Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಇಂದು (ಸೆಪ್ಟಂಬರ್ ೨೭, ಶನಿವಾರ) ‘ಗೂಗಲ್’ ನ ೨೫ನೇಯ ವಾರ್ಷಿಕೋತ್ಸವದ ಪ್ರಯುಕ್ತ ಈ ವಿಶೇಷ ಲೇಖನ ಲೇಖನ- ಮಲ್ಲಪ್ಪ. ಸಿ. ಖೊದ್ನಾಪೂರತಿಕೋಟಾವಿಜಯಪುರ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಇಂದಿನ ಡಿಜಿಟಲ್ ಯುಗದಲ್ಲಿ ಇಡೀ ಜಗತ್ತನ್ನು ಬೆರಳ ತುದಿಯಲ್ಲಿ ದೊರೆಯುವಂತೆ ಮಾಡಿದ್ದು, ಕೇಳಿದ ಪ್ರಶ್ನೆಗೆ ಉತ್ತರ, ಅವಶ್ಯಕ ಮಾಹಿತಿಯೊಂದಿಗೆ ನೀಡುವ ಏಕೈಕ ತಂತ್ರಜ್ಞಾನಯುಕ್ತವಾದ ಸಾಫ್ಟವೇರ ಅಂದರೆ ಅದುವೇ ‘ಗೂಗಲ್’. ಚಿಕ್ಕ ಮಗುವಿನಿಂದ ಹಿಡಿದು ವಯೋವೃದ್ಧ ಹೀಗೆ ಮೋಬೈಲ್ ಬಳಸುವ ಎಲ್ಲರಿಗೂ ಗೂಗಲ್ ಎಂದರೆ ತಿಳಿಯದೇ ಇರಲಾರದು. ಪ್ರತಿದಿನ ನಮಗೆ ಅಗತ್ಯವಾದ ಮತ್ತು ತಿಳಿದುಕೊಳ್ಳಲು ಬಯಸುವ ಯಾವುದೇ ವಿಷಯ ಅಥವಾ ಮಾಹಿತಿಯನ್ನು ಇದರಿಂದ ಪಡೆಯುತ್ತೇವೆ. ಅದರಲ್ಲೂ ವಿದ್ಯಾರ್ಥಿಗಳಿಗಂತೂ ಪಠ್ಯದಲ್ಲಿ ದೊರಕದೇ ಇರುವ ಯಾವುದೇ ಸಂಗತಿಯನ್ನು ಮತ್ತು ಸಂಪನ್ಮೂಲವನ್ನು ಒದಗಿಸುವ ಒಂದು ಸಾಧನವಾಗಿದೆ. ನಾವು ಪ್ರತಿದಿನ ಗೂಗಲ್ ಎಂಬುದನ್ನು ಬಳಸುತ್ತಿದ್ದರೂ ಅದರ ಪೂರ್ಣ ಹೆಸರು ಏನೆಂದು ಹುಡುಕಿಲ್ಲ. ಗೂಗಲ್ ಎಂದರೆ ಗ್ಲೋಬಲ್ ಆರ್ಗನೈಸೇಶನ್ ಆಫ್ ಓರಿಯಂಟೆಡ್ ಗ್ರೂಪ್ ಲ್ಯಾಂಗ್ವೇಜ್ ಆಫ್ ಅರ್ಥ ಎಂಬುದಾಗಿದೆ. ಈ ಗೂಗಲ್ ಕಂಪನಿ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಶ್ರೀಕೃಷ್ಣ ವಾದಿರಾಜ ಮಠದಲ್ಲಿ ಗುರುವಾರ ಸಂಜೆ ದಿ. ಎಸ್ ಎಲ್ ಭೈರಪ್ಪನವರಿಗೆ ಶೃದ್ಧಾಂಜಲಿ ಹಾಗೂ ನುಡಿನಮನ ಕಾರ್ಯಕ್ರಮ ಜರುಗಿತು.ಅಖಿಲ ಭಾರತೀಯ ಸಾಹಿತ್ಯ ಪರಿಷದ್(ರಿ) ವಿಜಯಪುರ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ದಿ.ಭೈರಪ್ಪನವರ ಕೃತಿಗಳ ಬಗ್ಗೆ ಅವರು ಸಾಹಿತ್ಯದ ಬಗ್ಗೆ ಅವರ ಸಮಗ್ರ ಕಾದಂಬರಿಗಳ ಚರ್ಚೆ ಮಾಡುವ ಮೂಲಕ ಆಗಲಿದ ಧೀಮಂತ ಮೇರು ಸಾಹಿತಿ ದಿ. ಭೈರಪ್ಪನವರಿಗೆ ನುಡಿನಮನ ಸಲ್ಲಿಸಲಾಯಿತು.ಪ್ರಾಸ್ತಾವಿಕವಾಗಿ ಆನಂದ ಗೋಡ್ಸೆ ಮಾತನಾಡಿ, ಭೈರಪ್ಪನವರಿಗೆ ಜ್ಞಾನಪೀಠ ಪ್ರಶಸ್ತಿ ಬಾರದೆ ಇರುವುದು ದೊಡ್ಡ ಪ್ರಮಾದ, ಮರಣೋತ್ತರವಾಗಿಯಾದರೂ ಸರ್ಕಾರ ಶೀಘ್ರದಲ್ಲೇ ಜ್ಞಾನಪೀಠ ಪ್ರಶಸ್ತಿ ಘೋಷಣೆ ಮಾಡಬೇಕು ಎಂದು ಹೇಳಿದರು.ಆನಂದ ಕುಲಕರ್ಣಿ, ಶರಣು ಹೀರಾಪುರ, ಸುಧೀರ್ ಟಂಕಸಾಲಿ ನಾಯಕೋಡಿ ದೀಪಕ ಪಟವರ್ಧನ್ R T ಕುಲಕರ್ಣಿ ಸರಾಫ್ ವಿವೇಕ ಕುಲಕರ್ಣಿ ಹಾಗೂ ಡಾ.ಕೃಷ್ಣ ಅಗರಖೇಡ ಮುಂತಾದವರು ಭೈರಪ್ಪನವರ ವಿವಿಧ ಕಾದಂಬರಿಗಳ ಬಗ್ಗೆ ಮಾತನಾಡಿದರು.ನಿವೃತ್ತ ಪ್ರಾಂಶುಪಾಲ G R ಕುಲಕರ್ಣಿ ಮಾತನಾಡಿದರು. ಅಭಾಸಾಪ ಜಿಲ್ಲಾ ಅಧ್ಯಕ್ಷ ನಾರಾಯಣ ಬಾಬಾನಗರ ಮಾತನಾಡುತ್ತ, ಒಂದು ಕಾದಂಬರಿ…
ನವರಾತ್ರಿ ಉತ್ಸವದಲ್ಲಿ ಪ್ರೊ. ಎಂ.ಎಸ್.ಖೊದ್ನಾಪೂರ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅಹಂ ಮೇತಿ’ ಎಂಬಂತೆ ಎಲ್ಲವು ನಾನು, ನನ್ನದು, ನನ್ನಿಂದ ಎಂಬ ಮಮಕಾರ-ಅಹಂಭಾವ ತೊಲಗಲಿ. ‘ಪರೋಪಕಾರಂ ಇದಂ ಶರೀರಂ’ ಎಂಬ ಶ್ಲೋಕದಂತೆ ಜೀವನ ಇರುವುದು ನನಗಾಗಿ ಅಷ್ಟೇ ಅಲ್ಲದೇ ಈ ಸಮಾಜದ ಅಭ್ಯುದಯಕ್ಕಾಗಿ ಮತ್ತು ಸಹಾಯ ಬೇಡಿ ಬಂದವರಿಗೆ ಸಾಧ್ಯವಾದಷ್ಟು ಉಪಕಾರ ಮಾಡುವ ಮನೋಭಾವವನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕು ಎಂದು ಪ್ರೊ. ಎಂ.ಎಸ್.ಖೊದ್ನಾಪೂರ ಅಭಿಪ್ರಾಯಪಟ್ಟರು.ಅವರು ನಗರದ ಹವಾಲ್ದಾರ ಕಾಲನಿಯ ಲಕ್ಷ್ಮಿ ದೇವಸ್ಥಾನದಲ್ಲಿ ನಡೆದ ನವರಾತ್ರಿ ಉತ್ಸವದಲ್ಲಿ ”ಶರಣರ ವಚನಗಳಲ್ಲಿ ಜೀವನ-ಮೌಲ್ಯಗಳು” ವಿಷಯ ಕುರಿತು ಆಯೋಜಿಸಿದ ಉಪನ್ಯಾಸದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.ಇಂದಿನ ಸಮೂಹ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಪ್ರಭಾವ ಮತ್ತು ಮಿತಿಮೀರಿದ ಬಳಕೆಯಿಂದ ಸಂಸ್ಕೃತಿ-ಸಂಸ್ಕಾರ, ಜೀವನ-ಮೌಲ್ಯಗಳು ಅಧಃಪತನಗೊಳ್ಳುತ್ತಿದೆ. ಮಾನವ ಕೇವಲ ಹಣ ಗಳಿಕೆಯತ್ತ ತನ್ನ ಜೀವನವನ್ನು ಸಾಗಿಸುತ್ತಾ, ಸಂಸಾರವೆಂಬ ಪ್ರಾಪಂಚಿಕ ಜಗತ್ತಿನಲ್ಲಿ ಮುಳುಗಿ ಹೋಗಿದ್ದಾನೆ. ಮನದಲ್ಲಿರುವ ಅಷ್ಟ ಅರಿಷಡ್ವರ್ಗಗಳಾದ ಮದ. ಮೋಹ. ಮತ್ಸರ, ಲೋಭ, ಮಮಕಾರ ಮತ್ತು ಮನದಲ್ಲಿ ಕಲ್ಮಶ ಭಾವನೆಗಳನ್ನು…
ಇಂದು ಪುರಾಣ ಮಂಗಲ-ಉಡಿತುಂಬುವ ಕಾರ್ಯಕ್ರಮ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರ ನಗರದ ಜೋರಾಪೂರ ಪೇಠದ ಶ್ರೀ ಶಕ್ತಿ ತರುಣ ಸಂಘದ 50 ನೇ ವರ್ಷದ ಸುವರ್ಣ ಮಹೋತ್ಸವ ಅಂಗವಾಗಿ ವಿವಿಧ ಧಾಮಿ೯ಕ ಕಾರ್ಯಕ್ರಮಗಳು ಅದ್ದೂರಿಯಾಗಿ ಸಂಭ್ರಮ, ಸಡಗರದಿಂದ ಜರುಗಿವೆ.ಹಲ ಧಾಮಿ೯ಕ ಕೈಂಕರ್ಯಗಳು ಕಳೆದ 22 ರಿಂದ ವೈಭವೋಪೇತವಾಗಿ ಜರುಗುತ್ತಿವೆ.ಈಗ 27 ರಂದು ಶನಿವಾರ ಶ್ರೀ ಶಕ್ತಿ ತರುಣ ಸಂಘದ ಸುವರ್ಣ ಮಹೋತ್ಸವ ಪ್ರಯುಕ್ತ ಮುಂಜಾನೆ 11 ಗಂಟೆಗೆ ಅಂಬಾಭವಾನಿ ಶ್ರೀದೇವಿಯ ಪುರಾಣ ಮಂಗಲ ಹಾಗೂ ಮಧ್ಯಾಹ್ನ 1 ಗಂಟೆಗೆ ಸುಮಂಗಲೆಯರ ಉಡಿತುಂಬುವ ಕಾರ್ಯಕ್ರಮ ಮತ್ತು ಅನ್ನಪ್ರಸಾದ ಸೇರಿದಂತೆ ಸಂಜೆ 4 ಗಂಟೆಗೆ ಶ್ರೀ ಶ್ರೀನಿವಾಸ ಕಲ್ಯಾಣ ಮಹೋತ್ಸವ ಕಾರ್ಯಕ್ರಮ ನಡೆಯಲಿವೆ.ಬಸವನ ಬಾಗೇವಾಡಿ ಸಂಸ್ಥಾನ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಜರುಗುವ ಈ ಕಾರ್ಯಕ್ರಮದಲ್ಲಿ ಶ್ರೀ ಶಕ್ತಿ ತರುಣ ಸಂಘದ ಅಧ್ಯಕ್ಷ ಅಶೋಕ ಶಿರೋಳಕರ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಚಿವ ಎಂ.ಬಿ.ಪಾಟೀಲ, ಶಾಸಕ ಬಸನಗೌಡ ಪಾಟೀಲ (ಯತ್ನಾಳ), ಮಾಜಿ…
ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಕ್ರೀಢೆ ಸಹಕಾರಿಯಾಗಿದ್ದು ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮಿಷ್ಠದ ಕ್ರೀಢೆಗಳಲ್ಲಿ ಭಾಗವಹಿಸುವ ಮೂಲಕ ಆರೊಗ್ಯವಂತರಾಗಬೇಕೆಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.ಗ್ರಾಮದ ಶ್ರೀ ಪ್ರಭುಲಿಂಗೇಶ್ವರ ಇಂಟರ್ನ್ಯಾಷನಲ್ ಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ೧೪ರ ವಯೋಮಿತಿಯ ಕ್ರೀಢಾಕೂಟದಲ್ಲಿ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ತಾಲೂಕಾ ಮಟ್ಟದಲ್ಲಿ ಜಯಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿನಿಯರನ್ನು ಸತ್ಕರಿಸಿ, ಅಭಿನಂದಿಸಿ ಮಾತನಾಡಿದ ಅವರು ಕ್ರೀಢೆಗಳಲ್ಲಿ ವಿಜಯಿಯಾಗುವುದು ಎಷ್ಟು ಮುಖ್ಯವೋ ಅದರಲ್ಲಿ ಭಾಗವಹಿಸುವುದು ಅಷ್ಟೇ ಮುಖ್ಯ, ಕ್ರೀಢೆಗಳಲ್ಲಿ ಭಾಗವಹಿಸುವುದರಿಂದ ಮಕ್ಕಳ ಶಾರಿರೀಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದರು.ಸಂಸ್ಥೆಯ ಕಾರ್ಯದರ್ಶೀ ವಿದ್ಯಾಧರ ಸವದಿ, ಹಿಪೊಕ್ಯಾಂಪಸ್ ನಿರ್ದೆಶಕ ರಾಹುಲ್, ಪ್ರಾಚಾರ್ಯ ರಮೇಶ ಪೂಜಾರಿ, ದೈಹಿಕ ಶಿಕ್ಷಕ ಸುನಿಲ್ ಗುಬಚಿ, ಕಬ್ಬಡ್ಡಿ ತರಬೇತುದಾರ ಭಿಮಾನಂದ ಒಂಟಗೂಡಿ, ಶ್ರೀಧರ ಹಿಡಕಲ್, ಸಂಯೋಜಕ ಶ್ರೀಶೈಲ ಚಿಕ್ಕಣ್ಣವರ, ಆಡಳಿತ ಮಂಡಳಿಯ ಗಿರೀಶ ಕಂಬಿ, ರಮೇಶ ಪಾಟೀಲ, ಶ್ರೀಶೈಲ ಅಳ್ಳಿಗಿಡದ, ನಿಂಗಣ್ಣ ತೇಲಿ ಶಿವಪ್ಪ ಮಧುರಖಂಡಿ, ವಿಜಯ ಬೆಂಡವಾಡ ಹಾಗೂ ಶಿಕ್ಷಕವೃಂದ ಉಪಸ್ಥಿತರಿದ್ದರು.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಶ್ವಶ್ರೇಷ್ಠ ಕಂಪನಿಗಳಲ್ಲಿ ಉತ್ತರ ಕರ್ನಾಟಕದ ಎಂಜಿನಿಯರಿಂಗ್ ಪದವೀಧರರಿಗೆ ಅವಕಾಶ ಒದಗಿಸಲು ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ರಜಿಸ್ಟ್ರಾರ್ ಡಾ. ರಾಘವೇಂದ್ರ ಕುಲಕರ್ಣಿ ಹೇಳಿದ್ದಾರೆ.ಶುಕ್ರವಾರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಐಫೋನ್ ತಯಾರಿಸುವ ಅಂತಾರಾಷ್ಟ್ರೀಯ ದೈತ್ಯ ಕಂಪನಿ ಫಾಕ್ಸ್ಕಾನ್-ಹಾನ್ ಹೈ ಟೆಕ್ನಾಲಜಿ ಕಂಪನಿ 2024 ಮತ್ತು 2025ನೇ ಶೈಕ್ಷಣಿಕ ವರ್ಷದಲ್ಲಿ ಬಿ.ಇ ಮತ್ತು ಡಿಪ್ಲೊಮಾ ಕೋರ್ಸುಗಳಲ್ಲಿ ಮೆಕ್ಯಾನಿಕಲ್, ಎಲೇಕ್ಟ್ರಾನಿಕ್ಸ್ ಕಮ್ಯೂನಿಕೇಶನ್ ಮತ್ತು ಎಲೇಕ್ಟ್ರಾನಿಕ್ಸ್ ಎಲೆಕ್ಟ್ರೀಕಲ್ಸ್ ವಿಭಾಗಗಳಲ್ಲಿ ಉತ್ತೀರ್ಣರಾದ ವಿಜಯಪುರ, ಬಾಗಲಕೋಟೆ, ಬೆಳಗಾವಿ ಹಾಗೂ ಕಲಬುರಗಿ ಜಿಲ್ಲೆಗಳ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಬೃಹತ್ ಉದ್ಯೋಗ ಮೇಳ ಕಾರ್ಯಕ್ರಮದಲ್ಲಿ ಪಾಲ್ಗೋಂಡು ಅವರು ಮಾತನಾಡಿದರು.ಉತ್ತರ ಕರ್ನಾಟಕದ ಎಂಜಿನಿಯರಿಂಗ್ ಪದವಿಧರರು ಅಂತಾರಾಷ್ಟ್ರೀಯ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ಪಡೆಯಬೇಕು ಎಂಬುದು ಕೈಗಾರಿಕೆ, ಮೂಲಸೌಲಭ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರ ಕನಸಾಗಿದೆ. ಅವರ ಪ್ರಯತ್ನದ ಫಲವಾಗಿ ಈಗ ಫಾಕ್ಸಕಾನ್ ಕಂಪನಿ…
ಉದಯರಶ್ಮಿ ದಿನಪತ್ರಿಕೆ ಇಂಡಿ: ಕೃಷಿ ವಿಜ್ಞಾನ ಕೇಂದ್ರ ಇಂಡಿ, ವಿಜಯಪುರದ ಕೃಷಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಪುರಸಭೆಯ ಆರೋಗ್ಯ ನಿರೀಕ್ಷಕರು ಹಾಗೂ ಪೌರ ಕಾರ್ಮಿಕರ ಮತ್ತು ನೌಕರರ ಸಹಯೋಗದೊಂದಿಗೆ “ಸ್ವಚ್ಛತೆಯೇ ಸೇವೆ” ಅಭಿಯಾನದ ರ್ಯಾಲಿ ಹಾಗೂ ಮಾನವ ಸರಪರಳಿಯನ್ನು ಆಯೋಜಿಸಿಲಾಗಿತ್ತು.ಇಂಡಿಯ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ. ಶಿವಶಂಕರಮೂರ್ತಿ ಎಂ. ಅವರ ನೇತೃತ್ವದಲ್ಲಿ, ರ್ಯಾಲಿಯು ಕೆ.ವಿ.ಕೆ ಕಚೇರಿಯಿಂದ ಪ್ರಾರಂಭವಾಗಿ ಬಸವೇಶ್ವರ ವೃತ್ತದವರೆಗೆ ಸಾಗಿತು. ಕೃಷಿ ಮಹಾವಿದ್ಯಾಲಯ ವಿಜಯಪುರದ ಬಿ.ಎಸ್ಸ.ಸಿ. ಕೃಷಿ ವಿದ್ಯಾರ್ಥಿಗಳು ಮತ್ತು ಕೆ.ವಿ.ಕೆ ಸಿಬ್ಬಂದಿ, ಶುದ್ಧ ಮತ್ತು ಆರೋಗ್ಯಕರ ಪರಿಸರದ ಬಗ್ಗೆ ತಮ್ಮ ಸಾಮೂಹಿಕ ಬದ್ಧತೆಯನ್ನು ಸಂಕೇತಿಸಲು ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿಯನ್ನು ರಚಿಸಿದರು.ಡಾ. ಪ್ರಸಾದ್ ಎಂ. ಜಿ. ಸಂಘಟಿಸಿದ್ದರು. ಡಾ. ಪ್ರಕಾಶ್ , ಡಾ. ಪ್ರೇಮಚಂದ್ ಡಾ. ವೀಣಾ ಚಂದಾವರಿ ಮತ್ತು ಡಾ. ಬಾಲಾಜಿ ನಾಯಕ್ ಭಾಗವಹಿಸಿದ್ದರು.ವಿಜಯಪುರದ ಕೃಷಿ ವಿಜ್ಞಾನ ಕಾಲೇಜಿನ ಸಹಯೋಗವನ್ನು ರಾವೆ ಸಂಯೋಜಕರಾದ ಡಾ. ಎಂ. ವೈ. ತೆಗ್ಗಿ ಮತ್ತು ಡಾ. ಸಿದ್ಧರಾಮ ಪಾಟೀಲ…
ಉದಯರಶ್ಮಿ ದಿನಪತ್ರಿಕೆ ಆಲಮೇಲ: ಕಳೆದ ನಾಲ್ಕೈದು ದಿನಗಳಿಂದ ಏರು ಮಟ್ಟದಲ್ಲಿ ಸಾಗುತ್ತಿರುವ ಭೀಮಾನದಿಯ ಪ್ರವಾಹ ಪರಿಸ್ಥಿತಿ ಇಂದು ಮತ್ತಷ್ಟು ರುದ್ರ ರೂಪ ತಾಳಿದೆಗುರುವಾರ ಬೆಳಿಗ್ಗೆಯಿಂದಲೇ ಏರುತ್ತಾ ಸಾಗಿರುವ ನೀರಿನ ಮಟ್ಟ ಸಾಯಂಕಾಲದವರೆಗೂ ಇರುತ್ತಲೇ ಇತ್ತು. ಇಂದು ನದಿಯ ರುದ್ರಾವತಾರ ಹೆಚ್ಚಾಗಿತ್ತು. ಎಲ್ಲೆಂದರಲ್ಲಿ ತಗ್ಗು ಪ್ರದೇಶಗಳಿಗೆ ನುಗುವ ಮೂಲಕ ಬೆಳೆಗಳಲ್ಲಿ ನುಗ್ಗಿ ಅವಾಂತರ ಸೃಷ್ಟಿಸಿದೆ ಗ್ರಾಮಗಳ ಅಂಚಿನಲ್ಲಿರುವ ಮನೆಗಳಲ್ಲಿ ನುಗ್ಗಿ ಜನರನ್ನು ನಿರಾಶ್ರಿತರನ್ನಾಗಿ ಮಾಡಿದೆ.ಬುಧವಾರ ದಿವಸ 2 ಲಕ್ಷ 90 ಸಾವಿರ ಕ್ಯೂಸೆಕ್ಸ್ ಇದ್ದ ನೀರಿನ ಹರಿವಿನ ಪ್ರಮಾಣ ರಾತ್ರಿ ಇಡಿ ಏರು ಮಟ್ಟದಲ್ಲಿ ಸಾಗಿ ಗುರುವಾರ ಇಡೀ ದಿವಸ ಏರು ಮಟ್ಟದಲ್ಲಿಯೇ ಸಾಗಿದೆಗುರುವಾರ ದಿವಸ ದೇವಣಗಾಂವ ಸಮೀಪದ ಸೊನ್ನ ಬ್ಯಾರೇಜ್ ನಲ್ಲಿ 3 ಲಕ್ಷ 50 ಸಾವಿರ ಒಳಹರಿವು ಮತ್ತು28 ಗೇಟ್ ಗಳ ಮೂಲಕ ಅಷ್ಟೇ ಪ್ರಮಾಣದ ಹೊರಹರಿವು ಇದೆ ಎಂದು ಅಫಜಲಪುರದ ಕೆಎನ್ಎನ್ಎಲ್ ಎ ಇ ಇ ಸಂತೋಷ ಕುಮಾರ ಸಜ್ಜನ ತಿಳಿಸಿದ್ದಾರೆಕರ್ನಾಟಕದಲ್ಲಿ ಎರಡು ದಿನಗಳಿಂದ ಮಳೆಯ ಪ್ರಮಾಣ ತಗ್ಗಿದೆ…
ಉದಯರಶ್ಮಿ ದಿನಪತ್ರಿಕೆ ಆಲಮೇಲ: ಭೀಮಾ ನದಿಯ ಪ್ರವಾಹಕ್ಕೆ ಒಳಗಾಗಿರುವ ಗ್ರಾಮಗಳಿಗೆ ಅಧಿಕಾರಿಗಳು ಮೊಳಕಾಲು ಉದ್ಧದ ನೀರಿನಲ್ಲಿ ತೆವಳುತ್ತ ಸಾಗಿ ಭೇಟಿ ನೀಡಿ ಗ್ರಾಮಸ್ಥರಿಗೆ ಧೈರ್ಯ ತುಂಬಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆಆಲಮೇಲ ತಾಲೂಕಿನ ದೇವಣಗಾಮ ಗ್ರಾಮದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂಜೀವಕುಮಾರ್ ದೊಡ್ಡಮನಿ ಹಾಗೂ ಗ್ರಾಮ ಲೆಕ್ಕಾಧಿಕಾರಿ ಎಂ ಕೆ ಪೂಜಾರಿ ಅವರು ಭೀಮಾ ನದಿಯ ಪ್ರವಾಹಕ್ಕೆ ಒಳಗಾಗಿರುವ ಶಂಬೇವಾಡಿ ಗ್ರಾಮದ ಮುಖ್ಯರಸ್ತೆಯ ಮೇಲೆ ಟೊಂಕದವರೆಗೆ ನೀರು ಬಂದಿದ್ದರೂ ಕೂಡ ಧೃತಿಗಡದೆ ಅದೇ ನೀರಲ್ಲಿ ತಮ್ಮ ಪ್ಯಾಂಟನ್ನು ಕಳಚಿ ಕೈಯಲ್ಲಿ ಹಿಡಿದುಕೊಂಡು ಸಾಗಿ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ ಶಂಭೇವಾಡ ಗ್ರಾಮದ ತೋಟದ ವಸ್ತಿಯಲ್ಲಿರುವ ಹಾಗೂ ಹಳೆ ಗ್ರಾಮದಲ್ಲಿರುವ ಎಲ್ಲಾ ಜನರಿಗೆ ಎಚ್ಚರಿಕೆಯಿಂದ ಇರಬೇಕೆಂದು ತಿಳಿಸಿ ನಂತರ ಅಗತ್ಯವಿದ್ದರೆ ಕಾಳಜಿ ಕೇಂದ್ರ ಕೂಡ ತೆರೆಯುವ ಮೂಲಕ ತಮ್ಮೊಂದಿಗೆ ಅಧಿಕಾರಿ ವರ್ಗ ಸದಾ ಸಹಾಯಕ್ಕೆ ಇರುತ್ತದೆ ಯಾವುದೇ ಸಂದರ್ಭದಲ್ಲಿ ತೊಂದರೆ ಉಂಟಾದಾಗ ನಮಗೆ…
ಕೃಷಿ ಇಲಾಖೆಯ ಯಡವಟ್ಟು | ರೈತ ಶೀತಲ ಮುತ್ತಿನ ಅವರ ೨೦ ಎಕರೆ ನೀರಿನಲ್ಲಿ ನಿಂತ ಬೆಳೆ | ಪರಿಹಾರದ ನಿರೀಕ್ಷೆಯಲ್ಲಿ ರೈತ ಉದಯರಶ್ಮಿ ದಿನಪತ್ರಿಕೆ ಚಡಚಣ: ಮಹಾರಾಷ್ಟ್ರದ ಗಡಿಯಲ್ಲಿರುವ ಸೊಡ್ಡಿರಸ್ತೆಯಲ್ಲಿಯ ರೈತ ಶೀತಲ ಮುತ್ತಿನ ಇವರ ಜಮೀನಿನಲ್ಲಿರುವ ಫಲವತ್ತಾದ ಕರಿಮಣ್ಣು ಮಳೆಯ ರಭಸದ ನೀರಿಗೆ ಕೊಚ್ಚಿಕೊಂಡು ಹೋಗಿದೆ. ಸೊಡ್ಡಿ ಗ್ರಾಮದ ಹಳ್ಳದ ಮತ್ತು ಇನ್ನಿತರ ಜಮೀನುಗಳಲ್ಲಿಯ ನೀರು ಹರಿದು ಬಂದು ಬೆಳೆಗಳು ಸರ್ವನಾಶವಾಗಿದೆ ಇದರಿಂದ ರೈತ ಕಂಗಾಲಾಗಿರುವನು.ಕೃಷಿ ಇಲಾಖೆಯ ಎಡವಟ್ಟು: ಇವರ ಜಮೀನಿನ ಹಿಂದೆ ಕೃಷಿ ಇಲಾಖೆಯವರು ಅವೈಜ್ಞಾನಿಕವಾಗಿ ಚಿಕ್ಕಡ್ಯಾಮ ನಿರ್ಮಿಸಿರುವರು. ಅದಕ್ಕೆ ಮಳೆಯ ನೀರು ಸರಾಗವಾಗಿ ಹೋಗಲು ರಂಧ್ರಗಳು ಬಿಟ್ಟಿಲ್ಲ ಹಿಗಾಗಿ ನೀರು ಅದರ ಮೇಲೆ ಹರಿದು ಬಂದು ಜಮೀನು ಒಂದು ನದಿಯಂತೆ ಕಾಣಿಸುತ್ತದೆ ಎಂದು ರೈತ ಶೀತಲ ಮುತ್ತಿನ ಆರೋಪಿಸಿದ್ದಾರೆ.ಸಾವಯವ ಪದ್ದತಿಯನ್ನು ಕೃಷಿಯಲ್ಲಿ ಅಳವಡಿಸಿಕೊಂಡು ರೈತ ಫಲವತ್ತಾದ ಬೆಳೆಯನ್ನು ಬೆಳೆಯುತ್ತಿದ್ದ. ಈಗ ಎಲ್ಲವು ಹಾಳಾಗಿ ಮತ್ತಷ್ಟು ಹಾನಿಯಾಗಿದೆ ಈ ಹಾನಿ ಹೇಗೆ ನಿಭಾಯಿಸುವದು ಎಂಬ ಚಿಂತೆ ಕಾಡುತ್ತಿದೆ…
