ಉದಯರಶ್ಮಿ ದಿನಪತ್ರಿಕೆ
ತಿಕೋಟಾ: 2004-05 ನೇ ಸಾಲಿನ ಎಸ್. ಎಸ್. ಎಲ್. ಸಿ ವಿದ್ಯಾರ್ಥಿಗಳಿಂದ ಗುರು ನಮನ ಹಾಗೂ ಸ್ನೇಹ ಸಂಗಮ ಕಾರ್ಯಕ್ರಮ ಸರಕಾರಿ ಪ್ರೌಢ ಶಾಲೆ ಬಾಬಾನಗರದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ನಿವೃತ್ತ ಮುಖ್ಯೋಪಾಧ್ಯಾಯ ಎಸ್.ಎಲ್. ಇಂಗಳೇಶ್ವರ ಮಾತನಾಡಿ ಮಕ್ಕಳ ಸರ್ವತೋಮುಖ ಬೆಳವಣಿಗೆಯೆ ಶಿಕ್ಷಕರ ಆಶಯ ಆಗಿರುತ್ತದೆ ಎಂದರು.
ಉಪನ್ಯಾಸ ಸಿ. ಎಸ್. ಪೂಜಾರಿ ಮಾತನಾಡಿ ಮಕ್ಕಳ ಪ್ರೀತಿ,ವಿಶ್ವಾಸ ನೋಡಿ ಶಿಕ್ಷಕನಾಗಿರುವುದು ಸಾರ್ಥಕವಾಯಿತು. ಶಿಕ್ಷಕನ ನಿಜವಾದ ಧರ್ಮ ಜಾತಿಯಲ್ಲ ಶಿಕ್ಷಣ ಎಂದರು.
ಮುಖ್ಯೋಪಾದ್ಯಾಯ ಎಸ್. ಬಿ. ಬಿರಾದಾರ ಮಾತನಾಡಿದರು.
ವಾಣಿಜ್ಯ ತೆರಿಗೆ ಅಧಿಕಾರಿಗ ಸಿ. ಎಸ್. ಹಡಪದ, ಮುಖ್ಯೋಪಾಧ್ಯಾಯ ಸಿ .ಆರ್. ಝೆಂಡೆ, ಕಮಲಾ ಹಂಡಿ ಮಾತನಾಡಿದರು. ಅಕಾಲಿಕ ನಿಧನ ಹೊಂದಿದ ಶಿಕ್ಷಕರಿಗೆ ಮೌನ ಆಚರಿಸಿ ಸ್ಮರಿಸಲಾಯಿತು.ಎಲ್ಲರನ್ನು ಸನ್ಮಾನಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಸಾನಿಧ್ಯವನ್ನು ಬಾಬಾನಗರ ಹಿರೇಮಠದ ರಾಚಯ್ಯ ಹಿರೇಮಠ ವಹಿಸಿದ್ದರು. ಅಧ್ಯಕ್ಷತೆಯನ್ನು ಬಿ.ಜಿ ಸಜ್ಜನ್ ವಹಿಸಿದ್ದರು.
ಎಸ್. ಜಿ. ಪುಕಾಳೆ, ಎನ್. ಸಿ. ಶರ್ಮಾ,ಎನ್. ಎ.ಸ್ ಜೊಳ್ಳಿ , ಎಚ್. ಎಲ್. ಪಾಂಡುಗೋಳ, ಗೀತಾ ಪಾಟೀಲ, ಜಿ. ಎಸ್. ಭಜಂತ್ರಿ , ಡಿ. ಎಲ್. ಪಿಂಜಾರ, ಕೆ. ಬಿ. ಶಿರಗೂರ, ಜಿ. ಎಸ್. ಬಿರಾದಾರ ಎಲ್ಲ ಶಿಕ್ಷಕರು ಉಪಸ್ಥಿತರಿದ್ದರು.
ಅಪ್ಪಾಸಾಹೇಬ ಭಜಂತ್ರಿ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕಿ ಪವಿತ್ರಾ ಲೋಣಿ ಕಾರ್ಯಕ್ರಮ ನಿರೂಪಿಸಿದರು. ಸವಿತಾ ಬಿರಾದಾರ ಸ್ವಾಗತಿಸಿದರು. ಜ್ಯೋತಿ ಪಾಟೀಲ ಪ್ರಾರ್ಥನೆ ಹೇಳಿದರು, ವೀರಭದ್ರ ಸಾವಳಗಿ ವಂದಿಸಿದರು.

