Subscribe to Updates
Get the latest creative news from FooBar about art, design and business.
Author: editor.udayarashmi@gmail.com
Udayarashmi kannada daily newspaper
ಚೈತ್ರವೇ ಕೇಳು ಈ ಮೊರೆಯನನ್ನವಳು ಬರುವ ಆ ಸಮಯಸುರಿಯೋ ಹೂವಿನ ಮಳೆಯಕೋಗಿಲೆಯೆ ಹಾಡು ನೀನೀಗನನ್ನವಳು ನಲಿದು ಬರುವಾಗಶುಭವ ಕೋರಿ ಹೊಸರಾಗ ನನ್ನೆದೆಯ ಸ್ವರವೀಣೆನೀ ನುಡಿಸು ಓ ಜಾಣೆ.ಪ್ರತಿಸ್ವರವು ಮಿಡಿದಿಹುದುನಿನ್ನ ಹೆಸರ ನೀ ಕಾಣೆತಾವರೆಯ ಮೊಗದೊಳಗೆಮುಗುಳುನಗೆ ಮಲ್ಲಿಗೆಯಕಾಣಲು ಕಾದಿದೇ ಹೃದಯ ಲೋಕಕೆಲ್ಲ ಹುಣ್ಣಿಮೆಯುಒಂದು ತಿಂಗಳಿಗೊಮ್ಮೆನನ್ನವಳ ನಗುವಿಂದಅನುದಿನವೂ ಹುಣ್ಣಿಮೆದುಂಬಿಗಳೇ ಹೊರಡಿ ಇಲ್ಲಿಂದಹೂವಲ್ಲ ಈ ಚೆಲುವುನನ್ನ ಪ್ರೇಯಸಿಯ ಮೊಗವು ಗಿರಿನವಿಲು ಗರಿಬಿಚ್ಚಿಕಾಯುತಿದೆ ನಿನಗಾಗಿಹೊಸದೊಂದು ಬಿನ್ನಾಣಕಲಿಯುವ ಸಲುವಾಗಿನೀ ಬರುವ ಸೂಚನೆಗೆಧರೆಯೆಲ್ಲ ಹಸಿರಾಯ್ತುಸಂತಸ ಹೊನಲಾಯ್ತು
ಸಾಯುವುದು ಅಷ್ಟು ಸುಲಭವಾ…? ಪ್ರತಿ ಸಲ ಆತ್ಮಹತ್ಯೆ ವಿಷಯ ಕಿವಿಗೆ ಬಿದ್ದಾಗ ನನ್ನ ಮನದಲ್ಲಿ ಮೂಡುವ ಪ್ರಶ್ನೆ ಇದು.. ನೀವು ಹೇಳ್ತಿರಾ. ಅಂತಹ ಪರಿಸ್ಥಿತಿ ಒತ್ತಡದಲ್ಲಿ ಸಿಲುಕಿದಾಗ ಬೇರೆ ದಾರಿ ಕಾಣದೆ ಸಾವಿನ ಹಾದಿ ಹಿಡಿತಾರೆ ಅಂತಾ, ಸರಿ ಒಪ್ಪುವೆ ಹಾಗಂತ ಅವರಂತ ಕಷ್ಟ ಬೇರೆ ಯಾರು ಅನುಭವಿಸಿಯೇ ಇಲ್ವಾ ..? ಈ ವಿಶಾಲವಾದ ಪ್ರಪಂಚದಲ್ಲಿ ಸಂಪೂರ್ಣ ಸುಖಿಗಳು ಕೋಟಿಗೊಬ್ಬರು ಸಿಗಬಹುದು, ಉಳಿದಂತೆ ಎಲ್ಲರಿಗೂ ಒಂದಲ್ಲ ಒಂದು ಕಷ್ಟ ನೋವು ಇದ್ದೇ ಇರುತ್ತೆ. ಆ ದೇವರು ಮಹಾನ್ ಸ್ವಾರ್ಥಿ ಅನ್ನಬಹುದು ಏಕೆಂದರೆ ಎಲ್ಲರಿಗೂ ಸಂಪೂರ್ಣ ಸುಖ ಕೊಟ್ಟರೆ ನನ್ನ ಪೂಜೆ ಮಾಡುವವರು ಯಾರು ಎಂಬ ಯೋಚನೆ ಇರಬಹುದು. ಅವನ ಯೋಚನೆ ಸರಿಯಾಗಿದೆ ಅಲ್ವಾ ಏಕೆಂದರೆ ನಾವೆಲ್ಲಾ ಸಂಕಟ ಬಂದಾಗ ಮಾತ್ರ ದೇವರ ಮೊರೆ ಹೋಗ್ತಿವಿ, ಸುಖದಲ್ಲಿ ದೇವರ ಮನಸಾರೆ ಪೂಜಿಸಿ ಸ್ಮರಿಸುವದು ಕಡಿಮೆ ಎಂದೇ ಹೇಳಬಹುದು. ಸಂಪೂರ್ಣ ಸಂತೋಷ ಕೊಟ್ಟರೆ ಮನುಷ್ಯನ ಅಹಂಕಾರ ಗರ್ವ ಮೀತಿ ಮೀರಬಹುದು ಅನ್ನೋ ಉದ್ದೇಶ ಕೂಡ…
ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ | ಹೆಚ್ಚಾದ ಅಂತರ್ಜಲ | ಬೆಳೆಗಳ ರಕ್ಷಣೆ | ಕಡಿಮೆಯಾದ ಬಿಸಿಲ ಪ್ರಖರತೆ ವಿಜಯಪುರ: ಜಲಸಂಪನ್ಮೂಲ ಸಚಿವರಾಗಿದ್ದಾಗ ಎಂ. ಬಿ. ಪಾಟೀಲರು ಕೈಗೊಂಡ ನೀರಾವರಿ ಯೋಜನೆಗಳು ಕರ್ನಾಟಕವಷ್ಟೇ ಅಲ್ಲ, ಪಕ್ಕದ ಮಹಾರಾಷ್ಟ್ರದ ಹತ್ತಾರು ಗ್ರಾಮಗಳಲ್ಲಿ ಬೇಸಿಗೆಯ ಬಿಸಲಿನ ಪ್ರಖರತೆಯನ್ನು ಕಡಿಮೆ ಮಾಡಿದೆ.ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆಯಡಿ ಗಡಿ ಭಾಗದ ಗ್ರಾಮಗಳ ಕೆರೆಗಳಿಗೆ ನೀರು ಹರಿಸಲಾಗಿದ್ದು, ರಾಜ್ಯದ ವ್ಯಾಪ್ತಿಯ ಕೆರೆಗಳು ಭರ್ತಿಯಾಗಿ ಪಕ್ಕದ ಮಹಾರಾಷ್ಟ್ರದಲ್ಲಿ ಕನ್ನಡಿಗರೇ ಹೆಚ್ಚಾಗಿರುವ ಹತ್ತಾರು ಗ್ರಾಮಗಳ ಕೆರೆಗಳಿಗೂ ನೀರು ಸಿಗುವಂತೆ ಮಾಡಿದೆ. ಅಷ್ಟೇ ಅಲ್ಲ, ಈ ಗ್ರಾಮಗಳಲ್ಲಿ ಅಂತರ್ಜಲ ಹೆಚ್ಚಾಗಲು ಮತ್ತು ಬೆಳೆಗಳ ರಕ್ಷಣೆಗೆ ಕಾರಣವಾಗಿದೆ.ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ ತಾಲೂಕಿನ ಮುಚ್ಚಂಡಿ, ಸಿದ್ಧನಾಥ, ಐಗನಾಳ-ಜಾಲ್ಯಾಳ ಖುರ್ದ, ಪಾಂಡಿಜೆರಿ, ತುರ್ಕ ಆಸಂಗಿ, ಸಂಖ, ಮೋಟೆವಾಡಿ, ಭೀವರ್ಗಿ, ಕರಜಗಿ, ಬೆಳ್ಳುಂಡಗಿ, ಬಾಲಗಾಂವ, ಹಳ್ಳಿ, ಸುಸಲಾದ, ಮೊರಬಗಿ, ಬೋರಗಿ, ಆಕಳವಾಡಿ ಮುಂತಾದ ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿದ್ದು, ಬರಪೀಡಿತ ಗ್ರಾಮಗಳೆಂದು ಹೊಂದಿದ ಹಣೆಪಟ್ಟಿಯನ್ನು ತೊಡೆದು ಹಾಕಿದೆ.…
ವಿಜಯಪುರ: ವೃತ್ತಿಪರರು ಕನಿಷ್ಠ ಆರು ತಿಂಗಳಿಗೆ ಒಮ್ಮೆಯಾದರೂ ಸಮಗ್ರ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಿವಾಜಿ ಅನಂತ ನಲವಡೆ ಹೇಳಿದ್ದಾರೆ.ಶ್ರೀ ಬಿ. ಎಂ. ಪಾಟೀಲ ಸೂಪರ್ ಸ್ಟೇಶಾಲಿಟಿ ಆಸ್ಪತ್ರೆ ಮತ್ತು ನ್ಯಾಯವಾದಿಗಳ ಸಂಘ ನ್ಯಾಯವಾದಿಗಳಿಗಾಗಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.ಪ್ರತಿಯೊಬ್ಬರಿಗೂ ಆರೋಗ್ಯ ಬಹುಮುಖ್ಯ. ಅದರಲ್ಲೂ ವೃತ್ತಿಪರರು ಕೆಲಸದ ಜೊತೆಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಆಗಾಗ ತಪಾಸಣೆ ಮಾಡಿಸುವುದರಿಂದ ನಾನಾ ಕಾಯಿಲೆಗಳಿಗೆ ಆರಂಭದಲ್ಲಿಯೇ ಚಿಕಿತ್ಸೆ ಪಡೆಯುವ ಮೂಲಕ ರೋಗಗಳನ್ನು ತಡೆಯಬಹುದಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಮಾತನಾಡಿದ ವೈದ್ಯಕೀಯ ಮಂಡಳಿ ನಿರ್ದೇಶಕ ಡಾ.ವಿಜಯಕುಮಾರ ಕಲ್ಯಾಣಪ್ಪಗೋಳ, ಉಚಿತ ಆರೋಗ್ಯ ತಪಾಸಣೆ ಶಿಬಿರಗಳಿಂದಾಗುವ ಲಾಭಗಳ ಕುರಿತು ಮಾಹಿತಿ ನೀಡಿದರು.ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಐ.ಜಿ.ಚಾಲಶೆಟ್ಟಿ ಮಾತನಾಡಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಸಂಜೀವ ಬಿ. ಜಾಹಾಗೀರದಾರ, ಕಾರ್ಯದರ್ಶಿ ಅಶೋಕ ಜೈನಾಪುರ, ಡಾ.ದರ್ಶನ ಬಿರಾದಾರ, ಡಾ.ಸೃಷ್ಠಿ ವಾಲದ, ಡಾ.ಮೀಲನ ಕುಲಕರ್ಣಿ, ವೀರಣ್ಣ, ರವಿ, ಆಸ್ಮಾ ಪಟೇಲ…
ಬ್ರಹ್ಮದೇವನಮಡು: ಶ್ರೀ ಕಲ್ಶಾಣದೇಶ್ವರ ಮಠ ಐತಿಹಾಸಿಕ ಹಿನ್ನೆಲೆಯುಳ್ಳ ಧಾಮಿ೯ಕ ಕೇಂದ್ರವಾಗಿದ್ದು,ಭಕ್ತರ ಏಳ್ಗೆಗಾಗಿ ಸದಾ ಶ್ರಮಿಸಲಾಗುತ್ತಿದೆ.ಜಾತ್ರೆಗಳ ಆಚರಣೆಯಲ್ಲಿ ಪಾಲ್ಗೊಳ್ಳುವುದರಿಂದ ನೆಮ್ಮದಿ ನೆಲೆಗೊಳ್ಳುತ್ತದೆ ಎಂದು ಸಿಂದಗಿ ಕಾಂಗ್ರೆಸ್ ಪಕ್ಷದ ಅಭ್ಶಥಿ೯ ಅಶೋಕ ಮನಗೂಳಿ ಹೇಳಿದರು.ಸಿಂದಗಿ ತಾಲೂಕು ಸುಕ್ಷೇತ್ರ ಹೊನ್ನಳ್ಳಿ – ಬ್ರಹ್ಮದೇವನಮಡು ಗ್ರಾಮದಲ್ಲಿ ಕಲ್ಶಾಣದೇಶ್ವರ ಜಾತ್ರೆ ಅಂಗವಾಗಿ ಸೋಮವಾರ ರಾತ್ರಿ ಹಮ್ಮಿಕೊಂಡಿದ್ದ ಸಿದ್ಧಿಪುರುಷ ಸದ್ಗುರು ಶ್ರೀ ವಿಶ್ವರಾಧ್ಶ ತೊಟ್ಟಿಲೋತ್ಸವ ಕಾಯ೯ಕ್ರಮದ ಅಧ್ಶಕ್ಷತೆ ವಹಿಸಿ ಮಾತನಾಡಿ,ಒಳ್ಳೆಯ ವಿಚಾರಗಳನ್ನು ಕೇಳುತ್ತಿರಬೇಕು.ಪುರಾಣ,ಪುಣ್ಶ ಕಥೆ,ಶಾಸ್ತ್ರ,ಉತ್ತಮ ಪಾರಾಯಣ ಕೇಳಬೇಕು.ಕೇಳಿದನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಎಲ್ಲರ ಒಳಿತು ಬಯಸುವುದೇ ಮಾನವ ಧಮ೯. ಸತ್ಕಾಯ೯ಗಳೆಂದರೆ ದೇವರಿಗೆ ಪ್ರೀತಿ. ಪುರಾಣಗಳು ಈ ನೆಲದ ಸತ್ವ.ಸಂಪ್ರದಾಯವನ್ನು ಹತ್ತಿಕ್ಕಿ ನೆಮ್ಮದಿಯಿಂದ ಜೀವಿಸಲು ಸಾಧ್ಶವಿಲ್ಲ ಎಂದರು.ಬೋರಗಿ – ಪುರದಾಳ ವಿಶ್ವರಾಧ್ಶ ಮಠದ ತಪೋರತ್ನಂ ಮಹಾಲಿಂಗೇಶ್ವರ ಸ್ವಾಮೀಜಿ, ಯಡ್ರಾಮಿ ವಿರಕ್ತ ಮಠದ ಸಿದ್ದಲಿಂಗ ಸ್ವಾಮೀಜಿ ಸಾನಿಧ್ಶವಹಿಸಿ ಮಾತನಾಡಿ, ಜಾತ್ರೆ ಹಾಗೂ ಉತ್ಸವಗಳು ಜನರಲ್ಲಿ ಸಾಮರಸ್ಶ ಬೆಳೆಸುತ್ತವೆ. ಪ್ರತಿಯೊಬ್ಬರು ಧಾಮಿ೯ಕ ಕಾಯ೯ಗಳಲ್ಲಿ ಪಾಲ್ಗೊಳ್ಳಬೇಕು ಎಂದರು.ಶ್ರೀಮಠದ ಕಲ್ಶಾಣದಯ್ಶ ಸ್ವಾಮೀಜಿ, ಚಂದ್ರಶೇಖರ ಪುರಾಣಿಕ, ದಯಾನಂದ ಹಿರೇಮಠ, ಶ್ರೀಶೈಲ್…
ಇಂಡಿ: ಹೆಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದ ವೇಳೆಯಲ್ಲಿ ನಮ್ಮ ಜಿಲ್ಲೆಗೆ ಹಲವಾರು ನೀರಾವರಿ ಯೋಜನೆಗಳನ್ನ ಜಾರಿಗೆ ತಂದಿದ್ದಾರೆ. ಕೃಷ್ಣಾ ಮೇಲ್ದಂಡೆ ಯೋಜನೆ ಜಾರಿಗೆ ತರುವ ಮೂಲಕ ಅನ್ನದಾತರ ಅರಾಧ್ಯ ದೈವ ಎಂದೇ ಕರೆಸಿಕೊಂಡಿದ್ದಾರೆ ಎಂದು ಜಿಪಂ ಮಾಜಿ ಸದಸ್ಯೆ ಪದ್ಮಾವತಿ ಬಸವರಾಜ ಪಾಟೀಲ ಹೇಳಿದರು.ಮಂಗಳವಾರ ಪಟ್ಟಣದ ವಾರ್ಡ್ ನಂ ೧೮.೧೯ರಲ್ಲಿ ಜೆಡಿಎಸ್ ಅಭ್ಯರ್ಥಿ ಬಿ.ಡಿ. ಪಾಟೀಲರ ಪರವಾಗಿ ಮನೆ-ಮನೆಗೆ ತೆರಳಿ ಮತಯಾಚನೆ ಮಾಡಿ ಅವರು ಮಾತನಾಡಿದರು.ಪಂಚರತ್ನ ಯೋಜನೆಯ ಮಹತ್ವ ತಿಳಿಸಿ ಹಾಗೂ ಭವಿಷ್ಯದ ದಿನಗಳಲ್ಲಿ ಇಂಡಿ ನಗರದ ಸರ್ವಾಂಗೀಣ ಅಭಿವೃದ್ಧಿಗೆ ಜೆಡಿಎಸ್ಗೆ ಮತ ನೀಡಿ ಎಂದ ಅವರು, ನನ್ನ ಪತಿ ಬಡವರ ಬಗ್ಗೆ ಅಪಾರವಾದ ಕಳಕಳಿಯನ್ನು ಹೋಂದಿದ್ದು, ಇಂಡಿ ತಾಲೂಕಾ ಸಮಗ್ರ ನೀರಾವರಿ ಯೋಜನೆ ಅನುಷ್ಠಾನಕ್ಕಾಗಿ ಸುಮಾರು ೪೫ ದಿನಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಿದ ಫಲವಾಗಿ ಇಂದು ಹೋರ್ತಿ ಭಾಗಕ್ಕೆ ರೇವಣಸಿದ್ದೇಶ್ವರ ಏತನೀರಾವರಿಗೆ ಚಾಲನೆ ಸಿಕ್ಕಿದೆ. ೨೦೨೩ ರ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಬಿ.ಡಿ. ಪಾಟೀಲರಿಗೆ ಬಹುಮತದಿಂದ ಗೆಲ್ಲಿಸಿ ಎಂದು…
ಇಂಡಿ: ಕೃಷ್ಣಾ ಕೊಳ್ಳದ ನೀರಾವರಿ ಯೋಜನೆಗಳು ಯಥವತ್ತಾಗಿ ಜಾರಿಗೆ ತರುವ ಮೂಲಕ ಈ ಭಾಗದಲ್ಲಿ ಹಸಿರು ಕ್ರಾಂತಿಯನ್ನು ಮಾಡುತ್ತೇನೆ. ನುಡಿದಂತೆ ನಡೆದುಕೊಂಡು ನಿಮ್ಮ ಸೇವಕನಾಗಿ ದುಡಿದಿದ್ದೇನೆ. ಹೃದಯ ವೈಶಾಲ್ಯತೆಯುಳ್ಳ ನೀವುಗಳು ಮತ್ತೊಮ್ಮೆ ನನಗೆ ಕೂಲಿ ರೂಪದಲ್ಲಿ ಮತ ನೀಡಿ ಆಶಿರ್ವಾದ ಮಾಡಿ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಮನವಿ ಮಾಡಿದರು.ತಾಲೂಕಿನ ಬಸನಾಳ ಗ್ರಾಮದಲ್ಲಿ ಇಂಡಿ ವಿಧಾನಸಭಾ ಮತಕ್ಷೇತ್ರದ ಚುನಾವಣಾ ಪ್ರಚಾರ ಸಭೆಯನ್ನುದ್ದೆಶಿಸಿ ಅವರು ಮಾತನಾಡಿದರು.ರಾಜ್ಯದಲ್ಲಿ ಇಂಡಿ ೩೨ ನೇ ಜಿಲ್ಲೆಯನ್ನಾಗಿ ಪರಿವರ್ತನೆ ಮಾಡಿ ಹೊಸ ವಿಧದಲ್ಲಿ ಸಾಗಬೇಕು. ಅಲ್ಲದೆ ಸಣ್ಣ ಕೈಗಾರಿಕೆಗಳು ಸ್ಥಾಪನೆಯಾಗಿ, ಉದ್ಯೋಗ ಸೃಷ್ಟಿಯಾಗಿ, ಕೈಗಾರಿಕಾ ಕ್ರಾಂತಿಯಾಗಬೇಕು. ಇನ್ನುಳಿದ ಭಾಗ ಸಂಪೂರ್ಣ ನೀರಾವರಿಯಾಗಬೇಕು ಎಂಬ ಕನಸು ನನ್ನದು. ಅದಕ್ಕಾಗಿ ಈ ಎಲ್ಲ ಅಭಿವ್ರದ್ದಿ ಕೆಲಸಗಳನ್ನು ಮಾಡಲು ನನಗೆ ಆಶಿರ್ವಾದ ಮಾಡಿ ಎಂದರು.ಈ ಸಂದರ್ಭದಲ್ಲಿ ಬಿ.ಎಮ್.ಕೊರೆ, ಎಮ್.ಆರ್.ಪಾಟೀಲ, ಇಲಿಯಾಸ ಬೊರಾಮಣಿ, ಜಟ್ಟೆಪ್ಪ ರವಳಿ, ಗುರನಗೌಡ ಪಾಟೀಲ, ಮುತ್ತಪ್ಪ ಪೊತೆ, ಧರ್ಮರಾಜ ವಾಲಿಕಾರ, ಮಂಜು ಕಾಮಗೊಂಡ, ಮಹಾದೇವ ಮುಜಗೊಂಡ, ಶಿವುಸಾವಕಾರ ನಿಂಬಾಳ, ತಮ್ಮಣ್ಣ…
ಸಿಂದಗಿ: ಆಮ್ ಆದ್ಮಿ ಪಕ್ಷದ ಪ್ರಣಾಳಿಕೆಯನ್ನು ಉಭಯ ಪಕ್ಷಗಳು ನಕಲು ಮಾಡುತ್ತಿವೆ. ಪ್ರಚಾರಕ್ಕೆ ಬಳಕೆ ಮಾಡುತ್ತಿರುವ ಆಶ್ವಾಸನೆಗಳನ್ನು ನಮ್ಮ ಪಕ್ಷ ಈಗಾಗಲೇ ದೆಹಲಿ ಮತ್ತು ಪಂಜಾಬ ರಾಜ್ಯದಲ್ಲಿ ಕಾರ್ಯ ರೂಪಕ್ಕೆ ತಂದಿದೆ ಎಂದು ಪಕ್ಷದ ರಾಜ್ಯ ಉಪಾಧ್ಯಕ್ಷ ರೋಹನ ಐನಾಪೂರ ಹೇಳಿದರು.ಬುಧವಾರದಂದು ಪಟ್ಟಣದ ಖಾಸಗಿ ಹೋಟೆಲ್ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿ ಮಾತನಾಡಿದ ಅವರು ಆಮ್ ಆದ್ಮಿ ಪಕ್ಷಕ್ಕೆ ರಾಷ್ಟೀಯ ಸ್ಥಾನಮಾನ ಸಿಕ್ಕಿರುವುದು ಸಂತಸದ ಸಂಗತಿ, ರಾಜ್ಯದಲ್ಲಿ ಈಗಾಗಲೇ ಬಹುತೇಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ವಿಜಯಪುರ ಜಿಲ್ಲೆಯ ೮ ಕ್ಷೇತ್ರಗಳಲ್ಲಿ ೫ ಕ್ಷೇತ್ರದ ಅಭ್ಯರ್ಥಿಗಳನ್ನು ಅಂತಿಮ ಮಾಡಲಾಗಿದೆ. ಸಿಂದಗಿ ಕ್ಷೇತ್ರದಿಂದ ರಾಜಕೀಯ ಅನುಭವ ಹೊಂದಿರುವ ಹಿರಿಯರಾದ ಮುರಿಗೆಪ್ಪಗೌಡ ರದ್ದೇವಾಡಗಿಯವರನ್ನು ಅಧಿಕೃತ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.ರಾಜ್ಯದಲ್ಲಿ ಉಭಯ ಪಕ್ಷಗಳು ನೀಡುತ್ತಿರುವ ಆಶ್ವಾಸನೆಗಳಾದ ೨೦೦ ಯೂನಿಟ್ ಉಚಿತ ವಿದ್ಯುತ್, ೨೦ ಸಾವಿರ ಲೀ ಉಚಿತ ನೀರು ಹೈಟೆಕ್ ಶಾಲೆ ಇನ್ನಿತರ ಕಾರ್ಯ ಯೋಜನೆಗಳನ್ನು ಆಮ್ ಆದ್ಮಿ ಪಕ್ಷ ದೆಹಲಿಯಲ್ಲಿ ಕಾರ್ಯ ರೂಪಕ್ಕೆ ತಂದಿದೆ. ಪಂಜಾಬನಲ್ಲಿ…
ಬಸವನಬಾಗೇವಾಡಿ: ತಾಲೂಕಿನ ಶರಣಕ್ಷೇತ್ರ ವಡವಡಗಿ ಗ್ರಾಮದ ನಂದಿ ಮಠದ ಗುರುವೀರಸಿದ್ಧ ಶಿವಯೋಗಿಗಳ ೭೩ ನೇ ಜಾತ್ರಾಮಹೋತ್ಸವದಂಗವಾಗಿ ಬುಧವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಂಭ್ರಮ,ಸಡಗರದಿಂದ ಜರುಗಿದವು.ಜಾತ್ರೆಯಂಗವಾಗಿ ಬೆಳಗ್ಗೆ ಕರ್ತೃ ಗದ್ದುಗೆಗೆ ಪೂಜೆ, ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಜರುಗಿದ ನಂತರ ಜಂಗಮ ವಟುಗಳಿಗೆ ಅಯ್ಯಾಚಾರ ವಿವಿಧ ಶ್ರೀಗಳ ಸಮ್ಮುಖದಲ್ಲಿ ಜರುಗಿತು. ಆನಂದಯ್ಯ ಸ್ಥಾವರಮಠ ಇವರ ವೈದಿಕತ್ವದಲ್ಲಿ ಪೂಜಾ ಕೈಂಕರ್ಯಗಳು ಜರುಗಿದವು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ವೀರಸಿದ್ಧ ಶಿವಯೋಗಿಗಳವರ ಬೆಳ್ಳಿ ಪಲ್ಲಕ್ಕಿ ಉತ್ಸವ ಹಾಗೂ ಲಿಂ.ಮಲ್ಲಿಕಾರ್ಜುನ ಸ್ವಾಮೀಜಿಗಳ ಭಾವಚಿತ್ರದ ಮೆರವಣಿಗೆ ಜರುಗಿತು.ಮೆರವಣಿಗೆಯಲ್ಲಿ ನಂದಿ ಮಠದ ವೀರಸಿದ್ಧ ಸ್ವಾಮೀಜಿ, ಕೊಲ್ಹಾರದ ದಿಗಂಬರೇಶ್ವರ ಮಠದ ಕಲ್ಲಿನಾಥ ದೇವರು, ಚಡಚಣದ ಷಡಕ್ಷರಿ ಸ್ವಾಮೀಜಿ, ಕೊಣ್ಣೂರಿನ ಬ್ರಹ್ಮಪ್ರಭುಲಿಂಗ ಶಿವಾಚಾರ್ಯರು, ಕೊರವಾರದ ಶ್ರೀಗಳು, ಜೆಡಿಎಸ್ ಮುಖಂಡ ರಾಜುಗೌಡ ಪಾಟೀಲ, ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜ ಡೆಂಗಿ, ಸಿದ್ದನಗೌಡ ಪಾಟೀಲ, ವೈ.ಎಸ್.ಗಂಗಶೆಟ್ಟಿ ಸೇರಿದಂತೆ ನೂರಾರು ಭಕ್ತರು ಭಾಗವಹಿಸಿದ್ದರು.ಮೆರವಣಿಗೆಯಲ್ಲಿ ಹೆಬ್ಬಾಳದ ಪುರುವಂತರು, ಧಾರವಾಡದ ಜಗಲಿ ತಂಡದವರು, ಸಾರವಾಡದ ಗೊಂಬೆ ಕುಣಿತ, ಬೇನಾಳ ಗ್ರಾಮದ ಲೇಝಿಮ್…
