Author: editor.udayarashmi@gmail.com

ವಿಜಯಪುರ: ಪಶುಸಂಗೋಪನಾ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಪ್ರಾಣಿಜನ್ಯ ರೋಗಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸೂಚಿಸಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಜಿಲ್ಲೆಯಲ್ಲಿರುವ ನಾಯಿಗಳ ಮಾಹಿತಿ ಸಂಗ್ರಹಿಸಬೇಕು. ಪ್ರಾಣಿಜನ್ಯ ರೋಗಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯೊಂದಿಗೆ ಪಶುಸಂಗೋಪನಾ ಇಲಾಖೆ ಕೈ ಜೋಡಿಸಿ, ಬೀದಿ ನಾಯಿಗಳಿಗೆ ಚುಚ್ಚುಮದ್ದು ಹಾಕುವುದು, ಜನಸಂದಣಿ ಇರುವ ಸ್ಥಳಗಳಲ್ಲಿ ರೋಗಗಳ ಕುರಿತು ತಿಳುವಳಿಕೆ ಮೂಡಿಸಿ, ರೋಗ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.ಜಿಲ್ಲೆಯ ಎಲ್ಲ ಆರೋಗ್ಯ ಸಂಸ್ಥೆಗಳಲ್ಲಿ ರೇಬಿಸ್ ಚುಚ್ಚುಮದ್ದಿನ ಔಷಧಿ (ಎಂಟಿ ರೆಬೀಸ್ ವ್ಯಾಕ್ಸೀನ್) ದಾಸ್ತಾನಿಟ್ಟುಕೊಳ್ಳಬೇಕು. ಪ್ರತಿ ಆರೋಗ್ಯ ಕೇಂದ್ರಗಳಲ್ಲಿ ೩ವ್ಯಾಕ್ಸಿನ್ ವೈಲ್‌ಗಳನ್ನು ಕಡ್ಡಾಯವಾಗಿ ಕಾಯ್ದಿರಿಸಿಕೊಳ್ಳಬೇಕು. ಅವಧಿ ಮೀರುವ ಔಷಧಿಗಳನ್ನು ಒಂದು ತಿಂಗಳು ಮುಂಚಿತವಾಗಿಯೇ ಹೊಸ ದಾಸ್ತಾನು ಪಡೆಯಲು ಕ್ರಮ ಕೈಗೊಳ್ಳಬೇಕು. ಗ್ರಾಮೀಣ ಪ್ರದೇಶದಲ್ಲಿ ರೇಬಿಸ್ ಕಾಯಿಲೆ ಹಾಗೂ ಆ್ಯಂಟಿ ರೇಬಿಸ್ ಔಷಧಿಗಳು,ನಾಯಿ ಕಡಿತದಿಂದ ರೋಗ ಹರಡದಂತೆ ತುರ್ತು…

Read More

ವಿಜಯಪುರ: ಅಕ್ಟೋಬರ್ ೨ ರಂದು ಮಹಾತ್ಮ ಗಾಂಧಿ ಜಯಂತಿ ಆಚರಣೆ ಹಿನ್ನಲೆಯಲ್ಲಿ ಅಂದು ರಾಜ್ಯದಾದ್ಯಂತ ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ನಿಷೇಧಿತ ದಿನವೆಂದು ಸರ್ಕಾರ ಘೋಷಿಸಿದ್ದು, ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಕಸಾಯಿಖಾನೆಗಳಲ್ಲಿ ಪ್ರಾಣಿ ವಧೆ ಮಾಡುವುದು ಹಾಗೂ ಮಾಂಸ ಮಾರಾಟ ಮಾಡುವುದನ್ನು ಅ.೧ರ ಸಂಜೆ ೬ ಗಂಟೆಯಿಂದ ಅಕ್ಟೋಬರ್ ೨ರ ಮಧ್ಯರಾತ್ರಿಯವರೆಗೆ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.ಅದ್ಯಾಗ್ಯೂ ಸದರಿ ದಿನದಂದು ಆದೇಶವನ್ನು ಉಲ್ಲಂಘಿಸಿ ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ಮಾಡುವುದು ಕಂಡುಬಂದಲ್ಲಿ ಅಂತಹವರ ವಿರುದ್ದ ದಂಡ ಅಥವಾ ಜುಲ್ಮಾನೆ ಅಥವಾ ದಂಡ ಮತ್ತು ಜುಲ್ಮಾನೆಯೊಂದಿಗೆ ಮಳಿಗೆಯನ್ನು ಬೀಗಮುದ್ರೆ ಹಾಕಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಢವಳಗಿ: ಮುದ್ದೇಬಿಹಾಳ ತಾಲ್ಲೂಕಿನ ಬಸರಕೋಡ ಗ್ರಾಮದಲ್ಲಿ ಸನಾತನ ಹಿಂದೂ ಮಹಾಗಣಪತಿ (ರಾಜನ ಕಟ್ಟಿ ) ಕಮಿಟಿ ಆಯೋಜಿಸಿದ ರಾಜ್ಯಮಟ್ಟದ ಹೊನಲು ಬೆಳಕಿನ ಖೋ ಖೋ ಪಂದ್ಯಾವಳಿಗಳು ಸೆ.28 ಗುರುವಾರದಂದು ರಾತ್ರಿ 9 ಘಂಟೆಗೆ ಎಸ್ ಪೀ ಬೀ ಹೈಸ್ಸ್ಕೂಲ್ ಆವರಣದಲ್ಲಿ ಜರುಗಲಿದ್ದು, ಪ್ರಥಮ ಬಹುಮಾನ ರೂ.15001, ದ್ವಿತೀಯ ಬಹುಮಾನ ರೂ.10001, ತೃತೀಯ ಬಹುಮಾನ ರೂ.5001ಇರುತ್ತದೆ ಎಂದು ಸನಾತನ ಹಿಂದೂ ಮಹಾಗಣಪತಿಯ ಕಮಿಟಿಯ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ 9964098734,ಮತ್ತು 8151027824 ಸಂಪರ್ಕಿಸಬಹುದಾಗಿದೆ

Read More

ವಿಜಯಪುರ: ಅಕ್ರಮ ಮರಳುಗಾರಿಕೆಯ ಪಾಲುದಾರಿಕೆಯಲ್ಲಿ ತಮ್ಮ ಇಲಾಖೆ ಅಧಿಕಾರಿಗಳು ಭಾಗವಹಿಸದಂತೆ ಸೂಕ್ತ ಕಾನೂನು ಕ್ರಮ ವಹಿಸುವಂತೆ ಆಗ್ರಹಿಸಿ ಕೆ.ಆರ್.ಎಸ್. ಪಾರ್ಟಿ ವತಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭ ರಾಜ್ಯ ಸಂಘಟನಾ ಕಾರ್ಯದರ್ಶಿ. ಶಿವಾನಂದ ಯಡಹಳ್ಳಿ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ತಡೆಗಟ್ಟಲು ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಮನವಿ ಸಲ್ಲಿಸಿದ್ದರೂ ಪ್ರರೋಜನವಾಗಿಲ್ಲ. ಸಾರ್ವಜನಿಕ ರಂಗದಲ್ಲಿ ತೀವ್ರ ಪ್ರಮಾಣದಲ್ಲಿ ಚರ್ಚೆಗೆ ಒಳಗಾಗುತ್ತಿರುವ ಪ್ರಮುಖ ವಿಷಯವೇನೆಂದರೆ, ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರತಿ ಠಾಣೆಯಲ್ಲಿ ೨೫% ರಷ್ಟು ಪೊಲೀಸ್ ಸಿಬ್ಬಂದಿಗಳು ಸ್ವಂತ ವಾಹನಗಳನ್ನು ಇಟ್ಟುಕೊಂಡು ಮರಳುಗಾರಿಕೆ ದಂಧೆ ಮಾಡುತ್ತಿರುವುದು ಕಂಡುಬಂದಿದೆ ಕಳೆದ ಐದು ದಿನಗಳ ಹಿಂದೆ ಜಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಲ್ಕು ಮರಳು ಗಾಡಿಯನ್ನು ವಶಕ್ಕೆ ಪಡೆಯಲಾಗಿದೆ ಅದರಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಕೆಲಸ ಮಾಡುವ ಪೊಲೀಸ್ ಸಿಬ್ಬಂದಿಯ ಗಾಡಿಯು ಇದೆ ಎಂದು ಸಾರ್ವಜನಿಕರು ತಿಳಿಸಿರುತ್ತಾರೆ. ಜಲನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅಕ್ರಮ…

Read More

ವಿಜಯಪುರ: ಡಿ.ಸಿ.ಸಿ. ಬ್ಯಾಂಕ್ ಕನಮಡಿ ಶಾಖೆಯಲ್ಲಿ ಗ್ರಾಹಕರ ಸಭೆಯು ಸೆ.೨೭ ರಂದು ಜರುಗಿತು.ಸಭೆಯಲ್ಲಿ ಗ್ರಾಹಕರಾದ ಸಚೀನ ರುದ್ರಗೌಡ, ಶಂಕರಗೌಡ ಬಿರಾದಾರ, ಎಮ್.ಪಿ. ಶೀಳಿನ, ಸುರೇಶ ಹಾದಿಮನಿ, ನಿಂಗಪ್ಪ ಬಿರಾದಾರ, ಪಿ. ವಾಯ್. ಯಳಜೇರಿ ಸಲಹೆ ಹಾಗೂ ಶಾಖೆಯ ಬೆಳವಣಿಗೆ ಹಾಗೂ ಅಭಿವೃದ್ದಿ ಬಗ್ಗೆ ಸಲಹೆಗಳನ್ನು ಪಡೆಯಲಾಯಿತು. ಮತ್ತು ಬ್ಯಾಂಕಿನಿಂದ ಗ್ರಾಹಕರಿಗೆ ಸಿಗುತ್ತಿರುವ ಸಾಲ ಸೌಲಭ್ಯ ಯೋಜನೆಗಳು ಹಾಗೂ ಠೇವಣಿ ಯೋಜನೆಗಳ ಬಗ್ಗೆ ವಿವರಿಸಲಾಯಿತು. ಗ್ರಾಹಕರು ಸಭೆಯಲ್ಲಿ ವ್ಯಕ್ತಪಡಿಸಿದ ಕೆಲವೊಂದು ಅಭಿಪ್ರಾಯಗಳಿಗೆ ಸ್ಥಳದಲ್ಲಿಯೇ ಪರಿಹರಿಸಲಾಯಿತು. ಹಾಗೂ ಕೆಲವೊಂದು ಸಲಹೆಗಳನ್ನು ಬ್ಯಾಂಕಿನ ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಲಾಯಿತು.ಸಭೆಯಲ್ಲಿ ಬ್ಯಾಂಕಿನ ಉಪ ಪ್ರಧಾನ ವ್ಯವಸ್ಥಾಪಕರಾದ ಸತೀಶ ಡಿ. ಪಾಟೀಲ, ವಿಜಯಪುರ ತಾಲೂಕಾ ನೋಡಲ್ ಅಧಿಕಾರಿಗಳಾದ ಎಸ್.ಎನ್. ಪಾಟೀಲ, ಶಾಖಾ ವ್ಯವಸ್ಥಾಪಕರಾದ ಬಿ.ಎಸ್.ಕಾಂಬಳೆ ಹಾಗೂ ಶಾಖೆಯ ಸಿಬ್ಬಂದಿಯಾದ ನಾಗಪ್ಪ ನಾಟೀಕಾರ ಉಪಸ್ಥಿತರಿದ್ದರು.

Read More

ಇಂಡಿ: ಪ್ರತಿ ಸಭೆಗೂ ಹಾಜರಿರದ ತಾಲೂಕು ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡ ತಹಶಿಲ್ದಾರ ಬಿ ಎಸ್ ಕಡಕಭಾವಿ ಅವರು ಸಭೆಗೆ ಗೈರಾದ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲು ಸೂಚಿಸಿದರು.ಬುಧವಾರ ಪಟ್ಟಣದ‌ ತಾಲೂಕು ಆಡಳಿತ ಸೌಧದ ಸಭಾ ಭವನದಲ್ಲಿ ಆಯೋಜಿಸಿರುವ ಮಹಾತ್ಮ ಗಾಂಧೀಜಿ ಮತ್ತು ಲಾಲ ಬಹದ್ದೂರ ಶಾಸ್ತ್ರಿ ಜಯಂತಿ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸರಕಾರದ ಮಾರ್ಗ ಸೂಚಿಯಂತೆ ಶಾಲಾ ಕಾಲೇಜು ಹಾಗೂ ಎಲ್ಲಾ ಸರಕಾರಿ ಕಚೇರಿಗಳಲ್ಲಿ ಸರಳವಾಗಿ ಯಾವುದೇ ಲೋಪವಿಲ್ಲದಂತೆ ವ್ಯವಸ್ಥಿತವಾಗಿ ಜಯಂತಿ ಆಚರಣೆ ಮಾಡಬೇಕು. ಅದಲ್ಲದೇ ತಾಲೂಕು ಆಡಳಿತದ ಆಶ್ರಯದಲ್ಲಿ ನಡೆಯುವ ಮಹಾತ್ಮ ಗಾಂಧಿಜೀ ಹಾಗೂ ಲಾಲ ಬಹಾದ್ದೂರ ಶಾಸ್ತ್ರಿ ಜಯಂತಿ ಆಚರಣೆಯ ಸಂದರ್ಭಗಳಲ್ಲಿ ಕಡ್ಡಾಯವಾಗಿ ಅಧಿಕಾರಿಗಳು ಭಾಗವಹಿಸಬೇಕು.ಇನ್ನು ಒಟ್ಟು 36 ತಾಲೂಕು ಅಧಿಕಾರಿಗಳಿದ್ದು, ಈ ಸಭೆಯಲ್ಲಿ ಇಬ್ಬರು ಹಾಜರಿದ್ದು ಉಳಿದ ಇಲಾಖೆ ತಾಲೂಕು ಅಧಿಕಾರಿಗಳು ಗೈರಾಗಿದ್ದರು.ಈ ಸಂದರ್ಭದಲ್ಲಿ ತಾಲೂಕು ಪಂಚಾಯತ,ತೋಟಗಾರಿಕೆ, ಕೃಷಿ, ಹೆಸ್ಕಾಂ, ಸಬ್ ರಿಜಿಸ್ಟರ್, ಖಜಾನೆ, ಪಶು ಇಲಾಖೆ, ಅಲ್ಪ ಸಂಖ್ಯಾತಬ ಬಿ ಸಿ ಎಮ್, ಕೆ…

Read More

ಚಿಮ್ಮಡ: ಈ ಭಾಗದ ಆರಾದ್ಯ ದೈವ ಶ್ರೀ ಪ್ರಭುಲಿಂಗೇಶ್ವರರ “ಕಿಚಡಿ” ಜಾತ್ರೆ ಇಂದು ವಿಜ್ರಂಭಣೆಯಿಂದ ನಡೆಯಲಿದೆ.ಜಾತ್ರಾ ಮಹೋತ್ಸವದ ಅಂಗವಾಗಿ ಅಂದು ಬೆಳಿಗ್ಗೆ ೬ ಘಂ,ಗೆ ರುದ್ರಾಭಿಷೇಕ ೧೦ ಘಂ,ಗೆ ಷಟಸ್ಥಲ ಧ್ವಜಾರೋಹಣ ೧೦;೩೦ ಕ್ಕೆ ಅಡ್ಡ ಪಲ್ಲಕ್ಕಿ ಮಹೋತ್ಸವ ೧೧;೩೦ ಕ್ಕೆ ನಡೆಯಲಿರುವ ಶಿವಾನುಭವಗೋಷ್ಟಿಯಲ್ಲಿ ನಾಡಿನ ಅನೇಕ ಶ್ರೀಮಠಗಳ ಪೂಜ್ಯ ಮಠಾಧೀಶರು ಪಾಲ್ಗೊಳ್ಳುವರೆಂದು ಸ್ಥಳೀಯ ವಿರಕ್ತಮಠದ ಶ್ರೀ ಪ್ರಭು ಶ್ರೀಗಳು ತಿಳಿಸಿದ್ದಾರೆ.ಮದ್ಯಾಹ್ನ ೧೨:೩೦ ಕ್ಕೆ ಕಿಚಡಿ ಪ್ರಸಾದ ವಿತರಣೆ ಪ್ರಾರಂಭವಾಗಲಿದ್ದು ಸಂಜೆ ೬:೩೦ ರವರೆಗೆ ನಿರಂತರವಾಗಿ ನಡೆಯಲಿದೆಸಂಜೆ ೭ ಘಂಟೆಗೆ ಅಲಂಕ್ರತ ಜೋಡಿ ನಂದಿಕೋಲ ಉತ್ಸವ ವಿವಿಧ ವಾದ್ಯ ವೃಂದಗಳೊಂದಿಗೆ ವಿಜ್ರಂಭಣೆಯಿಂದ ಜರುಗಲಿದೆ. ರಾತ್ರಿ ಶ್ರೀ ಪ್ರಭುಲಿಂಗೇಶ್ವರ ಯುವಕ ನಾಟ್ಯ ಸಂಘದ ಕಲಾವಿದರು ಅಭಿನಯಿಸುವ “ಚನ್ನಪ್ಪ ಚನಗೌಡ” ಹಾಗೂ ಶ್ರೀ ಕರಿಸಿದ್ದೇಶ್ವರ ಯುವಕ ನಾಟ್ಯ ಸಂಘ ಅಭಿನಯಿಸುವ “ಗೌಡ ಮೆಚ್ಚಿದ ಹುಡುಗಿ”ಎಂಬ ನಾಟಕದಲ್ಲಿ ಕಿರು ತೆರೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ಕಲಾವಿದ ದಾನಪ್ಪಾ ಹಾಗೂ ಕಿರುತೆರೆ, ಸಿನಿಮಾ ಕಲಾವಿದರು ಅಭಿನಯಿಸಲಿದ್ದಾರೆ. ಎರಡು…

Read More

ನಾಡಿನ ಹೆಸರಾಂತ ಕಲಾವಿದ ಸೋಮಶೇಖರ ಸಾಲಿ, ಜನ್ಮಶತಮಾನೋತ್ಸವ ೨೦೨೩ ರಲ್ಲಿರುವುದು ರಾಜ್ಯ ಕಲಾವಿದರಿಗೆ ಹೆಮ್ಮೆಯ ವಿಷಯ.ಕರ್ನಾಟಕ ಲಲಿತಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷರು, ಕರ್ನಾಟಕ ಚಿತ್ರಕಲಾ ಪರಿಷತ್ತಿನ ಉಪಾಧ್ಯಕ್ಷರಾಗಿ, ಉತ್ತರ ಕರ್ನಾಟಕದ ಬಾಗಲಕೋಟೆಯ ಪ್ರತಿಷ್ಠಿತ ಬಸವೇಶ್ವರ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರಾಗಿ ಜೊತೆಯಲ್ಲಿ ಶ್ರೇಷ್ಠ ಕಲಾವಿದರಾಗಿ ಗುರುತಿಸಿಕೊಂಡಿದ್ದ ಸೋಮಶೇಖರ ಸಾಲಿಯವರ ಜನ್ಮಶತಮಾನೋತ್ಸವದ ತನ್ಮಿತ್ಯ ಅವರ ಕಲಾಕೃತಿಗಳ ಪ್ರದರ್ಶನ ದಿನಾಂಕ ೨೮-೦೯-೨೦೨೩ ರಿಂದ ೩೦-೦೯-೨೦೨೩ರ ವರೆಗೆ ಸರಕಾರಿ ಆರ್ಟ ಗ್ಯಾಲರಿ ಪ್ರವಾಸೋಧ್ಯಮ ಇಲಾಖೆ ಹಳೆ ಐ.ಬಿ. ಅಂಬೇಡ್ಕರ ಸರ್ಕಲ್ ಹತ್ತಿರ, ವಿಜಯಪುರ ಇಲ್ಲಿ ಆಯೋಜಿಸಲಾಗಿದೆ.ಪ್ರದರ್ಶನದ ಉದ್ಘಾಟಕರಾಗಿ ಸಂಸದ ರಮೇಶ ಜಿಗಜಿಣಗಿ, ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಟಿ.ಭೂಬಾಲನ್, ಅತಿಥಿಗಳಾಗಿ ವಿಶ್ರಾಂತ ಉಪನ್ಯಾಸಕ ಪ್ರೊ. ಎಂ.ಐ.ಕುಮಟಗಿ, ವಿಶ್ರಾಂತ ಪ್ರಾಚಾರ್ಯ ಡಾ. ಜೆ. ಎಸ್. ಹಿರೇಮಠ ಹಾಗೂ ಹೆಸರಾಂತ ಹಿರಿಯ ಕಲಾವಿದ ಪಿ. ಎಸ್. ಕಡೇಮನಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಸೋಮಶೇಖರ ಸಾಲಿಯವರ ಜನ್ಮಶತಮಾನೋತ್ಸವ ಸಮಿತಿ ಕಾರ್ಯದರ್ಶಿ ರಮೇಶ ಚವ್ಹಾಣ ತಿಳಿಸಿದ್ದಾರೆ.

Read More

ತಿಕೋಟಾ: ತಾಲ್ಲೂಕಿನ ಬಿಜ್ಜರಗಿ ಗ್ರಾಮದ ಸದ್ಗುರು ಶಿವಾನಂದ ಪ್ರಾಥಮಿಕ ಹಾಗೂ ಅಕ್ಕಮಹಾದೇವಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದು ತಾಲ್ಲೂಕ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಕಿರಿಯರ ವಿಭಾಗದಲ್ಲಿ ಆರ್ಯನ್ ತೋಳೆ ಕ್ಲೇ ಮಾಡಲಿಂಗ್, ಸ್ಪೂರ್ತಿ ಅವಧಿ ಛದ್ಮವೇಷ, ಸಮರ್ಥ ಐನಾಪುರ ಹಿಂದಿ ಕಂಠಪಾಠ, ಅನನ್ಯ ಲೋಹಾರ ಭಕ್ತಿಗೀತೆ, ಸಮರ್ಥ ಪೋಳ ಚಿತ್ರಕಲೆ, ಸಹನಾ ಧರನಾಕರ ಆಶುಭಾಷಣ, ರೋಹಿಣಿ ಜಾಧವ ಕಥೆ ಹೇಳುವ ವಿಭಾಗದಲ್ಲಿ ಆಯ್ಕೆಯಾಗಿದ್ದಾರೆ.ಹಿರಿಯರ ವಿಭಾಗದಲ್ಲಿ ಪೂಜಾ ಕುಂಬಾರ ಆಶುಭಾಷಣ, ಸಹನಾ ಮಸಳಿ ಛದ್ಮವೇಷ, ಸೌಂದರ್ಯ ಮಗದರಿ ಲಘು ಸಂಗೀತ, ಐಶ್ವರ್ಯ ಮಸಳಿ ಕವನ ವಾಚನ, ಸುಪ್ರೀಯಾ ಸೌದಿ ಸಂಸ್ಕೃತ ಕಂಠಪಾಠ ವಿಭಾಗದಲ್ಲಿ ಆಯ್ಕೆಯಾಗಿದ್ದಾರೆ.ಪ್ರೌಢ ಶಾಲಾ ವಿಭಾಗದಲ್ಲಿ ಹಮಿಜಾನ ನದಾಪ್ ಹಿಂದಿ ಭಾಷಣ, ಐಶ್ವರ್ಯ ಬಿರಾದಾರ ಸಂಸ್ಕೃತ ಧಾರ್ಮಿಕ ಪಠಣ, ಹಮಿಜಾನ ನದಾಪ್ ಅರೇಬಿಕ್ ಧಾರ್ಮಿಕ ಪಠಣ, ರಕ್ಷಿತಾ ಪಾಟೀಲ ಕನ್ನಡ ಭಾಷಣ, ಐಶ್ವರ್ಯ ಬಿರಾದಾರ ಚರ್ಚಾಸ್ಪರ್ಧೆ, ದಿವ್ಯಾ ಹಿರೇಮಠ, ಛದ್ಮವೇಷ, ರಕ್ಷೀತಾ ಲೋಣಿ ಕವನ…

Read More

ವಿಜಯಪುರ: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ವಿಜಯಪುರ ಜಿಲ್ಲೆಯ ಜಿಲ್ಲಾ ಕೇಂದ್ರ ಹಾಗೂ ತಾಲೂಕಾ ಕೇಂದ್ರಗಳ ಎಲ್ಲ ನ್ಯಾಯಾಲಯಗಳಲ್ಲಿ ಡಿಸೆಂಬರ್ ೯ರಂದು ರಾಷ್ಟ್ರೀಯ ಲೋಕ್ ಅದಾಲತ್ ಆಯೋಜಿಸಲಾಗಿದೆ.ಲೋಕ್ ಅದಾಲತ್‌ನಲ್ಲಿ ರಾಜಿಯಾಗಬಹುದಾದ ಎಲ್ಲ ಕ್ರಿಮಿನಲ್ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳು, ಮೋಟಾರು ವಾಹನ ಅಪಘಾತ ಪರಿಹಾರ ಕೋರಿ ಸಲ್ಲಿಸಿರುವ ಪ್ರಕರಣಗಳು, ಕೌಟುಂಬಿಕ ವ್ಯಾಜ್ಯಗಳು, ಆಸ್ತಿಯಲ್ಲಿ ಪಾಲು ಕೋರಿ ಸಲ್ಲಿಸಿರುವ ದಾವೆಗಳು, ದೂರವಾಣಿ, ನೀರಿನ ಬಿಲ್ಲು ಬಾಕಿ ಪಾವತಿ ಪ್ರಕರಣಗಳು, ಜೀವನಾಂಶ ಕೋರಿ ಸಲ್ಲಿಸಿರುವ ಪ್ರಕರಣಗಳು, ಕಾರ್ಮಿಕ ವ್ಯಾಜ್ಯಗಳು, ಭೂಸ್ವಾಧೀನ ಪ್ರಕರಣಗಳು, ಕಂದಾಯ ಪ್ರಕರಣಗಳು, ಸಾಲ ವಸೂಲಾತಿ, ಬ್ಯಾಂಕ್ ವ್ಯಾಜ್ಯಗಳು ಹಾಗೂ ಇತರೆ ಸಿವ್ಹಿಲ್ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುವುದು.ಸಾರ್ವಜನಿಕರು ರಾಷ್ಟ್ರೀಯ ಲೋಕ್ ಅದಾಲತ್ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳುವ ಮೂಲಕ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಹಿರಿಯ ಸಿವ್ಹಿಲ್ ನ್ಯಾಯಾಧೀಶ ಸಂತೋಷ ಎಸ್.ಕುಂದರ್ ಅವರು ಕೋರಿದ್ದಾರೆ.

Read More