Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಲೇಖನ- ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕಿಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಮೊನ್ನೆ ಮೊನ್ನೆ ತಾನೆ ಹೊಸ ತರಗತಿಗೆ ಬಂದ ಹಾಗಿದೆ ಆಗಲೇ ಮಧ್ಯವಾರ್ಷಿಕ ಪರೀಕ್ಷೆ ಪೂರ್ವ ಸಿದ್ಧತಾ ಪರಿಕ್ಷೆಗಳು ಸಮೀಪಿಸುತ್ತಿವೆ. ಅಬ್ಬಾ! ಪರೀಕ್ಷೆಗಳಿಗೆ ಯಾವ ರೀತಿ ಸಿದ್ಧನಾಗಬೇಕೆಂಬುದೇ ದೊಡ್ಡ ಟೆನ್ಷನ್ ಆಗಿ ಬಿಟ್ಟಿದೆ. ಹೆಚ್ಚುತ್ತಿರುವ ಒತ್ತಡಕ್ಕೆ ಉಪ್ಪು ಸುರಿದಂತೆ ಹೆತ್ತವರ ಬೈಗುಳ, ಓದು ಎನ್ನುವ ಒತ್ತಾಯ,. ಈ ಸಲ ಹೆಚ್ಚು ಅಂಕ ತೆಗೆಯಲೇಬೇಕು ಎನ್ನುವ ಹೇರಿಕೆಯ ಮಾತುಗಳು ನೀನು ಚೆನ್ನಾಗಿ ಓದಿದರೆ ಒಳ್ಳೆಯ ಅಂಕಗಳನ್ನು ಪಡೆದೇ ಪಡೆಯುತ್ತಿಯಾ ಗಂಭೀರವಾಗಿ ಓದು ಎಂಬ ಶಿಕ್ಷಕರ ಹಿತ ನುಡಿಗಳು. ಅಯ್ಯೋ! ಒಂದೇ ಎರಡೇ ತಲೆ ಸಿಡಿದು ಮೂರಾ ಬಟ್ಟೆ ಆಗುತ್ತಿದೆ. ಇದು ಶಂಕರನ ಅಳಲು. ಶಂಕರ ಎದುರಿಸುತ್ತಿರುವುದು ಹೊರಗಿನ ಒತ್ತಡ. ಇದನ್ನು ಪ್ರೆಜ್ಯೂಮ್ ಪ್ರೆಶರ್ ಎನ್ನುವರು. ಸಾಮಾನ್ಯವಾಗಿ ಹೊರ ಒತ್ತಡವನ್ನು ಎಲ್ಲ ವಿದ್ಯಾರ್ಥಿಗಳು ಎದುರಿಸುತ್ತಾರೆ.ಪರೀಕ್ಷೆ ಸಮೀಪಿಸಿದಂತೆ ಎಲ್ಲಿಲ್ಲದ ತಲೆನೋವು ವಕ್ಕರಿಸಿಕೊಳ್ಳುತ್ತದೆ. ಒಂದು ವೇಳೆ ಫೇಲ್ ಆಗಿಬಿಟ್ಟರೆ ಎಂದು ನೆನೆದು ಬೆವರು ಕಿತ್ತು ಬರುತ್ತದೆ.ಊಟ ಆಟ ಯಾವುದರಲ್ಲೂ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಆಲಮಟ್ಟಿಯ ಜವಾಹರ ನವೋದಯ ವಿದ್ಯಾಲಯದಲ್ಲಿ ೨೦೨೬-೨೭ನೇ ಸಾಲಿನಲ್ಲಿ ೯ ಹಾಗೂ ೧೧ನೇ ತರಗತಿಗೆ ಪ್ರವೇಶ ಪರೀಕ್ಷೆಯು ಫೆಬ್ರವರಿ ೭ರಂದು ನಡೆಯಲಿದೆ.೯ನೇ ತರಗತಿ ಪ್ರವೇಶ ಪರೀಕ್ಷೆಯು ಆಲಮಟ್ಟಿಯ ಜವಾಹರ ನವೋದಯ ವಿದ್ಯಾಲಯದಲ್ಲಿ ಹಾಗೂ ೧೧ನೇ ತರಗತಿಯ ಪ್ರವೇಶ ಪರೀಕ್ಷೆಯು ಆಲಮಟ್ಟಿಯ ಆರ್.ಬಿ.ಪಿ.ಜಿ ಹಳಕಟ್ಟಿ ಹೈಸ್ಕೂಲಿನಲ್ಲಿ ಫೆ.೭ರ ಬೆಳಿಗ್ಗೆ ೧೧:೧೫ ರಿಂದ ಮಧ್ಯಾಹ್ನ ೧:೪೫ರವರೆಗೆ ನಡೆಯಲಿದ್ದು, ಪರೀಕ್ಷಾರ್ಥಿಗಳು ಅಂದು ಬೆಳಿಗ್ಗೆ ೧೦:೩೦ಕ್ಕೆ ಪರೀಕ್ಷಾ ಕೇಂದ್ರಗಳಲ್ಲಿ ಹಾಜರಿರಬೇಕು.ಪ್ರವೇಶ ಪತ್ರಗಳನ್ನು ವೆಬ್ಸೈಟ್ ïhttps://cbseitms.nic.in/2025/nvsಮೂಲಕ ಪಡೆದುಕೊಳ್ಳಬಹುದಾಗಿದೆ ಎಂದು ಆಲಮಟ್ಟಿ ಜವಾಹರ ನವೋದಯ ವಿದ್ಯಾಲಯದ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ೨೦೨೫-೨೬ನೇ ಸಾಲಿನಲ್ಲಿ ಬಿ.ಎಡ್ ಕೋರ್ಸಿನ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಸಲ್ಲಿಸುವ ಅವಧಿಯನ್ನು ಜನವರಿ ೩೧ ರವರೆಗೆ ವಿಸ್ತರಿಸಲಾಗಿದೆ.ಬಿ.ಎಡ್ ಕಾಲೇಜುಗಳಲ್ಲಿ ಪ್ರವೇಶ ಪಡೆದು ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳು ಸೇವಾಸಿಂಧು ಮೂಲಕ ಅರ್ಜಿ ಸಲ್ಲಿಸಿ, ಅಗತ್ಯ ದಾಖಲಾತಿಗಳನ್ನು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಚೇರಿಗೆ ಸಲ್ಲಿಸಬಹುದಾಗಿದೆ.ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ಕಚೇರಿ ದೂರವಾಣಿ ಸಂಖ್ಯೆ:೦೮೩೫೫೨-೨೯೫೫೨೩ಹಾಗೂ ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ಕಚೇರಿ, ವಿಜಯಪುರ (ಮೊ:೮೧೨೩೭೧೦೭೬೬), ಬಾಗೇವಾಡಿ (ಮೊ:೯೯೭೨೩೪೦೭೨೧) ಮುದ್ದೇಬಿಹಾಳ (ಮೊ:೮೭೨೨೪೪೫೫೨) ಸಿಂದಗಿ (ಮೊ:೯೦೩೫೫೫೮೬೦೯) ಸಂಪರ್ಕಿಸಬಹುದಾಗಿದೆ ಎಂದು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಪ್ರಕಟಣೆ ತಿಳಿಸಿದೆ.
ಋಣ ತೀರಿಸಲು ಸಾಧ್ಯವಿಲ್ಲ – ಶಾಸಕ ಅನೀಲ ಚಿಕ್ಕಮಾದು ಭಾವುಕ ನುಡಿ ಉದಯರಶ್ಮಿ ದಿನಪತ್ರಿಕೆ ಹೆಚ್ ಡಿ ಕೋಟೆ: ಹುಣಸೂರು ತಾಲೂಕಿನಲ್ಲಿ ನಮ್ಮ ಕುಟುಂಬಕ್ಕೆ ಅವಕಾಶ ಸಿಕ್ಕಿದ್ದು ಒಂದು ಬಾರಿ ಮಾತ್ರ. ಆದರೆ ಹೆಚ್ ಡಿ ಕೋಟೆ ಕ್ಷೇತ್ರದ ಜನ ನಮ್ಮ ಕುಟುಂಬಕ್ಕೆ ಮೂರು ಬಾರಿ ಅವಕಾಶ ಕೊಟ್ಟಿದ್ದಾರೆ. ಈ ಮೂಲಕ ನಮಗೆ ರಾಜಕೀಯ ಪುನರ್ಜನ್ಮ ನೀಡಿದ್ದಾರೆ ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.ತಾಲೂಕಿನ ಚೌಡಹಳ್ಳಿ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.ಡಾ. ಬಿ.ಆರ್ ಅಂಬೇಡ್ಕರ್ ಅವರು ಸಂವಿಧಾನ ನೀಡದಿದ್ದರೆ. ಎಸ್ಸಿ-ಎಸ್ಟಿಯವರಾದ ನಾವು ಗ್ರಾ.ಪಂ., ತಾಲೂಕು ಜಿ.ಪಂ. ಜಿಲ್ಲಾ ಪಂಚಾಯತ್ ಸದಸ್ಯರೂ ಆಗುತ್ತಿರಲಿಲ್ಲ. ಇವತ್ತು ನಾನು ಎರಡು ಬಾರಿ ಶಾಸಕರಾಗಿ ಇನ್ನೂ ಸರ್ಕಾರಿ ಕಾರಿನಲ್ಲಿ ಓಡಾಡುತ್ತಿದ್ದೇನೆ ಎಂದರೆ ಅದಕ್ಕೆ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನವೇ ಕಾರಣ. ಅವರ ಆದರ್ಶ ತತ್ವಗಳನ್ನು ನಾವು ಮೈಗೂಡಿಸಿಕೊಂಡು ಮುನ್ನಡೆಯಬೇಕಾಗಿದೆ. ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಅಂಬೇಡ್ಕರ್…
ರೈತನ ಮಗನ ಪ್ರೋತ್ಸಾಹಿಸುವಂತೆ ನಟ ಬಾಲಾಜಿ ಮನವಿ ಉದಯರಶ್ಮಿ ದಿನಪತ್ರಿಕೆ ಹೆಚ್ ಡಿ ಕೋಟೆ: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಡೆವಿಲ್, ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ಸಿನಿಮಾ ರೀತಿಯಲ್ಲೇ ಬಹುಕೋಟಿ ವೆಚ್ಚದಲ್ಲಿ ಮಾವುತ ಸಿನಿಮಾ ಮಾಡಲಾಗಿದ್ದು, ಇದೇ 30 ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ. ವೀರ ಮರಣ ಹೊಂದಿದ್ದ ಅರ್ಜುನ ಸವಿ ನೆನಪಿಗಾಗಿ ಮಾಡಿರುವ ಈ ಸಿನಿಮಾವನ್ನು ಹೆಚ್ ಡಿ ಕೋಟೆ ತಾಲೂಕಿನ ಜನ ಸಿನಿಮಾ ಥಿಯೇಟರ್ ನಲ್ಲೇ ನೋಡಿ ಆಶೀರ್ವದಿಸಬೇಕೆಂದು ನಾಯಕ ನಟ ಲಕ್ಷ್ಮೀಪತಿ ಬಾಲಾಜಿ ಮನವಿ ಮಾಡಿದರು.ಪಟ್ಟಣದ ಶ್ರೀ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜು ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಾವುತ ಸಿನಿಮಾ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದರು. ಮೈಸೂರು ದಸರಾದಲ್ಲಿ 8 ಬಾರಿ ಚಿನ್ನದ ಅಂಬಾರಿ ಹೊತ್ತು, ಕಾಡಾನೆ ಕಾರ್ಯಾಚರಣೆ ವೇಳೆ ವೀರಮರಣ ಹೊಂದಿದ್ದ ಅರ್ಜುನ ಆನೆ ಜೊತೆ ಹೆಚ್ ಡಿ ಕೋಟೆ ತಾಲೂಕಿನ ಜನತೆಗೆ ಅವಿನಾಭಾವ ಸಂಬಂಧ ಇದೆ. ಈಗಲೂ ಅರ್ಜನ ಆನೆಯನ್ನು…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ವಿಜಯಪುರ ಜಿಲ್ಲೆಯಲ್ಲಿ ೨೦ಸಾವಿರ ಅಕ್ರಮ ಬಾಂಗ್ಲಾ ವಾಸಿಗಳು ಇರುವುದು ಖಚಿತ. ಅದರಲ್ಲಿ ೩೩ ಜನರನ್ನು ನಾವೇ ಪೋಲಿಸರಿಗೆ ಒಪ್ಪಿಸಿದ್ದೇವೆ ಹಿಂದೂ ಮುಖಂಡ ರಾಘವ ಅಣ್ಣಿಗೇರಿ ಆಕ್ರೋಶದ ಮಾತುಗಳನ್ನಾಡಿದರು.ಸಿಂದಗಿ ಪಟ್ಟಣದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಆಝಾದ್ ಯುವ ವೇದಿಕೆಯ ವತಿಯಿಂದ ಹಮ್ಮಿಕೊಂಡ ಧರ್ಮಶಿಕ್ಷಣ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.ಹಿಂದೂಗಳು ಜಾಗೃತಗೊಳ್ಳದಿದ್ದರೆ ೨೦೪೭ರ ಹೊತ್ತಿಗೆ ಭಾರತ ಇಸ್ಲಾಮ್ ರಾಷ್ಟçವಾಗುತ್ತದೆ. ಜಗತ್ತಿನಲ್ಲಿ ೧೫೦೦ ಭಯೋತ್ಪಾದಕ ಇಸ್ಲಾಮ್ ಸಂಘಟನೆಗಳಿವೆ ಅವುಗಳ ಮೂಲ ಉದ್ದೇಶ ಸನಾತನ ರಾಷ್ಟçದ ಮೇಲೆ ಯುದ್ದ ಸಾರುವುದು ಇದಕ್ಕೆ ಪಾಕಿಸ್ತಾನ, ಚೈನಾ ಹಾಗೂ ಅಮೇರಿಕಾದಂತಹ ದೇಶಗಳ ಕುಮ್ಮಕಿದೆ. ಕಾರಣ ನಾವೆಲ್ಲಾ ಜಾತಿ-ಮತ-ಪಂಥ ಮರೆತು ಒಗ್ಗಟ್ಟಾಗಿ ರಾಷ್ಟಾçಭಿಮಾನದ ಜತೆಗೆ ಧರ್ಮವನ್ನು ರಕ್ಷಣೆ ಮಾಡಬೇಕಿದೆ ಎಂದರು.ನಮ್ಮ ರಾಷ್ಟ್ರ ಈಗಾಗಲೇ ಹಿಂದೂ ರಾಷ್ಟ್ರವಾಗಿದೆ. ನಮ್ಮ ಧರ್ಮದಲ್ಲಿ ನಾರಿಯರ ಪಾತ್ರ ದೊಡ್ಡದ್ದು ರಾಣಿ ಚನ್ನಮ್ಮ, ಜೀಜಾಬಾಯಿಯಂತೆ ದಿಟ್ಟ ಮಹಿಳೆಯರಾಗಿ ಲವ್ ಜಿಹಾದ್ನ್ನು ಮೆಟ್ಟಿ ನಿಲ್ಲಬೇಕು ವಿದೇಶಿ ಸಂಸ್ಕೃತಿಯನ್ನು ದಿಕ್ಕರಿಸಿ ಧರ್ಮ ಸಂಸ್ಕೃತಿಯನ್ನು ಪಾಲನೆ ಮಾಡಬೇಕು. ಚುನಾವಣೆ ಹೆಸರಲ್ಲಿ ನಕಲಿ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ವಿಜಯಪುರ ಜಿಲ್ಲೆಯಲ್ಲಿ ೨೦ಸಾವಿರ ಅಕ್ರಮ ಬಾಂಗ್ಲಾ ವಾಸಿಗಳು ಇರುವುದು ಖಚಿತ. ಅದರಲ್ಲಿ ೩೩ ಜನರನ್ನು ನಾವೇ ಪೋಲಿಸರಿಗೆ ಒಪ್ಪಿಸಿದ್ದೇವೆ ಹಿಂದೂ ಮುಖಂಡ ರಾಘವ ಅಣ್ಣಿಗೇರಿ ಆಕ್ರೋಶದ ಮಾತುಗಳನ್ನಾಡಿದರು.ಸಿಂದಗಿ ಪಟ್ಟಣದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಆಝಾದ್ ಯುವ ವೇದಿಕೆಯ ವತಿಯಿಂದ ಹಮ್ಮಿಕೊಂಡ ಧರ್ಮಶಿಕ್ಷಣ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.ಹಿಂದೂಗಳು ಜಾಗೃತಗೊಳ್ಳದಿದ್ದರೆ ೨೦೪೭ರ ಹೊತ್ತಿಗೆ ಭಾರತ ಇಸ್ಲಾಮ್ ರಾಷ್ಟçವಾಗುತ್ತದೆ. ಜಗತ್ತಿನಲ್ಲಿ ೧೫೦೦ ಭಯೋತ್ಪಾದಕ ಇಸ್ಲಾಮ್ ಸಂಘಟನೆಗಳಿವೆ ಅವುಗಳ ಮೂಲ ಉದ್ದೇಶ ಸನಾತನ ರಾಷ್ಟçದ ಮೇಲೆ ಯುದ್ದ ಸಾರುವುದು ಇದಕ್ಕೆ ಪಾಕಿಸ್ತಾನ, ಚೈನಾ ಹಾಗೂ ಅಮೇರಿಕಾದಂತಹ ದೇಶಗಳ ಕುಮ್ಮಕಿದೆ. ಕಾರಣ ನಾವೆಲ್ಲಾ ಜಾತಿ-ಮತ-ಪಂಥ ಮರೆತು ಒಗ್ಗಟ್ಟಾಗಿ ರಾಷ್ಟಾçಭಿಮಾನದ ಜತೆಗೆ ಧರ್ಮವನ್ನು ರಕ್ಷಣೆ ಮಾಡಬೇಕಿದೆ ಎಂದರು.ನಮ್ಮ ರಾಷ್ಟ್ರ ಈಗಾಗಲೇ ಹಿಂದೂ ರಾಷ್ಟ್ರವಾಗಿದೆ. ನಮ್ಮ ಧರ್ಮದಲ್ಲಿ ನಾರಿಯರ ಪಾತ್ರ ದೊಡ್ಡದ್ದು ರಾಣಿ ಚನ್ನಮ್ಮ, ಜೀಜಾಬಾಯಿಯಂತೆ ದಿಟ್ಟ ಮಹಿಳೆಯರಾಗಿ ಲವ್ ಜಿಹಾದ್ನ್ನು ಮೆಟ್ಟಿ ನಿಲ್ಲಬೇಕು ವಿದೇಶಿ ಸಂಸ್ಕೃತಿಯನ್ನು ದಿಕ್ಕರಿಸಿ ಧರ್ಮ ಸಂಸ್ಕೃತಿಯನ್ನು ಪಾಲನೆ ಮಾಡಬೇಕು. ಚುನಾವಣೆ ಹೆಸರಲ್ಲಿ ನಕಲಿ…
ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಆಲಮಟ್ಟಿ ಜಲಾಶಯದ ಭದ್ರತೆಗೆ ನಿಯೋಜಿಸಿದ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ (ಕೆಎಸ್ ಐಎಸ್ ಎಫ್) ಕಾರ್ಯವೈಖರಿ ಹಾಗೂ ಭದ್ರತೆಯ ಬಗ್ಗೆ ಧಾರವಾಡ ಮೂರನೇ ಪಡೆಯ ಕಮಾಂಡೆಂಟ್ ಗುರುನಾಥ ಮಂಗಳವಾರ ಪರಿಶೀಲನೆ ನಡೆಸಿದರು.ಆಲಮಟ್ಟಿ ಜಲಾಶಯ, ಪ್ರವೇಶ ದ್ವಾರ, ನಾನಾ ಕಡೆ ನಿಗದಿಗೊಳಿಸಿರುವ ಪೊಲೀಸ್ ಚೆಕ್ ಪೋಸ್ಟ್, ಚೆಕ್ ಪಾಯಿಂಟ್ ಗಳನ್ನು ಪರಿಶೀಲಿಸಿದರು.ಆಲಮಟ್ಟಿ ಪೆಟ್ರೋಲ್ ಪಂಪ್ ಬಳಿಯಿಂದ ಪ್ರವೇಶಿಸುವ ಪ್ರತಿ ವಾಹನಗಳ ಸಂಖ್ಯೆಯಲ್ಲಿ ಡೈರಿಯಲ್ಲಿ ನಮೂದಿಸಬೇಕು, ವಾಹನಗಳ ಡಿಕ್ಕಿ ತೆಗೆದು ಪರಿಶೀಲಿಸಬೇಕು, ಬಂದ ಸಾರ್ವಜನಿಕರೊಂದಿಗೆ ಸೌಮ್ಯದಿಂದ ವರ್ತಿಸಬೇಕು ಎಂದು ಸೂಚಿಸಿದರು.ನಂತರ ಕೆಬಿಜೆಎನ್ ಎಲ್ ಮುಖ್ಯ ಎಂಜಿನಿಯರ್ ಡಿ. ಬಸವರಾಜ ಅವರೊಂದಿಗೆ ಚರ್ಚಿಸಿದ ಗುರುನಾಥ, ಭದ್ರತೆ ಕಟ್ಟುನಿಟ್ಟುಗೊಳಿಸಲು ಕೈಗೊಳ್ಳಬಹುದಾದ ನಾನಾ ಕ್ರಮಗಳನ್ನು ಚರ್ಚಿಸಿದರು. ಸದ್ಯ ಆಲಮಟ್ಟಿ ಜಲಾಶಯದ ಹಿಂಭಾಗದಲ್ಲಿ ಬೋಟ್ ಇದೆ. ಜಲಾಶಯದ ಮುಂಭಾಗದಲ್ಲಿಯೂ ಒಂದು ಬೋಟ್ ವ್ಯವಸ್ಥೆ ಮಾಡಲು ತಿಳಿಸಿದರು.ಬೋಟ್ ನೀಡಿದರೆ ಜಲಾಶಯದ ನಿಷೇಧಿತ ಸ್ಥಳಗಳಲ್ಲಿ ಮೀನುಗಾರಿಕೆ ಸೇರಿದಂತೆ ನಾನಾ ಕ್ರಮಗಳನ್ನು ತಡೆಗಟ್ಟಲು ಸಹಾಯವಾಗಲಿದೆ ಎಂದರು. ಇನ್ನೊಂದು ಬೋಟ್…
ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಕೆಬಿಜೆಎನ್ ಎಲ್ ನಾನಾ ಉದ್ಯಾನಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ದಿನಗೂಲಿ ಕಾರ್ಮಿಕರನ್ನು ತೆಗೆದು, ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿಗಾಗಿ ಕರೆದ ಟೆಂಡರ್ ರದ್ದುಪಡಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ದಿನಗೂಲಿ ನೌಕರರ ಸಂಘದ ಸದಸ್ಯರು ಮಂಗಳವಾರ ಇಲ್ಲಿಯ ಮುಖ್ಯ ಎಂಜಿನಿಯರ್ ಕಚೇರಿ ಎದುರು ಧರಣಿ ನಡೆಸಿದರು.ಸಂಘದ ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷ ವಿರೂಪಾಕ್ಷಿ ಮಾದರ, ಕಳೆದ ೨೦ ವರ್ಷಗಳಿಂದ ಇಲ್ಲಿ ಕೂಲಿಕಾರ್ಮಿಕರಾಗಿ ವಿವಿಧ ಉದ್ಯಾನಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ, ಅದಕ್ಕಾಗಿ ನೇರವಾಗಿ ನಿಗಮವೇ ಅರಣ್ಯ ಇಲಾಖೆಯ ಮೂಲಕ ವೇತನ ಪಾವತಿ ಮಾಡುತ್ತಿದೆ. ಆದರೆ ಈಗ ಹೊರಗುತ್ತಿಗೆ ಏಜೆನ್ಸಿಯ ಮೂಲಕ ವೇತನ ನಿಗದಿಗೊಳಿಸಲು ಟೆಂಡರ್ ಕರೆಯಲಾಗಿದೆ, ಅದನ್ನು ರದ್ದುಗೊಳಿಸಬೇಕು, ಕನಿಷ್ಟ ಸರ್ಕಾರಿ ಸೇವಾ ಭದ್ರತೆ ನೀಡಬೇಕು, ಬಾಕಿ ವೇತನ ಬಿಡುಗಡೆಗೊಳಿಸಬೇಕು, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಟೆಂಡರ್ ಇಲ್ಲದೆ ಕರ್ತವ್ಯ ನಿರ್ವಹಿಸಲು ಕೆಟಿಪಿಪಿ ಕಾಯ್ದೆಯ ನಿಯಮ ೪ ಜಿರನ್ವಯ ವಿನಾಯಿತಿ ನೀಡಬೇಕು ಎಂದು ಆಗ್ರಹಿಸಿದರು. ಇಡೀ ದಿನ ಧರಣಿ ನಡೆಯಿತು. ಧರಣಿ ಸ್ಥಳಕ್ಕೆ ಆಗಮಿಸಿ ಅಣೆಕಟ್ಟು…
ಉದಯರಶ್ಮಿ ದಿನಪತ್ರಿಕೆ ಇಂಡಿ: ಗೋಳಸಾರದ ಅಭಿನವ ಪುಂಡಲಿಂಗ ಮಹಾ ಶಿವಯೋಗಿಗಳ ಜನ್ಮದಿನದ ಪ್ರಯುಕ್ತ ಇಂಡಿ ನಗರದ ಎಸ್.ಎಸ್. ಪ್ಯಾರಾ ಮೆಡಿಕಲ್ ಕಾಲೇಜು ಆವರಣದಲ್ಲಿ ತಾಲೂಕಾ ಆರೋಗ್ಯ ಇಲಾಖೆ ಹಾಗೂ ಸ್ಪಂದನಾ ಆಸ್ಪತ್ರೆ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣೆ ಮತ್ತು ಉಚಿತ ನೇತ್ರ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ಯಾರಾಮೆಡಿಕಲ್ ಕಾಲೇಜಿನ ಅಧ್ಯಕ್ಷ ಎಸ್.ಬಿ ಕೆಂಬೋಗಿ ತಿಳಿಸಿದರು.ಅವರು ಮಂಗಳವಾರ ನಗರದ ಖಾಸಗಿ ಹೋಟೆಲ್ ಆವರಣದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.ಅಂದು ಬೆಳಿಗ್ಗೆ ೧೦:೦೦ ಗಂಟೆಗೆ ಉಚಿತ ಹಲ್ಲಿನ ಸೆಟ್ಟು ಜೋಡಣೆ ( ದಂತಪಂಕ್ತಿ) ಶಿಬಿರ ಆಯೋಜಿಸಿದ್ದು ೪೫ ವರ್ಷ ಮೇಲ್ಪಟ್ಟವರಿಗೆ ಬಿಪಿಎಲ್ ಕಾರ್ಡ್ ಹೊಂದಿದವ ರಿಗೆ ಹಲ್ಲಿನ ಸೆಟ್ ಜೋಡಿಸಲಾಗುವುದು ಎಂದು ತಿಳಿಸಿದರು.ಅಂದು ಉಚಿತವಾಗಿ ಬಿ.ಪಿ, ಶುಗರದ, ಈಸಿಜಿ ಸೇರಿದಂತೆ ಇನ್ನಿತರ ಆರೋಗ್ಯ ತಪಾಸಣೆ ನಡೆಯಲಿದ್ದು ಸಾರ್ವಜನಿಕರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.ಸ್ಪಂದನಾ ಆಸ್ಪತ್ರೆಯ ಡಾ. ಲಕ್ಷ್ಮೀಕಾಂತ ಮೇತ್ರಿ ಮಾತನಾಡಿ, ಮನುಷ್ಯನಿಗೆ ಎಷ್ಟೇ ದುಡ್ಡು, ಆಸ್ತಿ…
