Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದ ನಾಗಠಾಣದಲ್ಲಿ ಸುಮಾರು ೧೦ ಗುಂಟೆ ಜಾಗದಲ್ಲಿ ಸುಸಜ್ಜಿತವಾಗಿ ನಿರ್ಮಿಸಲಾದ ನಾಗಠಾಣ ಬಸ್ ನಿಲ್ದಾಣಕ್ಕೆ ಮಂಗಳವಾರ ಸಾರಿಗೆ ಹಾಗೂ ಮುಜರಾಯಿ ಖಾತೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ಉದ್ಘಾಟನೆ ನೆರವೇರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಗ್ರಾಮದ ಬಹುದಿನಗಳ ಬೇಡಿಕೆಯಾದ ಸುಸಜ್ಜಿತ ಬಸ್ ನಿಲ್ದಾಣ ೧.೫ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿ ಉದ್ಘಾಟನೆ ನೆರವೇರಿಸಲಾಗಿದ್ದು, ಗ್ರಾಮದ ನಾಗರಿಕರು ಬಸ್ ನಿಲ್ಧಾಣದ ಸ್ವಚ್ಚತೆ ಕಾಪಾಡಿಕೊಂಡು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.ನಾಗಠಾಣ ಕ್ಷೇತ್ರದ ಶಾಸಕರಾದ ವಿಠ್ಠಲ ದೋಂಡಿಬಾ ಕಟಕದೊಂಡ ಮಾತನಾಡಿ, ಆದಷ್ಟು ಶೀಘ್ರವಾಗಿ ಕುಡಿಯುವ ನೀರಿನ ಸಮಸ್ಯೆಗಳನ್ನು ನಿವಾರಿಸಲು ಈ ಬಾಗದ ಕೆರೆಗಳನ್ನು ತುಂಬಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಇದರಿಂದ ಈ ಭಾಗದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಲಿದೆ. ಅದರೊಂದಿಗೆ ರಸ್ತೆ ದುರಸ್ತಿ ಹಾಗೂ ವಿದ್ಯುತ್ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಅವರು ಹೇಳಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶಾರದಾ…

Read More

ಸಿಂದಗಿಯಲ್ಲಿ ವಸತಿ ಗೃಹಗಳ ಉದ್ಘಾಟನೆ- ಬಸ್ ನಿಲ್ದಾಣಕ್ಕೆ ನಾಮಕರಣ | ಸಿಂದಗಿ ನಗರ ಬಸ್ ಸಂಚಾರಕ್ಕೆ ಅನುಮತಿ | ಸಾರಿಗೆ ಹಾಗೂ ಮುಜರಾಯಿ ಖಾತೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಚಾಲಕರು, ನಿರ್ವಾಹಕರು ಸೇರಿದಂತೆ ೯೦೦೦ ಜನರನ್ನು ನೇಮಕಾತಿ ಮಾಡಿಕೊಳ್ಳಲಾಗಿದ್ದು, ಅನುಕಂಪದ ಆಧಾರದ ಮೇಲೆ ೧೦೦೦ ಜನರಿಗೆ ನೇಮಕಾತಿ ಮಾಡಿಕೊಳ್ಳಲಾಗಿದೆ ಎಂದು ಸಾರಿಗೆ ಹಾಗೂ ಮುಜರಾಯಿ ಖಾತೆ ಸಚಿವರಾದ ರಾಮಲಿಂಗಾ ರೆಡ್ಡಿ ಅವರು ಹೇಳಿದರು.ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದಿಂದ ಮಂಗಳವಾರ ಸಿಂದಗಿ ಪಟ್ಟಣದಲ್ಲಿ ನಿಗಮದ ಸಿಬ್ಬಂದಿಗಳ ನೂತನ ವಸತಿ ಗೃಹಗಳ ಉದ್ಘಾಟನೆ ಹಾಗೂ ಬಸ್ ನಿಲ್ದಾಣಕ್ಕೆ ಪೂಜ್ಯ ಶ್ರೀ ಚನ್ನವೀರ ಸ್ವಾಮಿ ಬಸ್ ನಿಲ್ದಾಣ ಸಿಂದಗಿ ನಾಮಕರಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ನೂತನವಾಗಿ ಹೊಸ ಬಸ್‌ಗಳನ್ನು ಖರೀದಿಸಲಾಗಿದ್ದು, ಕಲ್ಯಾಣ ಕರ್ನಾಟಕ ವಿಭಾಗಕ್ಕೆ ೮೦೦ ಬಸ್‌ಗಳನ್ನು ಒದಗಿಸಲಾಗಿದೆ ಎಂದು ಅವರು ಹೇಳಿದರು.ಸಿಂದಗಿಯಲ್ಲಿ ಸುಸಜ್ಜಿತವಾದ ಬಸ್ ನಿರ್ಮಾಣ ಮಾಡಿ,…

Read More

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಹಾಗೂ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ರಮೇಶ ಮಸಬಿನಾಳ ಅಸಮಾಧಾನ ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಸರ್ಕಾರ ಬಸ್ ನಿಲ್ದಾಣದ ಆವರಣದಲ್ಲಿ ಮಾಚಿದೇವರ ಪ್ರತಿಮೆ ಸ್ಥಾಪನೆಗೆ ಅಗತ್ಯ ಕ್ರಮ ವಹಿಸಬೇಕು ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಹಾಗೂ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ರಮೇಶ ಮಸಬಿನಾಳ ಆಗ್ರಹಿಸಿದ್ದಾರೆಪಟ್ಟಣದಲ್ಲಿ ಮಂಗಳವಾರ ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು. ನೂತನ ಬಸ್ ನಿಲ್ದಾಣದ ನಿರ್ಮಾಣ ಹಾಗೂ ಮಡಿವಾಳ ಮಾಚಿದೇವರ ಹೆಸರನ್ನು ನಾಮಕರಣಗೊಳಿಸುವಲ್ಲಿ ಹಿಂದಿನ ಶಾಸಕ ಸೋಮನಗೌಡ ಪಾಟೀಲ (ಸಾಸನೂರ) ಹಾಗೂ ಬಿಜೆಪಿ ಸರ್ಕಾರ ತೋರಿದ ಬದ್ಧತೆಯೇ ಕಾರಣ. ಆದರೆ ಇಂದಿನ ಬಸ್ ನಿಲ್ದಾಣದ ಉದ್ಘಾಟನಾ ಕಾರ್ಯಕ್ರಮಕ್ಕೆ ಕನಿಷ್ಟ ಸೌಜನ್ಯಕ್ಕಾದರೂ ಅವರನ್ನು ಆಮಂತ್ರಿಸದೇ ಇರುವ ಸಾರಿಗೆ ಇಲಾಖೆಯ ಅಧಿಕಾರಿಗಳ ಕ್ರಮ ಅಕ್ಷಮ್ಯವಾದುದು.ಜಗದೀಶ ಶೆಟ್ಟರ್ ನೇತೃತ್ವದ ರಾಜ್ಯದ ಹಿಂದಿನ ಬಿಜೆಪಿ ಸರ್ಕಾರ ಮಡಿವಾಳ ಮಾಚಿದೇವರ ಜನ್ಮಸ್ಥಳ ಅಭಿವೃದ್ಧಿಗಾಗಿ ೩ ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಿತ್ತು. ನಂತರ ಶಾಸಕ ಸೋಮನಗೌಡ ಪಾಟೀಲರು ತಮ್ಮ ಅವಧಿಯಲ್ಲಿ ೪.೯೫…

Read More

ಉದಯರಶ್ಮಿ ದಿನಪತ್ರಿಕೆ ಮೋರಟಗಿ: ೨೦೨೫ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಗ್ರಾಮದ ಕಲ್ಪವೃಕ್ಷ ಕಾಲೇಜಿನ ವಿದ್ಯಾರ್ಥಿಗಳು ವಿಜ್ಞಾನ, ಕಲಾ ಹಾಗೂ ವಾಣಿಜ್ಯ ವಿಭಾಗದಲ್ಲಿ ಉತ್ತಮ ಫಲಿತಾಂಶ ಮಾಡಿದ್ದು ವಿಜ್ಞಾನ ವಿಭಾಗದಲ್ಲಿ ೧೮೮ ವಿದ್ಯಾರ್ಥಿಗಳಲ್ಲಿ ೧೭ ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯನ್ನು ಪಡೆದುಕೊಂಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ೩೧ ವಿದ್ಯಾರ್ಥಿಗಳಲ್ಲಿ ಇಬ್ಬರು ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿ ಪಡೆದುಕೊಂಡಿದ್ದಾರೆ ಮತ್ತು ಕಲಾ ವಿಭಾಗದಲ್ಲಿ ೭೫ ವಿದ್ಯಾರ್ಥಿಗಳಲ್ಲಿ ೬ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ ಪಡೆದುಕೊಂಡಿದ್ದಾರೆವಿಷಯವಾರು, ಗಣಿತದಲ್ಲಿ ೨ , ಜೀವಶಾಸ್ತç ೧ , ಇತಿಹಾಸದಲ್ಲಿ ೧, ಕನ್ನಡ ೧ ನೂರಕ್ಕೆ ನೂರು ಅಂಕಗಳನ್ನು ಪಡೆದುಕೊಂಡು ಸಾಧನೆ ಮಾಡಿದ್ದಾರೆ.ಮೊದಲ ಮೂರು ಸ್ಥಾನ ಪಡೆದ ವಿದ್ಯಾರ್ಥಿಗಳುವಿಜ್ಞಾನ ವಿಭಾಗಕರವೀರ ಸಂಕೊಂಡ ೫೪೬ (೯೧%)ಶ್ವೇತಾ ಬಿರಾದಾರ ೫೪೬ (೯೧%)ದತ್ತತ್ರಾಯ ಬಂದ್ರಾಡ ೫೪೩ (೯೦.೫೦%)ವಾಣಿಜ್ಯ ವಿಭಾಗಮಾಯಮ್ಮ ಪೂಜಾರಿ ೫೩೧ (೮೮.೫೦%)ದೇವಮ್ಮ ಬಡಿಗೇರ ೫೨೯ (೮೮.೧೭%)ಸಿದ್ಧರಾಮ ಹುಲಿ ೪೭೫ (೭೯.೧೭%)ಕಲಾ ವಿಭಾಗವಂದನಾ ಹಿರೇಮಠ ೫೫೯ (೯೩.೧೭%)ಶ್ರೀದೇವಿ ಗಾಣೂರ ೫೩೩ (೮೮.೮೩%)ಸಿದ್ದು ಪಾಟೀಲ ೫೩೨ (೮೮.೬೭%)ಉತ್ತಮ ಸಾಧನೆ…

Read More

ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಜಿಲ್ಲೆಗೆ ೩ನೇ ಸ್ಥಾನ ಪಡೆದುಕೊಂಡ ಎಕ್ಸಲಂಟ್ ವಿಜ್ಞಾನ ಪ.ಪೂ ಕಾಲೇಜು ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪ್ರಸಕ್ತ ಸಾಲಿನ ಬಹು ನಿರೀಕ್ಷಿತ ಪಿಯುಸಿ ದ್ವಿತೀಯ ವರ್ಷದ ಫಲಿತಾಂಶ ಪ್ರಕಟಗೊಂಡಿದ್ದು ವಿಜಯಪುರ ನಗರದ ಪ್ರತಿಷ್ಠಿತ ಎಕ್ಸಲಂಟ್ ಪದವಿ ಪೂರ್ವ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಪಡೆದುಕೊಳ್ಳುವ ಮೂಲಕ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ.ಅದರಲ್ಲಿ ಇಶಾ ದೇಸಾಯಿ ೬೦೦ ಕ್ಕೆ ೫೮೬ ಅಂಕಗಳನ್ನು ಪಡೆಯುವುದರೊಂದಿಗೆ ಜಿಲ್ಲೆಗೆ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾಳೆ. ಗುಣಮಟ್ಟದ ಶಿಕ್ಷಣದ ಮೂಲಕ ಗುರುತಿಸಿಕೊಂಡಿರುವ ಕಾಲೇಜಿನಿಂದ ಪರೀಕ್ಷೆಗೆ ಹಾಜರಾಗಿದ ೬೨೯ ವಿದ್ಯಾರ್ಥಿಗಳ ಪೈಕಿ ೫೮೧ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಅದರಲ್ಲಿ ೧೪೪ ಡಿಸ್ಟಿಂಗ್ಷನ್, ೪೧೪ ಪ್ರಥಮ ದರ್ಜೆ ಹಾಗೂ ೨೩ ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗುವ ಮೂಲಕ ಒಟ್ಟು ೯೨.೩೬ ಪ್ರತಿಷತ ಫಲಿತಾಂಶವನ್ನು ದೊರೆತಿರುತ್ತದೆ.ಕಾವ್ಯಾ ಸಿಂಧೆ(೫೮೪), ಅಶ್ವಿನಿ ಎಕ್ಕುಂಡಿ(೫೮೧), ಗಂಗಾಧರ ಮುತ್ತಗಿ(೫೭೭), ಮೇಘಾ ಭೂಶೆಟ್ಟಿ(೫೭೫), ಪ್ರಜ್ವಲ್ ಪುರಾಣಿಕ(೫೭೪) ಸಚೀನ್ ಸಜ್ಜನ(೫೭೧), ನಂದಿನಿ ಇಂಗಳೇಶ್ವರ(೫೭೦), ಇಸ್ರೆಲ್ ಮಳಗಿ(೫೭೦), ಆಶಾ ಬಿರಾದಾರ(೫೬೯), ಹರ್ಷ ಋಣವಾಲ(೫೬೮),…

Read More

ಶರಣ ಮಡಿವಾಳ ಮಾಚಿದೇವ ಬಸ್ ನಿಲ್ದಾಣ ಉದ್ಘಾಟನೆ | ಕ.ಕ.ರ. ಸಾರಿಗೆ ಇಲಾಖೆಯ ಅಧಿಕಾರಿಗಳಿಂದ ಬೇಕಾಬಿಟ್ಟಿ ಕಾರ್ಯಕ್ರಮ ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಬಸವಣ್ಣನ ಸಮಕಾಲೀನ ಶರಣ ಮಡಿವಾಳ ಮಾಚಿದೇವ ಒಬ್ಬ ಆದರ್ಶ ವ್ಯಕ್ತಿ, ಅವರ ಪ್ರತಿಮೆ ಸ್ಥಾಪನೆ ಅತ್ಯಗತ್ಯ ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆಯ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.ಪಟ್ಟಣದಲ್ಲಿ ಮಂಗಳವಾರ ನೂತನವಾಗಿ ನಿರ್ಮಾಣಗೊಂಡ ಶರಣ ಮಡಿವಾಳ ಮಾಚಿದೇವ ಬಸ್ ನಿಲ್ದಾಣದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಮಡಿವಾಳ ಹೆಸರಲ್ಲಿ ರಾಜ್ಯದಲ್ಲಿ ಹಲವಾರು ಸ್ಥಳಗಳಿವೆ. ಇಂದು ಬಸ್ ನಿಲ್ದಾಣಕ್ಕೆ ಮಾಚಿದೇವರ ಹೆಸರು ನಾಮಕರಣಗೊಳಿಸುವಂತೆ ದೇವರಹಿಪ್ಪರಗಿ ಬಳಗ ಹಲವು ದಿನಗಳ ಹಿಂದೆಯೇ ನನ್ನನ್ನು ಬೇಟಿಯಾಗಿ ಮನವಿ ಮಾಡಿತ್ತು ಎಂದು ಹೇಳುತ್ತಾ, ರಾಜ್ಯದ ಜನತೆಗೆ ಬಸ್‌ಗಳ ಕೊರತೆ ಕಾಡುತ್ತಿದೆ ಆದ್ದರಿಂದ ನೂತನವಾಗಿ ೮೦೦ ಬಸ್‌ಗಳನ್ನು ಇಲಾಖೆಗೆ ನೀಡಲಾಗುತ್ತಿದೆ ಎಂದರು.ಅಧ್ಯಕ್ಷತೆ ವಹಿಸಿದ ಶಾಸಕ ರಾಜುಗೌಡ ಪಾಟೀಲ(ಕುದರಿಸಾಲವಾಡಗಿ) ಮಾತನಾಡಿ, ಹಿಂದಿನ ಸರ್ಕಾರದ ಅವಧಿಯಲ್ಲಿಯೇ ಬಸ್ ನಿಲ್ದಾಣದ ಶಂಕುಸ್ಥಾಪನೆಯೊಂದಿಗೆ ನಿರ್ಮಾಣವಾಗಿದ್ದು, ಮುಂದಿನ ದಿನಗಳಲ್ಲಿ ಸಚಿವರು ಬಸ್ ನಿಲ್ದಾಣದ ಆವರಣದಲ್ಲಿ…

Read More

ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಆಲಮಟ್ಟಿ ಜಲಾಶಯದ 26 ಗೇಟ್ಗಳ ಮೂಲಕ ನೀರು ಬಿಟ್ಟಿದ್ದನ್ನು ಖಂಡಿಸಿ ರೈತರು ಸೋಮವಾರ ಕೃಷ್ಣಾ ನದಿಯಲ್ಲಿ ಇಳಿದು ಪ್ರತಿಭಟಿಸಿದರು.ಅಖಂಡ ಕರ್ನಾಟಕ ರೈತ ಸಂಘದ ಕಾರ್ಯಕರ್ತರು ನಾರಾಯಣಪುರ ಜಲಾಶಯಕ್ಕೆ ನೀರು ಬಿಟ್ಟಿದ್ದನ್ನು ಖಂಡಿಸಿ ನೀರಿಗಿಳಿದು ಪ್ರತಿಭಟಿಸಿದರು.ಸರ್ಕಾರದ ವಿರುದ್ಧ ಹಾಗೂ ಜಲಸಂಪನ್ಮೂಲ ಸಚಿವರ ವಿರುದ್ಧ ಘೋಷಣೆ ಕೂಗಿದರು.ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಜಿಲ್ಲೆಗೆ ಕುಡಿಯುವ ನೀರಿಗೂ, ಕೆರೆಗಳ ಭರ್ತಿಗೂ ನೀರು ಹರಿಸಲು ಅಧಿಕಾರಿಗಳು ಮೀನಮೇಷ ಎಣಿಸುತ್ತಾರೆ, ಆದರೆ ನಾರಾಯಣಪುರ ಜಲಾಶಯಕ್ಕೆ ಬೇಕಾಬಿಟ್ಟಿ ನೀರು ಹರಿಸುತ್ತಾರೆ ಎಂದು ಆಪಾದಿಸಿದರು. ಜಿಲ್ಲೆಯ ಕೆರೆಗಳ ಭರ್ತಿಗೆ ನೀರು ಹರಿಸುವರೆಗೂ ಪ್ರತಿಭಟನೆ ಹಿಂದಕ್ಕೆ ಪಡೆಯುವುದಿಲ್ಲ, ನಾರಾಯಣಪುರ ಜಲಾಶಯಕ್ಕೆ ಹರಿಸುವ ನೀರಿನ ಅಗತ್ಯ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.ಅವಳಿ ಜಿಲ್ಲೆಯ ಬಗ್ಗೆ ಅಧಿಕಾರಿಗಳ ಹಾಗೂ ಸರ್ಕಾರದ ನಿರ್ಲಕ್ಷ ಖಂಡಿಸಿ ಈ ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು.ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ಆಗಮಿಸಿದ ಕೆಬಿಜೆಎನ್ಎಲ್ ಅಧಿಕಾರಿಗಳು, ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದರು.…

Read More

ಲೇಖನ- ಪ್ರೊ. ಶಾರದಾ ಪಾಟೀಲಬಾದಾಮಿ ಉದಯರಶ್ಮಿ ದಿನಪತ್ರಿಕೆ ಮಹಿಳೆಯರ ಸ್ವಾತಂತ್ರ್ಯ ಲೀಗ್ ಯುನೈಟೆಡ್ ಕಿಂಗ್‌ಡಂನಲ್ಲಿ ಮಹಿಳೆಯರ ಮತದಾನದ ಹಕ್ಕು ಹಾಗೂ ಲೈಂಗಿಕ ಸಮಾನತೆಗಾಗಿ ಅಭಿಯಾನವನ್ನು ನಡೆಸಿತ್ತು. ಪಂಖರ್ಸ್ಟ್‌ಗಳು ತಮ್ಮ ಸದಸ್ಯರಿಂದ ಪ್ರಜಾಸತ್ತಾತ್ಮಕ ಬೆಂಬಲವಿಲ್ಲದೆ ಆಡಳಿತ ನಡೆಸಲು ನಿರ್ಧರಿಸಿದರು, ನಂತರ ಇದು ಉಗ್ರಗಾಮಿ ಮತದಾರರ ಒಂದು ಭಾಗವಾಗಿತು.ಇತಿಹಾಸ೧೯೦೭ ರಲ್ಲಿ ತೆರೇಸಾ ಬಿಲ್ಲಿಂಗ್ಟನ್-ಗ್ರೆಗ್, ಚಾರ್ಲೆಟ್ ಡೆಸ್ಪಾರ್ಡ್, ಆಲಿಸ್ ಸ್ಕೋಫೀಲ್ಡ್, ಎಡಿತ್ ಹೌ-ಮಾರ್ಟಿನ್ ಹಾಗೂ ಮಾರ್ಗರೇಟ್ ನೆವಿನ್ಸನ್ ಸೇರಿದಂತೆ ಮಹಿಳಾ ಸಾಮಾಜಿಕ ಹಾಗೂ ರಾಜಕೀಯ ಒಕ್ಕೂಟದ ಎಪ್ಪತ್ತೇಳು ಸದಸ್ಯರು ಸೇರಿ ಈ ಗುಂಪನ್ನು ಸ್ಥಾಪಿಸಿದ್ದರು. ಇದರ ವಾರ್ಷಿಕ ಸಮ್ಮೇಳನವನ್ನು ರದ್ದುಗೊಳಿಸಲಾಗಿದೆ. ಭವಿಷ್ಯದ ನಿರ್ಧಾರಗಳನ್ನು ಅವರು ನೇಮಿಸುವ ಸಮಿತಿಯು ತೆಗೆದುಕೊಳ್ಳುತ್ತದೆ ಎಂಬ ಕ್ರಿಸ್ಟೇಬೆಲ್ ಪ್ಯಾನ್‌ಖರ್ಸ್ಟ್ ಅವರ ಪ್ರಕಟಣೆಯನ್ನು ಅವರು ಒಪ್ಪಲಿಲ್ಲ. [೨] [೩]ತೆರಿಗೆಗಳನ್ನು ಪಾವತಿಸದಿರುವುದು ಜನಗಣತಿ ನಮೂನೆಗಳನ್ನು ಪೂರ್ಣಗೊಳಿಸಲು ನಿರಾಕರಿಸುವುದು ಹಾಗೂ ಸಂಸತ್ತಿನ ಸದನಗಳಲ್ಲಿನ ವಸ್ತುಗಳಿಗೆ ಸದಸ್ಯರು ತಮ್ಮನ್ನು ತಾವು ಬಂಧಿಸಿಕೊಳ್ಳುವುದು ಸೇರಿದಂತೆ ಪ್ರದರ್ಶನಗಳನ್ನು ಆಯೋಜಿಸುವುದು ಮುಂತಾದ ಅಹಿಂಸಾತ್ಮಕ ರೀತಿಯ ಪ್ರತಿಭಟನೆಗಳ ಪರವಾಗಿ ಹಿಂಸಾಚಾರವನ್ನು ಲೀಗ್ ವಿರೋಧಿಸಿತು.…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಕಾರ್ಮಿಕ ಇಲಾಖೆ ಹಾಗೂ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ವತಿಯಿಂದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಗೌಂಡಿ, ವೆಲ್ಡಿಂಗ್, ಟೈಲ್ಸ್, ರೋಡ್ ವರ್ಕ ಕಿಟ್ ಗಳನ್ನು ವಿತರಿಸಲು ಅರ್ಜಿ ಆವ್ಹಾನಿಸಲಾಗಿದೆ.ಫಲಾನುಭವಿಯ ಗುರಿತಿನ ಚೀಟಿ, ಆಧಾರ ಕಾರ್ಡ ಮತ್ತು ಭಾವಚಿತ್ರದೊಂದಿಗೆ ಮುದ್ದೇಬಿಹಾಳ ಹಾಗೂ ತಾಳಿಕೋಟೆ ಕಾರ್ಮಿಕ ನಿರೀಕ್ಷಕರ ಕಚೇರಿಯಲ್ಲಿ ಎ೮ ರಿಂದ ಎ೧೯ ರವರೆಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಕಿಟ್‌ಗಳನ್ನು ಜೇಷ್ಟತಾ ಆಧಾರದ ಮೇಲೆ ವಿತರಿಸಲಾಗುವದು ಎಂದು ಕಾರ್ಮಿಕ ನಿರೀಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಜೈ ಶ್ರೀ ರಾಮ್, ಯಡಿಯೂರಪ್ಪ, ವಿಜಯೇಂದ್ರ, ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಇವರುಗಳಿಗೆ ಧಿಕ್ಕಾರ, ಹಿಂದು ಹುಲಿ ಬಸನಗೌಡ ಪಾಟೀಲ ಯತ್ನಾಳರಿಗೆ ಜಯವಾಗಲಿ ಈ ಆಕ್ರೋಷದ ಘೋಷಣೆಗಳು ಕೇಳಿ ಬಂದಿದ್ದು ಪಟ್ಟಣದಲ್ಲಿ.ಬಿಜೆಪಿಯಿಂದ ಯತ್ನಾಳರನ್ನು ಉಚ್ಛಾಟಿಸಿದ ಹಿನ್ನೆಲೆ ಸೋಮುವಾರ ನಡೆದ ಪ್ರತಿಭಟನೆಯಲ್ಲಿ ಪಂಚಮಸಾಲಿ ಸಮಾಜದ ಮುಖಂಡರು, ಯತ್ನಾಳರ ಅಭಿಮಾನಿಗಳು, ಹಿಂದೂಪರ ಸಂಘಟನೆಗಳು ಉರಿ ಬಿಸಿಲನ್ನೂ ಲೆಕ್ಕಸದೇ ತಲೆಯ ಮೇಲೆ ಕೇಸರಿ ಟೋಪಿ, ಕೊರಳಲ್ಲಿ ಕೇಸರಿ ಶಾಲು ಧರಿಸಿ, ಇಲ್ಲಿನ ಬನಶಂಕರಿ ದೇವಸ್ಥಾನದಿಂದ ಮುಖ್ಯ ಬಜಾರ, ಬಸವೇಶ್ವರ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಅಂಬೇಡ್ಕರ್ ವೃತ್ತ ಮಾರ್ಗವಾಗಿ ಕಿತ್ತೂರು ರಾಣಿ ಚನ್ನಮ್ಮ ವೃತ್ತದವರೆಗೆ ತಮ್ಮ ನಾಯಕನಿಗೆ ನ್ಯಾಯ ದೊರಕಬೇಕೆಂದು ಪ್ರತಿಭಟಿಸಿದರು.ಈ ವೇಳೆ ಬಸವೇಶ್ವರ ವೃತ್ತದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಯತ್ನಾಳರ ಅಭಿಮಾನಿ ರಾಘವ ಅಣ್ಣಿಗೇರಿ ಮಾತನಾಡಿ, ಇವತ್ತಿನ ಹೋರಾಟ ಯಾರೊಬ್ಬರ ವಿರುದ್ಧ ಅಲ್ಲ. ಬಿಜೆಪಿಯ ವಿಚಾರ ಧಾರೆಯನ್ನು ವಿರೋಧ ಮಾಡಲಿಕ್ಕೆ ಅಲ್ಲ. ರಾಷ್ಟ್ರೀಯ ನಾಯಕರಿಗೆ ಟೀಕೆ ಟಿಪ್ಪಣಿಗಳನ್ನು ಮಾಡಲಿಕ್ಕಲ್ಲ. ಯಾರದೋ…

Read More