನೀಡಿದಂತಾಗುತ್ತದೆ. ಈ ಒಂದು ಸತ್ಕಾರ್ಯದ ಕುರಿತು ಶಾಸಕರು ಗಂಭೀರವಾಗಿ ಚಿಂತಿಸಲಿ ಎಂಬುವುದೇ ಗಜಲ್ ಗಾರುಡಿಗ ದಿ.ಪಂಡಿತ ರವೀಂದ್ರ ಹಂದಿಗನೂರ ಅವರ ಅಭಿಮಾನಿಗಳ ಹಾಗೂ ಸಂಗೀತ ಆಸಕ್ತರ ಮಹಾದಾಸೆಯಾಗಿದೆ ಎಂದು ಬರಹಗಾರ ಮೌಲಾಲಿ ಕೆ. ಆಲಗೂರ ಹೇಳಿದ್ದಾರೆ.ಕನ್ನಡ ಗಜಲ್‌ನಲ್ಲಿ ಸಾವಿರಾರು ಹಾಡುಗಳನ್ನು ಹಾಡಿರುವ ಪಂಡಿತ್ ರವೀಂದ್ರ ಹಂದಿಗನೂರ ಅವರ ಸಂಗೀತ ಸಾಧನೆ ಹಿರಿದಾಗಿದೆ. ಉರ್ದು ಭಾಷೆಯಲ್ಲಿರುವ ಗಜಲ್ ಗಾಯನವನ್ನು ಮೊದಲ ಬಾರಿಗೆ ಕನ್ನಡದಲ್ಲಿ ಹಾಡಿ ಶ್ರೇಷ್ಠ ಸಂಗೀತ ಸಾಧಕ ಎನಿಸಿಕೊಂಡು ಜಿಲ್ಲೆ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ನಿಮ್ಮ ಕಾರ್ಯ ಚಟುವಟಿಕೆಯಿಂದ ಮುಂಬರುವ ದಿನಮಾನಗಳಲ್ಲಿ ಮಹಿಳಾ ವಿವಿ ಎತ್ತರೋತ್ತರವಾಗಿ ಬೆಳೆಯಲಿ. ನಿಮ್ಮ ಕಲಾವಧಿಯಲ್ಲಿ ವಿವಿಯು ಸರ್ವಾಂಗೀಣ ಅಭಿವೃದ್ಧಿಯಾಗಲಿ ಎಂದು ಯಂಕಂಚಿ ಕುಂಟೋಜಿ ಹಿರೇಮಠದ ಪೀಠಾಧಿಪತಿ ಅಭಿನವ ರುದ್ರಮುನಿ ಶಿವಾಚಾರ್ಯರು ಹೇಳಿದರು.ಇತ್ತೀಚಗೆ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಗೆ ೬ನೆಯ ನೂತನ ಕುಲಪತಿಯಾಗಿ ನೇಮಕಗೊಂಡ ಪ್ರೊ.ವಿಜಯಾ ಕೋರಿಶೆಟ್ಟಿ ಅವರಿಗೆ ಸನ್ಮಾನಿಸಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ನಮ್ಮ ಜಿಲ್ಲೆಯ ಹೆಣ್ಣು ಮಗಳಿಗೆ ಈ ಅವಕಾಶ ದೊರತದ್ದು ಸಂತಸ ತಂದಿದೆ ಎಂದರು.ಈ ವೇಳೆ ಸನ್ಮಾನವನ್ನು ಸ್ವೀಕರಿಸಿದ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಮಾತನಾಡಿ, ಹರ ಗುರು ಚರಮೂರ್ತಿಗಳ ಆಶೀವಾದದಿಂದ ವಿಶ್ವವಿದ್ಯಾಲಯವು ಸಮಗ್ರ ಅಭಿವೃದ್ಧಿ ಹೊಂದಲಿ ಎನ್ನುವುದೇ ನನ್ನ ಮಹದಾಸೆಯಾಗಿದೆ. ಸದಾ ಕಾಲ ತಮ್ಮ ಆಶೀರ್ವಾದ, ಮಾರ್ಗದರ್ಶನ ನಮ್ಮ ಮೇಲಿರಲಿ ಎಂದರು.ಈ ವೇಳೆ ತನಸಹಳ್ಳಿ ಶ್ರೀಮಠದ ಚರಂತೇಶ್ವರ ಶಿವಾಚಾರ್ಯರು, ಮಹಿಳಾ ವಿವಿಯ ಡಾ.ರಾಜಕುಮಾರ ಮಾಲಿಪಾಟೀಲ, ವಿಜಯಕುಮಾರ ಸೇರಿದಂತೆ ಇತರರು ಇದ್ದರು.

Read More

ನವದೆಹಲಿಯಲ್ಲಿ ಮಾಜಿ ಶಾಸಕ ರಮೇಶ ಭೂಸನೂರ ಹಾಗೂ ಸಿಂದಗಿ ಮಂಡಲ ತಾಲೂಕಾಧ್ಯಕ್ಷ ಸಂತೋಷ ಪಾಟೀಲ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಕೆ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಶೇಡಬಾಳ-ವಾಡಿ ರೈಲ್ವೆ ಯೋಜನೆ ಬಗ್ಗೆ ಸ್ವಾತಂತ್ರ‍್ಯ ಪೂರ್ವದಲ್ಲಿ ಸಮೀಕ್ಷೆ ಕಾರ್ಯ ನಡೆದಿದ್ದು, ವಿಜಯಪುರ ಜಿಲ್ಲೆಯಲ್ಲಿಯೇ ಸಿಂದಗಿ ವಾಣಿಜ್ಯ ಮತ್ತು ವ್ಯವಹಾರಿಕವಾಗಿ ಅತೀ ವೇಗವಾಗಿ ಬೆಳೆಯುತ್ತಿರುವ ಹಾಗೂ ಎಲ್ಲಾ ಕ್ಷೇತ್ರದಲ್ಲಿಯೂ ವಿಶಿಷ್ಟ ಸಾಧನೆ ಗೈಯುತ್ತಿರುವ ಪಟ್ಟಣವಾಗಿದೆ ಎಂದು ಮಾಜಿ ಶಾಸಕ ರಮೇಶ ಭೂಸನೂರ ಹೇಳಿದರು.ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಇಲ್ಲಿನ ಜನರು ವ್ಯವಹಾರ ವಹಿವಾಟಿಗಾಗಿ ರಾಜಧಾನಿ ಬೆಂಗಳೂರು ಸೇರಿದಂತೆ ಹೊರ ರಾಜ್ಯಗಳಿಗೆ ತೆರಳಬೇಕಾದ ಅನಿವಾರ್ಯವಿದೆ. ಆದರೆ ಸಿಂದಗಿ ಪಟ್ಟಣಕ್ಕೆ ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ಇಲ್ಲಿನ ಜನರಿಗೆ ಇತರ ರಾಜ್ಯ, ಜಿಲ್ಲೆಗಳ ಜೊತೆಗೆ ವ್ಯವಹರಿಸಲು ತೊಂದರೆ ಉಂಟಾಗುತ್ತಿದೆ. ಇಂಡಿ, ಮುದ್ದೇಬಿಹಾಳ, ಬ.ಬಾಗೇವಾಡಿ ಸೇರಿದಂತೆ ಹೋಬಳಿಗಳಿಗೂ ಸಹ ರೈಲು ಸಂಪರ್ಕ ಕಲ್ಪಿಸಲಾಗಿದೆ. ಆದರೆ ಜಿಲ್ಲೆಯ ಪ್ರಮುಖ…

Read More

ಲೇಖನ- ಮಲ್ಲಪ್ಪ. ಸಿ. ಖೊದ್ನಾಪೂರತಿಕೋಟಾ ಉದಯರಶ್ಮಿ ದಿನಪತ್ರಿಕೆ ಅಣ್ಣ-ತಂಗಿಯರ ಈ ಬಂಧ, ಜನುಮ ಜನುಮಗಳ ಅನುಬಂಧ, ಜೀವಕ್ಕೆ ಕೊರಳು ದೇಹಕ್ಕೆ ನೆರಳು ಅನಿಸುತ್ತಿದೆ, ಈ ರಕ್ಷಾ ಬಂಧನ… ಎಂಬ ಹಾಡು ಅಣ್ಣ-ತಂಗಿಯರ ನಡುವೆ ಭಾವಬಂಧವನ್ನು ಬೆಸೆಯುತ್ತದೆ. ಭವ್ಯ ಪರಂಪರೆ, ಇತಿಹಾಸ, ಸಂಪ್ರದಾಯ ಹಾಗೂ ಸಂಸ್ಕೃತಿ-ಆಚರಣೆಗಳಿಗೆ ವಿಶಿಷ್ಟತೆಯನ್ನು ಹೊಂದಿದ ನಾಡು ನಮ್ಮದು. ನಮ್ಮ ದೇಶದಲ್ಲಿ ಪ್ರತಿಯೊಂದು ಆಚರಣೆಗೂ, ಹಬ್ಬಕ್ಕೂ ಅದರದೇ ಆದ ವಿಶೇಷವಿದೆ. ಪ್ರತಿಯೊಂದು ಹಬ್ಬವು ಒಂದಿಲ್ಲ ಒಂದು ರೀತಿಯ ಸಂದೇಶದ ಸಾರವನ್ನು ಹೇಳುತ್ತದೆ. ಎಲ್ಲಾ ಹಬ್ಬಗಳಂತೆ ರಕ್ಷಾ ಬಂಧನವು ಸಹ ವಿಶೇಷ ಹಬ್ಬವಾಗಿದ್ದು, ಅದು ಸಹೋದರ-ಸಹೋದರಿಯರ ಸಂಬಂಧಗಳನ್ನು ಗಟ್ಟಿಗೊಳಿಸುವ ಭಾವಾನುಬಂಧವಾಗಿದೆ.ಶ್ರಾವಣ ಮಾಸದಲ್ಲಿ ಆಚರಿಸಲ್ಪಡುವ ಈ ರಕ್ಷಾ ಬಂಧನವು ಅಣ್ಣ-ತಂಗಿಯರ ಅನುಬಂಧದ ಶ್ರೇಷ್ಠತೆಯನ್ನು ಪ್ರತಿಬಿಂಬಿಸುವ ಅರ್ಥಗರ್ಭಿತವಾದ ಹಬ್ಬವಾಗಿದೆ. ರಕ್ಷಾ ಬಂಧನವೆಂದರೆ ಕೇವಲ ಕೇಸರಿ ದಾರ ಕಟ್ಟಿ ಉಡುಗೊರೆ ನೀಡುವದಷ್ಟೇ ಅಲ್ಲ, ಇದು ಭಾವಬಂಧ ಬೆಸೆಯುವ ಭ್ರಾತೃತ್ವದ ಬಾಂಧವ್ಯ, ಮಮತೆ ಮತ್ತು ಸುರಕ್ಷೆಯ ಸಂಕೇತವಾಗಿದೆ. ಸಹೋದರಿಯರು ತಮ್ಮ ಸಹೋದರರ ಕೈಗೆ ರಾಖಿ ಕಟ್ಟುವ ಮೂಲಕ…

Read More

ಸಂಗ್ರಹ- ಸುಧಾ ಪಾಟೀಲವಿಶ್ವಸ್ಥರುಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರಪುಣೆ ಉದಯರಶ್ಮಿ ದಿನಪತ್ರಿಕೆ ಶರಣಮಾಸದ 15 ನೆಯ ದಿವಸದ ಉಪನ್ಯಾಸ ಮಾಲಿಕೆಯಲ್ಲಿ ಶರಣ ಕೆ. ಬಿ. ಮಹದೇವಪ್ಪ ಅವರು ಕನ್ನಡ ಸಾಹಿತ್ಯಕ್ಕೆ ಶರಣರ ಕೊಡುಗೆ ಎನ್ನುವ ವಿಷಯದ ಬಗೆಗೆ ಅತ್ಯಂತ ಪ್ರಬುದ್ಧವಾಗಿ ನಮ್ಮೊಡನೆ ಹಂಚಿಕೊಂಡರು.ಕನ್ನಡ ಸಾಹಿತ್ಯ ಪ್ರಕಾರಗಳಾದ ಚಂಪೂ ಕಾವ್ಯ, ವಚನ ಸಾಹಿತ್ಯ, ಷಟ್ಪದಿಗಳ ಜೊತೆಗೆ ಜೈನ ಯುಗ, ಲಿಂಗಾಯತ ಯುಗ,ಶೈವ ಯುಗ,ಆಧುನಿಕ ಯುಗದಲ್ಲಿ ಕನ್ನಡದಲ್ಲಿ ಆಗಿ ಹೋದ ವಿಶಿಷ್ಟ ಬದಲಾವಣೆ ಗಳ ಬಗೆಗೆ ಬೆಳಕು ಚೆಲ್ಲಿದರು.ಇದರಲ್ಲಿ ವಚನ ಯುಗ ಮಹತ್ವವಾದದ್ದು, ವಚನ ಸಾಹಿತ್ಯದಲ್ಲಿ ವಚನಕಾರರು ಹೇಗೆ ವಸ್ತು ರಚನೆ ಆಯ್ಕೆ, ಬರವಣಿಗೆಯ ವಿಧಾನ,ಆಲೋಚನೆ, ಭಾವನೆ, ಚಿಂತನೆಗಳನ್ನು ಬರವಣಿಗೆಯಲ್ಲಿ ವ್ಯಕ್ತಪಡಿಸಿದರು. ಕನ್ನಡ ಭಾಷೆ ದುಡಿಸಿಕೊಂಡರು, ಅದರ ಔನ್ನತ್ಯ, ತೀವ್ರತೆ, ಭಾಷಾ ಜ್ಞಾನ ವನ್ನು ಹೇಳುತ್ತಾ, ವಚನ ಪರಂಪರೆಯ ಧೋರಣೆಯ ಮಹತ್ವವನ್ನು ಹಂಚಿಕೊಂಡರು.ಆಗಿನ 346 ವಚನಕಾರರು ಮತ್ತು 42 ವಚನಕಾರ್ತಿಯರು ತಮ್ಮವಚನಗಳ ಮೂಲಕ ಜನರನ್ನು ತಲುಪಿದ್ದು, ಇದು ಜನಸಾಮಾನ್ಯರ ಭಾಷೆ ಕಾಯಕಯೋಗಿಗಳ ಭಾಷೆ,ಎಲ್ಲ ಅಪ…

Read More

ಬಂದಾಳ ಶಾಲಾ ಮಕ್ಕಳಿಗೆ ಸ್ಕೂಲ ಬ್ಯಾಗ್ ವಿತರಣೆ | ಎಸ್ ಡಿ ಎಂ ಸಿ ಅಧ್ಯಕ್ಷ ನಿಂಗನಗೌಡ ಬಿರಾದಾರ ಕರೆ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ದೇಶದ ಬಡ ಹಿಂದುಳಿದ ಅನ್ಯಾಯಕ್ಕೊಳಗಾದವರಿಗೆ ಯಾವುದೇ ಧರ್ಮ ಜಾತಿ ತಾರತಮ್ಯವಿಲ್ಲದೆ ಸಹಾಯ ಮಾಡುವ ಸಮಾಜ ಸೇವೆಯ ಮೂಲಕ ಗ್ರಾಮದ ಬಡ ಹಾಗೂ ನಿರ್ಗತಿಕ ಮಕ್ಕಳಿಗೆ ಅಖಿಲ ಭಾರತ ಮಾನವೀಯತೆ ವೇದಿಕೆಯ ಸಂದೇಶ ಎಲ್ಲರಿಗೂ ಸಾರೋಣ ಎಂದು ಎಸ್ ಡಿ ಎಂ ಸಿ ಅಧ್ಯಕ್ಷ ನಿಂಗನಗೌಡ ಎಸ್ ಬಿರಾದಾರ ಹೇಳಿದರು.ತಾಲೂಕಿನ ಬಂದಾಳ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಆವರಣದಲ್ಲಿ ಗುರುವಾರ ಪಟ್ಟಣದ ಅಖಿಲ ಭಾರತ ಮೌನವೀಯತೆ ಸಂದೇಶ ವೇದಿಕೆ ಸದಸ್ಯರು ಬಡ ನಿರ್ಗತಿಕ ಮಕ್ಕಳಿಗೆ ಸ್ಕೂಲ್ ಬ್ಯಾಗ್ ವಿತರಣ ಸಮಾರಂಭದ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಸಮಾಜದ ಸೇವೆಯ ಮೂಲಕ ಸಮಾಜದ ಕೆಳವರ್ಗದ ಜನರ ಮಕ್ಕಳಿಗೆ ಸಹಾಯ ಸಹಕಾರ ಮಾಡುವ ಸಂಸ್ಥೆಯ ಪದಾಧಿಕಾರಿಗಳಿಗೆ ಅನಂತ ಅಭಿನಂದನೆಗಳು ತಿಳಿಸಿದರು.ಅಖಿಲ ಭಾರತ ಮಾನವೀಯತೆ ಸಂದೇಶ…

Read More

ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿಗೆ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಸೂಚನೆ ಬೆಂಗಳೂರು: ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯಲ್ಲಿ “ಮತಗಳ್ಳತನ” ನಡೆದಿದೆ ಎಂದು ಗಂಭೀರ ಆರೋಪ ಮಾಡಿ, ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬಿಡುಗಡೆ ಮಾಡಿದ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ, ಸಹಿ ಮಾಡಿದ ಅಫಿಡವಿಟ್ ನೊಂದಿಗೆ ದಾಖಲೆಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸುವಂತೆ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಗುರುವಾರ ಕಾಂಗ್ರೆಸ್ ನಾಯಕನಿಗೆ ಸೂಚಿಸಿದ್ದಾರೆ.ಗುರುವಾರ ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮತಗಳ್ಳತನದ ಬಗ್ಗೆ ದಾಖಲೆ ಬಿಡುಗಡೆ ಮಾಡಿದ ನಂತರ ರಾಹುಲ್ ಗಾಂಧಿಯವರಿಗೆ ಪತ್ರ ಬರೆದಿರುವ ರಾಜ್ಯ ಚುನಾವಣಾ ಅಧಿಕಾರಿ, ರಾಷ್ಟ್ರ ರಾಜಧಾನಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ, “ನೀವು ಅನರ್ಹ ಮತದಾರರ ಸೇರ್ಪಡೆ ಮತ್ತು ಅರ್ಹ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಿರುವ ಬಗ್ಗೆ ಉಲ್ಲೇಖಿಸಿದ್ದೀರಿ… ಆ ಕುರಿತ ದಾಖಲೆಗಳನ್ನು ಚುನಾವಣಾ ಆಯೋಗದೊಂದಿಗೆ ಹಂಚಿಕೊಳ್ಳಿ” ಎಂದು ಹೇಳಿದ್ದಾರೆ.”1960 ರ ಮತದಾರರ ನೋಂದಣಿ ನಿಯಮಗಳ ನಿಯಮ 20(3)(b) ಅಡಿಯಲ್ಲಿ ಲಗತ್ತಿಸಲಾದ ಸಾಕ್ಷ್ಯಾಧಾರಿತ ಪ್ರಮಾಣಪತ್ರಕ್ಕೆ ಸಹಿ ಹಾಕಿದ ದಾಖಲೆಗಳನ್ನು ಸಲ್ಲಿಸಿ. ಇದರಿಂದ ಅಗತ್ಯ…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಪಟ್ಟಣದ ತಾಲೂಕು ಪಂಚಾಯತ್ ಸಭಾ ಭವನದಲ್ಲಿ ತಹಶೀಲ್ದಾರ್ ಎಸ್.ಎಸ್. ನಾಯಕಲಮಠ ನೇತೃತ್ವದಲ್ಲಿ ಗುರುವಾರ ಸ್ವಾತಂತ್ರ ದಿನಾಚರಣೆಯ ಪ್ರಯುಕ್ತ ಪೂರ್ವಭಾವಿ ಸಭೆ ಜರುಗಿತು.ಈ ಸಂದರ್ಭದಲ್ಲಿ ತಾಲೂಕ ಆಡಳಿತದಿಂದ ಶಿಷ್ಟಾಚಾರದ ಪ್ರಕಾರವಾಗಿ ಅತ್ಯಂತ ಅಚ್ಚುಕಟ್ಟಾಗಿ ಸ್ವಾತಂತ್ರ ದಿನಾಚರಣೆಯನ್ನು ಆಚರಿಸುವ ಕುರಿತು ಸುದಿರ್ಘವಾಗಿ ಚರ್ಚಿಸಲಾಯಿತು.ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜ ಕಟ್ಟುವುದು ಎಂ.ಪಿ.ಎಸ್ ಶಾಲೆಗೆ, ನಿರೂಪಣೆ ಕೆ.ಜಿ.ಎಸ್ ಶಾಲೆಗೆ ವಹಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೆರವೇರಿಸಲು ಎಪಿಜೆ ಅಬ್ದುಲ್ ಕಲಾಂ ಆಂಗ್ಲ ಮಾದ್ಯಮ ಶಾಲೆ, ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಸಂಗಮೇಶ್ವರ ಶಾಲೆ, ಎಂ.ಪಿ.ಎಸ್ ಶಾಲೆ ಹಾಗೂ ಇಕ್ರಾ ಹಿರಿಯ ಪ್ರಾಥಮಿಕ ಶಾಲೆಗಳಿಗೆ ವಹಿಸುವುದರ ಜೊತೆಗೆ ತಾಲೂಕ ಮಟ್ಟದ ವಿವಿಧ ಇಲಾಖೆಗಳಿಗೆ ಇನ್ನಿತರ ಜವಾಬ್ದಾರಿಗಳನ್ನು ನೀಡಲಾಯಿತು.ಈ ಸಂದರ್ಭದಲ್ಲಿ ಪ.ಪಂ ಅಧ್ಯಕ್ಷರಾದ ಸಿ.ಎಸ್ ಗಿಡ್ಡಪ್ಪಗೋಳ, ತಾ ಪಂ ಇಓ ಸುನಿಲ್ ಮದ್ದಿನ್, ಪ.ಪಂ ಮುಖ್ಯಾದಿಕಾರಿ ವಿರೇಶ ಹಟ್ಟಿ, ಪಿಎಸ್ಐ ಆರ್.ಹೆಚ್ ಹಳ್ಳಿ, ವೖದ್ಯಾಧಿಕಾರಿ ಡಾ.ಲಕ್ಷ್ಮೀ ತೆಲ್ಲೂರ, ಪಟ್ಟಣದ ಹಿರಿಯರಾದ ಉಸ್ಮಾನಪಟೇಲ್ ಖಾನ್, ಪ.ಪಂ ಸದಸ್ಯರಾದ ಮಹಾಂತೇಶ…

Read More