Author: editor.udayarashmi@gmail.com

ಇಂಡಿ: ನಿವೃತ್ತ ನೌಕರರು ಪಿಂಚಣಿ ಪಡೆಯುವವರು ನವೆಂಬರ್ ತಿಂಗಳಲ್ಲಿ ಜೀವನ ಪ್ರಮಾಣ ಪತ್ರ ನೀಡುವದು ಕಡ್ಡಾಯವಾಗಿದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕಿನ ಇಂಡಿ ಶಾಖೆಯ ಮುಖ್ಯ ಪ್ರಭಂದಕ ಬಿ.ಜೆ.ರಾಮಸ್ವಾಮಿ ಹೇಳಿದರು.ಪಟ್ಟಣದ ಎಸ್ ಬಿಐ ಶಾಖೆಯಲ್ಲಿ ನಿವೃತ್ತ ನೌಕರರ ಪಿಂಚಣಿ ಕುರಿತು ನಡೆದ ಸಭೆಯಲ್ಲಿ ಮಾತನಾಡುತ್ತಿದ್ದರು.ರವಿ ತಳವಾರ ಮತ್ತು ಪರಶುರಾಮ ತೆನೆಹಳ್ಳಿ ಮಾತನಾಡಿ, ನವೆಂಬರ್ ತಿಂಗಳಲ್ಲಿ ಪಿಂಚಣಿದಾರರು ಲಾಯಿಫ್ ಸರ್ಟೀಫಿಕೇಟ ನೀಡುವದು, ಯುನೋ ಆಫ್ ಉಪಯೋಗಿಸಿಕೊಂಡು ಡಿಜಿಟಲ್ ಎಲ್ಲ ಸೌಲಭ್ಯ ಪಡೆದುಕೊಳ್ಳಬಹುದು ಮತ್ತು ಬ್ಯಾಂಕಿಗೆ ಹಣ ಪಡೆಯಲು ಬರದೇ ಎಟಿಎಂ ಸೌಲಭ್ಯ ಪಡೆಯಲು ಹೇಳಿದರು.ಪಿಂಚಣಿದಾರರಾದ ನಿವೃತ್ತ ಪ್ರಾಚಾರ್ಯ ಎಸ್.ಡಿ.ಬೆಳಕಿಂಡಿ, ಎಸ್.ಆರ್.ಮೂರಮನ, ಡಿ.ಎ.ಲಮಾಣಿ, ಸಿದ್ದಪ್ಪ ಬಗಲಿ, ಟಿ.ಎಸ್.ರಾಠೋಡ, ಎ.ಎಚ್.ಚವ್ಹಾಣ, ಪಿ.ಎಸ್.ಸಾಲಕ್ಕಿ, ಟಿ.ಡಿ.ಅರಬ, ಎಂ.ಪಿ.ಬಿರಾದಾರ, ಪಿ.ಎನ್.ಸೋನವನೆ ಮತ್ತಿತರಿದ್ದರು.

Read More

ಸಿಂದಗಿ: ಜಿಪಂ ಸಿಇಒ ಅವರ ಆದೇಶದಂತೆ ತಿಂಗಳ ಪ್ರತಿ ೩ನೆಯ ಶನಿವಾರಂದು ತಾಲೂಕಿನ ಪ್ರತಿ ಅಂಗನವಾಡಿಯಲ್ಲಿ ಪಾಲಕರ ಸಭೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಂಭುಲಿಂಗ ಹಿರೇಮಠ ತಿಳಿಸಿದ್ದಾರೆ.ತಾಲೂಕಿನ ಖಾನಾಪೂರ ತೋಟದ ವಸ್ತಿ ಅಂಗನವಾಡಿಯಲ್ಲಿ ಹಮ್ಮಿಕೊಂಡ ಪಾಲಕರ ಸಭೆಯಲ್ಲಿ ಮಾತನಾಡಿದ ಅವರು, ಅಂಗನವಾಡಿಗಳಲ್ಲಿ ಮಕ್ಕಳ ಆರೋಗ್ಯ, ಶೈಕ್ಷಣಿಕ ಸುಧಾರಣೆ, ಅಪೌಷ್ಠಿಕತೆ ನಿವಾರಣೆ ಸೇರಿದಂತೆ ಮಕ್ಕಳ ಸರ್ವತೋಮುಖ ಬೆಳವಣಿಗೆಯ ದೃಷ್ಠಿಯೊಂದಿಗೆ ಸಮುದಾಯ ಪಾಲ್ಗೋಳ್ಲುವಿಕೆಯ ದೆಸೆಯಲ್ಲಿ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಈ ವೇಳೆ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ, ವಲಯ ಮೇಲ್ವಿಚಾರಕಿ ಸೇರಿದಂತೆ ಪಾಲಕರು ಮತ್ತು ಮಕ್ಕಳಿದ್ದರು.

Read More

ಸಿಂದಗಿ: ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಸಿಂದಗಿ ತಾಲೂಕಾಧ್ಯಕ್ಷರನ್ನಾಗಿ ಜಿಲಾನಿ ಮುಲ್ಲಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಜಗದೀಶ ಸೂರ್ಯವಂಶಿ ತಿಳಿಸಿದ್ದಾರೆ.ಇವರ ಸಾಮಾಜಿಕ ಸೇವೆಯನ್ನು ಪರಿಗಣಿಸಿ ತಾಯಿ ಶ್ರೀ ಭುವನೇಶ್ವರಿ ಹಾಗೂ ಈ ನಾಡಿನ ಸೇವೆಯನ್ನು ಮಾಡಲು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ರಾಜ್ಯಾಧ್ಯಕ್ಷ ಪಿ.ಕೃಷ್ಣೇಗೌಡ ಅವರ ಆದೇಶದ ಮೇರೆಗೆ ಜಿಲಾನಿ ಮುಲ್ಲಾ ಅವರನ್ನು ತಾಲೂಕಾಧ್ಯಕ್ಷರನ್ನಾಗಿ ಜಿಲ್ಲಾಧ್ಯಕ್ಷ ಜಗದೀಶ ಸೂರ್ಯವಂಶಿ ಆದೇಶ ಹೊರಡಿಸಿದ್ದಾರೆ.

Read More

ತಿಕೋಟಾ: ಪರಮಾತ್ಮನ ಸ್ವರೂಪವನ್ನು ತೆಗೆದುಕೊಂಡು ಧರೆಗೆ ಬಂದವರು ಶ್ರೀ ಸಿದ್ದೇಶ್ವರ ಶ್ರೀಗಳು ಎಂದು ತೊಂಟದಾರ್ಯ ಮಠದ ನಿಜಗುಣಾನಂದ ಸ್ವಾಮೀಜಿ ಹೇಳಿದರು.ತಾಲ್ಲೂಕಿನ ಬಿಜ್ಜರಗಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಶನಿವಾರ ನಡೆದ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಜನ್ಮ ದಿನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಶ್ರೀಗಳ ಬದುಕು ನಮಗೆ ಮಾರ್ಗದರ್ಶನವಾಗಿದೆ. ಹುಟ್ಟು ಶ್ರೇಷ್ಠತೆಯೂ ಅಲ್ಲ ಸಾವು ಕನಿಷ್ಠವು ಅಲ್ಲ. ಅಭಿಮಾನದಿಂದ ನೆನೆಸುವದು ಅಲ್ಲ, ಅನುಭಾವದಿಂದ ನೆನೆಸುವದು, ಶ್ರೀಗಳು ರಾಷ್ಟ್ರ ಸಂತರು, ಜಗದಗಲ, ಮುಗಿಲದಗಲ ಎಲ್ಲ ಕಡೆ ಇದ್ದಾರೆ. ಕತ್ತಲು ಇಲ್ಲದ ಬೆಳಕು ಅವರಾಗಿದ್ದಾರೆ. ಸಾವಿರಾರು ವರ್ಷಗಳ ಉಪನಿಷತ್ತು ಉಳಿದಿದೆ, ಶ್ರೀಗಳ ಜ್ಞಾನ ಶಾಶ್ವತ. ಅದಕ್ಕಾಗಿ ಅವರ ಯಾವುದೇ ಕುರುಹುಗಳು ಇರದೇ ಇದ್ದರು ಮುಂದಿನ ಪಿಳಿಗೆಗೆ ಅವರ ಜ್ಞಾನ ಉಳಿಯುತ್ತದೆ. ದೇಹವು ಹೋಗಿದೆ ಅಂತರಂಗದ ತನವು ಎಲ್ಲ ಕಡೆ ಇದೆ. ಯುವಕರು ಧರ್ಮದ ದ್ವಜ ಹಿಡಿಯುವ ಬದಲು ಕಾಯಕದ ದ್ವಜ ಹಿಡಿದು ಬದುಕು ನಡೆಸಬೇಕು. ಅವರ ಚಿಂತನೆಗಳು ಎಲ್ಲ ಭಾಷೆಗಳಲ್ಲಿ ಪ್ರಕಟ ಆಗಬೇಕು. ಅವರ…

Read More

ಆಲಮಟ್ಟಿ: ಈ ಚಿನ್ಮಯಿ ಬಾಲೆಯರ ಸಂತೋಷಕ್ಕೆ ಪಾರವೇ ಇಲ್ಲ. ನವರಾತ್ರಿ ಸಂಭ್ರಮದ ಉಲ್ಲಾಸದಲ್ಲಿ ಹರ್ಷಚಿಕಿತರಾಗಿ ನಗೆ ಹೊನಲು ಬೀರಿದ್ದಾರೆ. ತಮ್ಮದೇ ಲಯೋತ್ಸಾಹದ ಗುಂಗಿನಲ್ಲಿ ಬೂದೋತ್ಸಾಹದ ರಂಗು ಹಿತೋತ್ಸಾಹದಲ್ಲಿ ಹೊರಹಾಕಿ ಗಮನ ಸೆಳೆದಿದ್ದಾರೆ ಈ ಚಿಕ್ಕ ಬಾಲೆಯರು !ಒಬ್ಬಳು ಸಮೀಕ್ಷಾ, ಇನ್ನೊಬ್ಬಳು ಸ್ಪಂದನಾ. ಈ ಪುಟ್ಟ ಜೋಡಿಗಳು ಶನಿವಾರ ನವರಾತ್ರಿ ಏಳನೇ ದಿನದ ಬೂದು ಬಣ್ಣದ ಉಡುಪು ಧರಿಸಿ ನವೋಲ್ಲಾಸದಲ್ಲಿ ಮಿನುಗಿದ್ದಾರೆ.ನಖರಾ ರಾಣಿ ಸಮೀಕ್ಷಾ, ಸಂತೋಷ-ವಿಜಯಲಕ್ಷ್ಮೀ ಮರಡಿ ದಂಪತಿಗಳ ಮಗಳಾದರೆ ಸ್ಪಂದನಾ ಮಲ್ಲಪ್ಪ-ಸರಸ್ವತಿ ಕಾಖಂಡಕಿ ದಂಪತಿಗಳ ಕುಡಿಯಾಗಿದ್ದಾಳೆ. ಇವರು ಆಲಮಟ್ಟಿ ಬಳಿಯ ಚಿಮ್ಮಲಗಿ ಭಾಗ-೧ ಬಿ ಗ್ರಾಮದ ನಿವಾಸಿಗಳು.

Read More

ವಿಜಯಪುರ: ಅಲ್ಲಿ ಬೂದು ಚೆಲುವು ಹರಡಿತ್ತು. ತಟಸ್ಥ, ವರ್ಣರಹಿತ ಬಿಂಬದ ಬೂದೋಕಳಿಯ ಬಣ್ಣದ ಉಡುಗೆಯಲ್ಲಿ ಆ ನೀರೆಯರ ಉತ್ಸಾಹ ಭರಿತ ಖುಷ್, ನಲಿವು ರಂಗೇರಿತ್ತು. ಬೂದು ಸ್ಪರ್ಶದ ತೋರಣದಲ್ಲಿ ನಾರಿಲೋಕದ ಅರಗಿಣಿಯರು ಭಕ್ತಿ,ಉನ್ಮಾದದ ಅದಮ್ಯ, ಅನನ್ಯ ತರಂಗದಲ್ಲಿ ತೇಲಿದ್ದರು. ದುಗಾ೯ಮಾತೆಯನ್ನು ಆರಾಧಿಸುತ್ತಾ ಸ್ಮರಣೀಯ ವಿಶೇಷ ಪೂಜಾಭಾವ ಧನ್ಯತೆಯಿಂದ ಮೆರೆದರು.ದುಗೆ೯ಯು ಕಾಲರಾತ್ರಿಯ ರೂಪದಲ್ಲಿ ಅವತರಿಸುತ್ತಾಳೆ ಎಂಬ ಪ್ರತೀತಿ ಹಿನ್ನೆಲೆಯಲ್ಲಿ ಈ ದೇವಿಯನ್ನು ಮನದಲ್ಲಿ ಶ್ರದ್ಧೆಯಿಂದ ನೆನೆಸಿ ಪೂಜಿಸಿದರೆ ಸವೋ೯ ವಿಘ್ನಗಳು ದೂರಾಗುತ್ತವೆ ಅಲ್ಲದೇ ಪುಣ್ಯಲೋಕಭಾವ ದಯಾಪಾಲಿಸುವಳೆಂಬ ಅಚಲ ನಂಬಿಕೆಯಿಂದ ಹೆಂಗಳೆಯರು ನವರಾತ್ರಿಯ ಏಳನೇ ದಿನದಂದು ಬೆಳಗಿನ ಜಾವದಲ್ಲೇ ವಿಶೇಷ ಅವತಾರಿ ದೇವಿಗಳ ಅಂಗಳದಲ್ಲಿ ನೆರೆದು ಭಕ್ತಿ ತರ್ಪಣ ಗೈದರು. ಹಲ ದೇವ,ದೇವತೆಗಳಲ್ಲದೇ ಪೂಜ್ಯತೆಯಿಂದ ಪೂಜಿಸುವ ಬನ್ನಿ ಗಿಡಮರಗಳ ಸುತ್ತಾಕಿ ಮನದಾಳದ ಸಂಕಲ್ಪ ಪೂರೈಸುವಂತೆ ಬೇಡಿಕೊಂಡರು.ಬಣ್ಣವಿಲ್ಲದ ಬಣ್ಣ ಖ್ಯಾತಿಯ ಬೂದು ಬಣ್ಣದಲ್ಲಿ ಖುಷಿನಗೆ ಉದು ಮಂದಾಕಿನಿಯರು ನಿರಾಳವಾಗಿ, ಸಂತೋಷದಿಂದ ಹೊರಸೂಸಿದರು. ನವರಾತ್ರಿ ಏಳನೇ ದಿನದ ಬೂದು ಬಣ್ಣದ ಸೀರೆಯನ್ನುಟ್ಟು ವಿಜಯಪುರ ಆಲಕುಂಟೆ ನಗರದ ನಾರಿಮಣಿಗಳ…

Read More

ವಿಜಯಪುರ: ಗವಿಸಿದ್ದಪ್ಪ ಅಂಗಡಿ ಅವರನ್ನು ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಸಂಸ್ಥೆ(ಎನ್.ಸಿ.ಟಿ.ಇ) ದಕ್ಷಿಣ ವಲಯ ಸಮಿತಿಗೆ ನಾಮನಿರ್ದೇಶಿತ ಸದಸ್ಯರಾಗಿ ನೇಮಕ ಮಾಡಲಾಗಿದೆ.ಬಿ.ಎಲ್.ಡಿ.ಇ ಸಂಸ್ಥೆಯ ಜೆ.ಎಸ್.ಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ 2006 ರಿಂದ 2017ರ ವರೆಗೆ ಸಹಾಯಕ ಪ್ರಾಧ್ಯಾಪಕರಾಗಿ ಅವರು ಸೇವೆ ಸಲ್ಲಿಸಿದ್ದರು. ಸದ್ಯಕ್ಕೆ ಅವರು ಗುಜರಾತ ಕೇಂದ್ರಿಯ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ವಿಭಾಗದ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಎನ್.ಸಿ.ಟಿ.ಇ ದಕ್ಷಿಣ ವಲಯ ಸಮಿತಿಗೆ ನಾಮನಿರ್ದೇಶಿತ ಸದಸ್ಯರಾಗಿ ನೇಮಕವಾಗಿರುವ ಗವಿಸಿದ್ದಪ್ಪ ಅಂಗಡಿ ಅವರಿಗೆ ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷ ಎಂ. ಬಿ. ಪಾಟೀಲ ಮತ್ತು ಜೆ. ಎಸ್. ಎಸ್ ಶಿಕ್ಷಣ ಮಹಾವಿದ್ಯಾಲಯದ ಎಲ್ಲ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.

Read More

ವಿಜಯಪುರ: ನಗರದ ಇಬ್ರಾಹಿಂಪುರದಲ್ಲಿ ಶ್ರೀ ಮಲ್ಲಿಕಾರ್ಜುನ ಆದಿಶಕ್ತಿ ಯುವಕ ಮಂಡಳಿಯವರು ಶ್ರೀ ಮರಗಮ್ಮದೇವಿ ದೇವಸ್ಥಾನದ ಎದುರಿನ ಮುಖ್ಯರಸ್ತೆಯಲ್ಲಿ ಭವ್ಯಮಂಟಪ ನಿರ್ಮಿಸಿ ಶುಕ್ರವಾರ ನಾಡದೇವಿಯ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದು, ಶ್ರದ್ಧಾ-ಭಕ್ತಿಯಿಂದ ದೇವಿಯ ಆರಾಧನೆ ನಡೆದಿದೆ.ನಾಡದೇವಿ ಮಂಟಪಕ್ಕೆ ಹಾಗೂ ಮಂಟಪದ ಮುಂದೆ ರಸ್ತೆಯುದ್ದಕ್ಕೂ ಆಕರ್ಷಕ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಆದರೆ, ಈ ಬಾರಿ ಡಿಜೆ ಹಾಗೂ ಮೈಕಾಸುರನ ಅಬ್ಬರವಿಲ್ಲದೆ ಅತ್ಯಂತ ಶಾಂತಿಯುತವಾಗಿ ಹಾಗೂ ಸಂಭ್ರಮದಿಂದ ಇಲ್ಲಿ ದಸರಾ ಉತ್ಸವ ಆಚರಿಸುವ ಜೊತೆಗೆ ಪರಿಸರ ಸ್ವಚ್ಛತೆಗೂ ಹೆಚ್ಚಿನ ಗಮನ ಹರಿಸಿರುವುದು ವಿಶೇಷವಾಗಿದೆ.ನಾಡದೇವಿ ಉತ್ಸವದ ಅಂಗವಾಗಿ ಶನಿವಾರ ನಾಡದೇವಿ ಮಂಟಪದ ಮುಂಭಾಗದಲ್ಲಿ ಮುತ್ತೈದೆಯರ ಉಡಿತುಂಬುವ ಕಾರ್ಯಕ್ರಮ ವೈಭವದಿಂದ ನಡೆಯಿತು. ಇನ್ನೂರಕ್ಕೂ ಹೆಚ್ಚು ಮುತ್ತೈದೆಯರಿಗೆ ಉಡಿ ತುಂಬಿ ಅರಿಷಿಣ ಕುಂಕುಮ ನೀಡಲಾಯಿತು.ಇಬ್ರಾಹಿಂಪುರ ಗಣ್ಯ ಮನೆತನದ ಶ್ರೀಮತಿ ಶೋಭಾ ರುದ್ರಗೌಡ ಬಿರಾದಾರ, ಶ್ರೀಮತಿ ಲಕ್ಮೀ ರೇವಣಕುಮಾರ ಬಗಲಿ, ಶ್ರೀಮತಿ ರೇಣುಕಾ ಸುರೇಶ ಬಗಲಿ ಅವರು ಉಡಿ ತುಂಬುವ ಕಾರ್ಯಕ್ರಮ ನಿರ್ವಹಿಸಿದರು.ಶ್ರೀ ಮಲ್ಲಿಕಾರ್ಜುನ ಆದಿಶಕ್ತಿ ಯುವಕ ಮಂಡಳಿಯ ಅಧ್ಯಕ್ಷ ಸುನೀಲ ನುಚ್ಚಿ,…

Read More

ತಾರೆಗಳ ಊರಿಂದ ಏರುತ್ತ ಬಂದಜಗವನ್ನು ಬೆಳಗಲು ತನ್ನ ಪ್ರಭೆಯಿಂದಹಾಲ್ಬೆಳಕು ಚೆಲ್ಲುತ್ತ ಆನಂದದಿಂದನವಜೋಡಿ ಭಾವಕ್ಕೆ ಸಡಗರವ ತಂದ ಚಂದ್ರಮನ ಕಚಗುಳಿ ಮಾಡಿತ್ತು ಮೋಡಿಪ್ರಕೃತಿಯು ಅರಳಿ ಸೌಂದರ್ಯ ಇಮ್ಮಡಿಗೂಡೊಳಗೆ ಬೆಚ್ಚಗೆ ಕುಳಿತ ಬಾನಾಡಿಆಗೊಮ್ಮೆ ಈಗೊಮ್ಮೆ ಇಣುಕಿತ್ತು ನೋಡಿ ತಣ್ಣನೆಯ ತಂಗಾಳಿ ಕೊಟ್ಟಿತ್ತು ಮುದವಮನದೊಳಗೆ ಮೂಡಿತ್ತು ಮಧುರ ಭಾವನಯನವು ಆಸ್ವಾದಿಸಿ ಬೆಳದಿಂಗಳ ಚೆಲುವಬರೆದೆ ಚಂದ್ರೋದಯ ವರ್ಣಿಸುತ್ತ ಕವನವ

Read More

ಈ ವರ್ಷದ ಮೈಸೂರು ದಸರಾ 413 ನೇ ವರ್ಷದ ದಸರಾ ಮಹೋತ್ಸವಾಗಿದೆ. ಈ ಮೈಸೂರು ದಸರಾ ಆರಂಭದಿಂದ ಮೈಸೂರು ದಸರಾ ಆಗಿರಲಿಲ್ಲ. ಇದರ ಮೂಲ 14ನೇ ಶತಮಾನದ ಹಂಪಿಯ  ವಿಜಯನಗರ ಸಾಮ್ರಾಜ್ಯವಾಗಿದೆ.ಹಂಪಿಯ ವಿಜಯನಗರ ಸಾಮ್ರಾಜ್ಯದಲ್ಲಿ ‘ಮಹಾನವಮಿ’ ಎಂಬ ಹೆಸರಿನಲ್ಲಿ ಇದನ್ನು ಆಚರಿಸಲಾಗುತ್ತಿತ್ತು. ಹಂಪಿಯ ‘ಹಜಾರರಾಮ’ ದೇವಸ್ಥಾನದ ಗೋಡೆಯ ಮೇಲಿನ ಕೆತ್ತನೆಗಳಲ್ಲಿ ಇದರ ಉಲ್ಲೇಖವಿದೆ. ಅಂದಿನ ಇಟಲಿಯ ವಿದೇಶಿ ಪ್ರವಾಸಿಗ ‘ನಿಕೋಲೋ ಡಿ ಕೌಂಟಿ’ ವಿಜಯನಗರ ಸಾಮ್ರಾಜ್ಯಕ್ಕೆ ಭೇಟಿಕೊಟ್ಟು ಅಂದಿನ ಮಹಾನವಮಿಯನ್ನು “ರಾಜರ ಬೆಂಬಲದಿಂದ ನಡೆಯುವ ವೈಭವದ ನಾಡಹಬ್ಬ” ಎಂದು ತನ್ನ ಪ್ರವಾಸ ಗ್ರಂಥದಲ್ಲಿ ಉಲ್ಲೇಖಿಸಿದ್ದಾನೆ.ಹೀಗೆ ವಿಜಯನಗರ ಸಾಮ್ರಾಜ್ಯದ ವೈಭವದ ಸಂಕೇತವಾಗಿದ್ದ ಮಹಾ ನವಮಿಯು ದಖ್ಖನ್ನಿನ ಸುಲ್ತಾನರ ದಾಳಿಯಿಂದ ಪತನವಾದ ಮೇಲೆ ನಿಂತು ಹೋಯಿತು. ಅದಾದ ಮೇಲೆ ಅಳಿದುಳಿದ ದಕ್ಷಿಣ ಕರ್ನಾಟಕದ ಪ್ರದೇಶಗಳನ್ನು ಒಗ್ಗೂಡಿಸಿ ರಾಜ್ಯವನ್ನು ಕಟ್ಟಿ ಮೈಸೂರಿನ ಮಹಾರಾಜರು ರಾಜ್ಯಭಾರವನ್ನು ಮುಂದುವರಿಸಿದರು. ಹಾಗೆಯೇ ವಿಜಯನಗರ ಸಾಮ್ರಾಜ್ಯದ ವೈಭವದ ಸಂಕೇತವಾಗಿದ್ದ ಮಹಾನವಮಿಯನ್ನು ಮೈಸೂರಿನ ದಸರಾ ಉತ್ಸವವಾಗಿ ಮುಂದುವರಿಸಿದರು.1610 ರಲ್ಲಿ ಶ್ರೀರಾಜ ಒಡೆಯರ್ ರವರು…

Read More