ಉದಯರಶ್ಮಿ ದಿನಪತ್ರಿಕೆ
ಇಂಡಿ: ಅರ್ಥಿಕವಾಗಿ ಸದೃಡ ಮತ್ತು ಯುದ್ದ ರಹಿತ, ಗಲಭೆ ರಹಿತ ದೇಶಗಳಿಗೆ ಮಾತ್ರ ನಿಂಬೆ ರಪ್ತು ಮಾಡಿ ಎಂದು ಬೆಂಗಳೂರಿನ ರಪ್ತು ಸಲಹೆಗಾರರು ಡಾ. ನಾಗವೇಣಿ ಸಿ.ಆರ್ ಹೇಳಿದರು.
ನಗರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ವಿಜ್ಞಾನ ಕೇಂದ್ರ ಇಂಡಿ ಮತ್ತು ಕರ್ನಾಟಕ ಕೃಷಿ ವಾಣಿಜ್ಯ ಅಭಿವೃದ್ದಿ ನಿಗಮ ಬೆಂಗಳೂರು ಇವರ ಸಹಯೋಗದಲ್ಲಿ ನಡೆದ ಇಂಡಿ ನಿಂಬೆ ರಪ್ತು ಪ್ರಕ್ರಿಯೆ ಕುರಿತು ಅರಿವು ಮೂಡಿಸುವ ಕಾರ್ಯಾಗಾರದಲ್ಲಿ ಮಾತನಾಡಿದರು.
ನಿಂಬೆ ರಪ್ತು ಮಾಡುವ ರೈತ ಅಥವಾ ರೈತ ಸಂಘಟನೆಗಳು ಸಂಸ್ಥೆ ಸ್ಥಾಪಿಸಿ ಅದರ ಆಧಾರ ಕಾರ್ಡು, ಪಾನ ಕಾರ್ಡು, ಜಿಎಸ್ ಟಿ ನಂ, ಬ್ಯಾಂಕ ಅಕೌಂಟ ನಂ ನೀಡಿ ಆಮದು ಮತ್ತು ರಪ್ತು ಕೋಡ ಮಾಡಬೇಕು. ರಜಿಸ್ಟ್ರೇಷನ್ ಮಾಡಿ ಸರ್ಟಿಫಿಕೇಟ ಪಡೆಯಬೇಕು. ಆಮದು ರಪ್ತು ಬ್ಯಾಂಕ ಖಾತೆ ಮಾಡಿ ಇಸಿಜಿಸಿ ಇನ್ಸುರೆನ್ಸ ಮತ್ತು ಎಚ್ ಎಸ್ ಕೋಡ ತೆಗೆದು ರಪ್ತು ಮಾಡಬಹುದು ಎಂದರು. ಇದಕ್ಕೆ ಅಪೆಡಾ ಸಂಸ್ಥೆ ಇಲ್ಲವೆ ಕರ್ನಾಟಕ ಕೃಷಿ ವಾಣಿಜ್ಯ ಅಭಿವೃದ್ದಿ ನಿಗಮ ಸಂಪೂರ್ಣ ಸಹಕರಿಸುತ್ತದೆ.
ನಮ್ಮಲ್ಲಿ ನಿಂಬೆ ಬೆಳೆಗೆ ಬಹಳ ಬೇಡಿಕೆ ಇದ್ದಾಗ ರಪ್ತು ಮಾಡಲು ಬರುವದಿಲ್ಲ. ಇಲ್ಲದಿದ್ದರೆ ನೀವು ಇಂಡಿಯ ನಿಂಬೆ ಜಗತ್ತಿನೆಡೆಗೆ ಕಳುಹಿಸಬಹುದು ಎಂದರು.
ನಿಂಬೆ ಗುಣಮಟ್ಟದಿಂದ ಕುಡಿರಬೇಕು, ಇಂಡಿಯ ನಿಂಬೆಗೆ ೨೫ ಹೊರ ರಾಷ್ಟçದಲ್ಲಿ ಸಾಕಷ್ಟು ಬೇಡಿಕೆ ಇದೆ. ನಿಂಬೆ ಉತ್ಪನ್ನಗಳನ್ನು ಮಾಡಿ ನಿಂಬೆ ಉಪ್ಪಿನಕಾಯಿ, ನಿಂಬೆ ಪೌಡರ ಸೇರಿದಂತೆ ಇನ್ನಿತರ ರಪ್ತು ಮಾಡಬಹುದು ಎಂದರು.
ಇಂಡಿಯ ಕೃಷಿ ತಜ್ಞ ಡಾ. ಪ್ರೇಮಚಂದ್ರ ಮಾತನಾಡಿ ನಿಂಬೆಗೆ ಬೆಳವಣೆಗೆ ಹಂತದಲ್ಲಿ ಕ್ಲೋರೊಪಿರಿಪಾಸ್, ಡೈಮಿಥೋಟ್, ಕಾರ್ಬೆಂಡಜಿನ್, ಸ್ಟೆçÃಪ್ಟೋಮಾಯಿಸಿನ ರಸಾಯನಿಕ ಔಷದ ಕೊಡಬಾರದು. ಕೊಟ್ಟರೆ ಗುಣಮಟ್ಟದ ನಿಂಬೆ ಬರುವದಿಲ್ಲ. ಮತ್ತು ವಿದೇಶದಲ್ಲಿ ಬೇಡಿಕೆ ಇರುವದಿಲ್ಲ ಎಂದರು.
ಸಂಸ್ಥಾಪಕರು ಮತ್ತು ನಿರ್ದೇಶಕರು ಲಿಂಗರಾಜ ಮನಗೂಳಿ, ಡಾ. ಕಾರಂತ, ಸಹ ವಿಸ್ತಿರಣಾ ನಿರ್ದೇಶಕ ಕೃಷಿ ವಿಸ್ತರಣಾ ಕೇಂದ್ರ ವಿಜಯಪುರದ ಡಾ. ಆರ್ ಜೊಳ್ಳಿ, ಇಂಡಿಯ ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥ ಡಾ. ಶಿವಶಂಕರ ಮೂರ್ತಿ, ತೋಟಗಾರಿಕೆ ಉಪನಿರ್ದೇಶಕ ಡಾ. ಸಿದ್ದಲಿಂಗೇಶ್ವರ ವ್ಯವಸ್ಥಾಪಕ ನಿರ್ದೇಶಕ ಕರ್ನಾಟಕ ರಾಜ್ಯ ನಿಂಬೆ ಅಭಿವೃದ್ದಿ ಮಂಡಳಿ ರಾಹುಲಕುಮಾರ ಭಾವಿದೊಡ್ಡಿ, ಡಾ. ವೀಣಾ ತೋಟಗಾರಿಕೆಯ ಸತೀಶ ಬಡಿಗೇರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಡಾ.ಪ್ರಸಾದ, ಡಾ,ಪ್ರಕಾಶ, ಡಾ.ಕಿರಣಕುಮಾರ ಗೋರಬಾಳ, ಡಾ. ಶ್ರೀಪಾದ ವಿಶ್ವೇಶ್ವರ, ರಾಮಕೃಷ್ಣ ಮತ್ತಿತರಿದ್ದರು.

