Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ತಾಲೂಕಿನ ಕುಪಕಡ್ಡಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಕೀರ್ತಿ ಶಿವಪ್ಪ ಹೊರಟ್ಟಿ ಅವರು 2025-26ನೇ ಸಾಲಿನ NMMS ಪರೀಕ್ಷೆಯಲ್ಲಿ 114 ಅಂಕಗಳನ್ನು ಪಡೆದು ಬಸವನ ಬಾಗೇವಾಡಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾಳೆ.ಕಳೆದ ಫೆಬ್ರವರಿ ತಿಂಗಳಲ್ಲಿ ನಡೆದ ಈ ಪರೀಕ್ಷೆಯಲ್ಲಿ ಗ್ರಾಮೀಣ ಭಾಗದ ಸರಕಾರಿ ಶಾಲೆಯ ವಿದ್ಯಾರ್ಥಿನಿಯಾಗಿ ಈ ಸಾಧನೆ ಮಾಡಿರುವುದು ವಿಶೇಷವಾಗಿದೆ.ಅದೇ ಶಾಲೆಯ ಇತರೆ ವಿದ್ಯಾರ್ಥಿಗಳೂ ಉತ್ತಮ ಸಾಧನೆ ತೋರಿದ್ದು, ಗಾಯತ್ರಿ ಬಡಿಗೇರ 92, ಅಪೇಕ್ಷಾ ಕೋಲಕಾರ 86, ಮಲ್ಲಪ್ಪ ಬಿಜ್ಜರಗಿ 84, ಸಾಕ್ಷಿ ಮ್ಯಾಗೇಡಿ 81 ಹಾಗೂ ಲಕ್ಷ್ಮೀ ತಿಳಗುಳ 77 ಅಂಕಗಳನ್ನು ಪಡೆದುಕೊಂಡಿದ್ದಾರೆ.ಮಕ್ಕಳ ಈ ಸಾಧನೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ, ಸಮನ್ವಯಾಧಿಕಾರಿ ಸುನೀಲ ನಾಯಕ, NMMS ತಾಲೂಕು ನೋಡಲ್ ಅಧಿಕಾರಿ ಅನುಜಾ ಗುಬ್ಬಾ ಸೇರಿದಂತೆ ಶಾಲಾ ಅಧ್ಯಕ್ಷ ಮುರಗೇಶ ಹಳ್ಳಿ, ಮುಖ್ಯಗುರು ಸಿದ್ದಪ್ಪ ಕೋಟ್ಯಾಳ ಹಾಗೂ ಶಿಕ್ಷಕರಾದ ಹಣಮಂತ ಬಿರಾದಾರ, ಸಂಗಮೇಶ ಎಲಬಳ್ಳಿ, ಶಾಂತಪ್ಪ ನಾಗರಳ್ಳಿ,…

Read More

ಗ್ರಾಮೀಣ ಪ್ರದೇಶಗಳಲ್ಲಿ ಕುಡಿವ ನೀರಿನ ಸಮಸ್ಯೆಗೆ ಸಂಪರ್ಕಿಸಿ | ಜಿಪಂ ಸಿಇಓ ರಿಷಿ ಆನಂದ ಪ್ರಕಟಣೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ನಿಗದಿತ ಸಮಯದಲ್ಲಿ ಪರಿಹರಿಸಲು ಜಿಲ್ಲಾ ಪಂಚಾಯತ ಕಚೇರಿ, ಕಾರ್ಯನಿರ್ವಾಹಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ವಿಭಾಗದ ಕಚೇರಿ ಮತ್ತು ಜಿಲ್ಲೆಯ ಎಲ್ಲಾ ತಾಲೂಕಾ ಪಂಚಾಯತಿಗಳಲ್ಲಿ ಸಹಾಯವಾಣಿ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಿಷಿ ಆನಂದ ಅವರು ತಿಳಿಸಿದ್ದಾರೆ.ಜಿಲ್ಲಾ ಪಂಚಾಯತ ಕಚೇರಿಯ ಸಹಾಯವಾಣಿ ಸಂಖ್ಯೆ ; ೦೮೩೫೨-೨೭೭೨೯೩, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಚೇರಿಯ ದೂ. ಸಂಖ್ಯೆ : ೦೮೩೫೨-೨೪೪೯೭೧, ಮದ್ದೇಬಿಹಾಳ ೦೮೩೫೬-೨೦೦೬೦೬, ತಾಳಿಕೋಟಿ ೦೮೩೫೬-೨೦೦೧೦೩, ಸಿಂದಗಿ ೦೮೪೮೮ ೨೨೧೭೭೨, ದೇವರ ಹಿಪ್ಪರಗಿ ೦೮೪೨೪-೨೦೦೧೧೪, ಆಲಮೇಲ ೦೮೪೮೮-೨೯೮೯೦೦, ವಿಜಯಪುರ ೦೮೩೫೨-೨೪೨೪೨೩, ಬಬಲೇಶ್ವರ ೦೮೩೫೫-೨೦೦೦೦೫, ತಿಕೋಟಾ ೦೮೩೫೨-೨೯೪೫೦೬. ಇಂಡಿ ೦೮೩೫೯-೨೦೦೦೨೬, ಚಡಚಣ ೯೪೮೦೮೩೧೭೧೮, ಬ.ಬಾಗೇವಾಡಿ ೦೮೩೫೮-೨೪೫೨೩೬, ನಿಡಗುಂದಿ ೦೮೪೨೬-೨೦೦೧೬೩, ಕೊಲ್ಹಾರ ೦೮೪೨೬-೨೦೦೧೦೩ ಈ ಸಹಾಯ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲೂಕಿನ ಸುಕ್ಷೇತ್ರ ಲಚ್ಯಾಣದಲ್ಲಿ ಶ್ರೀ ಶಂಕರಲಿಂಗ ಮಹಾ ರಥೋತ್ಸವ ಬುಧವಾರ ಸಂಜೆ ಮೂಲಾ ನಕ್ಷತ್ರ ಶುಭ ಮೂಹೂರ್ತದಲ್ಲಿ ನೆರೆದ ಸಹಸ್ರಾರು ಭಕ್ತರ ಜಯಘೋಷದೊಂದಿಗೆ ಸಂಭ್ರಮದಿಂದ ನೆರವೇರಿತು.ಬಂಥನಾಳದ ಪರಮಪೂಜ್ಯ ಡಾ. ವೃಷಭಲಿಂಗೇಶ್ವರ ಮಹಾಶಿವಯೋಗಿಗಳು, ಯರನಾಳದ ಪೂಜ್ಯ ಶ್ರೀ ಗುರು ಸಂಗನಬಸವ ಶ್ರೀಗಳು, ಇಟಗಿ ಪೂಕ್ಯರು, ಶಿರವಾಳದ ಸೋಮನಿಂಗ ಮಹಾರಾಜರು, ಸೇರಿದಂತೆ ವಿವಿಧ ಪೂಜ್ಯರ ಸಾನಿಧ್ಯದಲ್ಲಿ ನಡೆದ ರಥೋತ್ಸವ ನೋಡಿ ಕಣ್ಣು ತುಂಬಿಕೊಳ್ಳಲು ನೆರೆಯ ರಾಜ್ಯ ಮಹಾರಾಷ್ಟ್ರ ಆಂಧ್ರಪ್ರದೇಶ ತೆಲಂಗಾಣ ಸೇರಿದಂತೆ ರಾಜ್ಯದ ನಾನಾ ಭಾಗದ ಸಹಸ್ರಾರು ಭಕ್ತರು ಆಗಮಿಸಿದರು. ರಥೋತ್ಸದ ಸಂದರ್ಭದಲ್ಲಿ ಭಕ್ತರು ಬಾಳೆಹಣ್ಣು ಉತ್ತತ್ತಿ ಖಾರಿಕ ರಥದ ಮೇಲೆ ಎಸೆದು ಭಕ್ತಿಯ ಸಮರ್ಪಿಸಿದರು.ರಥವು ಬಸವಣ್ಣ ಕಟ್ಟೆಯ ವರೆಗೆ ಚಲಿಸಿ ಮೂಲ ಸ್ಥಳ ತಲುಪಿತು.

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಶ್ರೀ ಸತ್ಯ ಸಾಯಿ ಜನ್ಮ ಶತಮಾನೋತ್ಸವದ ಅಂಗವಾಗಿ ಶ್ರೀ ಸತ್ಯ ಸಾಯಿ ಪ್ರೇಮವಾಹಿಸಿ ರಥವು ಇಂಡಿಗೆ ಏ.೧೩ ರಂದು ಬರಲಿದೆ ಎಂದು ಸಂಯೋಜಕರು ಶ್ರೀ ಸತ್ಯ ಸಾಯಿ ಮಹಿಳಾ ಸೇವಾ ಸಮಿತಿ ಗಂಗಾ ಗಲಗಲಿ ತಿಳಿಸಿದ್ದಾರೆ.ಅಂದು ಮಹಾವೀರ ವೃತ್ತದಿಂದ ಮೆರವಣೆಗೆ ನಡೆಯಲಿದ್ದು ವಾಧ್ಯ ಮೇಳ ಘೋಷಣೆಯೊಂದಿಗೆ ಸಾಯಿ ಗಾಯತ್ರಿ ಸಾಯಿ ಭಜನೆ ವೇಷದಾರಿಗಳು ಬಾಲ ವಿಕಾಸ ಮಕ್ಕಳಿಂದ ಮಹಿಳೆಯರ ಕೋಲಾಟ ಕುಂಭಮೇಳ ಆರತಿ ಮಂಗಳ ದ್ರವ್ಯ ಮತ್ತು ವಿವಿಧ ಭಕ್ಷ ಭೋಜನಗಳಿಂದ ರಥದ ಭವ್ಯವಾದ ಮೆರವಣೆಗೆ ನಡೆಯಲಿದೆ ಎಂದರು.ನಂತರ ಭಕ್ತಾದಿಗಳಿಗೆ ಸೀರೆ ಮತ್ತು ಮಹಾಪ್ರಸಾದ ವಿತರಣೆ ಮಾಡಲಾಗುವದು ಎಂದು ತಿಳಿಸಿದ್ದಾರೆ.ರಥವು ಪುಟಪುರ್ತಿಯಿಂದ ಹೊರಟು ಬಾಗಲಕೋಟ, ವಿಜಯಪುರಕ್ಕೆ ಏ. ೧೦ ರಂದು ಆಗಮಿಸಲಿದೆ. ಮುದ್ದೇಬಿಹಾಳ,ಹೂವಿನ ಹಿಪ್ಪರಗಿ, ಮನಗೂಳಿ, ಮುಳವಾಡ, ವಿಜಯಪುರ ಉಮರಾಣಿ ಅಂಜುಟಗಿ ಮಾರ್ಗವಾಗಿ ಇಂಡಿಗೆ ಆಗಮಿಸಿ ನಂತರ ರಾಮನಳ್ಳಿ,ಕೊರಳ್ಳಿ ಸಿಂದಗಿ ಮಾರ್ಗವಾಗಿ ಕಲಬುರಗಿ ಜಿಲ್ಲೆಗೆ ಹೊರಡಲಿದೆ ಎಂದರು.ಭಕ್ತಾದಿಗಳು ಸ್ವಾಮಿಯ ದರ್ಶನ ಪಡೆದು ಪುನೀತರಾಗಲು ಗಲಗಲಿ ವಿನಂತಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಧಾರ್ಮಿಕ ಕಾರ್ಯಕ್ರಮಗಳು ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿಯನ್ನು ನೀಡುತ್ತವೆ. ಪುರಾಣ ಪ್ರವಚನ ಆಲಿಸುವುದರಿಂದ ಮನಸ್ಸು ಶುದ್ಧಗೊಳ್ಳುತ್ತದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಸಿಂದಗಿ ನಗರದ ನಂದಿಕೋಲ್ ಓಣಿಯಲ್ಲಿ ಶ್ರೀ ಮಲ್ಲಿಕಾರ್ಜುನ ಜಾತ್ರೆ ಮಹೋತ್ಸವ ನಿಮಿತ್ತ ಹಮ್ಮಿಕೊಂಡ ಶ್ರೀಶೈಲ ಶ್ರೀ ಮಲ್ಲಿಕಾರ್ಜುನ ಪುರಾಣ ಪ್ರವಚನ ಮಂಗಲೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.ದೇವರು, ಧರ್ಮ, ಆಚಾರ-ವಿಚಾರ, ಸಂಪ್ರದಾಯ, ಸಂಸ್ಕೃತಿ, ಸಂಸ್ಕಾರ, ಮಾನವೀಯ ಮೌಲ್ಯಗಳಿಂದ ಕೂಡಿದ ಸುಸಂಸ್ಕೃತ ಸಮಾಜ ನಿರ್ಮಾಣ ಮಾಡುವಲ್ಲಿ ಪುರಾಣ, ಸತ್ಸಂಗ ಕಾರ್ಯಕ್ರಮಗಳು ಅತ್ಯವಶ್ಯಕ. ಮಾನವ ತನ್ನ ಬದುಕಿನ ಜಟಾಪಟಿಯ ಮದ್ಯೆಯೂ ಜೀವನ ಪವಿತ್ರಗೊಳಿಸಲು ಆಧ್ಯಾತ್ಮಿಕ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು. ಶರಣ-ಶರಣೆಯರ, ಮಹಾತ್ಮರ ಜೀವನ ಚರಿತ್ರೆಗಳನ್ನು ಆಲಿಸುವ ಮೂಲಕ ಸನ್ಮಾರ್ಗದತ್ತ ಸಾಗಬೇಕು ಎಂದರು.ಈ ವೇಳೆ ಕಾರ್ಯಕ್ರಮದ ಸಾನಿಧ್ಯ ವಹಿಸಿದ ಸಾರಂಗಮಠದ ಪೀಠಾಧಿಪತಿ ಡಾ.ಪ್ರಭುಸಾರಂಗದೇವ ಶಿವಾಚಾರ್ಯ ಆಶೀರ್ವಚನ ನೀಡಿದರು.ಸಾನಿಧ್ಯವನ್ನು ಸಾರಂಗಮಠದ ಉತ್ತರಾಧಿಕಾರಿ ಡಾ.ವಿಶ್ವಪ್ರಭುದೇವ ಶಿವಾಚಾರ್ಯ, ಮಾಜಿ ಶಾಸಕ ಶರಣಪ್ಪ ಸುಣಗಾರ, ಅಖಿಲ ಭಾರತ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಅಶೋಕ…

Read More

ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ತಾಳಿಕೋಟಿ ತಾಲೂಕಿನ ಮೂಕಿಹಾಳ ಗ್ರಾಮದ ರೈತರ ಜಮೀನನ್ನು ಚಿಮ್ಮಲಗಿ ಏತ ನೀರಾವರಿಯ ಪೂರ್ವ ಕಾಲುವೆಗೆ ಸ್ವಾಧೀನಪಡಿಸಿಕೊಂಡು ಹಲವು ವರ್ಷಗಳಾದರೂ ಇದುವರೆಗೆ ಪರಿಹಾರ ನೀಡಿಲ್ಲ ಎಂದು ಆರೋಪಿಸಿ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ರೈತರು ಗುರುವಾರ ಆಲಮಟ್ಟಿಯ ವಿಶೇಷ ಭೂಸ್ವಾಧೀನಾಧಿಕಾರಿ (ಎಸ್‌ಎಲ್‌ಒ) ಎಂ.ಬಿ. ನಾಗಠಾಣ ಅವರಿಗೆ ಮನವಿ ಸಲ್ಲಿಸಿದರು.ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಕೃಷ್ಣಾ ಮೇಲ್ದಂಡೆ ಯೋಜನೆ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯ ವ್ಯಾಪ್ತಿಯ ಚಿಮ್ಮಲಗಿ ಪೂರ್ವ ಕಾಲುವೆಗೆ ಮೂಕಿಹಾಳ ರೈತರ ಜಮೀನು ಹೆಚ್ಚುವರಿಯಾಗಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಇರುವ ಅಲ್ಪಸ್ವಲ್ಪ ಜಮೀನಿನಲ್ಲೂ ಕಾಲುವೆ ಹೋದ ಮೇಲೆ ಪರಿಹಾರ ನೀಡದಿದ್ದರೆ ರೈತ ಬದುಕುವುದಾದರೂ ಹೇಗೆ? ಎಂದು ಪ್ರಶ್ನಿಸಿದರು.ಪರಿಹಾರ ನೀಡಬೇಕು. ಇಲ್ಲದಿದ್ದರೆ ಆಲಮಟ್ಟಿ ಎಸ್‌ಎಲ್‌ಒ ಕಚೇರಿ ಮುಂದೆ ಮೂಕಿಹಾಳ ಸೇರಿದಂತೆ ಇತರೆ ಏತ ನೀರಾವರಿ ವ್ಯಾಪ್ತಿಯ ರೈತರನ್ನು ಸೇರಿಸಿಕೊಂಡು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.”ಕೂಡಲೇಏ.೧೨ರಂದು ರೈತರ ಸಭೆ:ಮನವಿ ಸ್ವೀಕರಿಸಿದ ಎಸ್‌ಎಲ್‌ಒ ಎಂ.ಬಿ. ನಾಗಠಾಣ ಅವರು,…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ೨೦೨೬ -೨೭ನೇ ಸಾಲಿನ ಜಿಲ್ಲಾ ಬಾಲಭವನದ ವತಿಯಿಂದ ೫ ರಿಂದ ೧೬ ವರ್ಷದೊಳಗಿನ ಮಕ್ಕಳಿಗಾಗಿ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದೆ. ಈ ಶಿಬಿರವು ಏ.೧೦ ರಿಂದ ೨೪ ರವರೆಗೆ ಬೆಳಿಗ್ಗೆ ೮ ರಿಂದ ಮಧ್ಯಾಹ್ನ ೧:೩೦ ಗಂಟೆಯವರೆಗೆ ನಡೆಯಲಿದೆ. ಮಕ್ಕಳ ಸೃಜನಾತ್ಮಕತೆ, ಕೌಶಲ್ಯಾಭಿವೃದ್ಧಿ ಮತ್ತು ಮನರಂಜನೆಗಾಗಿ ಚಿತ್ರಕಲೆ, ನೃತ್ಯ, ಕರಾಟೆ ಹಾಗೂ ಕರಕುಶಲ ಕಲೆ ಚಟುವಟಿಕೆಗಳು ಶಿಬಿರದಲ್ಲಿ ಏರ್ಪಡಿಸಿದೆ. ಕಚೇರಿ ವೇಳೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸಂಯೋಜಕರು, ಜಿಲ್ಲಾ ಬಾಲಭವನ, ಮನಗೂಳಿ ರಸ್ತೆ, ವಿಜಯಪುರ ಅವರನ್ನು ಮೊ.೭೭೬೦೪೦೨೨೩೯ ಸಂಪರ್ಕಿಸಬಹುದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಬಾಳೆಹೊನ್ನೂರು ರಂಭಾಪುರಿ ಪೀಠದ ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಹೇಳಿಕೆ ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಮಾನವ ಕಲ್ಯಾಣ ಹಾಗೂ ಇಡೀ ಸಮಾಜ ಒಂದಾಗಿ ಬಾಳಬೇಕು ಎಂಬುವುದೇ ಪಂಚಪೀಠಗಳ ಆಶಯವಾಗಿದೆ. ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಭಗವತ್ಪಾದರು ಹೇಳಿದರು.ಪಟ್ಟಣದ ಜಡಿಮಠ ದ್ವಾರಬಾಗಿಲು ನಿರ್ಮಾಣಕ್ಕೆ ಗುರುವಾರ ಚಾಲನೆ ನೀಡುವುದರ ಮೂಲಕ ಆಶೀರ್ವಚನ ನೀಡಿ ಮಾತನಾಡಿದರು. ದೇವರಹಿಪ್ಪರಗಿ ಪಟ್ಟಣದಲ್ಲಿ ಐದು ಮಠಗಳಿದ್ದು ಅವುಗಳ ಪೀಠಾಧ್ಯಕ್ಷರ ನೇತೃತ್ವದಲ್ಲಿ ಇಲ್ಲಿ ವೀರಶೈವ ಧರ್ಮ, ಪರಂಪರೆ ಬೆಳವಣಿಗೆಯಲ್ಲಿ ನಿರತವಾಗಿವೆ. ಅವರ ಮಾರ್ಗದರ್ಶನದಲ್ಲಿ ಪಂಚಪೀಠಾಧಿಪತಿಗಳಿಗೆ ಸಂದರ್ಭನುಸಾರವಾಗಿ ಗೌರವ ನೀಡಲಾಗಿದೆ. ಇಂದಿನ ದಿನಮಾನಗಳಲ್ಲಿ ಬಹಳಷ್ಟು ಕಡೆ ಧರ್ಮ, ಪರಂಪರೆ, ಆದರ್ಶಗಳನ್ನು ದೂರತಳ್ಳಿ ಸ್ವಾರ್ಥಕ್ಕಾಗಿ ಸಮಾಜವನ್ನು ಒಡೆಯುವಂತ ಮತ್ತು ಜನರ ಭಾವನೆಗಳನ್ನು ಕೆಡಿಸುವಂತ ಕೆಲಸ ನಡೆಯುತ್ತಿದೆ. ಅದಕ್ಕೆ ಯಾರು ಅವಕಾಶ ಕೊಡದೇ ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎನ್ನುವಂತೆ ಬಾಳಬೇಕಾಗಿದೆ. ಮಾನವ, ಮಾನವೀಯ ಸಂಬಂಧಗಳನ್ನು ಬೆಸೆಯುವಂತ ಸಮಾಜ ಕಟ್ಟಬೇಕಾಗಿದೆ. ಎಲ್ಲರಿಗೂ ಶುಭವಾಗಲಿ ಎಂದರು.ಜಡಿಮಠ ಜಡಿಸಿದ್ಧೇಶ್ವರಶ್ರೀಗಳು ಮಾತನಾಡಿ,…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಮ ಸಮಾಜದ ಹರಿಕಾರ, ಎಲ್ಲರಿಗೂ ಸಮಬಾಳು ಎನ್ನುವ ತತ್ವದಲ್ಲಿ ಅಸ್ಪೃಶ್ಯತೆ ವಿರುದ್ಧ ಹೋರಾಟ ಮಾಡಿ ಜಗತ್ತಿನ ಶ್ರೇಷ್ಠ ಸಂವಿಧಾನ ನೀಡಿದ ಹೆಮ್ಮೆಯ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ಇದೇ ದಿ. ೧೧ ರಿಂದ ೧೪ ರವರೆಗೆ ಅಂಬೇಡ್ಕರ್ ಹಬ್ಬ-೨೦೨೬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವೈದ್ಯ ಡಾ. ಬಾಬು ರಾಜೇಂದ್ರ ನಾಯಕ್ ಹೇಳಿದರು.ನಗರದ ಖಾಸಗಿ ಹೋಟೆಲನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭಾರತದ ಸಂವಿಧಾನ ಜಗತ್ತಿನ ಶ್ರೇಷ್ಠ ಗ್ರಂಥ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಪ್ರತಿಯೊಬ್ಬರ ಮನೆ -ಮನಗಳಿಗೂ ತಲುಪಿಸಬೇಕು. ಅವರ ಜಯಂತಿ ಕೇವಲ ಕಾರ್ಯಕ್ರಮವಾಗದೆ ಅವರ ವಿಚಾರ ಧಾರೆಗಳನ್ನು, ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ಬಾಬಾ ಸಾಹೇಬ್ ಅಂಬೇಡ್ಕರ್ ಕೇವಲ ಜಯಂತಿ ಆಚರಣೆಗೆ ಸಿಮಿತವಾಗಿಲ್ಲ ಅವರು ಸರ್ವ ವ್ಯಾಪಿ, ಆ ನಿಟ್ಟಿನಲ್ಲಿಯೇ ಅಂಬೇಡ್ಕರ್ ಜಯಂತಿ ಇದೊಂದು ಸಂಗಮವಾಗಿದೆ. ಬಸವ ಬುದ್ದ ಹಾಗೂ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಮೆಲಕು ಹಾಕುವ ವಿಶೇಷ ಕಾರ್ಯಕ್ರಮವೇ…

Read More