Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ತಾಲೂಕಿನ ನಾಗಠಾಣ ಗ್ರಾಮದ ದಿ.ಶ್ರೀಮತಿ ಭಾಗವ್ವ ಚನ್ನಪ್ಪ ಮಸಳಿ ವಯಸ್ಸು 95, ಇವರು ವಯೋಸಹಜ ನಿಧನರಾಗಿದ್ದು, ಅವರ ಅಂತ್ಯ ಸಂಸ್ಕಾರ ದಿ. 16-01-2026 ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಸ್ವಗ್ರಾಮ ನಾಗಠಾಣ ಗ್ರಾಮದ ಊರ ಮುಂದಿನ ತೋಟದಲ್ಲಿ ನೆರವೇರುವದು. ಮೃತರು ಹಿರಿಯ ಪತ್ರಕರ್ತ ಶರಣು ಮಸಳಿ ಅವರ ಅಜ್ಜಿಯವರಾಗಿದ್ದು, ಇಬ್ಬರು ಗಂಡು ಮಕ್ಕಳು ಹಾಗೂ ನಾಲ್ವರು ಹೆಣ್ಣು ಮಕ್ಕಳು, ಎಂಟು ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅಸ್ವಚ್ಛತೆ ಕಾಡುತ್ತಿದೆ ಇಲ್ಲಿನ ಕಲುಷಿತ ನೀರು ಹಾಗೂ ಮಲ ಮೂತ್ರ ವಿಸರ್ಜನೆ ಸಾರ್ವಜನಿಕ ಚರಂಡಿಗಳಲ್ಲಿ ಹರಿದು ಬರುತ್ತಿದ್ದರೂ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ನಮ್ಮ ಕರ್ನಾಟಕ ಸೇನೆಯ ಹೋಬಳಿ ಕಾರ್ಮಿಕ ಘಟಕದ ಅಧ್ಯಕ್ಷ ಗುರುರಾಜ ಎಸ್ ಅಂಗಡಿ ಆರೋಪಿಸಿದ್ದಾರೆ.ಈ ಕುರಿತು ತಾಲೂಕು ಆರೋಗ್ಯಾಧಿಕಾರಿಗೆ ಬರೆದ ಮನವಿ ಪತ್ರವನ್ನು ಸಮುದಾಯ ಆರೋಗ್ಯ ಕೇಂದ್ರದ ವೈದ್ಯರ ಮೂಲಕ ಸಲ್ಲಿಸಿದ್ದು ಆರೋಗ್ಯ ಕೇಂದ್ರವು ಸಾರ್ವಜನಿಕರ ಪಾಲಿಗೆ ಆಶಾಕಿರಣವಾಗಬೇಕಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಆಸ್ಪತ್ರೆಯು ರೋಗಗಳನ್ನು ಹರಡುವ ಕೇಂದ್ರವಾಗಿ ಮಾರ್ಪಡುತ್ತಿರುವುದು ಅತ್ಯಂತ ವಿಷಾದನೀಯ, ಆಸ್ಪತ್ರೆಯ ಅವ್ಯವಸ್ಥೆ ಸರಿಪಡಿಸಲು ಹಲವು ಬಾರಿ ವೈದ್ಯಾಧಿಕಾರಿಗಳ ಗಮನಕ್ಕೆ ತಂದರು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ, ಕಲುಷಿತ ನೀರನ್ನು ಬೇಕಾಬಿಟ್ಟಿಯಾಗಿ ಸಾರ್ವಜನಿಕ ಚರಂಡಿಗೆ ಬಿಡುತ್ತಿರುವುದು ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ. ಸ್ವಚ್ಛತೆಯ ಜವಾಬ್ದಾರಿ ಹೊತ್ತ ಗುತ್ತಿಗೆದಾರರು ಮತ್ತು ಸಂಬಂಧಪಟ್ಟ ಸಿಬ್ಬಂದಿಗಳು ಸಾರ್ವಜನಿಕರ ಹಿತದೃಷ್ಟಿಯನ್ನು ಮರೆತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಿ ಕಠಿಣ ಕ್ರಮ…

Read More

ಉದಯರಶ್ಮಿ ದಿನಪತ್ರಿಕೆ ವರದಿ: ರಾಜಶೇಖರ ಡೋಣಜಮಠಚಡಚಣ: ಮಹಾರಾಷ್ಟ್ರ-ಕರ್ನಾಟಕ ಗಡಿಗೆ ಹೊಂದಿಕೊಂಡಿರುವ ಕೊನೆಯ ಪುಟ್ಟ ಪಟ್ಟಣ, ಸ್ವಾತಂತ್ರ್ಯ ಸಂಗ್ರಾಮಕ್ಕೆ 50ಜನ ಹೋರಾಟಗಾರರನ್ನು ಕೊಟ್ಟ ಕನ್ನಡನಾಡಿನ ಇತಿಹಾಸದ ಹೆಮ್ಮೆಯ ತಾಣ ಹಾಗೂ ಕರ್ನಾಟಕ ಮಹಾರಾಷ್ಟ್ರ ದ ಸುತ್ತಮುತ್ತಲೂ 42 ಹಳ್ಳಿಗಳು ವ್ಯಾಪಾರಕ್ಕಾಗಿ ಅವಲಂಬಿತವಾಗಿರುವ ವಿಜಯಪುರ ಜಿಲ್ಲೆಯಲ್ಲಿಯೆ ಹೆಸರು ಮಾಡಿದ ವಾಣಿಜ್ಯ ಕೇಂದ್ರ ಚಡಚಣದಲ್ಲಿ ಶ್ರೀ ಸಂಗಮೇಶ್ವರ ದೇವರ ಜಾನುವಾರ ಜಾತ್ರೆಯು ರವಿವಾರ ಜ.18 ರಿಂದ ಗುರುವಾರ ಜ.22 ರವರೆಗೆ 5 ದಿನಗಳ ಕಾಲ ಲಕ್ಷಾಂತರ ಸಂಖ್ಯೆಯ ವಿವಿಧ ತಳಿಯ ಜಾನುವಾರ ಮಾರಾಟದ ಜಾತ್ರೆ ಜರುಗಲಿದೆ.ಅವರಾತ್ರಿ ಅಮವಾಸ್ಯೆಯದಿನ ಜ.18 ರಂದು ಬೆಳಿಗ್ಗೆ 9.00 ಗಂಟೆಗೆ ಶ್ರೀ ಸಂಗಮೇಶ್ವರ “ದೇವರ ನುಡಿ” ಯನ್ನು ವೇ.ಸಂಗಯ್ಯ ಡೋಣಜಮಠ ಅವರಿಂದ 2026ನೇ ವರ್ಷದ ಆಗು ಹೋಗುಗಳ ಕುರಿತು ಭವಿಷ್ಯದ ನುಡಿಗಳು (ಮಳೆ, ಬೆಳೆ, ರಾಜಕೀಯ ಹಾಗೂ ಇನ್ನಿತರ) ಜರುಗಿದ ನಂತರ ಜಾತ್ರೆಯು ಆರಂಭಗೊಳ್ಳುತ್ತದೆ.ಜ.19 ಸೋಮವಾರ ರಾತ್ರಿ 9.00 ಗಂಟೆಗೆ “ಚಿತ್ರ–ವಿಚಿತ್ರ ಸುಡುಮದ್ದು” ಪ್ರದರ್ಶನ. ಜ.20 ಮಂಗಳವಾರ “ಪ್ರಸಿದ್ಧ ಮಲ್ಲರ” ಕುಸ್ತಿಗಳು…

Read More

ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನರೇಗಾ ಯೋಜನೆ ಹೆಸರು ಬದಲಾವಣೆ ವಿಷಯದ ವಿರುದ್ಧ ವಿಶೇಷ ಅಧಿವೇಶನ ಕರೆಯುತ್ತಿರುವುದು ಸರಿಯಲ್ಲ, ಅದಕ್ಕಿಂತಲೂ ಪ್ರಮುಖವಾದ ಒಳ ಮೀಸಲಾತಿ ಲೋಪದೋಷ ಸರಿಪಡಿಸಲು, ಖಾಲಿ ಇರುವ ಹುದ್ದೆ ಭರ್ತಿ ಮೊದಲಾದ ಮಹತ್ವದ ವಿಷಯಗಳ ಬಗ್ಗೆ ಚರ್ಚೆ ಮಾಡಲು ವಿಶೇಷ ಅಧಿವೇಶನ ಕರೆಯಿರಿ. ಅದನ್ನು ಬಿಟ್ಟು ರಾಜಕೀಯ ಉದ್ದೇಶ ಇರಿಸಿಕೊಂಡು ವಿಶೇಷ ಅಧಿವೇಶನ ಕರೆಯುತ್ತಿರುವುದು ಯಾವ ಕಾರಣಕ್ಕೂ ಸರಿಯಲ್ಲ ಎಂದು ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಹೇಳಿದ್ದಾರೆ.ಈ ಗುರುವಾರ ಕುರಿತು ಪತ್ರಿಕಾ ಹೇಳಿಕೆಯ ಮೂಲಕ ಸರ್ಕಾರದ ನಡೆಯನ್ನು ಖಂಡಿಸಿರುವ ಅವರು, ದಿ.೨೨ ರಿಂದ ದಿ.೩೧ ರವರೆಗೆ ವಿಶೇಷ ಅಧಿವೇಶನ ಕರೆಯಲು ಸರ್ಕಾರ ಮುಂದಾಗಿದೆ, ರಾಜ್ಯದಲ್ಲಿ ಗಂಭೀರವಾದ ಸಮಸ್ಯೆಗಳಿವೆ, ಪ್ರಮುಖವಾಗಿ ಒಳ ಮೀಸಲಾತಿ ವಿಷಯವಾಗಿ ಆಗಿರುವ ಗೊಂದಲಗಳ ನಿವಾರಣೆಗಾಗಿ, ರಾಜ್ಯದಲ್ಲಿ ಖಾಲಿ ಇರುವ ೨.೭೩ ಲಕ್ಷ ಹುದ್ದೆ ಭರ್ತಿಯ ಬಗ್ಗೆ ಮಹತ್ವದ ತೀರ್ಮಾನ…

Read More

ವಿಜಯಪುರದಲ್ಲಿ ಆಹಾರ ಹಾಗೂ ಪೊಲೀಸ್ ಇಲಾಖೆಗಳ ಜಂಟಿ ಕಾರ್ಯಾಚರಣೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರ ನಗರದ ಗೋಲ್ ಗುಂಬಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಹಿಂಭಾಗದ ಹಳೆಯ ಪಾಳುಬಿದ್ದ ಮನೆಯಲ್ಲಿ ಗೃಹ ಬಳಕೆ ಸಿಲಿಂಡರ್ ಬಳಸಿ ಅಕ್ರಮವಾಗಿ ವಾಣಿಜ್ಯ ಬಳಕೆಯ ಸಿಲಿಂಡರ್ ತುಂಬಿಸುತ್ತಿದ್ದ ಸ್ಥಳಕ್ಕೆ ಆಹಾರ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಜಂಟಿ ದಾಳಿ ನಡೆಸಿ,೪೧ ಗೃಹ ಬಳಕೆ ಸಿಲಿಂಡರ್ , ೨೧ ವಾಣಿಜ್ಯ ಬಳಕೆ ಸಿಲಿಂಡರ್, ಮೋಟಾರ್ ಯಂತ್ರ ಮತ್ತು ತೂಕದ ಯಂತ್ರಗಳನ್ನು ವಶಕ್ಕೆ ಪಡೆದುಕೊಂಡು, ಗೋಲ್ ಗುಂಬಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ದಾಳಿಯ ಸಂದರ್ಭದಲ್ಲಿ ಆಹಾರ ನಿರೀಕ್ಷಕ ವಿಜಯಕುಮಾರ ಗುಮಶೆಟ್ಟಿ ಹಾಗೂ ಗೋಲ್ ಗುಂಬಜ್ ಠಾಣೆ ಪಿಎಸ್‌ಐ ಎಮ್.ಡಿ.ಘೋರಿ, ಎಎಸ್‌ಆಯ್ ಎ.ಎ. ಹಾದಿಮನಿ, ಪೊಲೀಸ್ ಸಿಬ್ಬಂದಿಗಳಾದ ಗೋಪಾಲ ದಾಸರ, ಮಹಾದೇವ ಅಡಿಹುಡಿ, ಬಿ.ಬಿ. ಮಖನಾಪುರ, ಕುಶ ರಾಠೋಡ್, ಮಲ್ಲಿಕಾರ್ಜುನ ಚಾವರ್, ಮೌನೇಶ್ ನೆಲವಾಸಿ, ಅಪ್ಪು ಕೋಟ್ಯಾಳ ಭಾಗವಹಿಸಿದ್ದರು ಎಂದು ಆಹಾರ ಇಲಾಖೆಯ ಉಪ ನಿರ್ದೇಶಕ…

Read More

ಲೇಖನ- ಶ್ರೀಮತಿ ಗಿರಿಜಾ ಸಂತೋಷ ಪಾಟೀಲಹವ್ಯಾಸಿ ಬರಹಗಾರರುಬಸವನಬಾಗೇವಾಡಿ ಉದಯರಶ್ಮಿ ದಿನಪತ್ರಿಕೆ ಬೆರೆತು ಅರಿತು ಬದುಕುವದರಲ್ಲಿ ಬದುಕಿಗೊಂದು ಅರ್ಥವಿದೆ. ನಾವೆಲ್ಲರೂ ಒಂದೇ ಎನ್ನುವ ಭಾವದಲ್ಲಿ ಬದುಕಿದೆ. ಬದುಕಿನ ಆನಂದ ನಾವು ಆಚರಿಸುವ ಹಬ್ಬಗಳಲ್ಲಿದೆ.ಹಬ್ಬಗಳು ಆಗಾಗ ಸುಮ್ಮನೆ ಹಾಯ್ದುಹೋಗುವ ಗಾಳಿಯಂತಲ್ಲ , ನಮ್ಮ ಬದುಕು ಕಟ್ಟಿಕೊಡುವ, ಬಾಂಧವ್ಯ ಗಟ್ಟಿಗೊಳಿಸುವ ದಿವ್ಯ ಅಸ್ತ್ರ. ಜಗತ್ತಿನಲ್ಲೇ ಭಾರತ ದೇಶ ಬಲು ವಿಶೇಷ. ಇಲ್ಲಿರುವ ಧಾರ್ಮಿಕ ಆಚರಣೆ, ಹಬ್ಬಗಳ ಸಡಗರ, ಗುರುಭಕ್ತಿ , ಸಂಸ್ಕೃತಿ , ಸಂಪ್ರದಾಯ ಭಾರತಕ್ಕೆ ವಿಶೇಷ ಕಳೆ ತಂದಿದೆ. ನಾನು ಭಾರತೀಯ ಎಂದು ಕೂಗಲು ಕೂಡಾ ಪೂರ್ವ ಜನ್ಮದ ಪುಣ್ಯ ಬೇಕು. ಭಾರತ ಹಳ್ಳಿಗಳ ದೇಶ , ಹಬ್ಬಗಳ ದೇಶ. ಪ್ರತಿ ಪ್ರಮುಖ ಹಬ್ಬದಲ್ಲೂ ಬರೀ ಸಂಸ್ಕೃತಿ, ಸಂಪ್ರದಾಯ ಅಷ್ಟೇ ಇಲ್ಲಾ. ವೈಜ್ಞಾನಿಕ ಕಾರಣವು ಇದರೊಂದಿಗೆ ಬೆರೆತಾಗಿದೆ. ಆದ್ದರಿಂದಲೇ ಜ್ಞಾನ, ವಿಜ್ಞಾನ, ತಂತ್ರಜ್ಞಾನ ಹೆಚ್ಚಾದರೂ ಹಬ್ಬಗಳಲ್ಲಿ ಇನ್ನೂ ಜೀವಂತಿಕೆ ಇದೆ. ಬ್ರಹ್ಮಾಂಡದ ಪ್ರತಿ ಚಲನೆ, ಪ್ರತಿ ಬದಲಾವಣೆ ಕೂಡ ನಮ್ಮ ಬದುಕುಗಳ ಮೇಲೆ ಅಗಾಧವಾದ…

Read More

ವಿಜಯಪುರದಲ್ಲಿ ಸಂಸದ ರಮೇಶ ಜಿಗಜಿಣಗಿ ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ದೇಶಕ್ಕೆ ಸ್ವಾತಂತ್ರ್ಯ ದೊರಕಿದ ಬಳಿಕ ಕಾಂಗ್ರೆಸ್ ವಿಸರ್ಜನೆ ಮಾಡಬೇಕು ಎಂದು ಮಹಾತ್ಮಾ ಗಾಂಧೀಜಿ ಹೇಳಿದ್ದರು, ಆದರೆ ಕಾಂಗ್ರೆಸ್‌ನವರು ಗಾಂಧೀಜಿ ಅವರ ಆಶಯದಂತೆ ನಡೆದುಕೊಂಡರೇ? ಅವರ ಒಂದೇ ಒಂದು ಕನಸನ್ನು ಕಾಂಗ್ರೆಸ್ ನನಸು ಮಾಡಿಲ್ಲ, ಅಶಿಸ್ತಿನ ರೀತಿಯಲ್ಲಿ ಅಂಗಿ-ಚಡ್ಡಿ ಹಾಕುವ ಹುಡುಗನಿಂದ ಕಾಂಗ್ರೆಸ್ ನಾಯಕತ್ವನ್ನು ಯಾರು ಒಪ್ಪಿಕೊಳ್ಳುತ್ತಾರೆ, ಈ ಕಾಂಗ್ರೆಸ್ ಸರ್ವನಾಶವಾಗುತ್ತದೆ ಎಂದು ಸಂಸದ ರಮೇಶ ಜಿಗಜಿಣಗಿ ಕಾಂಗ್ರೆಸ್ ಪಕ್ಷದ ವಿರುದ್ಧ ಖಾರವಾದ ಶಬ್ದಗಳಲ್ಲಿ ವಾಗ್ದಾಳಿ ನಡೆಸಿದರು.ಬಿಜೆಪಿ ನರೇಗಾ ಯೋಜನೆಯ ಹೆಸರು ಬದಲಿಸಿ ಗಾಂಧೀಜಿ ಅವರ ಆಶಯಗಳನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿದ ಸಂಸದ ಜಿಗಜಿಣಗಿ ಅನೇಕ ಸವಾಲುಗಳನ್ನು ಕೇಳುವ ಮೂಲಕ ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ ನಡೆಸಿದರು.ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯಗಳನ್ನು ಕುರಿತು ಮಾತನಾಡಿದ ಅವರು, ಗಾಂಧೀಜಿ, ಡಾ.ಅಂಬೇಡ್ಕರ ಅವರಂತಹ ಮಹಾನ್ ಚೇತನರನ್ನು ಅವಮಾನ ಮಾಡಿದ್ದೆ ಕಾಂಗ್ರೆಸ್, ಈಗ…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಮುಲ್ಕಿ ಪರೀಕ್ಷೆಯಲ್ಲಿ ಜಿಲ್ಲೆಯಲ್ಲೇ ಪ್ರಥಮ ಸ್ಥಾನ ಗಳಿಸಿ ಆಯುರ್ವೇದ ಹಾಗೂ ಯುನಾನಿ ವೈದ್ಯಕೀಯ ಪದ್ಧತಿ ಶಿಕ್ಷಣ ಪಡೆದು ಹಳೆ ಕೊಲ್ಹಾರದಲ್ಲಿ ಬಡವರಿಗೆ ಉಚಿತವಾಗಿ ವೈದ್ಯಕೀಯ ಸೇವೆಸಲ್ಲಿಸುವ ಮೂಲಕ ಬಡವರ ವೈದ್ಯರೆಂದೇ ಖ್ಯಾತರಾಗಿದ್ದಡಾ.ಬಸಯ್ಯ ಈರಯ್ಯ ಗಣಕುಮಾರಮಠ ಅವರ 10ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಜ.15ರಂದು ಬೆಳಿಗ್ಗೆ 10 ಗಂಟೆಗೆ ಪಟ್ಟಣದ ಯುಕೆಪಿ ಬಳಿಯಿರುವ ಗುರುಲಿಂಗಪ್ಪ ಬಾಟಿಯವರ ತೋಟದಲ್ಲಿ ನಡೆಯಲಿದೆ.1935 ಜುಲೈ 1 ರಂದು ಜನಿಸಿದ ಇವರು ವೈದ್ಯಕೀಯ ಸೇವೆಯ ಜೊತೆ ಜೊತೆಗೆ ತಮ್ಮನ್ನು ತಾವು ಹೆಚ್ಚಾಗಿ ಗ್ರಾಮದ ಹಾಗೂ ಗ್ರಾಮಸ್ಥರ ಒಳತಿಗಾಗಿ ಸದಾ ಸಮಾಜಮುಖಿ ಸೇವೆಗಳಲ್ಲಿಯೇ ತೊಡಗಿಸಿಕೊಳ್ಳುತ್ತಿದ್ದರು. 10 ವರ್ಷಗಳ ಕಾಲ ಗ್ರಾ.ಪಂ.ಸದಸ್ಯರಾಗಿ ಗ್ರಾಮದ ಸರ್ವಾಂಗಿನ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ.ಅಲ್ಲದೇ ಸಂಘ ಪರಿವಾರದಲ್ಲಿ ಗುರುತಿಸಿಕೊಂಡು ಸುಮಾರು 38 ವರ್ಷಗಳ ಕಾಲ ಆರ್ ಎಸ್ ಎಸ್ ಬಸವ ಬಾಗೇವಾಡಿ ತಾಲೂಕಿನ ಸಂಘ ಚಾಲಕರಾಗಿದ್ದರು. ಇವರು 1967 ರಲ್ಲಿ ಬಸವನ ಬಾಗೇವಾಡಿ ಮತಕ್ಷೇತ್ರದಿಂದ 1972 ರಲ್ಲಿ ಹೂವಿನ ಹಿಪ್ಪರಗಿ ಮತಕ್ಷೇತ್ರಗಳಿಂದ ಜನಸಂಘದ ಅಭ್ಯರ್ಥಿಯಾಗಿಯೂ…

Read More

ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ ಭೇಟಿ | ರೈತರ ಮನವೊಲಿಕೆಗೆ ಪ್ರಯತ್ನ ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಮುಳವಾಡ ಕೆಐಡಿಬಿಗೆ ಭೂಮಿ ಕಳೆದುಕೊಂಡ ಭೂ ಹಿತರಕ್ಷಣಾ ನಿರಾಶ್ರಿತರ ರೈತ ಸಂಘದಿಂದ ತಹಶೀಲ್ದಾರ ಕಚೇರಿ ಎದುರುಗಡೆ ಹಮ್ಮಿಕೊಂಡ 10 ನೇ ದಿನದ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ ಭೇಟಿ ನೀಡಿದರು.ಅಪರ ಜಿಲ್ಲಾಧಿಕಾರಿಗಳು ಉಪವಾಸ ಸತ್ಯಾಗ್ರಹ ನಿರತ ರೈತರೊಂದಿಗೆ ಚರ್ಚಿಸಿ ಮನವೊಲಿಸಲು ಪ್ರಯತ್ನಿಸಿದರು. ಆದರೆ ರೈತರು ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ಸತ್ಯಾಗ್ರಹವನ್ನು ಹಿಂಪಡೆದುಕೊಳ್ಳಲು ನಿರಾಕರಿಸಿದರು.ಈ ವೇಳೆ ರೈತರಾದ ಶರಣು ಅಂಗಡಿಯವರು ಕೆಐಡಿಬಿ ಯವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೆಐಡಿಬಿಗೆ ಭೂಮಿ ಕಳೆದುಕೊಂಡ ರೈತರಿಗೆ ಯೋಗ್ಯವಾದ ಬೆಲೆ ನೀಡುತ್ತಿಲ್ಲ. ನಮ್ಮ ಭೂಮಿಗೆ ಪರಿಹಾರ ನೀಡದೆ ಜಮೀನಿನ ಪಹಣಿ ಪತ್ರದಲ್ಲಿ ಹೆಸರನ್ನು ಕಡಿಮೆ ಮಾಡಿದ್ದಾರೆ ಇದರಿಂದ ಬಹಳಷ್ಟು ಅನ್ಯಾಯವಾಗಿದೆ. ಜೆಎಂಸಿ ಆಧಾರದ ಮೇಲೆ ಜಮೀನುಗಳಲ್ಲಿದ್ದ ಗಿಡ ಮರಗಳಿಗೆ ಸರಿಯಾದ ಪರಿಹಾರ ನೀಡದೆ ಲಂಚ ಪಡೆದು ಕೆಲವರಿಗೆ ಹೆಚ್ಚು ಹಾಗೂ ಕೆಲವರಿಗೆ ಕಡಿಮೆ ಹಣ…

Read More

ಉದಯರಶ್ಮಿ ದಿನಪತ್ರಿಕೆ ಬಬಲೇಶ್ವರ: ಪಟ್ಟಣದ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಯಲ್ಲಿ, ಹಸಿ ಕಸ ಮರದಿಂದ ಉದುರಿದ ಎಲೆ, ಮಧ್ಯಾಹ್ನ ಬಿಸಿ ಊಟ ತಯಾರಿಕಾ ಕೋಣೆಯಲ್ಲಿ ಉತ್ಪತ್ತಿಯಾಗುವಂತಹ ಹಸಿ ಕಸವನ್ನು ಮತ್ತು ಉಳಿದಿರುವಂತಹ ನಿರುಪಯುಕ್ತ ಆಹಾರವನ್ನು ಹಾಗೂ ಶಾಲೆಯ ಆವರಣದಲ್ಲಿ ಬಿದ್ದಿರುವ ಮರದ ಎಲೆಗಳನ್ನು ಮತ್ತು ಇತ್ಯಾದಿ ಹಸಿ ಕಸವನ್ನು ಉಪಯೋಗಿಸಿಕೊಂಡು ಪೈಪ್ ಕಾಂಪೋಸ್ಟಿಂಗ್ ಮುಖಾಂತರ ಸಾವಯುವ ರಸಗೊಬ್ಬರವನ್ನು ತಯಾರಿಸುವ ವಿಧಾನಕ್ಕೆ ಬಬಲೇಶ್ವರ ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿಗ ಪ್ರೀತಿ ಗಡೆದ ರವರು ಚಾಲನೆಯನ್ನು ನೀಡಿ ಮಾತನಾಡಿದರು.ಶಾಲೆಯ ಮಕ್ಕಳಿಗೆ ಮೂಲದಲ್ಲಿಯೇ ಹಸಿ ಕಸ ಮತ್ತು ಒಣ ಕಸ ವಿಂಗಡಣೆ ಕುರಿತು ಜಾಗೃತಿಯನ್ನು ಮೂಡಿಸಿದರು. ಪ್ರಕೃತಿ ನಮಗೆ ಹಲವಾರು ಕೊಡುಗೆಗಳನ್ನು ನೀಡಿದೆ. ನಾವು ಪ್ರಕೃತಿಗೆ ಏನಾದರೂ ಒಳ್ಳೆಯದನ್ನು ಮಾಡಬೇಕಿದ್ದರೆ ಸ್ವಚ್ಛತೆಯ ಬಗ್ಗೆ ಗಮನಹರಿಸಬೇಕು. ನಾವು ಎಲ್ಲೆಂದರಲ್ಲಿ ಕಸವನ್ನು ಬಿಸಾಡದೇ ಪಟ್ಟಣ ಪಂಚಾಯಿತಿಯ ವಾಹನಗಳಿಗೆ ಕಸವನ್ನು ಮೂಲದಲ್ಲಿಯೇ ವಿಂಗಡಿಸಿ ಕೊಡಬೇಕು ಎಂದು ಹೇಳಿದರು. ಕಸದಿಂದ ರಸ ಎನ್ನುವ ಮಾತಿನಂತೆ ನಾವು…

Read More