Author: editor.udayarashmi@gmail.com

ಚಡಚಣ: ರಾಜ್ಯದ ಕಟ್ಟ ಕಡೆಯ ಹಳ್ಳಿ, ಹಾಲುಮತ ಸಮಾಜದವರ ಕಾಶಿ, ಹಾಲುಮತ ಸಮಾಜ ಬಾಂಧವರ ಆರಾಧ್ಯ ದೈವ ಬೀರಲಿಂಗೇಶ್ವರ ದೇವಾಲಯವು ಬೀರಲಿಂಗೇಶ್ವರನು ಐಕ್ಯವಾದ ಸ್ಥಳವಾಗಿರುವುದರಿಂದ ಸಹಸ್ರಾರು ಜನರು ಇಲ್ಲಿಗೆ ಆಗಮಿಸುತ್ತಾರೆ. ಧಾರ್ಮಿಕ ಕ್ಷೇತ್ರ ಎಂದು ಐತಿಹ್ಯವಿದೆ. ಸುಂದರ ಪರಿಸರದ ನಡುವೆ ಈ ಕ್ಷೇತ್ರವಿದ್ದು, ಪ್ರತಿನಿತ್ಯ ಸ್ಥಳೀಯರಲ್ಲದೆ, ರಾಜ್ಯ, ಹೊರ ರಾಜ್ಯಗಳಿಂದಲೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಅದಕ್ಕಾಗಿ ಯಾತ್ರಿ ನಿವಾಸವು ಈ ಕ್ಷೇತ್ರಕ್ಕೆ ಅವಶ್ಯಕತೆ ಇದೆ ಎಂದು ಶಾಸಕರಾದ ವಿಠ್ಠಲ ಕಟಕದೊಂಡರವರು ಹೇಳಿದರು.ಸೋಮವಾರದಂದು ಶಿರಾಡೋಣ ಗ್ರಾಮದ ಬೀರಲಿಂಗೇಶ್ವರ ದೇವಾಸ್ಥಾದ ಆವರಣದಲ್ಲಿ ಯಾತ್ರಿ ನಿವಾಸಕ್ಕೆ ಭೂಮಿಪೂಜೆಯ ನೇರವೇರಿಸಿ ಮಾತನಾಡಿದ ಅವರು. ರೈತರಿಗೆ ಶಕ್ತಿ ತುಂಬಲು ಚಡಚಣ ಏತ ನೀರಾವರಿ ಯೋಜನೆಯ ಕಾಮಗಾರಿ ಬೇಗನೆ ಪೂರ್ಣಗೊಳಿಸಿ ನೀರು ಹರಿಸಿ ರೈತರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡುತ್ತೇನೆಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಗ್ರಾಮದ ಹೆಮ್ಮೆಯ ಸೈಕರಿಗೆ ಗೌರವಿಸುವ ಮೂಲಕ ದೇಶಪ್ರೇಮ ಮೆರೆದರು.ಈ ವೇಳೆಯಲ್ಲಿ ಬೀರಲಿಂಗೇಶ್ವರ ಪೂಜಾರಿಯವರಾದ ಬೀರಪ್ಪ ಮಹಾರಾಯರು, ಯಶವಂತ ಮಾಡಕರೆ,…

Read More

ಆಲಮಟ್ಟಿ: ಬೆಳ್ಳಂ ಬೆಳಿಗ್ಗೆ ಕೆಂಪು ಕಲರವದ ನಾದ ಘಮಘಮಿಸಿ ಪರಿಮಳಿಸಿತ್ತು. ದೇಗುಲದ ಅಂಗಳದಲ್ಲಿ ಕೆಂಪು ನಾರಿಯರ ದಂಡವೇ ನೆರದಿತ್ತು. ಭಕ್ತಿಭಾವ ಮೇಳೈಸಿತ್ತು.ಮಂಗಳವಾರ ನಸುಕಿನಲ್ಲೇ ಆಲಮಟ್ಟಿಗೆ ಸನಿಹದ ಚಿಮ್ಮಲಗಿ ಭಾಗ-1 ಎ ಗ್ರಾಮದ ಅಂಬಾಭವಾನಿ ದೇವಸ್ಥಾನದಲ್ಲಿ ಈ ವಿಶೇಷ ಭಕ್ತಿ ಅನುವರಣದ ದೃಶ್ಯ ವೈಭವ ಗೋಚರಿಸಿತು.ಗ್ರಾಮದ ಹಾಗೂ ಸುತ್ತಲಿನ ಮಹಿಳೆಯರು ನವರಾತ್ರಿ ಹಬ್ಬದ ಮೂರನೇ ದಿನದಂದು ಕೆಂಪು ಸೀರೆಯನ್ನುಟ್ಟು ಅಂಬಾಭವಾನಿ ದರ್ಶನಕ್ಕಾಗಿ ದೇವಸ್ಥಾನಕ್ಕೆ ಪೂಜ್ಯ ಭಾವದಿ ಲಗ್ಗೆಯಿರಿಸಿ ತಮ್ಮ ಮನದಾಳದ ಭಕ್ತಿ ತರ್ಪಣ ಸಮಪಿ೯ಸಿದರು.ನವರಾತ್ರಿ ಹಿನ್ನೆಲೆಯಲ್ಲಿ ಒಂಬತ್ತು ದಿನಗಳ ಕಾಲ ನಾನಾ ವಿಧವಾಗಿ ನವದುಗಾ೯ ಮಾತೆಯನ್ನು ಎಲ್ಲೆಡೆ ಭಜಿಸಲಾಗುತ್ತಿದೆ. ಇಲ್ಲಿಯೂ ನಿತ್ಯ ಅಧಿಪತ್ಯದ ದೇವತೆಯಾಗಿರುವ ಅಂಬಾಭವಾನಿ ಜಗನ್ಮಾತೆಯ ಪೂಜಾ-ಪುನಸ್ಕಾರ ಶ್ರದ್ಧಾ ಭಕ್ತಿಗಳಿಂದ ಮಹಿಳೆಯರು ನೆರವೇರಿಸುತ್ತಲ್ಲಿದ್ದಾರೆ. ತಾಯಿ ರೂಪದಲ್ಲಿ ಅಂಬಾಭವಾನಿ ದೇವಿಯನ್ನು ಆರಾಧಿಸಿ ಧ್ಯಾನ ಸ್ತುತಿ, ಆರ್ಚನೆ, ಭಜನೆ, ಪೂಜೆ ಸಲ್ಲಿಸುತ್ತಿದ್ದಾರೆ.ಈ ವೇಳೆ ದೇವಸ್ಥಾನದ ಅರ್ಚಕ ರವಿ ಮಹೇಂದ್ರಕರ, ಗ್ರಾಮದ ಪ್ರಮುಖರಾದ ರಾಜೇಂದ್ರ ಬೊಮ್ಲೇಕರ್, ಕಾಶೀನಾಥ್ ಮಹೇಂದ್ರಕರ, ಜಗದೀಶ್ ಮಹೇಂದ್ರಕರ, ಶಂಕರ ರಾಠೋಡ, ಮಾತೆಯರಾದ…

Read More

ಯಡ್ರಾಮಿ: ಪಟ್ಟಣದ ಗ್ರಾಮದೇವತೆ ಮಹಿಳಾ ಮಂಡಳಿಯ ಸದಸ್ಯರು ನವರಾತ್ರೋತ್ಸವದ ಮೂರನೆಯ ದಿನವಾದ ಮಂಗಳವಾರ ಕೆಂಪು ವರ್ಣದ ಸೀರೆಯನ್ನುಟ್ಟು ಸಂಭ್ರಮಿಸಿದರು.ಮಹಿಳಾ ಮಂಡಳಿಯ ರೂಪಾ ಶಿವಪ್ರಸಾದ್, ನಿಂಗಮ್ಮ ಬೆಲ್ಲದ, ಜಯ ಪುರಾಣಿಕ, ಆರತಿ ನೆಲ್ಲಗಿ, ರಶ್ಮಿ ಹೂಗಾರ್, ಅನಿತಾ ಯಾಳಗಿ, ಶರಣಮ್ಮ ಸೋಮಪ್ಪಾಗೋಳ ಸೇರಿದಂತೆ ಮಂಡಳಿಯ ಅನೇಕ ಸದಸ್ಯರು ಪಾಲ್ಗೊಂಡಿದ್ದರು.

Read More

ದೇವರಹಿಪ್ಪರಗಿ: ಪಟ್ಟಣದ ಬಿಎಲ್‌ಡಿಇ ಸಂಸ್ಥೆಯ ಎ.ಬಿ.ಸಾಲಕ್ಕಿ ಪದವಿಪೂರ್ವ ಕಾಲೇಜು(ಮಾಧ್ಯಮಿಕ ವಿಭಾಗ) ವಿದ್ಯಾರ್ಥಿ ವಿಶಾಲ ಜಾಧವ ವಿಜಯಪುರ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಎತ್ತರ ಜಿಗಿತ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ.ವಿದ್ಯಾರ್ಥಿನಿಯ ಸಾಧನೆಗೆ ಉಪಪ್ರಾಚಾರ್ಯ ವ್ಹಿ.ಎಮ್.ಪಾಟೀಲ ಹಾಗೂ ದೈಹಿಕ ಶಿಕ್ಷಕ ಈಶ್ವರ ಬಿದರಿ, ಹಾಗೂ ಸಿಬ್ಬಂದಿ ವರ್ಗದವರು ಮತ್ತು ಸಂಸ್ಥೆಯ ಅಧ್ಯಕ್ಷರು, ಆಡಳಿತಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿ ರಾಜ್ಯಮಟ್ಟದಲ್ಲಿ ಉತ್ತಮ ಸಾಧನೆ ತೋರಲೆಂದು ಶುಭ ಹಾರೈಸಿದ್ದಾರೆ.

Read More

ದೇವರಹಿಪ್ಪರಗಿ: ನೂತನ ನಿರ್ದೇಶಕ ಮಂಡಳಿಯ ಆಡಳಿತಾವಧಿಯಲ್ಲಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಇನ್ನೂ ಹೆಚ್ಚೆಚ್ಚು ಜನಪರ ಕಾರ್ಯ ಮಾಡುವಂತಾಗಲಿ ಎಂದು ತಾಲ್ಲೂಕು ಬಣಜಿಗ ಸಂಘದ ಅಧ್ಯಕ್ಷ ಬಸವರಾಜ ತಾಳಿಕೋಟಿ ಹೇಳಿದರು.ನಗರದಲ್ಲಿ ಇತ್ತೀಚಿಗೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಆಡಳಿತ ಮಂಡಳಿಗೆ ಆಯ್ಕೆಯಾದ ನೂತನ ನಿರ್ದೇಶಕರಾದ ಹಣಮಂತ್ರಾಯಗೌಡ ಪಾಟೀಲ(ಪಡಗಾನೂರ), ಗುರುಶಾಂತ ನಿಡೋಣಿ, ರಾಜಶೇಖರ ಗುಡದಿನ್ನಿ, ಶೇಖರ ದಳವಾಯಿ, ಕಲ್ಲನಗೌಡ ಪಾಟೀಲ, ಬಿ.ಎಸ್.ಪಾಟೀಲ(ಯಾಳಗಿ), ಸುರೇಶಗೌಡ ಬಿರಾದಾರ, ಅರವಿಂದ ಪೂಜಾರಿ, ಚಂದ್ರಶೇಖರ ಪಾಟೀಲ ಅವರನ್ನು ದೇವರಹಿಪ್ಪರಗಿ ತಾಲ್ಲೂಕು ಬಣಜಿಗ ಸಂಘದ ಅಡಿಯಲ್ಲಿ ಸನ್ಮಾನಿಸಿ, ಮಾತನಾಡಿದರು.ತಾಲ್ಲೂಕು ಬಣಜಿಗ ಸಂಘದ ಉಪಾಧ್ಯಕ್ಷ ಜಿ.ಎಸ್.ಕೋರಿ, ಪ್ರಧಾನ ಕಾರ್ಯದರ್ಶಿ ಗಂಗಾಧರ ಬಬಲೇಶ್ವರ, ವಿನುತ ಕೋರಿ ಇದ್ದರು.

Read More

ಬ್ರಹ್ಮದೇವನಮಡು: ಧಮ೯ಸ್ಥಳ ಗ್ರಾಮಾಭಿವೃದ್ದಿ ಯೋಜನೆಗಳು ಮಹಿಳೆಯರನ್ನು ಸ್ವಾವಲಂಬಿಯನ್ನಾಗಿ ಮಾಡಲಾಗುತ್ತಿದ್ದು, ಅಭಿವೃದ್ದಿ ಪರ ಯೋಜನೆಗಳು ಹೆಚ್ಚಿಸಿವೆ ಎಂದು ಸಿಂದಗಿ ತಾಲೂಕು ಶ್ರೀ ಕ್ಷೇತ್ರ ಧಮ೯ಸ್ಥಳ ಗ್ರಾಮಾಭಿವೃದ್ದಿ ಯೋಜನಾಧಿಕಾರಿ ಗಿರೀಶಕುಮಾರ ಹೇಳಿದರು.ಸಿಂದಗಿ ತಾಲೂಕು ಗೋಲಗೇರಿ ವಲಯದ ಯಂಕಂಚಿ ಕಾಯ೯ಕ್ಷೇತ್ರದಲ್ಲಿ ಧಮ೯ಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ನೂತನ ಸಿಎಸ್ ಸಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.ಸಾಲ ವಿತರಣೆ, ಲಾಭಾಂಶಗಳ ಸಂಗ್ರಹದ ಮೂಲಕ ಆಥಿ೯ಕ ಅಭ್ಶುದಯಕ್ಕೆ ಸಂಘದ ಸದಸ್ಶರು ಬದ್ದರಾಗಬೇಕು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಡಿ ಶುದ್ಧ ಕುಡಿಯುವ ನೀರಿನ ಘಟಕ, ಕೆರೆ ಹೂಳೆತ್ತುವದು, ನಿಗ೯ತಿಕರಿಗೆ ಮಾಶಾಸನ, ವಾತ್ಸಲ್ಶ ಕಿಟ್ಟ್, ದೆವಸ್ಥಾನ ಕಟ್ಟಡಗಳ ಸಹಾಯಧನ, ಸಂಘದ ಸದಸ್ಶರ ಮಕ್ಕಳಿಗೆ ಸುಜ್ಞಾನನಿಧಿ ಶಿಷ್ಶವೇತನ ನೀಡಲಾಗುತ್ತಿದೆ. ಸಿ.ಎಸ್.ಸಿ.ಕೇಂದ್ರದಲ್ಲಿ ಸಿಗುವ ಕೇಂದ್ರ ಹಾಗೂ ರಾಜ್ಶ ಸಕಾ೯ರದ ಈ ಸೌಲಭ್ಶಗಳ ಬಗ್ಗೆ ಮಾಹಿತಿ ನೀಡಿದರು. ಈ. ಮೇಲ್ವಿಚಾರಕ ಮಂಜುನಾಥ ಸಜ್ಜನ, ಸೇವಾ ಪ್ರತಿನಿಧಿಗಳಾದ ರೂಪಾ ಕುಲಕಣಿ೯,ರೇಖಾ ಹಳ್ಳಿ, ಒಕ್ಕೂಟದ ಅಧಕ್ಷರು, ಪದಾಧಿಕಾರಿಗಳು, ಸಂಘದ ಸದಸ್ಶ ಸುರೇಶ ಕಿರಣಗಿ ಸೇರಿದಂತೆ ಇತರರಿದ್ದರು.

Read More

ಸಿಂದಗಿ: ನಗರದ ಶಿಕ್ಷಕರ ಸಭಾಭವನದಲ್ಲಿ ತಾಲೂಕು ಪಂಚಾಯತ್ ವತಿಯಿಂದ ಎರಡು ದಿನಗಳ ಕಾಲ ಪಂಚತಂತ್ರ ೨.೦ ತರಬೇತಿ ಕಾರ್ಯಗಾರವು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ ಮತ್ತು ಗಣಕ ಯಂತ್ರ ಸಹಾಯಕರಿಗೆ ಹಮ್ಮಿಕೊಳ್ಳಲಾಗಿತ್ತು.ಈ ವೇಳೆ ಆಡಳಿತಾಧಿಕಾರಿ, ಜಿಲ್ಲಾ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಟೆ, ಇಓ ತಾಪಂ ರಾಮು ಅಗ್ನಿ, ನರೇಗಾ ಸಹಾಯಕ ನಿರ್ದೇಶಕ ನಿತ್ಯಾನಂದ ಯಲಗೋಡ, ಸಿದ್ದು ಅಂಕಲಗಿ, ಸಂಪನ್ಮೂಲ ವ್ಯಕ್ತಿಗಳಾಗಿ ಎ.ಎ ದುರ್ಗದ, ಐಇಸಿ ಸಂಯೋಜಕ ಭೀಮರಾಐ ಚೌಧರಿ ಸೇರಿದಂತೆ ಎಲ್ಲ ಗ್ರಾಪಂ ಪಿಡಿಒ, ಕಾರ್ಯದರ್ಶಿ, ಗಣಕಯಂತ್ರ ಸಹಾಯಕರು ಸೇರಿದಂತೆ ಅನೇಕರು ಇದ್ದರು.

Read More

ಇಂಡಿ: ವಿಜಯಪುರ ಮಹಾ ನಗರದ ಡಾ.ಬಿ ಆರ್ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಅಥ್ಲಟಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿದ ಇಂಡಿ ತಾಲೂಕಿನ ನಾದ ಕೆ ಡಿ ಗ್ರಾಮದ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಕುಮಾರಿ ಮಂಜುಳಾ ಭೀಮರಾಯ ಐರೋಡಗಿ 3000 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಪಡೆದು ಸತತ ಎರಡನೇ ಬಾರಿಗೆ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿ ಶಾಲೆಯ ಕೀರ್ತಿ ಹೆಚ್ಚಿಸಿದ್ದಾಳೆ ಅದಕ್ಕಾಗಿ ಎಸ್‌ಡಿಎಂಸಿ ಅಧ್ಯಕ್ಷ ಸಿದ್ದರಾಯ ಐರೊಡಗಿ ಶಾಲಾ ಮುಖ್ಯೋಪಾದ್ಯಾಯ ಹಾಗೂ ಸಾಹಿತಿ ಬರಹಗಾರ ಸಿ ಎಂ ಬಂಡಗರ. ದೈಹಿಕ ಶಿಕ್ಷಣ ಶಿಕ್ಷಕ ಹಾಗೂ ಕವಿ ಸಂಗನಗೌಡ ಎಸ್ ಹಚಡದ ಹಾಗೂ ಸರ್ವ ಸಿಬ್ಬಂದಿ ವರ್ಗ ಮತ್ತು ಪಾಲಕರು ಗ್ರಾಮಸ್ಥರು ಅಭಿನಂದಿಸಿದ್ದಾರೆ.

Read More

ಕನ್ನಡ ರಾಜ್ಯೋತ್ಸವ ದಿನಾಚರಣೆ ಪೂರ್ವಭಾವಿ ಸಭೆಯಲ್ಲಿ ಡಿಸಿ ಟಿ.ಭೂಬಾಲನ್ ಅಧಿಕಾರಿಗಳಿಗೆ ಸೂಚನೆ ವಿಜಯಪುರ: ಜಿಲ್ಲಾಡಳಿತ ವತಿಯಿಂದ ನವೆಂಬರ್ ೦೧ ರಂದು ನಡೆಯುವ ಕನ್ನಡ ರಾಜ್ಯೋತ್ಸವವನ್ನು ಅಚ್ಚುಕಟ್ಟಾಗಿ ಆಚರಿಸಿ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸೂಚಿಸಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕನ್ನಡ ರಾಜ್ಯೋತ್ಸವ ಆಚರಣೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕಾರ್ಯಕ್ರಮವು ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ವ್ಯವಸ್ಥಿತವಾಗಿ ಹಮ್ಮಿಕೊಳ್ಳಬೇಕು. ಅಂದು ಬೆಳಿಗ್ಗೆ ೯ ಗಂಟೆಗೆ ಜಿಲ್ಲಾಡಳಿತ ವತಿಯಿಂದ ಧ್ವಜಾರೋಹಣ ನಡೆಯುವುದು. ಕಾರ್ಯಕ್ರಮಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ವಹಿಸಿದ ಎಲ್ಲಾ ಕಾರ್ಯಗಳನ್ನು ವ್ಯವಸ್ಥಿತವಾಗಿ ಕೈಗೊಳ್ಳಬೇಕು ಎಂದು ಸೂಚಿಸಿದರು.ಅಂದು ಬೆಳಿಗ್ಗೆ ೭:೩೦ಕ್ಕೆ ನಗರದ ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ಭುವನೇಶ್ವರ ದೇವಿ ಭಾವಚಿತ್ರದ ಭವ್ಯ ಮೆರವಣಿಗೆಯನ್ನು ವಿವಿಧ ಇಲಾಖೆಗಳ ನಿರ್ಮಿಸಿರುವ ಸ್ತಬ್ದಚಿತ್ರಗಳು, ಕಲಾತಂಡಗಳೊಂದಿಗೆ ನಗರದ ವಿವಿಧ ವೃತ್ತಗಳ ಮುಖಾಂತರ ಜಿಲ್ಲಾ ಕ್ರೀಡಾಂಗಣಕ್ಕೆ ಆಗಮಿಸುವುದು.ವೇದಿಕೆ ಸಿದ್ದತೆ, ಶಿಷ್ಠಾಚಾರದಂತೆ ಅತಿಥಿ ಗಣ್ಯರನ್ನು ಆಹ್ವಾನಿಸಬೇಕು. ಆಹ್ವಾನ ಪತ್ರಿಕೆ ಮುದ್ರಣ ಹಾಗೂ ವಿತರಣೆ, ಆಸನದ ವ್ಯವಸ್ಥೆ, ಕುಡಿಯುವ…

Read More

ಬಾಲ್ಯವಿವಾಹ ಮುಕ್ತ ಕರ್ನಾಟಕ ಅಭಿಯಾನದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಸಂತೋಷ್ ಕುಂದರ್ ಅಭಿಮತ ವಿಜಯಪುರ: ಬಾಲ್ಯ ವಿವಾಹ ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ಅರಿವು ಮೂಡಿಸಬೇಕು. ಬಾಲ್ಯ ವಿವಾಹ ತಡೆಗಟ್ಟುವಲ್ಲಿ ಸಾರ್ವಜನಿಕ ಸಹಕಾರ ಅಗತ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳೂ ಆದ ಸಂತೋಷ್ ಎಸ್. ಕುಂದರ್ ಅವರು ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ವಿಜಯಪುರ, ಶಿಶು ಅಭಿವೃದ್ಧಿ ಯೋಜನೆ ವಿಜಯಪುರ ನಗರ ಮತ್ತು ಗ್ರಾಮೀಣ ಇವರ ಸಹಯೋಗದಲ್ಲಿ ಅ.೧೬ರಂದು ವಿಜಯಪುರದ ರುಡ್‌ಸೆಟ್ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಬಾಲ್ಯ ವಿವಾಹ ಮುಕ್ತ ಕರ್ನಾಟಕ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾರ್ವಜನಿಕರಿಗೆ ಕಾನೂನು ತಿಳುವಳಿಕೆ ಮೂಡಿಸಬೇಕು. ಯಾರೂ ಬಾಲ್ಯವಿವಾಹಕ್ಕೆ ಪ್ರೋತ್ಸಾಹ ನೀಡಬಾರದು. ಬಾಲ್ಯವಿವಾಹ ಒಂದು ಸಾಮಾಜಿಕ ಪಿಡುಗಾಗಿದ್ದು ಇದನ್ನು ಹೋಗಲಾಡಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.ಮಕ್ಕಳ ಕಲ್ಯಾಣ ಸಮಿತಿ…

Read More