Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಕೃಷ್ಣಾ ನದಿ ತಟದಲ್ಲಿರುವ ಪುಣ್ಯ ಕ್ಷೇತ್ರ ಕೊಲ್ದಾರ ಪಟ್ಟಣದ ಶ್ರೀ ಬನಶಂಕರಿದೇವಿ ಜಾತ್ರಾ ಮಹೋತ್ಸವವು ಇದೆ ಜ.24 ರಿಂದ 26 ರವರೆಗೆ ವಿಜೃಂಭಣೆಯಿಂದ ನಡೆಯಲಿದೆ.ದಿನಾಂಕ: 24-01-2026 ಶನಿವಾರ ದಿವಸ ಬೆಳಿಗ್ಗೆ 10-30 ಘಂಟೆಗೆ ಶ್ರೀ ಬನಶಂಕರಿದೇವಿಯ ಅಷ್ಟೋತ್ತರ ಕುಂಕುಮಾರ್ಚನೆಯು ಶಕ್ತಿಪೀಠ ಶ್ರೀ ಕ್ಷೇತ್ರ ಬನಶಂಕರಿ (ಬದಾಮಿ) ಚಿದಂಬರಭಟ್ಟ ಎಸ್. ಪೂಜಾರ ಅರ್ಚಕರು ಇವರಿಂದ ನೆರವೇರುವದು. ಅದೇ ದಿನ ರಾತ್ರಿ 7-00 ಗಂಟೆಗೆ ಶಂಕರ ಮ. ಯಂಕಂಚಿ ಇವರ ತಂಡದಿಂದ ‘ಜಾಣರ ಜಗಲಿ ನಗೆಹಬ್ಬ’ ಕಾರ್ಯಕ್ರಮ ಜರುಗುವುದು.ದಿನಾಂಕ : 25-01-2026 ರವಿವಾರ ದಿವಸ ಬೆಳಿಗ್ಗೆ : 6-00 ಗಂಟೆಗೆ ಶ್ರೀ ಬನಶಂಕರಿದೇವಿಯ ರುದ್ರಾಭಿಷೇಕ, ಹೋಮ ಹವನ ಕಾರ್ಯಕ್ರಮವನ್ನು ಪ್ರಭುಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು, ಬೇಲೂರ ಜಿ. ಬೀದರ (ಕೊಲ್ದಾರ) ಮತ್ತು ವೇದಮೂರ್ತಿ ಶ್ರೀ ರಾಘವೇಂದ್ರಸ್ವಾಮಿಗಳು, ದೇವಾಂಗಮಠ, ಗೊಳಸಂಗಿ ಹಾಗೂ ಶ್ರೀ ಈರಣ್ಣ ಹ. ಮೇಲಗಿರಿ (ದೇವಿ ಆರ್ಚಕರು) ಇವರಿಂದ ಜರುಗುವುದು.ಅದೇ ದಿನ ಮುಂಜಾನೆ 10-30 ಕ್ಕೆ ಮುತ್ತೈದೆಯರ ಆರತಿಯೊಂದಿಗೆ ಶ್ರೀ…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಅನುಗ್ರಹ ವ್ಹಿಜನ್ ಪೌಂಡೇಶನ್ ಟ್ರಸ್ಟ್ ಮತ್ತು ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ವಿಜಯಪುರ ಹಾಗೂ ರೈತಮಿತ್ರ ಕಾಶೀನಾಥ ಪತ್ತಾರ ಪೌಂಡೇಶನ್ ಮುತ್ತಗಿ ಇವರ ಸಂಯುಕ್ತ ಆಶ್ರಯದಲ್ಲಿ,77ನೇ ಗಣರಾಜ್ಯೋತ್ಸವದ ಅಂಗವಾಗಿ ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ 26-01-2026 ಸೋಮವಾರ ಬೆಳಿಗ್ಗೆ 9-30 ರಿಂದ 3-00 ಗಂಟೆ ವರೆಗೆಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಚೀರಲದಿನ್ನಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ.ವಿಜಯಪುರ ನಗರದ ಡಾ,ಪ್ರಭುಗೌಡ.ಬಿ.ಎಲ್. (ಚಬನೂರ) ರವರ ಅನುಗ್ರಹ ಕಣ್ಣಿನ ಆಸ್ಪತ್ರೆಯ ಖ್ಯಾತ ನೇತ್ರ ತಜ್ಞರು ಶಿಬಿರದಲ್ಲಿ ಭಾಗವಹಿಸಿ ನೇತ್ರ ತಪಾಸಣೆ ಮಾಡಲಿದ್ದಾರೆ.ಪ್ರತಿಯೊಬ್ಬ ಅರ್ಹ ರೋಗಿಯನ್ನು ವಿಜಯಪುರ ನಗರದ ಅನುಗ್ರಹ ಕಣ್ಣಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಚಿತವಾಗಿ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆಯನ್ನು ಮಾಡಿ ಲೈನ್ಸ್ ಅಳವಡಿಸಲಾಗುವುದು.ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ 9590064059,7353477283,9448759368, 8150804574, ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಪಡುವವರ 2 ಫೋಟೋ ಹಾಗೂ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತರಬೇಕು, ಸಾರ್ವಜನಿಕರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪ್ರಕಟಣೆಗೆ ತಿಳಿಸಿದ್ದಾರೆ.

Read More

ಲೇಖನಡಾ ಶಶಿಕಾಂತ ಪಟ್ಟಣರಾಮದುರ್ಗಬೆಳಗಾವಿ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಅನಾಥರು ಅಬಲರು ಕುರುಡರು ಏನಿಲ್ಲದೆ ಬಳಲಿದ ಕಂದಮ್ಮಗಳು ಮುಂದೆ ಭಾರತದ ಸರ್ವ ಶ್ರೇಷ್ಠ ಸಂಗೀತ ಮತ್ತು ಸಾಹಿತ್ಯ ದಿಗ್ಗಜರೆನಿಸಿಕೊಳ್ಳುತ್ತಾರೆ ಎಂದು ಯಾರು ಅಂದು ಕೊಂಡಿರಲಿಲ್ಲ. ನನ್ನ ಲೇಖನದ ಕಥಾನಾಯಕ ಪರಮಪೂಜ್ಯ ಡಾ ಪುಟ್ಟರಾಜ ಗವಾಯಿಗಳಜೀವನ ಸಂಘರ್ಷ ನಿಜಕ್ಕೂ ನಮಗೆಲ್ಲ ಅಚ್ಚರಿ ಮೂಡಿಸುತ್ತದೆ.ಎರಡು ವರುಷದ ಕಂದಮ್ಮ ಎಲ್ಲವನ್ನೂ ಕಳೆದುಕೊಂಡು ಅನಾಥ ಸ್ಥಿತಿಯಲ್ಲಿರುವಾಗ ಅವರ ಪಾಲಿಗೆ ದೊರೆತವರೇ ಶ್ರೀ ಪಂಚಾಕ್ಶರಿ ಗವಾಯಿಗಳು ಶ್ರೀ ವೀರೇಶ್ವರ ಪುಣ್ಯಾಶ್ರಮ ಗದಗ.ಕರ್ನಾಟಕದ ನಾಟಕ ಮತ್ತು ಸಂಗೀತಕ್ಕೆ ಹೊಸ ರೂಪವನ್ನು ಕೊಟ್ಟವರು ಡಾ ಪುಟ್ಟರಾಜ ಗವಾಯಿಗಳುಬಾಲ್ಯದಲ್ಲಿ ಎರಡು ವರ್ಷಕ್ಕೆ ತಂದೆ ಹಾಗು ತಾಯಿಯನ್ನು ಕಳೆದುಕೊಂಡು ಅನಾಥನಾದ ಪುಟ್ಟಯ್ಯನನ್ನು ಸೋದರಮಾವ ಚಂದ್ರಶೇಖರಯ್ಯ ಬೆಳೆಸಿದರು. ಎಂಟು ವರ್ಷದವರೆಗೆ ತನ್ನಲ್ಲಿದ್ದ ಸಂಗೀತಜ್ಞಾನವನ್ನು ಮಗುವಿಗೆ ನೀಡಿದರು. ಆ ಬಳಿಕ ನವಲಗುಂದದ ಗವಿಮಠಕ್ಕೆ ಕರೆತಂದು ಅಲ್ಲಿ ಬಂದಿದ್ದ ಪಂಚಾಕ್ಷರಿ ಗವಾಯಿಗಳ ಉಡಿಯಲ್ಲಿ ಪುಟ್ಟಯ್ಯನನ್ನು ಹಾಕಿದರು. ಈ ಅಂಧ ಗುರು ಹಾಗು ಅಂಧ ಶಿಷ್ಯ ಸಂಗೀತ ಪ್ರಪಂಚವನ್ನು ಬೆಳಗುತ್ತಾರೆಂದು ಆಗ…

Read More

ಲೇಖನ- ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)ವಿಜಯಪುರ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ನೇತಾಜಿ ಅವರು “ಒಬ್ಬ ವ್ಯಕ್ತಿ ಭಾರತಕ್ಕೋಸ್ಕರ ಪ್ರಾಣ ತ್ಯಜಿಸಬಹುದು. ಆದರೆ, ಆತನ ತ್ಯಾಗವೇ ಸಹಸ್ರಾರು ಜನರನ್ನು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಲು ಪ್ರೇರೇಪಿಸುತ್ತದೆ” ಎಂದು ಹೇಳಿದ್ದಾರೆ. ವೀರ ಸೇನಾನಿ, ದೇಶ ಕಂಡ ಅಸಾಧಾರಣ ನಾಯಕ, ವರ್ಚಸ್ವಿ ವಾಗ್ಮಿ ಮತ್ತು ಅತ್ಯಂತ ಪ್ರಭಾವಶಾಲಿ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಸಚಂದ್ರ ಭೋಸ ಅವರು ಪ್ರತಿಯೊಬ್ಬ ಭಾರತೀಯರ ಹೃದಯ ಅಂತರಾಳದಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿ ರಾಷ್ಟçಭಕ್ತಿ ಮತ್ತು ರಾಷ್ಟ್ರೀಯತೆ ಹೊರಹೊಮ್ಮುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.‘ನೀವು ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ವನ್ನು ಕೊಡುತ್ತೇನೆ’ ಎಂದು ಹೇಳುತ್ತಾ, ಅಸಂಖ್ಯಾತ ಭಾರತೀಯ ಯುವಕರು ಬ್ರಿಟಿಷ್ ವಸಾಹತುಶಾಹಿ ನಿಯಂತ್ರಣದಿಂದ ಸ್ವಾತಂತ್ರ್ಯಕ್ಕಾಗಿ ಹೋರಾಟದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿದರು. ನೇತಾಜಿ ಸುಭಾಸಚಂದ್ರ ಭೋಸ ಅವರು ೨೩ ನೇಯ ಜನೇವರಿ ೧೮೯೭ ರಲ್ಲಿ ಒರಿಸ್ಸಾ ರಾಜ್ಯದ ಕಟಕ್ ಎಂಬಲ್ಲಿ ಜಾನಕಿನಾಥ ಭೋಸ್ ಹಾಗೂ ಪ್ರಭಾವತಿ ದತ್ ಬೋಸ್ ದಂಪತಿಗಳ ಸುಪುತ್ರರಾಗಿ ಜನಿಸಿದರು. ಚಿಕ್ಕ…

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ಪಟ್ಟಣದ ಆರಾಧ್ಯ ದೈವ ಶ್ರೀ ಸಂಗಮೇಶ್ವರ ದೇವರ ಜಾತ್ರೆಯು ಜ.18 ರಿಂದ ಅದ್ದೂರಿಯಾಗಿ ಆರಂಭಗೊಂಡಿದ್ದು, ಜಾತ್ರೆಯ 3 ನೇ ದಿನವಾದ ಮಂಗಳವಾರ ಜಾತ್ರೆ ಅಂಗವಾಗಿ ಜರುಗಿದ ಭಾರ ಎತ್ತುವ ಸ್ಪರ್ಧೆ ಹಾಗೂ ಪ್ರಸಿದ್ದ ಮಲ್ಲರ ಕುಸ್ತಿ ಪಂದ್ಯಾವಳಿ ನೋಡುಗರ ಮೈ ನವಿರೇಳಿಸುವಂತಿತ್ತು.ಕರ್ನಾಟಕ-ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಬಂದಿದ್ದ ಭಾರ ಎತ್ತುವ ಸ್ಪರ್ಧಿಗಳು ಹಾಗೂ ಕುಸ್ತಿ ಪಟುಗಳು ಭಾಗವಹಿಸಿ ಪಂದ್ಯಾವಳಿಗೆ ಮೆರಗು ತಂದಿದ್ದರು.ಭಾರ ಎತ್ತುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಪಟುಗಳು 20 ಕೆ.ಜಿ. ಇಂದ 188 ಕೆ.ಜಿಯ ವರೆಗಿನ ಸಾಣಿ ಕಲ್ಲು ಹಾಗೂ ಗುಂಡು ಕಲ್ಲುಗಳನ್ನು ಅವರವರ ಸಾಮರ್ಥ್ಯಕ್ಕನುಸಾರವಾಗಿ ಕಲ್ಲುಗಳನ್ನು ಎತ್ತುಂತಿದ್ದಂತೆ ನೋಡುಗರ ಮೈ ನವರೇಳಿಸಿತು.ಇನ್ನು 200 ಕೆ.ಜಿ. ಭಾರದ ಎಮ್.ಸ್ಯಾಂಡ್ ಚೀಲ, ಹಾಗೂ 100 ಕೆ.ಜಿ. ಭಾರದ ಜೋಳದ ಚೀಲವನ್ನು ಪಟುಗಳು ಎತ್ತಿ ನೋಡುಗರನ್ನು ಮನರಂಜಿಸಿದರು.ಪ್ರಸಿದ್ಧ ಮಲ್ಲರ ಕುಸ್ತಿ ಸ್ಪರ್ಧೆಯಲ್ಲಿ ದೇಹದಾರ್ಡ್ಯ ಕಟ್ಟುಮಸ್ತು ಹೊಂದಿದ್ದ ಪೈಲ್ವಾನರು ಎದುರಾಳಿಗಳನ್ನು ಸೆಣಸುತ್ತಿರುವುದನ್ನು ನೋಡುತ್ತಿದ್ದ ಕುಸ್ತಿ ಪ್ರಿಯರು ಸಿಳ್ಳೆ, ಚಪ್ಪಾಳೆ ತಟ್ಟಿ ಹುರುದುಂಬಿಸಿದರು.…

Read More

ವಿಧಾನಮಂಡಲದ ಜಂಟಿ ಅಧಿವೇಶನ | ಕಾಂಗ್ರೆಸ್ ಹಾಗೂ ಬಿಜೆಪಿ, ಜೆಡಿಎಸ್ ನಡುವೆ ತೀವ್ರ ಜಟಾಪಟಿ ಸಾಧ್ಯತೆ ಬೆಂಗಳೂರು: ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನ ಗುರವಾರ ಆರಂಭವಾಗಲಿದ್ದು, ಆಡಳಿತರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್ ನಡುವೆ ತೀವ್ರ ಜಟಾಪಟಿ ನಡೆಯುವ ಸಾಧ್ಯತೆ ಇದೆ.ಕೇಂದ್ರದಿಂದ ಎಂಜಿಎನ್‌ಆರ್‌ಇಜಿಎ “ರದ್ದು” ಸೇರಿದಂತೆ ಹಲವಾರು ವಿಷಯಗಳ ಕುರಿತು ಆಡಳಿತಾರೂಢ ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳಾದ ಬಿಜೆಪಿ-ಜೆಡಿ(ಎಸ್) ನಡುವೆ ತೀವ್ರ ಘರ್ಷಣೆ ನಿರೀಕ್ಷಿಸಲಾಗಿದೆ. ಜನವರಿ 22 ರಿಂದ 31 ರವರೆಗಿನ ಅಧಿವೇಶನವು ಗುರುವಾರ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ವಿಧಾನಮಂಡಲದ ಜಂಟಿ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡುವದರೊಂದಿಗೆ ಆರಂಭವಾಗಬೇಕಿತ್ತು. ಆದರೆ ಇದೀಗ ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ನಿರಾಕರಿಸಿದ್ದಾರೆ.ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಜಿಎನ್‌ಆರ್‌ಇಜಿಎ) ರದ್ದುಗೊಳಿಸಿದ ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧ ನಿರ್ಣಯವನ್ನು ಅಂಗೀಕರಿಸಲು ಮತ್ತು ವಿಬಿ-ಜಿ ರಾಮ್ ಜಿ…

Read More

ಮೊದಲ ಪುಟ ಮುದ್ದೇಬಿಹಾಳ: ಜಾಗತೀಕರಣದ ಪ್ರಭಾವದಿಂದ ನಾಟಕ ಎನ್ನುವ ಸಂಸ್ಕೃತಿ ದೂರಾಗಿದೆ ಎಂದು ಕುಂಟೋಜಿ ಸಂಸ್ಥಾನ ಭಾವೈಕ್ಯತಾ ಮಠದ ಡಾ.ಚನ್ನವೀರ ಶಿವಾಚಾರ್ಯರು ಬೇಸರ ವ್ಯಕ್ತಪಡಿಸಿದರು.ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ಗವಿಸಿದ್ದೇಶ್ವರ ವೇದಿಕೆಯಲ್ಲಿ ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷರಾದ ಪ್ರಭುಗೌಡ ದೇಸಾಯಿ ಅವರು ತುಮಕೂರಿನ ಸಿದ್ದಗಂಗಾ ಮಠದ ಲಿಂ. ಡಾ.ಶಿವಕುಮಾರ ಮಹಾಸ್ವಾಮಿಗಳು ಮತ್ತು ಲಿಂ.ಚನ್ನಣ್ಣ ದೇಸಾಯಿ ಅವರ ಪುಣ್ಯಸ್ಮರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ನಾಟಕೋತ್ಸವವನ್ನು ತಬಲ ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.ಕಲೆ-ಸಂಸ್ಕೃತಿಗೆ ಜೀವ ತುಂಬುವ ನಾಟಕ ಪರಂಪರೆಯನ್ನು ಯಾರೂ ಮರೆಯಬಾರದು. ನಾಟಕಗಳು ಮನುಷ್ಯನ ಬದುಕಿಗೆ ಶಿಸ್ತು, ವಿವೇಕ ಮತ್ತು ಮಾನವೀಯತೆ ನೀಡುತ್ತದೆ. ರಂಗಭೂಮಿ ಕೇವಲ ಮನರಂಜನೆಗೆ ಸೀಮಿತವಾಗದೇ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗೆ ದಾರಿ ತೋರುವ ಶಕ್ತಿಯನ್ನೂ ಹೊಂದಿದೆ. ನಾಟಕಗಳ ಮೂಲಕ ಉತ್ತಮ ಸಂದೇಶವನ್ನು ಜನರಿಗೆ ತಲುಪಿಸಿ, ಯುವ ಪೀಳಿಗೆಯಲ್ಲಿ ಉತ್ತಮ ಸಂಸ್ಕಾರ ಬೆಳೆಸಬೇಕು. ನಮ್ಮ ದೇಶದಲ್ಲಿ ನಾಟಕಕ್ಕೆ ಮಹತ್ವದ ಸ್ಥಾನವಿದೆ. ನಮ್ಮ ಭಾಷೆ, ಸಂಸ್ಕೃತಿ, ಮೌಲ್ಯಗಳನ್ನು ಕಾಪಾಡಿಕೊಳ್ಳಲು ಇಂತಹ ನಾಟಕೋತ್ಸವಗಳು ಅಗತ್ಯ ಎಂದರು.ಜಿಲ್ಲಾ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಗ್ರಾಮೀಣ ಹಬ್ಬಗಳು ಸಂಸ್ಕೃತಿ, ಪರಂಪರೆ, ಸಾಮಾಜಿಕ ಬಾಂಧವ್ಯ ಮತ್ತು ಜೀವನ ಮೌಲ್ಯಗಳ ಸಂಗಮ ಎಂದು ದೈಹಿಕ ಶಿಕ್ಷಣಾಧಿಕಾರಿ ರಮೇಶ ಬಿರಾದಾರ ಹೇಳಿದರು.ಸಿಂದಗಿ ತಾಲೂಕಿನ ಗಣಿಹಾರ ಮಾದರಿ ಪ್ರಾಥಮಿಕ ಶಾಲಾ ಅವರಣದಲ್ಲಿ ಹಮ್ಮಿಕೊಂಡ ಹಳ್ಳಿ ಸೊಗಡಿನ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಳ್ಳಿ ಹಬ್ಬಗಳು ಕೇವಲ ಸಂಭ್ರಮ ಮಾತ್ರವಲ್ಲ, ಗ್ರಾಮೀಣ ಸಂಸ್ಕೃತಿ ಮತ್ತು ಜನ ಜೀವನವನ್ನು ಪ್ರತಿಬಿಂಬಿಸುವ ಒಂದು ಪ್ರಮುಖ ಭಾಗವಾಗಿದೆ. ಕುಟುಂಬ ಸಂಬಂಧಗಳನ್ನು ಗಟ್ಟಿಗೊಳಿಸಿ ಪೀಳಿಗೆಯಿಂದ ಪೀಳಿಗೆಗೆ ಸಂಪ್ರದಾಯಗಳನ್ನು ರವಾನಿಸುತ್ತವೆ. ಇದು ಪಾಶ್ಚಾತ್ಯ ಪ್ರಭಾವದಿಂದ ಮರೆಯಾಗುತ್ತಿರುವ ಈ ಕಾಲದಲ್ಲಿ ಅತ್ಯಂತ ಮಹತ್ವದ್ದಾಗಿದೆ ಎಂದರು.ಇದೇ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿ ರವಿ ಬಿರಾದಾರ ಮಾತನಾಡಿದರು. ಹಿಕ್ಕುನುಗುತ್ತಿ ಲಿಂಗಾಯತ ಮಠದ ಪ್ರಭುಲಿಂಗ ಶರಣರು ಸಾನಿಧ್ಯ ವಹಿಸಿದ್ದರು.ಶಾಲೆಯ ಎಸ್‌ಡಿಎಮ್‌ಸಿ ಅಧ್ಯಕ್ಷ ಸದಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರಮೇಶ ಕೋರಿ ಸದಸ್ಯ ದಾದಾಪೀರ ಅಂಗಡಿ, ಶರಣು ಆನಗೊಂಡ, ವಿಶ್ರಾಂತ ಶಿಕ್ಷಕ ಯು.ಐ.ಶೇಖ, ಶಿಕ್ಷಣ ಸಂಯೋಜಕ ಅಯ್.ಎಫ್. ಭಾಲ್ಕಿ, ಲಕ್ಷ್ಮಣ ಸೊನ್ನ, ದೈಹಿಕ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ಕಲಬುರ್ಗಿಯ ಶ್ರೀ ವಿ.ಜಿ.ಮಹಿಳಾ ಕಾಲೇಜು ಜ.೧೩ರಂದು ಆಯೋಜಿಸಿದ್ದ ಆಯ್ಕೆ ಪ್ರಕ್ರಿಯೆಯಲ್ಲಿ ಉತ್ತಮ ಪ್ರದರ್ಶನದ ಆಧಾರದ ಮೇಲೆ ಸಿಂದಗಿ ನಗರದ ಶ್ರೀ ಪದ್ಮರಾಜ ಮಹಿಳಾ ಪದವಿ ಮಹಾವಿದ್ಯಾಲಯದ ಕಾಲೇಜಿನ ವಿದ್ಯಾರ್ಥಿಗಳಾದ ಜಯಶ್ರೀ ಕೂಚಬಾಳ ಹಾಗೂ ಸಮೃದ್ಧಿ ಕೋಟ್ಯಾಳ ಅವರನ್ನು ಕರಾಅ ಮಹಿಳಾ ವಿವಿ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿ ಉತ್ತಮ ಸಾಧನೆ ಮಾಡಿ ವಿಶ್ವವಿದ್ಯಾಲಯ ಬ್ಲೂ ಆಗಿ ಆಯ್ಕೆಯಾಗಿದ್ದಾರೆ.ವಿದ್ಯಾರ್ಥಿನಿಯ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಉತ್ತರಾಧಿಕಾರಿ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು, ಆಡಳಿತ ಮಂಡಳಿ ಸದಸ್ಯರು, ಪ್ರಾಚಾರ್ಯರು ಸೇರಿದಂತೆ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಮಹಿಳಾ ಸಬಲೀಕರಣ, ಮಹಿಳೆಯನ್ನು ಸಮಾಜಮುಖಿಯನ್ನಾಗಿ ಮಾಡುವಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಾತ್ರ ಅತ್ಯಂತ ಶ್ಲಾಘನೀಯವಾದದು ಎಂದು ಸಮಾಜ ಸೇವಕಿ ನಾಗರತ್ನ ಮನಗೂಳಿ ಹೇಳಿದರು.ಪಟ್ಟಣದ ಹೊಸನಗರದ ಶ್ರೀವಿಠ್ಠಲ ರುಕ್ಮಿಣಿ ಮಂಗಲ ಭವನದಲ್ಲಿ ಮಂಗಳವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ , ಸಾಮೂಹಿಕ ಶ್ರೀಸತ್ಯನಾರಾಯಣ ಪೂಜಾ ವ್ಯವಸ್ಥಾಪನಾ ಸಮಿತಿ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ಜಾಲವಾದ ವಲಯ ಮಟ್ಟದ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜಾ ಹಾಗೂ ಧಾರ್ಮಿಕಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಜೀವನದ ಕಷ್ಟಕಾರ್ಪಣ್ಯಗಳಿಗೆ ಪರಿಹಾರವಾಗಿ ಶ್ರೀಸತ್ಯನಾರಾಯಣ ಪೂಜೆ ಕೈಗೊಳ್ಳುವುದು ಹಿಂದಿನಿAದಲೂ ಬಂದಿದೆ. ಈಗ ಸಮಾಜದಲ್ಲಿ ಸಾಮೂಹಿಕ ಪೂಜೆ ಕೈಗೊಂಡು ಉತ್ತಮ ಕಾರ್ಯ ಮಾಡಿದೆ ಎಂದರು.ಜ್ಞಾನಜ್ಯೋತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾನಾಗೌಡ ಪಾಟೀಲ ಮಾತನಾಡಿದರು.ಸಾನಿಧ್ಯ ವಹಿಸಿದ ಅವೋಗೇಶ್ವರ ತಪೋಧಾಮದಶ್ರೀ ಆಶೀರ್ವಚನ ನೀಡಿದರು.ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆಯಲ್ಲಿ ಭಕ್ತರು ದಂಪತಿಗಳ ಸಹಿತ ಪಾಲ್ಗೊಂಡು, ಅಶೋಕ ಜೋಷಿ ಮೂಲಕ ಪೂಜೆ ಸಲ್ಲಿಸಿದರು.ಪಟ್ಟಣ ಪಂಚಾಯಿತಿ…

Read More