ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಇಸ್ಲಾಂ ಧರ್ಮೀಯರ ತ್ಯಾಗ, ಬಲಿದಾನದ ಪ್ರತೀಕವಾಗಿರುವ ಬಕ್ರೀದನ್ನು ಪಟ್ಟಣದ ಮುಸ್ಲಿಂ ಸಮುದಾಯದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವುದರ ಮೂಲಕ ಶ್ರದ್ಧಾ, ಭಕ್ತಿಯಿಂದ ಅಚರಿಸಿದರು.
ಪಟ್ಟಣದ ಈದಗಾ ಮೈದಾನದಲ್ಲಿ ಬೆಳಿಗ್ಗೆ ಮಕ್ಕಳಾದಿಯಾಗಿ ಸಮಸ್ತ ಸಮುದಾಯದ ಜನ ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನಂತರ ಮೌಲಾನಾ ಇಸ್ಮಾಯಿಲ್ ಲಾಳಸಂಗಿ ಮಾತನಾಡಿ, ತ್ಯಾಗ, ಬಲಿದಾನದ ಸಂದೇಶ ಸಾರುವ ಹಬ್ಬದ ಆಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗದೇ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವಂತಾಬೇಕು. ಶಾಂತಿ ಸಂದೇಶ ಸಾರುವ ವಿಶ್ವ ಭಾತೃತ್ವದ ಸಂಕೇತವಾದ ಈ ದಿನದಂದು ನಾವೆಲ್ಲ ಮಾನವರು ಒಂದೇ ಭಾವನೆಯನ್ನು ಹೊಂದಿ ಮಾನವೀಯ ಮೌಲ್ಯಗಳನ್ನು ಸಾರೋಣ ಹಾಗೂ ಅಳವಡಿಸಿಕೊಳ್ಳೊಣ ಎಂದು ಕರೆ ನೀಡಿದರು. ನಂತರ ಪರಸ್ಪರ ಶುಭಾಶಯ ವಿನಿಮಯದಲ್ಲಿ ಪಾಲ್ಗೊಂಡು ಶುಭಕೋರಿದರು.
ಪ್ರಾರ್ಥನೆಯಲ್ಲಿ ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ರಿಯಾಜ್ ಯಲಗಾರ, ಅಂಜುಮನ್ ಇಸ್ಲಾಂ ಕಮೀಟಿಯ ಅಧ್ಯಕ್ಷರುಗಳಾದ ಮೈಬೂಬ್ಸಾಬ್ ಹುಂಡೇಕಾರ, ಲಾಲಸಾಬ್ ಮಳಖೇಡ(ಹೊಸನಗರ) ಉಪಾಧ್ಯಕ್ಷರುಗಳಾದ ರಫೀಕ ಪಾನಪರೋಷ್, ಉಸ್ಮಾನಸಾಬ್ ಹಚ್ಯಾಳ(ಹೊಸೂರ) ಕಾರ್ಯದರ್ಶಿ ಅಬ್ದುಲ್ ಸತಾರ್ ಉಪ್ಪರಘರ, ಪಟ್ಟಣ ಪಂಚಾಯಿತಿ ಸದಸ್ಯ ಬಷೀರ ಬೇಪಾರಿ, ರೆಹಮಾನ್ಸಾಬ್ ವಡ್ಡೋಡಗಿ, ಎ.ಡಿ.ಮುಲ್ಲಾ, ಶಬ್ಬೀರ ಮುಲ್ಲಾ, ಹಾಜೀಲಾಲ್ ಮಸಳಿ, ಮುನೀರ್ ಅಹ್ಮದ್ ಮಳಖೇಡ, ರಿಯಾಜ್ ನಾಯ್ಕೋಡಿ, ನಜೀರ್ ಕಲಕೇರಿ, ಮುರ್ತುಜಾ ತಾಂಬೋಳಿ ಸೇರಿದಂತೆ ಸಮಸ್ತ ಸಮುದಾಯದ ಜನರು ಭಾಗವಹಿಸಿದ್ದರು.

