Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇದೇ ಮೇ-೨೭ ರಂದು ಬಿಜೆಪಿಯ ಜಿಲ್ಲಾಧ್ಯಕ್ಷರ ಸೂಚನೆಯ ಮೇರೆಗೆ ಈ ಕೆಳಕಂಡ ಪ್ರಮುಖರನ್ನು ವಿಜಯಪುರ ನಗರ ಮಂಡಲದ ಭಾರತೀಯ ಜನತಾ ಪಕ್ಷದ ಸಂಘಟನಾತ್ಮಕ ಪ್ರಮುಖ ಜವಾಬ್ದಾರಿಗಳಿಗೆ ನಿಯುಕ್ತಿ ಮಾಡಲಾಗಿರುವ ವಿವರ ಹೀಗಿದೆ.ಶ್ರೀಮತಿ ಜಯಶ್ರೀ ಅಫಝಲಪುರ-ಉಪಾಧ್ಯಕ್ಷರು, ಶ್ರೀಮತಿ ಮೀನಾ ಕುಂದನಗಾರ-ಉಪಾಧ್ಯಕ್ಷರು, ಶ್ರೀಮತಿ ಅನಿತಾ ರಾಠೋಡ-ಉಪಾಧ್ಯಕ್ಷರು, ಶ್ರೀಮತಿ ಮೀತಾ ದೇಸಾಯಿ-ಪ್ರಧಾನ ಕಾರ್ಯದರ್ಶಿಗಳು, ಕು.ಸ್ವಾತಿ ಕುಲಕರ್ಣಿ-ಕಾರ್ಯದರ್ಶಿಗಳು, ಶ್ರೀಮತಿ ರೇಖಾ ಚವ್ಹಾಣ- ಕಾರ್ಯದರ್ಶಿಗಳು, ಶ್ರೀಮತಿ ಬಸಮ್ಮ ಗುಜರಿ-ಕೋಶಾಧ್ಯಕ್ಷರು, ಈಗ ಕಾರ್ಯಕಾರಿಣಿ ಸದಸ್ಯರುಗಳಾದ ಶ್ರೀಮತಿ ರೋಹಿಣಿ ಚಾಮಕರ, ಶ್ರೀಮತಿ ಸುಶೀಲಾ ತಳ್ಳೊಳ್ಳಿ, ಶ್ರೀಮತಿ ಶ್ರೀದೇವಿ ಅವಧಿ, ಶ್ರೀಮತಿ ಶಾಂತಾ ಯಳಮೇಲಿ, ಶ್ರೀಮತಿ ದೀಪಾ ದುತ್ತರಗಾವಿ, ಶ್ರೀಮತಿ ಅಶ್ವಿನಿ ಕಬಾಡೆ, ಶ್ರೀಮತಿ ರಾಧಾ ಕುಲಕರ್ಣಿ, ಶ್ರೀಮತಿ ಸುಜಾತಾ ಕುಲಕರ್ಣಿ, ಶ್ರೀಮತಿ ವಂದನಾ ನಾಯಕ, ಶ್ರೀಮತಿ ಮಂಜುಳಾ ಕಲಬುರ್ಗಿ, ಶ್ರೀಮತಿ ಶ್ರೀದೇವಿ ಯಂಡಿಗೇರಿ, ಶ್ರೀಮತಿ ಅಶ್ವಿನಿ, ಚವ್ಹಾಣ, ಶ್ರೀಮತಿ ವೀಣಾ ಸೂರ್ಯವಂಶಿ, ಶ್ರೀಮತಿ ಸೋನಾಲಿ ಮಸ್ಕಿ, ಶ್ರೀಮತಿ ಕಾಶೀಬಾಯಿ ಕೂಡಗಿ, ಶ್ರೀಮತಿ ಜಯಶ್ರೀ ಬಿರಾದಾರ, ಶ್ರೀಮತಿ, ಕಲ್ಪನಾ…

Read More

ಲೇಖನ- ಡಾ. ಶಶಿಕಾಂತ ಪಟ್ಟಣರಾಮದುರ್ಗ – ಪುಣೆ ಉದಯರಶ್ಮಿ ದಿನಪತ್ರಿಕೆ ಹನ್ನೆರಡನೆಯ ಶತಮಾನದ ಶರಣರನ್ನು ಸಂತರನ್ನು ಹೊಂದಿರುವ ಕನ್ನಡದ ಈ ನೆಲದಲ್ಲಿ ಏಳು ಬೆಟ್ಟಗಳ ಮಲೆಯ ಮಹದೇಶ್ವರರು ಹುಟ್ಟಿ ಬರುತ್ತಾರೆ.ಕರ್ನಾಟಕದ ಅತ್ಯಂತ ಪ್ರಸಿದ್ಧ ಮತ್ತು ಪವಿತ್ರ ಲಿಂಗಾಯತ ಧಾರ್ಮಿಕ ಕ್ಷೇತ್ರಗಳಲ್ಲಿ ಮಲೆಯ ಮಹದೇಶ್ವರ ಬೆಟ್ಟ ಒಂದಾಗಿದೆ. ಇದು ದಕ್ಷಿಣ ತುದಿಯ ಗಡಿ ಜಿಲ್ಲೆಯಾದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿದೆ.ಜನಪದ ಕಾವ್ಯಗಳು ಮತ್ತು ಸ್ಥಳ ಪುರಾಣಗಳ ಪ್ರಕಾರ, ಶ್ರೀ ಮಲೆ ಮಹದೇಶ್ವರ ಸ್ವಾಮಿಯ ತಂದೆ ತಾಯಿಗಳ ವಿವರತಂದೆ: ಚಂದ್ರಶೇಖರ ಮೂರ್ತಿ (ಕೆಲವು ಕಡೆ ಚಂದ್ರಶೇಖರ ಗುರುಗಳು ಎಂದೂ ಕರೆಯಲಾಗುತ್ತದೆ).ತಾಯಿ: ಉತ್ತರಾಜಮ್ಮ (ಕೆಲವು ಜನಪದ ಕಥೆಗಳ ಪ್ರಕಾರ ಇವರನ್ನು ಸುಗುಣಾದೇವಿ ಎಂದೂ ಗುರುತಿಸಲಾಗುತ್ತದೆ).ಹಿನ್ನೆಲೆ ಮತ್ತು ನಂಬಿಕೆಗಳು ದೈವಿಕ ಜನನ: ಜನಪದ ಚರಿತ್ರೆಯ ಪ್ರಕಾರ, ಉತ್ತರಾಜಮ್ಮನಿಗೆ ದೀರ್ಘಕಾಲ ಮಕ್ಕಳಾಗದಿದ್ದಾಗ ಅವರು ಶಿವನನ್ನು ಕುರಿತು ತಪಸ್ಸು ಮಾಡುತ್ತಾರೆ. ಭಕ್ತಿಗೆ ಮೆಚ್ಚಿದ ಶಿವನು ಅವಳ ಕನಸಿನಲ್ಲಿ ಬಂದು ಗಂಡು ಸಂತಾನದ ವರವನ್ನು ನೀಡುತ್ತಾನೆ. ಅದರಂತೆ ಜನಿಸಿದ ಬಾಲಕನೇ ಮುಂದೆ…

Read More

ಲೇಖನ- ವೀಣಾ ಹೇಮಂತಗೌಡ ಪಾಟೀಲ್,ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಹವ್ಯಾಸಗಳು ನಮ್ಮ ಬದುಕನ್ನು ರೂಪಿಸುತ್ತವೆ. ಮಕ್ಕಳ ಬಾಲ್ಯಾವಸ್ಥೆ ಅವರ ಬದುಕಿಗೆ ಅತ್ಯವಶ್ಯಕವಾದ ಮೂಲಭೂತ ಬುನಾದಿಯನ್ನು ಹಾಕಿದರೆ ಪ್ರೌಢಾವಸ್ಥೆಯಲ್ಲಿ ಅವುಗಳನ್ನು ಪರಿಪಾಲಿಸುವುದು ಸರಳವಾಗುತ್ತದೆ.ನಾವು ಚಿಕ್ಕಂದಿನಲ್ಲಿ ಮಕ್ಕಳಿಗೆ ನಿತ್ಯವಿಧಿಗಳನ್ನು ಸರಿಯಾದ ಕ್ರಮದಲ್ಲಿ ಅನುಸರಿಸಲು ಅಭ್ಯಾಸ ಮಾಡಿಸಬೇಕು ಎಂಬುದನ್ನು ಈ ಹಿಂದಿನ ಸಂಚಿಕೆಯಲ್ಲಿ ಅರಿತಿದ್ದೇವೆ. ಹಾಗೆ ಮಕ್ಕಳಲ್ಲಿ ನಿತ್ಯ ಕರ್ಮಗಳನ್ನು, ಒಳ್ಳೆಯ ಆಹಾರದ ಅಭ್ಯಾಸಗಳನ್ನು ಚಿಕ್ಕಂದಿನಲ್ಲಿಯೇ ಅವರ ಜೀವನದ ಭಾಗವಾಗಿ ರೂಢಿಸಬೇಕು. ಆಹಾರದ ರುಚಿ, ಸತ್ವ, ಹಣ್ಣು ತರಕಾರಿಗಳ ಸೇವನೆಯಿಂದಾಗುವ ಪ್ರಯೋಜನಗಳು ನಾರಿನ ಪದಾರ್ಥಗಳ, ದ್ವಿದಳ ಧಾನ್ಯಗಳ ಕುರಿತ ಜ್ಞಾನವನ್ನು ಪಾಲಕರಾದವರು ಪ್ರತಿದಿನ ಮಾಹಿತಿಯ ರೂಪದಲ್ಲಿ ಮಕ್ಕಳೊಂದಿಗೆ ಹಂಚಿಕೊಳ್ಳಬೇಕು.ಮಕ್ಕಳು ಆಟ ಪಾಠಗಳಲ್ಲಿ ಭಾಗಿಯಾಗಬೇಕು. ಆಟಗಳು ಮಕ್ಕಳಲ್ಲಿ ಸ್ಪರ್ಧಾ ಮನೋಭಾವ ಹೊಂದಾಣಿಕೆ, ಅಭಿಮಾನ ಮತ್ತು ಆತ್ಮಸ್ಥೈರ್ಯಗಳನ್ನು ಬೆಳೆಸುತ್ತವೆ. ಮಕ್ಕಳು ಸರಿಯಾದ ಸಮಯಕ್ಕೆ ನಿದ್ರೆ ಮಾಡಲು ಕೂಡ ರೂಢಿಸಬೇಕು. ನಿಯಮಿತವಾದ ಆಹಾರ ಸೇವನೆ, ಒಳ್ಳೆಯ ನಿದ್ರೆ, ಆಟೋಟಗಳು ಮತ್ತು ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಂಡರೆ ಒಳ್ಳೆಯ ಜೀವನವನ್ನು ಸಾಗಿಸಲು ಸಹಕಾರಿಯಾಗುತ್ತದೆ.…

Read More

ಪ್ರಧಾನಿ ಮೋದಿ ಸರ್ಕಾರಕ್ಕೆ ಈ ಭಾಗದ ಜನರ ಪರವಾಗಿ ಸಂಸದ ರಮೇಶ ಜಿಗಜಿಣಗಿ ಅಭಿನಂದನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಐತಿಹಾಸಿಕ ವಿಜಯಪುರ ಜಿಲ್ಲೆಯ ಜನರ ಬಹುದಿನದ ಬೇಡಿಕೆಯಾಗಿದ್ದ ಬೆಂಗಳೂರು- ಹುಬ್ಬಳ್ಳಿ-ಗದಗ ಬೈಪಾಸ್ ವಿಜಯಪುರ ಮಾರ್ಗವನ್ನು ಶಾಶ್ವತ ಮಾಡುವ ವಿಚಾರಕ್ಕೆ ಕೊನೆಗೂ ಗ್ರೀನ್ ಸಿಗ್ನಲ್ ಸಿಕ್ಕಿದೆ.ಜನರ ಬಹುದಿನದ ಬೇಡಿಕೆಯನ್ನು ಆಧರಿಸಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರೈಲ್ವೆ ಮಂತ್ರಿ ವಿ. ಸೋಮಣ್ಣ ಅವರಿಗೆ ಸತತವಾಗಿ ಪತ್ರ ವ್ಯವಹಾರ ನಡೆಸಲಾಗಿತ್ತಲ್ಲದೇ ಖುದ್ದಾಗಿ ಭೇಟಿ ಮಾಡಿ ಮನವಿ ಸಲ್ಲಿಸಿದ ಫಲವಾಗಿ ಇದೀಗ ಕೇಂದ್ರ ಸರ್ಕಾರ ಒಲವು ತೋರಿದೆ.ಈ ಹಿಂದೆ ಕ್ರಿಸ್ ಮಸ್ ಸೇರಿದಂತೆ ಹಲವು ಹಬ್ಬದ ಸಂದರ್ಭದಲ್ಲಿ ಈ ಮಾರ್ಗದಲ್ಲಿ ಪ್ರಾಯೋಗಿಕ ವಾಗಿ ರೈಲು ಸೇವೆ ಆರಂಭಿಸಲಾಗಿತ್ತು. ಪರಿಣಾಮ ಜನರಿಂದ ವ್ಯಾಪಕವಾಗಿ ಸ್ಪಂದನೆ ವ್ಯಕ್ತವಾಯಿತಲ್ಲದೇ ಆಯಾ‌ಭಾಗದ ಸಂಸದರು, ರೈಲ್ವೆ ಮಂತ್ರಿ ಮತ್ತು ಪ್ರಧಾನಿ ಮೋದಿ ಸರ್ಕಾರದ ಕಾರ್ಯವನ್ನು ಕೊಂಡಾಡಿದ್ದರು. ಜನರ ಈ ನಾಡಿಮಿಡಿತ ಅರಿತು ಈ ಮಾರ್ಗವನ್ನು ಶಾಶ್ವತಗೊಳಿಸುವಂತೆ ದುಂಬಾಲು ಬಿದ್ದ ಫಲವಾಗಿ ರೈಲ್ವೆ ಮಂತ್ರಿಗಳು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಿಎಸ್‌ಎನ್‌ಎಲ್ ನೆಟವರ್ಕ್ ಸಮಸ್ಯೆಯಾಗಿ ಜನರಿಗೆ ವ್ಯಾಪಕ ತೊಂದರೆಯಾಗಿದೆ, ಈ ನೆಟವರ್ಕ್ ಸಮಸ್ಯೆಯನ್ನು ನಿವಾರಣೆ ಮಾಡುವಂತೆ ನಾನೇ ಸ್ವತ: ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿರುವೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಿಎಸ್‌ಎನ್‌ಎಲ್ ನೆಟವರ್ಕ್ ತೊಂದರೆ ವಿಜಯಪುದಲ್ಲಿಯೂ ವ್ಯಾಪಕವಾಗಿದೆ, ಈ ಬಗ್ಗೆ ಅನೇಕ ಗ್ರಾಹಕರು ತೊಂದರೆ ಎದುರಿಸುತ್ತಿದ್ದಾರೆ, ಈ ಸಮಸ್ಯೆಯ ಬಗ್ಗೆ ಅನೇಕ ಗ್ರಾಹಕರು ಸಹ ನನ್ನ ಗಮನಕ್ಕೆ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಿಸಿದ ಅಧಿಕಾರಿಗಳನ್ನು ನಾನು ಈ ವಿಷಯವಾಗಿ ತರಾಟೆಗೆ ತೆಗೆದುಕೊಂಡಿದ್ದು, `ಇಂದು ದೂರ ಸಂಪರ್ಕ ಒಂದು ಜೀವನದ ಅವಿಭಾಜ್ಯ ಅಂಗವಾಗಿದೆ, ಕೇವಲ ಸಂಪರ್ಕ ಅಷ್ಟೇ ಅಲ್ಲದೇ ದೈನಂದಿನ ವ್ಯಾಪಾರ-ವಹಿವಾಟುಗಳು ಅಂತರ್ಜಾಲ ಕೇಂದ್ರಿತವಾಗಿವೆ, ಜನಸಾಮಾನ್ಯರು ಸಹ ಯುಪಿಐ ಮೂಲಕವೇ ಪೇಮೆಂಟ್ ಮಾಡುವುದು ಸಾಮಾನ್ಯವಾಗಿದೆ, ಆದರೆ ನೆಟವರ್ಕ್ ಇಲ್ಲದೇ ಗ್ರಾಹಕರು ಎದುರಿಸುತ್ತಿರುವ ಸಂಕಷ್ಟ ನಿಮಗೆ ಅರ್ಥವಾಗುವುದಿಲ್ಲವೇ ಎಂದು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿರುವೆ, ಶೀಘ್ರದಲ್ಲಿಯೇ ಎದುರಾಗಿರುವ ತಾಂತ್ರಿಕ ಸಮಸ್ಯೆ…

Read More

ಉದಯರಶ್ಮಿ ದಿನಪತ್ರಿಕೆ ಎಚ್ ಡಿ ಕೋಟೆ: ಮುಸ್ಲಿಂ ಬಾಂಧವರ ಪವಿತ್ರ ಹಬ್ಬಗಳಲ್ಲಿ ಒಂದಾದ ತ್ಯಾಗ, ಬಲಿದಾನ ಸ್ಮರಿಸುವ ಬಕ್ರೀದ್ ಹಬ್ಬವನ್ನು ತಾಲೂಕಿನಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ತಾಲ್ಲೂಕಿನಾದ್ಯಂತ ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿ, ಹೊಸ ಉಡುಪುಗಳನ್ನು ಧರಿಸಿ ಆಯಾ ಗ್ರಾಮಗಳ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.ಪಟ್ಟಣದ ಮುಸ್ಲಿಂ ಬ್ಲಾಕ್ ನಲ್ಲಿರುವ ಈದ್ಗಾ ಮೈದಾನದಲ್ಲೂ ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸಿ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಯೂತ್ರುಅಧ್ಯಕ್ಷ ಶಫಿ ಕೋಟೆ ಮಾತನಾಡಿ, ಬಕ್ರೀದ್ ಹಬ್ಬವು ತ್ಯಾಗ ಮತ್ತು ಬಲಿದಾನದ ಪ್ರತೀಕ. ಬಡವರಿಗೆ, ನಿರ್ಗತಿಕರಿಗೆ ದಾನ, ಧರ್ಮ ಮಾಡಲು ಅವಕಾಶ ಮಾಡಿಕೊಡುವುದೇ ಬಕ್ರೀದ್ ಹಬ್ಬದ ವಿಶೇಷತೆ. ಎಲ್ಲರೂ ಕೂಡಿ ಸಹೋದರತೆ, ಸಮಾನತೆ ಹಾಗೂ ಸಹಬಾಳ್ವೆಯಿಂದ ಬದುಕು ನಡೆಸುವ, ಶಾಂತಿ ಸೌಹಾರ್ದತೆಯ ಪ್ರತೀಕವಾಗಿದೆ ಈ ಬಕ್ರೀದ್ ಹಬ್ಬ ಎಂದರು. ಮನುಕುಲಕ್ಕೆ ಶಾಂತಿ ನೀಡಲಿ, ಮಳೆಯಾಗಲಿ, ಬೆಳೆಯಾಗಲಿ. ಶಾಂತಿ ನೆಲೆಸಲಿ…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಇಸ್ಲಾಂ ಧರ್ಮೀಯರ ತ್ಯಾಗ, ಬಲಿದಾನದ ಪ್ರತೀಕವಾಗಿರುವ ಬಕ್ರೀದನ್ನು ಪಟ್ಟಣದ ಮುಸ್ಲಿಂ ಸಮುದಾಯದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವುದರ ಮೂಲಕ ಶ್ರದ್ಧಾ, ಭಕ್ತಿಯಿಂದ ಅಚರಿಸಿದರು.ಪಟ್ಟಣದ ಈದಗಾ ಮೈದಾನದಲ್ಲಿ ಬೆಳಿಗ್ಗೆ ಮಕ್ಕಳಾದಿಯಾಗಿ ಸಮಸ್ತ ಸಮುದಾಯದ ಜನ ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನಂತರ ಮೌಲಾನಾ ಇಸ್ಮಾಯಿಲ್ ಲಾಳಸಂಗಿ ಮಾತನಾಡಿ, ತ್ಯಾಗ, ಬಲಿದಾನದ ಸಂದೇಶ ಸಾರುವ ಹಬ್ಬದ ಆಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗದೇ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವಂತಾಬೇಕು. ಶಾಂತಿ ಸಂದೇಶ ಸಾರುವ ವಿಶ್ವ ಭಾತೃತ್ವದ ಸಂಕೇತವಾದ ಈ ದಿನದಂದು ನಾವೆಲ್ಲ ಮಾನವರು ಒಂದೇ ಭಾವನೆಯನ್ನು ಹೊಂದಿ ಮಾನವೀಯ ಮೌಲ್ಯಗಳನ್ನು ಸಾರೋಣ ಹಾಗೂ ಅಳವಡಿಸಿಕೊಳ್ಳೊಣ ಎಂದು ಕರೆ ನೀಡಿದರು. ನಂತರ ಪರಸ್ಪರ ಶುಭಾಶಯ ವಿನಿಮಯದಲ್ಲಿ ಪಾಲ್ಗೊಂಡು ಶುಭಕೋರಿದರು.ಪ್ರಾರ್ಥನೆಯಲ್ಲಿ ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ರಿಯಾಜ್ ಯಲಗಾರ, ಅಂಜುಮನ್ ಇಸ್ಲಾಂ ಕಮೀಟಿಯ ಅಧ್ಯಕ್ಷರುಗಳಾದ ಮೈಬೂಬ್‌ಸಾಬ್ ಹುಂಡೇಕಾರ, ಲಾಲಸಾಬ್ ಮಳಖೇಡ(ಹೊಸನಗರ) ಉಪಾಧ್ಯಕ್ಷರುಗಳಾದ ರಫೀಕ ಪಾನಪರೋಷ್, ಉಸ್ಮಾನಸಾಬ್ ಹಚ್ಯಾಳ(ಹೊಸೂರ) ಕಾರ್ಯದರ್ಶಿ ಅಬ್ದುಲ್ ಸತಾರ್ ಉಪ್ಪರಘರ, ಪಟ್ಟಣ ಪಂಚಾಯಿತಿ ಸದಸ್ಯ…

Read More

ಹಾಲುಮತ ಸಮುದಾಯದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಮದರಿ ವಿರುದ್ಧ ಗಂಭೀರ ಆರೋಪ ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ತಾಲೂಕಿನ ನಾಗರಬೆಟ್ಟ ಗ್ರಾಮದ ದಲಿತ ಸಮುದಾಯದ ರವಿಚಂದ್ರ ಮಾದರ ಈತನನ್ನು ಬ.ಬಾಗೇವಾಡಿ ತಾಲೂಕಿನ ಹಂಗರಗಿ ಕ್ರಾಸ್ ಬಳಿಯ ಎನ್.ಎಸ್. ಪೂಜಾರಿ ಕಂಪನಿ ಪ್ಲಾಂಟ್ ಎದುರು ಪೂರ್ವನಿಯೋಜಿತ ಭೀಕರ ಹತ್ಯೆಗೈದ ಅಪರಾಧಿಗಳನ್ನು ಕೂಡಲೇ ಬಂಧಿಸಿ ಗಲ್ಲಿಗೇರಿಸಬೇಕು ಎಂದು ಒತ್ತಾಯಿಸಿ ಇಲ್ಲಿನ ವಿವಿಧ ದಲಿತಪರ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಮೃತದೇಹವನ್ನಿಟ್ಟು ರಸ್ತಾ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.ಈ ವೇಳೆ ಡಿಎಸ್‌ಎಸ್ ಮುಖಂಡ ಹರೀಶ್ ನಾಟೆಕಾರ ಮಾತನಾಡಿ, ೪ವರ್ಷಗಳ ಕಾಲ ದುಡಿಸಿಕೊಂಡು ಮರ್ಮಾಂಗವೇ ಇಲ್ಲದಂತೆ ಕ್ರೂರವಾಗಿ ಹತ್ಯೆ ಮಾಡಿರುವದು ಹೇಯ ಕೃತ್ಯ. ಸಮಾಜದ ತಾಲೂಕು ಅಧ್ಯಕ್ಷರಾದ ಮಲ್ಲಿಕಾರ್ಜುನ ಮದರಿ ಅವರು ಇಂತಹ ಕೃತ್ಯ ಮಾಡುತ್ತಿರುವದು ಇದು ಎರಡನೇ ಬಾರಿ. ಘಟನೆಯ ಬಳಿಕ ನಾನು ಸಿಎಂ ನ ಆಪ್ತ, ನೀವು ದಲಿತರು ನನಗೆ ಏನೂ ಮಾಡಲು ಸಾಧ್ಯವಿಲ್ಲ ಎಂದು ಗರ್ವದಿಂದ ಹೇಳಿದ ಇವರಿಗೆ ನಾವು…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ನೋಂದಣಿ ಇಲಾಖೆ ಪೇಪರ್‌ಲೆಸ್ ನೋಂದಣಿ ವ್ಯವಸ್ಥೆ ಜಾರಿಗೆ ತಂದಿರುವದನ್ನ ಹಿಂಪಡೆಯಬೇಕು ಎಂದು ಒತ್ತಾಯಿಸಿ ಬುಧವಾರ ರಾಜ್ಯದಾದ್ಯಂತ ದಸ್ತು ಬರಹಗಾರರ ಚಾರಿಟೇಬಲ್ ಟ್ರಸ್ಟ್ ನಡೆಸಿದ ಮುಷ್ಕರಕ್ಕೆ ಇಲ್ಲಿನ ತಾಲೂಕು ಘಟಕ ಬೆಂಬಲ ಸೂಚಿಸಿತು.ಬೆಳಿಗ್ಗೆಯಿಂದಲೇ ಸಾಂಕೇತಿಕ ಲೇಕನಿ ಬಂದ್ ಮಾಡಿ ತಾಲೂಕು ಘಟಕದದಿಂದ ಸಭೆ ನಡೆಸಿದರು. ಬಳಿಕ ಸಿ.ಎಂ ಸಿದ್ಧರಾಮಯ್ಯನವರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ ಕೀರ್ತಿ ಚಾಲಕ ಅವರಿಗೆ ನೀಡಿದರು.ಈ ವೇಳೆ ಟ್ರಸ್ಟ್ ನ ತಾಲೂಕು ಅಧ್ಯಕ್ಷ ಎಚ್.ಆರ್.ಬಾಗವಾನ ಮಾಧ್ಯದವರೊಂದಿಗೆ ಮಾತನಾಡಿ ಸರ್ಕಾರದಿಂದ ಪರವಾನಿಗೆ ಪಡೆದು ದಶಕಗಳಿಂದ ದಸ್ತಾವೇಜು ಬರಹಗಾರರು ಸಾರ್ವಜನಿಕರ ಆಸ್ತಿ ನೋಂದಣಿ ಕಾರ್ಯದಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದು, ಇಲಾಖೆಯ ನಿಯಮಾವಳಿಗಳ ಪ್ರಕಾರ ಸೇವೆ ಸಲ್ಲಿಸುತ್ತಾ ಬಂದಿದ್ದೇವೆ. ಕಾವೇರಿ ೨.೦ ತಂತ್ರಾಂಶದ ಬಳಿಕ ಇದೀಗ ಕಾವೇರಿ ೩ ಮೂಲಕ “ಪೇಪರ್ ಲೆಸ್ ನೋಂದಣಿ” ವ್ಯವಸ್ಥೆಯನ್ನು ಕೆಲ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ. ಇದರಿಂದ ಸಾರ್ವಜನಿಕರು ಮತ್ತು ದಸ್ತುಬರಹಗಾರರ ನಡುವೆ ಅನೇಕ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆ ಇದೆ. ಸಾರ್ವಜನಿಕರ ಭೂಮಿ,…

Read More